ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಡೀ….!!-

ದೇವರಾಜ್ ಹುಣಸಿಕಟ್ಟಿ ಕವಿತೆ

ನಡೀ ಇಡೀ ಜೀವನವನ್ನೇ
ಅನಾಮತ್ತ ಎತ್ತಿ
ಪ್ರೀತಿಯಾಗಿಸಿ ಬಿಡುವ…!
ಬದುಕಿನ ಪ್ರತಿ ತಿರುವಿಗೆ
ಸಿಗುವ ದುಃಖವನ್ನೇ
ಸಿಂಗರಿಸಿ ಬಿಡುವ….!
ದಾರಿಯ ಮುಳ್ಳನ್ನೇ ಎತ್ತಿ
ಹೂವಾಗಿಸಿ ಬಿಡುವ….!!

ನಡೀ ಶಿಕ್ಷೆಯೋ ವರವೋ
ಅವನ ಭಿಕ್ಷೆಯೆಂದು
ನಂಬಿ ನಡೆದು ಬಿಡುವ..!

ಭೂಮಿ ಮ್ಯಾಲ ಬಿದ್ದ
ಮಳಿ ಹನಿ ಎಲ್ಲ
ಮುತ್ತಾಗಬೇಕಿಲ್ಲ ಗೆಳತಿ
ನಡೀ ಮೊಳೆಯೋ ಬೀಜಕ್ಕ
ಜೀವ ಜಲವಾಗಿ ಬಿಡುವ…!!

ನೆರೆತ ಗಡ್ಡ ಮುಪ್ಪಿನ
ಕುರುಹಲ್ಲ ಈಗೀಗ ಫ್ಯಾಷನ್
ಅಂತ ಗೊತ್ತಿಲ್ಲ ಮರಳ…..!!
ನಡೀ ಬಿಳಿಯ ಕೂದಲಿಗೆ ಡೈ
ಹಾಕಬೇಕಿಲ್ಲ ಹೃದಯದಿಂದ
ಹರೆಯಕ್ಕೆ ಮರಳಿ ಬಿಡುವ…!!

ಕರ್ತಾರನ ಕಮ್ಮಟವಂತೆ
ಬದುಕು…!
ಏನಾದರೂ ಒಂದು
ಮಾಡಲಿ ಬಿಡು
ನಡೀ ಅವ್ಹಾ ಬಯಸಿದಂತೆ
ಇದ್ದು ಬಿಡುವ….!!

ನನ್ನನ್ನೇ ನಾನು ಮರೆತರೆ
ಏನೂ ಮರೆತಿಲ್ಲ
ಎಂದು ಅರಿತು ಬಿಡುವ…!
ನಿನ್ನ ಪ್ರೀತಿಯಲ್ಲಿ ದೇವರನ್ನೂ
ಮರೆತರೇ ಮಾತ್ರ ನಡೀ ಅದನ್ನೇ
ಪ್ರೀತಿಯೆಂದು ತಿಳಿದು ಬಿಡುವ…..!


About The Author

Leave a Reply

You cannot copy content of this page

Scroll to Top