ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಅಗಷ್ಟ ೧೫.

ಸುಬ್ರಹ್ಮಣ್ಯ ಹೆಗಡೆ ಅಬ್ಳಿ

ಒತ್ತಿಬಹ ಭಾವಗಳ
ಬಿತ್ತಲಾಗದು ಎಂದು,
ಕತ್ತಲಲಿ ಮಳೆಹನಿಯು
ಕಾಣದಲ್ಲ.

 ಶ್ರವಣ,ದ್ರಶ್ಯಕೆ ಮಾತ್ರ
 ದೇಶಭಕ್ತಿಯ ನಂಟು,
 ಭಾವ ವರ್ಷಕೆ ಇಳೆಯು
                      ನೆನೆಯದಲ್ಲ.

 ಎಲ್ಲಿ ನೋಡಿದರಲ್ಲಿ
 ತ್ರಿವಳಿ ಬಣ್ಣಗಳಾಟ,
 ಜೊಳ್ಳು ಭಕ್ತಿಯ ಸುಳ್ಳು
                     ಭಾವಸ್ಪುರಣ.

  ತ್ಯಾಗ,ಬಲಿದಾನಗಳ
  ನೆನಪು ಹಸಿರಾಗುವದು,
  ವರ್ಷಕೊಂದೇ ದಿನವು
  ಖುಷಿಯ 'ಧಿಗಣ'...!
------------------------

About The Author

Leave a Reply

You cannot copy content of this page

Scroll to Top