ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿತ್ಯ ಬಂದಿ

ಬಿ.ಶ್ರೀನಿವಾಸ

Police Cuffs Stock Photo - Download Image Now - iStock

ಮಾತಿಗೂ ಮುನ್ನವೇ
ಹೊತ್ತೊಯ್ದು ಬಿಡುತ್ತವೆ
ತೇಲಿ ಬಂದೆರಗುವ ಅಲೆಗಳು

ಯಾರ ಜಪ್ತಿಗೂ ಸಿಗದ ಸೂರ್ಯ ಚಂದ್ರರೇ ಪುಣ್ಯವಂತರು

ಕಾಲೊದೆತ…
ಕೈದುಂಬಿದ ಸುಟ್ಟ ಗಾಯ
ಸುಳ್ಳೆಂದು ಇನ್ನಷ್ಟೇ ಸಾಬೀತಾಗಿ
ಘಮಘಮಿಸಲೇಬೇಕೆಂದೇನಿಲ್ಲ
ಅರಳಿದರೂ ಸಾಕು ನ್ಯಾಯ

ಬಾಯಾರಿದ ಎದೆಯಲಿ
ಕನಸುಗಳು ಬತ್ತಿಹೋಗುತ್ತವೆ.

ಭೂಮಿ,ಬಾನು,ಸೂರ್ಯ ಚಂದ್ರ ತಾರೆಯರಿಗೂ ಬೇಕಿಲ್ಲಿ ಬೆಳಕು!

ಕೆಲವೊಮ್ಮೆ
ಬರೆಯುವಾಗ ಪೆನ್ನಿನೊಳಗೂ
ಏನೂ ಮೂಡುವುದಿಲ್ಲ
ಕಣ್ಣ ನೀರು ಸೇರಿ

ಮತ್ತೊಮ್ಮೆ….
ರಕ್ತ ಸೇರಿ
ಕೆಂಪಾಗುತ್ತವೆ ಅಕ್ಷರ

ಕಟಕಟೆಯಲಿ ನಿಂತ ಹುಡುಗನಿಗೂ
ಪಾಠಹೇಳುವ ಮೇಷ್ಟರಿಗೂ
ಹೂ ಮಾರುವ ಮುದುಕಿಗೂ
ಡಾಕ್ಟರಿಗೂ…..ಒಂದೇ ಪಾಠ!

ಒಂದೊಂದು ಮೆಟ್ಟಿಲ ಮೇಲೂ ಏಸೊಂದು ಬಿಕ್ಕುಗಳ ಸದ್ದು!

ಬದುಕು ಉಳಿದು
ಕೋರ್ಟಿಗೆ
ದೂರವಾದ ದಿನ
ಯುದ್ಧಗಳಿರುವುದಿಲ್ಲ

ಎಷ್ಟೋ ಜನರ ನಗು
ಕಟಕಟೆಗಳ ಬಾಹುಗಳಲಿ ಬಂದಿ

ಗೋಡೆಯಲಿ
ನೇತು ಬಿದ್ದ ಗಾಂಧಿ
ಕೂಡ
ಇಲ್ಲಿ
ನಿತ್ಯ ಬಂದಿ!


About The Author

Leave a Reply

You cannot copy content of this page

Scroll to Top