ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಲಕ್ಷ್ಮಿಕಾಂತ ಮಿರಜಕರ ಮನೆಗಳು ,ಗದ್ದೆಗಳು ಮಳೆಗೆ ಕೊಚ್ಚಿ ಹೋದವು,ಮುಳುಗಿಲ್ಲ ಬದುಕು ಊರಿಗೆ ಊರುಗಳೇ ನೆರೆಗೆ ನಲುಗಿ ಹೋದವು ಮುಳುಗಿಲ್ಲ ಬದುಕು ಕನಸು ಮುರಿದಿದೆ ಮನಸು ಮುರಿದಿಲ್ಲ ರಟ್ಟೆ ಗಟ್ಟಿಯಿದೆ ಇನ್ನೂ ಕೆಸರು ತುಂಬಿದ ಭೂಮಿಯಲ್ಲೇ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು ಕಣ್ಣಾಲಿ ತುಂಬೆಲ್ಲ ದುಡಿದು ಕೂಡಿಸಿ ಕಾಪಿಟ್ಟ ಬದುಕಾಧಾರಗಳ ಅವಶೇಷಗಳು ಭರವಸೆಯ ಬಣ್ಣ ತುಂಬಿ ವಿಶೇಷ ಮಾಡುವೆವು ಮುಳುಗಿಲ್ಲ ಬದುಕು ಕೈ ಹಿಡಿದಿಲ್ಲ ಪ್ರಭುತ್ವ,ಗಾಳಿಯಲ್ಲೇ ತೇಲಾಡುತ್ತಿವೆ ಸುಳ್ಳು ಆಶ್ವಾಸನೆಗಳು ಬಂದೇ ಬರ್ತಾರೆ ಒಂದಿನ ಬುದ್ಧಿ ಕಲಿಸುವೆವು ಮರೆಯದೆ, ಮುಳುಗಿಲ್ಲ ಬದುಕು ಇರಲು ಸೂರಿಲ್ಲ,ತಿನ್ನಲು ಕಾಳಿಲ್ಲ ಕೂಳಿಲ್ಲ ಆದರೂ ಚಿಂತೆಯಿಲ್ಲ ನಮ್ಮ ಪಾಲಿನ ಬೆಳಕನ್ನು ನಾವೇ ಸಂಪಾದಿಸುವೆವು ಮುಳುಗಿಲ್ಲ ಬದುಕು. ಬೇಡದೆ ಇದ್ದರೂ ತಾವಾಗಿಯೇ ಕಷ್ಟಕ್ಕೆ ಮಿಡಿದಿವೆ ಕೆಲ ಭೂ ನಕ್ಷತ್ರಗಳು ಕಳೆಗುಂದಿದ್ದ ಜೀವಕ್ಕೆ ಚೈತನ್ಯ ತುಂಬಿ ಬಂದಿದೆ “ಕಾಂತ”,ಮುಳುಗಿಲ್ಲ ಬದುಕು. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇವನಾರವ ಇವನಾರವ ರಾಜು ದರಗಾದವರ ಅಂದು ಇವ ನಮ್ಮವ, ಇವ ನಮ್ಮವ ಅಂದವನು; ಇಂದು ಇವನಾರವ,ಇವನಾರವ ಎನ್ನುತಿರುವನಲ್ಲ….! ಅಂದೇ ಕೇಳಿದ್ದರೆ ? ನಮ್ಮ ಅಜ್ಜನೋ ಅವರ ಅಜ್ಜನೋ ಗುನುಗುತ್ತಿದ್ದ. ರಕ್ತ ಚೆಲ್ಲಿದ ಭೂಮಿ ಹೇಳುತ್ತಿತ್ತು. ಕೇಳುವುದಾದರೆ ಜಂಗು ಹಿಡಿದ ಬಂದೂಕು ಕೇಳು, ಎದೆ ಸೀಳಿ ಕುಡಿದ ರಕ್ತದಾವುದು…!? ಹರಿದು ಮೂಲೆ ಸೇರಿದ ಬೂಟನ್ನ ಕೇಳು ವದಿಕೆ ತಿಂದ ಕಾಯದಾವುದು..!? ಅವರಿವರೆನ್ನದೆ ಒಡಲಬಳ್ಳಿ ಹಬ್ಬಿದ ಮೂಲ ಸಿಗುವುದಾದರೂ ಯಾರಿಗೆ..? **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬುದ್ಧನಾಗಲು ರೇಖಾ ವಿ.ಕಂಪ್ಲಿ ಬುದ್ಧನಾಗಲು ಬುದ್ಧನಾಗಲು ಬದ್ಧ ವೈರಾಗಿಯಾಬೇಕಿಲ್ಲ ಬದ್ಧ ವೈರಿಗಳನ್ನು ಕ್ಷಮಿಸಿದರೆ ಸಾಕು ಬುದ್ಧನಾಗ ಬಹುದಲ್ಲವೇ? ಬುದ್ಧನಾಗಲು ಬೋಧಿ ವೃಕ್ಷದ ನೆರಳುಬೇಕಿಲ್ಲ ನಾನೆಂಬ ಅಂಧಕಾರದರಳು ತೆಗೆದರೆ ಸಾಕು ಬುದ್ಧನಾಗ ಬಹುದಲ್ಲವೇ? ಬುದ್ಧನಾಗಲು ಶುದ್ಧ ವೈಶಾಖದಲ್ಲಿ ಹುಟ್ಟಬೇಕಿಲ್ಲ ಶುದ್ಧ ಪರಿಶುದ್ಧ ಮನಸ್ಸಿರಲು ಸಾಕು ಬುದ್ಧನಾಗ ಬಹುದಲ್ಲವೇ? ಬುದ್ಧನಾಗಲು ರಾಜ್ಯ, ಸಂಸಾರ ಬಿಡಬೇಕಿಲ್ಲ ಸತ್ಸಂಗದ ವಿಚಾರಧಾರೆ ಸಾಕು ಬುದ್ಧನಾಗ ಬಹುದಲ್ಲವೇ? ****************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೆದರುವುದಿಲ್ಲ! ವಿಜಯಶ್ರೀ ಹಾಲಾಡಿ ಹೆದರುವುದಿಲ್ಲ ನಿಸರ್ಗದೊಂದಿಗೆ ದುಡಿಯುವುದುಬೆವರಿನ ತುತ್ತು ತಿನ್ನುವುದುಇದೇ ಬದುಕೆಂದು ತಿಳಿದನನ್ನ ಪೂರ್ವಜರ ಕಾಲವದುನನಗಾಗಲಿ ನನ್ನ ಓರಗೆಯಮಂದಿಗಾಗಲಿ ಜನನ ಪತ್ರಗಳಸರಕಾರಿ ದಾಖಲೆಗಳಹೊಳಹೂ ತಿಳಿದಿರಲಿಲ್ಲ ಇಲ್ಲದ ಪ್ರಮಾಣ ಕಾಗದಗಳತಂದುಕೊಡಿರೆಂದು ಆಜ್ಙಿಸುವವರೆಹೂವು ಅರಳಿದ್ದಕ್ಕೆ ಸಾಕ್ಷಿಹೇಳಲು ಒತ್ತಾಯಿಸದಿರಿಶತಮಾನಗಳಿಂದ ಇದೇನೀರು ಮಣ್ಣು ಗಾಳಿಉಸಿರಾಡಿದ್ದೇವೆ- ಇನ್ನೂ ಇಲ್ಲೇಇದ್ದು, ಸತ್ತು ನೆಲದಋಣವ ಸಲ್ಲಿಸುತ್ತೇವೆ…ನೀವು ಬಂದೂಕಿಗೆಮಾತು ಕಲಿಸಿರುವಿರಿಲಾಠಿ ಬಡಿಗೆ ದೊಣ್ಣೆಗಳಕೆತ್ತಿ ಹರಿತಗೊಳಿಸಿರುವಿರಿಆದರೆರಕ್ತದ ಹಾದಿಯಲ್ಲಿ ಬೀಜ– ಮೊಳೆಯುವುದಿಲ್ಲ ಮಳೆಬೀಳುವುದಿಲ್ಲ- ಹಸಿವಿಗೆಅನ್ನ ಬೆಳೆಯುವುದಿಲ್ಲ ಇಲ್ಲದ ಕಾಗದಪತ್ರಗಳಜಾಗದಲ್ಲಿ ನಮ್ಮ ದೇಹಗಳಿವೆಈ ನೆಲದ ಸಾರಹೀರಿದ ಜೀವಕೋಶಗಳಿವೆಮನಸ್ಸುಗಳಿವೆಆತ್ಮಗಳಿವೆಕನಸುಗಳಿವೆನಂಬಿ….ಇದಕ್ಕೂ ಮೀರಿಬದುಕಿಬಾಳಿದ ಹೊಲ- ಮನೆ-ಗಳ ಅಗಲಿ ಯಾವ ಕ್ಯಾಂಪು-ಗಳಿಗೂ ನಾವು ಬರುವುದಿಲ್ಲಕೋಲೂರಿಕೊಂಡು ನಡೆವಾಗಲೂಭುಜಕ್ಕೆ ಆತುಕೊಳ್ಳದಅಜ್ಜ ಅಜ್ಜಿಯರಮೊಮ್ಮಕ್ಕಳು ಮರಿಮಕ್ಕಳು ನಾವುದಂಡಿಗೆ ದಾಳಿಗೆ ಹೆದರುವುದಿಲ್ಲಕೇಳಿಕೊಳ್ಳಿ ! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಗಜಲ್ ಸತ್ಯ ಎಂದಿನಂತೆ ಬೆತ್ತಲೆಯಾಗೇ ಇದೆ ಸುಳ್ಳು ವೇಷ ಕಳಚುವ ಕಾಲ ಬಂದಿದೆ ಸುಳ್ಳೀಗ ಸತ್ಯವಾಯಿತು ಎಂದರ್ಥವಲ್ಲ ಹುಸಿಯ ಅಸಲಿಯತ್ತು ಸಾಬೀತಾಗಿದೆ ಎಷ್ಟೊಂದು ಬಣ್ಣಬಣ್ಣದ ವೇಷಗಳು ಇಲ್ಲಿ ತೊಗಲುಗೊಂಬೆಗಳಿಗೆ ಜೀವ ಬಂದಂತಿದೆ ಹೊಸ್ತಿಲಲ್ಲಿ ಹುಲ್ಲು ತುಂಬಿದೆ ಎಂದರು ಅಣ್ಣ ಮಾಡುವುದೇನು ಕಣ್ಣಲ್ಲೂ ರಜ ತುಂಬಿದೆ ನೆರಳಿನೊಂದಿಗೆ ಎಷ್ಟೆಂದು ಗುದ್ದಾಟ ಗೆಳೆಯ ನಿಜದ ನೇರಕೆ ತೆರೆದು ಎದೆಯ ನಡೆಸಬೇಕಿದೆ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಾನವರು ಮಾಲತಿ ಹೆಗಡೆ ಮಾನವರು! ತಾಳು ಅರಳಿಸಿ ನಗಿಸುವೆ ನನ್ನೊಡಲ ಮಗುವೆ ಎನುವ ಗಿಡಗಳ ಸಂಭ್ರಮದರಿವೆಲ್ಲಿದೆ ಹೂವಾಡಗಿತ್ತಿಗೆ.. ನಾಳೆಗರಳುವ ಹೂವ ಇಂದೇ ಕೊಯ್ದ ಬಳ್ಳಿಯಲಿ ಕಟ್ಟಿ ಮಾಲೆ,ದಂಡೆಯನ್ನಾಗಿಸಿ ಬುಟ್ಟಿ ತುಂಬಿ ಬೆಳಂಬೆಳಿಗ್ಗೆ ಅದನು ನೆತ್ತಿಗೇರಿಸಿ ‘ಮೊಲ್ಲೆ ಮಲ್ಗಿ ಮಾಲೇರಿ’ ರಾಗವೆಳೆಯುತ್ತ ಊರೆಲ್ಲ ಸುತ್ತದಿದ್ದರೆ ಅವಳ ಮನೆಯೊಲೆ ಉರಿಯುವುದಿಲ್ಲ… ಕೆಚ್ಚಲು ತುಂಬಿದ ಹಾಲ ಕರುವಿಗುಣಿಸಬೇಕೆಂಬ ಹಸುವಿನ ಮಮತೆಯ ಹಂಬಲದರಿವೆಲ್ಲಿ ಗೋವಳನಿಗೆ ಹಿಡಿಹುಲ್ಲು ಕರುವಿಗಿತ್ತು ಹಸುವಿನ ಹಾಲನೆಲ್ಲ ಹಿಂಡಿ ಕ್ಯಾನು ತುಂಬಿ ‘ಹಾಲರೀ ಹಾಲ’ ಎನ್ನುತ್ತ ವರ್ತನೆ ಮನೆಗಳ ಪಾತ್ರೆಗಳಿಗೆ ಹಾಲು ತುಂಬಿ ಕಾಸೆಣಿಸದಿದ್ದರೆ ಅವನ ಮನೆಯೊಲೆ ಉರಿಯುವುದಿಲ್ಲ… ಹೂವ ಹೀಚಾಗಿಸಿ, ಕಾಯಿ ಹಣ್ಣಾಗಿಸಿ ತಳಿ ಉಳಿಸಿ ಬೆಳೆಸುವಾಸೆಯ ಮರದ ಬೆಲೆಯರಿವೆಲ್ಲಿದೆ ಹಣ್ಣಿನ ವ್ಯಾಪಾರಿಗೆ.. ಬಲಿತ ಕಾಯಿಗಳ ಕಿತ್ತು ಒತ್ತಾಯದಲಿ ಹಣ್ಣಾಗಿಸಿ ‘ತಾಜಾ ಮಾಲು, ಸಸ್ತಾ ಇದೆ: ಎಂದೆಲ್ಲ ಬಣ್ಣಿಸಿ ತೂಕ ಹಾಕಿ ಮಾರದಿದ್ದರೆ ಅವನ ಮನೆಯೊಲೆಯೂ ಉರಿಯುವುದಿಲ್ಲ… ಎಲ್ಲ ಜೀವಗಳನುರಿಸಿ ತಂಪಾಗುವ ಜೀವಗಳಿಗೆ ಹೆಸರು ಮಾನವರು!?

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಡಾ.ಗೋವಿಂದ ಹೆಗಡೆ ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಇಂಗುತ್ತಿರುವ ಒರತೆಯಿಂದ ಗುಟುಕುಗಳ ಮೊಗೆಯುತ್ತಲೇ ಇದ್ದೆ ನದಿಯೊಂದು ದಿಕ್ಕು ಬದಲಿಸಿ ತಂಪೆರೆಯುವುದೆಂದು ಊಹಿಸಿರಲಿಲ್ಲ ಈ ಸಾಲುಗಳು ( ದ್ವಿಪದಿ) ರೇಖಾರ ಗಜಲ್‌ಯಾನವನ್ನು ಸಮರ್ಥವಾಗಿ ಹೇಳುತ್ತವೆ ಎಂದು ಅನಿಸುತ್ತದೆ. ನಾನು ರೇಖಾ ಭಟ್ಟರನ್ನು ಮೊದಲು ಕಂಡಿದ್ದು ಸಾಹಿತ್ಯ ಸಮ್ಮೇಲನವೊಂದರ ಕವಿಗೋಷ್ಠಿಯಲ್ಲಿ.ಯಾರು ಯಾರೋ ಬಂದು ಬಾಲಿಶ ಸಾಲುಗಳನ್ನು ಕವನವೆಂದು ಓದಿದ ಅಲ್ಲಿ ರೇಖಾರ ಕವನ, ಮೆಲುದನಿಯ ಅವರ ವಾಚನ ‘ ಪರವಾಗಿಲ್ಲ , ಈ ಸಾಲುಗಳಲ್ಲಿ ಕಾವ್ಯ ಇದೆ’ ಅನಿಸುವಂತೆ ಮಾಡಿದ್ದು ನೆನಪಿದೆ. ಅದಾಗಿ ೩-೪ ತಿಂಗಳಲ್ಲಿ ಧನ್ನೂರ ಜೆ ಡಿ ಯವರು ಆರಂಭಿಸಿದ ‘ಕವಿಬಳಗ’ದಲ್ಲಿ ಕಾವ್ಯದ ಚಟುವಟಿಕೆಗಳು ಎಡೆಬಿಡದೇ ನಡೆದವು.ಆ ಮೂಲಕ ಪರಿಚಿತರಾದ ರೇಖಾ ಆಗೀಗ ವೈಯಕ್ತಿಕವಾಗಿಯೂ ಸಂಪರ್ಕಿಸುತ್ತ , ತಮ್ಮ ಕೋಮಲ ಕವಿತೆಗಳಿಂದ, ಸೌಜನ್ಯಯುತ ಮಾತು- ನಡೆಯಿಂದ ಆತ್ಮೀಯರೇ ಆದರು.ಈ ಗುಂಪಿನಲ್ಲಿ ಪ್ರತಿವಾರ ಗಜಲ್ ಬರೆಯುವ ಸ್ಪರ್ಧೆಯನ್ನು ನಾನು ೭-೮ ತಿಂಗಳ ಕಾಲ ನಿರ್ವಹಿಸಿದಾಗ ಪ್ರತಿ ಸಲವೂ ಬರೆಯುತ್ತ ಬಂದ ರೇಖಾ ಆ ಕುರಿತು ಸಲಹೆ ಸೂಚನೆ ಕೇಳುತ್ತ , ತಿದ್ದುತ್ತ …ವೃತ್ತಿಯಿಂದ ಶಿಕ್ಷಕಿಯಾದರೂ ಇಲ್ಲಿ ‘ವಿದ್ಯಾರ್ಥಿನಿ’ಯೇ ಆದರು! ನಮ್ಮ ಈ ಗಜಲ್ ಉಪಕ್ರಮದ ಮೊದಲೂ ಆಮೇಲೂ ರೇಖಾ ಕವಿತೆ, ಭಾವಗೀತೆಗಳನ್ನು ಬರೆದಿದ್ದಿದೆ. ಆದರೆ ಗಜಲ್ ಬರಹ ಅವರ ಕೃಷಿಗೆ ಒಂದು ನಿಖರತೆಯನ್ನೂ ಸಂಗ್ರಹವಾಗಿ ಸಮುಚಿತ ಪದಗಳಲ್ಲಿ ಹೇಳುವ ಶಕ್ತಿಯನ್ನೂ ತಂದಿತೆಂದು ನನ್ನ ಅನಿಸಿಕೆ. ಅವರ ಕಾವ್ಯ ತೊರೆ ಆಳ ಅಗಲಗಳನ್ನು ಪಡೆದು ಗಜಲ್ ನದಿಯಾಗಿ ಹರಿದ ಫಲ ಈ ಸಂಕಲನ. ಇನ್ನು ಗಜಲ್‌ಗಳತ್ತ ಹೊರಳಿದರೆ- ಗಜಲ್ ತನ್ನದೇ ಆದ ಚೌಕಟ್ಟುಳ್ಳ, ಆ ಕಾರಣಕ್ಕಾಗೇ ವಿಶಿಷ್ಟವೆನಿಸುವ ಕಾವ್ಯಪ್ರಕಾರ. ಪಾರ್ಸಿಯಲ್ಲಿ ಹುಟ್ಟಿ ನಮ್ಮ ದೇಶದಲ್ಲಿ ಉರ್ದುವಿನಲ್ಲಿ ಬೆಳೆದ ಗಜಲ್‌ಗೆ ೭-೮ ಶತಮಾನಗಳ ಇತಿಹಾಸವಿದೆ.ಆದರೆ ಕನ್ನಡ ಗಜಲ್ ಮೊಳೆದಿದ್ದು ಇತ್ತೀಚೆಗೇ. ಗಜಲ್ ದ್ವಿಪದಿಗಳಲ್ಲಿ ಮಂಡಿತವಾಗುವ ಕಾವ್ಯ ಪ್ರಕಾರ.ಈ ದ್ವಿಪದಿಗಳಿಗೆ ‘ಷೇರ್/ಬೈತ್ ‘ಎಂದು ಹೆಸರು.ಪ್ರತಿ ಸಾಲು ‘ಮಿಸ್ರ’.ಮೊದಲ ‘ಷೇರ್’ ಮತ್ಲಾ. ಕೊನೆಯದು ಮಕ್ತಾ. ಗಜಲ್‌ಗಳಲ್ಲಿ ಐದರಿಂದ ಇಪ್ಪತ್ತೈದು ಷೇರ್‌ಗಳಿರುವುದುಂಟು. ಸಾಮಾನ್ಯವಾಗಿ ೭ ಬರೆಯುವ ರೂಢಿ. ಇನ್ನು ಗಜಲ್‌ನ ಮುಖ್ಯ ಅಂಗಗಳಾದ ‘ರದೀಫ್’ ಮತ್ತು ‘ಕಾಪಿಯಾ’ಗಳ ಬಗ್ಗೆ ತಿಳಿಯೋಣ. ಷೇರ್‌ನ ಕೊನೆಯಲ್ಲಿ ಪುನರಾವರ್ತನೆಯಾಗುವ ಪದ ಅಥವಾ ಪದಗುಚ್ಛ ಇದ್ದರೆ ಅದು ‘ರದೀಫ್’.ಈ ರದೀಫ್‌ನ ಹಿಂದಿನ ಪದ ಅಂತ್ಯಪ್ರಾಸವುಳ್ಳ ಪದ ‘ಕಾಪಿಯಾ’. ರದೀಫ್ ಇಲ್ಲದ ಗಜಲ್‌ಗಳಿವೆ. ಆಗ ಕಾಪಿಯಾವೇ ಸಾಲಿನ ಕೊನೆಯ ಪದ. ರದೀಫ್ ಇದ್ದಾಗ ಅದು, ಕಾಪಿಯಾದೊಡನೆ ಇಲ್ಲವೇ ಕಾಪಿಯಾ ಮಾತ್ರ ಮೊದಲ ಷೇರ್‌ನ ( ಮತ್ಲಾದ) ಎರಡೂ ಸಾಲುಗಳಲ್ಲಿ, ಅನಂತರದ ಷೇರ್‌ಗಳ ಎರಡನೇ ಸಾಲಿನಲ್ಲಿ ಬರಬೇಕು.ಇದು ನಿಯಮ. ಇದರಿಂದ ಗಜಲ್‌ನ ಚೆಲುವು ಹೆಚ್ಚುತ್ತದೆ. ಕೇಳುವಾಗ ಒಂದು ರಮಣೀಯತೆ ತಾನಾಗಿ ಒದಗುತ್ತದೆ.ಗಜಲ್ ಮುಷಾಯಿರಾ‌ಗಳಲ್ಲಿ ಹಾಡಲ್ಪಡುವ ಕೇಳುಗಬ್ಬವಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಇಲ್ಲಿ ಮುಖ್ಯವಾದ ಅಂಶವೆಂದರೆ ರದೀಫ್ ಇಲ್ಲದೇ ಗಜಲ್ ಇರಬಹುದು. ಆದರೆ ಕಾಪಿಯಾ ಇಲ್ಲದೇ ಗಜಲ್ ಇಲ್ಲ . ಬಹೆರ್ ( ವೃತ್ತ / ಛಂದಸ್ಸು)ಗಜಲ್‌ನ ಬಹು ಮುಖ್ಯ ಅಂಗವೇ ಆದರೂ ಕನ್ನಡ ಗಜಲ್ ಆ ಬಗ್ಗೆ ಬಹಳ ಲಕ್ಷ್ಯ ವಹಿಸಿದಂತಿಲ್ಲ. ಯಾವುದೇ ಗಜಲ್‌ನಲ್ಲಿ ಅದರ ಸಾಲುಗಳ ಉದ್ದ ಸುಮಾರಾಗಿ ಸಮಾನವಿದ್ದರೆ ಸಾಕು ಎಂಬಲ್ಲಿಗೇ ನಾವು ತೃಪ್ತರಾದಂತಿದೆ. ಹೀಗೆ ಗಜಲ್ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದರೂ ಸಾಕಷ್ಟು ವೈವಿಧ್ಯಕ್ಕೂ ಇಲ್ಲಿ ಅವಕಾಶವಿದೆ.ಎಲ್ಲ ಷೇರ್‌ಗಳನ್ನೂ ಮತ್ಲಾ ಆಗಿಸುವ , ಮೊದಲ ಎರಡು ಷೇರ್‌ಗಳನ್ನು ಮತ್ಲಾ ಆಗಿಸುವ, ರದೀಫ್‌ನಲ್ಲಿ ವೈವಿಧ್ಯ ತರುವ, ರದೀಫ್ ಇಲ್ಲದೆಯೂ ಬರೆಯುವ…ವಿವಿಧ ಸಾಧ್ಯತೆಗಳಿವೆ. ಇವಿಷ್ಟು ಗಜಲ್‌ನ ಹೊರ ಆವರಣದ ಮಾತಾಯಿತು.ಇನ್ನು ಅದರ ವಸ್ತು- ವಿಷಯಗಳಿಗೆ ಬಂದರೆ, ಆರಂಭದಲ್ಲಿ ಗಜಲ್ ಹೆಣ್ಣಿನ ಕುರಿತಾದ, ಅನುರಾಗ, ವಿರಹಗಳ ಕುರಿತಿನ ಕಾವ್ಯವೇ ಆಗಿತ್ತು, ನಿಜ.ಆದರೆ ಈಗ ಅದರ ವ್ಯಾಪ್ತಿ ಹಿಗ್ಗಿದ್ದು ವೈವಿಧ್ಯಮಯ ವಸ್ತು, ಆಶಯಗಳ ಗಜಲ್‌ಗಳು ನಮ್ಮೆದುರಿಗಿವೆ. ನಾನು ಇಲ್ಲಿ ತುಂಬ ಮೇಲು ಮೇಲಿನ ವಿವರಗಳನ್ನು ಮಾತ್ರ ನೀಡಿದ್ದು ಹೆಚ್ಚಿನ ಮಾಹಿತಿಗೆ ಶಾಂತರಸರ ‘ ಗಜಲ್ ಮತ್ತು ಬಿಡಿ ದ್ವಿಪದಿ’ , ಚಿದಾನಂದ ಸಾಲಿಯವರು ಸಂಪಾದಿಸಿದ ‘ಕನ್ನಡ ಗಜಲ್’, ಬಸವಪ್ರಭು ಮತ್ತು ಇತರರು ಸಂಕಲಿಸಿದ ‘ಬಿಸಿಲ ಹೂ’ ಈ ಗ್ರಂಥಗಳನ್ನು ಪರಾಮರ್ಶಿಸಬಹುದು. ಈ ಪ್ರಾಥಮಿಕ ಮಾಹಿತಿಗಳಿಂದ ರೇಖಾರ ಗಜಲ್‌ಗಳತ್ತ ತಿರುಗಿದರೆ – ಈ ಸಂಕಲನದಲ್ಲಿ ೬೨ ಗಜಲ್‌ಗಳಿದ್ದು ರದೀಫ್‌ಸಹಿತ ಮತ್ತು ರದೀಫ್‌ರಹಿತ ಎರಡೂ ವರ್ಗಕ್ಕೆ ಸೇರಿವೆ. ಈ ಗಜಲ್‌ಗಳನ್ನು ಓದಿದಾಗ ಕೋಮಲವಾದ, ಅಪ್ಪಟ ಹೆಣ್ಣು ಅಂತಃಕರಣವೊಂದು ಒಳ- ಹೊರಗುಗಳನ್ನು ನೋಡುತ್ತ,ನೋಡಿಕೊಳ್ಳುತ್ತ ಆಡುವ ಮೆಲುಮಾತುಗಳ ಜೊತೆ ನಮ್ಮ ಪಯಣ ನಡೆದಂತೆ ಅನಿಸುತ್ತದೆ.ಏರುದನಿಯ ಚೀರುದನಿಯ ಸಂತೆಮಾತುಗಳಿಗೇ ನಾವು ಒಗ್ಗಿ ಹೋಗಿದ್ದರೆ ಈ ಸಾಲುಗಳು ಫಕ್ಕನೇ ತಮ್ಮನ್ನು ಬಿಟ್ಟುಕೊಡದೇ ಹೋಗಬಹುದು.ಬದಲಿಗೆ ಇವುಗಳ ಪಿಸುದನಿಗೆ ನೀವು ಎದೆ ತೆರೆದರೆ ಅಲ್ಲಿನ ಪುಟ್ಟ ಪುಟ್ಟ ಖುಷಿಗಳ, ನಗು-ಅಳು-ತಲ್ಲಣಗಳ ಆಪ್ತಲೋಕ ನಿಮ್ಮನ್ನು ಬರಮಾಡಿಕೊಂಡೀತು. ‘ ನಿನ್ನ ಮಾತುಗಳು ಧ್ವನಿಸಲೆಂದು ನಾ ಮೌನವನ್ನು ತಬ್ಬಿಕೊಂಡೆ ನಿನ್ನ ಕನಸುಗಳು ಅರಳಲೆಂದು ನನ್ನ ಬಯಕೆಗಳ ಬಸಿದುಕೊಂಡೆ ……… ನಿನ್ನ ದಾಟಬಾರದೆಂದು ನನ್ನ ಚಲನೆಗಳಿಗೆ ಗಡಿ ಹಾಕಿಕೊಂಡೆ ‘ ( ಗಜಲ್-೩೭) ಈ ಮಾತುಗಳು ಕಟ್ಟಿಕೊಡುವ ಚಿತ್ರವನ್ನು ಗಮನಿಸಿ.ಹೆಣ್ಣಿನ ‘ಸ್ಥಿತಿ’ಯನ್ನು ಉದ್ವೇಗವಿಲ್ಲದೆ ಆದರೆ ದಿಟ್ಟದನಿಯಲ್ಲಿ , ದಟ್ಟ ವಿಷಾದದಲ್ಲಿ ಕಟ್ಟಿಕೊಡುತ್ತವೆ ಈ ಸಾಲುಗಳು. ‘ ಬಿತ್ತಿದ ಪ್ರೇಮಬೀಜಗಳು ಅಲ್ಲಲ್ಲಿ ಮೊಳಕೆಯೊಡೆಯುತ್ತಿವೆ ಹಸಿರೊಡಲ ಬಾಚಿ ನುಂಗುವ ಬೆಂಕಿಮಳೆಗೆ ಕೊನೆಯಿಲ್ಲ’ (ಗಜಲ್-೩೮) ‘ ನಾಟಕವಾಡಲು ತರಬೇತಿ ಬೇಡ,ಇಲ್ಲ ರಂಗಮಂಟಪದ ಹಂಗು ಜಗದ ಜಗಲಿಯಲಿ ನಿತ್ಯ ಸುಳ್ಳಿನಾಟಗಳು, ಮೊದಲು ಹೀಗಿರಲಿಲ್ಲ’ (ಗಜಲ್-೧೧) ಎಂದು ವಿಷಾದದಲ್ಲೇ ಗಮನಿಸುವ ರೇಖಾ ಇವುಗಳ ನಡುವೆಯೇ ಎದೆದೀಪ ಹಚ್ಚಿ ಕುಡಿಯೊಡೆವ ನಗುವಿಗೆ ಕಾಯುವ, ಇಂಬಾಗುವ ಹಂಬಲಕ್ಕೆ ದನಿಯಾಗಿದ್ದಾರೆ. ‘ ನಸುಕಲಿ ಸಹನೆಯಿಂದ ಮುತ್ತುಕಟ್ಟಿದ ಇಬ್ಬನಿ ಸಾಲು ಕುಡಿಯೊಡೆದ ಚಿಗುರೆಲೆ ಬಾಳಲಿ ಐಸಿರಿಯ ತಂತು’ (ಗಜಲ್-೨೫) ‘ ಆಯುಧಗಳಿಗಿಂತ ರೋಗಗ್ರಸ್ತ ಮನಕೆ ಔಷಧಿ ಬೇಕೀಗ ರಕ್ಕಸ ಬೆರಳುಗಳಲಿ ಹೂವರಳಿದ ಬಗೆಯೊಂದ ಹೇಳು ಬಾ’ (ಗಜಲ್-೪೮) ಕತ್ತು ಹಿಸುಕಲು ಬರುವ ನೂರೆಂಟು ಘಾತುಕ ಶಕ್ತಿಗಳ ಎದುರು ಬದುಕನ್ನು ಪೊರೆಯುವ, ಜೀವಕಾರುಣ್ಯವನ್ನು ಎತ್ತಿಹಿಡಿಯುವ ಅಚಲ ಶ್ರದ್ಧೆ ರೇಖಾರ ಗಜಲ್‌ಗಳ ಉದ್ದಕ್ಕೂ ಕಾಣುತ್ತದೆ. ‘ ಕುಸಿಯಬೇಡ ಬದಲಾಗಿ ಹಾರಿಬಿಡು ಎತ್ತರವು ದಕ್ಕೀತು’ಎಂಬ ನಿರೀಕ್ಷೆ, ಆಶಯ ಅವರ ಗಜಲ್‌ಗಳ ಮೂಲಮಂತ್ರವಾಗಿದೆ. ಸಂಗೀತವನ್ನೂ ಕಲಿತಿರುವ, ಸೊಗಸಾಗಿ ಹಾಡುವ ರೇಖಾ ಸಾಕಷ್ಟು ಲಲಿತವಾದ ಗಜಲ್‌ಗಳನ್ನು ರಚಿಸಿದ್ದಾರೆ.ಮುಖ್ಯವಾದ ಮಾತೆಂದರೆ ಗಜಲ್‌ನ ಮೂಲ ನಿಯಮಗಳನ್ನು ಅನುಸರಿಸಿದ, ಸ್ಥೂಲವಾಗಿ ಬಹೆರ್‌ಯುಕ್ತವಾದ ಬರಹ ಇದು.ಗಜಲ್‌ನ ನಿಯಮಗಳನ್ನು ಮುರಿದು ಮನಸೋ ಇಚ್ಛೆ ಬರೆಯುವ ‘ಪ್ರತಿಭಾ ಸಂಪನ್ನ’ರಿಗೆ, ‘ನನ್ನದೊಂದು ರೀತಿಯ ಸ್ವಚ್ಛಂದ ಗಜಲ್‌ಗಳು’ ಎನ್ನುವವರಿಗೆ ನಿಯಮಗಳ ಒಳಗೇ ರಚಿತವಾದ ಈ ಗಜಲ್‍ಗಳು ತಣ್ಣಗಿನ ಉತ್ತರವಾಗಿವೆ. ಗಜಲ್‌ಬರಹದಲ್ಲಿ ರೇಖಾರ ಹೆಜ್ಜೆಗುರುತುಗಳನ್ನು ಗಮನಿಸುತ್ತ ಬಂದ ನನಗೆ ಅವರ ಈ ಪ್ರಗತಿ ಸಂತಸ ತಂದಿದೆ.ಈ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರವೂ ಲಭಿಸಿರುವುದು ಖುಷಿಯನ್ನು ಇಮ್ಮಡಿಸಿದೆ. ರೇಖಾರ ಕಾವ್ಯಪಯಣಕ್ಕೆ ಇನ್ನಷ್ಟು ವಿಸ್ತಾರ, ತಿರುವಿನ ವೈವಿಧ್ಯ, ಚೆಲುವುಗಳು ಒದಗಿ ಬರಲಿ. ‘ ಬದುಕು ಕಟ್ಟುವ ಕಲೆಯ ಕನಸುಗಳಿಗೆ ಕಲಿಸಬೇಕು ಕತ್ತಲೆಯ ಅಟ್ಟುವ ಕಲೆಯ ಮನಸುಗಳಿಗೆ ಕಲಿಸಬೇಕು’ ಎಂಬ ಅವರ ಹಂಬಲ,ಬೆಳಕಿನತ್ತಣ ಪಯಣ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಡವರ ಸ್ವಾತಂತ್ರ್ಯ ರಾಜು ದರ್ಗಾದವರ ಬಡವರ ಸ್ವಾತಂತ್ರ್ಯ ಇನ್ನೆಷ್ಟು ಜೀವಬೇಕು ಕೇಳು ಸ್ವಾತಂತ್ರ್ಯವೊಂದು ಸಿಗಲಿ, ನಾಡಮಕ್ಕಳ ಬದುಕಿಗೆ; ಬೀಸಿರಕ್ತ ನಿನ್ನ ಬೇಡಿಕೆಯಾದರೆ ತಗೆದು ಬಿಡು ಖಡ್ಗವನ್ನು ತುಂಡರಸಿ ಕೊಡುವೆ ನಿನ್ನ ಪಾದಗಳಿಗೆ ಸ್ವಾತಂತ್ರ್ಯ ಸಿಗದ ಬದುಕು ಬೇಡವಾಗಿ ನರಕವೇ ಕಂಣ್ತುಂಬಿ ಹರಿದಿದೆ; ಬಡವನ ಮರಗು ತರುವುದಲ್ಲ ಮೆರಗು ಆಳಿದ್ದು ಸಾಕು,ಅರಸನಾಗಬೇಡ ಬಡವರ ಬದುಕಾಗು.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕುರುಡು ಕಾಂಚಾಣ ಸುಜಾತಾ ರವೀಶ್ ಕುರುಡು ಕಾಂಚಾಣ ಬೇಂದ್ರೆಯವರ ಕುರುಡು ಕಾಂಚಾಣ ಸಾಮಾಜಿಕ ಅನಿಷ್ಟವನ್ನು ವೈಭವೀಕರಿಸುವ ದೃಶ್ಯದಲ್ಲಿ ಆ ಕರಾಳತೆಯನ್ನು ಕಟ್ಟಿಕೊಡುವ ಒಂದು ಅತ್ಯಂತ ಶಕ್ತಿಯುತ ಪ್ರಯತ್ನ .ಹಣದ ದಾಹ ಎಂಬ ಪಿಶಾಚಿಯ ಯಾವ ರೀತಿ ತನ್ನ ಕ್ರೂರತೆಯನ್ನು ತೋರಿಸುತ್ತದೆ ಹೇಗೆ ಅದಕ್ಕೆ ಕೊಂಚವೂ ದಯವಿಲ್ಲ ಎಂಬುದನ್ನು ಕವಿಯ ಪದಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ ಆ ಭೀಭತ್ಸ ತೆಯು ಮೈ ಝುಮ್ ಎನ್ನುವಂತೆ ಮಾಡುತ್ತದೆ .ಬಾಣಂತಿ ಎಲುಬಿನ ಬಿಳುಪಿನ ಕಿರು ಗೆಜ್ಜೆ ,ಸಣ್ಣ ಕಂದಮ್ಮಗಳ ಕಣ್ಣಿನ ಕವಡೆ, ಬಡವರ ಹೊಟ್ಟೆಯ ಸಂಕಟದುರಿಯ ಪಂಜು ಅಬ್ಬಾ! ಕವಿಯ ಕಲ್ಪನೆಗೆ ಕವಿ ಕಲ್ಪನೆಯೇ ಸಾಟಿ . ಒಂದೊಂದು ವಿವರವೂ ಓದುಗನಲ್ಲಿ ಸುಪ್ತವಾಗಿರುವ ಯಾವುದೋ ಒಂದು ಭಾವನೆಯನ್ನು ಕೆಣಕುತ್ತದೆ ಅವನನ್ನೇ ಕಾವ್ಯದ ಅಂಗವನ್ನಾಗಿ ಮಾಡುತ್ತದೆ .ಪದ್ಯ ವಿಡೀ ಕುರುಡು ಕಾಂಚಾಣದ ಗೆಜ್ಜೆಯ ಕುಣಿತದ ಸದ್ದು ಓದುಗನ ಕಿವಿಗಳಲ್ಲಿ ಅನುರಣಿಸುತ್ತಿರುತ್ತದೆ ಮತ್ತು ಪದ್ಯ ಗೆಲ್ಲುವುದು ಅಲ್ಲೇ .ಹಣದ ಝಣಝಣ ಮನೆಗಳ ಮಹಡಿಗಳಲ್ಲಿ ನಾಟ್ಯ ವಾಡುತ್ತದೆ ಗುಡಿಗಳಲ್ಲಿ ಗಣಗಣಿಸುತ್ತದೆ ಮತ್ತುಅಂಗಡಿಗಳಲ್ಲಿಯೂ ಅದರದೇ ಕಾರುಬಾರು ಎಂದು ವರ್ಣಿಸುತ್ತಾ ಕವಿ ಕಟ್ಟಕಡೆಯಲ್ಲಿ ಎಂದು ಹಣ ಗೆಲ್ಲಲಾಗುವುದಿಲ್ಲ ಎಷ್ಟು ದಿನ ಕುಣಿದೀತು? ಒಂದಲ್ಲ ಒಂದು ದಿನ ಅಂಗಾತವಾಗಿ ಬೀಳಲೇಬೇಕು. ಆಗ ಅದನ್ನು ಮೇಲೆತ್ತಲು ಮಾನವೀಯತೆಯೇ ಬರಬೇಕು ಎಂದು ಸೂಚ್ಯವಾಗಿ ತಿಳಿಸುತ್ತಾರೆ . ಇಷ್ಟು ದಿನಗಳಾದರೂ ಈ ಕವನದ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದು ಕುರುಡು ಕಾಂಚಾಣಕ್ಕೂ ಕವಿ ಭಾವಕ್ಕೂ ಇರುವ ಸಂಬಂಧದ ದ್ಯೋತಕವೇ? ಕುರುಡು ಕಾಂಚಾಣಾ ಕುಣಿಯುತಲಿತ್ತು | ಕಾಲಿಗೆ ಬಿದ್ದವರ ತುಳಿಯುತಲಿತ್ತೋ || ಕುರುಡು ಕಾಂಚಾಣಾ || ಬಾಣಂತಿಯೆಲುಬ ಸಾ- ಬಾಣದ ಬಿಳುಪಿನಾ ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ; ಸಣ್ಣ ಕಂದಮ್ಮಗಳ ಕಣ್ಣೀನ ಕವಡಿಯ ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ; ಬಡವರ ಒಡಲಿನ ಬಡಬಾsನಲದಲ್ಲಿ ಸುಡು ಸುಡು ಪಂಜು ಕೈಯೊಳಗಿತ್ತೋ; ಕಂಬನಿ ಕುಡಿಯುವ ಹುಂಬ ಬಾಯಿಲೆ ಮೈ- ದುಂಬಿದಂತುಧೋ ಉಧೋ ಎನ್ನುತಲಿತ್ತೋ; ಕೂಲಿ ಕುಂಬಳಿಯವರ ಪಾಲಿನ ಮೈದೊಗಲ ಧೂಳಿಯ ಭಂಡಾರ ಹಣೆಯೊಳಗಿತ್ತೋ; ಗುಡಿಯೊಳಗೆ ಗಣಣ, ಮಾ ಹಡಿಯೊಳಗೆ ತನನ, ಅಂ- ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ; ಹ್ಯಾಂಗಾರೆ ಕುಣಿಕುಣಿದು ಮಂಗಾಟ ನಡೆದಾಗ ಅಂಗಾತ ಬಿತ್ತೋ, ಹೆಗಲಲಿ ಎತ್ತೋ. ಅಂಬಿಕಾತನಯದತ್ತ… *********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ನಿರುದ್ಯೋಗದ ವಿರುದ್ದ ಹೋರಾಟ ಗಣೇಶಭಟ್ ಶಿರಸಿ ನಿರುದ್ಯೋಗದ ವಿರುದ್ಧ ಹೋರಾಟ….. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ, ಉದ್ಯಮಗಳು ಮುಚ್ಚುತ್ತಿರುವುದರಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಿದೆಯೆಂಬುದನ್ನು ಹಲವು ವರದಿಗಳು ಹೇಳುತ್ತಿವೆ. ಆರ್ಥಿಕ ಹಿಂಜರಿತ ಉಂಟಾಗಿರುವುದೇ ಇದಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ. ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕುವ ಬದಲಿಗೆ, ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ನಡೆದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ನಿರುದ್ಯೋಗದ ವಿರುದ್ಧ ಹೋರಾಟ ಮಾಡುವುದಾಗಿ ಘೋಷಣೆ ಮಾಡಿ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಕರೆಮಾಡಿ ಬೆಂಬಲ ಸೂಚಿಸಲು ಕೋರಿದ್ದಾರೆ. ನಿರುದ್ಯೋಗ ನಿವಾರಣೆಗೆ ಇಷ್ಟೊಂದು ಸುಲಭದಲ್ಲಿ ಪರಿಹಾರ ಕಂಡುಕೊಳ್ಳುವ ಹಾಗಿದ್ದಿದ್ದರೆ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಸರ್ಕಾರದ ವಿರುದ್ಧದ ಘೋಷಣೆಗಳು, ಮೆರವಣಿಗೆಗಳು, ಬಂದ್ ಆಚರಣೆಗಳು ಈ ಸಮಸ್ಯೆಗೆ ಪರಿಹಾರ ಸೃಷ್ಟಿಸಲಾರದು ಎಂಬ ಅರಿವು ರಾಜಕೀಯ ಮುಖಂಡರಿಗೆ ಇದ್ದೇ ಇದೆ. ಆದರೆ ಜನ ಸಾಮಾನ್ಯರೆದುರು ತಮ್ಮ ಕಳಕಳಿಯನ್ನು ಪ್ರದರ್ಶಿಸಿ ರಾಜಕೀಯ ಲಾಭ ಗಳಿಸುವ, ಪ್ರಚಲಿತದಲ್ಲಿರುವುದೇ ಇಂಥವರ ಉದ್ದೇಶ. ನಿರುದ್ಯೋಗ ಸಮಸ್ಯೆಯ ಮೂಲ ಇರುವುದು ನಮ್ಮ ಸಾಮಾಜಿಕ- ಆರ್ಥಿಕ ವ್ಯವಸ್ಥೆಯಲ್ಲಿ. ಎಲ್ಲಿಯವರೆಗೆ ಬಂಡವಾಳವಾದದ ಚೌಕಟ್ಟಿನಲ್ಲೇ ವ್ಯವಹರಿಸುತ್ತಿರುತ್ತೇವೋ ಅಲ್ಲಿಯವರೆಗೂ ನಿರುದ್ಯೋಗ ಇದ್ದೇ ಇರುತ್ತದೆ. ಯಾಕೆಂದರೆ 100% ಉದ್ಯೋಗ ಎಂದರೆ ದುಡಿಯುವ ಸಾಮಥ್ರ್ಯವುಳ್ಳ ಎಲ್ಲರಿಗೂ ಉದ್ಯೋಗಾವಕಾಶ ಎಂಬ ತತ್ವವನ್ನು ಬಂಡವಾಳವಾದ ಒಪ್ಪುವುದಿಲ್ಲ. ಉದ್ಯಮ , ಉದ್ಯಮಿಗಳು ಹಾಗೂ ಆರ್ಥಿಕ ಚಟುವಟಿಕೆ ನಡೆಸುವವರ ಅಗತ್ಯಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ತರಬೇತಿ ಹೊಂದಿರದಿದ್ದರೆ , ಅಂಥವರಿಗೆ ಉದ್ಯೋಗ ನೀಡುವುದು ಸಾಧ್ಯವಾಗದು ಎಂಬುದು ಬಂಡವಾಳವಾದಿ ಚಿಂತನೆ. ಹೂಡಿಕೆದಾರರ ಉದ್ದೇಶ ಲಾಭ ಗಳಿಕೆ ಮತ್ತು ಲಾಭದಲ್ಲಿ ಸಾಧ್ಯವಾದಷ್ಟೂ ಹೆಚ್ಚಳ ಮಾಡುವುದು. ಅದಕ್ಕಾಗಿ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳು ಆದಷ್ಟು ಕಡಿಮೆ ವೆಚ್ಚದಲ್ಲಿ ಲಭ್ಯವಾಗಬೇಕೆಂದು ಅವರು ಬಯಸುತ್ತಾರೆ. ಉದಾಹರಣೆಗಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ, ಉದ್ದಿಮೆ ಇತ್ಯಾದಿಗಳಿಗೆ ಕಾರ್ಮಿಕರು ಕಡಿಮೆ ಸಂಬಳದಲ್ಲಿ ದುಡಿಯಲು ಬೇರೆ ರಾಜ್ಯಗಳಿಂದ ಬರುತ್ತಿರುವಾಗ ಹೆಚ್ಚಿನ ಸಂಬಳ ಕೇಳುವ ಸ್ಥಳೀಯರಿಗೆ ಉದ್ಯೋಗ ಸಿಗಲಾರದು. ಆಗ ಸ್ಥಳೀಯರು ನಿರುದ್ಯೋಗಿಗಳಾಗಬೇಕಾಗುವ ಪರಿಸ್ಥಿತಿ ಎದುರಾಗುವುದು ಬಂಡವಾಳ ವ್ಯವಸ್ಥೆಯ ಪರಿಣಾಮ. ಸ್ಥಳೀಯವಾಗಿ ಸಾಕಷ್ಟು ಸಂಪನ್ಮೂಲಗಳು ಲಭ್ಯವಿದ್ದರೂ ಅವುಗಳನ್ನು ಗುರ್ತಿಸುವ, ಬಳಸುವ ಯೋಜನೆ, ಯೋಚನೆಗಳು ಇಲ್ಲದಾಗ ನಿರುದ್ಯೋಗ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಆಡಳಿತದ ವೈಫಲ್ಯವೇ ಕಾರಣ. ಕೇಂದ್ರೀಕೃತ ಅರ್ಥವ್ಯವಸ್ಥೆಯಲ್ಲಿ (ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿರುವ ಪದ್ಧತಿ) ತಳಮಟ್ಟದಿಂದ ಯೋಜನಾ ನಿರೂಪಣೆಯಾಗುವ ಬದಲಿಗೆ ರಾಜ್ಯ ಅಥವಾ ದೇಶಮಟ್ಟದಲ್ಲಿ ರೂಪಗೊಂಡ ಯೋಜನೆಗಳು ಮೇಲಿನಿಂದ ಕೆಳಕ್ಕೆ ಹೇರಲ್ಪಡುತ್ತವೆÉ. ಭೌಗೋಳಿಕ, ನೈಸರ್ಗಿಕ, ಸಾಮಾಜಿಕ, ಸಾಂಸ್ಕøತಿಕ ವೈವಿದ್ಯತೆಯನ್ನು ಹೊಂದಿರುವ ಭಾರತದಲ್ಲಿ ಇಡೀ ದೇಶಕ್ಕೆ ಏಕರೂಪದ ಯೋಜನೆಯನ್ನು ಅನ್ವಯಿಸಲು ಸಾಧ್ಯವಾಗದು. ಸ್ಥಳೀಯರಿಗೆ ಶತಪ್ರತಿಶತ ಉದ್ಯೋಗಾವಕಾಶ ಸೃಷ್ಟಿಸಬೇಕೆಂಬ ಉದ್ದೇಶದಿಂದ ಯಾವ ಅಭಿವೃದ್ಧಿ ಯೋಜನೆಯೂ ರೂಪುಗೊಳ್ಳುತ್ತಿಲ್ಲ. ಸಂಪನ್ಮೂಲಗಳ ಬಳಕೆಯಿಂದ ಲಾಭ ಹೆಚ್ಚಿಸುವ (ಖಾಸಗಿ ಅಥವಾ ಸರ್ಕಾರಿ ರಂಗಕ್ಕೆ) ಉದ್ದೇಶದಿಂದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಜನರಿಗೆ ಉದ್ಯೋಗ ನೀಡಬೇಕೆಂದು ರೂಪುಗೊಂಡಿರುವ ಯೋಜನೆಗಳು ದುಡಿಮೆಯ ಅವಕಾಶವೆಂದು ಪರಿಗಣಿಸಲ್ಪಡುವ ಬದಲಿಗೆ , ಸರ್ಕಾರದ ಸೌಲಭ್ಯವನ್ನು ಹಂಚುವ ಅಥವಾ ದೋಚಿಕೊಳ್ಳುವ ಅವಕಾಶವೆಂದು ಭಾವಿಸುವ ರೀತಿಯಲ್ಲಿ ರಚಿತವಾಗಿವೆ, ಅನುಷ್ಠಾನಗೊಳ್ಳುತ್ತಿವೆ. ದುಡಿಯುವ ಸಾಮಥ್ರ್ಯವುಳ್ಳ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ದುಡಿಮೆಯ ಅವಕಾಶ (ಅಂದರೆ ದುಡಿಯುವ ವ್ಯಕ್ತಿ ಹಾಗೂ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷದೋಪಚಾರಗಳನ್ನು ಕೊಂಡುಕೊಳ್ಳುವ ಸಾಮಥ್ರ್ಯವುಳ್ಳ ಪ್ರತಿಫಲ ನೀಡುವ ದುಡಿಮೆ) ಅಂದರೆ 100% ಉದ್ಯೋಗಾವಕಾಶ ಸೃಷ್ಟಿಸಲು ಖಂಡಿತಕ್ಕೂ ಸಾಧ್ಯವಿದೆ. ಇದಕ್ಕಾಗಿ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕಿದೆ. ಪರಿವರ್ತನೆ ಪ್ರಾರಂಭವಾಗಬೇಕಾದುದು ಯೋಜನಾ ನಿರೂಪಣೆಯ ವಿಧಾನವನ್ನು ಬದಲಿಸುವ ಮೂಲಕ. ಭೂಮಿಯ ಎಲ್ಲೆಡೆ ಒಂದಿಲ್ಲೊಂದು ವಿಧದ ಸಂಪನ್ಮೂಲವನ್ನು ಪ್ರಕೃತಿ ನೀಡಿದೆ. ಅದನ್ನು ಬಳಸುವ ಬುದ್ದಿಮತ್ತೆಯನ್ನೂ ಮಾನವನಿಗೆ ಕೊಟ್ಟಿದೆ. ಸಂಪನ್ಮೂಲ ಲಭ್ಯತೆ, ಆರ್ಥಿಕ ಅವಕಾಶಗಳನ್ವಯ ಪ್ರತಿ ಬ್ಲಾಕ್‍ನಲ್ಲಿ ಅಲ್ಲಿಯ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಈ ಯೋಜನೆಯನ್ನು ಜಿಲ್ಲಾಮಟ್ಟದಲ್ಲಿ ಕ್ರೋಢೀಕೃತಗೊಂಡು, ರಾಜ್ಯಮಟ್ಟದಲ್ಲಿ ಅಂತಿಮಗೊಳ್ಳಬೇಕು. ಇಂದಿನ ವ್ಯವಸ್ಥೆಯಲ್ಲಿ ಯಾರು, ಯಾವ ಉದ್ಯೋಗವನ್ನು ಬೇಕಾದರೂ ಮಾಡಬಹುದಾಗಿದೆ. ಯಾವ ಕ್ಷೇತ್ರದ ಮೇಲೆ ಎಷ್ಟು ಜನ ಅವಲಂಬಿತರಾಗಿರಬೇಕೆಂಬ ಕುರಿತು ನಿರ್ದಿಷ್ಟ ಪ್ರಮಾಣವನ್ನು ನಿಗದಿಪಡಿಸಿಲ್ಲ.ಇದರಿಂದಾಗಿ ಅರ್ಥವ್ಯವಸ್ಥೆಯ ಯಾವುದೋ ಒಂದು ವಿಭಾಗದ ಮೇಲೆ ಅತಿಹೆಚ್ಚು ಜನರು ಅವಲಂಬಿತರಾಗುತ್ತಾರೆ. ಉದಾಹರಣೆಗಾಗಿ ಕೃಷಿ ಕ್ಷೇತ್ತದ ಮೇಲೆ ಕೆಲವೇ ವರ್ಷಗಳ ಹಿಂದೆ ಶೇಕಡಾ 75 ಕ್ಕೂ ಹೆಚ್ಚು ಜನರು ಅವಲಂಬಿತರಾಗಿದ್ದರು. ಸರ್ಕಾರಿ ನೌಕರಿಯ ಮೇಲೆ ಶೇಕಡಾ 6 ರಿಂದ 8 ರಷ್ಟು ಜನರು ಈಗಾಗಲೇ ಅವಲಂಬಿತರಾಗಿದ್ದು, ಈ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಒತ್ತಡ ತರಲಾಗುತ್ತಿದೆ. ಕೃಷಿ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆ ಇರುವ ದೇಶಗಳಲ್ಲಿ ಬಡತನ ಹೆಚ್ಚು ಎಂಬುದು ಎದ್ದು ಕಾಣುವ ವಾಸ್ತವ. ಉದ್ದಿಮೆ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆಯುಳ್ಳ ದೇಶಗಳು, ಆಹಾರ ಮತ್ತು ಕಚ್ಚಾವಸ್ತುಗಳ ಪೂರೈಕೆಗಾಗಿ ಇತರ ದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಜಾಗತಿಕ ನಿಯಂತ್ರಣಕ್ಕಾಗಿ ಅಮೇರಿಕಾ ಸೆಣಸಾಡುತ್ತಿರುವುದು ವಿವಿಧ ದೇಶಗಳ ಸಂಪನ್ಮೂಲಗಳ ಮೇಲೆ ಹತೋಟಿ ಹೊಂದಬೇಕೆಂಬ ಕಾರಣಕ್ಕೆ ಎನ್ನುವುದು ಜಗಜ್ಜಾಹೀರಾಗಿದೆ. ಅತಿಯಾದ ಔದ್ಯಮೀಕರಣದಿಂದ ಆರ್ಥಿಕ ಹಿಂಜರಿತ, ಕುಸಿತಗಳಂತಹ ತಾಪತ್ರಯಗಳ ಜೊತೆಗೆ , ನಗರೀಕರಣದ ಸಮಸ್ಯೆಗಳು, ಸಾಂಸ್ಕøತಿಕ ಆಘಾತ, ನೈತಿಕ ಅಧಃಪತನ, ಅಮಾನವೀಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಲಾಭ ಹೆಚ್ಚಳದ ಗುರಿಯನ್ನೇ ಹೊಂದಿರುವ ಔದ್ಯಮಿಕ , ವ್ಯವಹಾರಿಕ ಪರಿಸ್ಥಿತಿಯ ಪರಿಣಾಮದಿಂದ ನೈಸರ್ಗಿಕ ವಿಕೋಪಗಳನ್ನೆದುರಿಸುವ ಆತಂಕ ತಪ್ಪಿಸಲಾಗುತ್ತಿಲ್ಲ. ಇದಕ್ಕೆಲ್ಲಾ ಪರಿಹಾರವೆಂದರೆ ಸಮತೋಲಿತ ಅರ್ಥವ್ಯವಸ್ಥೆ. ಅಂದರೆ ಯಾವ ಆರ್ಥಿಕ ಕ್ಷೇತ್ರದ ಮೇಲೆ ಜನಸಂಖ್ಯೆಯ ಎಷ್ಟು ಭಾಗ ಅವಲಂಬಿತವಾಗಬೇಕೆಂಬುದರ ದಿಕ್ಸೂಚಿ ಇರಬೇಕು. ಅರ್ಥಶಾಸ್ತ್ರಜ್ಞ ಶ್ರೀ ಪ್ರಭಾತ ರಂಜನ್ ಸರ್ಕಾರರ ಅಭಿಪ್ರಾಯದಂತೆ ಕೃಷಿರಂಗದ ಮೇಲೆ 30 ರಿಂದ 40% ಜನರು ಅವಲಂಬಿತರಾಗಿರುವದು ಸೂಕ್ತ. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ಯಮಗಳ ಮೇಲೆ ತಲಾ 10 ರಿಂದ 20%, ಇತರ ಉದ್ಯಮಗಳ ಮೇಲೆ 10 ರಿಂದ 20%, ವ್ಯಾಪಾರ- ವಹಿವಾಟುಗಳ ಮೇಲೆ ಸುಮಾರು 10%, ಸೇವಾ ಕ್ಷೇತ್ರದ ಮೇಲೆ ಸುಮಾರು 10% ನಷ್ಟು ಜನರು ಅವಲಂಬಿತರಾಗಿರುವ ಪರಿಸ್ಥಿತಿ ಇರುವಾಗ 100% ಉದ್ಯೋಗವಕಾಶ ಸಾಧ್ಯವಾಗುತ್ತದೆ ಹಾಗೂ ಜನರ ಆರ್ಥಿಕ ಸ್ಥಿತಿಯಲ್ಲಿ ಬಹಳಷ್ಟು ಏರುಪೇರು ಇರುವುದಿಲ್ಲವೆಂದು ಅವರು ಹೇಳುತ್ತಾರೆ. ಯಾವ ಅನುಪಾತವೂ ಇಲ್ಲದ ಇಂದಿನ ವ್ಯವಸ್ಥೆಗೆ ಹೋಲಿಸಿದರೆ, ಸೂಚಿತ ಸಮತೋಲಿತ ವ್ಯವಸ್ಥೆಯು ನಿಯಂತ್ರಿತ ವ್ಯವಸ್ಥೆಯಂತೆ ತೋರಬಹುದು. ಆದರೆ ಉದ್ಯೋಗ ಸೃಷ್ಟಿಯ ಹೊಣೆಗಾರಿಕೆ ಸರ್ಕಾರದ್ದು ಎಂದು ಒಪ್ಪಿಕೊಂಡಾಗ ಕೆಲಮಟ್ಟಿನ ನಿಯಂತ್ರಣ ಅಗತ್ಯ. ಇದರಿಂದಾಗಿ ಪ್ರತಿ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಉದ್ಭವಿಸಬಹುದಾದ ದುಡಿಮೆಯ ಅವಕಾಶಗಳ ಸ್ಪಷ್ಟತೆ ಆಡಳಿತಕ್ಕೆ ಸಿಗುತ್ತದೆ. ಅದಕ್ಕೆ ಅನುಗುಣವಾಗಿ ಕೌಶಲ್ಯ ಶಿಕ್ಷಣದ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗುತ್ತದೆ. ಯುವಕರಿಗೆ ಕೌಶಲ್ಯ ಶಿಕ್ಷಣವನ್ನು ನೀಡಲು ಇಂದು ಕೂಡಾ ಸರ್ಕಾರಗಳು ಸಾಕಷ್ಟು ಹಣ ವಿನಿಯೋಗಿಸುತ್ತವೆ. ಆದರೆ ಉದ್ಯೋಗ ಹುಡುಕಿಕೊಳ್ಳುವುದು ಶಿಕ್ಷಣ ಪಡೆದವರ ಹೊಣೆಗಾರಿಕೆಯಾಗಿರುವುದರಿಂದ, ಯಾವ ವೃತ್ತಿಗೆ ಸಂಬಂಧಿಸಿ ಕೌಶಲ್ಯ ಪಡೆಯಬೇಕೆಂದು ನಿರ್ಧರಿಸುವುದು ಕಠಿಣ. ವಿವಿಧ ಆರ್ಥಿಕ ಕ್ಷೇತ್ರಗಳ ಮೇಲೆ ಅವಲಂಬಿತರಾಗಬೇಕಾದ ಜನಸಂಖ್ಯೆಯ ಸ್ಥೂಲ ಪ್ರಮಾಣವನ್ನು ನಿರ್ಧರಿಸಿದ ನಂತರ ಹಂತಹಂತವಾಗಿ ಅದರ ಮೇಲಿನ ಅವಲಂಬಿತರ ಸಂಖ್ಯೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಬೇಕು. ಉದಾಹರಣೆಗಾಗಿ ಕೃಷಿ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆ ಇರುವಾಗ, ಅಲ್ಲಿಯವರನ್ನು ಇತರ ಕ್ಷೇತ್ರಗಳಾದ ಕೃಷಿ ಆಧಾರಿತ ಅಥವಾ ಕೃಷಿ ಪೂರಕÀ ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುವ, ಅವರಿಗೆ ಉದ್ಯೋಗದ ನಿಶ್ಚಿತತೆ ಕಲ್ಪಿಸುವ ಮುಖೇನ ಆಕರ್ಷಿಸಬೇಕು. ಇದು ಭಾಷಣ ಅಥವಾ ಕೂಗಾಟ, ಹೋರಾಟಗಳಿಂದ ಸಾಧ್ಯವಾಗದು. ಆದರೆ ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದರಿಂದ ಇದು ಕಾರ್ಯ ಸಾಧ್ಯ. ಪ್ರತಿಯೋರ್ವ ವ್ಯಕ್ತಿಗೂ ಕೃಷಿ ಭೂಮಿ ಸಿಗಬೇಕು ಎಂಬ ಕಮ್ಯುನಿಸ್ಟರ ಹೋರಾಟಕ್ಕೆ ಆರ್ಥಿಕ ಚಿಂತನೆಯ ಬೆಂಬಲವಿಲ್ಲ. ಯಾಕೆಂದರೆ ವೈಯಕ್ತಿಕವಾಗಿ ಕೈಗೊಳ್ಳುವ ಕೃಷಿಗೆ ಆರ್ಥಿಕವಾಗಿ ಲಾಭದಾಯಕವಾಗಬಲ್ಲ ಪ್ರಮಾಣದ ಹಿಡುವಳಿ ಇರಲೇಬೇಕು. (ಭೂಮಿಯ ಫಲವತ್ತತೆ ನೀರಾವರಿ ಸೌಲಭ್ಯ ಇತ್ಯಾದಿ ಹಲವು ಅಂಶಗಳನ್ನು ಆಧರಿಸಿ ಕ್ಷೇತ್ರದ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ) ಜನರಿಗೆ ಆಸೆ ಹುಟ್ಟಿಸಿ ರಾಜಕೀಯ ಲಾಭ ಗಳಿಸುವ, ದಾಳವಾಗಿಯಷ್ಟೇ ಬಳಸುವ ಘೋಷಣೆಯಿದು. 100% ಉದ್ಯೋಗವಕಾಶ ಸೃಷ್ಟಿಸುವುದು ಬಂಡವಾಳವಾದಿ ವ್ಯವಸ್ಥೆಯಲ್ಲಿ ಸಾಧ್ಯವಾಗದು. ಉದ್ದಿಮೆ ಘಟಕದ ವ್ಯವಹಾರದಲ್ಲಿ ಕಡಿತವಾದಾಗ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತದೆ. ಯಾಕೆಂದರೆ ಆ ಘಟಕ ತನ್ನ ಲಾಭದ ಪ್ರಮಾಣವನ್ನು ಕಡಿತಗೊಳಿಸಲು ಅಥವಾ ನಷ್ಟವನ್ನು ಅನುಭವಿಸಲು ಸಿದ್ಧವಿರುವುದಿಲ್ಲ. ಯಾಂತ್ರೀಕರಣ ಅನುಷ್ಠಾನವಾದಾಗ ಕೂಡಾ ಇದೇ ರೀತಿಯ ಸಮಸ್ಯೆ ಎದುರಾಗುತ್ತದೆ. ಸಹಕಾರಿ ಅರ್ಥವ್ಯವಸ್ಥೆಯೇ ಇದಕ್ಕೆ ಪರಿಹಾರ. ಯಾವುದೇ ಆರ್ಥಿಕ ಚಟುವಟಿಕೆಯನ್ನು ಸರ್ಕಾರಿ, ಖಾಸಗಿ ಅಥವಾ ಸಹಕಾರಿ ರಂಗದಲ್ಲಿ ಕೈಗೊಳ್ಳುವ ಅವಕಾಶ ಪ್ರಸಕ್ತÀದಲ್ಲಿದೆ. ಇದರಿಂದಾಗಿ ಸರ್ಕಾರಿ ಉದ್ಯಮಗಳು ನಷ್ಟವನ್ನನುಭವಿಸುವುದು, ಖಾಸಗಿ ಮತ್ತು ಸಹಕಾರಿ ರಂಗದ ನಡುವಿನ ಅನಾರೋಗ್ಯಕರ ಪೈಪೋಟಿಯನ್ನು ಕಾಣುತ್ತೇವೆ. ಇದನ್ನು ಸರಿಪಡಿಸುವ ವಿಧಾನವೆಂದರೆ ಈ ಮೂರೂ ರಂಗಗಳು ಕೈಗೊಳ್ಳಬಹುದಾದ ಆರ್ಥಿಕ ಚಟುವಟಿಕೆಗಳನ್ನು ನಿರ್ದಿಷ್ಟಪಡಿಸುವುದು. ಇಡೀ ಅರ್ಥವ್ಯವಸ್ಥೆಗೆ ಆಧಾರ ಪ್ರಾಯವಾಗಿರುವ ಉದ್ದಿಮೆಗಳನ್ನು ಸರ್ಕಾರಿರಂಗಕ್ಕೆ, ಚಿಕ್ಕಪುಟ್ಟ ಉದ್ಯಮಗಳನ್ನು, ಸಹಕಾರಿ ರಂಗ ಕಾರ್ಯನಿರ್ವಹಿಸಲು ಸಾಧ್ಯವಾಗದಷ್ಟು ಸಣ್ಣ ವ್ಯವಹಾರಗಳನ್ನು ಖಾಸಗಿ ರಂಗಕ್ಕೆ ಸೀಮಿತಗೊಳಿಸಬೇಕು. ಉಳಿದಂತೆ ಎಲ್ಲಾ ವಿಧದ ಉತ್ಪಾದನೆ, ವಿತರಣೆಗಳು ಸಹಕಾರಿ ರಂಗಕ್ಕೇ ಸೀಮಿತವಾಗಿರಬೇಕು. ಇದರರ್ಥ ಸ್ಪರ್ಧೆಯೇ ಇರಬಾರದು ಎಂಬುದಲ್ಲ. ಸಮಾನ ನೆಲೆಯಲ್ಲಿ ಇರುವವರ ನಡುವೆ ಅಂದರೆ ಖಾಸಗಿ ರಂಗದ ಸ್ಪರ್ಧೆ ಖಾಸಗಿಗಳ ನಡುವೆ, ಸಹಕಾರಿಯ ಸ್ಪರ್ಧೆ ಸಹಕಾರಿಯೊಡನೆ ಇರುವಂತಾಗಬೇಕು. ಸಹಕಾರಿ ಸಂಸ್ಥೆಗಳು ಲಾಭಗಳ ಹೆಚ್ಚಳ ಮಾಡುವ ಘಟಕಗಳಾಗದೇ, ತಮ್ಮ ಸದಸ್ಯರ ಕಷ್ಟ -ಸುಖಗಳನ್ನು ಮಾನವೀಯ ನೆಲೆಯಲ್ಲಿ ಹಂಚಿಕೊಳ್ಳುವ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವ ಅವಕಾಶ ಹೊಂದಿವೆ. ಸಹಕಾರಿ ಅರ್ಥವ್ಯವಸ್ಥೆಯಲ್ಲಿ ಉದ್ಯೋಗ ನಷ್ಟದ ಬದಲು ಕೆಲಸದ ಅವಧಿಯನ್ನೇ ಕಡಿತಗೊಳಿಸಿ, ಸಂಕಷ್ಟದ ಸಮಯವನ್ನು ಎದುರಿಸಬಹುದಾಗಿದೆ. ನಿರುದ್ಯೋಗದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿರುವುದು ರಾಜಕೀಯ ಹೋರಾಟ ಮಾತ್ರ. ಇಷ್ಟು ವರ್ಷ ಆಡಳಿತ ನಡೆಸಿದ ರಾಜಕೀಯ ಪಕ್ಷಗಳಿಗೆ ಕಣ್ಣಿಗೆ ಕಾಣದ ನಿರುದ್ಯೋಗ ಸಮಸ್ಯೆ ಅಧಿಕಾರ ಕಳೆದುಕೊಂಡ ತಕ್ಷಣ ಕಣ್ಣಿಗೆ ಕಾಣತೊಡಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‍ನ ಆರ್ಥಿಕ ಚಿಂತನೆಗಳ ನಡುವೆ ಯಾವುದೇ ಪ್ರಮುಖ ವ್ಯತ್ಯಾಸವಿಲ್ಲ. ಎಲ್ಲಾ ಪಕ್ಷಗಳ ಆರ್ಥಿಕ ಚಿಂತನೆಗಳೂ ಬಂಡವಾಳವಾದದ ಚೌಕಟ್ಟಿಗೇ ಸೀಮಿತವಾಗಿವೆ. ಎಲ್ಲಿಯವರೆಗೆ ವಿಕೇಂದ್ರೀಕೃತ ಆರ್ಥಿಕ ನೀತಿಯನ್ನು ಅನುಷ್ಠಾನಗೊಳಿಸುವುದಿಲ್ಲವೋ ಅಂದರೆ ಜನಾಧಿಕಾರದ ಸಹಕಾರಿ ಅರ್ಥವ್ಯವಸ್ಥೆ ಜಾರಿಗೆ ಬರುವುದಿಲ್ಲವೋ, ಅಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಕಾಂಗ್ರೆಸ್, ಕಾಂಗ್ರೆಸ್ ಇರುವಲ್ಲಿ ಬಿಜೆಪಿ ಅಥವಾ ಇನ್ಯಾವುದೋ ಪಕ್ಷದ ರಾಜಕೀಯ ಡೊಂಬರಾಟದಿಂದ ನಿರುದ್ಯೋಗಿಗಳ ಕಣ್ಣಿಗೆ ಮಣ್ಣೆರಚುತ್ತಲೇ ಇರುತ್ತಾರೆ.

ಪ್ರಸ್ತುತ Read Post »

You cannot copy content of this page

Scroll to Top