ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬುದ್ಧ ಗಜಲ್ ಸಿದ್ದರಾಮ ಹೊನ್ಕಲ್

ಬುದ್ಧ ಗಜಲ್

ಆಸೆಯೇ ದು:ಖಕ್ಕೆ ಮೂಲ ಅಂತ ಅದೇಕೆ ಹೇಳಿದೆ ? ನೀ ಹೇಳು ಬುದ್ಧ
ಆಸೆಯೇ ಇರದಿರೆ ಈ ಜಿಂದಗಿಯೇಕೆ ಬೇಕಿದೆ ? ನೀ ಹೇಳು ಬುದ್ಧ

ಸಾವು ನೋವು ನೋಡಿ ಸಾಮ್ರಾಜ್ಯವ ತೊರೆದು ಜ್ಞಾನದಾಸೆಯನರಸಿ ನೀ ಹೋದಿ
ಇಲ್ಲಿ ಉಳಿದ ನಮ್ಮ ಹುಲುಮಾನವರ ಗತಿ ಏನಾಗಿದೆ ? ನೀ ಹೇಳು ಬುದ್ಧ

ಬದುಕಲಿ ಏನಿಲ್ಲದವರೇ ಕೋಟಿ ಕೋಟಿ ಜನ ನಾಳೆಯ ಭರವಸೆಯ ಮೇಲೆ ಬದುಕಿಹರು
ಬಯಕೆಗಳೇ ಬೇಡವೆಂದರೆ ಬದುಕುವದಕೆ ಅರ್ಥವೆನಿದೆ ನೀ ಹೇಳು ಬುದ್ಧ

ಬದುಕಿನ ಸವಿ ಸವಿಯದವರೇ ತುಂಬಿಹರಿಲ್ಲಿ ನಾಳೆ ಬರಬಹುದೆಂಬ ಕನಸಲಿಹರು
ಸಂಸಾರಿಗರಿಗೆ ಆಸೆಗಳು ಸಹಜವಲ್ಲವೆ ? ಬೇರೆನಿದೆ ನೀ ಹೇಳು ಬುದ್ಧ

ಎಲ್ಲರೂ ನಿನ್ನಂತೆ ಸಿದ್ಧ ಆಗಲಾಗುವದೇ ಬುದ್ಧ ಆದರೆ ಈ ಸೃಷ್ಟಿಯ ಗತಿ ಏನಾದಿತು
ಹೊನ್ನಸಿರಿ”ಆಸೆಯಲ್ಲ ದುರಾಸೆಯೇ ದು:ಖಕ್ಕೆ ಮೂಲವಿದೆ ನೀ ಹೇಳು ಬುದ್ಧ.


ಸಿದ್ಧರಾಮ ಹೊನ್ಕಲ್

About The Author

1 thought on “ಬುದ್ಧ ಗಜಲ್ ಸಿದ್ದರಾಮ ಹೊನ್ಕಲ್”

  1. Sarasijaa Rajan

    ಆಸೆಯನ್ನು ತೀರಿಸಲೆಂದು ಕೆಲಸ
    ಕೆಲಸಕ್ಕೆ ಪ್ರತಿಫಲದ ನಿರೀಕ್ಷೆ
    ನಿರೀಕ್ಷೆಯಂತೆ ಫಲ ಸಿಗದರೆ ನಿರಾಸೆ
    ನಿರಾಸೆಯ ದಮನಕ್ಕೆ ಯುದ್ಧ

    ಯುದ್ಧದಲ್ಲಿ ಗೆದ್ದರೆ ರಾಜ್ಯ
    ರಾಜ್ಯ ವಿಸ್ತರಣೆಗೆ ಮತ್ತೆ ಮತ್ತೆ ಯತ್ನ
    ಜೀವನವೆಲ್ಲಾ ಈ ವಿಷ ವರ್ತುಲದಲ್ಲಿ
    ಸಿಲುಕಿ ನಲುಗುವುದು ಯಾವ ಪುರುಷಾರ್ಥ ಸಾಧನೆಗಾಗಿ?

    However good thinking

Leave a Reply

You cannot copy content of this page

Scroll to Top