ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

Are Indian Farmers Ready To Explore International Markets?

ಕನಸು ಕುಸಿಯುತಿದೆ ಹಸಿದ ಕೂಸಿನ ಅಳುವಿನಲಿ
ಮನವು ಘಾಸಿಗೊಂಡಿದೆ ಬ್ಯಾಂಕ್ ಕೊಟ್ಟ ನೋಟಿಸಿನಲಿ

ರೈತನ ಸ್ವೇದದ ಸ್ವಾದ ಸವಿದ ಅಕ್ಕಿಕಾಳು ಅಳುತ್ತಿದೆ
ಅನ್ನವಿಲ್ಲದೆ ಬೆಂದ ಇಳಿಜೀವ ಇಳೆಯ ಬಿಸಿಲ ಝಳದಲಿ

ಮಧ್ಯಸ್ಥಿಕೆಯ ಮಾರುಕಟ್ಟೆ ಒಡಲ ಮಂಕರಿ ತುಂಬಲಿಲ್ಲ
ಬಣ್ಣದ ಬದುಕು ಕಟ್ಟುವ ಬಯಕೆಗಳು ಬೆರೆತಿವೆ ಬೂದಿಯಲಿ

ಮೆತ್ತನೆಯ ಹಾಸಿಗೆಯಲಿ ಪವಡಿಸುವ ಪರಿ ಎನಗಿಲ್ಲ
ಅಂಗಾತ ಮಲಗಿ ಬೇಡಿದರೂ ಖಾರ ಏರುತ್ತಿದೆ ಸಾಲದಲಿ

ಕೆಸರುಂಡ ಕೈಗಳಿವು ಮೊಸರಿನ ಸಂಗವ ತೊರೆದಿವೆ
ನಿಟ್ಟುಸಿರ ತಾಪ ಕೊನರುತ್ತಿದೆ ಬಿರುಕು ಬಿಟ್ಟ  ಪಾದದಲಿ

ಅನ್ನದಾತ ಶಿರೋನಾಮೆ ಕ್ಷಾಮತುಂಬಿದೆ ಜೀವದಾತನಿಗೆ
ಶೈಲ ಶಿಖರದ ಕಂಗಳಲೂ ನೀರು ಜಿನುಗುತ್ತಿದೆ ನೋವಿನಲಿ

************************

ಶೈಲಜ.ವಿ.ಕೋಲಾರ

About The Author

2 thoughts on “”

Leave a Reply

You cannot copy content of this page

Scroll to Top