ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಲೇಖನ

ಪರಿಸರ ದಿನಾಚರಣೆಗಾಗಿ ವನ ಸಿಂಚನ

ಅರುಣಾ ರಾವ್

ಕೂಜನದ ರಿಂಗಣಕೆ ಹಾಡಾಗಿದೆ ಕಾನನ
ತಂಗಾಳಿ ತೀಡುತಲಿ ಸುತ್ತಿಸುಳಿದು ಬನಬನ
ಕಣ್ ಹರಿಯಲೆತ್ತೆತ್ತೆ ಹಸಿರಿನದೇ ಚೇತನ
ನೋಡುವ ಮೈಮನಗಳಲಿ ಆನಂದದ ಕಂಪನ

ಹೆಜ್ಜೆಗಳಿಗೆ ಗೆಜ್ಜೆಯಾದ ಪರ್ಣಗಳ ಹಾಸುಗೆ
ದಿಗಂತದಿ ಒಂದಾಗಿಹ ಭುವಿ ಬಾನಿನ ಬೆಸುಗೆ
ತರುಲತೆಗಳಲಿ ಕಾಣ್ವ ರಾಶಿ ರಾಶಿ ಹೂ ನಗೆ
ಬೆಟ್ಟ ಗುಡ್ಡಗಳ ಮೇಲ್ಮೆ ಹಸಿರ ಹುಲ್ಲ ಅಪ್ಪುಗೆ

ಜುಳುಜುಳನೆ ಹರಿಯುತಿಹ ಜೀವ ಜಲತರಂಗಿಣಿ
ಧುಮ್ಮಿಕ್ಕಿ ಕಂಗೊಳಿಪ ನೊರೆವಾಲಿನ ರಾಗಿಣಿ
ವೇಗವೇನು ಒನಪದೇನು ನಿಲ್ಲೆ ರಾಗ‌ ರಂಜಿನಿ
ನೀನೆ ಮಾತೆ ನೀನೆ ದಾತೆ ನಿತ್ಯ ಸಂಜೀವಿನಿ


ಅರುಣಾ ರಾವ್

About The Author

Leave a Reply

You cannot copy content of this page

Scroll to Top