ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿ ಕಾವ್ಯ ಸುಗ್ಗಿ

ಯಕ್ಷಿಯ ಪ್ರಶ್ನೋತ್ತರ

ಡಾ. ರೇಣುಕಾ ಅರುಣ ಕಠಾರಿ

HD wallpaper: angel, dark, dark angel, evil, demon, female, woman, beauty |  Wallpaper Flare

ಗಂಭೀರವಾಗಿ ಭೀಗುತ್ತಿದ್ದ ಕಾಲವದು
ಮನಸಿನ ಹುಚ್ಚಾಟಕ್ಕೆ ಎಣೆಯೇ ಇರಲಿಲ್ಲ
ಕಾಲದೊಳಗೆಯೆ ಅಡಗಿದ ಜೀವಸಾರದ ಕಡೆಗೆ
ಬವಣೆಯ ಹುಡಕ ಹೊರಟ ಯಕ್ಷಿ ನಾ!

ಮುರುಟಿದ ಕನಸಗಳೆಲ್ಲವೂ ಮೆರವಣಿಗೆಗೆ ಸಿದ್ದವಾಗಿದ್ದು ತಿಳಿಯಲಿಲ್ಲ.
ಎಲ್ಲಾ ಎಲ್ಲೆಯನ್ನು ಮೀರಿ ಹತಾಟೆಯ ಹಿಂದೆ ಸರಿದಿತ್ತು.
ಹಂಸದ ನಡುಗೆ ಕುರ್ಮದ ಆಯಸ್ಸು ಕಣ್ಮಂದೆ ನಿಂತಿತ್ತು..
ಕಡಲಳೊಗಿನ ಲವಣ ಮಾತ್ರ ನೀರಲ್ಲಿಯೇ ತೆಲುತ್ತಿತ್ತು.

ದುಗುಡು ದುಮ್ಮಾನಗಳಿಗೆ ವಿವೇಕ ಹೇಳಿ ಸಾಕಾಗಿತ್ತು
ಅನುಭವ ಅನುಭಾವದತ್ತ ಸಾಗಿದ ಪಯಣ ನಿಲ್ಲುತ್ತಿರಲಿಲ್ಲ
ಬದುಕಿನ ಎಲ್ಲ ಮಗ್ಗಲುಗಳು ಸ್ಮಶಾನದ ಅಂಗಳದಲ್ಲಿ ನಲಿಯುತ್ತಿದ್ದವು.
ಹೇಳದೆ ಹೊರಟ ಯಕ್ಷಿಯ ಯೋಚನೆಗೆ ನಿಲುವು ಸಿಕ್ಕುವುದಾದರು ಹೇಗೆ?

ಬೇವರು, ಮಣ್ಣಿನ ವಾಸನೆಗೆ ಮೆಚ್ಚಿ ಬಂದವರು ಯಾರು ಇಲ್ಲ.
ತೊಟ್ಟು, ಮಾಗಿದ ರೂಪಲಾವಣ್ಯದ ಸಂತೃಪ್ತಿಗೆ ಸೇರೆ ಸಿಕ್ಕವರೇ ಹೆಚ್ಚು.
ಇಳೆಯ ಗರ್ಭದೊಳಗೆ ಸಿಲುಕಿದ ನಾ ಎಂಬುವುದು ಮಾಂiÀiವಾಗಿದೆ
ಹತಾಶೆಯೊಂದಿಗೆ ಅಂಟಿಕೊAಡಿದ್ದ ಒಡನಾಟಕ್ಕೆ ತೆರೆ ಹಾಕುವ ಕಾಲ ಬಂದಾಯಿತು.

ಚರಿತ್ರೆಯ ಪುಟಗಳ ಹಿಂದಿನ ಕಥೆಗೇನು ಉತ್ತರವೂ ಇದೆ, ಬರೆದಿದ್ದು ಇದೆ.
ಆದರೆ ಮುಂದಿನ?
ಪ್ರೀತಿ ಸಂಕೋಲೆಗಳಿAದ ಹೆಣೆದುಕೊಂಡ ಅದೆಷ್ಟೋ ಹೆಣ್ಣು ತಡಕಾಡಿ,
ಬೆಂದ ಕಥೆ ಮೂಲೆಗೆ ಸೇರಿದ್ದು ಇದೆಲ್ಲಾ?
ಈ ಯಕ್ಷಿಯ ಪ್ರಶ್ನೊತ್ತರಗಳಿಗೆ ಉತ್ತರದ ಮಾತೆಲ್ಲಿ,
ಸಿಗದೆ, ಬತ್ತದ ಬದುಕು ಹುಡುಕುತ್ತ,
ಹೊರಟ ನಾ ಯಕ್ಷಿಯಲ್ಲದೇ ಮತ್ತೇನು ??


About The Author

Leave a Reply

You cannot copy content of this page

Scroll to Top