ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾನು ಬರೀ ಹೆಣ್ಣಲ್ಲ….!!

ದೇವರಾಜ್ ಹುಣಸಿಕಟ್ಟಿ

ಅವರು ನನ್ನ ನಾಯಿ ನರಿಗಳಂತೆ
ಮುತ್ತಿ ಮುತ್ತಿಟ್ಟ ದಿನವೇ…!
ಎನ್ ಕೌಂಟರಿನ ಗುಂಡು ಎದೆ ಹೊಕ್ಕಿ..!

ನೆತ್ತರು ನೆಲ ನೆಕ್ಕಿ….!!

ಮನುಷ್ಯತ್ವದ ಎದೆಯ ದನಿ

ತುಸು ಬಿಕ್ಕಿ…!

ಒಂದು ನಿಡಿದಾದ ನಿಟ್ಟುಸಿರು
ಓಣಿಯ ತುಂಬಾ ತುಂಬಿ…

ಮೌನ ಟಿಕಾಣಿ ಹೂಡುತಿತ್ತು…!!

ಹಾಗಾಗಲೇ ಇಲ್ಲಾ…

ಯಾಕಾಗಿ ಗೊತ್ತೇ….?

ನಾನು ಕೇವಲ ಹೆಣ್ಣಲ್ಲ…!!

ಗೆಳೆಯರೇ…!!

ಹೆಸರುಂಟು ಬಾನು…!!

ಕಾನೂನಿನ ಕಂಬಿಗಳು
ಬೀಗ ಮುರಿದುಕೊಂಡವಂತೆ…!!
ಸತ್ತೆಯ ಕಣ್ಣಲ್ಲಿ ರಣ ಹದ್ದುಗಳು
ಪಾರಿವಾಳಗಳಾಗುವುದು ಉಂಟಂತೆ…!!

ಯಾಕಾಗಿ ಗೊತ್ತೇ..?

ನಾನು ಬಾನು…!!

ನೇಣುಗಂಬದ ಕುಣಿಕೆ ನೆತ್ತರು
ಕುಡಿಯುತ್ತಿತ್ತು…!!
ನಾನು ನಿರ್ಭಯಾಳೋ, ಪಾರ್ವತಿಯೋ
ಇಲ್ಲಾ…!!
ಸೀತೆಯೆoಬ ಹೆಸರಿನವಳಾಗಿದ್ದರೆ…!!!
ನನ್ನ ಕಣ್ಣೆದುರಿಗೆ ಉಸಿರು ಬಿಟ್ಟವರ
ಹೆಸರಿಗೆ ಧರ್ಮದ ಮುಖ ಮುದ್ರೆ ಇರದಿದ್ದರೆ…!

ಖುಲಾಸೆಯಾಗಿದ್ದಾರೆ…!!
ಜೈಲಿನ ಸಲಾಕೆಯ ನೆರಳಿನಿಂದ…
ಸ್ವತಂತ್ರ ವೀರರಂತೆ….!

ಯಾಕಾಗಿ ಗೊತ್ತೇ…?

ನಾನು ಬಾನು..!!

ಮತ್ತ್ಯಾರೋ ಸಚ್ಯಾರಿತ್ರದ
ಟಂಕ ಶಾಲೆಯ ಮುದ್ರೆ ಒತ್ತಿದ್ದಾರೆ…!!
ಸಂಸ್ಕಾರದ ಹಾರ ತುರಾಯಿ…
ತಿಲಕಗಳ ಇಟ್ಟು…ಕೊಂಡಾಡುವವರು ಇದ್ದಾರೆ..

ಯಾಕಾಗಿ ಗೊತ್ತೇ…?

ನಾನು ಬಾನು….!!!

ಮರ್ಮಾoಗ ಉಂಡು ತೇಗಿದ
ಅತ್ಯಾಚಾರಿಗಳು…
ಹೀಗೆ ಮೆರವಣಿಗೆ ಹೊಂಡುವುದು…!
ಶಿಕ್ಷೆ ಕೊಟ್ಟ ನ್ಯಾಯಾಲಯದ
ತೀರ್ಪು ಅಣುಕದ ವಸ್ತು ವಾಗುವುದು…!

ಯಾಕಾಗಿ ಗೊತ್ತೇ….?

ನಾನು ಕೇವಲ ಹೆಣ್ಣಲ್ಲ…!!

ಗೆಳೆಯರೇ….!!

ಹೆಸರುಂಟು ಬಾನು….!!


About The Author

Leave a Reply

You cannot copy content of this page

Scroll to Top