ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಸ್ವಾತಂತ್ರ್ಯದ ಸಿರಿಗಾಗಿ

ವನರಾಗ ಶರ್ಮಾ

ಆತ್ಮನಿರ್ಭರತೆಯ ಬ್ರಿಟಿಷರ ಬಂದೂಕಿನ ಗುಂಡಿಗೆ
ತಲೆಯೆತ್ತಿ ನಡೆದರು ಎಣ್ಣೆಗಾಣವನೆಳೆವ
ಕರಿನೀರಿನ ಕಠಿಣ ಶಿಕ್ಷೆಗೆ
ಸಹಿಸಿದರು ಬೂಟುಕಾಲಿನ ಒದೆತ ತುಳಿತ
ಇಟ್ಟರು ಪ್ರಾಣವನ್ನೇ ಪಣವಾಗಿ, ಅದು ಒಂದೇ ಗುರಿಗಾಗಿ
ಭಾರತಾಂಬೆಯ ಬಿಡುಗಡೆಗಾಗಿ,
ಸ್ವಾತಂತ್ರ್ಯದ ಸಿರಿಗಾಗಿ.
ಹಿಂದುಸ್ತಾನದ ಜೀವನದ ನೇಸರ ಹೂ ಮುದುಡಿ,
ಕವಿದಿತ್ತು ಗಾಢಾಂಧಕಾರ;
ಅಮ್ಮನಿಲ್ಲದಾಗ ಅಮ್ಮನ ಮಹತ್ವ
ಹಣವಿಲ್ಲದಾಗ ಹಣದ ಮಹತ್ವ
ವಿದ್ಯೆಯಿಲ್ಲದಾಗ ಜ್ಞಾನದ, ಮಕ್ಕಳಿಲ್ಲದಾಗ ಮಕ್ಕಳ ಮಹತ್ವ
ಅರ್ಥವಾಗುವಂತೆ, ಕೊರತೆಯಲ್ಲಿ ಅದರ ಅಗತ್ಯದ ಅರಿವು.
ನೀರಿನ ಒರತೆಯೇ ಬತ್ತಿದಾಗ, ಮಳೆಯೇ ಹನಿಯಾದಾಗ,
ಬೆಳೆಯೇ ಬರದಾಗ, ಕತ್ತಲೆಯಲ್ಲಿ ಬೆಳಕಿನ ಮಹತ್ವ ಗೊತ್ತಾದಂತೆ
ಪಾರತಂತ್ರ್ಯದಲ್ಲಿ ಸ್ವಾತಂತ್ರ್ಯದ ಮಹತ್ವ ಅರಿವಿಗೆ ಬರುತ್ತದೆ.
ಅರ್ಥವಾಗಿತ್ತು ಅಂದು ನೊಂದವರಿಗೆ
ಅರಿವ ಮೂಡಿಸಬೇಕಲ್ಲವೆ ? ಅದನ್ನು ಇಂದಿನವರಿಗೆ
ಮತ್ತೆ ಕಳೆದುಕೊಳ್ಳಬಾರದು ಎಂಬ ಜಾಗೃತಿಗೆ..
ಅದಕ್ಕೇ ಇದು ಪ್ರತಿದಿನದ ಉತ್ಸವವಾಗಿ ನೆಲೆಗೊಳ್ಳುವುದಕ್ಕೆ


About The Author

Leave a Reply

You cannot copy content of this page

Scroll to Top