ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಲಂಕೇಶ-೭೮

ಲಂಕೇಶ-೭೮ ಸಿದ್ಧರಾಮ ಹೊನ್ಕಲ್ ಯಾರಿಗೂ ಏನನ್ನೂ ಬೇಡಲಿಲ್ಲ,ಬಯಸಲಿಲ್ಲ ಈ ಲಂಕೇಶಎಲ್ಲರಿಗೂ ಪಾಪಪ್ರಜ್ಞೆಯಾಗಿ ಕಾಡದೇ ಬಿಡಲಿಲ್ಲ ಈ ಲಂಕೇಶ ತಾನು ನಡೆದದ್ದು ಬರೀ ದಾರಿಯಲ್ಲ ಈ ಲಂಕೇಶನಿಗೆಅದು ರಾಜಮಾರ್ಗವೆಂದು ತೋರಿದನಲ್ಲ ಈ ಲಂಕೇಶ ಕನ್ನಡದ ಮೇರು ಲೇಖಕ ಮೇಲಾಗಿ ನಿರ್ಭೀತ ಪತ್ರಕರ್ತಶತಮಾನದ ದೃಷ್ಟಿಕೋನ ಬದಲಿಸಿದನಲ್ಲ ಈ ಲಂಕೇಶ ಕಥೆ,ಕವಿತೆ,ಪತ್ರಿಕೆ,ಸಿನೆಮಾ ನಿರ್ದೇಶನ ಹೀಗೆ ನಡೆದಂತೆಲ್ಲಾ ದಾರಿಗಳುನಡೆದ ದಾರಿಯಗುಂಟ ಬರೀ ಮುಳ್ಳುಗಳೇ ಹಸನಾದವಲ್ಲ ಈ ಲಂಕೇಶ ಯಾರಿಗೂ ಅಂಜಲಿಲ್ಲ ಅಳುಕಲಿಲ್ಲ ಯಾರ ಬಿಢೆಗೂ ಬೀಳಲಿಲ್ಲ“ಹೊನ್ನಸಿರಿ”ಕರ್ನಾಟಕಕ್ಕೆ ಹೊಸ ಮನ್ವಂತರ ಸೃಷ್ಟಿಸಿದರಲ್ಲ ಈ ಲಂಕೇಶ ******************************

ಲಂಕೇಶ-೭೮ Read Post »

ಇತರೆ

ಕಾದಂಬರಿ ಕುರಿತು ಬಂಡಾಯ ವ್ಯಾಸರಾಯ ಬಲ್ಲಾಳ ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ  ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ ‘ನನ್ನ ಪುಟ’ದಲ್ಲಿ?  ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ  ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ ‘ಬಂಡಾಯ’.  ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು ೩೦೦೮ರಲ್ಲಿ ನಿಧನರಾದ  ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳರು ಕರ್ನಾಟಕದ ಇತ್ತೀಚಿನ ಓದುಗರಿಗೆ ಬರಹಗಾರರಿಗೆ ತೀರಾ ಪರಿಚಿತರೇನಲ್ಲ. ಕಾರಣ ತಮ್ಮ ಬದುಕಿನ ಅರ್ಧ ಶತಮಾನಗಳಷ್ಟು ಕಾಲವನ್ನು ಅವರು ವಾಣಿಜ್ಯ ನಗರ ಮುಂಬೈನಲ್ಲಿಯೇ ಕಳೆದವರು. ಕನ್ನಡದ ಪ್ರಗತಿಪರ ನವ್ಯಬಂಡಾಯ ಸಾಹಿತ್ಯಗಳ ಪ್ರಭಾವದ ಸುತ್ತಿಗೆ ಸಿಕ್ಕಿಕೊಂಡೇ ಬೆಳೆದ ಬಲ್ಲಾಳರನ್ನು ಕನ್ನಡದ ಕೆಲವೇ ವೈಚಾರಿಕಪರ ಕಾದಂಬರಿಕಾರರ  ಸಾಲಿನಲ್ಲಿ ಅವರನ್ನ ತಂದು ನಿಲ್ಲಿಸಿದ್ದು ಅವರ ಬಂಡಾಯ ಕಾದಂಬರಿ. ನಿತ್ಯ ಬದುಕಿನ ನಿರಂತರ ವ್ಯವಸ್ಥೆಯಾದ ಶ್ರಮಿಕ ವರ್ಗ ಹಾಗೂ ಸಾಮ್ರಾಜ್ಯಶಾಹಿಗಳ ನಡುವಿನ ಸಂಘರ್ಷ, ಇದರಿಂದಾಗಿಯೇ ಹುಟ್ಟಿಕೊಂಡ ಕಾರ್ಮಿಕ ಸಂಘಟನೆಗಳು, ಶ್ರಮಿಕರ ಹಕ್ಕುಗಳರಕ್ಷಣೆಗಾಗಿಯೇ ಹುಟ್ಟಿಕೊಂಡ ಟ್ರೇಡ್ ಯೂನಿಯನ್ಗಳು ನಿಜವಾದ ಉದ್ಧೇಶಗಳನ್ನು ಮರೆತು ತಮ್ಮಬಲ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ನಡೆಸುವ ತೆರೆಯ ಮರೆಯ ತಂತ್ರ ಕುತಂತ್ರಗಳು,  ಇಂತ ಸಂಘಟನೆಗಳನ್ನು ಹಿಡಿತದಲ್ಲಿಡಲು ಸಾಮ್ರಾಜ್ಯಶಾಹಿಗಳ ಕಸರತ್ತು , ಇಂತಹ ಧನದೊರೆಗಳನ್ನು ಕಾಯುವದೇ ತಮ್ಮ ಕರ್ತವ್ಯವೆಂದು ಸದಾ ಉಧ್ಯಮಿಗಳ ಪರವಾಗಿ ನಿಂತು ಅವರು ಕೊಡುವ ಜಿನ್ ವ್ವಿಸ್ಕಿಗಳ ಹೊಳೆಯಲ್ಲಿ ಹರಿದುಹೋಗುವ ಪೋಲೀಸ್ ಇಲಾಖೆ ಹಾಗೂ ರಾಜಕೀಯದ ಕರಾಳ ಮುಖಗಳನ್ನು ಬಯಲು ಮಾಡುತ್ತ ನಡೆದ ವಸ್ತುನಿಷ್ಠ ಕ್ರತಿ ಬಂಡಾಯ       ಮುಂಬೈ ಎಂದೊಡನೆ ಅಮಿತಾಬಚ್ಛನ್ ಖಾನ್ ಕುಮಾರ ಖನ್ನಾಗಳು, ಶಾಪಿಂಗ್ ಕಾಂಪ್ಲೆಕ್ಸಗಳು, ಲೋಕಲ್ ಟ್ರೇನುಗಳು, ಜುಹುಬೀಚ್, ಗಗನಚುಂಬಿ ಕಟ್ಟಗಳು, ನೆಲ ಕಾಣದಷ್ಟು ವಾಹನಗಳು, ಕಾಮಾಟಿಪುರದ ಕೆಂಪುದೀಪದ ಕೆಳಗಿನ ಬದುಕಿಗಾಗಿ ಮಾನವೀಯತೆ ಉಳಿದುಕೊಂಡ ಎದೆಯ ಸುಯ್ಯು ಎಂದಷ್ಟೇ ಹರವಿಕೊಳ್ಳುವ ನಮ್ಮ ತಲೆಯೊಳಗೆ ಮುಂಬೈ ಎಂದರೆ ಶ್ರಮಜೀವಿಗಳು, ಅವರ ಕಷ್ಟ ಕೋಟಲೆಗಳು, ಅವರ ನಿತ್ಯದ ಬದುಕುಗಳು, ಅವರು ದುಡಿವ ಯಂತ್ರಗಳೊಳಗೆ ಸಿಕ್ಕು ಕಳೆದು ಹೋಗುವ ಕೈಕಾಲುಗಳು, ಕಂಪನಿಯ ಲಾಕೌಟ್ ಗಳು, ಉರಿಯದೇ ತಣ್ಣಗೆ ಕೂರುವ ಶ್ರಮಿಕರ ಒಲೆಗಳು,  ಸೋರುವ ಸಿಂಬಳದ ಮಗು, ಗೂರಲು ಕೆಮ್ಮಿನ ಮುದುಕರು, ಸದ್ದಿಲ್ಲದೇ ಕೊಲೆಯಾಗಿ ಹೆಣವಾಗಿ ಮಲಗುವ ಕಾರ್ಮಿಕ ಮುಖಂಡರುಗಳು, ಇದೇ ಮುಂಬೈನ ನಿಜವಾದ ಮುಖ ಅನ್ನುವಷ್ಟರ ಮಟ್ಟಿಗೆ ನಮ್ಮನ್ನು ತನ್ನೊಳಗೆ ಸಿಕ್ಕಿಸಿಕೊಳ್ಳುತ್ತದೆ ಬಲ್ಲಾಳರ  ಬಂಡಾಯ. ಕೌಟುಂಬಿಕ ಕಾದಂಬರಿಯಲ್ಲದ ನಾಯಕ ಕಳನಾಯಕರ ನಡುವಿನ ಕದನವಾಗದ ಒಂದು ವ್ಯವಸ್ಥೆಯ ವಿರುದ್ಧದ ವಾಸ್ತವಿಕತೆಯ ಸುತ್ತ ಎಳೆಎಳೆಯಾಗಿಸುತ್ತ ಹರವಿಕೊಂಡ ಕಥಾವಸ್ತು. ತಾನೇ ಸ್ವತಹ ಮದ್ದಿನಂಗಡಿಯ ಕಾರ್ಮಿಕನಾಗಿ ಎಪ್ಪತ್ತು ರೂಪಾಯಿ ಸಂಬಳದಲ್ಲಿ ಎರಡೇ ಕೋಣೆಯ ವಾಸ ಬೆಳಗಿನ ಎಂಟರಿಂದ ರಾತ್ರಿಯ ಎಂಟರವರೆಗಿನ ಕತ್ತೆ  ದುಡಿತದಿಂದಲೇ ಮೇಲೇರಿಬಂದು ಹತ್ತಾರು ಇಂಡಸ್ಟ್ರಿಗಳಗೆ ಮಾಲಕರಾದ ನಾಗೇಶ ಶರ್ಮಾ ಅವರ ಮಗ ಸತೀಶ ಶರ್ಮಾ ತಮ್ಮಲ್ಲಿ ದುಡಿಯುವ ಕಾರ್ಮಿಕರನ್ನು ಹಿಡಿತದಲ್ಲಿಡಲು ಮಾಡುವ ಕಸರತ್ತುಗಳೆಲ್ಲ ಅವರನ್ನು ಕಳನಾಯಕರಲ್ಲದೆಯು ಕಳನಾಯಕರ ಸಾಲಿನಲ್ಲಿ ನಿಲ್ಲಿಸುತ್ತದೆ.        ಡ್ರಾಯಿಂಗ್ ರೂಮಿನ ಮೂಲೆಯಲ್ಲಿರುವ ಸ್ವಂತದ ಬಾರ್, ಒಂದು ಕಪ್ ಚಹಾ ಹೊತ್ತು ಓಡಾಡುತ್ತ ಬರುವ ರಥ, ಹಾಸಿದ ಕಾರ್ಪೆಟ್ಟುಗಳ ಮೇಲೆ ಸದ್ದೇ ಕೇಳಿಸದ ಹೆಜ್ಜೆ, ಕಿಟಕಿಯ ಬೆಳಕನ್ನು ನಿಯಂತ್ರಿಸುವ ಬ್ಲೈಂಡ್ಸ,  ಪ್ರತಿಷ್ಠಿತರ ಸೊತ್ತಾದ ನರಿಮನ್ ಪಾಯಿಂಟ್ , ಬದುಕಲೆಂದೇ ಧಾವಿಸಿ ಬಂದು ಕಾಲುದಾರಿಗಳಲ್ಲಿ ಹೂಡುವ ನೂರಾರು ಅಗ್ಗಿಷ್ಠಿಕೆಗಳು, ಬಡಕಲು ಕೈಗಳಲ್ಲಿ ಕಾಯಿಸುತ್ತಿದ್ದ ರೊಟ್ಟಿಗಳು, ಝೋಪಡಿಯಲ್ಲಿ ಸಾಗುವ ಬದುಕು, ಜೋಪಡಿ ಪಕ್ಕದ ಕಾಲುದಾರಿಯಲ್ಲೇ ಮಲ ಮೂತ್ರವಿಸರ್ಜನೆಗೆ ಕೂಡ್ರುವ ಹೊಟ್ಟೆಯುಬ್ಬರಿಸಿದ ಮಕ್ಕಳು, ಜೋಪಡಿಯಲ್ಲಿ ಚಿಂದಿಯುಟ್ಟು ಅರೆನಗ್ನಳಾಗಿ ಮಲಗಿದ ತಾಯಿಯ ಎದೆಯ ಮೇಲೆ ಮಲಗಿ ಮೊಲೆ ಚೀಪುವ ಮಗು, ಮಗುವಿನ ತಲೆಗೂದಲಮೇಲೆ ಓಡಾಡಿ ಹೇನು ಹುಡುಕುವ ತಾಯ ಕೈ –ಹೀಗೆ ಬೊಟ್ಟು ಮಾಡದೆಯೇ ವ್ಯವಸ್ಥೆಯ ತಾರತಮ್ಯದ ವೈಪರೀತ್ಯಗಳನ್ನು ಓದುಗನಿಗೆ ಮನದಟ್ಟುಮಾಡುವ ಪ್ರೌಢಿಮೆ ಬಲ್ಲಾಳರದು.        ಸ್ನಾನ ಕಾಣದ ಮೈ, ಸಾಬೂನು ಕಾಣದ ಶರ್ಟ, ಹಳೆಸೀರೆ ನಿತ್ಯದ ಬೆವರು ಎಲ್ಲ ಕ್ಯೂ ಹಿಡಿದು ನಿಲ್ಲುವದು ಬದುಕಿಗಾಗಿ ಎನ್ನುತ್ತಲೇ ಓದುಗನೆದೆಗೆ ಹತ್ತಿರವಾಗುವ ಹೆಣ್ಣು   ಯಾಮೀ, ಯಾಮಿನಿ . ಶಾಕುಂತಲ ಮೃಚ್ಛಕಟಿಕ ನಾಟಕಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದವಳನ್ನು ಅವಳು ಅಭಿನಯ ಸಾಮ್ರಾಜ್ಞಿಯೆಂದು ಹೊಗಳಿ ಮೆಚ್ಚಿ ಮದುವೆಯಾದ ಪತಿ.  ಪೋಲಿಯೋ ಪೀಡಿತನಾಗಿ  ಹಾಸಿಗೆಹಿಡಿದ ಮೇಲೆ ದಾಂಪತ್ಯದಾರಂಭದ ಕೆಲದಿನದ ನಗು ಮಾತು ಸುತ್ತಾಟ ಸಿನೇಮಾ ಎಲ್ಲವೂ ಸುಳ್ಳು ಪತಿಯ ಹಾಸಿಗೆಯ ಪಕ್ಕದ ಕ್ರಚ್ ಒಂದೇ ಸತ್ಯ ಅನ್ನಿಸಿತೊಡಗಿದಾಗ ಹೆಂಡ್ ಲೂಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿದ ಹೆಣ್ಣು. ಭೋಸುಡಿ ಎಲ್ಲಿ ಹೋಗಿದ್ದೆ ಇಷ್ಟೊತ್ತು? ಯಾವ ಮಿಂಡನ ಜೊತೆಗೆ ಮಲಗಿದ್ದೆ ಮುಂಡೆ, ಹಲ್ಕಟ್ ರಂಡೆ, ಸೂಳೆಯೆಂದು ಅಪಾಂಗ ಅಸಹಾಯಕ ಪತಿಯಿಂದ ಅನ್ನಿಸಿಕೊಳ್ಳುತ್ತಲೇ  ಇಪ್ಪತ್ತೈದು ಪೈಸೆಯಗಲದ ಕುಂಕುಮ ಹಣೆಗಿಟ್ಟುಕೊಂಡು ನಗುನಗುತ್ತಲೇ ಪತಿಯ ಬೇಕು ಬೇಡಗಳನರಿತು ಪೂರೈಸುವ ಹೆಣ್ಣು ಅನಿರೀಕ್ಷಿತವಾಗಿಯೇ ಕಾರ್ಮಿಕ ಸಂಘಟನೆಯ ಸಂಪರ್ಕಕ್ಕೆ ಬರುತ್ತಾಳೆ.  ಲಾಲ್ ಬಾವುಟಾ ಜಿಂದಾಬಾದ್ ಎಂದಷ್ಡು ಸುಲಭವಲ್ಲ ಸಂಘರ್ಷದ ಹಾದಿ ಎನ್ನುವ ವಿಸ್ಮಯವನ್ನು ಒಳಗಿಟ್ಟುಕೊಂಡೆ ನಾಯಕ ರಾಜೀವನ ಸಾಂಗತ್ಯದಲ್ಲಿ  ಕೋಣ ತೀ ಬಾಯಿ? ರಾಜೀವಭಾಯಿ ಚಿ ಬಾಯಿ. ಕಸಲಿ ಬಾಯೀ? ಠೇವಲೇಲಿ (ಇಟ್ಟುಕೊಂಡವಳು)ಅನ್ನಿಸಿ ಕೊಳ್ಳುತ್ತಲೇ ಎಲ್ಲವನ್ನು ಕೊಡವಿಕೊಂಡು ಅವನ ವ್ಯಕ್ತಿತ್ವದ ಕರ್ತೃತ್ವ ಶಕ್ತಿ, ಪ್ರತಿಭೆ, ಸಾಂಘಿಕ ಸಮಾನತೆಯ ತಿಳುವಳಿಕೆ, ನಾಯಕತ್ವದ ಎಳೆಗಳನ್ನು ಒಂದೊಂದಾಗಿ ತನ್ನೊಳಗೆ ತುಂಬಿಕೊಂಡು ಮಜ್ದೂರ್ ಯೂನಿಯನ್ ನ ಪ್ರತಿಯೊಂದು ಸೂಕ್ಷ್ಮ ಕೊಂಡಿಗಳನ್ನು ಅರಿತು ಅದನ್ನು ಸಮರ್ಥವಾಗಿ ಮುನ್ನಡೆಸುವ ಮಟ್ಟಿಗೆ ಬೆಳೆದು ನಿಂತ ಸಾಮಾನ್ಯ ಹೆಣ್ಣು ಯಾಮಿನಿ ಮಹಿಳಾ ಸಾಬಲ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾಳೆ. ಕಟ್ಟುವ ಕೆಲಸ ಮಾಡುವವರು ಬುಲ್ಡೋಜರ್ ಕಡೆ ನೋಡುವದಿಲ್ಲ ಎನ್ನುತ್ತಲೇ ಕಾರ್ಯ ಕಾರಣಗಳ ಒಳ ಹೊರಗಿನ ಸೂಕ್ಷ್ಮಗಳನ್ನರಿತು ಪೂರ್ತಿಯಾಗಿ ತನ್ನನ್ನು ಅದರಲ್ಲಿ ತೊಡಗಿಸಿಕೊಂಡು ಅವಳು ಕಟ್ಟಿದ್ದು ವ್ಯವಸ್ಥಿತ ವ್ಯವಸ್ಥೆಗಳನ್ನೇ ಕೆಡಹುವ ವ್ಯವಸ್ಥೆ.        ನಾಯಕ ರಾಜೀವನದು ಇಬ್ಬಗೆಯ ವಿಚಾರಗಳನ್ನು ಹೊಂದಿದ ದ್ವಂದ್ವ ವ್ಯಕ್ತಿತ್ವ. ವ್ಯವಸ್ಥೆಯ ವಿರುದ್ಧ ಸಿಡಿದು ನಿಂತು ತಮ್ಮ ಹಕ್ಕಿಗಾಗಿ ಹೋರಾಡದವರನ್ನೆಲ್ಲ ಬಾಂಬು ಹಾಕಿ ಕೊಲ್ಲಬೇಕು, ಬೆಂಕಿ ಹಾಕಬೇಕು, ಜೋಪಡಿಗಳಮೇಲೆ ಬುಲ್ಡೋಜರ್ ಹಾಯಿಸಿ ನೆಲಸಮ ಮಾಡಬೇಕೆಂದುಕೊಳ್ಳುತ್ತ ವ್ಯವಸ್ಥೆಯ ತಾರತಮ್ಯಕ್ಕೆ ಆಕ್ರೋಶದ ಬೆಂಕಿಯನ್ನ ಎದೆಯಲ್ಲಿಟ್ಟುಕೊಂಡು, ನಿತ್ಯ ಒಳಗೊಳಗೇ ಸುಡುತ್ತ, ಉಳ್ಳವರಿಂದ ಕಸಿದುಕೊಳ್ಳುವ ತಾಕತ್ತಿನವರನ್ನು ಕಂಡು ವಿಚಿತ್ರ ಸುಖವನ್ನ ಅನುಭವಿಸುತ್ತ ತಾರತಮ್ಯದ ವ್ಯವಸ್ಥೆಯನ್ನು ಒಪ್ಪಿಕೊಂಡವರನ್ನು ದ್ವೇಷಿಸುತ್ತ, ಬಲಕರಗಿ ಸೋಲುವವರನ್ನು ಕಂಡು ಹೇಸುತ್ತಲೇ ಅವರಿಗಾಗಿ ಮಿಡಿವ ವಿಚಿತ್ರ ವ್ಯಕ್ತತ್ವದ ರಾಜೀವ. ಪೂರ್ವಾಶ್ರಮದ ಯೋಚನೆಗಳನ್ನ  ಅಂಕೆಯಲ್ಲಿ ಬಿಗಿದಿಟ್ಟುಕೊಂಡು ಕಳೆದ ಹತ್ತು ವರ್ಷಗಳಿಂದ ಕಾರ್ಮಿಕ ಸಂಘಟನೆಯ ಆಧಾರವಾಗಿ ಯಾವುದೇ ಸ್ವಾರ್ಥವಿಲ್ಲದೇ  ನಿರಂತರ ದುಡಿಯುವವನು. ಹತ್ತುವರ್ಷಗಳಿಂದ ಎಂಟು ಲಕ್ಷ ಕಾರ್ಮಿಕರಿಗೆ ನಾಯಕನಾಗಿ ಆಮಚಿ ರಾಜೀವ್ ಭಾಯಿ, ರಾಜೋಬಾ, ಅಣ್ಣಾಸಾಹೇಬ್, ಸಾಥಿ ರಾಜೀವ್ ಎನ್ನಿಸಿಕೊಂಡ ರಾಜೀವ ಕೈಯ್ಯಿಟ್ಟಲೆಲ್ಲೂ ಅಪಜಯ ಕಂಡರಿಯದ  ಧೀರ. ತನಗಾಗಿ ಏನನ್ನೂ ಬಯಸದೇ ಲೋಕಲ್ ಟ್ರೇನ್ ಗಳಲ್ಲಿ ಪ್ರಯಾಣಿಸುತ್ತ ,ಕಾರ್ಮಿಕ ಬಸ್ತಿಯ ಬಳಸು ದಾರಿಗಳಲ್ಲಿ ಕಾಲ್ನಡಿಗೆಯಲ್ಲೇ  ಸಂಚರಿಸುತ್ತ, ಮೈಲುಗಟ್ಟಲೆ ನಡೆದು ಬೋಯಿವಾಡಾದ ರಂಗೇರಿಚಾಳ್ನ ಒಂದೇ ಕೋಣೆಯ ಮನೆ ಸೇರುವದ ಪ್ರೀತಿಸುವ ರಾಜೀವ  ಓದುಗನೆದೆಗೆ ತೀರ ಹತ್ತಿರ ಬರುವ ವ್ಯಕ್ತಿತ್ವ. ನಕ್ಸಲ್ ಆಗಿದ್ದು ಬೋರಿವಂಕದಲ್ಲಿ ಪೋಲೀಸರೊಂದಿಗಿನ ಚಕಮಕಿಯಲ್ಲಿ ಗುಂಡು ತಗಲಿ ಸತ್ತನೆಂದು ದಾಖಲಾದ ರಾಜಶೇಖರ ಸೋಮಯಾಜಲು ವಿಕಾರವಾಗಿದ್ದ ಮುಖಕ್ಕೆ ಪ್ಲಾಷ್ಟಿಕ್ ಸರ್ಜರಿ ಮಾಡಿಸಿಕೊಂಡು ರಾಜೀವನೆಂಬ ಹೊಸ ಹೆಸರಿನೊಂದಿಗೆ ತನ್ನ ಪೂರ್ವಾಶ್ರಮಕ್ಕೆ ವಿಮುಖನಾಗಿ ಮುಂಬೈಗೆ ಬಂದು  ಅಸಾದ್ಯವಾದದನ್ನು ಸಾಧಿಸಿದ್ದ. ಕಾರ್ಮಿಕರ ಸಾವಿಗೆ ಹಣ ಹೆಂಡ ಹಾದರವೇ ಕಾರಣವೆಂಬುದು ಸುಳ್ಳಾಗಿ, ಟ್ರೇಡ್ ಯೂನಿಯನ್ ಲೀಡರುಗಳು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ಯಾರಿಗಾಗಿ ಸಂಘಟನೆಯೋ ಅವರನ್ನೇ ಕೊಲ್ಲಸುವ ಮಟ್ಟಕ್ಕೆ ಬೆಳೆದು ನಿಂತಿದ್ದನ್ನ ಕಂಡು,  ಶ್ರೀಕಾಕುಲಂ ವಾರಂಗಲ್  ಖಮ್ಮಾಮ್ ಗಳ ಚಟುವಟಿಕೆಗಳಿಗೆ ಹೇಸಿ ಅಲ್ಲಿ ಮನುಷ್ಯರಾಗಿ ಬದುಕುವದನ್ನು ಕಲಿಯಲು ಯಾರಿಗೂ ಸಾಧ್ಯವಾಗಿಲ್ಲ ಎಂದುಕೊಂಡು, ದಾರಿ ಬದಲಿಸಿ ಇಲ್ಲಿ ಬಂದವ ತಾನು ಕಟ್ಟಿದ ಸಂಘಟನೆಯ ಸರ್ವ ಜವಾಬ್ದಾರಿಗಳನ್ನು ಯಾಮಿನಿಗೆ ಒಪ್ಪಿಸಿ  ಶಕ್ತಿ ಪ್ರವಹಿಸುವದೇ ಬಂದೂಕಿನ ನಳಿಕೆಯ ಮೂಲಕ ಎನ್ನುತ್ತ ಮುಂಬೈಗೆ ಬೆನ್ನುಮಾಡಿ ಕಪ್ಪು ಕತ್ತಲೆಯಲ್ಲಿ ಕರಗಿ ಮತ್ತಲ್ಲಿಗೇ ಮುಖ ಮಾಡಿದನೆಂಬುದಕ್ಕೆ  ಸತೀಶ್ ಶರ್ಮಾನ ಕಲ್ಯಾಣಿ ಕೆಮಿಕಲ್ಸ ಗೆ ಹೊತ್ತಿಕೊಂಡ ಬೆಂಕಿ  ಪುಷ್ಟಿಯನ್ನು ನೀಡುತ್ತದೆ. ಓದುಗನೆದೆಯಲ್ಲಿ ರಾಜೀವ್ ಭಾಯಿ ದುರಂತ ನಾಯಕನಾಗಿ ನಿಂತು ಹೋಗುತ್ತಾನೆ.  ಎಲ್ಲ ವ್ಯವಸ್ಥೆಯಲ್ಲೂ ಹಿಂಸೆಯ ಬೀಜ ಅಡಗಿದೆ  ಎನ್ನುವದು ಓದುಗನ ಮೈಮುಳ್ಳಾಗಿಸುವ ಸತ್ಯ.      ಕಾದಂಬರಿಯಲ್ಲಿ ಅಂಕದಂಗಳಕ್ಕೆ ಬರದೇ ನೇಪಥ್ಯದಾಚೆಯೇ ನಿಂತು ನಿಜವಾದ ಖಳನಾಗಿ   ಓದುಗರ ಕೆಂಗಣ್ಣಿಗೆ ಸಿಕ್ಕುವದು ತನ್ನ ಸ್ವಾರ್ಥಕ್ಕೆ ಕಾರ್ಮಿಕರಲ್ಲಿ ಭಯವನ್ನು ಹುಟ್ಟಿಸುವದಕ್ಕಾಗಿ ಕಾರ್ಮಿಕರನ್ನೇ ಕೊಲ್ಲುವ ಕುಟಿಲ ಕ್ರೂರ ಬಾಪು ದೇಶಪಾಂಡೆಯೆಂಬ ಯೂನಿಯನ್ ಲೀಡರ್. ಮುಷ್ಕರ ದಂಗೆ ಕೆಂಪು  ಕೊಲೆ ರಕ್ತವೆಂದು ಎದೆ ಬಿಗಿವಾಗೆಲ್ಲ ಹಿತವಾದ ತಂಗಾಳಿಯಾಗಿ ಸುಳಿಯುವ ವ್ಯಕ್ತಿತ್ವ ಅಪಾಂಗ ಕಲ್ಯಾಣದ ಮಕ್ಕಳನ್ನೂ ನಿಜವಾಗಿ ಪ್ರೀತಿಸುವ ಸತೀಶ ಶರ್ಮಾನ ಹೆಂಡತಿ ಲಕ್ಷ್ಮಿಯದು.  ನಯನಾ, ಗೋದುಮಾಂಶಿ, ಪಾಂಡು ಸುತಾರ್, ಮಾನೆ ರಘು ಪಾಟಣ್ಕರ್ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಾದರೂ ಬಹುಕಾಲ ನೆನಪಲ್ಲಿ ನಿಲ್ಲುವ ಮುಖಗಳು. ಕನ್ನಡದ ನಡುವೆ ಕಂಪಾಗಿ ಕುಸುರಿಗೊಂಡ (ಆಣಿ, ಆಮ್ಚೇ,ತಸ್ಸ ಕಾಯ್,ಫುಡೆ ಕಾಯ್, ಬೆವಡಾ, ಮಲಾ,ಆಲಾ ) ಮರಾಠಿ ಕಮ್ಮಗನಿಸುತ್ತದೆ. ಕಾದಂಬರಿಯಲ್ಲಿ ಮತ್ತೆ ಮತ್ತೆ ಕಣ್ಣೆದುರು ಬರುವ ಹಾರ್ನಿಮನ್ ವೃತ್ತ ಬಾಂದ್ರಾ ಗಿರಗಾಂ ಭೋಯಿವಾಡಾ ಚರ್ಚಗೇಟ್ ಥಾಣೆ ಬೇಲಾಪುರ ಪನ್ವೇಲ್ ಪೋಕ್ರಾನ್ ವಾಡಿಬಂದರ್ ಕಾಳಾಚೌಕಿ ಭಿವಾಂಡಿವಾಲಾಚಾಳ್ ಕಾರ್ಮೈಕಲ್ ದಹಾನುಕರ್ ರಂಗೇರಿಚಾಳ್ ನಾವು ಕಂಡರಿಯದ ಮುಂಬೈನ  ಅದೆಷೋಸ್ಥಳ ಹಾಗೂ ರಸ್ತೆಗಳು ನಮ್ಮ ಆಜುಬಾಜು ಬಂದು ಕೂತಂತೆ ಹತ್ತರವಾಗುತ್ತವೆ.    ಕೇಂದ್ರ ಸಾಹಿತ್ಯ ಅಕೆಡಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,ಹಾಗೂ ಮಹಾರಾಷ್ಟ್ರ ಸರ್ಕಾರದಿಂದ ಪ್ರಶಸ್ತಿ ಪುರಸ್ಕಾರಗಳನ್ಬು ಪಡೆದ ಕೃತಿ, ವಾಸ್ತವಿಕ  ನೆಲೆಯಲ್ಲಿ ಮುಂಬೈನ ಕಾರ್ಮಿಕ ಸಮಸ್ಯೆಯ ರೌದ್ರ ಮುಖಗಳನ್ನು ಸಮರ್ಥವಾಗಿ ತೆರೆದಿಟ್ಟು, ತನಗೆ ಆಸರೆಯಾದ ಮುಂಬೈನ ನೀರು ಗಾಳಿ ಮಣ್ಣಿಗೆ ಋಣ ಸಂದಾಯದ ಸಾರ್ಥಕ ಹೆಜ್ಜೆ ‘ಬಂಡಾಯ’. ಹಾಗೆಯೇ ಕನ್ನಡ ಸಾಹಿತ್ಯ ಭಂಡಾರಕ್ಕೊಂದು ಶ್ರೇಷ್ಠ ಕೊಡುಗೆಯಾಗಿದೆ. ******************************** ಪ್ರೇಮಾ ಟಿ.ಎಂ.ಆರ್

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಋಗ್ವೇದ ಸ್ಫುರಣ ಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿ ಋಗ್ವೇದ ಸ್ಫುರಣಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿಪ್ರ : ಅಭಿನವ ಪ್ರಕಟಣೆಯವರ್ಷ : ೨೦೧೭ಬೆಲೆ : ರೂ.೨೦೦ಪುಟಗಳು : ೧೬೦ ಪ್ರಾಚೀನ ಭಾರತದ ಅತ್ಯಂತ ಪ್ರಮುಖ ಭಾಷಿಕ ದಾಖಲೆಯಾದ ಋಗ್ವೇದ ಸೂಕ್ತಗಳಲ್ಲಿರುವ ಋಕ್ಕುಗಳೊಳಗಿನ ಬಿಡಿ ಪದ್ಯಗಳ  ಸರಳ ಅನುವಾದ ಈ ಕೃತಿಯಲ್ಲಿದೆ.  ಮೂಲ ಸಂಸ್ಕೃತದಲ್ಲಿರುವ ಈ ಪದ್ಯಗಳನ್ನು  ಆರಂಭದಲ್ಲಿ ಸೂಕ್ತ ವ್ಯಾಖ್ಯಾನಗಳ ಮೂಲಕವೂ ನಂತರ ತಿಳಿಗನ್ನಡದಲ್ಲಿ ವ್ಯಾಖ್ಯಾನಗಳಾಗಿಯೂ ನೀಡಲಾಗಿದೆ.  ಋಗ್ವೇದದ ಋಕ್ಕುಗಳು ಪ್ರಕೃತಿಯ ಮಹಾಶಕ್ತಿಗಳು.  ವಾಸ್ತವದ ನೆಲೆಯಲ್ಲಿ ಗ್ರಹಿಸುವಂಥವು.  ವಿಶ್ವಭ್ರಾತೃತ್ವವನ್ನು ಪ್ರೇರಿಸುವ  ಭಾರತೀಯ ಸಂಸ್ಕೃತಿಗೆ ಋಗ್ವೇದವು ಉಗಮ ಸ್ಥಾನ.  ಉಪನಿಷತ್ತುಗಳಲ್ಲಿ ವಿಸ್ತೃತವಾಗಿ ಚರ್ಚಿತವಾಗಿರುವ ಅದ್ವೈತ ತತ್ವವು  ಮೊದಲು ಕಾಣಿಸಿದ್ದು ಋಗ್ವೇದದಲ್ಲಿ.  ಪರಸ್ಪರ ಪ್ರೀತಿ-ಪೋಷಣೆಗಳು ಜಗತ್ತಿನ ಕಲ್ಯಾಣಕ್ಕೆ ಅಗತ್ಯ ಮತ್ತು ವಿಶ್ವ ಸಾಮರಸ್ಯವೇ ತಮ್ಮ ಏಕೈಕ ಗುರಿ ಎಂದು ತಿಳಿದವರು ವೇದಕಾಲದ ಋಷಿಗಳು.  ಕೇವಲ ಮಾನವನ ಸುಖವಲ್ಲ ವಿಶ್ವ ನಿಯಮದ ಗುರಿ.  ಬದಲಾಗಿ ಅದು ಸಕಲ ಚರಾಚರ ಜೀವಿಗಳು ಅಪ್ರತಿಹತವಾದ ಋತದ ಮೂಲಕ ಪಡೆಯುವ  ಆನಂದವಾಗಿದೆ. ಈ ವಿಶ್ವದಲ್ಲಿ ಗೆಲ್ಲುವುದು ಋತವೊಂದೇ.  ಅನೃತವಲ್ಲವೆಂದು ಋಗ್ವೇದ ಹೇಳುತ್ತದೆ.  ಈ ಋತಕ್ಕೆ ಯಾವುದು ಅಡ್ಡ ನಿಲ್ಲುತ್ತದೆಯೋ ಅದು ಆಸುರೀ ಶಕ್ತಿ. ಅಂಥ ಶಕ್ತಿಗಳ ವಿರುದ್ಧ ವೇದಕಾಲದ ಋಷಿಗಳು ಅನವರತ ಹೋರಾಡಿದರು.     ಋಗ್ವೇದ ಸ್ಫುರಣದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಆಯ್ದ ಸೂಕ್ತಗಳ ಕನ್ನಡ ರೂಪದ ಜತೆಗೆ ಸರಳ ವ್ಯಾಖ್ಯಾನಗಳ ಮೂಲಕ ಚಿಕ್ಕ ಮಕ್ಕಳಿಗೂ ಅರ್ಥವಾಗುವಂಥ ವಿವರಣೆಗಳಿವೆ. ಎರಡನೆಯ ಭಾಗದಲ್ಲಿ ಬೇರೆ ಬೇರೆ ಸಂದರ್ಭಗಳನ್ನು ಸೂಚಿಸುವಂಥ ಬಿಡಿ ಕವಿತೆಗಳಿವೆ.  ವೇದಕಾಲದಲ್ಲಿ ಜನಜೀವನ ಹೇಗಿತ್ತು,  ಸಾಮಾಜಿಕ ರೀತಿ-ನೀತಿಗಳು ಮತ್ತು ಪದ್ಧತಿ-ಪರಂಪರೆಗಳು ಹೇಗಿದ್ದವು ಎಂಬುದರ ಚಿತ್ರಣವನ್ನು ಈ ಕವಿತೆಗಳು ನೀಡುತ್ತವೆ. ಯುದ್ಧಭೂಮಿಯಲ್ಲಿ ಯೋಧನ ಚಿತ್ರ, ಮುಪ್ಪು ಮತ್ತು ಮರಣ, ದಾಂಪತ್ಯ ತತ್ವ, ಮಳೆಗಾಲದಲ್ಲಿ ಕಪ್ಪೆಗಳು, ಕಳೇಬರವನ್ನು ಕುರಿತು, ಪತಿಯನ್ನು ಕಳೆದುಕೊಂಡ ಪತ್ನಿ, ಕಸಬುಗಾರಿಕೆ,  ಕಾಳ್ಗಿಚ್ಚು, ಸವತಿ ಸಂಬಂಧ, ಶ್ರದ್ಧೆ ಮೊದಲಾದ ಕವಿತೆಗಳ ವಸ್ತುವನ್ನು ನೋಡಿದರೆ ಅವು ಆಧುನಿಕ ಕವಿತೆಗಳಿಗಿಂತ ಭಿನ್ನವಾಗಿ ಕಾಣುವುದಿಲ್ಲ.  ವೇದಕಾಲದ ಸಾಮಾಜಿಕ ಚಿಂತನೆಗಳು, ಎಷ್ಟರ ಮಟ್ಟಿಗೆ ಜೀವಪರವಾಗಿದ್ದವು ಎಂಬುದನ್ನು ಈ ಕವಿತೆಗಳು ನಿರೂಪಿಸುತ್ತವೆ.     ಕಾವ್ಯದ ಅನುವಾದಕ್ಕೆ ವಿಶೇಷ ಮಹತ್ವವಿದೆ. ಮೂಲದ ಛಂದಸ್ಸನ್ನೂ ಅಲಂಕಾರಗಳನ್ನೂ ಅರ್ಥಪೂರ್ಣವಾಗಿ ಉಳಿಸಿಕೊಳ್ಳುವುದು ಅನುವಾದಕರ ಸೃಜನಶಕ್ತಿಗೆ ಒಂದು ಬಹಳ ದೊಡ್ಡ ಸವಾಲು. ಇಲ್ಲಿ ಅನುವಾದಕರೂ ಸ್ವತಃ ಅನುಭವಿ ಕವಿಗಳೂ ಆದ ಹೆಚ್.ಎಸ್.ಆರ್. ಅವರು ಈ ಸವಾಲನ್ನು ಗೆಲ್ಲುವಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ.  ಅನುವಾದಿತ ಕವಿತೆಗಳನ್ನೂ ಭಾವಗೀತೆಗಳಾಗಿ ಹಾಡುವಷ್ಟು ಛಂದೋಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ********************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನರಾಯ ಮಲ್ಲ ಅಸಹಾಯಕತೆಯ ಬೇರಿಗೆ ನೀರೆರೆಯಬೇಡಿಮನಸ್ಸಿನ ಆತ್ಮವಿಶ್ವಾಸವನ್ನು ಚಿವುಟಬೇಡಿ ಕರುಣೆ-ಕನಿಕರದಿಂದ ಒಡಲ ಹಸಿವು ನೀಗದುಸಹಾನುಭೂತಿಯ ಜಾಲದಲ್ಲಿ ಸಿಲುಕಬೇಡಿ ಪಾಪ ಎಂದು ಪಾಪಿ ಎನ್ನುವರು ಜಗದೊಳಗೆಸಾಧನೆಯ ಶಿಖರದಿಂದ ಜಾರಿ ಬೀಳಬೇಡಿ ಕಾರಣಗಳು ಇತಿಹಾಸವನ್ನು ನಿರ್ಮಿಸುವುದಿಲ್ಲನೋವನ್ನು ಪ್ರದರ್ಶನದ ವಸ್ತು ಮಾಡಬೇಡಿ ‘ಮಲ್ಲಿ’ ಮಲ್ಲಿಗೆಯ ಮೊಗ್ಗನ್ನು ಪ್ರೀತಿಸುವರೆಲ್ಲರುಅನ್ಯರ ಕೈಯಲ್ಲಿ ಆಡುವ ಗೊಂಬೆ ಆಗಬೇಡಿ ***************************************

ಗಝಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಮುತ್ತು ಬಳ್ಳಾ ಕಮತಪುರ ಮಾತನಾಡುವದೇ ಬಿಟ್ಟಿರುವೆ ನುಡಿಗಳು ತಿರುಚಲಾಗುತ್ತಿದೆ |ಕೇಳಿಸಿಕೊಳ್ಳುವುದೇ ಬಿಟ್ಟಿರುವೆ ಸುಳ್ಳುಗಳು, ವಿಜೃಂಭಿಸಲಾಗುತ್ತಿದೆ || ನೋಡುವುದೇ ಬಿಟ್ಟಿರುವೆ ಬೆಂಕಿ ಹಚ್ಚುವುದು ಚಿತ್ರಿಸಲಾಗುತ್ತಿದೆ |ಪ್ರಶ್ನಿಸುವುದೇ ಬಿಟ್ಟಿರುವೆ ನಾಲಿಗೆಗೆ ಬೀಗ ಹಾಕಲಾಗುತ್ತಿದೆ || ಪುಸ್ತಕ ಓದುವದೇ ಬಿಟ್ಟಿರುವೆ ಕಂದಕ ಉಂಟು ಮಾಡುವುದೇ ಮುನ್ನೆಲೆಗೆ |ತಿನ್ನುವದೇ ಆತಂಕ ಹೊಲಗಳಲ್ಲಿ ವಿಷವನ್ನು ಬಿತ್ತಿ ಬೆಳೆಯಲಾಗುತ್ತಿದೆ || ಕಲಾ ಲೋಕದಲ್ಲಿ ಬಣ್ಣದ,ಬಾಚಣಿಗೆಯ ಮಂದಿಯೇ ತುಂಬಿಕೊಂಡಿದ್ದಾರೆ |ಎಲ್ಲಾ ಉಚಿತವಾಗಿ ವಿತರಣೆ ಮನುಜ ಪ್ರೀತಿ ಪೇಟೆಯಲಿ ಬಿಕರಿಯಾಗುತ್ತಿದೆ || ಜೀವನ ಪುಷ್ಪ ಮೊಗ್ಗಾಗಿ ಅರಳುವ ಕಾಲದಲಿ ಬಾಗಿಸಬಹುದು ಮುತ್ತು |ಪ್ರೀತಿ ತುಂಬಿದ ಮಾರ್ಗದರ್ಶನ ಈಗೀಗ ಎಳೆಯ ಮನಸಿಗೆ ಮಿಥ್ಯವಾಗುತ್ತಿದೆ | **********************************

ಗಝಲ್ Read Post »

ಕಾವ್ಯಯಾನ

ಬಿಂದಿಗೆ ಕಳೆದಿದೆ

ಕವಿತೆ ಬಿಂದಿಗೆ ಕಳೆದಿದೆ ಸುಮಾವೀಣಾ ನಂಬಿಕೆಯೆಂಬೋ ಬಿಂದಿಗೆ ಕಳೆದಿದೆಕಳ್ಳನ ಮನೆಗೆ ಮಹಾಕಳ್ಳ ಹೊಕ್ಕಂತೆ!ಅಪನಂಬಿಕೆಯ ಮೇಲೆ ಅವಿಶ್ವಾಸ ಹೊಕ್ಕಿದೆನಂಬಿಕೆ ಕಳೆದರೂ ಕಳೆಯಿತುಕಳೆದು ಹೋಗುವ ಮುನ್ನ ಹೇಳಲೇಬೇಕಿತ್ತು!ಹೇಗೆ ?ಹೇಳುವೆ! ನಾ ಮರೆತಿದ್ದೆ ನೀ ಕಳ್ಳ ತಾನೆ!ನಂಬಿಕೆ ಮೂರು ಕಾಸಿನದ್ದೆ?ನಿನಗಿದ್ದರೂಇರಬಹುದು!ಇರಬಹುದು!ಮೂರು ಕಾಸಾದರೂ ಕಾಸೇ ತಾನೇಆತ್ಮಘಾತಕತನ ಮಾಡಲುಬಾರದುಬಿಂದಿಗೆ ಕಳೆದಿದೆ! ಬಿಂದಿಗೆ ಕಳೆದಿದೆ!ಕದ್ದು ಹೋಗಿದೆ ನಂಬಿಕೆತಿರುಗಿ ಬಂದರೂ ವಿಶ್ವಾಸವಲ್ಲದ ನಂಬಿಕೆಹೋದರೆ ಹೋಗಲಿ ಬಿಂದಿಗೆಒಳಿತೇ ಆಯಿತುನಿನ್ನ ವ್ಯಘ್ರತೆ, ರಾಕ್ಷಸತ್ವ ದರ್ಶನವಾಯಿತಲ್ಲ! *******************************

ಬಿಂದಿಗೆ ಕಳೆದಿದೆ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಪ್ರತಿಮಾ ಕೋಮಾರ ನೆನಪುಗಳನ್ನೆಲ್ಲ ಕಣ್ರೆಪ್ಪೆಯಲಿ ಸೆರೆಯಾಗಿಸಿದ್ದೇನೆ ಕುಕ್ಕಬೇಡ ನೋಡುನಿರೀಕ್ಷೆಗಳನ್ನೆಲ್ಲ ಅಟ್ಟ ಏರಿಸಿದ್ದೇನೆ ಇಳಿಸಬೇಡ ನೋಡು ಒಳಗುದಿಯ ಒಳಗೇ ಇಟ್ಟು ಕುದಿಯುವುದೇಕೆ? ಹೇಳಿಬಿಡುಕೇಳಲೆಂದೆ ಎದೆಗಿವಿಯನ್ನು ತೆರೆದಿದ್ದೇನೆ ಮುಚ್ಚಿಡಬೇಡ ನೋಡು ಎನ್ನೆಲ್ಲ ಭಾವಗಳ ಚಿತ್ರ ಶಾಲೆಗೆ ಚಿತ್ತಾರಿಗನಾದವನು ನೀನುನಿನ್ನಾಸರೆಯಲಿ ನಲಿವ ರಾಶಿ ಹಾಕಿದ್ದೇನೆ ತೂರಬೇಡ ನೋಡು ತಪ್ಪನ್ನು ಕ್ಷಮಿಸಿ ಮುಂದಡಿ ಇಟ್ಟಾಗಲೇ ಸಾಗುವುದು ಪಯಣಘಾತದ ಭೂತವನ್ನೆಲ್ಲ ಮರೆತು ಬಿಟ್ಟಿದ್ದೇನೆ ಕೆದಕಬೇಡ ನೋಡು “ಪ್ರತಿ” ಯ ನಿಗ೯೦ಧ ಬಾಳು ಬಂಜರು ಭೂಮಿಗೆ ಸಮಾನಕನಸಗನ್ನಡಿಯ ಜೋಪಾನ ಮಾಡಿದ್ದೇನೆ ಒಡೆಯಬೇಡ ನೋಡು ********************************

ಗಝಲ್ Read Post »

ಇತರೆ

ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಶತಮಾನದ ಶ್ರೇಷ್ಠ ಸಾಹಿತಿ ಎಂದು ಕುವೆಂಪು ಅವರನ್ನು ಕರೆದರೂ ಯಾಕೋ ಅವರ  ಬಗ್ಗೆ ತೀರ ಕಡಿಮೆಯಾಯ್ತು ಅನ್ನಿಸುತ್ತದೆ . ಯಾಕಂದ್ರೆ ಅವರ ಮಹದ್ ಬೃಹತ್ ಗ್ರಂಥ “ಮಲೆಗಳಲ್ಲಿ ಮದುಮಗಳು” ಇಂದು ನನ್ನ ಕೈಯಲ್ಲಿದ್ದು ತನ್ನನ್ನು ತಾನೇ ಓದಿಸಿಕೊಳ್ಳುತ್ತಿದೆ. ಹೆಸರಾಂತ ಸಾಹಿತಿ ದೇವನೂರು ಮಹಾದೇವ ಅವರ ಎದೆಯಾಳದ ಪ್ರಶ್ನೆಯೊಂದನ್ನು ಇಲ್ಲಿ ಇಡುವ ಮನಸ್ಸಾಗುತ್ತದೆ “ಕನ್ನಡದಲ್ಲಿ ಅತ್ಯುತ್ತಮ ಎನ್ನಿಸಿಕೊಂಡ ನಾಲ್ಕಾರು ಕೃತಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಕುವೆಂಪುರವರ  ಮದುಮಗಳನ್ನು ಇನ್ನೊಂದರಲ್ಲಿಟ್ಟರೆ ಗುಣದಲ್ಲೂ ಗಾತ್ರದಲ್ಲೂ ಮಲೆಗಳಲ್ಲಿ ಮದುಮಗಳು ಹೆಚ್ಚು  ತೂಗುತ್ತದೆ, ಈ ತಕ್ಕಡಿಗೆ ಏನಾಗಿದೆ? ಎಂದು ವಿದ್ಯಾರ್ಥಿಯಾಗಿದ್ದಾಗ ಕೇಳುತ್ತಿದ್ದೆ . ಈಗಲೂ ನೀವು ನನ್ನ ಪ್ರಬುದ್ಧ ಅಂದುಕೊಳ್ಳುವದಾದರೆ ತಕ್ಕಡಿಗೆ ಏನಾಗಿದೆ ? ಎಂದು ಅದೇ ಪ್ರಶ್ನೆ ಕೇಳುತ್ತೇನೆ.” ಎನ್ನುತ್ತಾರೆ ಹೆಸರಾಂತ ಮಾನವೀಯ ಸಾಹಿತಿ ದೇವನೂರು ಮಹಾದೇವ.  ಬಹುಷಃ ಮಲೆಗಳಲ್ಲಿ  ಮದುಮಗಳು ಓದಿದ ಎಲ್ಲರ ಎದೆಯಲ್ಲಿ ಎದ್ದುನಿಲ್ಲುವ ಪ್ರಶ್ನೆ ಇದು. ಬರೀ ಕಾದಂಬರಿಯಲ್ಲ ಇದು  ಮಲೆನಾಡಿನ ಸಮಸ್ತವನ್ನೂ ಒಳಗೊಂಡ ಮಲೆನಾಡ  ಜೀವಕೋಶ ಅಂದುಕೊಂಡರೆ ಒಳಿತು. ಮಲೆನಾಡ ಕಾನು ಕಾಡು ಬೆಟ್ಟ ಬಯಲು ಮಳೆ ನೀರು ನದಿ ಬದುಕು ಬವಣೆ ಏನುಂಟು ಏನಿಲ್ಲ ಇದರಲ್ಲಿ?. ಕಾಲೇಜು ದಿನಗಳಲ್ಲಿ  ಲೈಬ್ರರಿಯಿಂದ ತಂದು ಅಲ್ಲಲ್ಲಿ ಗಿಬರಾಡಿ ಕುಡಿಮೀಸೆ ಕೆದರಿದ ಕ್ರಾಪು ಗುಳಿಗೆನ್ನೆ ನವಿರು ಸೀರೆಗಾಗಿ ಹುಡುಕಾಡಿ  ಮದುಮಗಳಲ್ಲಿ ಅದೇನೂ ಕಣ್ಣಿಗೆ ಬೀಳದೇ ಅವಳ ಭಾರಕ್ಕೆ ಭಯಪಡುತ್ತಲೇ ಒಂದಷ್ಟು ಪುಟ ಮಗುಚಿ ಮರಳಿಸಿ ಬಂದಾದಮೇಲೆಯೂ ಪುರುಸೊತ್ತಾಗಿ ಒಮ್ಮೆ ಓದಬೇಕೆಂಬ ಕನಸಿದ್ದದ್ದಂತೂ ಸುಳ್ಳಲ್ಲ. ದಶಕಗಳು ಕಳೆದ ಮೇಲೆ ಕಾಲ ಕೂಡಿಬಂದು ಈಗಷ್ಟೇ ಓದಿಮುಗಿಸಿದಮೇಲೆ ಇಷ್ಟುದಿನ ಬರಿದೆ ಬರಿದೇ ಹೋಯ್ತು ಹೊತ್ತು ಅನ್ನಿಸ್ತಾ ಇದೆ.     ನನ್ನೊಳಗೆ ಇಷ್ಟೊಂದು ಒಳಸಂಚಲನೆಯನ್ನು ಹುಟ್ಟುಹಾಕಿದ ಕೃತಿ ಬೇರೊಂದಿಲ್ಲ ಅಂದುಕೊಂಡಿದ್ದೇನೆ. ನಾನೂ ಒಬ್ಬಳು ಹಸಿಬಿಸಿ ಬರಹಗಾರ್ತಿ     ಎಂಬ ಒಣ ಹಮ್ಮಿನ ನೆತ್ತಿಕುಟ್ಟಿ ಪುಡಿಮಾಡಿ ಬರೆದದ್ದೆಲ್ಲ ಬಾಲಿಷ ಅನ್ನಿಸತೊಡಗಿದೆ ಅನ್ನೋಕೆ ಯಾವ ಸಂಕೋಚವೂ ಕಾಡುತ್ತಿಲ್ಲ. ಕೃತಿಯನ್ನ ಅತ್ಯಂತ ಪ್ರೀತಿಯ ತಿನಿಸನ್ನು ಬೇಗ ಮುಗಿದುಹೋಗುವ ಭಯದಲ್ಲಿ ಇಷ್ಟಿಷ್ಟೇ ತಿಂದು ಉಳಿಸಿಕೊಂಡಂತೆ ತಿಂಗಳು ಕಾಲ ನಿಧಾನವಾಗಿ ಕೂತು ಬಾಲಕಿಯಾಗಿ ಓದುವ ಸುಖ ವರ್ಣನೆಗೆ ನಿಲುಕದ್ದು.        ಕುವೆಂಪುರವರ ಮಾತುಗಳಲ್ಲಿ ಹೇಳುವದಾದರೆ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಕ್ಕಶ್ಚಿತವಲ್ಲ.” ಇಲ್ಲಿ ಗುತ್ತಿಯ ವ್ಯಕ್ತಿಚಿತ್ರಣದಷ್ಟೇ ಶೃದ್ಧೆಯಿಂದ ಅವನ ನಾಯಿ ಹುಲಿಯನನ್ನು ಕುರಿತು ಬರೆದಿದ್ದಾರೆ. ಹುಲಿಕಲ್ಲ್ ನೆತ್ತಿಯನ್ನು, ಮಲೆನಾಡಿನ ಮಳೆಗಾಲದ ರೌದ್ರ ರಮಣೀಯತೆಯನ್ನು ಕಡೆದಿಟ್ಟ ತನ್ಮಯತೆಯಲ್ಲೇ ಕಾಡಿನ ಇಂಬಳವನ್ನು ಸುಬ್ಬಣ್ಣ ಹೆಗ್ಗಡೆಯ ಹಂದಿದೊಡ್ಡಿಯನ್ನು ಕುರಿತೂ ಬರೆಯುತ್ತಾರೆ ಕುವೆಂಪು. ಚಿನ್ನಮ್ಮ ಮುಕುಂದಯ್ಯರ ನಡುವಿನ ಪ್ರೇಮದ ಸಂದರ್ಭದಲ್ಲಿ ಅವರ ಲೇಖನಿ ಬಾಗಿನಿಂತಂತೆ ಐತ-ಪೀಂಚಲು ಗುತ್ತಿ- ತಿಮ್ಮಿಯರ ಪ್ರೇಮಪ್ರಣಯಕ್ಕೂ ಅವರದು ಪ್ರೀತಿಯ ಪೂಜೆಯೇ…ಒಮ್ಮೆ  ಓದಿ ಮುಗಿಸಿದಮೇಲೆ ಕೃತಿಯ ಕುರಿತಾಗಿ ಓದುಗರೆದೆಗೆ ದಕ್ಕಿದ ಹೊಳಹುಗಳನ್ನೊಮ್ಮೆ ತಿಳಿಯಲು ಪುಟ ತಿರುವಿಬಂದೆ. ಅವುಗಳನ್ನು ವಿಮರ್ಶೆಗಳೆನ್ನದೇ ಹೊಳಹುಗಳು ಎಂಬುದಕ್ಕೆ ಕಾರಣ ಮಲೆಗಳಲ್ಲಿ ಮದುಮಗಳು ವಿಮರ್ಶೆಗೆ ನಿಲುಕದಷ್ಟು ಎತ್ತರಕ್ಕೆ ಮೀರಿಬೆಳೆದ ಕೃತಿ. ಈ ಕೃತಿ ಕನ್ನಡವಲ್ಲದೇ ವಿಶ್ವದ ಬೇರಾವುದೇ ಭಾಷೆಯಲ್ಲಿದ್ದಿದ್ದರೆ ನೋಬಲ್ ಪಾರಿತೋಷಕವನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿತ್ತು ಎಂಬ ಮಾತಂತೂ ಸರ್ವಕಾಲಿಕ ಸತ್ಯವಾದರೂ ಕನ್ನಡದ ಈ ಶ್ರೇಷ್ಠ ಕೃತಿಗೆ ಪಾರಿತೋಷಕಗಳ ಹಂಗಿಲ್ಲ. ಕನ್ನಡಕ್ಕೆ ಈ ಕೃತಿಯೇ ಒಂದು ಸರ್ವಶ್ರೇಷ್ಠ ಪಾರಿತೋಷಕ. ಇಂಗ್ಲೀಷ್ ನಲ್ಲಿ ಬರೆಯುವಷ್ಟು ಭಾಷಾ ಪಾಂಡಿತ್ಯವಿದ್ದರೂ ಕೂಡ ಕನ್ನಡವನ್ನು ತಲೆಮೇಲಿಟ್ಟುಕೊಂಡು ಮೆರೆಸಿದ ರಸ ಋಷಿಗೆ ನಾಡಿಗರು ಸದಾ ಋಣಿಯಾಗಿರಲೇಬೇಕು. ಕೃತಿ ತನ್ನ ಕೇಂದ್ರವನ್ನು ಬಿಟ್ಟು ದೂರ ಸರಿದಿದ್ದನ್ನು ಉಲ್ಲೇಖಿಸಿದವರಿದ್ದಾರೆ. ಕುವೆಂಪು ಬರೀ ಕೇಂದ್ರದ ಸುತ್ತಲೇ ಸುತ್ತಿ ಕೃತಿಯನ್ನು ಸೀಮಿತಗೊಳಿಸದೇ’  ಅದು ಬರೀ ಕಾದಂಬರಿಯಾಗಿಯೇ ಉಳಿದು ಹೊಗುವದನ್ನು ತಪ್ಪಿಸಿ ಸರ್ವಕಾಲಕ್ಕೂ ಸಲ್ಲುವಂತಹ ಒಂದು ಅನನ್ಯ ಕೊಡುಗೆಯನ್ನ ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಕನ್ನಡದ ಓದುಗರಮೇಲೆ ಋಣಭಾರ ಹೊರಿಸಿದ್ದಾರೆ. ಶೋಷಿತ ವರ್ಗ ಗಳ ಪರವಾಗಿ ಕೃತಿಕಾರ ನಿಂತಿದ್ದಾರೆ ಎಂಬ ಹೇಳಿಕೆಗಳನ್ನು ಒಪ್ಪಿಕೊಳ್ಳುವಂತಿಲ್ಲ. ಇದ್ದುದ ಇದ್ದಂತೆ ಕಂಡುದ ಕಂಡಂತೆ ಕೃತಿಯೇ ಕೃತಿಕಾರನ ಕೈಹಿಡಿದು ನಡೆಸಿದಂತೆ ಬರೆಯಬೇಕಾದ ಅಗತ್ಯಗಳನ್ನೆಲ್ಲ ಬರೆದಿದ್ದಾರೆ. ಮೇಲ್ವರ್ಗಗಳ ಕಪಿಮುಷ್ಠಿಗೆ ಸಿಕ್ಕು ತಳವರ್ಗಗಳು ನರಳುವ ಕಾಲಘಟ್ಟದಲ್ಲಿ ಸತ್ಯಕ್ಕೆ ಚ್ಯುತಿಯಾಗದಂತ ಕೃತಿಯ ನಡಿಗೆ ಬೊಟ್ಟಿಡಲಾಗದಷ್ಟು ಸಹಜ.  ಪ್ರಕೃತಿ ಪ್ರಣಯ ವಿರಹ ಮಿಲನ     ಅದಾವುದೇ ಇರಲಿ ವರ್ಣನೆಯಲ್ಲಂತೂ ಕುವೆಂಪು ಅವರದ್ದು ಬೇರಾರಿಗೂ ನಿಲುಕದ ತಪಸ್ಸಿದ್ಧಿ. ” ಅರಣ್ಯಾಚ್ಛಾದಿತವಾಗಿ ಮೇಘಚುಂಬಿಗಳಾಗಿ ನಿಂತಿರುವ ಗಿರಿಶಿಖರ ಶ್ರೇಣಿಗಳ ಮಲೆನಾಡಿನಲ್ಲಿ ಎಲ್ಲಿಯೋ ಕೆಳಗೆ ಒಂದು ಕಣಿವೆ     ಮರಗಳ ನಡುವೆ ಹುದುಗಿರುವ ಮನೆಗಳಲ್ಲಿ ಹುಟ್ಟಿ ಕಣ್ಣುಬಿಡುವ ಮಕ್ಕಳ ಪಾಲಿಗೆ  ಆಕಾಶ ಕೂಡ ಕಾಡಿನಷ್ಟು ವಿಸ್ತಾರಭೂಮವಾಗಿ ಕಾಣಿಸುವುದಿಲ್ಲ. ಆಕಾಶಕ್ಕಿಂತಲೂ ಕಾಡೇ ಸರ್ವವ್ಯಾಪಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡಂತಿರುತ್ತದೆ. ಪ್ರಥ್ವಿಯನ್ನೆಲ್ಲ ಹಬ್ಬಿ ತಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೋ ಒಂದಿನಿತಿನಿತೇ ಅಂಗೈಯಗಲದ ಪ್ರದೇಶವನ್ನು  ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ , ಅಷ್ಟೆ . ” ಕುವೆಂಪು ನುಡಿಯಲ್ಲಿ ಕಾಡಿನ ಹಿರಿಮೆ.    ” ಇಷ್ಟಪ್ರಿಯ ಕಂಠ ಧ್ವನಿ ಕಿವಿಗೆ ಬಿದ್ದೊಡನೆ ಚಿನ್ನಮ್ಮನ ಚೇತನಗರಿ ಹಗುರವಾಗಿ ಹೆದೆ ತುಂಡಾದ ಬಿಲ್ಲಿನ ಸೆಟೆತವೆಲ್ಲ ತೊಲಗಿ ಆದರ ದಂಡವು ನೆಟ್ಟಗಾಗಿ ವಿರಾಮ ಭಂಗಿಯಲ್ಲಿ ಮಲಗುವಂತೆ ಒಂದೆರಡು ನಿಮಿಷಗಳಲ್ಲಿಯೇ ಆನಂದ ಮೂರ್ಛೆಯೋ ಎಂಬಂತಹ ಗಾಢ ನಿದ್ದೆಗೆ ಮುಳುಗಿ ಬಿಟ್ಟಳು . ನರಕ ನಾಕಗಳಿಗೆ ಅದೆಷ್ಟು ಅಲ್ಪಾಂತರವೋ ವಿರಹ ಮಿಲನ ನಾಟಕದಲ್ಲಿ.”   ಕಾವೇರಿ ಇಸ್ಕೂಲು ಬಾವಿಗೆ ಹಾರಿಕೊಂಡು ಸತ್ತಮೇಲೆ ಕುವೆಂಪು ಬರೆದ “ತನ್ನ ಮೈಯನು ಕೆಡಿಸಿದ್ದ ಕಡುಪಾಪಿಗಳಲ್ಲಿ  ಚೀಂಕ್ರನೂ ಸೇರಿದ್ದನೆಂಬುದು ಕಾವೇರಿಗೆ ಗೊತ್ತಾಗದಿದ್ದುದು ಒಂದು ಭಗವತ್ ಕೃಪೆಯೇ ಆಗಿತ್ತು. ಅದೇನಾದರೂ ಗೊತ್ತಾಗಿದ್ದರೆ ಭಗವಂತನೇ ಸತ್ತುಹೋಗುತ್ತಿದ್ದನು! ಆತ್ಮಹತ್ಯೆಗೂ ಪ್ರಯೋಜನ ವಿರುತ್ತಿರಲಿಲ್ಲ. ಸಕಲ ಮೌಲ್ಯ ವಿನಾಶವಾದ ಮೇಲೆ  ಸತ್ತಾದರೂ ಸೇರಿಕೊಳ್ಳಲು ಯಾವ ಪುರುಷಾರ್ಥರೂಪದ ಯಾವ ದೇವರು ತಾನೇ ಇರುತ್ತಿತ್ತು ? ”  ಇಂತಹ ಅದೆಷ್ಟೋ ಸಾಲುಗಳು ಮತ್ತೆಮತ್ತೆ ಮೆಲಕಿಗೆ ಸಿಕ್ಕು  ಎದೆಯಲ್ಲಿ ಮಿಸುಗುತ್ತಲೇ ಇರುತ್ತವೆ.       ತುಂಗಾ ನದಿಯ ನೆರೆಯ ರಭಸಕ್ಕೆ ಗುತ್ತಿಯ ನಾಯಿ ಹುಲಿಯ ಕೊಚ್ಚಿಹೋದದ್ದು ಕಾಲಲ್ಲಿ ಮುಳ್ಳುಮುರಿದಂತ ನೋವು. ತಮ್ಮಲ್ಲಿ ಜೀತಮಾಡುವ ಕುಟುಂಬಗಳ ಗಂಡು ಹೆಣ್ಣುಗಳ ಮದುವೆಕೂಡ ತಮ್ಮ ಮೀಸೆಗಳಡಿಯಲ್ಲೇ ತಮ್ಮಿಷ್ಟದಂತೆ ನಡೆಯಬೇಕೆಂಬ ಜಮೀನ್ದಾರ ರೊತ್ತಿಗೆಯ ಮೀರಿ ತಾನು ಮೆಚ್ಚಿಕೊಂಡ ಗುತ್ತಿಯೊಂದಿಗೆ ಓಡಿಹೋಗಿ ಕಡುಬವಣೆಯುಂಡರೂ ಬಿಡದೇ ಅವನನ್ನೇ ನೆಚ್ಚಿ ನಂಬಿ ಜೊತೆಯಾದ ಹೊಲೆಯರ ತಿಮ್ಮಿ , ಪ್ರೀತಿಗಾಗಿ ತಾನು ಅತಿಯಾಗಿ ಪ್ರೀತಿಸುವ ಅದಕ್ಕಿಂತ ಹೆಚ್ಚು ಭಯಪಡುವ ಅಪ್ಪನಿಗೂ ಬೆನ್ನಾಗಿ ಸ್ವಂತ  ಮದುವೆ ಚಪ್ಪರದಿಂದ ತಪ್ಪಿಸಿಕೊಂಡು ಕಾಡುಮೇಡಲೆದು ತನ್ನಪ್ರಿಯ ಮುಕುಂದಯ್ಯನ ಸೇರಿಕೊಂಡ ಚಿನ್ನಮ್ಮ ಈ ಎರಡೂ ಹೆಣ್ಣುಗಳು  ಒಲ್ಲದ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ಗೆದ್ದು ನಿಲ್ಲುವ ಕಥಾನಾಯಕಿಯರು. ಪೀಂಚಲು ಐತರ ನಡುವಿನ ದಾಂಪತ್ಯವಂತೂ ಪ್ರೀತಿ ಪ್ರಣಯವನ್ನೂ ಮೀರಿನಿಂತ ಅದರಾಚೆಯ ಮಾತಿಗೆ ನಿಲುಕದ ವಿಹಂಗಮ ಪ್ರೇಮ. ಇನ್ನು ನಾಗಕ್ಕನೆಂಬ ನಿಯತ್ತಿನ ಹೆಣ್ಣು ಪತಿಯ ಮರಣದ ನಂತರ ಪುರುಷ ಸಾಂಗತ್ಯವನ್ನು ಹೀಂಕರಿಸಿ ದೂರನಿಂತವಳು. ಉಳ್ಳವರ ಮನೆಯ ಗಂಡಿಗೆ ವಿಧವೆ ಸೊಸೆಯನ್ನು ಕೂಡಿಕೆ ಮಾಡಿ ತನ್ನ ಸ್ವಾರ್ಥ ಸಾಧಿಸಿಕೊಳ್ಳುವ ಅತ್ತೆಯ ನೀಚ ಯೋಚನೆಗೆ ಸೆಡ್ಡು ಹೊಡೆದು ನಿಂತ ಹೆಣ್ಣು ತನ್ನಂತಹದ್ದೇ ಒಂದು ಪುಟ್ಟ ಹೆಣ್ಣುಜೀವಕ್ಕಾಗಿ ತನ್ನೊಳಗೇ ತಾನಿಟ್ಟುಕೊಂಡ ಕಟ್ಟಳೆಮೀರಿ ವೆಂಕಪ್ಪನಾಯಕನ ಒಪ್ಪಿಕೊಂಡಿದ್ದು ಹೆಣ್ತನದ ಪಾರಮ್ಯದ ಹೃದಯವೈಶಾಲ್ಯ.      ಗೊಬ್ಬೆ ಸೆರಗು ಹೊನ್ನಳ್ಳಿ ಹೊಡೆತ  ಕಪ್ಪೆಗೋಲು ಕುಳವಾಡಿ ಚಿಟ್ಟಳಿಲು ಒಡೆಯರ ದಿಬ್ಬ ದೈಯ್ಯದ ಹರಕೆ ಕಿವಿಚಟ್ಟೆ ಹಂದಿಹಸಗೆ ಉಮ್ಮಿಡಬ್ಬಿ  ಹರ್ಮಗಾಲ ಬೀಸಿಕಲ್ಲು ಮದೋಳಿಗ ಇಂತಹ ಅಸಂಖ್ಯ  ದೇಸಿಶಬ್ದಗಳ ಸಾಂಗತ್ಯದಲ್ಲಿ ಹೂವಳ್ಳಿ ಕೋಣೂರು ಸಿಂಬಾವಿ ಕಲ್ಲೂರು ಬೆಟ್ಟಳ್ಳಿ ಕಾಗಿನಳ್ಳಿ ಲಕ್ಕುಂದ ಮೇಗರವಳ್ಳಿಗಳ ಸುತ್ತಸುತ್ತಿ ,ಹೆಗ್ಗಡೆಗಳ ಗೌಡರ ಹೊಲೆಯರ ಹಸಲರ ಹಳೆಪೈಕದವರ ಕಿಲಿಸ್ತಾನರ ಕೇರಿಗಳನ್ನೆಲ್ಲ ಹೊಕ್ಕು ಮಂಜಮ್ಮ ಜಟ್ಟಮ್ಮ ದೇವಮ್ಮ ಚಿನ್ನಮ್ಮ ಮಂಜಮ್ಮ ಅಂತಕ್ಕ ಕಾವೇರಿ ಅಕ್ಕಣಿ ಪೀಂಚಲು ನಾಗತ್ತೆ ನಾಗಕ್ಕ ಪೀಂಚಲು ತಿಮ್ಮಿ ಪುಟ್ಟಿ  ದೇಯಿ ಹಿಂಡು ಹಿಂಡು ಹೆಣ್ಣುಗಳೊಟ್ಟಿಗೆ ನಿತ್ಯ ತಿಂಗಳುಗಟ್ಟಲೆ ಒಡನಾಡಿ ಕೊನೆಪುಟವ ಮೊಗಚುತ್ತಿದ್ದಂತೆ ಅಚಾನಕ್ ಒಂಟಿಯಾಗಿ ದೂರಕ್ಕೆ ಸಿಡಿದುಬಿದ್ದ ತಳಮಳ ಎದೆಗೆ. ಅಂತಕ್ಕನ ಮಗಳು ಕಾವೇರಿ  ದಟ್ಟಿರುಳಿನಲ್ಲೂ ಚೀಂಜ್ರ ಶೇರೇಗಾರನ ಕ್ರೌರ್ಯಜ್ಕೊಳಗಾಗಿ ಸತ್ತ ದೇಯಿ ಕನಸಿಗೆ ನುಗ್ಗಿ ನಿದ್ದೆಗೆಡಿದುತ್ತಿದ್ದಾರೆ……ಒಟ್ಟಿನಲ್ಲಿ ಮಲೆಗಳಲ್ಲಿ ಮದುಮಗಳು ಎದುರಿಗೆ ಇದ್ದರೆ ನಾವು ನಾವಾಗಿರದೇ ಅದರದೇ ಒಂದು ಭಾಗವಾಗಿ ಪಾತ್ರವಾಗಿ ಕಥೆಯ ತುಂಬಾ ಕೃತಿಯ ತುಂಬಾ ಖುದ್ದು ಓಡಾಡಿ ಬಂದ ಧನ್ಯತೆ. ಸರ್ವಶ್ರೇಷ್ಠ ಗಾಯಕರ ಕಂಠದಲ್ಲೊಮ್ಮೆ ಕೆ ಎಸ್ ನರಸಿಂಹ ಸ್ವಾಮಿಯವರ “ದೀಪವು ನಿನ್ನದೆ ಗಾಳಿಯು ನಿನ್ನದೇ ಆರದಿರಲಿ ಬೆಳಕು ಕೇಳುವಾಗಿನ ನಮ್ಮ ನಾವು ಮರೆತು ಹಾಡಿನಲ್ಲಿ ಒಂದಾಗುವ ಭಾವವೇ ಮಲೆಗಳಲ್ಲಿ ಮದುಮಗಳೆದುರು ಕೂತರೆ… ಅಂದುಕೊಂಡರೆ ಅತಿಶಯೋಕ್ತಿಯಲ್ಲ. ಒಮ್ಮೆ ಮುಗಿಸಿದಮೇಲೆ ಮತ್ತೆ ಕೈಬಿಡಲಾಗದೇ ಮರುಓದಿಗೆ ಪುಟ ಮಗುಚುತ್ತಿದ್ದೇನೆ. ಮಲೆಗಳಲ್ಲಿ ಮದುಮಗಳ ಎದುರಿಗೆ ಕೂತು ಪುಟ ಮಗುಚುವದೇ ಒಂದರ್ಥದಲ್ಲಿ ಜನ್ಮಸಾರ್ಥಕ್ಯ. ***************************** ಪ್ರೇಮಾ ಟಿ.ಎಂ.ಆರ್.

Read Post »

ಕಾವ್ಯಯಾನ

ವಿರಹಿ ದಂಡೆ

ಪುಸ್ತಕ ಪರಿಚಯ ವಿರಹಿ ದಂಡೆ ವಿಪ್ರಯೋಗದಲ್ಲಿ ಅರಳಿದ ಶೃಂಗಾರ ಕವಿತೆಗಳು ವಿರಹಿ ದಂಡೆಕವನ ಸಂಕಲನಲೇಖಕ : ನಾಗರಾಜ ಹರಪನಹಳ್ಳಿಪ್ರಕಾಶನ: ನೌಟಂಕಿ. ರಾಜಾಜಿ ನಗರ, ಬೆಂಗಳೂರು.ಬೆಲೆ : ೮೦/- ನಾಗರಾಜ್ ಹರಪನಹಳ್ಳಿ ಎಂಬ ಮಹೋದಕ ಪ್ರತಿಭೆ ಪ್ರೀತಿ, ಪ್ರೇಮ, ಪ್ರಣಯದ ಪರಾಕಾಷ್ಠೆಯನ್ನು ತಲುಪಿ ಸದಾ ಯಯಾತಿಯ ಧಿರಸನ್ನು ತೊಟ್ಟು ಎದೆ ತೆರೆದು ನಿಂತ ಅಪ್ಪೆ ಹುಳಿ, ಒಗರನ್ನು ಮೈಗೂಡಿಸಿಕೊಂಡಿರುವ ಬಯಲು ಸೀಮೆಯಿಂದ ದಂಡೆಗೆ ಬಂದ ಪ್ರೀತಿಯ ಕಡುಮೋಹಿ. ಈ ಕವಿ ಹುಟ್ಟಿದ್ದೇ ಗಾಢ ಆಲಿಂಗನದ ಆರ್ದ್ರ ಉಸಿರಿನ, ಅದುರುವ ತುಟಿಗಳ, ಮುತ್ತಿನ ಮತ್ತಿನ ಬಯಕೆಯಲ್ಲಿ ಸದಾ ತೇಲಾಡುವುದಕ್ಕಾಗಿಯೇ ಅನಿಸುತ್ತದೆ. ಅವರ `ವಿರಹಿ ದಂಡೆ’ಯ ಕವಿತೆಗಳನ್ನು ಓದಿದಾಗ ಖಂಡಿತಾ ಅನಿಸುತ್ತದೆ. ನನಗೆ ಅವರ ಮೊದಲ ಸಂಕಲನಕ್ಕೆ ಮುನ್ನುಡಿ ಬರೆಯಲು ಅವಕಾಶ ಕಲ್ಪಿಸಿದ್ದರು. ಈ `ವಿರಹಿ ದಂಡೆ’ ಅವರ ಎರಡನೇ ಸಂಕಲನ ವಾಗಿದೆ. ಪತ್ರಕರ್ತರಾಗಿ, ಉಪನ್ಯಾಸಕರಾಗಿ, ಬಂಡಾಯ ಸಾಹಿತ್ಯ ಸಂಘಟನೆ, ಸಾಹಿತ್ಯ ಪರಿಷತ್ತು ಎಲ್ಲವನ್ನು ಎದೆಗೆ ಹಚ್ಚಿಕೊಂಡು ಸದಾ ಕ್ರಿಯಾಶೀಲವಾಗಿ ಓಡಾಡಿಕೊಳ್ಳುತ್ತಲೇ ಕಥೆ, ಕವಿತೆ, ವಿಮರ್ಶೆ ಅಂತೆಲ್ಲಾ ಬರೆಯುತ್ತಲೇ ಕುವೆಂಪು, ಬೇಂದ್ರೆ, ಲಂಕೇಶ್, ನರೋಡ, ಬೋದಿಲೇರ್, ಅಲ್ಲಮ, ಬಸವಣ್ಣ, ದೇವನೂರು, ನೀಲು ಎಲ್ಲವನ್ನೂ ಓದುತ್ತಲೇ ದೇವರು ದಿಂಡರು ಬಗೆಗಿನ ಮೌಡ್ಯವನ್ನು ಪ್ರಶ್ನಿಸುತ್ತ ವೈಚಾರಿಕ ನೆಲೆಯ ಮನಸ್ಸನ್ನು ಬರಹಗಳ ಮೂಲಕ ಪ್ರಕಟಿಸುತ್ತ, ತಣ್ಣಗೆ ಪ್ರತಿಭಟಿಸುತ್ತ ತನ್ನದೇ ಆದ ಹಾದಿಯನ್ನು ತುಳಿದವರು. ಮಳೆ ಸುರಿಯುತ್ತಲೇ ಇದೆ ದಾಹ ಮಾತ್ರ ಹಿಂಗಿಲ್ಲ (ಎಷ್ಟು ನೀರು ಕುಡಿದರೂ) ಎನ್ನುವ ಕವಿ ಪ್ರೀತಿಯ ನಿರಂತರತೆ, ಚಲನಶೀಲತೆ, ಚಿರಂತನತೆಯನ್ನು ಪ್ರಕಟಿಸುತ್ತಾರೆ. ಈ ಮೇಲೆ `ಮಹೋದಕ ಎಂದದ್ದು ಈ   ಹಿನ್ನಲೆಯಲ್ಲಿಯೇ.’ ಪ್ರೀತಿ, ಕೆಮ್ಮು ಮುಚ್ಚಿಡಲಾಗೊಲ್ಲ’ ಎಂಬ ಮಾತಿನಂತೆ, ಎದೆ ತೆರೆದಂತೆ ಅವರು ಪ್ರೀತಿಯ ಮಜಲುಗಳನ್ನು ತೆರೆದಿಡುತ್ತಾರೆ. ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ತರ ಎಲ್ಲಾ ಕಾಲಕ್ಕೂ ಇವರು ಪ್ರೀತಿಯ ಬಗ್ಗೆಯೇ ಬರೆಯ ಬಹುದೆಂಬುದು ಅವರ ಕವಿತೆಗಳನ್ನು ಓದಿದಾಗ ಅನಿಸುತ್ತದೆ. ಭಾಷೆಯನ್ನು ದುಡಿಸಿಕೊಳ್ಳುತ್ತಲೇ ಪ್ರಬುದ್ಧತೆಯನ್ನು ಮೆರೆಯುವ ಹರಪನಹಳ್ಳಿಯವರು ತಮ್ಮ ಕವಿತೆಗಳಲ್ಲಿ ಹೊಸತನ ಪ್ರಕಟಿಸುತ್ತಾರೆ. ‘ ದಂಡೆಯ ಕೈಯಲ್ಲಿ ಚಂದ್ರನಿಟ್ಟು ಬರೋಣ’ ಎನ್ನುವ ಕವಿ ಸಂಜೆಯ ಮುದಗೊಂಡ ಗಾಳಿಯ ಸ್ಪರ್ಶಕ್ಕೆ ನಲುಗುವ ಹಳದಿ ಹೂಗಳ ಫಲುಕಿಗೆ ಬೆರಗಾಗುತ್ತಾರೆ. “ಕಣ್ಣು ಕಣ್ಣು ಬೆರೆತವು ಪ್ರೀತಿ ನಿರಾಕರಿಸಲಾಗಲಿಲ್ಲ’’ “ಬೀದಿಗಳಲ್ಲಿ ಎಷ್ಟೇ ತಿರುಗಿದರೂ ನಿನ್ನ ಜೊತೆ ನಡೆದಾಗ ಸಿಕ್ಕ ಸಂಭ್ರಮ ಸಿಗಲಿಲ್ಲ’’ “ಜಗತ್ತು ಹರಾಮಿ ಹಗಲು ದುಡಿಯುತ್ತದೆ ರಾತ್ರಿ ಕಾಮಿಸುತ್ತದೆ’’ “ಚಂದ್ರ ನಕ್ಕ ಆಕಾಶವೂ ಬಾಹುಗಳ ತೆರೆದು ಆಲಂಗಿಸಿತು’’ ಇಲ್ಲೆಲ್ಲ ಕವಿ ತನ್ನನ್ನು `ಪೋಲಿ’ ಎಂದು ಕರೆದುಕೊಂಡರೂ ಅದು ಪೋಲಿತನವಲ್ಲ. ಅಂತರಂಗದ ಭಾವ ಸಹಜತೆಯಾಗಿದೆ.ಅವರ ಕವಿತೆಗಳಲ್ಲಿ ಬರುವ ಚಂದ್ರ, ಆಕಾಶ, ದಂಡೆ, ಬಯಲುಗಳೆಲ್ಲವನ್ನೂ ಮನುಷ್ಯ ಸದೃಶ ಚಿತ್ರವಾಗಿ ಕವಿತೆಗಳಲ್ಲಿ ನಿಲ್ಲಿಸುತ್ತಾರೆ. ಪ್ರಕೃತಿಯ ಭಾಗಗಳನ್ನು ಮನುಷ್ಯ ಲೋಕಕ್ಕೆ ತರುವುದು ಹೊಸತನದ ರೂಪಕಗಳಾಗಿವೆ. ಇಂಗ್ಲೀಷಿನ flying kiss ಎನ್ನುವ ಮಾತನ್ನು ಕವಿತೆಯ ಸಾಲಾಗಿಸುವ ಕವಿ “ದೂರದಿಂದ ಕಳಿಸಿದ ಮುತ್ತು ಬಾಯಾರಿಕೆ ಹೆಚ್ಚಿಸಿದವು’’                   (ಪ್ರೇಮದ ಹನಿಗಳು) ನೀರ ಹನಿ ಬಿದ್ದಾಗ ಮುಟ್ಟಿದರೆ ಮುನಿ ( ನಾಚಿಕೆ ಮುಳ್ಳಿನ ) ಎಲೆ ನಾಚುವಂತೆ `ಹಠಾತ್ ಬಿದ್ದ ಮಳೆಗೆ ದಂಡೆ ನಾಚುತ್ತದೆ’ ಎನ್ನುತ್ತಾರೆ. ಪ್ರೊ.ವಿ.ಕೆ.ಗೋಕಾಕ್ ತಮ್ಮ ಕವಿತೆಯೊಂದರಲ್ಲಿ “ಇಲ್ಲಿ ಬಾಳಿಗೆ ಸಂತಸವೇ ಗುರಿ ಇಲ್ಲಿ ಭೋಗವೇ ಯೋಗವು’’ ಎಂದಂತೆ ಈ ಕವಿಯೂ ಕೂಡ “ಸೆರಗ ನೆರಳಲ್ಲಿ ಬಚ್ಚಿಟ್ಟು ಕೊಳ್ಳಬೇಕೊಮ್ಮೆ’’ ಎನ್ನುವ ಕವಿತೆಯಲ್ಲಿ “ಸೆರಗ ನೆರಳಲ್ಲಿ ಪ್ರೀತಿ ಪಲ್ಲವಿಯ ಹಾಡಬೇಕೊಮ್ಮೆ ನಶ್ವರತೆಗೂ ಮುನ್ನ ಬದುಕ ಮೋಹಿಸಬೇಕೊಮ್ಮೆ’’ ಎನ್ನುತ್ತ ಅದಮ್ಯ ಪ್ರೀತಿಯ ಜೊತೆ ಬದುಕನ್ನು ಸುಂದರಗೊಳಿಸುತ್ತಾರೆ. “ಈಗ ಬಿರು ಬೇಸಿಗೆ ನೀ ಹೋದ ಮೇಲೆ’’ ( ಹನಿಗಳು) ಯಾರೇ ಕೈ ಹಿಡಿದುಕೊಂಡು ನಡೆಯಲಿ ದಂಡೆ ಪುಳಕಗೊಳ್ಳುತ್ತದೆ ಪ್ರೇಮ ಎಂದರೆ ಅದಕೆ ರೋಮಾಂಚನ’’ (ಹನಿಗಳು) ಇಲ್ಲಿ ದಂಡೆಯನ್ನು ತನ್ನ ಪ್ರೀತಿಯ ಭಾಗವಾಗಿಸುತ್ತಾರೆ ಮತ್ತು ದಂಡೆಯ ಆಹ್ಲಾದಕರ ಸಂಜೆ ಕವಿತೆಯಾಗಿಸುವುದಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಸಂಕಲನದ ಬಹುತೇಕ ಕವಿತೆಗಳು `ಹನಿ’ಗಳನ್ನು ಒಳಗೊಂಡಿವೆ.ಹನಿಗಳನ್ನು  `ಇಬ್ಬನಿ’ ಎನ್ನುವ ಕವಿ ಹನಿಗಳನ್ನೂ ಕವಿತೆಯಾಗಿಸಿದ್ದಾರೆ. ಸಂಕಲನದ ಬಹುತೇಕ ಕವಿತೆಗಳು ವಿಪ್ರಲಂಭ ಶ್ರಂಗಾರದ ವಿಪ್ರ ಯೋಗದಲ್ಲಿ ಮಿಂದು ಭೋಗದ ಕಲ್ಪನೆಯನ್ನು, ಭಾವ ಸಮಾಧಿಯನ್ನು ಅರಸುವ ಆ ಮೂಲಕ ಪ್ರೀತಿಯ, ಪ್ರಣಯದ ಭಾವಗಳನ್ನು ವ್ಯಕ್ತಪಡಿಸುವ ಕ್ರಮ ವಿಶಿಷ್ಠವಾದುದಾಗಿದೆ. ಈ ಕೆಳಗಿನ ಕವಿತೆಯನ್ನು ನೋಡಿ.. “ಕಣಿವೆ ನಿತಂಬಗಳು ಮತ್ತೇರಿವೆ ಬಾ ಸ್ವರ್ಗವೇ ಒಮ್ಮೆ ಬಂದುಬಿಡು ಮತ್ತೆ ಕನಸಿನರಮನೆಯ ಮತ್ತೆ ಕಟ್ಟೋಣ (ಕೆನ್ನೆಗಳು ಏಕಾಂತ ಅನುಭವಿಸುತ್ತಿವೆ) ಕಣಿವೆಗಳ ಶೃಂಗಾರ ಮಾಡೋಣ’’ “ಭೂಮಿಯ ಬಿರುಕಿಗೆ ಬೆರಳಿಟ್ಟ ಕ್ಷಣ ಗಾಢ ಉನ್ಮಾದ,ಕಡಲು,ನದಿ ಉಲ್ಲಾಸಗೊಂಡ ಘಳಿಗೆ’’ ಎನ್ನುವ ಕವಿತೆ ಶ್ರಂಗಾರದ ಪರಾಕಾಷ್ಠೆಯನ್ನು ಮುಟ್ಟುತ್ತದೆ. ಲಂಕೇಶ್ `ನೀಲು’ ಪದ್ಯಗಳನ್ನು ನೆನಪಿಸುತ್ತವೆ. ಅವುಗಳ ಪ್ರಭಾವ ಕೂಡ ಇಲ್ಲದಿಲ್ಲ! “ ಒಂದು ಹಣತೆ ಹಚ್ಚಿದೆ ಕತ್ತಲು ಬೆದರಿತು’’ “ಎಷ್ಟೊಂದು ದೀಪ ಹಚ್ಚಿಟ್ಟೆ ಪ್ರೀತಿ ಅರಳಿತು’’ “ಹಣತೆ ಹಚ್ಚಿದೆ ಹೊಸಿಲು ನಕ್ಕಿತು’’ ಈ ಸಾಲುಗಳು ಒಂದು ಕ್ಷಣ `ವಾಹ್’ ಎನಿಸಿ ನಿಲ್ಲಿಸಿಬಿಡುತ್ತವೆ. “ಬುದ್ಧನಾಗಲಾರೆ’’ ಎಂಬ ಕವಿತೆಯೂ ಸಹ ಸದಾ ಶ್ರಂಗಾರ ಭಾವದಲ್ಲಿ ಉಳಿಯುವೆ ಎನ್ನುವಂತೆ ಸಾರುತ್ತಾರೆ. “ಬೋದಿಲೇರ್ ಮತ್ತೆ ಮತ್ತೆ ನೆನಪಾದ’’ ಎನ್ನುವ ಕವಿತೆ ಗಮನ ಸೆಳೆಯುವುದಷ್ಟೇ ಅಲ್ಲಿ ಬೋದಿಲೇರ್‌ನ ಪ್ರಭಾವ ಕೂಡ ಇರುವುದು ಸ್ಪಷ್ಟ. “ಸದಾ ಏನನ್ನಾದರೂ ಕುಡಿದಿರು ಎಂದ ಕಡು ವ್ಯಾಮೋಹಿ ಮನುಷ್ಯ ಕವಿ ಇದೀಗ ನನ್ನ ದೇಶದಲ್ಲಿ ಹುಟ್ಟಬೇಕಿತ್ತು’’ ಎನ್ನುವ ಕವಿ ಹೆಣ್ಣನ್ನು ಇನ್ನಿಲ್ಲದಂತೆ ಭೋಗಿಸುವ,ಆರಾಧಿಸುವ ಮನಸ್ಸನ್ನು ಸ್ವಚ್ಛಂದ ಗಾಳಿಯಲಿ ಹರಿಬಿಡುವ ಬೋದಿಲೇರ್ ಈ ಕವಿಯ ಆರಾಧ್ಯ ದೈವವಾಗಿದ್ದಾನೆ. “ಮಧ್ಯರಾತ್ರಿ ಮಳೆ ಮಿಂದ ಭೂಮಿ ನಿದ್ದೆ ಹೋಗಿದೆ‘’ ಎಂಬ ದೀರ್ಘ ತಲೆಬರಹದ ಈ ಕವಿತೆ ಮದೋನ್ಮತ್ತ ಕಾಮವನ್ನು ಪ್ರತಿನಿಧಿಸುತ್ತದೆ. ನವ್ಯದ ಆರಂಭದಲ್ಲಿ ರಾರಾಜಿಸಿದ ಲೈಂಗಿಕ ಪ್ರಜ್ಞೆ ಭೂಮಿ, ಮಳೆಯಲ್ಲಿ ಏಕೀಭವಿಸಿ ಬದುಕಿನ ಸೂತ್ರದಲ್ಲಿ ಪ್ರತ್ಯೇಕಗೊಳಿಸಲಾರದಷ್ಟು ಹದವಾಗಿ ಬೆರೆತಿದೆ. ಶೃಂಗಾರದ ಮಡುವಲ್ಲಿ ಭೂಮಿ ಮೂರು ಬಾರಿ ಮಿಂದು ಇರಳಿಡೀ ಅನುಭವಿಸಿದ ಸುಖದ ಪರಾಕಾಷ್ಠೆಯ ಪರಮಾವಧಿಯಾಗಿದೆ. ಈ ಕವಿತೆ, ಕವಿ ಬರೀ ಪ್ರೀತಿಯ ಕಡುಮೋಹಿ ಅಷ್ಟೇ ಅಲ್ಲ, ಪ್ರಣಯದ ಕಡುಮೋಹಿಯೂ ಹೌದು ಎಂಬುದನ್ನು ನಿರೂಪಿಸುತ್ತದೆ. ಉಳಿದಂತೆ, ಭೂಮಿತಾಯಿ ತಲೆ ಬಾಚಿಕೊಳ್ಳುವ ಸಮಯ, ಉಳಿದದ್ದು ದಂಡೆ ವಿರಹ, ದಂಡೆಯ ಜೊತೆ ಮಾತುಬಿಟ್ಟೆ, ಶರಧಿ ಸಾಕ್ಷಿ, ದಂಡೆಯಲ್ಲಿನ ಹಕ್ಕಿ ನಾಚಿತು, ಎದೆಗೆ ಬಿದ್ದ ಅಕ್ಷರವ ಹೊತ್ತು, ಮುಂತಾದ ಕವಿತೆಗಳು ಅವುಗಳ ಭಾಷಾ ಪ್ರಯೋಗದಿಂದ ಗಮನ ಸೆಳೆಯುತ್ತವೆ. ಬದುಕನ್ನು ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡುವ’ ನೀರಲಿ ಹೊಳೆ ಹೊಳೆವ ನಿರಿಗೆ ನೆರಳ ಹಿಡಿದಂತೆ’ ಎನ್ನುವ ಕವಿತೆಯಲ್ಲಿ ಕಾಣುತ್ತೇವೆ. `ಬದುಕನ್ನು ಹೇಗೆಂದರೆ ಹಾಗೆ ವಿವರಿಸಲಾಗದು’ ಎನ್ನುವ ಕವಿ, ದಕ್ಕುವ ದಕ್ಕದೇ ಇರುವ ಸಂದರ್ಭಗಳ ನಡುವೆ ಕವಿತೆಯನ್ನು ಹುಡುಕುತ್ತಾರೆ. “ನಡೆದಷ್ಟೇ ದಾರಿ ತೆರೆದುಕೊಂಡಿತು ನಿಂತಲ್ಲೇ ನಿಂತು ಕಲ್ಪಿಸಿ ಭಾವಿಸಿ ಬಯಸುವುದಲ್ಲ ಬದುಕು’’ “ಪಿತೂರಿಯಲ್ಲಿ ದಿನವಿಡೀ ಕಳೆವ ಹುಲು ಮಾನವರ ಕಂಡು ಕಡಲು ಬಯಲು ನಗುತ್ತಿತ್ತು’’ “ಆಕೆ ಸಿಕ್ಕಿದ್ದಳು ಬೆಳಕಿನ ಜೊತೆ ಮಾತಾಡಿದಂತಾಯಿತು’’ “ಮಗು ಮಲಗಿತ್ತು ಅದರ ಮುಖ ಮುದ್ರೆಯಲ್ಲಿ ಬುದ್ಧ ಕಂಡ’’ “ಮುಗಿಲ ದುಃಖ ಭೂಮಿಯ ಬಾಯಾರಿಕೆ ಮುಗಿಯುವಂತದ್ದಲ್ಲ’’ “ಭೂಮಿ ಮಳೆ ಮಧ್ಯೆ ಗಾಳಿ ಸುಳಿಯಿತು ಗಿಡಮರ ಹಕ್ಕಿಗಳು ಆಡಿಕೊಂಡವು’’ “ಶಬ್ದಗಳು ಕರಗುತ್ತಿವೆ ತಣ್ಣಗೆ ಸುರಿವ ಮಳೆಯಲ್ಲಿ’’ “ಮಳೆ ನೆಲದೊಂದಿಗೆ ಪಿಸುಮಾತನಾಡುತ್ತ ಶೃಂಗಾರದ ಮತ್ತಿನಲ್ಲಿರುವಾಗ ಭೂಮಿಯು ನಗ್ನ ನಾನೂ ನಗ್ನ’’ “ಮಾತಿಗೆ ಮಾತು ಬೆಸುಗೆಯಾದವು ಹೃದಯ ಹೂವಾಯಿತು’’ “ಒಮ್ಮೆ ಗುಡುಗಿದಳು ಭೂಮಿ ನಡುಗಿತು ಕ್ಷಮೆ ಕೋರಿದೆ ಕರುಣೆಯ ಸಾಗರವಾದಳು’’ ಈ ಎಲ್ಲಾ ಸಾಲುಗಳನ್ನು ಗಮನಿಸಿದರೆ ಕವಿ ಭಾಷೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಯಾವ ಸಾಲು ವಾಚ್ಯವಾಗದ ಹಾಗೆ ಭಾಷೆಯ ಬಳಕೆಯಾಗಿದೆ. ಸಣ್ಣ ಸಣ್ಣ ಚಿತ್ರಗಳಿಂದ ಮನಸ್ಸನ್ನಾವರಿಸುವ `ಸುಳಿವ ಶಬ್ದವ ಹಿಡಿದು’ ಕವಿತೆ ಕೊನೆಗೆ ಪ್ರೀತಿಯ ಅಗಾಧತೆಯನ್ನು ಸೂಚಿಸುತ್ತದೆ. ಸಂಕಲನದ ಕೊನೆಯ ಕವಿತೆ  “ಈಗೀಗ..’’ ಭಾಷೆಯ ಚಂದ ಸಾರುತ್ತದೆ. “ತಣ್ಣಗೆ ಬೀಸುವ ಗಾಳಿಯಲಿ ನಿಟ್ಟುಸಿರದ್ದೇ ಕಾರುಬಾರು’’ “ಬಟಾ ಬಯಲು ಬಿದ್ದಿರುವ ಆಕಾಶದಲಿ ಕಂಗಾಲಾದ ಕನಸುಗಳು’’ “ಗಹಗಹಿಸಿ ನಗುವ ಬೆಂಕಿಯಲಿ ನಿನ್ನದೇ ಅನುರಾಗದ ನೆನಪುಗಳು’’ ಈ ಸಾಲುಗಳು ಕೊಡುವ ಸಣ್ಣ ಸಣ್ಣ ಚಿತ್ರಗಳು ಅರ್ತಗರ್ಭಿತವಾಗಿವೆ. ಒಟ್ಟಾರೆ “ವಿರಹಿ ದಂಡೆ’’ಯ ಕವಿತೆಗಳು ಕವಿಯ ಸಾಮರ್ಥ್ಯವನ್ನು ಸಾಬೀತುಪಡಿಸುತ್ತವೆ.ಕಥೆಗಾರರಾಗಿ ಗುರುತಿಸಿಕೊಂಡ ಹರಪನಹಳ್ಳಿಯವರು ಕೊನೆಗೆ ಕಾವ್ಯದ ಕಡೆಗೆ ಹೊರಳಿ ಬದುಕಿನ ಚಿರಂತನ ಪ್ರೀತಿಯನ್ನು ಮೊಗೆ ಮೊಗೆದು ಕೊಡುತ್ತ, ಎಲ್ಲಿಯೂ ವಾಚ್ಯವಾಗದ ಹಾಗೆ ಬರೆಯುತ್ತ ;  ಪ್ರೀತಿಯ ಬಗೆಗಿನ ಕಡು ಮೋಹವನ್ನು ಪ್ರಕಟಿಸುತ್ತಾರೆ. ಹರಪನಹಳ್ಳಿಯಿಂದ ಉದ್ಯೋಗ ಅರಸಿ ಕಡಲ ದಂಡೆಗೆ ಬಂದು ಉತ್ತರ ಕನ್ನಡದವರೇ ಆಗಿದ್ದಾರೆ. ಮುನ್ನುಡಿ ಬರೆದಿರುವ ಹಿರಿಯ ಕವಿ ಬಿ.ಎ.ಸನದಿ,ಮೋಹನ್ ಹಬ್ಬು, ಎಂ.ಆರ್. ಕಮಲ ಕವಿಯ ಕಾವ್ಯ ಪ್ರಜ್ಞೆಯನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಈ ಕವಿಯಿಂದ ಇನ್ನಷ್ಟು ಸಂಕಲನಗಳು ಬರಲಿ. ಪ್ರೀತಿಯ ಮೇರೆ ದಾಟಿ ಬದುಕನ್ನು ಗಂಭೀರವಾಗಿ ಚಿಂತಿಸುವ, ಸಮಕಾಲೀನ ಸನ್ನಿವೇಶಗಳಿಗೆ ಸ್ಪಂದಿಸುವ ಕವಿತೆಗಳನ್ನು ಬರೆಯಲೆಂದು ಎದೆಯ ಹಾರೈಕೆ. *********************************************************  – ಫಾಲ್ಗುಣ ಗೌಡ ಅಚವೆ.

ವಿರಹಿ ದಂಡೆ Read Post »

ಇತರೆ

ಕಾದಂಬರಿ ಕುರಿತು ಮರಳಿಮಣ್ಣಿಗೆ ಡಾ.ಶಿವರಾಮ ಕಾರಂತ ಸುಮಾವೀಣಾ ಮರಳಿಮಣ್ಣಿಗೆ’ಯ ರಾಮನನ್ನು ನೆನಪಿಸಿದ ಕೊರೊನಾ ಕಾಲಾಳುಗಳು   ‘ಮರಳಿ ಊರಿಗೆ”, “ಮರಳಿ ಗೂಡಿಗೆ’, ‘ಮರಳಿ ಮನೆಗೆ’, ‘ಮರಳಿ ನಾಡಿಗೆ’ ಇವೆ ಪದಗಳು ಕೊರೊನಾ ಎಮರ್ಜನ್ಸಿಯಾದಾಗಿನಿಂದ ಕೇಳುತ್ತಿರುವ ಪದಗಳು.ಆದರೆ ಇವುಗಳ ಕಲ್ಪನೆ, ಯೋಚನೆ ನಮ್ಮ ‘ಕಡಲ ತಡಿಯ ಭಾರ್ಗವ’ನಿಗೆ ಅಂದೇ ಹೊಳೆದಿತ್ತು  ಹಾಗಾಗಿ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ನಮ್ಮ  ಕೈಗಿತ್ತಿದ್ದಾರೆ. ಹ್ಯಾಟ್ಸ ಆಫ್ ಟು ಕಾರಂತಜ್ಜ  ಎನ್ನಬೇಕು. ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ರಾಮ, ಐತಾಳರು, ಲಚ್ಚ ಹಾಗು ರಾಮ ಎಂಬ ಮೂರು ತಲೆಮಾರುಗಳು ಬರುತ್ತವೆ.  ಮೊದಲನೆ ತಲೆಮಾರಿನಲ್ಲಿ   ರಾಮ ಐತಾಳರು ಮಾಡುವ ವೈದಿಕ ವೃತ್ತಿ ಹಾಗು ಪುರುಷಪ್ರಧಾನ ವ್ಯವಸ್ಥೆಯ ಧೋರಣೆಗಳು ಕಂಡು ಬರುತ್ತವೆ.  ನಂತರದ ತಲೆಮಾರಿನ ಲಚ್ಚನಲ್ಲಿ    ಆಧುನಿಕ ವಿದ್ಯಾಭ್ಯಾಸ ಅವನ ಬದುಕಿನ ನೆಲೆಯನ್ನು ಮರೆಯಿಸಿ   ಲೋಭಿ ಬದುಕಿನ ಬಿರುಗಾಳಿಯನ್ನು ಬೀಸಿಸುತ್ತದೆ. ಸುಳ್ಳು, ದುಂದು ವೆಚ್ಚ ಇತ್ಯಾದಿಗಳನ್ನು ಮಾಡುತ್ತಾನೆ.  ಈತನ ಹೆಂಡತಿ ನಾಗವೇಣಿ.  ಆಸೆ ಕಂಗಳಿಂದ ಮದುವೆಯಾಗಿ ಬಂದು ನಲುಗುತ್ತಾಳೆ.  ಗಂಡನಿಂದ ನೋವುಂಡ ನಾಗವೇಣಿ ಮಗನಿಂದ ಸಮಾಧಾನವನ್ನು ಪಡೆಯುತ್ತಾಳೆ. ಅಂತಹ ಮಗನೇ   ಮೂರನೆ ತಲೆಮಾರಿನ ರಾಮು.  ತಾಯಿಯ ಶ್ರಮವನ್ನು ಅರಿತ  ಈತ ಅತ್ಮಾಭಿಮಾನವುಳ್ಳವನಾಗಿ   ಮೆರೆಯುತ್ತಾನೆ. ರಾಮನು ಮರಳಿ ಮಣ್ಣಿಗೆ ಬಂದ  ನಂತರ ಶಾಲಾ ಮಾಸ್ತರಿಕೆ ಮತ್ತು ಕೃಷಿ ಎರಡನ್ನೂ ಆಪ್ತವಾಗಿ ದುಡಿಸಿಕೊಳ್ಳುತ್ತಾನೆ.ಹೋಟೇಲ್ ಉದ್ಯಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲಾದ ಪ್ರಭಾವ  ಮತ್ತು ಪ್ರಾದೇಶಿಕತೆಯ ಸೊಗಡು  ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯ ವೈಶಿಷ್ಟ್ಯ. 1850ರಿಂದ1940 ನಡುವಿನ ಸುಮಾರು ನೂರು ವರ್ಷಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಹಳ್ಳಿಯೊಂದರಲ್ಲಿ  ತಲೆಮಾರುಗಳ ನಡುವೆ ನಡೆದ  ಸಾಮಾಜಿಕ ಪ್ರಕ್ರಿಯೆಯನ್ನು ಕಾದಂಬರಿ ತೆರೆದಿಡುತ್ತದೆ. 1942ರಲ್ಲಿ  ಪ್ರಕಟವಾದ ಈ ಕಾದಂಬರಿ ಇವತ್ತಿಗೂ ಅಕ್ಷರಷಃ ಅನ್ವಯಿಸುತ್ತದೆ.   ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರ ರಾಮ  ಮುಂಬೈ ಬದುಕಿಗೆ ವಿದಾಯ ಹೇಳಿ ರೈಲು ನಿಲ್ದಾಣಕ್ಕೆ ಬಂದಾಗ ಅವನ ಫ್ರೆಂಡ್ಸ್ರೂಮಿನವರ ಜೊತೆಗೆ ಅವನ  ವಿದೇಶಿ ಚಿತ್ರ ಕಲಾ ಶಿಕ್ಷಕಿ ನೋವಾ ಕೂಢ ಬಂದು ಒಂದು ಪುಟ್ಟ ಚಿತ್ರಪಟವನ್ನು ಸುರುಳಿ  ಮಾಡಿ “ಇದು ನನ್ನ ಮನೆಯ ಹಿಂದಿನ ಗುಡ್ಡ” ಎಂದು ಹೇಳಿ ನಕ್ಕಿರುತ್ತಾಳೆ ಆಗ ರಾಮುವಿಗೆ  ನೋವಾ ತನ್ನ ನಾಡಿಂದ ಓಡಿಬಂದುದರಿಂದ ಆ ನಾಡಿಗಾಗಿ ಅವಳ ಜೀವ ಹಂಬಲಿಸುತ್ತಿದೆಯೇನೋ ಎಂದೆನಿಸಿ ಕಣ್ಣೀರು ಬರುತ್ತದೆ. ಇದೆ ನಾಡಿನ ಹಂಬಲ ತವರ ಹಂಬಲ  ಅಂದರೆ, ಅದಕ್ಕೇ ನಮ್ಮ ಜಾನಪದ ಹೆಣ್ಣುಮಕ್ಕಳು “ಕಾಸಿಗೆ ಹೋಗಲಿಕೆ ಏಸೊಂದು ದಿನ ಬೇಕ ತಾಸ್ಹೊತ್ತಿನ ಹಾದಿ ತವರೂರು” ಎಂದು  ತಾವು ಹುಟ್ಟಿದ ನೆಲವನ್ನು ಕಾಶಿಗೆ  ಹೋಲಿಸಿರುವುದು.      ಕಾದಂಬರಿಯಲ್ಲಿ ಅನ್ಯ ಮನಸ್ಥಿತಿಯ  ಒಂದೇ ಕುಟುಂಬದ ಮೂರು ಜನರನ್ನು ನೋಡಬಹುದು ಆದರೆ ಈಗ ಇಂಥ ಸಾವಿರ ಲಕ್ಷ  ಲಕ್ಷ ಮನಸ್ಸುಗಳು   ನಮ್ಮ ನಡುವಿವೆ. ಅನ್ಯ ದೇಶಗಳು “ಅನ್ಯದೇಶಿ” ಎನಿಸಿಕೊಂಡವರನ್ನು ಒಮ್ಮೆಗೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವದಿಲ್ಲ ಅಲ್ಲೂ ಜನಾಂಗೀಯ ಭೇದ, ಹಿಂಸೆ, ತಾರತಮ್ಯ ಗಳು ಇರಬಹುದು, ಹೊಂದಾಣಿಕೆಯ ಸಮಸ್ಯೆ ಇರಬಹುದು ಭಾಷೆಯ ಸಮಸ್ಯೆ ಇರಬಹುದು.  ಇದರ ನಡುವೆ ಅತ್ಯಂತ ಚೆನ್ನಾಗಿರುವ ಕುಟುಂಬಗಳು ಇವೆ ಅದರ ಬಗ್ಗೆ ತಕರಾರಿಲ್ಲ.    ‘ಮೆರೆಯುತ್ತಿದ್ದ ಭಾಗ್ಯವೆಲ್ಲ ಹರಿದು ಹೋಯಿತೆನುವ ತಿರುಕ ಮರಳಿ ನಾಚಿ ಮರಳುತ್ತಿದ್ದ ಮರುಳನಂತೆಯೇ’ ಎಂಬಂತೆ ಸೋ ಕಾಲ್ಡ್ ಹೈಪ್ರೊಫೈಲ್ ಇರುವವರಿಂದ  ಮೊದಲುಗೊಂಡು ಕಡುಬಡವರವರೆಗೂ  ಎಲ್ಲಾ ಸ್ಥರದ ಉದ್ಯೋಗಕ್ಕಾಗಿ, ಅಧ್ಯಯನಕ್ಕಾಗಿ,  ದಿನಗೂಲಿಗಾಗಿ ಊರು ಬಿಟ್ಟವರು ಮರಳಿ ತಮ್ಮ ಮನೆಯನ್ನು ತಮ್ಮ ತಮ್ಮ ಹಳ್ಳಿಗಳನ್ನು ಸೇರಬಯಸುತ್ತಿದ್ದಾರೆ.  ಹಳ್ಳಿಗಳಿಂದ  ನಗರಕ್ಕೆ ವಲಸೆ  ಬರುವ ಕಾಲ ಬದಲಾಗಿ ನಗರಗಳಿಂದಲೇ ಹಳ್ಳಿಗಳಿಗೆ  ವಲಸೆ  ಹೋಗುವ ಕಾಲ ಬಂದಿದೆ. ಲಾಕ್ ಡೌನ್ ಆಗಿದೆ ಇದ್ದಲ್ಲೆ ಇರಿ ಎಂದರೆ  ಕೇಳಲಿಲ್ಲ. ಅದರಲ್ಲೂ  ರಾಯಚೂರಿನ ಹೆಣ್ಣಮಗಳು  ತನ್ನೂರಿನವರೆಗೂ  ಕಡೆಗೂ ತನ್ನ ಮನೆಯನ್ನು  ಕಡೆಗೂ ಸೇರಲೇ ಇಲ್ಲವಲ್ಲ ಹಸಿವಿನಿಂದ ಹಾಗೆ ಪ್ರಾಣ ಬಿಟ್ಟಳಲ್ಲ. ಹಾಗೆ ದೂರದ ಕಣ್ಣೂರಿನಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲೇ ಬಂದ ಗರ್ಭಿಣಿ ಹೆಣ್ಣು ಮಗಳು ನಡೆದೇ ಬಂದಿದ್ದಾರಲ್ಲ ಏನು ಹೇಳ ಬೇಕು ಇದಕ್ಕೆ.  ಸರಕಾರ ಇಷ್ಟು  ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ , ಊಟದ ವ್ಯವಸ್ಥೆ ಮಾಡಿದ್ದಾರೆ ಇಷ್ಟು ಆದ ಮೇಲೂ  ಏಕೆ ಈ ಹಂಬಲ ಎಂಬ ಪ್ರಶ್ನೆ ಸಹಜವಾಗಿ ಮೂಡುವಂಥದ್ದೆ. ಇನ್ನು ವಿದೇಶಗಳಲ್ಲಿ ಇರುವವರೂ ಕೂಡ ನಮ್ಮನ್ನು “ದೇಶಕ್ಕೇ ಕರೆಸಿಕೊಳ್ಳಿ…” ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಕಾರಣ ಇಷ್ಟೆ ತವರಿನ ಸೆಳೆತ.  ಆ ಸೆಳೆತವೇ  ಆಪ್ಯಾಯಮಾನ. ನಮ್ಮ ನಾಡಿನ ಸೌಗಂಧ ನಮಗೇ ಗೊತ್ತು. ಉಪ್ಪರಿಗೆಯ ಮೇಲಿನ ಮೆಟೀರಿಯಲ್ಸ್ಟಿಕ್  ಜೀವನ ನಿಜವಾದ ಅನುಭೂತಿಯನ್ನು ಕೊಡಲಾರದು.  ‘ಸಿರಿಗರವನ್ನು ಹೊಡೆದವರ ನುಡಿಸಲು ಬಾರದು’ ಎಂಬಂತೆ ಹಣದ ನಶೆಯೇರಿಸಿಕೊಂಡವರು,  ನಾವೇ ಎಲ್ಲಾ ಎಂಬ ಹುಂಬತನಕ್ಕೆ , ವ್ಯಾಮೋಹಗಳಿಗೆ ಒಳಗಾಗಿ ಪ್ರತಿಭಾಪಲಾಯನಗೈದವರು, ನಾವು ಭಾರತೀಯ ಸಂಜಾತರು ಎಂದು ಹೇಳಿ ಕೊಳ್ಳಲು ಹಿಂಜರಿಯುತ್ತಿದ್ದವರೆಲ್ಲಾ ಭಾರತಕ್ಕೆ ಮರಳಿ ಹೋಂ ಕ್ವಾರಂಟೈನ್ಗಳಾಗಿದ್ದರು. ಇನ್ನು ಕೆಲವರು  ಕ್ವಾರಂಟೈನ್  ಅವಧಿ ಮುಗಿದರೂ ಆಚೆ ಬಾರದೆ ಕಿಟಕಿಯ ಪರದೆ ಸರಿಸಿ ಹೊರಗೆ ಏನಾಗುತ್ತಿದೆ ಎಂದು ಮೆಲ್ಲಗೆ  ನೋಡುತ್ತಿದ್ದರು. ಇನ್ನು ನಗರ ಪ್ರದೇಶಗಳಿಂದ ಹಿಂದಿರುಗಿದವರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು “ಮರಳಿ ಮಣ್ಣಿಗೆ” ಪದಕ್ಕೆ ಘನತೆ ತಂದುಕೊಟ್ಟಿದೆ.  ‘ಮರಳಿ ಮಣ್ಣಿಗೆ’ ಕಾದಂಬರಿಯ ರಾಮನೂ ಮಾಡಿದ್ದೂ  ಕೃಷಿಯನ್ನೇ.  ಎಷ್ಟು ಸಾಂದರ್ಭಿಕವಾಗಿದೆಯಲ್ಲವೇ? ಹೌದು! ನಮಗೆ ಅನ್ಯ ದೇಶ ಅನ್ನ ಕೊಡಬಹುದು ಹಣ ಕೊಡಬಹುದು, ಸ್ಥಾನಮಾನ ಕೊಡಬಹುದು,  ಜೀವನ ಕೊಡಬಹುದು ಆದರೆ ನೆಮ್ಮದಿಯನ್ನು ಎಂದಿಗೂ ಕೊಡಲಾರದು ಎಂದೇ ನನ್ನ ಅನಿಸಿಕೆ. ವಲಸಿಗ ಹಕ್ಕಿಗಳು ತಮ್ಮ ವಿಹಾರವನ್ನು ಮುಗಿಸಿ ಸ್ವಸ್ಥಾನಕ್ಕೆ ಮರಳುವಂತೆ ತಮ್ಮ ಮೂಲ ನೆಲೆಗೆ ಮರಳಲೇಬೇಕು.    ಅದೇನೆ ಕೊಡುಗೆ ಕೊಡುವುದಿದ್ರೂ ನಮ್ಮ ದೇಶಕ್ಕೆ ಕೊಡಬಹುದಲ್ಲವೇ? ವಿಶ್ವದ ಯಾವ ಬಲಿಷ್ಠ ರಾಷ್ಟ್ರಕ್ಕೂ ಆರ್ಥಿಕ ಸಂಪತ್ತನಲ್ಲಿ, ಭೌದ್ಧಿಕ ಸಂಪತ್ತಿನಲ್ಲಿ ಭಾರತ ಕಡಿಮೆಯೇನಿಲ್ಲ . ಕೊರೊನಾ ಎಮರ್ಜನ್ಸಿ ಬಂದ ನಂತರ ಸಾಮಾಜಿಕ ಆಧ್ಯಯನ ಕಾರರು ಮೊದಲಿನಂತಹ ದಿನಗಳು ಇನ್ನು ಇರಲಾರವು ಎಂದಿದ್ದಾರೆ. ಇನ್ನು  ಎಂಥಹ ದಿನಗಳು ಬಂದರು ಅದಕ್ಕೆ ನಾವು ಸರ್ವ ಸನ್ನಧ್ಧರಾಗಿರಬೇಕು. ಲಾಕ್ ಡೌನ್ ಕಾಲ  “ಮರಳಿ ಮಣ್ಣಿಗೆ”  ಅಲ್ಲ “ಮರಳಿ ನಮ್ಮ ಸಂಸ್ಸ್ಕೃತಿ”ಗೆ ಎಂಬಂತಾಗಿದೆ. ಕೈ ಜೋಡಿಸಿ ನಮಸ್ಕರಿಸುತ್ತಿದ್ದೇವೆ . ಮನೆಯ ಅಡುಗೆ ರುಚಿಸುತ್ತಿದೆ. ಎಲ್ಲರೂ ಒಟ್ಟಾಗಿ ಕ್ವಾಲಿಟಿ ಟೈಮ್ ಕಳೆಯುತ್ತಿದ್ದೇವೆ. ನಮ್ಮ ಅಡುಗೆಮನೆಯನ್ನು ವಿದೇಶಿ ಅಡುಗೆ ಸಾಮಾಗ್ರಿಗಳು ಆಕ್ರಮಿಸಿಕೊಂಡಿದ್ದನ್ನು ತಡೆದು  “ ಹಿತ್ತಲ ಗಿಡ ಮದ್ದಲ್ಲ “ಎಂಬಂತೆ ನೇಪಥ್ಯಕ್ಕೆ  ಸರಿದಿದ್ದ ನಮ್ಮ ಅಡುಗೆಯಲ್ಲಿ ಹಿಂದಿನಿಂದಲೂ  ಬಳಸುತ್ತಿದ್ದ ಅರಿಸಿನ ಕಾಳುಮೆಣಸು, ಬೆಳ್ಳುಳ್ಳಿ ಶುಂಠಿಗಳು ಅಡುಗೆ ಮನೆಯ ಪರಿಮಳವನ್ನು  ಹೆಚ್ಚಿಸಿವೆ. “ ಕೆಟ್ಟು ಪಟ್ಟಣ ಸೇರು” ಎಂಬ ಗಾದೆ “ಕೆಟ್ಟು ಹಳ್ಳಿ ಸೇರು” ಎಂದು ಬದಲಾಗಿದೆ.  ಕೊರೊನಾ  ವೈರಸ್ ಬಂದಿದೆ ಸರಿ! ನಮ್ಮ ದೇಶದ  ಅರ್ಥ ವ್ಯವಸ್ಥೆಯ ಮೇಲೆ ಬಲವಾದ ಪೆಟ್ಟನ್ನೂ ನೀಡಿದೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತದ ಅಂತಃಶಕ್ತಿ ಏನು ಎಂಬುದನ್ನು ವೃದ್ಧಿಸಿಕೊಂಡಿದೆ. ವಿಶ್ವಸಂಸ್ಥೆಯಿಂದ ಮೊದಲುಗೊಂಡು  ಅಮೇರಿಕಾ  ಬ್ರೆಜಿಲ್  ರಾಷ್ಟ್ರಗಳು ನಮ್ಮನ್ನು ಕೊಂಡಾಡುತ್ತಿವೆ. ಮನಿ ಪವರ್ಗಿಂತ  ಈಗ ನಮ್ಮ   ಭಾರತ ಮಣ್ಣಿನ ಪವರ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.  ನಮ್ಮ ದೇಶ, ನಾಡು  ಏನೂ ಅಲ್ಲ  ಎಂದ ರೋಗಗ್ರಸ್ಥ ಮನಸ್ಸುಗಳು ಕೊರೊನಾ ಬಂದಾಗಿನಿಂದ ಮರಳಿ ಮಣ್ಣಿಗೆ  ಬಂದಿವೆ ಬರುತ್ತಿವೆ. ******************************* ಸುಮಾವೀಣಾ

Read Post »

You cannot copy content of this page

Scroll to Top