ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಹೃದಿಹೃದಯಲು ಒಲವುದಿಸಿ

ಸರೋಜ ಪ್ರಶಾಂತಸ್ವಾಮಿ

ಋತು ಋತುವು ಗತಿಗತಿಸಿ,
ನೆಲದೊಗಲು ಹಪಹಪಿಸಿ,
ಬಿರಿದಿದೆದೆ ತಪತಪಿಸಿ
ಮನ್ವಂತರದ ತುದಿ ಅರಸಿ….

ಬೈಸಾಕಿಯು ಬೇಸರಿಸಿ,
ಚಿಗಿ ಚೈತ್ರದ ಪಡಿಯರಸಿ
ಮಗುವಂತೆ ಮುನಿಸೊಡೆಸಿ,
ಮೋತ್ಕರಿಸಿದೆ ಮಿಗಿಮಿಗಿಸಿ…

ಹೊಸ ಒಸಗೆಯ ಉಡಿಸುಡಿಸಿ,
ಕಸ ಕಳೆಯ ತೆಗೆತೆಗಿಸಿ
ಒಲವೇ.‌! ಬಾ ನೆನೆಸು ಉಸಿರಿಳಿಸಿ,
ಹೊಮ್ಮಾಗಿಯ ಕನಸಿಸಿ…

ಬಂಜಾಗಿಹ ನೆಲ ಬಸಿರಿಸಿ,
ಬಯಕೆ ಸಿರಿಯ ಪೇರಿಸಿ
ಹಸಿರೆಲ್ಲೆಡೆ ನಳನಳಿಸಿ,
ಮೈಯೊಡೆಸು ಸೀಮಂತಿಸಿ….

ಎದೆತುದಿಯ ಹಸಿರಾಗಿಸಿ,
ಮಣ್ಣಸವಿಯ ಉಣಿಸುಣಿಸಿ
ಹಣ್ಣಾಗಿಸಿ, ಕಣ್ಣಾಗಿಸಿ
ಜೊನ್ನಾಗಿಸು ಜಗಮಗಿಸಿ..‌.

ಹೃದಿ ಹೃದಿಯಲು ಒಲವುದಿಸಿ,
ಪ್ರತಿ ಉಸಿರ ನೇವರಿಸಿ
ಮಾಗುತಿರಲೀ ಮೇಘ ಸಂಗಮಿಸಿ,
ರಂಗಾಗಲಿ ಜಗ ಸಂಭ್ರಮಿಸಿ.


About The Author

Leave a Reply

You cannot copy content of this page

Scroll to Top