ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಾರಿಹೋಕ

ವಿಜಯಶ್ರೀ ಹಾಲಾಡಿ

ಕಾಡುದಾರಿಯ ನಿಶ್ಶಬ್ದದಲ್ಲಿ
ಜೀರುಂಡೆ ಮರಕಪ್ಪೆಗಳ
ಮೆಲುದನಿಯಿರುತ್ತದೆ
ಗಳಿತ ಎಲೆಯೊಂದು ನೆಲವ
ಸ್ಪರ್ಶಿಸುವ ಆಲಾಪವಿರುತ್ತದೆ
ನರಿಯ ಕೂಗಿನ ಮೌನ
ಛಂದಸ್ಸುಗಳಿರುತ್ತವೆ..

ನಡುರಾತ್ರಿ ದಾರಿಸವೆಸುವ
ಪಥಿಕನಿಗೆ ಮರಗಳ
ಮುಗಿಯದ ಧ್ಯಾನ
ಗಿಡ ಬಳ್ಳಿ ಪೊದೆಗಳ
ಕತ್ತಲ ಸಂಭಾಷಣೆಗಳು
ಢಿಕ್ಕಿಹೊಡೆಯುತ್ತವೆ

ಆಡಿದಷ್ಟೂ ಮುಗಿಯದ
ಅವನ ಎತ್ತರದ ಮಾತುಗಳು
ಠೇಂಕಾರ ಹೂಂಕಾರಗಳು
ತರಹೇವಾರಿ ಬಯ್ಗುಳಗಳು
ಲಜ್ಜೆಗೆಟ್ಟು ಬೆಳೆಯುತ್ತಲೇ
ಕಾಡುಗಳ ಜೊತೆ ಮುಖಾಮುಖಿ
-ಯಾಗಿವೆ ಅನಾದಿಯಿಂದ

*********************

ಚಿತ್ರಕೃಪೆ-ವಿಜಯಶ್ರೀ

About The Author

Leave a Reply

You cannot copy content of this page

Scroll to Top