ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪರಿಸರದ ಕಿವಿಮಾತು

ಜಯಲಕ್ಷ್ಮಿ ಎಂ ಬಿ

ಬಿಸಿಲಿರಲಿ ಮಳೆಯಿರಲಿ ಸಲಹುವೆನು ಮರೆಯದಿರು
ಹಸುರಸಿರಿ ಪರಿಸರದಿ ಪಸರಿಸುವೆನು
ವಸುಧೆಯನು ರಕ್ಷಿಸುವ ಹೊಣೆಯಹೊರು
ಉಸಿರಿನಲಿ ಅಡಗಿರುವೆ ಅರಿತು ಬಾಳು

ನೋವಿನಲು ಜೊತೆಗಿರುವೆ ಆಸರೆಯ ನೀಡುತಲಿ
ಧಾವಿಸುತ ಗಿಡಮರವ ಸಲಹುಮನುಜ
ನೋವಿರದ ಬದುಕನ್ನು ನೀಡುವೆನು ನಿನಗೆಂದು
ಜೀವನವ ಪ್ರೀತಿಸುತ ಸಾಗುನೀನು

ಕೊನೆಯಿರದ ಕಣ್ಣೀರ ಸುರಿಸುತಲಿ ನರಳದಿರು
ಮನೆಮಾರು ಮುಳುಗುತಲಿ ಹೋಗುತಿಹುದು
ಮನದೊಳಗೆ ಕೊರಗಿದರೆ ಫಲವೇನು ಸಿಗದೆಂದು
ಕನವರಿಸಿ ಸುಖವಿಲ್ಲ ತಿಳಿದುಬದುಕು

ಮಣ್ಣಿನಲಿ ಹುದುಗಿರುವ ಬೀಜವದು ಮೊಳೆತಿರಲು
ಕಣ್ಣಿನಲಿ ನೋಡುತಲಿ ಒಲವತೋರು
ಬಣ್ಣವನು ಧರಿಸಿರುವ ಹೂವೊಂದು ನಗುತಿರಲು
ಬಣ್ಣನೆಯ ಮಾತುಗಳ ಸುರಿಸಲೇಕೆ


About The Author

Leave a Reply

You cannot copy content of this page

Scroll to Top