ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಯುವದು ಕಾಯಕವಲ್ಲ

ತೆರೆದಿಡು ಹೃದಯ
ಎಳೆಯ ರವಿಯಾಗಿ
ವಸಂತದಿಂಚರವಾಗಿ
ಇಹದ ಪರಿವೆ ಮರೆಸಿ,
ಮುಗ್ಧ ಮುಗುವಾಗಿ ಬಿಡುವೆ
ನಿನ್ನ ನಗುವಿಗೆ ದೀವಿಗೆಯಾಗಿಡುವೆ

ಕಾಯುವದು ಕಾಯಕವೇನಲ್ಲ
ಬರದ ಎದೆಯ ಮೇಲೆ
ನೇಗಿಲು ಹಿಡಿದು,
ತಿಳಿ ಮೋಡದ ಮುಗಿಲಲಿ ಮಳೆ ತರಿಸಿ,
ಕಳೆಯ ನಿಲ್ಲಿಸಿ ಬಿಡುವೆ

ಅಂಗಾಂಗಗಳ ಚೆಲುವಿಕೆಗಲ್ಲ
ಒಡಲ ತುಂಬ ಕಡಲವಿರಿಸಿ,
ಪ್ರೀತಿ ದೋಣಿ ಹರಿಸಿ,
ಕಡಲಾಳದ ಬಸಿರ ತಂದು
ಮಡಿಲಗರ್ಪಿಸಿ,
ಜೋಗುಳ ಹಾಡಿ ಬಿಡುವೆ

ಕವಿತೆಗೆ ಸವಿಯಾಗು
ಮನವ ಶೋಧಿಸಿ ಬಿಡುವೆ
ಸಡಗರದಿ ಬಂದು,
ಅನುರಾಗ ತೊಡಿಸಿ,
ಮನದ ಕಾರ್ಮೋಡದ ಮೇಲೆ ಬೆಳಕ ಹಾಯಿಸಿ ಬಿಡುವೆ.


ಶರಣಪ್ಪ ತಳ್ಳಿ ಕುಪ್ಪಿಗುಡ್ಡ

About The Author

Leave a Reply

You cannot copy content of this page

Scroll to Top