ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

ಬರೀ ಭರವಸೆಯ ಮಹಾಪೂರ ಬೇಡ ನನಗೆ

ನೀಡಿ ಹಿಡಿ ಕಾಳು ಮರಳಿಸುವೆ ರಾಶಿರಾಶಿ ನಿಮಗೆ

ಬರದಿರುವ ಮಳೆಗಾಗಿ ಕಾಯುತ್ತಾ ಕೂರುವುದಿಲ್ಲ 

ರಕ್ತ ಬಸಿದಾದರೂ  ನೀಡುವೆ ನಿಮಗೆ ಬೆಲ್ಲ

ನನಗೇನು ಬೇಕಿಲ್ಲ ನಿಮ್ಮಂತೆ ಸೂಟುಬೂಟು

ಕೊನೆಗಂತೂ ಇದ್ದೇ ಇದೆಯಲ್ಲ ಖಾಲಿ ಕಪಾಟು

ತುತ್ತು ಅನ್ನ ನೀರು ಸೂರು ಸಾಕು ಎನಗೆ

ಮತ್ತೇನು ಮಿಕ್ಕಿದ್ದು ಹಂಚಿ ಬಿಡುವೆ ನಿಮಗೆ

ಬೇಡೆನಗೆ ಮಣ ಮಣ ಬಂಗಾರದ ತಿಜೋರಿ

ಸಾಕೆನಗೆ ಒಣ ಒಣ ಒಂದೊತ್ತಿನ ಅನ್ನದ ಐಸಿರಿ

*************************************************

ಶ್ರೀದೇವಿ ಕಜ೯ಗಿ

About The Author

2 thoughts on “”

Leave a Reply

You cannot copy content of this page

Scroll to Top