ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ವಾಣಿ ಭಂಡಾರಿ

ಹಗಲುಗಳೆ ಕತ್ತಲಾಗಿ ಬಿಕ್ಕುತ್ತಿವೆ ರಾತ್ರಿಗಳ ಹಂಗೇಕೆಲ್ಲಿ ಅವನು ಹೋದ ಮೇಲೆ
ಏನು ಮಾಡಲಿ ಇರುಳ ನೆನಪುಗಳು ಮುಳುಗಿವೆ ಮಧು ಬಟ್ಟಲಿನಲ್ಲಿ ಅವನು ಹೋದ ಮೇಲೆ.

ಹಿಡಿದ ಕೈಗಳು ಕಲೆತು ಆಡಿ ಮಲೆತು ಅಂಗಳದಲ್ಲಿ ಮಂಗಳ ಬೀರಿ ನಕ್ಕಿದ್ದವಂದು
ಮನದ ನಭ ಚುಕ್ಕಿಗಳು ಮಂಕಾಗಿವೆ ದರ್ದ್ ಗೆ ಮುಲಾಮೆಲ್ಲಿ ಅವನು ಹೋದ ಮೇಲೆ.

ಗಲ್ಲಹಿಡಿದು ಲಲ್ಲೆಗರೆದ ಕೈಗಳು ಜೋಡು ದೀಪದ ನಡುವೆ ಮಾತಿರದ ಮೌನ ತಾಳಿವೆ
ಜೋತಿರುವ ನೆನಪಿನೊಳಗೆ ಕಣ್ಣೀರು ಕಡಲಾಗಿದೆ ಕಾಲನ ಅಲೆಯಲ್ಲಿ ಅವನು ಹೋದ ಮೇಲೆ

ಮೂರು ದಿನದ ಸಂತೆಯಲ್ಲಿ ಎಂತ ನಾಟಕದ ತಾಲೀಮು ಕನ್ನಡಿಯ ಮುಂದೆ ರೂಪ ಮಾಸಿದೆ
ತಲೆಯಿಡುವ ತೊಡೆ ನೇವರಿಸುವ ಕರಗಳಿಗೂ ಭಂಗವಿದೆಯಿಲ್ಲಿ ಅವನು ಹೋದ ಮೇಲೆ.

ಏನು ಹೇಳುತ್ತಿದೆ “ವಾಣಿ” ಕರಗಿದ ಮೊಂಬತ್ತಿ ಹೆಸರಿನ ಮುಂದಿರುವ ಉಸಿರು ಹೋದ ಮೇಲೆ
ಆತ್ಮದ ಜೊತೆ ಸುಖಿಸುವ ನನಗೆ ಸಾವಲ್ಲದ ಸಾವಿನ ಮಾತೇಕಿಲ್ಲಿ ಅವನು ಹೋದ ಮೇಲೆ.

**************

About The Author

Leave a Reply

You cannot copy content of this page

Scroll to Top