ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಉಡಿಯ ತುಂಬದಿದ್ದರೂ ಪರ್ವಾಗಿಲ್ಲ
ಸಂಬಂಧವನು ಕತ್ತರಿಸಬೇಡಿ
ಕರೆದು ಸತ್ಕರಿಸದಿದ್ದರೂ ಪರ್ವಾಗಿಲ್ಲ
ಜನರೆದುರು ಅವಮಾನಿಬೇಡಿ

ಕೀಳಾಗಿ ನೋಡುವ ಮನೋಭಾವ
ಇನ್ನಾದರೂ ಬಿಡಲಿಲ್ಲವೇಕೆ
ತುತ್ತು ಅನ್ನ ಹಾಕದಿದ್ದರೂ ಪರ್ವಾಗಿಲ್ಲ
ಉಪವಾಸ ಕೆಡುವಬೇಡಿ

ಹೆಣ್ಣನ್ನು ಹುಣ್ಣೆಂದು ನೋಡುವವರು
ಉಂಟಲ್ಲ ಎಲ್ಲ ಕಡೆ
ನಾಮಕರಣಕ್ಕೆ ಕರೆಯದಿದ್ದರೂ ಪರ್ವಾಗಿಲ್ಲ
ಬಂಜೆಯೆಂದು ನಿಂದಿಸಬೇಡಿ

ಒಡಲೊಳಗಿನ ಜ್ವಾಲೆಯದು ರೋಷದಲ್ಲಿ
ಉಕ್ಕಿ ಹರಿಯುತಿದೆ ನೋಡು
ಶಿರದಿ ಕುಂಭ ಹೊರಿಸದಿದ್ದರೂ ಪರ್ವಾಗಿಲ್ಲ
ಛೀಮಾರಿಹಾಕಿ ಜರಿಯಬೇಡಿ

ಅಭಿನವನ ಹೃದಯವನು ಕೊರೆಯುತಿಹ
ಪ್ರಶ್ನೆಗೆ ಉತ್ತರವಿಲ್ಲ
ಸುಖದ ಸುಪ್ಪತ್ತಿಗೆ ಕೊಡಿಸದಿದ್ದರೂ ಪರ್ವಾಗಿಲ್ಲ
ಭಿಕಾರಿಯೆಂದು ದೂರಿಡಬೇಡಿ


About The Author

Leave a Reply

You cannot copy content of this page

Scroll to Top