ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ನೆನೆ ನೆನೆ ಆ ದಿನವ

ಅರುಣಾ ರಾವ್

ಭಾರತದ ದೇಗುಲವ ದರ್ಶಿಸುವ ಬಾರಾ
ಭಾರತಾಂಬೆಯ ಭಕ್ತಿಲಿ ಪೂಜಿಪೆವು ನೋಡಾ||

ದೇಗುಲವ ಕಡೆದಿಹ ಶಿಲ್ಪಿಗಳು ನೂರಾರು
ಗಾಂಧಿ ನೆಹರು ಪಟೇಲರು ಇಹರು‌ ಹಲವರು
ರಕ್ತ ಚೆಲ್ಲಿ ಜೀವ ನೀಡಿ ಹೋರಾಡಿದ ಕಲಿಗಳು
ತ್ಯಾಗ ದೇಶಪ್ರೇಮಗಳ ಪ್ರತಿರೂಪದ ವೀರರು

ಕೆಂಪು ಮೂತಿ ಕಪಿಗಳ ದೇಶದ ಹೊರದೂಡಲು
ಅಹೋರಾತ್ರಿ ಮನೆಮಠಗಳ ತೊರೆದು ನಿಂತ ಸಂತರು
ವಂದೇ ಮಾತರಂ ಧ್ಯೇಯ ಮಂತ್ರವನ್ನು ನುಡಿಯುತ
ನೆತ್ತರಲ್ಲಿ ನವ ಚರಿತ್ರೆ ಪುಟಗಳನ್ನು ಬರೆದರು

ಅಮೃತ ಮಹೋತ್ಸವವು ಜರುಗುತಿಹ ಸುದಿನ
ಸಂತೋಷದ ಸಂಭ್ರಮವ ಆಚರಿಸುತ ಅನುದಿನ
ದೇಶಕಾಗಿ ಜೀವ ತೊರೆದ ಹುತಾತ್ಮರ ನೆನೆಯುತ
ಒಂದೆ ಮತ ಒಂದೆ ಕುಲ ಒಂದೆ ಜಾತಿ ಜನಮನ


ಅರುಣಾ ರಾವ್

About The Author

Leave a Reply

You cannot copy content of this page

Scroll to Top