ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಒಲೆಯ ಮೇಲಿನ ಬದುಕು

ಶಂಕರಾನಂದ ಹೆಬ್ಬಾಳ

Ashes to ashes Painting by Hein Mark | Saatchi Art

ಒಲೆಯ ಮೇಲೆ ಉರಿದ ಬದುಕು
ನರಳಿ ನರಳಿ ಹೋಗಿದೆ..!
ಒಲವ ಬಯಸಿ ಕುಳಿತ ಜೀವ
ಸುಟ್ಟು ಬೂದಿಲಾಗಿದೆ..!!

ಕಮರಿ ಹೊರಟ ಭಾವ ರಥದ
ಚಕ್ರಮುರಿದು ನಿಂತಿದೆ..!
ವಿಮಲ ಹೃದಯ ಶಿಲೆಯ ತೆರದಿ
ಮೌನದಾರಿ ಹಿಡಿದಿದೆ..!!

ಹೆತ್ತ ತಾಯಿ ತಂದೆಯಿರದ
ಬಾಳು ನನ್ನದಾಗಿದೆ..!
ಅತ್ತು ಕರೆದು ಜೀವ ಇಂದು
ಒಳಗೆ ತಾನು ಕೊರಗಿದೆ..!!

ಕಿಚ್ಚಿನಲ್ಲಿ ಸುಡುತಲಿರುವ
ಬಾಳು ರೊಟ್ಟಿಯಾಗಿದೆ..!
ಹುಚ್ಚಿಯಂತೆ ಅಲೆವ ಮನವು
ದೇವನನ್ನು ಕೂಗಿದೆ..!!

ಕಟ್ಟಿಕೊಂಡ ಪತಿಯು ಇರದೆ
ನಿತ್ಯ ಕಷ್ಟ ನೋಡಿದೆ..!
ಗಟ್ಟಿಯಾಗಿ ಲೋಕದೊಳಗೆ
ನೋವನುಂಡು ಹಾಡಿದೆ..!!


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top