ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಶುಭಲಕ್ಷ್ಮಿ ಆರ್ ನಾಯಕ ಇತರರ ಅಲ್ಲ ಸಲ್ಲದ ನುಡಿಗೆ ನೋಯದಿರು ಗೆಳತಿಪರರು ಆಡುವ ಬಿರುನುಡಿಗಳಿಗೆ ಅಂಜದಿರು ಗೆಳತಿ ನಿನ್ನಾತ್ಮ ಸಾಕ್ಷಿಯದು ನಿಜವನ್ನೇ ನುಡಿಯುವಾಗಕುಹಕಿಗಳ ಕುಹಕಕ್ಕೆ ಮನಕೆಡಿಸಿಕೊಳದಿರು ಗೆಳತಿ ಧರಣಿಯ ಮನುಜರಲ್ಲಿ ಮಾನವೀಯತೆಯ ತುಂಬಲುವ್ಯರ್ಥವಾಗಿ ಎಂದಿಗೂ ನೀನು ಹೆಣಗದಿರು ಗೆಳತಿ ಕೊಡುವ ದಾನ ಧರ್ಮಗಳಲಿ ಪುಣ್ಯವಿದೆ ಎಂದರಿತುಅಪಾತ್ರರಿಗೆ ದಾನ ಧರ್ಮವನು ಮಾಡದಿರು ಗೆಳತಿ ಸಾಂತ್ವನವ ನಯದಿ ಹೇಳುತ ಧೈರ್ಯ ನೀಡುವೆಯೆಂದುಸಂಕುಚಿತಮನದವರಿಗೆ ಉಪದೇಶಿಸದಿರು ಗೆಳತಿ ನಂಬಿಕೆ ವಿಶ್ವಾಸದಲಿ ಧೈರ್ಯ ತುಂಬುವ ಜನರನುನಿನ್ನ ಕಠೋರತೆಯಿಂದ ದೂರ ತಳ್ಳದಿರು ಗೆಳತಿ ಎಲ್ಲರೂ ಎಲ್ಲರ ಒಳಿತನೆ ಬಯಸುತ್ತಿರುವಾಗಜೀವನದಲಿ ಜಂಜಾಟದಿಂದ ಕುಗ್ಗದಿರು ಗೆಳತಿ ಅರಿತು ಬಾಳಿದರೆ ಜಗದಲಿ ಮುಳ್ಳು ಹೂವಾಗುವುದುಸಹನೆಯಿಂದ ಬಾಳ ನೂಕುವುದ ಮರೆಯದಿರು ಗೆಳತಿ ಆತ್ಮಸಾಕ್ಷಿಯಿಂದ ಒಳಿತ ಬಯಸಿದೆ ಶುಭಳ ಮನವುಅರಿಯದೇ ಅದನು ನೀ ಸುಮ್ಮನೆ ರೇಗದಿರು ಗೆಳತಿ ********************************

ಗಜಲ್ Read Post »

ಕಾವ್ಯಯಾನ

ಅಪ್ಪನ ಕೊನೇ ಪತ್ರ.!

ಕವಿತೆ ಅಪ್ಪನ ಕೊನೇ ಪತ್ರ.! ಅಲ್ಲಾಗಿರಿರಾಜ್ ಕನಕಗಿರಿ ಬರುವ ಹೊಸ್ತಿಲು ಹುಣ್ಣಿಮೆಗೆರಕ್ತ ಹೆಪ್ಪುಗಟ್ಟುವ ಚಳಿ ಗಾಳಿ. ಒಂದು ವೇಳೆ ನಾನು ಕೊರೆಯುವ ಚಳಿಗೆಬೀಸುವ ವಿಷ ಗಾಳಿಗೆ ದಿಲ್ಲಿ ಗಡಿಯಲ್ಲಿಹೆಣವಾದರೆ ಯಾರೂ ಹೆದರಬೇಡಿ. ನನ್ನ ಹೆಣಕ್ಕೆ ಗೋರಿ ಕಟ್ಟುವ ಬದಲುಕೊರೆಯುವ ಚಳಿಯಲ್ಲಿ ನನ್ನ ಹೆಣ ಸುಟ್ಟು ಮೈ ಬಿಸಿ ಮಾಡಿಕೊಳ್ಳಿ.ಮುಂದಿನ ದಿನಗಳ ಹೋರಾಟಕ್ಕೆ ಅಣಿಯಾಗಿ. ನನ್ಹೆಣ ಸುಟ್ಟ ಬೂದಿ ಮನೆಗೆ ಬಂದರೆ ನಿನ್ನವ್ವನ ಹಣೆಗೆ ಹಚ್ಚಿ.ಕಣ್ಣೀರು ಬಂದರೆ ಬೆಳೆಗೆ ಹರಿಸಿಬಿಡಿ.ನಾ ಇಲ್ಲವೆಂದು ಒಕ್ಕಲುತನ ಜೊತೆಗೆ ಹೋರಾಟಎಂದೂ ನಿಲ್ಲದಿರಲಿ ಮಗನೆ. ಇದು ನಿನಗೆ ಕೊನೇ ಪತ್ರ…. ಇಂತಿ ನಿನ್ನ ಅಪ್ಪ “ಅನ್ನದಾತ”. ************************************

ಅಪ್ಪನ ಕೊನೇ ಪತ್ರ.! Read Post »

ಇತರೆ

ಮಲೆನಾಡಿಗರ ತುಮುಲ

ಅನಿಸಿಕೆ ಮಲೆನಾಡಿಗರ ತುಮುಲ ಗಣೇಶಭಟ್ ಶಿರಸಿ ಪಶ್ಚಿಮ ಘಟ್ಟಗಳ ಹಾಗೂ ಅಲ್ಲಿನ ಜೀವವೈವಿದ್ಯ ರಕ್ಷಣೆಯ ಉದ್ದೇಶದಿಂದ ೨೦೧೧ರಲ್ಲಿ ಡಾ. ಮಾಧವ ಗಾಡ್ಗೀಲ್ ಸಮಿತಿ ನೀಡಿದ ವರದಿಯನ್ನು ತಿರಸ್ಕರಿಸಿದನಂತರ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವ ಸಮಿತಿ ರಚಿಸಲಾಗಿತ್ತು. ಪಶ್ಚಿಮ ಘಟ್ಟದಲ್ಲಿ ಮಾನವನ ಹಸ್ತಕ್ಷೇಪವನ್ನು ಸೀಮಿತಗೊಳಿಸಬೇಕೆಂದು ಸೂಚಿಸಿರುವ ಎರಡನೇ ವರದಿಯ ಅನುಷ್ಠಾನಕ್ಕೂ ಹಿಂಜರಿಯುತ್ತಿರುವ ಕರ್ನಾಟಕದ ಸರ್ಕಾರ ಹಸಿರು ನ್ಯಾಯಾಲಯದ ಮೆಟ್ತಲೇರುವ ಪ್ರಯತ್ನ ನಡೆಸಿದೆ. ಈ ಎರಡೂ ವರದಿಗಳು ಪರಿಸರ ಪೂರಕ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತವೆಯಾದರೂ, ಡಾ. ಮಾಧವ ಗಾಡ್ಗೀಳ್ ವರದಿ ಹೆಚ್ಚು ಜನಪರವಾಗಿದೆ. ಪ್ರತಿಯೊಂದು ಅಭಿವೃದ್ಧಿ ಯೋಜನೆಯಲ್ಲೂ ಜನರ ಸಹಭಾಗಿತ್ವವನ್ನ ಕಡ್ಡಾಯಗೊಳಿಸಬೇಕೆಂಬ ಗಾಡ್ಗೀಳ ವರದಿ, ಗುತ್ತಿಗೆದಾರರ, ಉದ್ಯಮಿಗಳ, ಅಧಿಕಾರಿಗಳ ರಾಜಕಾರಣಿಗಳ ಕಣ್ಣುರಿಗೆ ಕಾರಣವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಸರ್ಕಾರದ ಖಜಾನೆಯನ್ನು ಲೂಟಿಹೊಡೆಯುತ್ತಿರುವ ಗುಂಪಿಗೆ, ಜನಸಾಮಾನ್ಯರಿಗೆ ಆರ್ಥಿಕ ಅಧಿಕಾರ ಸಿಗುವುದು ಬೇಕಾಗಿಲ್ಲ. ಜನಸಾಮಾನ್ಯರು ಈ ಗುಂಪಿನ ಗುಲಾಮರಾಗಿ ಸದಾ ಇರಬೇಕು, ಸಂಪತ್ತನ್ನು ತಾವು ಕೊಳ್ಳೆಹೊಡೆಯುತ್ತಿರಬೇಕೆಂದು ಬಯಸುವವರು ಈ ವರದಿಯ ಕುರಿತು ಜನರಲ್ಲಿ ಅಪನಂಬಿಕೆ, ಭೀತಿಯನ್ನು ಹುಟ್ಟಿಸುತ್ತಿದ್ದಾರೆ.   ಪರಿಸರ ಪೂರಕ ಅಭಿವೃದ್ಧಿಯ ಪಥದಿಂದಲೇ ಮಾನವ ಸಮಾಜದ ಏಳ್ಗೆ , ಉನ್ನತಿ, ಮತ್ತು ಪ್ರಗತಿಯ ನಿರಂತರತೆ ಸಾಧ್ಯ. ನಿಸರ್ಗ ವಿರೋಧಿ ಚಟುವಟಿಕೆಗಳಿಂದ ಎಷ್ಟೋ ನಾಗರಿಕತೆಗಳು ನಶಿಸಿಹೋಗಿದ್ದನ್ನು ಇತಿಹಾಸ ದಾಖಲಿಸಿದೆ. ಆರ್ಥಿಕ ವಿಕೇಂದ್ರೀಕರಣದತ್ತ ಅಡಿ ಇಡುವ ಗಾಡ್ಗೀಳ ವರದಿಯ ಅನುಷ್ಠಾನ ಉತ್ತಮ ಆಯ್ಕೆ. ಈ ವರದಿಯನ್ನು ಈಗಾಗಲೇ ಮೂಲೆಗುಂಪು ಮಾಡಿರುವದರಿಂದ ಕನಿಷ್ಠ ಪಕ್ಷ ಕಸ್ತೂರಿರಂಗನ್ ವರದಿಯನ್ನಾದರೂ ಅನುಷ್ಠಾನಕ್ಕೆ ತಂದು , ಮಾನವ ಮತ್ತು ಪರಿಸರದ ನಡುವಿನ ಸಂಘರ್ಷಕ್ಕೆ ತಡೆ ಒಡ್ಡಲೇ ಬೇಕು. ಸ್ವಾರ್ಥಿಗಳ ಹುನ್ನಾರಕ್ಕೆ ಒತ್ತು ನೀಡಿದರೆ,  ರಾಜ್ಯದ ಪರಿಸ್ಥಿತಿ ಅದರಲ್ಲೂ ವಿಷೇಶವಾಗಿ ಮಲೆನಾಡ ನಿವಾಸಿಗಳ ಬದುಕು ಅಪಾಯಕ್ಕೆ ಸಿಲುಕುವುದು ನಿಶ್ಚಿತ.     ಪಶ್ಚಿಮ ಘಟ್ಟಗಳ  ಅರಣ್ಯ ಮತ್ತು ಜೀವ ವೈವಿಧ್ಯತೆಯ ನಾಶದಿಂದ ಭಾರತ ಮಾತ್ರವಲ್ಲ ಪಾಶ್ಚ್ಯಾತ್ಯ ರಾಷ್ಟ್ರಗಳೂ ಹವಾಮಾನ ವೈಪರೀತ್ಯ  ಅನುಭವಿಸ ಬೇಕಾಗುತ್ತದೆಂಬುದನ್ನು ಅಧ್ಯಯನಗಳು ದೃಢಪಡಿಸಿವೆ.       ಮಾನವ ಮತ್ತು ಪರಿಸರದ ನಡುವೆ ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿಕೊಡದಂತೆ ಜನರ ಸಹಭಾಗಿತ್ವದೊಂದಿಗೆ ಈ ವರದಿಯನ್ನು ಅನುಷ್ಠಾನ ಮಾಡಲು ಸಾಧ್ಯ; ಸ್ವ ಹಿತಾಸಕ್ತ ಗುಂಪುಗಳ ಹಿಡಿತದಿಂದ ಹೊರಬಂದು ನೇತಾರರು ನಿರ್ಣಯ ತೆಗೆದುಕೊಳ್ಳಬೇಕು ಅಷ್ಟೇ.   ********************************************

ಮಲೆನಾಡಿಗರ ತುಮುಲ Read Post »

ಕಾವ್ಯಯಾನ

ನೀಳ್ಗೆರೆ

ಕವಿತೆ ನೀಳ್ಗೆರೆ ಅಕ್ಷತಾ ರಾಜ್ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ !ನೀನೋ! ಉಸುರುತಿಹುದು ನೀಳ್ಗೆರೆ || ಊರು ಕೇರಿ ಸುತ್ತಿ ಸವೆದ ಪಾದ ತಿರುಗಿ ಸೋಲಲುಅಲ್ಲೇ ಮಂಡಿಯೊಳಗೆ ನಿಂತ ಕಾಲ್ಗಳವು ನಕ್ಕವುಮುಸುಕಿನೊಳಗೆ ಜಟ್ಟಿಗುದ್ದು ಕಂಡವನಾರೋ ಅರಿಯರುಮೊದಲು ಯಾರು ಎಂಬ ಈರ್ಷ್ಯೆ ಸುತ್ತಲಿದ್ದ ಜಗದೊಳು ಹಲವು ಬಣ್ಣ ಇಹುದು ಅಲ್ಲಿ ಕಾಣದಿಹ ಕತ್ತಲುನೂರು ರುಚಿಯು ಸೇರಿ ನಡೆಯುತಿಹುದು ಹಿಮನದಿಬೀಸುಗಾಳಿಯೆಲ್ಲಿ ಒಂಟಿ? ಸುತ್ತಲಿಹರು ಬೇಡರುಆದರೊಂದು ಪ್ರಶ್ನೆಯಿಹುದು ಯಾರು ಮುಂದೆ ನಡೆಯೊಳು ಅರಳಿ ನಿಂತ ಕಿರಣದೆದುರು ‘ನಾನು’ ಮಂಜುಬಿಂದುಕರಗಲೇನೋ! ಉಳಿಯಲೇನೋ! ಪ್ರಶ್ನೆಯಿಹುದೇ ಅಲ್ಲಿ?ನಡೆದು ನಡೆವ ಕಾಲುಹಾದಿ ತಿರುವು ಹಲವು ಇಲ್ಲಿಗೆರೆಯ ದಾಟಿ ನಡೆದರದುವೆ ಮಂದೆ ತೊರೆದ ಹಾದಿ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ ! ನೀನೋ ! ಉಸುರುತಿಹುದು ನೀಳ್ಗೆರೆ || ******************************************

ನೀಳ್ಗೆರೆ Read Post »

ಇತರೆ

ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು

ಲೇಖನ ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು  ಡಾ.ರೇಣುಕಾ. ಅ. ಕಠಾರಿ ಕನ್ನಡ ನಾಡಿನ ಚರಿತ್ರೆಯಲ್ಲಿ ‘ವಚನ ಸಾಹಿತ್ಯ’ ಹೊಸ ಮೈಲುಗಲ್ಲನ್ನೇ ಸೃಷ್ಠಿಸಿತ್ತು. ಕುಟುಂಬದಲ್ಲಿ ಹೆಣ್ಣು ಸ್ವಾತಂತ್ರ್ಯ   ಕಳೆದುಕೊಂಡ ಕಾಲದಲ್ಲಿ ಶರಣ ಪರಂಪರೆಯು ಆಕೆಗೆ ಸ್ಥಾನವನ್ನು ಒದಗಿಸಿಕೊಟ್ಟಿತು. ಈ ಮೊದಲು ಹೆಣ್ಣನ್ನು ಶೂದ್ರ ಸಮಳೆಂಬ ಅಪವಾದವನ್ನು ಹೊತ್ತುಕೊಂಡು ಬದುಕಬೇಕಾಗಬೇಕಿತ್ತು. ಹಾಗೆ ಅವಳನ್ನು  ಅಜ್ಞಾನಿಯನ್ನಾಗಿ ಮಾಡಿದ್ದರು. ಮಹಿಳೆಯರಿಗೆ ಮೋಕ್ಷ ಬೇಕಾದರೆ ಪತಿಯ ಸೇವೆಯ ಮೂಲಕವೇ ಸಾಧ್ಯವೆಂಬ ಕಲ್ಪನೆಯನ್ನು ಬಲವಂತವಾಗಿ ಆಕೆಯ ಮೇಲೆ ಹೊರಿಸುತ್ತಿದ್ದರು. ಈ ಮೊದಲು ನಡೆಯುತ್ತಿದ್ದ ಎಲ್ಲ ಹಿಂಸಾ ಕೃತ್ಯಗಳಿಗೆ ಅಂತ್ಯ ಹಾಕಬೇಕೆಂದೇ ಹನ್ನೆರಡನೆಯ ಶತಮಾನವು ಹೊಸ ಕ್ರಾಂತಿಯ ರೂಪವನ್ನು ತಾಳಿತು. ಆ ಸಂದರ್ಭದಲ್ಲಿ ಹಲವಾರು ಮಹಿಳಾ ವಚನಕಾರ್ತಿಯರು ತಮ್ಮ ಜೀವನದಲ್ಲಿ ಕಂಡಿರುವ ಎಲ್ಲ ಸುಖ-ದು:ಖಗಳನ್ನು, ನೋವು-ನಲಿವುಗಳನ್ನು ಹೀಗೆ ಮೊದಲಾದುವುಗಳ ಕುರಿತು ವಚನಗಳನ್ನು ರಚಿಸುವುದರ ಮೂಲಕ ತಮ್ಮ ತಮ್ಮ ಆತ್ಮ ನಿವೇದನೆಯನ್ನು ಮಾಡಿಕೊಳ್ಳಲು ಹೊಸ ಮಾರ್ಗದ ಸೃಷ್ಠಿ ಆಗತೊಡಗಿತು. ಅಕ್ಷರವನ್ನು ಕಲಿಯದ ಅದೆಷ್ಟೋ ಮಹಿಳೆಯರು ಅಕ್ಷರ ಜ್ಞಾನದೊಂದಿಗೆ ಸಾಹಿತ್ಯ ಸೃಷ್ಠಿಯಲ್ಲಿ ಮುಂದಾದರು. ಚಿಂತನ ಮಂಥನಗಳೊಂದಿಗೆ ಪರಸ್ಪರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳವಂತಹ ಕಾಲ ನಿರ್ಮಾಣವಾಯಿತು. ಹೀಗೆ ಮಹಿಳೆಯರು ತಮ್ಮತನವನ್ನು ಅರಿತುಕೊಳ್ಳಲು ಆತ್ಮಾವಲೋಕನ ಮಾಡಿಕೊಂಡರು.  ಶರಣರ ದಾಂಪತ್ಯ ಒಂದು ಪರಂಪರೆಯ ಧರ್ಮವನ್ನೆ ಸೃಷ್ಟಿಸಿದೆ. ಬದುಕಿನಲ್ಲಿ ಶಾಂತಿ ನೆಮ್ಮದಿ ಸುಖ-ದು:ಖಗಳನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವಂತಹ ಧ್ಯಾನ ಮಾರ್ಗದ ಜೊತೆಗೆ ಆಧ್ಯಾತ್ಮದ ಕೊಂಡಿಯನ್ನು ಅನುಸರಿಸಿದರು. ಲೌಕಿಕ ಬದುಕನ್ನು ಸಂಪನ್ನಗೊಳಿಸಿಕೊಳ್ಳುವುದು ಮತ್ತು ಅದರ ಜೊತೆಗೆ ಪರಮಾರ್ಥ ಸಾಧನೆಯ ಗುರಿ ಶರಣರದಾಗಿತ್ತು. ಇದಕ್ಕೆ ಅನುಗುಣವಾಗಿ ಸಾಕಷ್ಟು ಶರಣೆಯರು ಸತಿಪತಿ ಭಾವವನ್ನು ಪಡೆದರು. ಅನುಭವಿಸಿದ ಜೀವನದ ಸಾರವನ್ನು ಕಂಡುಕೊಂಡು, ಮಲ್ಲಿಕಾರ್ಜುನನ್ನೇ ಹುಡುಕುತ್ತ ನಿರತಳಾಗಿಯೇ ಆಧ್ಯಾತ್ಮದ ಸಾಧನೆಯನ್ನು ಕಂಡುಕೊಂಡವಳು ಅಕ್ಕಮಹಾದೇವಿ. ಅಂತೆಯೇ ಆತ್ಮ ನಿವೇದನೆಯೆನ್ನುವುದು ಎರಡು ಹೃದಯಗಳ ಅನ್ಯೋನ್ಯ ಮಿಲನವಾಗಿ ಶಿವಪಥದಲ್ಲಿ ನಡೆದು ದೇವನ ಪಾದವನ್ನು ಸೇರಲು ಸಹಾಯಕವಾಗುವ ಒಂದು ಅವಕಾಶವೆಂದು ನಂಬಿಕೊಂಡಿದ್ದರು. ಆಕೆಯ ಬದುಕಿನ ಚಿತ್ರಣದ ಎಲ್ಲ ನೆಲೆಗಳು ಅವಳ ವಚನಗಳಲ್ಲಿ ಕಾಣುತ್ತೇವೆ. ಅಕ್ಕನ ಒಂದೊಂದು ವಚನಗಳು ಒಂದೊಂದು ಕಥೆಯನ್ನು ಹೇಳುತ್ತವೆ ಹಾಗೇ ಆತ್ಮದ ಪರಿಶೋಧವೂ ಇದೆ. ಇಡೀ ಜೀವನದುದ್ದಕ್ಕೂ ಚೆನ್ನನನ್ನು ನೆನೆಯುತ್ತಲೆ ತನ್ನೊಡಲದ ವೇದನೆಯನ್ನು ಅನುಸಂಧಾನಿಸಿಕೊಳ್ಳಲು ಪ್ರಯತ್ದಿಸಿದ ಮಹಾ ಶರಣೆ. “ಉರಕ್ಕೆ ಜವ್ವನಗಳು ಬಾರದ ಮುನ್ನ ಮನಕ್ಕೆ ನಾಚಿಕೆಗಳು ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ ಹೆಂಗೂಸೆಂಬ ಭಾವ ತೋರುವ ಮುನ್ನ ನಮ್ಮವರಂದೆ ಮದುವೆಯ ಮಾಡಿದರು”            (ಅಕ್ಕನ ವಚನಗಳು: ಸಂ.ಡಾ.ಸಾ.ಶಿ. ಮರುಳಯ್ಯ- ೧೯೯೩. ಬೆಂಗಳೂರು ಪು.ಸಂ೧೫)             ಅಕ್ಕನಲ್ಲಿ ಅಂತರಂಗದ ತೊಳಲಾಟವಿದೆ. ಆಕೆಯ ಭಾವದ ಜೊತೆಗೆ ಆಕೆ ಹಾಕಿಕೊಂಡಿರುವ ನೂರಾರು ಆಸೆ ಆಕಾಂಕ್ಷೆಗಳನ್ನು ಬಹಿರಂಗವಾಗಿ ಇಡಲು ಬಯಸುವ ಸಾಲುಗಳು ಎದ್ದು ಕಾಣುತ್ತವೆ. ಜಾಗತೀಕರಣದ ತುದಿಯನ್ನು ದಾಟಿ ನಿಲ್ಲುತ್ತಿರುವ ನಾವುಗಳು ಆತ್ಮದ ಶೋಧದಲ್ಲಿ ತೊಡಗುವುದು ಅನಿವಾರ‍್ಯವೆನಿಸುತ್ತದೆ. ತಾನು ಮನದಲ್ಲಿ ಬಯಸಿದ ಆ ಚೆನ್ನನ ಹೆಸರು ಹೇಳುವ ಮೊದಲೆ, ಹಿರಿಯರು ಮಾಡಿದ ಮದುವೆಗೆ ಅರ್ಥವಿದೆಯಾ? ಎಂದು ವ್ಯಂಗ್ಯವಾಗಿ ಹೇಳುವ ನುಡಿ ಇವತ್ತಿಗೂ ಜೀವಂತವಾಗಿದೆ. ಅಕ್ಕನ ಈ ವಚನದಲ್ಲಿ ಹೇಳಿದ ಎಲ್ಲ ಶಬ್ಧಗಳ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಸತ್ಯದ ಕೊಂಡಿ ಒಂದೊಂದೇ ಧ್ವನಿಗಳನ್ನು ಧ್ವನಿಸಿ ಎದ್ದು ನಿಲ್ಲುತ್ತವೆ. ಆನಾದಿ ಕಾಲದಿಂದಲೂ ಹೆಣ್ಣು ಎನ್ನುವ ಕಾರಣಕ್ಕೆ ಒಪ್ಪಿಗೆ ಇಲ್ಲದಿದ್ದರೂ ಮದುವೆಯೆಂಬ ಹೊಸ ಹಣೆ ಬರಹವನ್ನು ಕಟ್ಟುತ್ತಿದ್ದರು. ಇದು ಶೋಷಣೆಯ ರೂಪವೆಂದು ಭಾವಿಸುವಲ್ಲಿ ಯಾವುದೆ ತಪ್ಪಿಲ್ಲವೆಂದು ಅನಿಸುತ್ತದೆ. ಹಾಗೇ ಅಕ್ಕ ಪ್ರಶ್ನಿಸುವ ಮಾತು ಬಂಡಾಯದ ಹೊಸರೂಪವೇ ಹೊರತು ಬೇರೇನಲ್ಲ? “ಚೆನ್ನ ಮಲ್ಲಿಕಾರ್ಜುನಯ್ಯ ನೀನಿಲ್ಲದನ್ಯರ ಮುಖವ ನೋಂಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ”                  (ಅಕ್ಕನ ವಚನಗಳು, ದ್ವಿ ಸಂಸ್ಕರಣ ಸಂ.ಎಲ್. ಬಸವರಾಜು.೧೯೭೨,ಮೈಸೂರು)             ಹೆಣ್ಣು ತನ್ನತನದ ಹಿಂದೆಯೇ ಸಾಗುವುದು ಆಕೆ ಕಟ್ಟಿಕೊಂಡ ಒಂದು ಬೇಲಿ ಅಷ್ಟೇ. ಆದರೆ ಅದರಾಚೆಗೂ ಆಕೆಯ ಬೇಕು ಬೇಡಿಕೆಗಳನ್ನು ಮನದಾಳದಂತೆ ಪೂರೈಸಿಕೊಳ್ಳಲು ಅಸಾಧ್ಯವೆಂದು ಭಾವಿಸಬೇಕು? ಪರಸ್ಪರವಾಗಿ ಇರುವ ಬದುಕೇ ಭಿನ್ನ. ಮುಖಾಮುಖಿಯಾಗಿಸದೇ ಮತ್ತು ಬೇರೆ ಎಲ್ಲಿಯೋ ಇರುವ ಚಹರೆಯನ್ನು ಅನುಸಂಧಾನ ಮಾಡಿಕೊಳ್ಳಲು ಸಾಧ್ಯವೇ? ಎಂಬ ವಿಚಾರವಂತಿಕೆಗಳು ಬಹು ಸವಾಲನ್ನು ಎತ್ತುತ್ತವೆ. ಅಕ್ಕನ ತುಡಿತಗಳು ವೇದನೆಯಾಗಿ ಅಲಿದಾಡುವ ಬಗೆ ಬಹು ತನ್ಮಯತೆಯನ್ನು ಉಂಟು ಮಾಡುತ್ತದೆ. ಅಂದರೆ, ‘ಚೆನ್ನ ಮಲ್ಲಿಕಾರ್ಜುನೆನಗೆ ಕಟ್ಟದ ಕಟ್ಟಳೆಯ ನನ್ನಿಂದ ನಾನೆ ಅನುಭವಿಸಿ ಕಳೆವನು’. ಎಂದು ಅರುಹುವ ಮಾತು ಇಂದಿಗೂ ಜೀವಂತವಾಗಿ ನಮ್ಮನ್ನು ಪ್ರಶ್ನಿಸುತ್ತದೆ. ಇದೇ ನಾವು ಆತ್ಮಾವಲೋಕವೆಂದು ಕರೆಯುವುದು. ಹುಡುಕಾಟದ ಆಕೆಯ ತಲ್ಲಣಗಳು ಒಂದೊಂದೆ ಅಲೆಯಾಗಿ ಅಪ್ಪಳಿಸುವ ಒಡಲ ದಂಡೆಗೆ ಆತ್ಮದ ಸಾಕ್ಷಾತ್ಕಾರದ ಅವತಾರವಾಗಿದೆಂದು ಅರ್ಥವಾಗುವುದು. “ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದ ಬಳಿಕ ಕಾಯದ ಸುಖವ ನಾನೇನೆಂದರಿಯನು ಆರು ಸೋಂಕಿದರೆಂದರಿಯೆನು ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚ(ಪ್ಪಿ)ತವಾದ ಒಳಿಕ ಹೌರಗೇನಾಯಿತೆಂದರಿಯೆನು” (ಪು.ಸA ೨೩ ವಚನ ಸಂ ೭೬-ಅಕ್ಕನ ವಚನಗಳು: ದ್ವಿ ಸಂಸ್ಕರಣ ಸಂ.ಎಲ್.ಬಸವರಾಜು ೧೯೭೨, ಮೈಸೂರು) ಹೆಣ್ಣು ತನ್ನೊಳಗೆಯೇ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡಿದ್ದಾಳೆ.  ಹಾಗೆ ಅಕ್ಕನ ಮನದ ಪ್ರಪಂಚದಲ್ಲಿ ಆ ಚೆನ್ನನ್ನು ಕಾಣುವ ಹಂಬಲ ಹೆಣ್ತತನದ ಒಂದು ರೂಪ ಅಷ್ಟೇ ಎಂದು ತಿಳಿಯುತ್ತದೆ. ಇದು ಸರ್ವಕಾಲಕ್ಕೂ ಸತ್ಯವೆ ಆಗಿರುತ್ತದೆ. ನೀನೆ ನನ್ನ ಪ್ರಾಣವೆಂದ ಮೇಲೆ ಎಲ್ಲವೂ ನೀನೆ ಇದರಲ್ಲಿ ಸಂಶಯವೇ? ಪಾರಮಾರ್ಥಿಕದ ಸುಖವೇ ಬೇಡವೆಂದು ತನುವಿನಲ್ಲಿ ಇರುವ ನಿನ್ನ ಇರುವಿಕೆಯ ಕಾಯಕವೊಂದೆ ಸಾಕು ಎಂದು ಹೆಣ್ಣು ತನ್ನ ನಿವೇದನೆಗಳನ್ನು ಒಗ್ಗೂಡಿಸುವ ಪರಿ ಅಕ್ಕನಲ್ಲಿ ಅನನ್ಯವಾಗಿದೆ.. ಬೇರೆಯವರ ಮಾತುಗಳ ನಿಂದನೆಯೂ ಬಂದರೂ ಬಿರುಗಾಳಿಗೆ ಅಣುರೇಣುವಿನಂತೆ ಮಾಯವಾಗುವೆಂಬ ಅಕ್ಕನ ಮನದ ಒಪ್ಪತ ನಿಲುವು ಸಾಟಿಯಾಗಿದೆ. “ಹಸಿವಾದಡೆ ಊರೊಳಗೆ ಬಿಕ್ಷಾನ್ನಗಳುಂಟು  ತೃಷೆಯಾದಡೆ ಕೆರೆ ಹಳ್ಳ ಭಾವಿಗಳುಂಟು  ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು  ಶಯನಕ್ಕೆ ಹಾಳು ದೇಗುಲಗಳುಂಟು  ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು” (ಶಿವಶರಣೆಯರ ವಚನ ಸಂಪುಟ. ಸಂ.ಡಾ. ವೀರಣ್ಣ ರಾಜೂರ ೧೯೯೩. ಬೆಂಗಳೂರು ಪು.ಸಂ. ೧೦೪. ಪು. ೩೩೬)  ಸಹಜವಾಗಿ ಜೀವವನ್ನು ಉಳಿಸಿಕೊಳ್ಳಲು ಮತ್ತು ಬದುಕು ನಡೆಸಲು ಕೆಲವು ಸಕ್ರಿಯೆಗಳ ಅಥವಾ ಆಹಾರ ಪದಾರ್ಥಗಳು ಚಿಕ್ಕ ಗುಡಿಸಲು ಅವಶ್ಯಕವಿರುತ್ತದೆ. ಅವುಗಳನ್ನು ಪಡೆದುಕೊಂಡ ಮೇಲೆ ಮನವೆಂಬ ಶುದ್ಧಿಗೆ ಆತ್ಮದ ಅವಲೋಕನ ಹೊಳೆಯಬೇಕು. ಆಗ ಮಾತ್ರ ಆತ್ಮದ ಸಂಗಾತಿಯ ಪೂರ್ಣತೆ ಇರುವಿಕೆ ಆಗುತ್ತದೆ. ಅಕ್ಕಳ ಚೆನ್ನನೊಂದಿಗೆ ಮಾಡಿಕೊಂಡಿರುವ ಸಂಧಾನದ ಅರಿವು ಇಂದು ನೂತನ. “ಅಕ್ಕನ ವಚನಗಳು ಅವಳ ಆತ್ಮಚರಿತೆಯ ಮತ್ತು ವ್ಯಕ್ತಿತ್ವದ ಜೀವಂತ ಮತ್ತು ಜ್ವಲಂತ ದಾಖಲೆಗಳಾಗಿವೆ’’ ಎಂದು ಡಾ.ರಂ.ಶ್ರೀ ಮುಗಳಿರವರು ಹೇಳಿರುವ ಹೇಳಿಕೆ ಸತ್ಯವೆನಿಸುವುದು. ಆತ್ಮವಂಚನೆ ಇಲ್ಲದೆ ಅಕ್ಕನ ವಚನಗಳು ಆತ್ಮ ಶೋಧನೆಯ ಪ್ರಕ್ರಿಯೆಯಲ್ಲಿ ಮೂಡಿಬಂದಿದೆ. ಹಾಗೇ ಚೆನ್ನನೊಂದಿಗೆ ಅಕ್ಕ ಅತ್ಮವಲೋಕನ ಮಾಡಿಕೊಂಡ ಪರಿ ಅನನ್ಯವಾದುದು. ಅಕ್ಕಳ ಈ ನಿವೇದನೆಯು ಪರಂಪರೆಯಲ್ಲಿ ಒಂದು ಗಟ್ಟಿ ನೆಲೆಯನ್ನು ಸ್ಥಾಪಿಸಿದ್ದು ವಿಶೇಷ. ಹೆಣ್ಣಿನ ಆತ್ಮ ನಿವೇದನೆಗೆ ಮುಕ್ತ ಸ್ವಾತಂತ್ರ್ಯವಿದ್ದಿಲ್ಲಾ? ಎನ್ನುವ ಅನುಮಾನದ ಬೆಂಕಿ ಇದೀಗ ಬೂದಿಯಾಗಿದೆ. ಸ್ವಾತಂತ್ರ್ಯ ವಿಲ್ಲದ ಕಾಲದಲ್ಲಿ ಅಕ್ಕಳು ತನ್ನ ವಿಚಾರದ ಕಹಿ-ಸಿಹಿ ನೆನಪುಗಳನ್ನು ಆತ್ಮದೊಳಗೆ ಅಡಗಿಸಿ ಅವುಗಳನ್ನು ವಿಹರಿಸಲು ರೂಪಕದ ಮೂಲಕ ಕ್ರಿಯೆ ನಡೆಸಿದಳು. ಆ ಕಾರಣಕ್ಕೆ ಅಕ್ಕಮಹಾದೇವಿಯ ಆತ್ಮ ನಿವೇದನೆಗಳ ಹೊಳಪು ಇವತ್ತು ಪ್ರಜ್ವಲಿಸುತ್ತಿವೆ. ಹೆಣ್ಣು ಏಕಕಾಲದಲ್ಲಿ ಮಾಯೆಯಾಗಿ, ಸಂಪತ್ತಾಗಿ, ಸಖಿ ಮತ್ತು ಸತಿಯಾಗಿ ಜೊತೆ ಜೊತೆಗೆ ಹಾಕುವ ಹೆಜ್ಜೆಗಳು ಸವಾಲಾಗಿರುತ್ತವೆ. ******************************************************

ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು Read Post »

ಇತರೆ

ಚಿಟ್ಟೆ

ಲೇಖನ ಚಿಟ್ಟೆ ಆಶಾ ಸಿದ್ದಲಿಂಗಯ್ಯ ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ ಗೆ ಸೇರಿದ ಕೀಟ. ಇದು ಹೆಸ್ಪರಾಯ್ಡಿಯಾ (the skippers) ಹಾಗೂ ಪೆಪಿಲಿಯನಾಯ್ಡಿಯಾ (ಉಳಿದೆಲ್ಲ ಚಿಟ್ಟೆಗಳ) ಜಾತಿಗಳಿಗೆ ಸೇರಿದ್ದು ಹಲವು ಬಣ್ಣಗಳು ಹಾಗೂ ವಿವಿಧ ಆಕಾರಗಳಲ್ಲಿ ಕಾಣಸಿಗುತ್ತವೆ. ಕಾಯ್ರ್ನ್ಸ್ ಬರ್ಡ್ವಿಂಗ್ ಎನ್ನುವುದು ಆಸ್ಟ್ರೇಲಿಯಾದಲ್ಲಿನ ಅತಿ ದೊಡ್ಡ ಚಿಟ್ಟೆ ಚಿಟ್ಟೆಗಳ ಮೇಲೆ ಅಧ್ಯಯನ ನಡೆಸುವವರನ್ನು ಆಂಗ್ಲ ಭಾಷೆಯಲ್ಲಿ ‘ಲೆಪಿಡಾಪ್ಟರಿಸ್ಟ್’ಗಳೆಂದು ಕರೆಯುತ್ತಾರೆ. ಚಿಟ್ಟೆಗಳ ವೀಕ್ಷಣೆ ಜನರಲ್ಲಿ ಒಂದು ಹವ್ಯಾಸವಾಗಿ ಬೆಳೆದಿದೆ. ಜೀವನ ಚಕ್ರ ಒಂದು ಜೀವನ ಚಕ್ರವು ಜೀವಂತ ಜೀವಿಯು ತನ್ನ ಜೀವಿತಾವಧಿಯಲ್ಲಿ ಆರಂಭದಿಂದ ಕೊನೆಯವರೆಗೆ ಹಾದುಹೋಗುವ ಹಂತಗಳಿಂದ ಮಾಡಲ್ಪಟ್ಟಿದೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಸಂಪೂರ್ಣ ಮೆಟಾಮಾರ್ಫಾಸಿಸ್ ಎಂಬ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರ ಅರ್ಥ, ಚಿಟ್ಟೆ ಅದರ ಆರಂಭಿಕ ಲಾರ್ವಾ ಹಂತದಿಂದ ಸಂಪೂರ್ಣವಾಗಿ ಕ್ಯಾಟರ್ಪಿಲ್ಲರ್ ಆಗಿದ್ದರೆ, ಅಂತಿಮ ಹಂತದವರೆಗೆ ಅದು ಸುಂದರವಾದ ಮತ್ತು ಆಕರ್ಷಕವಾದ ವಯಸ್ಕ ಚಿಟ್ಟೆ ಆಗುತ್ತದೆ. ಚಿಟ್ಟೆಯು ರೂಪ ತಾಳುವ ಮುನ್ನ ಕಂಬಳಿಹುಳುವಾಗಿರುತ್ತದೆ. ಅದರ ಆಹಾರ ಮ್ಯಾಣ ಮಲ್ಲಿಗೆ ಗಿಡ.  ಗಿಡದ  ಎಲೆಯ ತುಂಬೆಲ್ಲಾ ಸುಮಾರು ಗಾಢ ಕೆಂಪು ವರ್ಣದ, ಹಸಿರು ಬಣ್ಣದ ತಲೆ, ಉಳಿದ ಭಾಗದಲ್ಲಿ ಸಣ್ಣ ಸಣ್ಣ ಮುಳ್ಳಿನಂತಹ ಮೃದು ಕವಲುಗಳಿರುವ  ಕಂಬಳಿಹುಳುಗಳು ಹರಿದಾಡುತ್ತಾ ಎಲೆಯನ್ನು ಭಕಾಸುರನಂತೆ ಮುಕ್ಕುತ್ತವೆ. ಹಾಗೆ ಎಲೆಗಳನ್ನು ತಿನ್ನುತ್ತಾ, ತಿನ್ನುತ್ತಾ ಬೆಳೆಯತೊಡಗುತ್ತವೆ. ಚಿಟ್ಟೆ ಜೀವನ ಚಕ್ರವು ನಾಲ್ಕು ಹಂತಗಳನ್ನು ಹೊಂದಿದೆ: ಮೊಟ್ಟೆ, ಲಾರ್ವಾ, ಪೊರೆ ಮತ್ತು ವಯಸ್ಕ. ಮೊಟ್ಟೆಯಿಂದ ಹೊರಬರುವ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಜೀವನ ಚಕ್ರದಲ್ಲಿ ಎರಡನೇ ಹಂತವಾಗಿದೆ. ಮರಿಹುಳುಗಳು ಸಾಮಾನ್ಯವಾಗಿ, ಹಲವಾರು ಜೋಡಿ ಸುಳ್ಳು ಕಾಲುಗಳು ಅಥವಾ ಪ್ರೊಲೆಗ್ಗಳೊಂದಿಗೆ ಹಲವಾರು ಜೋಡಿ ಕಾಲುಗಳನ್ನು ಹೊಂದಿರುತ್ತವೆ. ಒಂದು ಕ್ಯಾಟರ್ಪಿಲ್ಲರ್ ಪ್ರಾಥಮಿಕ ಚಟುವಟಿಕೆ ತಿನ್ನುವುದು. ಅವು ಹೊಟ್ಟೆಬಾಕತನದ ಹಸಿವನ್ನು ಹೊಂದಿದ್ದಾವೆ ಮತ್ತು ನಿರಂತರವಾಗಿ ತಿನ್ನುತ್ತವೆ.  ಕ್ಯಾಟರ್ಪಿಲ್ಲರ್ ತಿನ್ನುವುದರಿಂದ, ಅದರ ದೇಹವು ಗಣನೀಯವಾಗಿ ಬೆಳೆಯುತ್ತದೆ. ಕಠಿಣ ಹೊರ ಚರ್ಮ ಅಥವಾ ಎಕ್ಸೋಸ್ಕೆಲೆಟನ್, ಆದಾಗ್ಯೂ, ವಿಸ್ತರಿಸಲಾಗದ ಕ್ಯಾಟರ್ಪಿಲ್ಲರ್ ಜೊತೆಗೆ ಬೆಳೆಯುವುದಿಲ್ಲ ಅಥವಾ ವಿಸ್ತರಿಸುವುದಿಲ್ಲ. ಬದಲಾಗಿ, ಹಳೆಯ ಎಕ್ಸೋಸ್ಕೆಲೆಟನ್ನು ಮೊಲ್ಟಿಂಗ್ ಎನ್ನುವ ಪ್ರಕ್ರಿಯೆಯಲ್ಲಿ ಚೆಲ್ಲುತ್ತದೆ ಮತ್ತು ಅದನ್ನು ಹೊಸ, ದೊಡ್ಡದಾದ ಎಕ್ಸೋಸ್ಕೆಲೆಟನ್ ಬದಲಿಸಲಾಗುತ್ತದೆ. ಒಂದು ಮರಿಹುಳುವು ನಾಲ್ಕರಿಂದ ಐದು ಮೊಳಕೆಗಳಷ್ಟು ಹಾದುಹೋಗುವುದಕ್ಕೆ ಮುಂಚೆಯೇ ಹೋಗಬಹುದು. ಚಿಟ್ಟೆಯ ಜೀವನಚಕ್ರದ ನಾಲ್ಕನೇ ಮತ್ತು ಅಂತಿಮ ಹಂತವು ವಯಸ್ಕವಾಗಿದೆ. ಚಿಟ್ಟೆ ಹೊರಹೊಮ್ಮುತ್ತದೆ. ಇದು ಅಂತಿಮವಾಗಿ ಪುನಃ ಚಕ್ರವನ್ನು ಪ್ರಾರಂಭಿಸಲು ಮೊಟ್ಟೆಗಳನ್ನು ಇಡುತ್ತವೆ. ಹೆಚ್ಚಿನ ವಯಸ್ಕ ಚಿಟ್ಟೆಗಳು ಕೇವಲ ಒಂದು ವಾರ ಅಥವಾ ಎರಡು ದಿನಗಳಲ್ಲಿ ಬದುಕುತ್ತವೆ, ಕೆಲವು ಜಾತಿಗಳು 18 ತಿಂಗಳುಗಳವರೆಗೆ ಬದುಕಬಹುದು. ಬಟರ್ಫ್ಲೈ ಚಟುವಟಿಕೆಗಳು ಚಿಟ್ಟೆಗಳು ಸಂಕೀರ್ಣ ಜೀವಿಗಳಾಗಿವೆ. ಅವುಗಳ ದಿನನಿತ್ಯದ ಜೀವನವನ್ನು ಅನೇಕ ಚಟುವಟಿಕೆಗಳಿಂದ ನಿರೂಪಿಸಬಹುದು. ನೀವು ಅನುಸರಿಸುವವರಾಗಿದ್ದರೆ  ಅನೇಕ ಚಟುವಟಿಕೆಗಳಲ್ಲಿ ಚಿಟ್ಟೆಗಳು ಕಾಣಿಸಿಕೊಳ್ಳುತ್ತವೆ. ಹೂವಿಂದ ಹೂವಿಗೆ ಹಾರುವ ಮಕರಂದವನ್ನು ಹೀರುವ  ಚಿಟ್ಟೆಯನ್ನು ಗಮನಿಸಬಹುದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಕರ್ಷಸಿಸುವ ಚಿಟ್ಟೆಗಳು ಅಲ್ಪಯುಷ್ಯ ಹೊಂದಿದ್ದರೂ ಹಾರಡುತ್ತ ಖುಷಿಯಾಗಿ ಜೀವನ ಕಳೆಯುತ್ತಾ, ಸದಾ ಕೊರಗುವ ಮನುಷ್ಯರಿಗೆ ಜೀವನ ಪಾಠವು ಸಹ ಹೌದು ಚಿಟ್ಟೆಯ ಆಹಾರ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಹಂತ ಮತ್ತು ವಯಸ್ಕ ಚಿಟ್ಟೆಗಳು ವಿಭಿನ್ನ ಆಹಾರದ ಆದ್ಯತೆಗಳನ್ನು ಹೊಂದಿವೆ, ಅವುಗಳ ಬಾಯಿಯ ಭಾಗಗಳಲ್ಲಿನ ವ್ಯತ್ಯಾಸಗಳಿಂದಾಗಿ. ಮರಿಹುಳುಗಳು ತಿನ್ನುವುದರ ಬಗ್ಗೆ ಬಹಳ ನಿರ್ದಿಷ್ಟವಾಗಿರುತ್ತವೆ, ಅದಕ್ಕಾಗಿಯೇ ಸ್ತ್ರೀ ಚಿಟ್ಟೆ ಕೆಲವು ಸಸ್ಯಗಳಲ್ಲಿ ಮಾತ್ರ ತನ್ನ ಮೊಟ್ಟೆಗಳನ್ನು ಇಡುತ್ತದೆ. ಆಕೆಯ ಮೊಟ್ಟೆಗಳಿಂದ ಹೊರಬರುವ ಹಸಿದ ಮರಿಹುಳುಗಳಿಗೆ ಸೂಕ್ತವಾದ ಆಹಾರವಾಗಿ ಸಸ್ಯಗಳು ಯಾವವುಗಳನ್ನು ಸೇವಿಸುತ್ತವೆ ಎಂದು ಅವು ಸಹಜವಾಗಿ ತಿಳಿದಿರುತ್ತವೆ. ಮರಿಹುಳುಗಳು ಹೆಚ್ಚು ಚಲಿಸುವುದಿಲ್ಲ ಮತ್ತು ತಮ್ಮ ಇಡೀ ಜೀವನವನ್ನು ಒಂದೇ ಸಸ್ಯದಲ್ಲಿ ಅಥವಾ ಅದೇ ಎಲೆಗಳಲ್ಲಿ ಕಳೆಯಬಹುದು! ತಮ್ಮ ಪ್ರಾಥಮಿಕ ಗುರಿ ಅವು ಎಷ್ಟು ಸಾಧ್ಯವೋ ಅಷ್ಟು ತಿನ್ನಲು ಅವುಗಳ pupate ಸಾಕಷ್ಟು ದೊಡ್ಡದಾಗಿದೆ. ಮರಿಹುಳುಗಳು ಎದೆಹಾಲು ಎಂದು ಕರೆಯಲ್ಪಡುವ ಬಾಯಿ ಭಾಗಗಳನ್ನು ತಿನ್ನುತ್ತವೆ, ಅವುಗಳು ಎಲೆಗಳು ಮತ್ತು ಇತರ ಸಸ್ಯ ಭಾಗಗಳನ್ನು ತಿನ್ನಲು ನೆರವಾಗುತ್ತವೆ. ಬೆಳೆಗಳಿಗೆ ಹಾನಿ ಮಾಡಿರುವುದರಿಂದ ಕೆಲವು ಮರಿಹುಳುಗಳನ್ನು ಕೀಟಗಳೆಂದು ಪರಿಗಣಿಸಲಾಗುತ್ತದೆ. ಮರಿಹುಳುಗಳು ಹೆಚ್ಚುವರಿ ನೀರನ್ನು ಕುಡಿಯುವ ಅಗತ್ಯವಿಲ್ಲ ಏಕೆಂದರೆ ಅವು ತಿನ್ನುವ ಸಸ್ಯಗಳಿಂದ ಬೇಕಾಗಿರುವ ನೀರನ್ನು ಪಡೆಯುತ್ತವೆ.  ಚಿಟ್ಟೆಗಳು ಸುತ್ತಲೂ ಸುತ್ತುತ್ತವೆ ಮತ್ತು ಹೆಚ್ಚು ವಿಶಾಲ ಪ್ರದೇಶದ ಮೇಲೆ ಸೂಕ್ತವಾದ ಆಹಾರವನ್ನು ಹುಡುಕುತ್ತವೆ..  ಹೆಚ್ಚಿನ ಸಂದರ್ಭಗಳಲ್ಲಿ, ವಯಸ್ಕ ಚಿಟ್ಟೆಗಳು ವಿವಿಧ ದ್ರವಗಳ ಮೇಲೆ ಮಾತ್ರ ಆಹಾರವನ್ನು ನೀಡುತ್ತವೆ. ಅವು ಪ್ರೋಬೊಸಿಸ್ ಎಂಬ ಟ್ಯೂಬ್ ತರಹದ ನಾಲಿಗೆ ಮೂಲಕ ಕುಡಿಯುತ್ತವೆ. ಇದು ಸಪ್ ದ್ರವ ಆಹಾರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ, ಮತ್ತು ನಂತರ ಚಿಟ್ಟೆ ಆಹಾರವನ್ನು ನೀಡುತ್ತಿರುವಾಗ ಮತ್ತೆ ಸುರುಳಿಯಾಗುತ್ತದೆ. ಹೆಚ್ಚಿನ ಚಿಟ್ಟೆಗಳು ಹೂವಿನ ಮಕರಂದವನ್ನು ಬಯಸುತ್ತವೆ, ಆದರೆ ಇತರವುಗಳು ಮರಗಳನ್ನು ಕೊಳೆಯುವಲ್ಲಿ ಮತ್ತು ಪ್ರಾಣಿ ಸಗಣಿಗಳಲ್ಲಿ, ಕೊಳೆಯುತ್ತಿರುವ ಹಣ್ಣುಗಳಲ್ಲಿ ಕಂಡುಬರುವ ದ್ರವಗಳ ಮೇಲೆ ಆಹಾರವನ್ನು ನೀಡುತ್ತವೆ. ಬಿಸಿಲು ಪ್ರದೇಶಗಳು ಮತ್ತು ಗಾಳಿಯಿಂದ ರಕ್ಷಿಸಲು ಬಯಸುತ್ತವೆ. .*********************************************

ಚಿಟ್ಟೆ Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….4 ” ಪರಾವಲಂಬನೆಯ ಕಠಿಣ ದಿನಗಳು…” “ಆತ್ಮಾನುಸಂಧಾನ “             ಸಾಣೆಕಟ್ಟೆಯಲ್ಲಿ ದೊಡ್ಡಮ್ಮನ ಆಶ್ರಯ ಗಣಪುವಿನ ಎರಡು ಹೊತ್ತಿನ ಊಟ ತಿಂಡಿಯ ಚಿಂತೆ ಬಗೆಹರಿಸಿತು. ಆದರೆ ಗಣಪು ಬಯಸಿದ್ದು ಅಕ್ಷರಾಭ್ಯಾಸ. ಆಕಸ್ಮಿಕವಾಗಿ ಸಾಣೆಕಟ್ಟೆಗೆ ಬಂದ ನಾಡುಮಾಸ್ಕೇರಿಯ ಬೇಲೆ ಹಿತ್ತಲ ರಾಕು ಎಂಬ ತರುಣ ಹಮ್ಮಜ್ಜಿಯ ಮನೆಯಲ್ಲಿದ್ದ ಗಣಪುವಿನ ಯೋಗಕ್ಷೇಮ ವಿಚಾರಿಸುತ್ತ ಆತನ ಕಲಿಯುವ ಆಸೆಯನ್ನು ಗ್ರಹಿಸಿದ. ಊರಿಗೆ ಮರಳಿದವನು ಗಣಪುವಿಗೆ ಮತ್ತೆ ಹನೇಹಳ್ಳಿ ಹಾಸ್ಟೇಲಿನಲ್ಲಿ ಅವಕಾಶ ದೊರೆಯುವಂತೆ ಪ್ರಯತ್ನಿಸಿ ಆತನನ್ನು ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದ. ಕನಿಷ್ಟ ಹದಿನೈದು ದಿನಗಳಿಗೊಮ್ಮೆಯಾದರೂ ಒಮ್ಮೆ ಗಣಪುವನ್ನು ಕಂಡು ಕೈಲಾದ ಹಣಕಾಸಿನ ನೆರವು ನೀಡಿ ಚೆನ್ನಾಗಿ ಓದುವಂತೆ ಹುರುಪು ತುಂಬುತ್ತಿದ್ದ. ರಜೆಯ ದಿನಗಳಲ್ಲಿ ತನ್ನ ಮನೆಗೂ ಕರೆದೊಯ್ದು ಊಟ ತಿಂಡಿ ನೀಡಿ ಉಪಚಾರ ಮಾಡುತ್ತಿದ್ದ.             ರಾಕುವಿನ ಅಣ್ಣನೆ ಕೃಷ್ಣ ಆಗೇರ. ಆಗಿನ ಕಾಲದಲ್ಲಿ ಹೆಸರಾಂತ ಯಕ್ಷಗಾನ ಕಲಾವಿದ. ಬೇರೆ ಬೇರೆ ಊರುಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಲು ಹೋಗಿಬರುತ್ತಿದ್ದ. ಆತನೊಂದಿಗೆ ಗಣಪು ಯಕ್ಷಗಾನ ನೋಡುವ ಕುತೂಹಲದಲ್ಲಿ ಜೊತೆ ನೀಡುತ್ತ ಮೆಲ್ಲ ಮೆಲ್ಲನೆ ಯಕ್ಷಗಾನ ಭಾಗವತಿಕೆ, ಅರ್ಥ ಹೇಳುವುದು, ಕುಣಿತ ಇತ್ಯಾದಿಗಳನ್ನು ಅಭ್ಯಾಸ ಮಾಡಿಕೊಂಡ. ಈ ನಡುವೆ ಹನೇಹಳ್ಳಿಯ ಶಾಲೆಯ ವಿದ್ಯಾಭ್ಯಾಸವೂ ನಡೆಯುತ್ತಿತ್ತು. ಗಣಪು ಮತ್ತೆ ಗುಂದಿಹಿತ್ತಲ ಪರಿವಾರದ ಕುರಿತು ಚಿಂತೆಮಾಡುವ ಪ್ರಮೇಯವೇ ಬರಲಿಲ್ಲ.             ೧೯೩೦ ರ ಹೊತ್ತಿಗೆ ಅಂಕೋಲೆಯ ವಂದಿಗೆ ಗ್ರಾಮದಲ್ಲಿ ಸುಕ್ರು ಮಾಸ್ತರ್ ಎಂಬುವವರು ತಮ್ಮ ಆಗೇರ ಸಮಾಜದ ಮಕ್ಕಳ ಕಲಿಕೆಗಾಗಿ ಕ್ರೈಸ್ತ ಮಿಶನರಿ ಸಂಸ್ಥೆಯ ನೆರವಿನಿಂದ ವಂದಿಗೆ ಗ್ರಾಮದ ಆಗೇರ ಕಾಲನಿಯಲ್ಲಿ ಶಾಲೆಯೊಂದನ್ನು ತೆರೆದು ಅಲ್ಲಿ ತಾವೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಸ್ಪೃಶ್ಯತೆ ಆಚರಣೆಯಲ್ಲಿರುವ ಅಂದಿನ ಕಾಲದಲ್ಲಿ ಆಗೇರರ ಮಕ್ಕಳು ಇತರ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಅಸಾಧ್ಯವಾದ ಸಂದರ್ಭದಲ್ಲಿ ಸುಕ್ರು ಮಾಸ್ತರರ ಶಾಲೆ ಕಲಿಕೆಯ ಆಸಕ್ತಿಯುಳ್ಳ ಆಗೇರರ ಮಕ್ಕಳಿಗೆ ವರದಾನವಾಗಿತ್ತು.             ೧೯೩೪ ರಲ್ಲಿ ಗಾಂಧೀಜಿ ಹರಿಜನೋದ್ಧಾರ ನಿಧಿ ಸಂಗ್ರಹಣೆಗಾಗಿ ದೇಶಾದ್ಯಂತ ತಿರುಗಾಟ ಮಾಡುವಾಗ ಅಂಕೋಲೆಗೆ ಬಂದವರು ಸುಕ್ರು ಮಾಸ್ತರರ ಶಾಲೆಗೂ ಭೇಟಿ ನೀಡಿದ್ದು ಒಂದು ಚಾರಿತ್ರಿಕ ಮಹತ್ವದ ಸಂಗತಿಯಾಗಿದೆ. ಮುಂದೆ ಭಾರತಸೇವಾ ಸಮಾಜದ ಆಜೀವ ಸಭಾಸದರೂ,  ಅಖಿಲ ಭಾರತೀಯ ಹರಿಜನ ಸೇವಕ ಸಂಘದ ಮಾನ್ಯ ಕಾರ್ಯದರ್ಶಿಗಳೂ ಆಗಿರುವ ಶ್ರೀಮಾನ್ ಥಕ್ಕರ್ ಬಾಪಾ ಅವರು ೧೯೪೦ ರಲ್ಲಿ ಅಂಕೋಲೆಗೆ ಭೇಟಿ ನೀಡಿದಾಗ ಆಗೇರ ಸಮಾಜದ ಶಿಕ್ಷಣದ ಕುರಿತು ವಿಶೇಷ ಕಾಳಜಿ ವಹಿಸಲು ಚಿಂತನೆ ನಡೆಸಿ ಅಂಕೋಲೆಯಲ್ಲಿ ಒಂದು ವಸತಿ ಶಾಲೆಯನ್ನು ಆರಂಭಿಸಲು ವ್ಯವಸ್ಥೆ ಮಾಡಿದರು. ಇದರ ಪರಿಣಾಮವಾಗಿ ಸುಮಾರು ಇಪ್ಪತ್ನಾಲ್ಕು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ ಶಾಲೆಯನ್ನು ತೆರೆಯಲು ಯೋಜನೆಯನ್ನು ರೂಪಿಸಲಾಯಿತು.             ೧೯೪೧ ರಲ್ಲಿ ಶ್ರೀ ಎಸ್.ಎನ್. ಕೇಶವಾನ್, ಕೃಷ್ಣರಾವ್ ಹಳದೀಪುರ, ಬಿ.ಎಮ್. ಬಸ್ರೂರ, ಹರಿ ಅನಂತ ಪೈ, ಎಸ್.ಎಸ್.ಶಾಸ್ತ್ರೀ,  ಸುಂದರರಾವ್ ಪಂಡಿತ್, ಶ್ರೀ ನಾಯಕ, ಡಿ.ಎಂ.ನಾಡಕರ್ಣಿ ಮುಂತಾದ ಮಹನೀಯರ ಸಮಿತಿಯೊಂದು ರಚನೆಗೊಂಡು ವಂದಿಗೆ ಸುಕ್ರು ಮಾಸ್ತರರ ಶಾಲೆಗೆ ಹೊಂದಿಕೊಂಡಂತೆ ತಾತ್ಕಾಲಿಕವಾಗಿ ತೆಂಗಿನ ಗರಿಗಳ ವಸತಿ ಶಾಲೆಯೊಂದನ್ನು ಆರಂಭಿಸಲಾಯಿತು.             ಬೇರೆ ಬೇರೆ ಊರುಗಳಿಂದ ಆಗೇರರ ಮಕ್ಕಳು ಇಲ್ಲಿಗೆ ಬಂದು ಸೇರಿಕೊಂಡು ಕಲಿಯಲು ಆರಂಭಿಸಿದರು. ಇಷ್ಟು ಹೊತ್ತಿಗೆ ಹನೇಹಳ್ಳಿ ಶಾಲೆಯಲ್ಲಿ ಆರನೇಯ ಇಯತ್ತೆ ಮುಗಿಸಿದ ಗಣಪು ಮುಲ್ಕಿ ಪರೀಕ್ಷೆಯ ಗಂಭೀರ ಓದಿನ ಅವಕಾಶ ಬಯಸಿ ಸುಕ್ರು ಮಾಸ್ತರರ ವಸತಿ ಶಾಲೆಗೆ ಬಂದು ಸೇರಿದ. ಮೊದಲ ತಂಡದಲ್ಲಿ ಅಂಕೋಲೆಯವರೇ ಆದ ಬಂಟ ಕೃಷ್ಣಮಕ್ಕಿ, ಬುದ್ದು ಆಗೇರ, ಮೊಗಟಾ ಗ್ರಾಮದ ಜಟ್ಟಿ ಆಗೇರ, ಶೇಡಗೇರಿಯ ಬೀರಾ ಆಗೇರ, ನಾಡು ಮಾಸ್ಕೇರಿಯ ಗಣಪು ಆಗೇರ, ಗೋಕರ್ಣದ ಅಮಾಸ್ಯಾ ಆಗೇರ ಮುಂತಾದವರು ಮುಲ್ಕೀ ಪರೀಕ್ಷೆ ಕಟ್ಟಿದರು. ಇವರಲ್ಲಿ ಗಣಪು ಮತ್ತು ಅಮಾಸ್ಯಾ ಆಗೇರ ಇಬ್ಬರು ಮುಲ್ಕಿ ಪರೀಕ್ಷೆ ಪಾಸುಮಾಡಿ ಆಗೇರ ಸಮಾಜದ ಹೆಮ್ಮೆಯ ವಿದ್ಯಾರ್ಥಿಗಳೆಂಬ ಗೌರವಕ್ಕೆ ಪಾತ್ರರಾದರು.             ನಾಡುಮಾಸ್ಕೇರಿಯ ಕೃಷ್ಣ ಮತ್ತು ರಾಕು ಸಹೋದರರ ಸಹಕಾರದಿಂದ ವಂದಿಗೆಯ ಸುಕ್ರುಮಾಸ್ತರ್ ವಸತಿ ಶಾಲೆಯ ಆಶ್ರಯದಲ್ಲಿ ಗಣಪು ಮುಲ್ಕಿ ಪಾಸು ಮಾಡಿದ ಬಳಿಕ ಉದ್ಯೋಗ ದೊರೆಯುವುದು ಕಠಿಣವಾಗಲಿಲ್ಲ. ನಾಲ್ಕಾರು ತಿಂಗಳ ಅಂತರದಲ್ಲಿಯೇ ಸರಕಾರಿ ಶಾನಭೋಗ ಹುದ್ದೆ ದೊರೆಯಿತು. ಜೋಯ್ಡಾ ಎಂಬ ಬೆಟ್ಟ ಪ್ರದೇಶದಲ್ಲಿ ಗಣಪು ಶಾನಭೋಗ ವೃತ್ತಿಗೆ ಹಾಜರಾದ. ದಟ್ಟ ಕಾಡಿನ ಹಳ್ಳಿಗಾಡು ಎಂಬುದನ್ನು ಬಿಟ್ಟರೆ ಊರ ಜನರ ಸಹಕಾರ ಇತ್ಯಾದಿ ತುಂಬಾ ಅನುಕೂಲಕರ ಪರಿಸರವೇ ದೊರೆಯಿತು. ಆದರೆ ಗಣಪು ತಾನು ಓದುವ ಹಂತದಲ್ಲಿಯೇ ಶಿಕ್ಷಕನಾಗಬೇಕೆಂದು ಕನಸು ಕಾಣುತ್ತಿದ್ದ. ಬಯಸಿದ ಉದ್ಯೋಗವೊಂದು ದೊರೆಯಲಿಲ್ಲ ಎಂಬ ಆತಂಕವೊಂದು ಅವನನ್ನು ಕಾಡುತ್ತಲೇ ಇತ್ತು. ******************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ – ೪ ಚಾವಡಿಯಲ್ಲಿ ರಂಗ ಗೀತೆ ಎಂಟನೇ ತರಗತಿಯ ಕ್ಲಾಸಿನಲ್ಲಿ ಪುಟ್ಟ ಗುಬ್ಬಚ್ಚಿ ದೇಹದ ನಾನು ಮೊದಲನೇ ಬೆಂಚಿನಲ್ಲಿ ಮುದುಡಿ ಕುಳಿತಿದ್ದೆ. ” ದೇವದಾಸಿ ಪದ್ದತಿ,ಬಸವಿ ಪದ್ದತಿ,ಗೆಜ್ಜೆಪೂಜೆ ನಿಷೇಧಿಸಿದರು” ತರಗತಿಯಲ್ಲಿ ಕನ್ನಡದ  ಬಾಲಕೃಷ್ಣ  ಮೇಷ್ಟ್ರು ಕರ್ನಾಟಕದ ಇತಿಹಾಸದ ಬಗ್ಗೆ ಬಿಡುವಿನಲ್ಲಿ ಕಥೆಯ ರೂಪದಲ್ಲಿ ಹೇಳುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಮೈಸೂರಿನ ಕರ್ತೃ. ಜಾರಿಗೆ ತಂದ ಈ ಕಾನೂನುಗಳು ಹೊಸದಾದ ಮನ್ವಂತರಕ್ಕೆ ನಾಂದಿ ಹಾಡಿತ್ತು. ಥಟ್ಟನೆ ನನ್ನ ಕಣ್ಣೆದುರು, ಆ ದೊಡ್ಡ ಸುಂದರ ಮನೆ, ಒಳಗೆ ಗೋಡೆಗೆ ತೂಗುಹಾಕಿದ ಗೆಜ್ಜೆ, ಹಾಡುತ್ತಿದ್ದ ಭಜನೆ, ಜೊತೆಗೆ ಅವರ ಮುಖಗಳು ಸ್ಥಿರವಾಗಿ ಯಾವುದೋ ತಳಮಳಕ್ಕೊಳಕ್ಕಾಗಿ ಅಂತರ್ಮುಖಿಯಾಗುತ್ತಿದ್ದೆ. ಕಲೆಯ ಬಗೆಗಿನ ಕನಸಿಗೆ ಸೇತುವೆ ಕಟ್ಟಲು ಇವರ ದೇಣಿಗೆ ಚಿಕ್ಕದೇನು?. ಶಾಲೆಯ ಮೈದಾನದಲ್ಲಿ  ಗೆಳತಿಯರು ಥ್ರೋಬಾಲ್, ಓಟ, ಎಂದು ಆಟದ ಹುಮ್ಮಸ್ಸಿನಲ್ಲಿದ್ದರೆ  ಬದಿಯಲ್ಲಿ ಸಾಲಾಗಿದ್ದ ಮರಗಳಲ್ಲಿ ಒಂದರ ನೆರಳಿಗೆ ಆತುಕೊಂಡು ಆಗಾಗ ಬಾಲ್ಯದಲ್ಲಿ ಆ ಮನೆಯ ಇಂಚು ಇಂಚುಗಳಲ್ಲಿ ಹುದುಗಿಸಿಟ್ಟ ನೆನಪುಗಳನ್ನು ಬೊಗಸೆಗಿಳಿಸಿ ತಾಜಾಗೊಳಿಸುತ್ತಿದ್ದೆ. ಎಂತದೋ ಸುಪ್ತ ನೆನಪುಗಳ ಗುಂಗಿನ ಸುಖ. ಅದು  ಮುಗ್ಧತೆ ಆವರಿಸಿದ್ದ  ಎಲ್ಲವನ್ನೂ ಕುತೂಹಲದ ಮನಸ್ಸಿನಿಂದ ನೋಡಿ ಅದನ್ನು ಅನುಕರಿಸಿ ಅಭಿನಯಿಸುವ ಬಾಲ್ಯ. ರಾಮಾಯಣ, ಮಹಾಭಾರತ, ಕಥಾಸರಿತ್ಸಾಗರದ ಕಥೆಗಳ ಓದು. ಅಲ್ಲಿ ಕಾಣ ಸಿಕ್ಕಂತಹ ರಾಜಕುಮಾರಿಯರು ನನ್ನ ಕಣ್ಮುಂದೆ ಗೆಜ್ಜೆ ಕಟ್ಟಿ ತಿರುಗುತ್ತಿದ್ದರು. ನಾಯಕಿಯರೆಂದರೆ ದೊಡ್ಡ ಅರಮನೆಯಲ್ಲಿ ಇರುವವರು..ಹಿಂದೆ ಮುಂದೆ ಸಖಿಯರು ಇರಬೇಕು. ಅವರು ನಾಯಕಿಯ ಹಿಂದೆ ಸುತ್ತುವವರು. ಶಾಲೆಯಲ್ಲಿ ನನ್ನ ಗೆಳತಿಯರಿಗೆ ನಾನು ಓದಿದ,ಮರು ಸೃಷ್ಟಿಸಿದ,  ಕಟ್ಟಿದ ಕಥೆಗಳನ್ನು ಹೇಳಿ,ಅದನ್ನು ನಾನೂ ಅನುಭವಿಸುತ್ತಿದ್ದೆ.  ಅಂತರಂಗದಲ್ಲೊಬ್ಬಳು ರಾಜಕುಮಾರಿ. ನಾನು ಒಬ್ಬಳೇ ಇರುವಾಗ ಒಳಲೋಕದ ಭ್ರಮರ ಹೊರಗೂ ಹಾರಿ ನನ್ನ ಹೆಜ್ಜೆಗಳು ರಾಜಕುಮಾರಿಯ ಹೆಜ್ಜೆಗಳೇ ಆಗಿ ರೂಪಾಂತರಗೊಳ್ಳುತ್ತಿತ್ತು. ನಾನು ರಾಜಕುಮಾರಿ. ಹೌದು ಹಾಗೆಂದೇ ಭಾವಿಸಿದ್ದೆ, ಭ್ರಮಿಸಿದ್ದೆ. ರಂಗು ರಂಗಾದ ರಂಗ ನನ್ನೊಳಗೆ ಪ್ರವೇಶಿಸಿದಾಗ  ನಾಟಕದ ಪಾತ್ರದೊಳಗೆ ಮಾಡುವ ಪರಕಾಯ ಪ್ರವೇಶದ  ಮೊದಲ ಪಾಠ ನನಗರಿವಿಲ್ಲದೇ ಬದುಕು ಕಲಿಸುತ್ತಿತ್ತು.  ನಾನು ಇದ್ದ ಮನೆ ಹಳೆಯಮನೆ, ಚಿಕ್ಕ ಮನೆ. ನಮ್ಮ ಈ ಮನೆಯ ಹತ್ತಿರವೇ ನನ್ನ ಕನಸಿನ ಅರಮನೆ ಒಂದಿತ್ತು. ಎದುರು ಉದ್ದದ ಚಾವಡಿ, ಸುಂದರ ಕೆತ್ತನೆಯ ಬಾಗಿಲು, ಆಗಿನ ಕಾಲಕ್ಕೆ ಬಲು ಅಪರೂಪದ ಟೇರೆಸ್ ಹೊದ್ದ ಮನೆಯದು. ಮನೆ ಎದುರು ಹೂವಿನ ಗಿಡಗಳು. ಗಿಡಗಳನ್ನು ಸಿಂಗರಿಸಿದ ಬಗೆಬಗೆಯ ಹೂವುಗಳು. ಬಟನ್ ಸೇವಂತಿಗೆ, ಗುಲಾಬಿ ಬಣ್ಣದ ಗುಲಾಬಿ, ಗಿಡ್ಡ ದೇಹದ ಮಲ್ಲಿಗೆ,  ನಂದಿಬಟ್ಟಲು, ದೇವರಿಗೆ ಏಕಾಂತದಲ್ಲಿ ಶಂಖ ಊದಿ ಎಬ್ಬಿಸುವ ಶಂಖಪುಷ್ಪ ಹೂಗಳು ಎತ್ತರದ ದೇವಮಂದಾರ ಮರಕ್ಕೆ ಸುತ್ತಿ ಹತ್ತಿದ ಬಳ್ಳಿಯಲ್ಲಿ ಅರಳಿದ್ದವು. ಇನ್ನೂ ಅದೆಷ್ಟೋ ಬಣ್ಣಗಳು ಅಲ್ಲಿ ಹೂವಿನ ರೂಪದಲ್ಲಿ ಆ ಮನೆಯ ಅಂದ ಹೆಚ್ಚಿಸಿತ್ತು. ಆ ಹೂವಿನ ಗಿಡಗಳ ಮುಂದೆ ಅದರ ರಕ್ಷಣೆಗೇ ನಿಂತ, ಕಾದು ಕಪ್ಪಾದ ಕಲ್ಲಿನ ಕಾಂಪೌಂಡ್. ದೊಡ್ಡಬೀಗದ ಗೇಟು.  ಮುಖ್ಯ ರಸ್ತೆಯ ಬಳಿಯಲ್ಲೇ ಇರುವ ನಮ್ಮ ಮನೆಯ ಎದುರು  ನನ್ನ ಗೆಳತಿಯರು ಆಗಾಗ ತಿರುಗಾಡುವುದಿತ್ತು.  ಆಗೆಲ್ಲ ಮನೆಗಳಲ್ಲಿ ಕಠಿಣ ನಿರ್ಬಂಧಗಳು ಇರುತ್ತಿರಲಿಲ್ಲ. ಊರಿಡೀ ಸುತ್ತುವ ಸ್ಚಾತಂತ್ರ್ಯ ನಮಗಿತ್ತು. ಈ ಗೆಳತಿಯರು ಬರುವ ವಿಷಯ ನನಗೆ ತಿಳಿದರೆ, ಎಲ್ಲಿದ್ದರೂ ಓಡಿಹೋಗಿ ಆ ಅರಮನೆಯ ಹೊರಗಿನ ಎತ್ತರದ ಚಾವಡಿ ಹತ್ತಿ ಗಿಡಗಳ ನಡುವಿನಿಂದ ನುಸುಳಿಕೊಂಡು ಆ ಗೇಟಿನ ಒಳಗಡೆ ಗೋಣು ಎತ್ತರಿಸಿ ಗೆಳತಿಯರಿಗೆ ಕಾಣುವಂತೆ  ವಿಶಿಷ್ಟ ಭಂಗಿಯಲ್ಲಿ ನಿಂತಿರುತ್ತಿದ್ದೆ. ಒಂದು ಕೈ ಗೇಟಿನ ಮೇಲಿರಿಸಿ ರಸ್ತೆಯ ಮೇಲೆ ದೃಷ್ಟಿ ಗಟ್ಟಿ ಮಾಡಿ  ಕಾಯುತ್ತಿದ್ದೆ. ಒಮ್ಮೆ ಈ ಹುಡುಗಿಯರ ದಂಡು ಆ ರಸ್ತೆಯಲ್ಲಿ ಮನೆಯೆದುರಿಂದ ಹಾದು ಮರೆಯಾಯಿತೋ  ನಾನು ರಾಜಕುಮಾರಿಯ ಪಾತ್ರದ ಜಂಭದಿಂದ ಅರೆನಕ್ಕು  ನನ್ನ ಗುಡಿಸಲಲ್ಲಿ ಬಂದು  ಹುದುಗಿ ಕೊಳ್ಳುತ್ತಿದ್ದೆ. ಅಂತಹ ವಿಶೇಷ, ವಿಶಿಷ್ಟ ಅನುಭೂತಿಯನ್ನು ನೀಡಿದಂತಹ ಆ ಮನೆ ಹಾಗೂ ಅದರ ಒಳಗಿರುವ ರಾಣಿಯರು ನನ್ನ  ರಂಗೋಲಿಗೆ ಚುಕ್ಕಿ ಬರೆದವರು. ಹೀಗಾಗಿ ಕನ್ನಡದ ಮೇಷ್ಟ್ರು ಇತಿಹಾಸದ ಕಥೆ ಕಲಿಸಿ ಕೊಟ್ಟಾಗಲೂ ನಿರ್ಧಿಷ್ಟ ವಿಷಯಗಳು ಎದುರು ಸಿಕ್ಕಾಗ ಅವರ ಪಾಶ ಸೆಳೆಯುತ್ತಿತ್ತು. ನಿಮಗೀಗ ಅವರನ್ನು ಪರಿಚಯಿಸುವೆ. ಅವರು ನಾವು ಇದ್ದ ಬಾಡಿಗೆ ಮನೆಯ ಮಾಲೀಕರು.  ಹೆಂಗಸರು. ಅವರದ್ದು ನಮ್ಮ ಪಕ್ಕದ ಮನೆ. ದೊಡ್ಡ ಮನೆ. ಅಲ್ಲಿ ಮೂವರು ಮಹಿಳೆಯರು, ಊರಿನ ಅವಿಭಾಜ್ಯ ಪಾತ್ರದಂತಿದ್ದರು. ನಂತರದಲ್ಲಿ ಇಬ್ಬರು. ಅವರನ್ನು ಅಜ್ಜಮ್ಮ, ಸಣ್ಣಜ್ಜಿ, ವತ್ಸಲ ಚಿಕ್ಕಿ ಎಂದು ಕರೆಯುತ್ತಿದ್ದೆ. ಹಾಗೆ ಕರೆಯಲು ಅವರೇ ನನಗೆ ಕಲಿಸಿ ಕೊಟ್ಟದ್ದು. ಅಲ್ಲಿ ಕಾಣುತ್ತಿದ್ದುದು ಶ್ರೀಮಂತ ಬದುಕು. ಗಂಡಸರು ಬಂದು ಹೋದರೂ  ವಾಸ ಇರಲಿಲ್ಲ. ಅಜ್ಜಿ ಪಿಸಪಿಸ ಅಂದಿದ್ದು ಕೇಳಿದ್ದೆ..’ ಅವರಿಗೆ ಮದುವೆ ಇಲ್ಲ’ ಆ ಮನೆ ನನ್ನ ಬಾಲ್ಯಕ್ಕೆ ಅನೂಹ್ಯ ಹಾಸು ಹೊದಿಸಿತ್ತು. ಅಂಬೆಗಾಲಿನಿಂದ ಬಡ್ತಿಹೊಂದಿ ತಪ್ಪು ಹೆಜ್ಜೆ ಇರಿಸಿ ನಡೆಯಲು ಕಲಿತಾಗ ಆ ಕೆಂಪು ಸಿಮೆಂಟಿನ ತಂಪು ಪಾದಕ್ಕೆ ಅಪ್ತ ಬಂಧ ಬೆಸೆದಿತ್ತು.  ಅಜ್ಜಿಯಿಂದ ಜೋರು, ಮತ್ತು ಪೆಟ್ಟಿನಿಂದ ತಪ್ಪಿಸಿಕೊಂಡು ಓಡಲು ಸಿಗುತ್ತಿದ್ದ ಸುರಕ್ಷಿತ ತಾಣವೂ ಹೌದು. ” ಅಜ್ಜಮ್ಮ” ಅಲ್ಲಿನ ಯಜಮಾನಿ. ಆಗಲೇ ಅವರಿಗೆ ಇಳಿ ವಯಸ್ಸು. ಆದರೂ ರಾಣಿಯ ಗಾಂಭೀರ್ಯ,ಗತ್ತು. ಮಿತ ಮಾತು. ಅವರು ಯಾವಾಗಲೂ  ಹೂಗಳಿದ್ದ ಬಿಳೀ ತೆಳ್ಳಗಿನ ಹತ್ತಿಯ ಸೀರೆ ಉಡುತ್ತಿದ್ದರು. ಅವರ ಹತ್ತಿರ ಹೋದರೆ ಎಂತದೋ ಸುವಾಸನೆ. ನಾನು ವಿನಾ ಕಾರಣ ಅವರ ಬಳಿ ಹೋಗಿ  ನಾಸಿಕ ಅರಳಿಸಿ ಉಸಿರಿಗೆ ತಾಲೀಮು ನೀಡಿ ಸಂಭ್ರಮಿಸುತ್ತಿದ್ದೆ. ನನಗೆ ಅವರನ್ನು ಮುಟ್ಟುವುದೆಂದರೆ ಎಂತದೋ ಪುಳಕ. ಅದು ರೇಶಿಮೆಯಂತಹ ನುಣುಪು ಸ್ಪರ್ಶ, ಸ್ವಚ್ಛ ಬಿಳಿ ಮೈ ಬಣ್ಣ, ಹದ ಎತ್ತರದ, ತುಸು ದಪ್ಪನೆಯ ಮೈಕಟ್ಟು. ಅಗಲ ಮುಖ.ನನಗೆ ಅವರೆಂದರೆ ಏಕೋ ಕಾಣೆ, ಅಚ್ಚರಿ, ಹೆಮ್ಮೆ, ಪ್ರೀತಿ.  ಅವರು  ಪ್ರೀತಿಯಿಂದ ಕರೆಯುತ್ತಿದ್ದರು. ತಾವು ತಿಂಡಿ ತಿನ್ನುವಾಗ,ಊಟದ ಸಮಯ ನನ್ನ ಕರೆದು ಹತ್ತಿರ ಕುಳ್ಳಿರಿಸುತ್ತಿದ್ದರು. ದೊಡ್ಡ ಊಟದ ಬಟ್ಟಲು. ತರತರಹದ ವ್ಯಂಜನಗಳು, ಬೆಳ್ಳಿಯ ಲೋಟದಲ್ಲಿ ಹದಬಿಸಿ ಹಾಲು. ಪಕ್ಕದಲ್ಲಿ ಒಂದು ತಂಬಿಗೆ ನೀರು. ಅವರು ಊಟಕ್ಕೆ ಬರುವಾಗ ಇಷ್ಟೂ ತಯಾರು ಮಾಡಿ ಇಡುತ್ತಿದ್ದರು. ಅವರು ನಿಧಾನವಾಗಿ ಅಡುಗೆ ಮನೆಗೆ ಬರುತ್ತಿದ್ದರು. ಮನೆಯ ಹಜಾರದಿಂದ ಅಡುಗೆ ಮನೆ ಒಂದಷ್ಟು ದೂರ. ಅದು ಉದ್ದನೆಯ ಮನೆ. ನಾನು ಅವರ ಹೆಜ್ಜೆಗಳನ್ನು ಅನುಕರಿಸುತ್ತ ಅವರ ಹಿಂದೆ ಹಿಂದೆ ನಡೆಯುತ್ತಿದ್ದೆ.  ಪ್ರತಿಸಲವೂ ಅಷ್ಟೇ ಅಚ್ಚರಿಯಿಂದ ಅವರ ಊಟವನ್ನು ನೋಡುವಾಗ ನನಗೆ ಅದರಲ್ಲಿ ಆಸೆಯಿರುತ್ತಿರಲಿಲ್ಲ. ಆದರೆ ಅದನ್ನು ಕಾಣುವುದು ದೊಡ್ಡ ಸಂಭ್ರಮ. ಬೆಳಗ್ಗೆ ಸ್ನಾನ ಮಾಡಿ ದೇವರ ಕೋಣೆ ಸೇರುತ್ತಿದ್ದರು. ಆ ಹೊತ್ತಿಗೆ ಅಲ್ಲಿ ಹರಿವಾಣದ ತುಂಬ ಹೂಗಳು, ಬಗೆಬಗೆಯ ಆರತಿ ತಟ್ಟೆಗಳು, ಗಂಧ, ಊದುಬತ್ತಿ, ಅದೆಷ್ಟು ದೇವರ ಪಟಗಳು, ತಾಳೆಗರಿಯ ಕಟ್ಟುಗಳು. ಆ ಸಮಯ ಮಾತ್ರ ಅವರು ಮಣೆ ಇಟ್ಟು ನೆಲದಲ್ಲಿ ಕೂರುವುದು. ಅವರೇ ಪ್ರಾರ್ಥನೆಯನ್ನು ನನಗೆ ಕಲಿಸಿದ್ದು. ಅದೆಷ್ಟು ಕೀರ್ತನೆಗಳು, ಹಾಡುಗಳು ಅವರಿಗೆ ತಿಳಿದಿತ್ತು.  ಅವರ “ಜೊತೆಗೆ ಕುಳಿತುಕೋ” ಎಂಬ ಮೃದುವಾದ ಅಪ್ಪಣೆ ನನಗೆ ತುಂಬಾ ಪ್ರಿಯ. ನಾನು ಆ ವಯಸ್ಸಿಗೆ ಸಹಜ ಕುತೂಹಲದಿಂದ ನೋಡುತ್ತಿದ್ದೆ. ಅವರು ಒಳಹೋದೊಡನೆ ಆ ಕೋಣೆಯೆಲ್ಲವೂ ಊದುಬತ್ತಿಯ ಸುವಾಸನೆ, ಕರ್ಪೂರದ ಪರಿಮಳ, ಬಗೆಬಗೆಯ ಆರತಿಗಳು, ಯಾವುದೋ ಮಂತ್ರ ಪಠನೆ ಗಳಿಂದ ತುಂಬುತ್ತಿತ್ತು. ಅವರು ಎಲ್ಲವನ್ನೂ ಮುಗಿಸಿ ಅಡ್ಡಬಿದ್ದು ಹೊರಬರುತ್ತಿದ್ದರು. ಅಲ್ಲಿಗೆ ಆ ಕೋಣೆಯ ಬಾಗಿಲು ಮುಚ್ಚುತ್ತಿತ್ತು. ನಂತರ ಅಲ್ಲಿ ಸಂಜೆ ಭಜನೆ. ಭಜನೆ ಮುಗಿದ ತಕ್ಷಣ ರಾತ್ರಿಯ ಊಟ.  ಇವರಿಂದ ಸಾಲುಸಾಲು ಭಜನೆ ಹಾಡುಗಳು ನನಗೆ ಕಂಠಪಾಠವಾದವು. ನನ್ನಿಂದ ಅವರು ಹಾಡಿಸುತ್ತಿದ್ದರು. ಅವರ ಮನೆಗೆ ಬಂದವರ ಎದುರು ನನ್ನ ಸಂಗೀತ ಕಛೇರಿ ನಡೆಯುತ್ತಿತ್ತು. ಹೆಚ್ಚಾಗಿ ಅವರ ನೆಂಟರು, ಹೆಂಗಸರೇ ಹೆಚ್ಚಾಗಿ ಬರುತ್ತಿದ್ದುದು. ಬರುವವರು ಕಾರಿನಲ್ಲಿ. ನಾನು ತಕ್ಷಣ ಪ್ರಸ್ತುತಿಗೆ ಅನುವಾಗಿ ಕಾಯುತ್ತಿದ್ದೆ. ಅವರು ಜೋರಾಗಿ ನನ್ನ ಕೂಗುತ್ತಿದ್ದರು. ಥಟ್ಟನೆ ನಾನು ಹಾರಿ ಜಿಗಿದು ಹೋಗಿ ದೊಡ್ಡ ಹಜಾರದ ಮೂಲೆಯಲ್ಲಿ ನಿಲ್ಲುತ್ತಿದ್ದೆ. ಅವರು ನನ್ನ ಪರಿಚಯವನ್ನು ಸೊಗಸಾಗಿ ಮಾಡುತ್ತಿದ್ದರು. ಬಂದವರು ಕಣ್ಣರಳಿಸಿ ನನ್ನ ನೋಡುವುದು. ನಂತರ ಅಜ್ಜಮ್ಮನ ಅಪ್ಪಣೆಯಾಗುತ್ತಿತ್ತು. “ಹಾಡು..ನಾರಾಯಣತೇ ನಮೋನಮೋ..” ಅಪರೂಪಕ್ಕೆ ಕೆಲವೊಮ್ಮೆ ಅತಿಥಿ ಗಳ ಮುಖಚರ್ಯೆಯ ಭಾವಕ್ಕೆ ಹೆದರಿ  ನಾನು ಮತ್ತು  ಹಾಡು  ಬೇರೆಯಾಗುವುದೂ ಇತ್ತು. ಆಗಲೂ ನಡುವೆ ಅವರು ಸರಿಪಡಿಸಿ ನನ್ನ ಪರಾಕುಗಳನ್ನು ಸೊಗಸಾಗಿ ನುಡಿಸುತ್ತಿದ್ದರು. ಸ್ಪಷ್ಟ ಉಚ್ಛಾರಣೆ, ಗಾಯನ, ಹಾಡಿನ ಸಾಲುಗಳನ್ನು ಉರು ಹಚ್ಚಿ ಕಂಠಪಾಠ ಮಾಡುವ ಕಲೆ ಇತ್ಯಾದಿಗಳನ್ನು, ಕಲಿಸಿದ ಚಾವಡಿಯಲ್ಲಿ ನನಗರಿವಿಲ್ಲದೆಯೇ ಕಲಿಸಿದ ಗುರುಮಾತೆ ಅವರು. ಅಲ್ಲಿ ಹೊಸದೊಂದು ನಂಟು ಬೆಸೆದಿತ್ತು. ಯಾರೂ ಇರದಿದ್ದಾಗ  ಪ್ಲಾಸ್ಟಿಕ್‌ ನ ಬಳ್ಳಿ ಹೆಣೆದ ಮರದ ಚೌಕಟ್ಟಿದ್ದ ಕುರ್ಚಿಯಲ್ಲಿ ಅವರು ಕೂತರೆ ನಾನು ಅವರ ಪಾದದ ಬಳಿ. ತಲೆ ಎತ್ತಿದ್ದರೆ ಬಹಳ ಎತ್ತರಕ್ಕೆ ಅವರು ಇದ್ದಂತೆ ಕಾಣುತ್ತಿತ್ತು. ಅವರ ಜೊತೆಗೆ ಮಾತು. “ಮೊನ್ನೆ ಬಂದವರ ಹೆಸರು ಹೇಳು” ” ಕಳೆದ ವಾರ ಬಂದವರು”  “ನಿನ್ನೆ ಊಟಕ್ಕೆ ಏನೆಲ್ಲ ಇತ್ತು” ನನ್ನ ಉತ್ತರಕ್ಕೆ  ಅವರದ್ದು ಸುಂದರ ನಗು. ನನಗೆ ಅದೇ ದೊಡ್ಡ ಬಹುಮಾನ. ಅಜ್ಜಮ್ಮನ ಮಲಗುವ ಕೊಠಡಿ ವಿಶಾಲವಾಗಿತ್ತು. ಮಂಚದ ಬಳಿ ಪುಟ್ಟ ಕೆತ್ತನೆ ಇದ್ದ ಸ್ಟೂಲ್ ರೀತಿಯ ಉಪಕರಣ.  ಒಬ್ಬರೇ ಕೂತಿದ್ದರೆ ಮೆಲ್ಲನೆ ದೇವರ ಹಾಡು ಮಣಮಣಿಸುತ್ತಿದ್ದರು. ನಾನು ಅಡಗಿಕೊಂಡು ಕೇಳಲು ಯತ್ನಿಸುತ್ತಿದ್ದೆ. ನನ್ನ ಮುಖ ಕಂಡರೆ ಅವರ ಹಾಡು ನಿಲ್ಲುತ್ತಿತ್ತು. ” ಬಾ ಎದುರು” ಅಪ್ಪಣೆಯಾಗುತ್ತಿತ್ತು. ಇಲ್ಲಿ ಕೂತುಕೋ. “ನನಗೀಗ ನಿನ್ನ ಅಜ್ಜಿ ಹೇಳಿದ ಒಂದು ಕಥೆ ಹೇಳು” ಉಳಿದವರಿಗೆ ಹೇಳಿದಷ್ಟು ಸಲೀಸಾಗಿ ಕಥೆ ಅವರೆದುರು ತೆರೆದುಕೊಳ್ಳುತ್ತಿರಲಿಲ್ಲ. ಒಂದಿಷ್ಟು ಯೋಚನೆ, ಲಜ್ಜೆ, ಸಂಕೋಚ ಪ್ರದರ್ಶನದ ನಂತರ ಕಥೆ ಆರಂಭ. ಅವರದ್ದು ಚೆಂದದಲ್ಲಿ ಗಟ್ಟಿಯಾಗಿ,ಒಂದು ಲಾಲಿತ್ಯದಲ್ಲಿ ಹೂಂಗುಟ್ಟುವಿಕೆ. .ಜಾತ್ರೆ ಹತ್ತಿರ ಬಂದಾಗ ಅವರು ಹೇಳುತ್ತಿದ್ದರು: ” ನಾಳೆ ಹೋಗುತ್ತೀಯಲ್ವಾ, ದೇವರು ಜಾತ್ರೆಯಲ್ಲಿ ಹೋಗುವಾಗ ದೇವರ ಎದುರು ಝರಿ ಸೀರೆ ಕಚ್ಚೆಹಾಕಿ ಉಟ್ಟ ಹೆಂಗಸು ಇರಬಹುದು. ನೋಡಿ ಬಾ. ಮೊದಲೆಲ್ಲ ನೃತ್ಯದ ಹೆಜ್ಜೆ ಹಾಕುತ್ತ ಹೋಗುತ್ತಿದ್ದೆವು . ದೇವರ “ಬಲಿ” ಹೋಗುತ್ತಿರುವಾಗ ದೇವರ ಎದುರಿನಿಂದ ಚಾಮರ ದೇವರಿಗೆ ಬೀಸುತ್ತ ಹೋಗುವುದು. ಅದು ನನ್ನ ಹಕ್ಕಾಗಿತ್ತು. ಅದು ನನಗೆ ಸಿಕ್ಕಿದ ಸೌಭಾಗ್ಯವಾಗಿತ್ತು. ದೇವರ ಬಲಬದಿಯ ಹೆಣ್ಣು ನಾನು.” ನನಗೆ ಏನೊಂದು ಅರ್ಥ ಆಗುತ್ತಿರಲಿಲ್ಲ. ಮನೆಗೆ ಬಂದು ನನ್ನ ಅಜ್ಜಿಯ ಬಳಿ ಕೇಳುತ್ತಿದ್ದೆ. “ಅಮ್ಮಾ..ಬಲಬದಿ ಅಂದರೇನು”  ಆಕೆ ತನ್ನ ಬಲ ಕೈ ತೋರಿಸಿದರೆ ನಾನು ಪೆಚ್ಚಾಗುತ್ತಿದ್ದೆ. ಅಜ್ಜಿ ಅನ್ನುತ್ತಿದ್ದಳು. “ಜಾತ್ರೆಯಲ್ಲಿ ನೃತ್ಯ ಮಾಡುವುದು ದೇವದಾಸೀ   ಸಂಪ್ರದಾಯವಾಗಿತ್ತು. ಈಗ ಅದೆಲ್ಲ ನಿಷೇಧ. ಆದರೂ ಹರಕೆ ತೀರಿಸುವಂತೆ ಬಂದು ಹೋಗುತ್ತಾರೆ. ಅವರು ಮದುವೆಯಾಗುವುದೂ ಇಲ್ಲ. ದೇವಾಲಯದಿಂದ ಅವರಿಗೆ ಕುಂಕುಮ,ತಾಳಿ ಶಾಸ್ತ್ರ ಬದ್ದವಾಗಿ ನೀಡಲಾಗುತ್ತಿತ್ತು. ಈಗ ಅದೆಲ್ಲ ನಿಂತಿದೆ.” ದೇವರಿಗೇ ಸಮರ್ಪಣೆ ಮಾಡಿಕೊಂಡ ಈ ಮಾತೃ ಪಾತ್ರಗಳು ನನ್ನನ್ನು ಪ್ರೀತಿಸಿದ್ದು,  ಸಮರ್ಪಣಾ ಭಾವದಿಂದ ಬದುಕನ್ನು ಪ್ರೀತಿಸಲು ನನಗೆ ಕಲಿಸಿದ್ದು  ರಂಗೋಲಿಗೆ ಜೀವ, ಭಾವ, ಬಣ್ಣ ತುಂಬಿವೆ. ************************************************************** ರಂಗಭೂಮಿ ಹಾಗೂ

Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವಿನುತಾ ಹಂಚಿನಮನಿ ಹುಟ್ಟಿನಿಂದ ಚಟ್ಟದ ವರೆಗೆ ಹೆಣ್ಣಿಗೆ ಅಸ್ತಿತ್ವಕ್ಕಾಗಿ ಹೋರಾಟಸಿಕ್ಕ ಬದುಕ ಭವಸಾಗರದಲಿ ಈಜಿ ದಾಟುವದಕ್ಕಾಗಿ ಹೋರಾಟ ತಾಯಿಯ ಗರ್ಭದಲ್ಲಿರುವ ಹೆಣ್ಣುಭ್ರೂಣ ನೇಣು ತಪ್ಪಿಸಲು ಸೆಣಸಾಟಪುರುಷಪ್ರಧಾನ ಲೋಕದಲಿ ಪ್ರಾಣಸಹಿತ ಬರುವದಕ್ಕಾಗಿ ಹೋರಾಟ ಒಡಹುಟ್ಟಿರುವ ಅಣ್ಣ ತಮ್ಮಂದಿರೊಂದಿಗೆ ಹಕ್ಕಿಗಾಗಿ ಪರದಾಟಕನಿಷ್ಠ ವಿದ್ಯೆ ಅನ್ನ ಬಟ್ಟೆಯ ಪಾಲು ಪಡೆಯುವದಕಾಗಿ ಹೋರಾಟ ಯೌವನಾವಸ್ಥೆಯಲ್ಲಿ ಕಾಮುಕರಿಂದ ಅತ್ಯಾಚಾರದ ಕೆಣಕಾಟಕನ್ಯೆಗೆ ಬಹುಮೂಲ್ಯ ಶೀಲ ಕಾಯ್ದುಕೊಳ್ಳುವದಕ್ಕಾಗಿ ಹೋರಾಟ ಪತ್ನಿಯ ಬೇಕು ಬೇಡಗಳ ಹತ್ತಿಕ್ಕುತ ಬಾಳ ಬಂಡಿಯ ಎಳೆದಾಟಅವಲಂಬಿತರ ಅವಶ್ಯಕತೆಗಳ ಪೂರೈಸುವದಕ್ಕಾಗಿ ಹೋರಾಟ ಇಳಿವಯಸ್ಸಿನಲಿ ಪರಾಧೀನತೆ ತಂದ ಅವಮಾನದಿಂದ ಸಂಕಟವಿನುತಳ ಜೀವನ ಸಂಜೆಯಲಿ ಪತಿಸುತರ ಆಸರೆಗಾಗಿ ಹೋರಾಟ *********************************

ಗಜಲ್ Read Post »

ಕಾವ್ಯಯಾನ

ಪ್ರೇಮವ್ಯೋಮಯಾನ…!

ಕವಿತೆ ಪ್ರೇಮವ್ಯೋಮಯಾನ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಡಾ. ಅರಕಲಗೂಡು ನೀಲ ಚಂದ್ರನ ಗುರುತು ಹಿಡಿಯುವುದೇ ಹಾಗೆಗುರುತ್ವ ಹಗುರುಮೇಲ್ಮೈ ಭೂಮಿಗಿಂತ ನವುರುಮೇಲೆ ಬಿದ್ದುದೆಲ್ಲದರ ಅಲ್ಪ ಜಿಗಿತಹಾಗಿದ್ದೂ ನಮ್ಮ ಜನ ನೂರಾರುನಗರಿ ನಿರ್ಮಿಸಿ ಚಂದಿರನೀಗನಿರ್ಭರ ಭರ್ತಿ ಭಾರ! ಚಂದ್ರನಾಗರಿಕ ಸೂರ್ಯಕುವರತಾನಲ್ಲಿಂದಲೆ ಇಣುಕಿಅವನಿಯತ್ತ ಕಣ್ಣಲ್ಲೆ ಕುಟುಕಿಭುವನಸುಂದರಿ ವಸುಕಾಂತೆಗೆಗಂಟು ಮೂರನುಅಂಘ್ರಿ ಏಳನುಅಂಗೀಕರಿಸಿ ಪೂರ್ಣಚಂದ್ರನ ಕಡೆರಾಕೆಟ್ಟು ಬಿಟ್ಟನು! ದಿಗ್ಭ್ರಾಂತಳಾದಳು ವಸುಕಾಂತೆಕೇಳರಿಯದೆ ಕಂಡ ಆ ಚಂದ್ರಸಂತೆ!ಭುವಿಯಲ್ಲಿ ಬರಿ ಬಸ್ಸು, ಈಗೀಗಸೂಪರ್ ಸ್ಪೀಡ್ ರೈಲು, ವಿಮಾನಮಾನವರಹಿತ ಅಥವಾಅವನನ್ನೂ ಹೊತ್ತ ರಾಕೆಟ್ಟುಆಗೊಮ್ಮೆ ಈಗೊಮ್ಮೆ ವಿರಳವಾಗಿ! ಇಲ್ಲಿ, ವ್ಯೋಮದ ಉತ್ತುಂಗಕ್ಕೇಅಂತರಂಗಕ್ಕೇ ಪಯಣತಾಸುತಾಸಿಗೂ ಹತ್ತಿಪ್ಪತ್ತುಝೇಂಕರಿಸಿ ಹಾರಾಡುವದೈತ್ಯಾಕಾರ ರಾಕೆಟ್ಟು!ನಭೋನಿಲ್ದಾಣಗಳಲಿ ಎಲ್ಲೆಲ್ಲೂಕಂಡರಿಯದ ಸೌಲಭ್ಯ ಸಂಪತ್ತು…ಕ್ಷೀರಪಥದ ಎಲ್ಲ ಗ್ರಹಕ್ಕೂಕ್ಷುದ್ರಗ್ರಹ ಒಂದೊದಕ್ಕೂಸಂಪರ್ಕದೊತ್ತಡಹಾಗೆಯೇ ವ್ಯೋಮಗರ್ಭದಅನಂತದಲ್ಲಿ ಅವಿತಕಂಡು ಕಾಣದೆಲ್ಲ ದೈತ್ಯ ಕಾಯಕ್ಕೂಕ್ಷಣಾರ್ಧದಲಿ ಚಿಮ್ಮಿ ಮಿಂಚಂತೆಭುಸುಗುಟ್ಟು ಹರಿದೋಡಿ ಮಾಯಸುರಿಮಳೆ ರಾಕೆಟ್ಟು…! ಸೂರ್ಯಕುವರ ವಸುಕಾಂತೆಇಬ್ಬರೂ ವೈವಾಹಿಕ ಮಧುಸ್ಪರ್ಷಕೆಹಾರಿದಲೆಲ್ಲ ವಿನೂತನ ಚಂದ್ರರೂಪಕಣ್ಣು ತುಂಬಿ ಚಲ್ಲುವ ಬೆಳದಿಂಗಳುಅಮರಾಮೃತ ಮೀರಿದಮೃದು ಮಧುರ ಮಧುಪಾತದಓಕುಳಿಯಲಿ ಈಜು ಈಜಾಟ… ***************************** ಕಂಠ ಮೂರ್ತಿ.

ಪ್ರೇಮವ್ಯೋಮಯಾನ…! Read Post »

You cannot copy content of this page

Scroll to Top