ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ದೂರುವ ಮುನ್ನ

ಸುರೇಶ್ ಕಲಾಪ್ರಿಯಾ

ಬಂದಿಲ್ಲ ನಾನು ನಿಮ್ಮ ದಾರಿಗೆ
ಪದೇ ಪದೇ ಎಳೆಯುವಿರೇಕೆ ಮಾತಿಗೆ
ಹೆಮ್ಮೆಪಡಿ…ಬೀಗದೇ ಬಾಗಿಬಿಡಿ.
ಪಾಪ.. ಕಪ್ಪೆಗಳ ಮದುವೆ ತಪ್ಪಿಸಿದ್ದೇನೆ.

ಅಡ್ಡವಾದಿರೇಕೆ ನೀವು ಗುಡ್ಡ ಕೊರೆದು
ಧರೆಯ ಸೌಂದರ್ಯವ ಮಾಡಿ ಬರಿದು
ನಿಮ್ಮ ನೆಲೆಯ ಚಿಂತೆ ನಿಮಗಾದರೆ
ನನಗೂ ಚಿಂತಿಸಬೇಕಲ್ಲ ಕೊಂಚ ಆಸರೆ

ನನ್ನೆದೆಯ ಒತ್ತಿ ಕಟ್ಟಿದಿರಿ ಮಹಲು
ನನ್ನೊಡಲಿಗೆ ಅವನು ಸೇರಿಸಿದೆನಷ್ಟೇ
ನನ್ನ ದಾರಿಯ ನಾನೇ ಹುಡುಕಿಕೊಂಡಿದ್ದೇನೆ ಮತ್ತೆ
ದೂರಬೇಡಿರಿ ತಪ್ಪು ಮಾಡಿಲ್ಲ ನಾನು

ಆಸೆ ಉಂಟು ನನಗೂ ನಾನಾಗಿ ಉಳಿವಂತೆ
ದುರಾಸೆಯಂತೂ ಇಲ್ಲ ನಿಮಗಿರುವಂತೆ
ರಾಜನಂತೆ ನಾ ಮೆರೆದ ರಾಜಕಾಲುವೆ
ಆಪೋಶನ ಮಾಡಿಕೊಂಡಿದ್ದು ತರವೇ

ಪಾಪಗಳ ಲೆಕ್ಕ ಎಂದಿಗೂ ಕೂಡುತ್ತದೆ ಒಟ್ಟಿಗೆ
ಪೂರ್ಣವಾಗಿ ಬೆಲೆತೆರುವತನಕ ತಪ್ಪಿಗೆ
ಈಗದರ ಸರದಿ ಬಂದಿದೆಯಷ್ಟೇ ಸತ್ಯವು
ಅನುಭವಿಸಬೇಕು ತಪ್ಪಿಸಿಕೊಳ್ಳುವ ಮಾತು ಮಿಥ್ಯವು

ದೂರುವ ಮುನ್ನ ಚಿಂತಿಸಿ ಸತತ
ನನಗೂ ದಾರಿಬಿಡಿ ಸಾಗಿಬಿಡಲು ನಿರತ
ಒಳಿತಿಗಿರುವೆ ನಾನು…. ಕೆಡುಕಿಗೆ ಕೊಡಬೇಡಿ ದಾರಿ
ಉಳಿಸಿ ಉಳಿಯುವ ಸತ್ಯ ಅರಿಯಿರಿ


About The Author

Leave a Reply

You cannot copy content of this page

Scroll to Top