ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಹಮೀದಾ ಬೇಗಂ ದೇಸಾಯಿ

ಹಗೆತನದ ಕರಿಯ ಪರದೆ ಸರಿವುದು ಎಂದೋ
ಒಗೆತನದ ಪ್ರೀತಿ ನಂಟು ಬೆರೆವುದು ಎಂದೋ

ಅನುಮಾನ ರೋಷ ತಿಳಿ ಮರುಳೆ ಒಳಿತಲ್ಲ
ಪಾಷಾಣ ಹೃದಯಗಳು ಗೆಳೆಯ ಕರಗುವುದು ಎಂದೋ

ಮನದಲ್ಲಿಯ ದ್ವೇಷ ಕಿಚ್ಚು ಹಚ್ಚಿವೆ ನೋಡು
ತ್ವೇಷದಬೆಂಕಿಯ ಜ್ವಾಲೆ ಆರುವುದು ಎಂದೋ

ಬಣ್ಣದ ಮಾತುಗಳು ವಿಷವ ಬೆರೆಸಿವೆ ನಗುತ
ಸ್ವಾರ್ಥಿಗಳ ಪಾಶವೀ ದಾಹ ತೀರುವುದು ಎಂದೋ

ಭಯದ ನೆರಳಲಿ ಬದುಕು ನಡುಗಿದೆ ಬೇಗಂ
ಮುಗ್ಧರ ರಕುತದ ಓಕುಳಿ ನಿಲ್ಲುವುದು ಎಂದೋ


About The Author

Leave a Reply

You cannot copy content of this page

Scroll to Top