ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಸಿರ ವನ-ಸಿರಿ..

ಸುರೇಶ ಮಲ್ಲಾಡದ..

ಮನಸ್ಸಿಗೆ ಮುದನೀಡುವ..
ಕಣ್ಣಿಗೆ ತಂಪನೀಯುವ..
ಹಸಿರ ವನಸಿರಿಯ ರೂಪಸಿಯೇ.
ಏನೆಂದು ಪೊಗಳಲಿ ನಿನ್ನ ಚೆಲುವ.
ನೀಲಿ-ಬಾನ ಹಂದರದೊಳ
ನಿನ್ನ ಮೊಗದಂದವ..

ಬಿರುಗಾಳಿಯ ತಡೆದು..
ಬಿಸಿ-ಗಾಳಿಯ ನಂಗಿ..
ನೆರಳ ಹಾಸಿ ತಂಪನೀಯುವೆ
ವಿಷವುಂಡು. ಸಿಹಿಯಾದ
ಆಮ್ಲಜನಕ ಕೊಡುವೆ..
ಕೆಡುಕ ಬಯಸುವ ಮನುಜನ
ಕಣ್ತೆರೆದು ನೋಡುತಲಿ..
ಮೌನವಾಗೇ ಸಹಿಸುವೆ..

ಮನೆಯ ಶೃಂಗರಿಸಲು.
ಗತ-ವೈಭವವ ಮೆರೆಯಲು.
ಅಧಿಕಾರ ಮಧದಿಂದಲಿ..
ದರ್ಪದೀ ಮೆರೆದವನು..

ನೆರಳಿತ್ತು ಸಲುಹಿದ.
ನಿನ್ನಡಿಗೆ ಕೊಡಲಿ ಇಟ್ಟವನು.

ದಟ್ಟವಾಗಿ ಹರಡಿ
ಭುವಿಯೊಡಲಿಗೆ ಹಸಿರ
ಸೀರೆಯನುಡಿಸಿರುವೆ..
ಸ್ವಾರ್ಥದಿಂ ನಿನ್ನೊಡಲ ಸೀಳಿ.
ಮನುಜ ನಿಶಾನೆ ಎಳೆದಿಹನು..
ಒಳಿತ ಮಾಡುವುದ ಮರೆತು.
ಸ್ವಾರ್ಥದಿ ಕೆಡುಕ ಬಯಸ್ಯಾನು..


About The Author

Leave a Reply

You cannot copy content of this page

Scroll to Top