ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಗರ ನಾಗರೀಕರು

ಅರುಣಾ ರಾವ್

ಏಳು ಗಂಟೆಗೆ ಎದ್ದು

ಬೆಡಲ್ಲೇ ಕಾಫಿ ಕುಡಿದು

ಸ್ವಿಗ್ಗಿ ಜೊಮ್ಯಾಟೋಗಳಲ್ಲಿ

ತಿಂಡಿ ಆರ್ಡರ್ ಮಾಡಿ

ತಂಗಳು ತಿಂಡಿಯನೆ ರುಚಿಯೆಂದು ಭ್ರಮಿಸಿ

ಗರಿಗರಿ ಉಡುಪನು ಧರಿಸಿ

ಮೈ ತುಂಬಾ ಸೆಂಟೊಡೆದು

ತಂಪು ಕನ್ನಡಕದಡಿಯಲ್ಲಿ

ಬಣ್ಣದ ಜಗವ ಕಾಣುವ ಭೂಪರು

ಮೈಲೇಜು ಕಡಿಮೆಯಾದರೇನಂತೆ ಚಿಂತೆ

ಶೋಕಿ ಗಾಡಿ ಕಾರುಗಳಲ್ಲೇ ದರ್ಬಾರು

ಜಾರೆ ಬಂಡಿಯಂತಿರುವ ಬೈಕೇರಿದೊಡನೆ

ವೇಗಕ್ಕೆ ಕಡಿವಾಣವಿಲ್ಲದವರು

ಅಪಘಾತ ಕಂಡರೂ

ನೆರವಾಗದ ಹಗಲುಗುರುಡರು

ಗಣಕ ಯಂತ್ರದಿ ತಲೆ ಹುದುಗಿಸಿಟ್ಟು

ವೀಕೆಂಡಿಗಾಗಿ ಬರಗೆಟ್ಟು ಬಾಯ್ಬಿಟ್ಟು

ಬಂದೊಡನೆ ಬಿಯರ್ ಬಾಟಲಿಯನ್ನೇರಿಸಿ

ಜಗದ ಜಂಜಾಟವನು ಮರೆವ ಮನುಜರು

ಕ್ಲಬ್ಬು ಪಬ್ಬು ಗಳಲ್ಲಿ ಸಂತೋಷದುಡುಕಾಟ

ರಂಗು ರಂಗಿನ ದೀಪಗಳಲ್ಲಿ ಮೆರೆದಾಟ ಕೂಗಾಟ

ಪ್ರೀತಿ ಪ್ರೇಮಕ್ಕೆ ಗೌರವಾದರಗಳಿಗೆ

ಹೊಸ ಭಾಷ್ಯ ಬರೆಯುತಿಹ ನಾಗರೀಕರು

———————————————

ಅರುಣಾ ರಾವ್

About The Author

3 thoughts on “ಅರುಣಾ ರಾವ್ ಕವಿತೆ-ನಗರ ನಾಗರೀಕರು”

Leave a Reply

You cannot copy content of this page

Scroll to Top