ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನೋವು ಅಳಿಯಲಿ ನಲಿವು ಅರಳಲಿ

ಅನುರಾಧಾ ಶಿವಪ್ರಕಾಶ್

ಮಾಯದ ನೋವಿಗೆ ಕಾಲವೇ ಮದ್ದು
ನಡೆಯಿರಿ ಹೊಸತನು ಹುಡುಕುತ್ತ
ನೋಯದ ನರಳದ ಜೀವವೇ ಇಲ್ಲ
ಬದುಕುವ ಬೇಸರ ಕಳೆಯುತ್ತ

ವೃಣವನು ಕೆದಕಲು ಹೋಗಲೇ ಬಾರದು
ಯಾತನೆ ಕೊಡುವುದು ಅತಿಹೆಚ್ಚು
ನೊಂದಿಹ ಮನಸಿಗೆ ಸಾಂತ್ವನ ಹೇಳುವ
ಹೃದಯವ ಹರುಷದಿ ನೀ ಮೆಚ್ಚು

ಕಳೆದುದು ಬಾರದು ಎಟುಕದ ಕನಸು
ವಾಸ್ತವ ನಡೆಯನು ಅರಿಯೋಣ
ಹರಿಯುವ ನದಿಗೂ ತಡೆಯಿದೆ ಎಂಬುದ
ಮರೆಯದೆ ದಿನವೂ ನೆನೆಯೋಣ

ಅಳಿಯಲಿ ನೋವು ಅರಳಲಿ ನಲಿವು
ತೋಷದ ಗಂಧವು ಪಸರಿಸಲಿ
ಎದೆಎದೆಯಲ್ಲಿ ನಗುವಿನ ಚಿಲುಮೆಯು
ಪ್ರೀತಿ ಪ್ರೇಮವ ಹರಡಿಸಲಿ


About The Author

Leave a Reply

You cannot copy content of this page

Scroll to Top