ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅಪ್ಪನ ಕವಿತೆಗಳು

ಮಂಜೇಶ್ ದೇವಗಳ್ಳಿ

ಆತ ಇಂದಿಗೂ ಕೈ ಬೀಸಿ ಬೆದರಿಸಿಲ್ಲ
ತೊಳ ತೆಕ್ಕೆಯಲಿ ತಬ್ಬಿದ ನೆನಪು ಮಾಸಿಲ್ಲ
ಛಲಕೆ ಮನ ಬಲಕೆ ಸಾಟಿ ಯಾರಿಲ್ಲ
ಹರೆಯದ ಭುಜದಿ ಬದುಕ ನೊಗ ಹೊತ್ತವ
ಬವಣೆ ಬಿಗಿದರು ನಿಟ್ಟುಸಿರಲೆ ನೆಲೆಕಂಡವ
ದಣಿವರಿಯದೆ ಮಣ್ಣ ನಂಬಿ ದುಡಿದವ
ಜಾಣ್ಮೆ ತಾಳ್ಮೆ ಸಹಬಾಳ್ವೆಯೆ ಈತನ ಉಕ್ತಿ
ಆತನ ಬೆವರ ಹನಿಯೆ ನೀಗಿತೆ ನನ್ನಸಿವ.


ಆತನ ಉಕ್ತಿ ಸೂರ ನೆತ್ತಿಯಂತೆ ನೆರಳು
ಮಣ್ಣ ಕಣ್ಣಿಗೊದ್ದು ನೇಗಿಲ ನಂಬಿಹನು
ದಣಿವರಿಯದ ದುಡಿಮೆ ಮನ ಬಲವು
ಬೆವರತ್ತೆತು ಭರವಸೆಯ ನಾಳೆಯಿತ್ತವ
ಆತನ ಗಳಿಕೆ ಗರಿಯೆ ಗುಡಿಸಲಾಯಿತು
ತುಸು ಮೌನಿ ತುಸು ಕೋಪಿ, ಜಾಣನು
ನಗುಮೊಗದವ ಕಂಬನಿ ಮರೆಮಾಚಿಹನು
ಬಯಸನೆನು ಬರಿದಾದರು ಒಡಲ ಮಡಿಲು
ಬೇಡುವ ಹರಸುವ ನನ್ನ ಬಾಳ ಹೆಣೆಯುತ
ತೊಟ್ಟಿಲ ಕುಡಿ ಭುಜದೆತ್ತರ ಬೆಳೆದರು ಹೊತ್ತು ತಿರುಗುವ.


ಸ್ವಾರ್ಥದ ನೆಲೆಯಲಿ ನಿಸ್ವಾರ್ಥದ ನೆರೆಳವ ಬೆಂದವ
ನೆಮ್ಮದಿಯ ಸೂರನಿತ್ತಲು ನೆಲಕಚ್ಚಿದರು ಬಿಡನವ
ಮುಗುಳು ನಗುವ ಬೆನ್ನತ್ತಟ್ಟಿ ಬೇಗುದಿಯು ಮನದಿ
ನಾಳೆಗಳ ಕೂಡಿಡಲು ಇಂದು ನೆನ್ನೆಗಳ ಸವೆಸುತಿರುವ
ದಣಿವ ದೂಡಿ ತನ್ನವರ ಬದುಕ ಕಟ್ಟಲು ನಿಂತನವ
ಆತನ ಬೆವರ ಹನಿಯೆ ಹರಸುತಿದೆ ಬಾಳ ದಿನಗಳ
ಸವೆದನವ ನೊಂದವ ಜರಿದರು ನಿಂದಿಸಿದರು ಹರಸುವ
ಉಸಿರನಿತ್ತ ಒಡಲು ಜಗದಿ ಬಯಸೊದು ಬೊಗಸೆ ಪ್ರೀತಿ
ಮರುಗದಿರಲಿ ಆತನೊಡಲು ನಿದಿರೆಯ ನಿಟ್ಟುಸಿರಲಿ
ನಮ್ಮ ಬಯಕೆ ಹೊನ್ನು ಚಿಂತೆಯ ಹೊರೆಯಾಗದಿರಲಿ ಆತಗೆ.

***************

About The Author

Leave a Reply

You cannot copy content of this page

Scroll to Top