ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹೇಳು ಕಾರಣ….

ಡಾ. ನಿರ್ಮಲಾ ಬಟ್ಟಲ

Flash, Thunderstorm, Super Cell, Weather

ಮನದಂಗಳದಿ ಬಂದು
ಕಾರಣವಿಲ್ಲದೆ
ಮುನಿಸಿಕೊಂಡ ಹೋಗುವ
ಗೆಳೆಯ ಒಮ್ಮೆಯಾದರೂ
ಹೇಳು ನೀ ಮೌನಕೆ ಕಾರಣ…..!

ಆಷಾಢದ ಸೂಂಯ್ ಗೂಡುತ
ಬೀಸುವ ಗಾಳಿಯ ಕೇಳಿಗೆ
ತತ್ತರಿಸಿದ ಲತೆಯಂತೆ
ತನು ನಡುಗಿದರೆ
ಮನ ಮುದುಡಿದೆ….!

ಬಾನಲಿ ಮೊಡಗಳ
ಚೆಲ್ಲಾಟದ ನಡುವೆ
ನನ್ನ ಭಾವನೆಗಳನೆಲ್ಲ
ಚೆಲ್ಲಾಪಿಲ್ಲಿಮಾಡಿ
ಸರಿದುಹೋಗುವುದು ಸರಿಯೆ….!

ನೀನೆನೋ ಮೋಡಗಳ
ನಡುವೆ ಏನು
ಅರಿಯದವನಂತೆ ಸರಿದು ಬಿಡುವೆ
ಬೆಳದಿಂಗಳ ರಾತ್ರಿಗಾಗಿ ನಾ ಪರಿತಪಿಸುವೆ….!

ಆಷಾಢದ ಮುನಿಸಿಗೆ
ಶ್ರಾವಣದ ಸೋನೆ ರಮಿಸಲು
ಝರಿಯಾಗಿ ಹರಿದು
ಹಸಿರಾಗಿ ಉಕ್ಕಲು ನಾ
ಕಾಯುತಿರುವೆ…..!

ಮರೆತು ಮುನಿಸು
ನೀ ಬರುವೆಯಾ….?
ಬರುವುದಾದರೆ ನೀ
ಚೇತನವಾಗಿ ಬಾ
ನಿತ್ಯನೂತನ ಆತ್ಮಚೆಲುವಾಗಿ ಬಾ….!

********************

About The Author

6 thoughts on “ಹೇಳು ಕಾರಣ….”

Leave a Reply

You cannot copy content of this page

Scroll to Top