ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

ತೊಗಲಂಗಿ ಸಾಕೆನಗೆ ಬೇಡ ಗತ್ತು ಗೈರತ್ತೆನುವ ರೈತ
ಹಗಲಿರುಳು ಬೆವರಿಳಿಸಿ ದೇಶಕಾಗಿ ಹೊತ್ತು ಕಳೆವ ರೈತ

ಮಣ್ಣಿನೊಳಗಡಗಿರುವ ಚಿನ್ನವದು ಸದಾ ನ್ಯೂನ
ಬಣ್ಣ ಬದಲಿಸದಿರುವ ಹೊನ್ನಂತೆ ಬದುಕುವ ರೈತ

ಕಾಲವೆಂಬುದು ಬೆರಳಿನ ಚಲನೆಗೆ ನಿಲುಕಲೆಂತು ಸಾಧ್ಯ
ರವಿಯುದಯ ಅಸ್ತಮಾನವ ಲೆಕ್ಕಿಸದವ ರೈತ

ಜನಮಾನಸದಲ್ಲಿ ಸದಾ ಕುಣಿದಾಡಲು ಯೋಗ ಬೇಕಲ್ಲ
ಉಸಿರಡಗುವಾಗ ಸರ್ವಮಾನ್ಯನಾಗಿ ಮಿನುಗುವ ರೈತ

ನಿರ್ವಾಣ ಭಾವ ದೇಹದಲ್ಲಿರದೆ ಮನದಲ್ಲಿದ್ದರೆ ಸಾಲದೇನು
ಪರರೇಳಿಗೆಯಷ್ಟೇ ಸಾಕು ಜೊತೆಗಿರುವೆ ತಾನೆನುವ ರೈತ

ಸಜ್ಜನರಿಗಿದು ಕಾಲವಲ್ಲ ಎಂಬ ಭಾವ ಯಾಕೆ ಹೇಳಿ
ಸಿರಿಯನಳೆಯಲು ನಾಣ್ಯವೇಕೆ ಫಸಲು ಸಾಕೆನುವ ರೈತ

ಬೆನ್ನಿಗಿರದಿರೆ ಮೂಳೆ ಶಾರೀರವಿದ್ದರೂ ಶರೀರವೆಲ್ಲಿ ಈಶಾ
ದೇಶದ ಎಲುಬಾಗಿ ಕಿಲುಬಿರದ ಸತ್ಪಾತ್ರದವ ರೈತ

***************************

ಡಾ ಸುರೇಶ ನೆಗಳಗುಳಿ

About The Author

2 thoughts on “”

Leave a Reply

You cannot copy content of this page

Scroll to Top