ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಮ್ಮನಿದ್ದು ಬಿಡಿ

ಲಕ್ಷ್ಮೀದೇವಿ ಪತ್ತಾರರ ಹೊಸ ಕವಿತೆ

ಮಾಯುತಿದೆ ಗಾಯ
ತ್ತೆ ಮತ್ತೆ ಉಪ್ಪು ಸುರಿಯದಿರಿ
ತಿಳಿಯಾಗುತಿದೆ ನೀರು
ಕದಡದಿರಿ

ಆರುತಿದೆ ಬೆಂಕಿ
ಸೀಮೆಎಣ್ಣೆ ಸುರಿಯದಿರಿ
ಚಿಗುರುತಿದೆ ತರು
ಚಿವುಟದಿರಿ
ತಿಳಿಯಾಗುತಿದೆ ವಾತಾವರಣ
ಧೂಳೆಬ್ದಿಬಿಸದಿರಿ

ಸ್ವಚ್ಚಂದವಾಗಿ ಅಲೆದಾಡುತಿವೆ
ಖಗಮೃಗಗಳ
ಬಂಧಿಸಿಡದಿರಿ

ವಿಕಸಿತಗೊಳ್ಳುತ್ತಿವೆ ಸುಂದರ ಕುಸುಮಗಳು
ಹೊಸಕಿ ಎಸೆಯದಿರಿ
ಸಾಧ್ಯವಾದರೆ ಒಳ್ಳೆಯದು ಮಾಡಿ
ಇಲ್ಲವೇ ಸುಮ್ಮನಿದ್ದು ಬಿಡಿ


About The Author

Leave a Reply

You cannot copy content of this page

Scroll to Top