ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಕಡಲೂರಿನಲ್ಲೊಂದು ಸಂಜೆ

ಶಂಕರಾನಂದ ಹೆಬ್ಬಾಳ

ಕಾರ್ಮೋಡ ಮೆಲ್ಲ ಸರಿದ ನೆನಪು,
ಕಣ್ಣೆದುರು ನಿನ್ನದೆ ಸವಿ ಒನಪು
ಬಿಟ್ಟು ಕೊಡಲೊಲ್ಲದ ಕಡಲಿನ
ಮೊರೆತದ ಆ ಸುಂದರ ತನಿಪು

ಹೊಂಚು ಹಾಕುತಿದೆ ತಾರೆ
ಸನಿಹ ಇಹಳೆಂದು ನೀರೆ
ಕಡಲೂರಿನ ಸಂಜೆಯಲಿ
ಜೊತೆಗೆ ನನ್ನೊಂದಿಗೆ ಬಾರೆ

ಎದೆಯಲಿ ಠಿಕ್ಕಾಣಿ ಹೂಡುತ
ಸರಿಗಮ ಸ್ವರಗಳ ಹಾಡುತ
ಅಲೆಗಳ ನಿನಾದದಲಿ ಕುಣಿದು
ಕಲ್ಪನೆಯ ತಲ್ಪದಲಿ ಹಾಡುತ

ಕಣ್ಣಾಲೆಯ ಅಂಚಿನಲಿ ಸೆಳೆದು
ಸುಧಾಂಶುವಿನ ಬೆಳಕಲ್ಲಿ ಹೊಳೆದು
ಮರಳತಟದಲ್ಲಿ ಕಾದಿರುವೆ ಸಖಿ
ಬಂದಿರುವೆ ನೀನು ಧರೆಗಿಳಿದು


About The Author

Leave a Reply

You cannot copy content of this page

Scroll to Top