ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕರುಣಾಳು ಬಾ ಬೆಳಕೆ

ಡಾ. ಗುರುಸಿದ್ಧಯ್ಯಾ ಸ್ವಾಮಿ

Buddha,peace,white,Buddhism

ಸಿರಿಯ ಪಂಜರವ ಹರಿದೊಗೆದು
ಸುಖದ ಮೂಲವ ಹುಡುಕುತ
ಬೋಧಿ ವೃಕ್ಷದಡಿ ತಪವಗೈದು
ದಿವ್ಯ ಜ್ಞಾನವನು ಪಡೆದ ಬುದ್ಧ

ಅಳುವವರ ಕಂಬನಿಯೊರೆಸಲು
ವರ್ಗ ವರ್ಣ ಲಿಂಗ ಭೇದಗಳಳಿಸಲು
ಗುಡಿಸಲೊಳಿರುವವರ ಹುಡುಕುತ
ನಡೆದ ಕರುಣಾಮೂರ್ತಿ ಬುದ್ಧ

ಕೊಲ್ಲಲಿಲ್ಲ ನೀನು ಪಾಪಿಗಳನು
ದ್ವೇಷಿಸಲಿಲ್ಲ ನೀನು ಕೋಪಿಗಳನು
ಕಿತ್ತೊಗೆದೆ ನೀನು ಪಾಪಿಗಳ
ಮನದಾಳದ ಕೊಳೆತ ಕಸವನು

ದುಃಖದ ಮೂಲ ಆಸೆಯ ಬಿಡಿಸಿ
ಶುದ್ಧಾಚರಣೆಯ ದೀಕ್ಷೆಯ ನೀಡಿ
ಜ್ಞಾನಾರ್ಥಿಗಳಿಗೆ ಜ್ಞಾನ ದಾಸೋಹ
ಆರಂಭಿಸಿದ ವಿಶ್ವಗುರು ಬುದ್ಧ

ಜ್ಞಾನದ ಸುದೀಪ ಹೊತ್ತಿಸಿ
ಅಜ್ಞಾನದ ತಮವ ಓಡಿಸಿದ
ಕರುಣಾಳು ಬೆಳಕು ಬುದ್ಧ
ಮತ್ತೊಮ್ಮೆ ಅವತರಿಸಿ ಬಾ

*********************

About The Author

Leave a Reply

You cannot copy content of this page

Scroll to Top