ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಕನ್ನಡಿ

ಎಂ. ಆರ್. ಅನಸೂಯ

ಬಂದು ಹೋದರು
ಎಲ್ಲರೂ ನಿನ್ನೊಳಗೆ
ಪರಿಚಿತರು ಅಪರಿಚಿತರು
ಸಮಾನ ದೃಷ್ಟಿ
ಪ್ರತಿಕೃತಿಯಿತ್ತು ಕಣ್ಣೊಳಗೆ
ಬರ ಮಾಡಲಿಲ್ಲ ಯಾರನ್ನೂ ಮನದೊಳಗೆ
ಬದ್ಧತೆ ಕರ್ತವ್ಯಕ್ಕಷ್ಟೆ
ಮೋಹವಿಲ್ಲದ ಆತ್ಮೀಯತೆ
ಕಲಿಯಬೇಕು ನಿನ್ನಿಂದ ನಿರ್ಲಿಪ್ತತೆ

ಕಂಡಂಥ
ತನುವಿನಂದ ಚಂದವ
ಕುಂದು ಕೊರತೆಗಳ ಜೊತೆಯಲ್ಲೇ
ತೋರುವ ಪಾರದರ್ಶಕ ನಿಷ್ಟತೆ
ಆಳಿನಿಂದರಸನ ತನಕ
ಅಂಜದ ನಿಷ್ಟುರವಾದಿ
ತಾವಿಲ್ಲ ಇಷ್ಟ ಕಷ್ಟಗಳಿಗೆ
ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ
ಗತ್ಯಂತರವಿಲ್ಲದೆ ಅಗತ್ಯವಾಗಿರುವೆ.

**********************

About The Author

Leave a Reply

You cannot copy content of this page

Scroll to Top