ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

Rain, storm forecast worries farmers

ತುಳಿದುಬಿಡು ಬಿರುಕಿನಲ್ಲಿ ಬದುಕು ಇರಬಹುದೇನೋ ನೋಡಿ ಬರುವೆ
ಬಿತ್ತಿದ ಬೀಜಗಳು ಅರೆಜೀವ ಹಿಡಿದಿರಬಹುದೇನೋ ನೋಡಿ ಬರುವೆ

ಉಲ್ಲಾಸದಿ ಹಿರಿಹಿರಿ ಹಿಗ್ಗಿಸಿದ ಅದೇ ನೆಲ ಬಾಯ್ಬಿರಿದು ಎದೆ ಕೊರೆದಿದೆ
ಬೇರುಗಳ ಮುನಿಸಿಗೆ ಕಾರಣ ಏನಿರಬಹುದೇನೋ ನೋಡಿ ಬರುವೆ

ಆಸೆಯ ಮೇಲೆ ತಣ್ಣೀರು ಎರಚಬೇಡ ವಿಧಿಯೇ ಸುಕ್ಕುಗಟ್ಟಿದ ಜೀವವಿದು
ಕಣ್ಣೀರ ಹನಿ ಹನಿಸಿದರೆ ಹಸಿರು ಮರುಹುಟ್ಟಬಹುದೇನೋ ನೋಡಿ ಬರುವೆ

ಬಾಯ್ಬಿಟ ವಂಸುಧರೆಯ ಕಂಡ ಸೂರ್ಯ ಸಂಭ್ರಮಿಸುತಿಹನು ಒಳಗೊಳಗೆ
ಬೆವರು ಬತ್ತುವ ಮುನ್ನ ಆಸೆ ಚಿಗುರೊಡೆಯಬಹುದೇನೋ ನೋಡಿ ಬರುವೆ

ಕಾಯುವವನೇ ಕೊಲ್ಲಬೇಕೆಂದು ನಿಂತರೆ ಹುಲ್ಲುಕಡ್ಡಿಗೂ ಉಳಿವಿಲ್ಲ ‘ಅಮರ’
ಕುಳಿತು ಮೋಜು ನೋಡುವ ಕೊಲೆಗಾರ ಹೇಗಿದ್ದಾನೇನೋ ನೋಡಿ ಬರುವೆ

********************************

ಅಮರೇಶ ಎಂಕೆ

About The Author

Leave a Reply

You cannot copy content of this page

Scroll to Top