ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಋತುಸ್ರಾವ

ಶಂಕರಾನಂದ ಹೆಬ್ಬಾಳ

ಮಗಳಿಗೆ ಹುಷಾರಿಲ್ಲ
ನನಗೆ ನಿಲ್ಲದ ಋತುಸ್ರಾವ
ಹೇಗೆ ಹೊರಡಲಿ..

ಮಗಳೋ….
ಈಗ ಋತುಮತಿಯಾದ
ಸಮಯ….!
ನನಗೆ ಒಳಗೊಳಗೆ
ಭಯ..!
ನೀಡುವರಾರು
ನನಗೆ ಅಭಯ…!

ಮುಟ್ಟನ್ನು
ಶಪಿಸಲೆ.?
ಸ್ವೀಕರಿಸಲೆ..?
ಧಿಕ್ಕರಿಸಲೇ..?
ಬಾ ಎಂದು ಅಪ್ಪಿ
ಮುದ್ದಾಡಲೇ..?

ಅಪ್ಪ ನಡುನೀರಲ್ಲಿ
ಕೈಬಿಟ್ಟ
ಜೀವನ ದೋಣಿ
ನಡೆಸುವುದೆಂತು..?
ಪುತ್ರಿಯೀಗ ಋತುಮತಿ
ಸರಿಯಿಲ್ಲ
ನಿನ್ನ ಗ್ರಹಗತಿ….!

ಪ್ರತಿ ಹೆಣ್ಣಿಗೂ
ತಪ್ಪಿದ್ದಲ್ಲ ಇದು,
ತಿಂಗಳಿಗೊಮ್ಮೆ
ಅನಿವಾರ್ಯ..!
ಅನುಭವಿಸಲೆಬೇಕಲ್ಲವೇ..!
ಒಡಲ ಸಂಕಟ..
ನೆತ್ತರು ಹರಿದರೇನು..?
ಪಾಲಿಗೆ ಬಂದದ್ದು
ಪಂಚಾಮೃತ
ಉಣಲೆಬೇಕಲ್ಲವೇ..!


About The Author

Leave a Reply

You cannot copy content of this page

Scroll to Top