ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಹಾಜರಿ

ಶಂಕರಾನಂದ ಹೆಬ್ಬಾಳ

ನಿನ್ನ ಹಾಜರಿಗಾಗಿ
ದಿನವೂ ಕಾದೆ
ಎದೆಯ ಕಡಲಿನಲ್ಲಿ ಉಳಿದು
ಏಕಾಂತ ಭಾವದ ಮುದ್ರೆ
ಬೊಬ್ಬೆ ಹೊಡೆಯುತ್ತಿದೆ…!

ಬಿಕ್ಕಳಿಸುವ ಬಿಗಿಕಂಠ
ಅವಳಪ್ಪುಗೆಯ ಬಯಸಿ
ಬೆಂಗಾಡಿನಲ್ಲಿ
ನರಳಿ ನರಳಿ ಸಾಯುತ್ತಿದೆ
ನೋಡು ಬಾ ಈ ಕಳೇಬರ…!

ವಾಕ್ಷಾರುಷ್ಯದ ನುಡಿಯಾಡಿಲ್ಲ
ಕೆಂಗಣ್ಣಿನ ಅಂಚಿನಲಿ
ಸುರಿವ ದೃಗುಜಲವು
ನಿನ್ನನೆ ಸ್ಮರಿಸುತಿದೆ….!

ಎದೆಯೊಳಗಿನ ಬೆಲ್ಲು
ಬಾರಿಸುತ್ತಿದೆ ಎಡಬಿಡದೆ
ಕಾದು ಕಾದು ಸುಸ್ತಾದ
ಮನವನೊಮ್ಮೆ ಆಲಿಂಗಿಸಿ
ಅಪ್ಪು ಬಾರೆ…!

ಜೀವಂತ ಶವವಾಗಿ ಬದುಕುವ
ಜೀವದೊಳು ಉಸಿರಾಗಿ,
ಹಸಿರಾಗಿ ಉಸಿರಾಗಿ,
ಹೆಸರನ್ನು ಮರೆವ ಮುಂಚೆ
ಬಿಟ್ಟ ಲೆಕ್ಕವನ್ನೆಲ್ಲ,
ಚುಕ್ತಾ ಮಾಡಿ
ಹೆಸರಿನೊಂದಿಗೆ,
ಹೃದಯದಲ್ಲಿ
ಹಾಜರಿ ಹಾಕಿಬಿಡು…!


About The Author

Leave a Reply

You cannot copy content of this page

Scroll to Top