ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪ್ರಬಂಧ

ವಿಚಿತ್ರ ಆಸೆಗಳು…ಹೀಗೊಂದಷ್ಟು,

ಲಲಿತ ಪ್ರಬಂಧ ವಿಚಿತ್ರ  ಆಸೆಗಳು…ಹೀಗೊಂದಷ್ಟು, ಸಮತಾ ಆರ್. “ಕಕ್ ಕಕ್ ಕಕ್ ಕೊಕ್ಕೋಕ್ಕೊ” ಅಂತ ಒಂದು ಬಿಳಿ,ಬೂದು,ಕೆಂಪು ಬಣ್ಣದ ರೆಕ್ಕೆ ಪುಕ್ಕಗಳ,ಅಂಗೈ ಅಗಲದ ಜುಟ್ಟಿದ್ದ,ಕಮ್ಮಿ ಅಂದರೂ ನಾಲ್ಕೈದು ಕೆಜಿ ತೂಗುತ್ತಿದ್ದ ಗಿರಿರಾಜ ಹುಂಜ ವೊಂದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಗತ್ತಿನಿಂದ ,ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾಗ,ಸುತ್ತ ನಾಲ್ಕೈದು ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿಕೊಂಡು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕಲಿಸುತ್ತಿದ್ದ ನನಗೆ ಎಷ್ಟು ಪ್ರಯತ್ನ ಪಟ್ಟರೂ ಆ ಹುಂಜನಿಂದ ಕಣ್ಣು ಕೀಳ ಲಾಗಲಿಲ್ಲ. ನನ್ನಿಂದ ಅನತಿ ದೂರದಲ್ಲಿ ಕುಳಿತಿದ್ದ ನನ್ನ ಸಹೋದ್ಯೋಗಿ ಗೆಳತಿ ನಾನು ಹುಂಜವನ್ನೆ ನೋಡುತ್ತಿರುವುದನ್ನು ಕಂಡು,ನನ್ನ ಕೋಳಿ ಪ್ರೀತಿ ಅರಿತಿದ್ದ ಆಕೆ”ಮೇಡಂ ,ಕೋಳಿ ಅನಾಟಮಿ ಆಮೇಲೆ ಮಾಡಿದ್ರಾಯಿತು,ಈಗ ಮಕ್ಕಳ ಕಡೆ ಗಮನ ಕೊಡಿ” ಎಂದು ನಕ್ಕಾಗ ನಾಚಿಕೆ ಎನಿಸಿ ಮತ್ತೆ ಪಾಠದ ಕಡೆ ಮರಳಿದೆ. ಇದಾಗಿದ್ದು ಹೇಗೆಂದರೆ, ಕರೋನ ಕಾರಣ ದಿಂದಾಗಿ,ಶಾಲೆಗಳು ತೆರೆಯಲಾಗದೆ ಶಿಕ್ಷಕರೇ ಮಕ್ಕಳಿರುವ ಕಡೆ ಹೋಗಿ ಕಲಿಸುವ ವಿದ್ಯಾಗಮ ಎನ್ನುವ ಕಾರ್ಯಕ್ರಮದಡಿಯಲ್ಲಿ,ನನಗೆ ಮತ್ತು ನನ್ನ ಗೆಳತಿಗೆ  ಹಂಚಿಕೆಯಾದ ಏರಿಯಾಗಳಲ್ಲಿ, ಒಂದು ವಿಶಾಲವಾದ ತೋಟದ ಮನೆಯ ಅಂಗಳದಲ್ಲಿ ಮಕ್ಕಳ ಕೂರಿಸಲು ಒಂದು ವರಾಂಡ  ಬಳಸಿಕೊಳ್ಳಲು ಅವಕಾಶ ಸಿಕ್ಕಿತು.  ತೋಟದ ಮನೆ ಅಂದ ಮೇಲೆ ಕೇಳಬೇಕೆ,ಎಲ್ಲೆಲ್ಲೂ ಹಸಿರು,ಶುದ್ಧವಾದ ಗಾಳಿ,ಬೆಳಕು,ಕಲಿಕೆಗೆ ಒಳ್ಳೆಯ ವಾತಾವರಣ ಅನ್ನಿಸಿ,ನಾವಿಬ್ಬರೂ  ಬೇರೆ ಬೇರೆ ಗುಂಪು ಗಳಲ್ಲಿ ಕುಳಿತು ಕಲಿಸುತ್ತಿದ್ದಾಗಲೇ ಆ ಹುಂಜ ಬಂದು ನಮ್ಮ ಮನ ಸೆಳೆದದ್ದು. ಅಂತೂ ತರಗತಿಗಳ ಮುಗಿಸಿ ನಾವಿಬ್ಬರೂ ಮರಳಿ ಹಿಂದಿರುಗುವಾಗ ನಾನು ನನ್ನ ಗೆಳತಿಗೆ”ಅಲ್ಲರಿ, ತೋಟದ ಮನೆ ಇದ್ರೆ ಎಷ್ಟು ಚಂದ ಅಲ್ವಾ,ಹಸು,ಕುರಿ,ಕೋಳಿ ,ನಾಯಿ ,ಬೆಕ್ಕು ಎಲ್ಲಾ ಸಾಕೊಂಡು ಇರಬಹುದಿತ್ತು.ದಿನ ನಿತ್ಯ ಮನೆ ಕೆಲಸ,ಹೊರಗಿನ ಕೆಲಸ ಅಂತ ದಣಿಯೋದಕ್ಕಿಂತ ಎಷ್ಟೋ ವಾಸಿ”ಎಂದು ಕೊರಗಿದಾಗ ಅವರು”ಹೌದಪ್ಪ,ನನಗಂತೂ ಗಿಡ,ಮರ,ಪ್ರಾಣಿ,ಪಕ್ಷಿ ಎಲ್ಲಾ ಇರೋ ಮನೆ ಬೇಕು ಅನಿಸುತ್ತೆ, ಈ ಕಾಲದಲ್ಲಿ ಅದೆಲ್ಲ ನಮ್ಮ ಕೈ ಗೆಟುಕದ ಆಸೆಗಳೆ ಬಿಡಿ,ಈಗಿನ ರೇಟ್ ನಲ್ಲಿ ತೋಟದ ಮನೆ ಮಾಡಿದ ಹಾಗೆಯೇ”ಎಂದವರು, “ಮೇಡಂ ನನಗೆ ಒಂದು ವಿಚಿತ್ರ ಆಸೆಯಿತ್ತು,ಯಾರಿಗೂ ಹೇಳಿಲ್ಲ,ನಿಮಗೆ ಹೇಳ್ತೀನಿ ,ನಗೋದಿಲ್ಲ ತಾನೇ”ಎಂದಾಗ,ನನಗೆ ಕುತೂಹಲ ತಡೆಯಲಾರದೆ,”ಛೆ ಖಂಡಿತ ಇಲ್ಲ,ಅದೇನು ಹೇಳಿ “ಎಂದೆ. “ಅದೂ,ನನಗೆ ಚಿಕ್ಕಂದರಿಂದ ಒಂದು ಕೋಳಿ ಫಾರ್ಮ್ ಮಾಡೋ ಆಸೆ ಇದೆ,ಚೆನ್ನಾಗಿ ಕೋಳಿ ಸಾಕಿ,ಒಂದು ಆಪೆ ಆಟೋದಲ್ಲಿ ಹಾಕ್ಕೊಂಡು,ಅಂಗಡಿ ಅಂಗಡಿಗೆ,ನಾನೇ ಆಪೆ ಓಡಿಸ್ಕೊಂಡು ಹೋಗಿ ಸಪ್ಲೈ ಮಾಡ್ಕೊಂಡು,ವ್ಯವಹಾರ ಮಾಡ್ಬೇಕು ಅನ್ನಿಸುತ್ತಿತ್ತು,”ಎಂದಾಗ, ನಗೋದಿಲ್ಲ ಅಂತ ಹೇಳಿದ್ರೂ ನನ್ನಿಂದ ತಡೆಯಲಾರದೆ ನಗು ಕಟ್ಟೆಯೊಡೆದು ಹರಿಯಲಾರಂಭಿಸಿತು. ಅವರೂ ನಗುತ್ತಾ”ನೋಡಿದ್ರ ನಾನ್ ಹೇಳ್ಳಿಲ್ವ,ವಿಚಿತ್ರ ಆಸೆ ಅಂತಾ”ಅಂತ ಹೇಳಿ ತಾವೂ ನಗುವಿಗೆ ಜೊತೆಯಾದರು. ಮಾರನೆಯದಿನ ಶಾಲೆಯಲ್ಲೂ ಇದೇ ವಿಷಯದ ಚರ್ಚೆ ಮತ್ತು ನಗು.ಎಲ್ಲರ  ಮನದಾಳದ ಆಸೆಗಳು ಹೇಳಿಕೊಳ್ಳ ಲು ಆಗದಿರುವುವು ಆಚೆ ಬರಲಾರಂಭಿಸಿದವು. ನನ್ನ ಸಹೋದ್ಯೋಗಿಯೊಬ್ಬರು ಮೆಲು ಮಾತಿನ,ಮೃದು ಸ್ವಭಾವದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ,ದೇವರು ದಿಂಡಿರ ಮೇಲೆ ಅಪಾರ ನಂಬಿಕೆ ಭಕ್ತಿ ಹೊಂದಿರುವ  ಮಹಿಳೆ.ಅವರ ಆಸೆ ಮಾತ್ರ,ಅವರ ಬಾಯಲ್ಲೇ ಕೇಳಿದಂತೆ”ನನಗಂತೂ ಒಂದು ಬುಲ್ಲೆಟ್ ಬೈಕ್ ತೊಗೊಂಡು, ಬ್ಯಾಕ್ ಪ್ಯಾಕ್ ಹಾಕ್ಕೊಂಡು ಇಡೀ ಪ್ರಪಂಚ ಸುತ್ತಬೇಕು ಅನ್ನೋ ಆಸೆ ಇದೆ”ಎನ್ನುವುದನ್ನು ಕೇಳಿ,ಸಾಂಪ್ರದಾಯಿಕ ಮನಸ್ಸಲ್ಲಿ  ಆಧುನಿಕತೆಗೆ ತುಡಿಯುವ ಚೈತನ್ಯವೂ ಇದೆ ಎನ್ನಿಸಿ ಖುಷಿಯಾಯಿತು. ಮರುದಿನ ಗೆಳತಿಯೊಬ್ಬಳು ಕರೆಮಾಡಿ ಹರಟುತ್ತಿದ್ದಾಗ ಅವಳಿಗೆ ಈ ಆಸೆಗಳ ವಿಷಯಗಳ ಹೇಳಿದಾಗ ಅವಳು”ಅಯ್ಯೋ ಅದಕ್ಕೇನು,ನನಗಂತೂ ದಿನಕ್ಕೊಂದು ರೀತಿಯ ವಿಚಿತ್ರ ಆಸೆಗಳು ಬರುತ್ತವೆ,ಯಾರ ಹತ್ತಿರ ಹೇಳೋದು? ನನಗೆ ನಾನೇ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತೇನೆ.ಮೊನ್ನೆ ದಿನ ಏನಾಯಿತು ಗೊತ್ತಾ ನನ್ನ ಗಂಡನ ಸ್ನೇಹಿತರೊಬ್ಬರ ಕುಟುಂಬ ಮೊದಲ ಬಾರಿ ನಮ್ಮ ಮನೆಗೆ ಯಾವುದೋ ಊರಿಂದ ಬರುತ್ತಾ ಇದ್ದರು,ನಾನು ಅಡಿಗೆ ಎಲ್ಲಾ ಮಾಡಿಕೊಂಡು ಸತ್ಕಾರ ಮಾಡಲು ರೆಡಿಯಾಗಿದ್ದೆ . ಮಧ್ಯಾಹ್ನದಷ್ಟರಲ್ಲಿ ಅವರೆಲ್ಲ ಬಂದು ನನ್ನ ಗಂಡ ಪರಸ್ಪರ ಪರಿಚಯ ಕೂಡ ಮಾಡಿ ಕೊಟ್ಟರು, ಇವರ ಆ ಸ್ನೇಹಿತ ಎಷ್ಟು ಮುದ್ದು ಮುದ್ದಾಗಿದ್ದ ಅಂದರೆ ನನಗೆ ಇದ್ದಕ್ಕಿದ್ದಂತೆ ಆ ಮನುಷ್ಯನನ್ನು ನೋಡಿ ಚಿಕ್ಕ ಮಕ್ಕಳನ್ನು ನೋಡಿದರೆ ಎತ್ತಿಕೊಳ್ಳಬೇಕು ಅನ್ನೋ ಆಸೆಯಾಗುವುದಿಲ್ಲವ ಆ ರೀತಿ ಅನ್ನಿಸಿಬಿಟ್ಟಿತು. ಈ ಹುಚ್ಚಿಗೇನು ಹೇಳುವುದು.ನನ್ನ ಗಂಡನಿಗೆ ಹೇಳುವ ಧೈರ್ಯ ನನಗಾಗಲಿಲ್ಲ.ಬಚ್ಚಲು ಮನೆಗೆ ಹೋಗಿ ಜೋರಾಗಿ ನಕ್ಕು ಸುಮ್ಮನಾದೆ” ಎಂದಾಗ ಸೋಜಿಗ ವೆನಿಸಿ”ಅಲ್ಲ ಕಣೇ ಯಾಕೆ ಹಾಗನ್ನಿಸಿದ್ದು,ನೀನು ನೋಡಿದರೆ ಗೌರಮ್ಮನ ಹಾಗೆ ಇರ್ತಿಯಾ ಯಾವಾಗಲೂ,ಅದು ಯಾಕೆ ಅವನ ಮೇಲೆ ಹಾಗೆ ಅನ್ನಿಸಿತು”ಅಂದಿದಕ್ಕೆ,”ಗೊತ್ತಿಲ್ಲ ಕಣೆ,ಏನೋ ಆ ಕ್ಷಣ ಹಾಗನ್ನಿಸಿತು,ಆಮೇಲೆ ಅವರೆಲ್ಲ ಹೋದ ಮೇಲೆ ಏನೂ ಅನ್ನಿಸಲಿಲ್ಲ”ಎಂದು ಸುಮ್ಮನಾದಳು. ಹುಡುಕುತ್ತಾ ಹೋದರೆ ಪ್ರತಿಯೊಬ್ಬರಲ್ಲೂ ಈ ರೀತಿ ” ಯಾರಿಗಾದರೂ ಹೇಳಿದರೆ  ನಗೆಪಾಟಲಿಗೆ ಈಡಾಗುವೆನೇನೋ ” ಅನ್ನಿಸುವ,ಮುಗ್ದ,ವಿಚಿತ್ರ ಬಯಕೆಗಳು ಇದ್ದೇ ಇರುತ್ತವೆ.ಮಕ್ಕಳಂತೂ ಬಿಡಿ, ಕೇಳುತ್ತಾ ಹೋದರೆ ಒಂದು ಕಿನ್ನರ ಪ್ರಪಂಚವನ್ನೇ ಸೃಷ್ಟಿ ಮಾಡುವಷ್ಟು ಕಥೆಗಳ ಹೇಳಿಯಾರು. ನನ್ನ ಮಕ್ಕಳಿಬ್ಬರೂ ಚಿಕ್ಕವರಿದ್ದಾಗ ನನ್ನ ಮನೆ ಕೆಲಸದ ಸಹಾಯಕ್ಕೆ ಸಾವಿತ್ರಮ್ಮ ಅಂತ ಒಬ್ಬರು ಮಹಿಳೆ ಬರುತ್ತಿದ್ದರು.ನನ್ನ ಶಾಲೆ ಮನೆಯಿಂದ ದೂರ ಇದ್ದುದರಿಂದ ದಿನವೂ ಬೆಳಿಗ್ಗೆ ಎದ್ದು ತರಾತುರಿಯಲ್ಲಿ ಹೊರಟು ಹೋಗುವ ಧಾವಂತದಲ್ಲಿರುತ್ತಿದ್ದ ನಾನು ಮಕ್ಕಳ ಮಾತುಗಳ ಕಡೆಗೆ ಅಷ್ಟು ಗಮನ ನೀಡಲು ಆಗದೆ,ಸುಮ್ಮನೆ ಅವರು ಹೇಳಿದ್ದಕ್ಕೆಲ್ಲಾ “ಹೂಂ”  ಗುಟ್ಟಿ ಕೊಂಡು ಇರುತ್ತಿದ್ದೆ.ಅವರು ಹೇಳಿದ್ದಕ್ಕೆ ಸರಿಯಾದ ಉತ್ತರ ನನ್ನಿಂದ ಬಾರದ ಕಾರಣ ಅವರ ಗಮನವೆಲ್ಲ ಸಾವಿತ್ರಮ್ಮನ ಕಡೆ ತಿರುಗಿತು. ಅವಳೋ ಕೆಲಸ ಮಾಡಿಕೊಂಡೇ ಮಕ್ಕಳ ಜೊತೆ ಮಾತೇ ಮಾತು.”ಹೌದಾ ಪುಟ್ಟಾ,ಆಮೇಲೆ,ಓಹ್ ಹಂಗಾ,ಅಯ್ಯೋ ನಂಗೆ ಗೊತ್ತೇ ಇರಲಿಲ್ಲ”ಹೀಗೆ ಮಕ್ಕಳ ಜೊತೆ ಮಕ್ಕಳಾಗಿ ಮಾತನಾಡುತ್ತಾ ಇರುತಿದ್ದವಳನ್ನು ಮಕ್ಕಳಿಬ್ಬರೂ ಬಹಳ ಹಚ್ಚಿಕೊಂಡು ಬಿಟ್ಟಿದ್ದರು.ಅವರಿಗೆ ಗೊತ್ತಿದ್ದ ಭೂಮಿ ಮೇಲಿರೋ ವಿಷಯವನ್ನೆಲ್ಲ ಅವಳ ಕಿವಿಗೆ ತುಂಬಬೇಕು.ನನಗೆ ಕೆಲವು ಬಾರಿ ಅವರ ಕುಚೇಷ್ಟೆಯ ಮಾತುಗಳಿಗೆ ರೇಗಿ ಹೋದರೂ ಅವಳು ಮಾತ್ರ ಒಂದು ದಿನವೂ ಬೇಸರಿಸಿದವಳೇ  ಅಲ್ಲ. ಆಗ ಒಂದು ದಿನ ಸಂಜೆ ಸುಮ್ಮನೆ ಕುಳಿತಿದ್ದಾಗ ಮಕ್ಕಳನ್ನು “ದೊಡ್ಡವರಾದ ಮೇಲೆ ಏನಾಗಬೇಕು ಅನ್ನೋ ಆಸೆ ಇದೆ “ಎಂದು ಕೆಣಕಿದೆ,ನನ್ನ ಮಗಳು ಪಟ್ ಅಂತ  ” ನಾನಂತೂ ದೊಡ್ಡವಳಾದ ಮೇಲೆ ಮನೆ ಮನೆಗೆ ಹೋಗಿ ಪಾತ್ರೆ ತೊಳೆಯುವ ಸಾವಿತ್ರಮ್ಮ ಆಗ್ತೀನಿ”ಅಂತ ಘೋಷಿಸಿಯೆ ಬಿಟ್ಟಳು.  ಆ ಉತ್ತರವನ್ನು ಕೇಳಿ ನಿಬ್ಬೆರಗಾದ ನನಗೆ ನಗು ತಡೆಯದಾದರೂ, ಮಕ್ಕಳ ನಿಷ್ಕಲ್ಮಶ ಮನಸ್ಸನ್ನು ಪ್ರೀತಿ  ಸೆಳೆಯುವಷ್ಟು ಮತ್ತೇನೂ ಸೆಳೆಯದು ಅನ್ನಿಸಿತು. ಮಾರನೇ ದಿನ ಸಾವಿತ್ರಮ್ಮನಿಗೆ ಹೇಳಿದಾಗ ಅವಳ ಕಣ್ಣಾಲಿಗಳು ತುಂಬಿ ಬಂದು”ಅಯ್ಯೋ ನನ್ನ ಕಂದಾ” ಎಂದು ಮಗಳ ಮುದ್ದಿಸಿದ್ದೇ ಮುದ್ದಿಸಿದ್ದು. ಇನ್ನು ಶಾಲೆಯಲ್ಲಿ ಮಕ್ಕಳನ್ನು “ದೊಡ್ಡವರಾದ ಮೇಲೆ ಏನಾಗಬೇಕು  ಅಂದುಕೊಂಡಿದ್ದೀರಿ ಎಂದು ಹೇಳಿ” ಎಂದು ಕೇಳಿದರೆ,ದೊಡ್ಡ ಮಕ್ಕಳಾದರೆ,”ಡಾಕ್ಟರ್,ಎಂಜಿನಿಯರ್, ಆರ್ಮಿ,ಡ್ರೈವರ್,ಪೊಲೀಸ್ ,ಟೀಚರ್”ಅಂತೆಲ್ಲ ಉತ್ತರ ಹೇಳಿದರೆ,ಚಿಕ್ಕವರಲ್ಲಿ, ಹುಡುಗರೆಲ್ಲ ದೊಡ್ಡ  ಲಾರಿಯಿಂದ ಶುರುವಾಗಿ ರೈಲಿನವರೆಗೆ ಪ್ರಪಂಚದಲ್ಲಿರುವ ಎಲ್ಲಾ ವಾಹನಗಳನ್ನು ಓಡಿಸುವವರೆ.ಕೋಳಿ ,ಮೀನಂಗಡಿ ಇಡುವವರು, ಐಸ್ಕ್ರೀಮ್ ಡಬ್ಬದಲ್ಲಿ ಹೊತ್ತು ಮಾರುವವರು,ಸೈಕಲ್ ರಿಪೇರಿ,ಮೊಬೈಲ್ ರಿಪೇರಿ ಅಂಗಡಿ ಇಡುವವರು ಎಲ್ಲಾ ಸಿಕ್ಕರು.ಹುಡುಗಿಯರಲ್ಲಿ ಮಾತ್ರ ಬಹಳಷ್ಟು ಜನಕ್ಕೆಅವರ ಟೀಚರ್ ಥರ ಆಗೋ ಆಸೆ. ಇಷ್ಟೆಲ್ಲಾ ಹೇಳಿ ಇನ್ನು ನನ್ನ ಆಸೆ ಹೇಳದೆ ಇದ್ದರೆ ಹೇಗೆ.ಆಗಿನ್ನೂ ಹೈಸ್ಕೂಲ್ ನಲ್ಲಿದ್ದೆ.ಅಪಾರ ಓದುವ ಹುಚ್ಚಿದ್ದ ಅಪ್ಪ ತರುವ ಪುಸ್ತಕಗಳನ್ನೆಲ್ಲಾ ನಾನೂ ಓದುವ ಚಪಲ.ಒಂದು ದಿನ ಅಪ್ಪ ಒಂದು ಚಿಕ್ಕ ಪುಸ್ತಕ ತಂದು ಅದನ್ನು ಓದಲು ಕುಳಿತವರು ಮುಗಿಯುವ ತನಕ ಮೇಲೇಳಲೆ ಇಲ್ಲ. ಮಾರನೇ ದಿನ ನಾನು ‘ ಇದ್ಯಾವ ಪುಸ್ತಕ’ ಅನ್ನೋ ಕುತೂಹಲದಿಂದಾಗಿ ನೋಡಿದರೆ,ಅದು ಜಪಾನಿನ ಕೃಷಿ ವಿಜ್ಞಾನಿ ಮಸನೊಬು ಫುಕುವೋಕ ರವರ ,ಪೂರ್ಣಚಂದ್ರ ತೇಜಸ್ವಿಯವರು ಅನುವಾದಿಸಿದ್ದ “ಒಂದು  ಹುಲ್ಲೆಸಳ  ಕ್ರಾಂತಿ”ಪುಸ್ತಕ. ಓದಲು ಕುಳಿತಿದ್ದೆ ಬಂತು,ಮುಗಿಸುವ ತನಕ   ಕೈಬಿಡಲು    ಮನಸ್ಸಾಗಲಿಲ್ಲ.  ಆ ಪುಸ್ತಕ ಒಳಗೊಂಡಿದ್ದ , ಫುಕುವೊಕರವರ, ‘ನಿಸರ್ಗದೊಂದಿಗೆ ಹೊಂದಿಕೊಂಡು ಮನುಷ್ಯ ನೆಮ್ಮದಿ ಯಾಗಿ ಹೇಗೆ ಬದುಕಬಹುದೆಂಬ ವಿಚಾರ ಧಾರೆ,ಅವರ ನೈಸರ್ಗಿಕ ಕೃಷಿ ಪದ್ಧತಿ ಅನುಭವಗಳು , ಮನುಷ್ಯ ಹೇಗೆ ಪ್ರಕೃತಿಯ ಒಂದು ಭಾಗ ಮಾತ್ರ ‘ ಎಂದೆಲ್ಲ ವಿವರಿಸಿದ್ದ ವಿಷಯಗಳು  ,ಆಗ ಎಷ್ಟು ಇಷ್ಟವಾಯಿತೆಂದರೆ ತೊಗೊ ಅವತ್ತಿನಿಂದಲೆ ಕನಸು ಮನಸ್ಸಲ್ಲೆಲ್ಲ ನನ್ನದೇ  ಆದ ಒಂದು ನೈಸರ್ಗಿಕ ಕೃಷಿ ಪದ್ಧತಿಯ ತೋಟ ಕಾಡ ಲಾರಂಭಿಸಿತು.ಆದರೆ ಯಾರಿಗಾದರೂ ಹೇಳುವುದುಂಟ! ಶಾಲೆಯಲ್ಲಿ ಆಗ ಒಂದು ಪರೀಕ್ಷೆಯಲ್ಲಿ ಕೇಳಿದ್ದ “ನಿಮ್ಮ ಭವಿಷ್ಯದ ಕನಸು “ಅನ್ನೋ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದಾಗ, ಪುಟಗಟ್ಟಲೆ ನನ್ನ ತೋಟದ ಕನಸಿನ ಬಗ್ಗೆ ಬರೆದಿದ್ದು ಬರೆದಿದ್ದೇ.ಆದರೆ ಆ ಕನಸು ನನಸಾಗುವುದು ಸಾಧ್ಯವೇ? ತವರು ಮನೆ ಜಮೀನು ಅಣ್ಣ ತಮ್ಮಂದಿರದ್ದು,ಗಂಡನ ಮನೆ ಜಮೀನು ಗಂಡನದ್ದು.ಆಸೆಯ ಹೇಳಿದರೆ ಸಿಗುವ ಉತ್ತರ “ನಿನಗೆ ತಲೆ ಕೆಟ್ಟಿದೆ”ಅಂತ. ಬಹುಶಃ ಕನಸು ಕಾಣುವುದು,ಆಸೆಗಳ ಪಡುವುದು ಹೆಣ್ಣು ಗಂಡುಗಳಿಬ್ಬರಿಗೂ ಸಾಮಾನ್ಯವಾಗಿ ಬಂದಿರುವ ಗುಣಗಳೇ.  ಆದರೆ ಗಂಡು ಮಕ್ಕಳ ಆಸೆ ಕನಸುಗಳೆಂದೂ ವಿಚಿತ್ರ ವೆನಿಸುವುದಿಲ್ಲ. ಏನಾದರೂ ಭಿನ್ನ ಮಾರ್ಗದಲ್ಲಿ ಯೋಚಿಸಿ ಅದನ್ನು ಸಾಕಾರ ಮಾಡಿಕೊಳ್ಳಲು ಹೊರಟರೆ ಅವರು ಕಷ್ಟ ಪಟ್ಟು ಕೆಲಸ ಮಾಡಿದರೆ ಸಾಕು, ಅಂದುಕೊಂಡಿದ್ದೆಲ್ಲ ಸಿಕ್ಕರೂ ಸಿಗಬಹುದು.ಆದರೆ ಹೆಣ್ಣು ಮಕ್ಕಳ ಅಸಾಮಾನ್ಯ ಕನಸುಗಳು ಬಾಯಿಂದ ಆಚೆ ಬರಲೂ ಅಸಾಧ್ಯ ಧೈರ್ಯ ಬೇಕು,ಅಕಸ್ಮಾತ್ ಹೇಳಿಕೊಂಡರೂ ಅದನ್ನು ಸಹಜವಾಗಿ ಸ್ವೀಕರಿಸುವುದು ಎಲ್ಲರಿಂದ ಆಗದು. ಬಹುಶಃ ಮೇಲ್ವರ್ಗದವರಲ್ಲಿ, ಇಲ್ಲವೇ ಎಲ್ಲೋ ಕೆಲವರು  ಅದೃಷ್ಟವಂತರಾಗಿದ್ದಲ್ಲಿ, ಗಟ್ಟಿ ಎದೆಯ  ಧೈರ್ಯಶಾಲಿ ಗಳಾಗಿದ್ದಲ್ಲಿ, ಇಲ್ಲವೇ ಪ್ರೋತ್ಸಾಹಿಸುವ ಪೋಷಕರಿದ್ದರೆ ಮಾತ್ರ ವಿಚಿತ್ರ ಕನಸುಗಳು ನನಸಾಗುವುದು ಸಾಧ್ಯವೇನೋ.     ಬಹುತೇಕ ಹೆಣ್ಣು ಮಕ್ಕಳಿಗೆ ಸಮಾಜ ನಿರ್ಮಿಸಿರುವ ಚೌಕಟ್ಟಿನೊಳಗೆ,ಆರಾಮದಾಯಕ ಕ್ಷೇತ್ರಗಳಲ್ಲೇ ತಮ್ಮ ತಮ್ಮ ಜೀವನ ರೂಪಿಸಿಕೊಳ್ಳುವ ಸಲಹೆ ಸೂಚನೆಗಳು ಸಿಗುವುದೇ ಹೆಚ್ಚು.ಅದರಾಚೆ ಯೋಚಿಸಿದರೆ ಕೆಲವು “ಅದು ಹೆಂಗಸರಿಗೆ ಸಾಧ್ಯವಿಲ್ಲ,ಅವರಿಂದಾಗದು”ಎಂದಾದರೆ, ಹಲವು  ನಗೆಪಾಟಲಿಗೆ ಒಳಗಾಗುವ ವಿಷಯಗಳೇ. ಎಲ್ಲೋ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹೊರತಾದ ಉದಾಹರಣೆಗಳು  ಸಿಗಬಹುದೇನೋ.            ಅನಿವಾರ್ಯವಾಗಿ ಬೇರೆ ದಾರಿ ಕಾಣದೆ ಜೀವನೋಪಾಯಕ್ಕಾಗಿ ಕೆಲವು ಹೆಂಗಸರು ಗಂಡಸರು ಮಾಡುವ ವೃತ್ತಿಗಳನ್ನು,ಉದಾಹರಣೆಗೆ,ಆಟೋ ಡ್ರೈವರ್, ಬಸ್, ಟ್ರೈನ್  ಡ್ರೈವರ್ ಗಳಂತಹ ಕೆಲಸ ಕೈಗೊಂಡಿರುವ ಉದಾಹರಣೆಗಳಿವೆ,ಆದರೆ ಅದೇ ವೃತ್ತಿ ಕೈಗೊಂಡು ಮಾಡುತ್ತೇನೆ ಅನ್ನುವ ಮನೋಭಾವ ಹೆಂಗಸರಲ್ಲಿಯೇ  ಬರುವುದು ಅಪರೂಪದಲ್ಲಿ ಅಪರೂಪವೇ.ಅದನ್ನು ಸಹಜವಾಗಿ ಯಾರೂ ತೆಗೆದುಕೊಳ್ಳುವುದಿಲ್ಲ.ಯಾರಾದರೂ ಹುಡುಗಿ ಪೈಲಟ್ ಆದರೆ ಇಲ್ಲವೇ ಸೈನ್ಯ ಸೇರಿದರೆ ಅದು ದೊಡ್ಡ ಸಾಧನೆ ಎಂದು ಬಿಂಬಿಸುವುದುದಕ್ಕಿಂತ ಸಹಜವಾಗಿ ಯಾಕೆ ತೆಗೆದುಕೊಳ್ಳಬಾರದು. ಎಲ್ಲಾ ರೀತಿಯ ವಿದ್ಯಾಭ್ಯಾಸದ ಕೋರ್ಸ್ ಗಳು,ವೃತ್ತಿ ಪರ ತರಬೇತಿಗಳು,ಉದ್ಯೋಗಗಳು ಎಲ್ಲರಿಗೂ ಸಮಾನ ಅನ್ನುವ ಮನೋಭಾವ ಸಹಜವಾಗಿ  ಮಕ್ಕಳಲ್ಲಿ ಯಾಕೆ ಬೆಳೆಸಬಾರದು.? ಆ ಸಮಾನತೆಯ ಸಮಾಜ ನಿರ್ಮಾಣ ಬಹುಶಃ ಸಧ್ಯಕ್ಕಂತೂ ಸಾಧ್ಯವಿಲ್ಲ. ಅಲ್ಲಿಯವರೆಗೆ  ಇರುವ ಕನಸುಗಳ,  ಆಸೆಗಳ   ಅದುಮಿ. ಇಟ್ಟುಕೊಳ್ಳಲಾದೀತೇ. ಅವುಗಳಿಗೆ ಪರ್ಯಾಯವಾಗಿ ಬೇರೆ ಹವ್ಯಾಸಗಳ ಬೆಳೆಸಿಕೊಂಡು ಖುಷಿ ಪಡುವವರು ಇದ್ದಾರೆ.ಬುಲ್ಲೆಟ್ ಓಡಿಸಲಾಗದಿದ್ದರೂ ಸ್ಕೂಟಿ,ಕಾರ್ ಓಡಿಸುವುmದು ಕಲಿತು ಓಡಾಡುವುದು ಇದ್ದೇ ಇದೆ. ಪುಕುವೋಕಾನ ತೋಟ ನನ್ನ ಮನೆಯ ಬಾಲ್ಕನಿಯ ಕುಂಡಗಳಲ್ಲಿ ಅರಳುತ್ತಿದೆ.ನಾನಂತೂ ಕುಂಡದಲ್ಲಿ ಇರುವ ಗಿಡಗಳ ಜೊತೆಗೆ ಬೇರೆ ಯಾವ ಗಿಡ ಹುಟ್ಟಿದರೂ ಅದ ಕೀಳಲಾರೆ.ಗಿಡಗಳಿಗೆ ರೋಗ ,ಕೀಟ ಬಾಧೆ ತಗುಲಿದರೆ ಯಾವ ಕೀಟನಾಶಕಗಳ ಕೂಡ ಬಳಸುವುದಿಲ್ಲ.ಗಿಡ ಗಟ್ಟಿಯಾಗಿದ್ದರೆ ತಾನೇ ಬದುಕುತ್ತದೆ ಇಲ್ಲದೇ ಹೋದರೆ ಇನ್ನೊಂದು ಗಿಡಕ್ಕೆ ದಾರಿ ಮಾಡಿಕೊಟ್ಟು ಮಣ್ಣು ಸೇರುತ್ತದೆ. ಈ ರೀತಿ ವರುಷಗಟ್ಟಲೆ ಕುಂಡದ ಸೀಮಿತ ಮಣ್ಣು,ಬಾಲ್ಕನಿಯ ಕೊಂಚ

ವಿಚಿತ್ರ ಆಸೆಗಳು…ಹೀಗೊಂದಷ್ಟು, Read Post »

ಕಾವ್ಯಯಾನ

“ಅಂತರ್ಬಹಿರಂಗ”

ಕವಿತೆ “ಅಂತರ್ಬಹಿರಂಗ“ ಉದಯ ಧರ್ಮಸ್ಥಳ ನಿದ್ದೆಯ ಮುಂಜಾವಿನಲ್ಲಿಮುಂಜಾವಿನ ನಿದ್ದೆಯಲ್ಲಿಮಂಪರು ಭಾವಗಳೊಂದಷ್ಟುಮತಿಯ ತೋಪಿನಲ್ಲಿಗತಿ ಲಯದ ಸಾಲು ತುರುಕಿದ ಕಾಡತೂಸುಗಳಂತೆಶಬ್ದಗಳಲ್ಲದೆಮೌನ ಅಕ್ಷರದುಂಡೆಗಳು ! ಎತ್ತೆತ್ತಲೋ ಎಸೆದೆರಗುವಂತಾಗಿಧಮಿಲ್ ಧಮಿಲ್ ಧಮಿಲ್ಹೊರಗುಗುಳುವಾಗಹಿಡಿದುದಾಖಲಾಗಿಸುವಾಗಅರೆಬಿರಿದ ಕಣ್ಣೆಡೆಯಿಂದದೃಷ್ಟಿ ಕಾಣುವ ಪಂಕ್ತಿ ಪದಅದೇನೋ ಅಪರೂಪದಆಗೀಗ ಬರುವ ಅತಿಥಿಯಂತೆನಕ್ಕಣರಳಿಸಿ ಬೀಸಿದ ಓರೆನೋಟ ! ಧಿಂಗಣ‌ ಕುಣಿದ ರಂಗದಂಗಳದವೇಶಗಳಾಗಿ ಬಣ್ಣಬಣ್ಣ ಕಟ್ಟಿದೊಗಲೆ ದೊಗಲೆಯೊಳಗೆಅಂಡು ಬಿಗಿದ ಹಳೆಬಟ್ಟೆಯ ಹಿಂಡುಮೇಲೆ ಮಿರಮಿರನೆ ಝಗಮಗಿಸುವರಾಜನುಡುವ ರಂಗುರಂಗಿನ ಪೋಷಾಕಿನೊಳಗಿಂದಜೀವ ಲಕಲಕ ಲಕಾ ಭಾಷೆಯುಚ್ಛಾರ ! ಅದೇನೋ ಮೊರದಗಲತಡ್ಪೆ ಕಿರೀಟದ ಬಣ್ಣದ ವೇಶಅರಚಿ ಅರಚಿ ಬೆದರಿಸಿಅರ್ಥವಾಗದಿದ್ದರೂಅರ್ಥ ಮಾತಾಡುವಂತೆ ಕಂಡರೆಅದು ಪ್ರಸಂಗದ ಮುಖ್ಯ ಅಧಿಕಪ್ರತಿನಾಯಕನ ಚಿಟ್ಟೆಯ ಮುಖದಒಳಗಿರುವ ನಿಜಮುಸುಡಿಬೆವರಿ ಬೆದರಿ ನಿಜವಲ್ಲದಕಥೆಗಳಿಗೆ ನಿಜವೆನಿಸುವ ಪದ ಉದುರಿಸಿಹಿಮ್ಮೇಳದ ಆರ್ಭಟಗಳಿಗೆಮುಮ್ಮೇಳವಾಗಿ ನಲಿಯುತ್ತದೆ ! ಬಾಲ್ಯಮುಖತನು ಸುಕ್ಕಾಗಿಮುದಿಯಾಗಿ‌ ಹಲವಾರುಪರಲೋಕ ಪಾತಾಳಗಳಮನಕನಸಲ್ಲಿ ಕಂಡಾಡಿದ ನಂತರವೂತಕತಕ ಕುಣಿವ ಪ್ರತಿಮಾಧ್ವನಿಸಂಕೇತಗಳೇ ಖುಷಿಕೊಟ್ಟುಶಿಸ್ತಿನ ಸಿಪಾಯಿಗಳಂತೆಸಾಲಾಗಿ‌ ಪಥಸಂಚಲನ ಗೈವಾಗಹಾಯಾಗಿ ಒಳತೋಟಿತಂಪಾದ ತೇಜಾಪು !ಅನುಭಾವವರಳಿ ತನುಭಾವ ಕೆರಳಿ ಕೆಂಡಸಂಪಿಗೆಯ ಘಮ್ಮನೆಯ ಕಂಪು ! ರಾಗ ತಾಳ ಆಲಾಪಗಳಹಂಗು ಗುಂಗಿಲ್ಲದಾಗಹೊರ ಚೆಲ್ವ ಅಗ್ನಿಪರ್ವತದತಲೆಯೊಡೆದು ಕಿಲೋಮೀಟರ್ಮೇಲ್ಚಿಮ್ಮಿದ ಲಾವಾರಸಸುಡುಸುಡುಸುಡುತಾ ಸಾಗಿಸಿಕ್ಕಿದಕ್ಕೆಲ್ಲಾ ತಾಗಿಕರಟಾಗಿಸಿ ಒಳಸೇರಿಸಿಒರಟೊರಟಗಿ ಹೊರಟುಸಾಗಿಸಾಗಿ ಸಾಗುವಜಗದಗಲ ಪ್ರಭಾವಿಸುವ ಪ್ರವಾಹ ! ಮುಗಿಲೆಂದರದೇಮುಗಿಯದ ಮಿಗಿಲುಅಳೆಯಲಾಗದ ಅಂತರಾತ್ಮಬಿಗಿದ ಸುಯಿಲುಅದ್ಯಾವುದೋ ಸನ್ನಿಧಿಗೆಸಲ್ಲಿಸಿದ ದೂರಿನುಯಿಲು !ಕಳೆದುಕೊಂಡ ಹಪಾಹಪಿಯನಡುವೆ ಮತ್ತೆ ದಕ್ಕಿಸಿಕೊಳ್ಳುವಾಸೆಯ ಅಮಲು ಕೊಯಿಲು !ಕೊರೆದು ಬರೆದವುಗಳಸೇರಿ ಸಿಟ್ಟು ಸೇರಿಸಿಟ್ಟುಸೇರಿಸಿಡುವ ಸೇರಿ ಸುಡುವಅನರ್ಥ ಅಪಾರ್ಥಗಳ ಯತಾರ್ಥ !ಹಾಂ ! ಯತಾರ್ಥಗಳ ಅಪಾರ್ಥ ಅಪಾತ್ರ ! ಹೇಳಬಾರದ್ದನ್ನುಹೇಳುವಾಗದರರ್ಥವಾಗದಹಾಗೆ ಭೋರೆಂದು ಸುರಿದು ಹರಿದಜೀವರಸದೊಳಗಿನದ್ರವದೊಳಗಣಕಣವೊಂದಿನ್ನೊಂದರಲ್ಸೇರಿಝಗ್ಗನೆ ಸೃಜಿಸಲ್ಪಟ್ಟ ಮಿಸುಕಾಟದಪಿಂಡದುಂಡೆ ಕೆಂಡಕುಸುಮದಮುಡಿಯಲಾಗದ ಹೂದಂಡೆ ! ಅನಿರತ ಅಮಿತರತವಿರಕ್ತನೇ ತಪ್ತಶಕ್ತವಾಗಿಅನುರಕ್ತ ಭಕ್ತಭಾವಲಹರಿಯ ಹರಿಯ ಬಿಟ್ಟಹರಿ ಬಿಟ್ಟ ನರ ಹರಿದ ಬದುಕತೇಪೆಹಾಕಲುಹೃತ್ಕುಂಜದಲಿ ಜೀವಕಾರಂಜಿಯಭವಿತ ಚಿಲುಮೆಯಾಗಿಸುವಚಲಿಸುವುದನುಚಲಿಸದಂತಾಗಿಸಲುಮುನಿಯುವುದನುಮುಗುಳಾಗಿಸಿಯರಳಿಸಲುಆಗಾಗ ಹೀಗಾಗುವಜೀವಾಕ್ಷರಗಳ ಸರಪಳಿಯಖಳ ಖಳ ಸದ್ದಿನ ನೆಯ್ಗೆಅಪಾರ ಮಂಕು ಕಡಲ ಹೊಯಿಗೆ !ಬಂಡೆಯೊಡೆಯದೆಸಡಿಲಸಡಿಲವಾಗಿಘನಕಣ ಮರುಳು ಮರಳಾಗೆದಡಕಟ್ಟಿ ದಡಗಟ್ಟಿಯಾಗಿಸಿಕೊಂಡುಗುಳುಗುಳಿಸಿ ಭೋರ್ಗರಿಸಿಬೊಬ್ಬಿರಿದು ತನ್ನಲೇ ತಾ ಮೊರೆದುತಳಕೊರೆದು ಒಳಗಿಳಿದುಘಮಲಿಸುವ ತಮಲಿಸುವತಳಮಳವ ಇಳಗಿಟ್ಟುಶಾಂತಿಕವಚವ ಹೊದೆವ ಈ ಗುಟ್ಟು ! ********************************

“ಅಂತರ್ಬಹಿರಂಗ” Read Post »

ಕಾವ್ಯಯಾನ

ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ

ಕವಿತೆ ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ ಪ್ರೇಮಶೇಖರ ಹೀಗೇಎತ್ತಲಿಂದಲೋ ಹಾರುತ್ತಾಇತ್ತ ಬಂದ ಗುರುತಿಲ್ಲದ ಹಕ್ಕಿ,ಇಲ್ಲೇ ಕೂತಿದೆ ಬೆಳಗಿನಿಂದಲೂ. ಲಲಿತೆ ಕಾಳು ಹಾಕಿದ್ದಾಳೆ,ಪುಟ್ಟಿ ನೀರಿಟ್ಟಿದ್ದಾಳೆ,ನಾನು ಕೋಲು ಹಿಡಿದುಪುಸ್ಸಿಯನ್ನು ಕಾಯುತ್ತಿದ್ದೇನೆ. ಪುಟ್ಟ ಹಕ್ಕಿಕಾಳು ತಿನ್ನುತ್ತಿಲ್ಲ,ನೀರು ಕುಡಿಯುತ್ತಿಲ್ಲ,ಬಾಯಿ ತೆರೆದು ಕೂಗುತ್ತಲೂ ಇಲ್ಲ. ಅಕ್ಕಪಕ್ಕದ ಮನೆಯವರು ಬಂದರು,ತಲೆಗೊಂದು ಮಾತು ಅಂದರು-ಅದು ಹಾರಿಬಂದ ದಿಕ್ಕುನೋಡಿದಿರಾ? ಮನೆಯೊಳಗೆ ನುಗ್ಗಿದಗಳಿಗೆ ಗಮನಿಸಿದಿರಾ? ಲಲಿತೆ ಅವರಿಗೆಲ್ಲ ಚಹ ಮಾಡುತ್ತಿದ್ದಾಳೆ,ಪುಟ್ಟಿ ವಾಷ್‍ಬೇಸಿನ್ ತೋರಿಸುತ್ತಿದ್ದಾಳೆ,ಪುಟ್ಟಹಕ್ಕಿ ಸುಮ್ಮನೆ ನೋಡುತ್ತಿದೆ,ನನ್ನ ಕೈಯಲ್ಲಿನ್ನೂ ಕೋಲು ಆಡುತ್ತಿದೆ.ಅವರು ಚಹಾ ಜತೆ ಹಕ್ಕಿಯನ್ನು ನೆಂಜಿಕೊಳ್ಳುತ್ತಿದ್ದಾರೆ. ಕಿವಿಚಿದರೆ ಕೂಸಿಗಾದರೂಒಂದೊತ್ತಿನ ಪಲ್ಯವೂ ಆಗದು.ತಿನ್ನುವ ಮಾತಾಢಬೇಡಜ್ಜೀ,ಅದಕ್ಕೆ ಜ್ವರ ಬಂದಿರಬೇಕು,ಅದೆಲ್ಲಿಯ ಗ್ರಹಚಾರ.ಅದಕ್ಯಾವ ಜ್ವರ? ಕಥೆಹೇಳಬೇಡ ಅಡುಗೂಲಜ್ಜೀ,ಕೊರೋನಾ ನರರಿಗಷ್ಟೇ. ಬಣ್ಣದ ಹಕ್ಕಿಗಳು ರುಚಿಇಲ್ಲವಂತೆ, ಸಾದಾ ಹಕ್ಕಿಗಳೇ ರುಚಿರುಚಿಯಂತೆ!ಹಾಗಂತ ಹೇಳು ಮಹಾರಾಣೀಕಾಲೇಜಿನ ಮುಂದೆ, ಅಯ್ಯೋ ಬಿಡೇ ಸಾಕು ಅದನ್ನುದಾಟಿಯೇ ಬಂದವರು ನಾವೆಲ್ಲಾ.ಈಗೆಲ್ಲಿ ಆ ವೈಭವ!ಕಳೆದುಹೋದದ್ದು ಬಿಟ್ಟು ಎದುರಿಗೆಕೂತದ್ದರ ಸುದ್ದಿ ಹೇಳು. ಬೇಸಗೆಗೆ ಬಳಲಿದೆ ಹಕ್ಕಿ,ಚಳಿ ದೇಶಕ್ಕೆ ಹಾರಿಹೋಗಲಾಗಲಿಲ್ಲವೇನೋ ಸಂಗಡಿಗರೊಡನೆ.ನಾವಾದರೂ ಬಿಟ್ಟುಬರೋಣವೆಂದರೆ ರೈಲು ವಿಮಾನಗಳಿಲ್ಲವಲ್ಲ! ಹ್ಞೂಂ, ಹಾಳು ಕೊರೋನಾ ಇವಳೇ.ಹೌದು ಆಂಟೀ, ನಮಗೂ, ಹಕ್ಕಿಗೂಅದರದೇ ಕಾಟ. ಅಂ! ಕೊರೋನಾ ಅಂದೆಯಾ?ಅರೆ ಆಂಟಿನನ್ನ ಮಾಸ್ಕ್ ಎಲ್ಲಿ?ನನ್ನದೂ ಕಾಣದು ಇವಳೇಓಹ್ ಅತ್ತೇ, ನನ್ನದೂ ಇಲ್ಲಟೀ ಕುಡಿವ ಮೊದಲು ಕಳಚಿಟ್ಟೆನಲ್ಲ… ಮಡಿಲಲ್ಲಡಗಿರಬೇಕು ನೋಡೋಣ.ಹಜಾರದ ತುಂಬಾ ಸೀರೆದುಪಟ್ಟಾಗಳ ಫಟ್‍ಫಟ್ ಫಟರವ. ಕಾಣ್ತಿಲ್ವೇ, ಹಾಳು ಹಕ್ಕಿಯಿಂದ ಹೀಗಾಯ್ತಲ್ಲ!ಗಾಳಿಯಲ್ಲಿ ಗಾಬರಿಯ ಲೊಚ್ ಲೊಚ್ ಲೊಚರವ, ಛೇ ಹಕ್ಕಿ,ಪುಟ್ಟ ಹಕ್ಕಿ, ಪುಟಾಣಿ ಹಕ್ಕಿ…ಅರೆ…!ಎಲ್ಲಿದೆ ಹಕ್ಕಿ? ಅದು ಹಾರಿಹೋಗಿದೆ,ಕೂತಿದ್ದೆಡೆ ಒಂದು ಗುಪ್ಪೆಹಿಕ್ಕೆ ಬಿದ್ದಿದೆ. ಪುಟ್ಟಿಯ ಮುಖ ಕಪ್ಪಿಟ್ಟಿದೆ,ಲಲಿತೆಯ ಕಣ್ಣಲ್ಲಿ ಹನಿ ನೀರಿದೆ,ಬಾಲ್ಕನಿಯಾಚೆಹದ್ದೊಂದು ರೆಕ್ಕೆ ಬಡಿದಿದೆ,ನೆರೆಯವರ ನಿರಿಗೆಗಳುಮೆಟ್ಟಲಸರಣಿಯಲ್ಲಿ ಆತುರದಲ್ಲಿ ಚಿಮ್ಮಿವೆ.ನನ್ನ ಕೈನ ಕೋಲು?. ಅದು ನೆಲವನ್ನು ಪಟಪಟ ಬಡಿಯುತ್ತಿದೆ. ಬಡಿಯುತ್ತಲೇ ಇದೆ. ***********************************************************************

ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ Read Post »

ಕಾವ್ಯಯಾನ

ವಿರಾಗಿ ತ್ಯಾಗಿ

ಕವಿತೆ ವಿರಾಗಿ ತ್ಯಾಗಿ ಡಾಲಿ ಕೊಡನವಳ್ಳಿ ಚಕ್ರವರ್ತಿ ಭರತ…ನಿನಗಿಂತವಿರಾಗಿ ತ್ಯಾಗಿ ಬಾಹುಬಲಿಗೆಈ ಕನ್ನಡ ನೆಲ ತಲೆಬಾಗಿತಲೆ ಎತ್ತಿ ನೋಡಿದರೂ ನಿಲುಕದ ಪ್ರತಿಮೆಯನ್ನೇಕಡೆದು ನಿಲ್ಲಿಸಿದ್ದು ಯುದ್ದ ಗೆದ್ದು ಸೋತವನಏನಿಲ್ಲವೆಂದು ಹೊರಟವನಕೈಬೀಸಿ ಕರೆದುಗಿರಿನೆತ್ತಿಯ ಮೇಲಿರಿಸಿಮಸ್ತಕಕೆ ಬೆಳ್ಮುಗಿಲ ಮುಕುಟವಿರಿಸಿತಾರೆಗಳ ನೇವಣಿಯನೇರಿಸಿಅಂಬರಕೆ ಚುಂಬಿಸಿದವನನ್ನೇಕರುನಾಡುದೊರೆಯಾಗಿ ಸ್ವೀಕರಿಸಿತು ಮುರಿದು ಬೀಳುವ ಮಹಲಿನಹಂಗು ತೊರೆದವಗೆಗಿರಿಶಿಖರಗಳೇ ಕಂಬವಾಗಿಮೋಡಗಳೇ ಮೇಲ್ಛಾವಣಿಯಾಗಿನಾಡ ಗರ್ಭಗುಡಿಯಲ್ಲಿಸದ್ಗತಿ ಸಂದವನಪ್ರಾಪಂಚಿಕ ಸುಖ ಗೆದ್ದವನಪ್ರಕೃತಿಯ ಕಣಕಣವೂಪಾಲಿಸಿತಿಲ್ಲಿ ಬೆಳಗುಳ ನಂದನಪ್ರತಿದಿನ ನಿನ್ನದೇಪ್ರತೀಕ್ಷೆ ಪೃಥ್ವಿಗೆ.ಎಳೆಸಂತೆ ಕಂಗೊಳಿಸುವ ನಿನ್ನೀನವಿರು ಭಾವ ಹೊತ್ತ ಕುಸುಮ.ಗಂಧವತಿ ವಸುಧೆಯ ಗಂಧ ಘಮಹೊನ್ನ ಹಣತೆಯಲಿಜ್ಯೊತಿ ಬೆಳಗುವ ಶಶಿ ಸೂರ್ಯಆದಿ ನಾಥ ಸುತನನ್ನೇ ಅರಸಿದಂತಿದೆಪ್ರತಿ ಕ್ಷಣದ ಆರಂಭಕೆ **************************

ವಿರಾಗಿ ತ್ಯಾಗಿ Read Post »

ಕಾವ್ಯಯಾನ

ಸ್ವಾತಿಮುತ್ತು

ಕವಿತೆ ಸ್ವಾತಿಮುತ್ತು ಅಕ್ಷತಾ ಜಗದೀಶ. ಎನಿತು ಸುಂದರ ನೋಡುತಿಳಿನೀಲ ಮುಗಿಲು….ಮುತ್ತು ನೀಡುವಂತಿದೆಬಾನಂಚಿನ ಕಡಲು.. ಕಡಲಿಗು‌ ಮುಗಿಲಿಗುಇದೆಂತಹ ಬಂಧ..ಅರಿಯಲಾರದಂತಹಅಂತರಂಗದ ಅನುಬಂಧ.. ಕಾಲಗಳು ಉರುಳಿದರುಯುಗಗಳೇ ಕಳೆದರುಕಾಣುವುದು ತಿಳಿನೀಲಿ ಬಿಂಬಮಾಸಿಹೋಗದ ಆ ಪ್ರತಿಬಿಂಬ.. ಭಾವದೊಳಗೆ ಸನಿಹ ಕಡಲುವಾಸ್ತವದೊಳು ದೂರ ‌ಮುಗಿಲುಸತ್ಯದ ಒಳಗಿನ ಮಿಥ್ಯ..ನೆನಪಿಸುತಿದೆ‌ ಅಲೆಗಳು‌ ನಿತ್ಯ.. ಬಾನಿಂದ ಜಾರಿದೆ ಮಳೆ ಹನಿಕೇಳುತಿದೆ ಮರಳಿ ಕಡಲ ದನಿಮತ್ತೆ ಪ್ರೀತಿ ಮೂಡುವ ಹೊತ್ತುಕಡಲಾಳದಲಿ ಎಲ್ಲೆಲ್ಲೂ ‌ಸ್ವಾತಿಮುತ್ತು…. ****************************

ಸ್ವಾತಿಮುತ್ತು Read Post »

ಇತರೆ, ಗಜಲ್ ವಿಶೇಷ

ಗಜಲ್ ಸಾಹಿತ್ಯ ಮತ್ತು ಸವಾಲುಗಳು

ಲೇಖನ ಗಜಲ್ ಸಾಹಿತ್ಯ ಮತ್ತು ಸವಾಲುಗಳು ಡಾ. ಮಲ್ಲಿನಾಥ ಎಸ್.ತಳವಾರ ಪ್ರಕೃತಿಯನ್ನೊಮ್ಮೆ ಅವಲೋಕಿಸಿದಾಗ ‘ಮನುಷ್ಯ’ ನ ವಿಕಾಸ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಅದೊಂದು ರೀತಿಯಲ್ಲಿ ಪವಾಡವೇ ಸರಿ ! ಎಲ್ಲ ಪ್ರಾಣಿ ಸಂಕುಲಗಳಿಂದ ಆತನು ವಿಭಿನ್ನವೆನಿಸಿದ್ದು ಮಾತ್ರ ಭಾಷೆಯ ಬಳಕೆಯಿಂದ. ತನ್ನ ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಪಡಿಸಲು ‘ಭಾಷೆ’ ಯನ್ನು ಸಾಧನವನ್ನಾಗಿ ಮಾರ್ಪಡಿಸಿಕೊಂಡನು. ಈ ಭಾಷೆಯ ಉದಯದೊಂದಿಗೆ ಸಾಹಿತ್ಯವೂ ಉದಯವಾಯಿತು ಎನ್ನಬಹುದು. “ಭಾಷೆಯ ಉದಯವೆಂದರೆ ಸಾಹಿತ್ಯದ ಉದಯವೆ ಸರಿ” ( ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಎಂಬ ರಂ. ಶ್ರೀ. ಮುಗುಳಿಯವರ ಮಾತು ಇದನ್ನೇ ಪುಷ್ಟಿಕರಿಸುತ್ತದೆ.  ಜ್ಞಾನ ಸಂಪಾದನೆ ಮತ್ತು ಜ್ಞಾನ ಪ್ರಸಾರಗಳ ಅತ್ಯಂತ ಪ್ರಬಲ ಪರಿಣಾಮಕಾರಿ ಮಾಧ್ಯಮವೇ ಸಾಹಿತ್ಯ. ಇದು ಆಹ್ಲಾದಕರವೂ, ಆಕರ್ಷಕವೂ, ಜೀವನ ಸೌಂದರ್ಯದಾಯಕವೂ, ಸಂಸ್ಕೃತಿ ಸಂಪನ್ನವೂ, ಬುದ್ಧಿ ಮನಸ್ಸುಗಳ ವರ್ಧಕವೂ ಆಗಿದೆ. ಈ ನೆಲೆಯಲ್ಲಿ “ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯ”.(ರಂ. ಶ್ರೀ. ಮುಗುಳಿ,  ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಪಾದರಸದಂತೆ ಪರಿವರ್ತನಶೀಲವಾದ ಪ್ರಪಂಚದ ಜ್ಞಾನ, ವಿಜ್ಞಾನ, ಸಂಸ್ಕೃತಿಗಳನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸುತ್ತ, ಮನುಕುಲದ ಜೀವನವನ್ನು ಪುಷ್ಟಿಕರಿಸುತ್ತ, ತುಷ್ಟಿಗೊಳಿಸುತ್ತ, ವಿಕಾಸಗೊಳಿಸುತ್ತ, ಪರಿಪೂರ್ಣತೆಯ ಕಡೆಗೆ ಕರೆದೊಯ್ಯುವುದೇ ಸಾಹಿತ್ಯದ ಪರಮಗುರಿ.       ಸಾಹಿತ್ಯವೂ ಬದುಕಿನಂತೆಯೇ ಬೆಳೆಯುತ್ತದೆ. ಅದರಲ್ಲಿಯೂ ನಮ್ಮ ಬಾಳಿನಲ್ಲಿ ಇರುವಂತೆಯೇ ಏಳುಬೀಳುಗಳು, ಸಂಪ್ರದಾಯಗಳು, ಅವುಗಳ ವಿರುದ್ಧ ಕ್ರಾಂತಿ… ಇವೆಲ್ಲವೂ ಉಂಟು. ಸಾಹಿತ್ಯ ಆಗಸದಷ್ಟು ವಿಶಾಲ, ಸಾಗರದಷ್ಟು ಆಳವಾದ ಹರವು ಹೊಂದಿದೆ. ವಿಷಯವಸ್ತು, ಶೈಲಿ, ಅಭಿವ್ಯಕ್ತಿಯ ಹಿನ್ನೆಲೆಯಲ್ಲಿ ಸಾಹಿತ್ಯವು ಹತ್ತು ಹಲವಾರು ಪ್ರಕಾರಗಳನ್ನು ಹೊಂದಿದೆ. ಜೀವನ ಬದಲಾದಂತೆ ಸಾಹಿತ್ಯವೂ ಬದಲಾಗುತ್ತದೆ. ಹೊಸದಾದುದು ಕಾಲ ಕಳೆದಂತೆ ಹಳೆಯದೆನಿಸಿಕೊಂಡು ಸಂಪ್ರದಾಯವಾಗಿಬಿಡುತ್ತದೆ. ಅದರ ವಿರುದ್ಧ ಕ್ರಾಂತಿಯಾಗಿ, ದಂಗೆಯಾಗಿ ಹಳೆಯದರ ಸ್ಥಾನಕ್ಕೆ ಹೊಸದು ಬಂದು ನಿಲ್ಲುತ್ತದೆ. ಈ ಹೊಸದು ಕೂಡ ಮುಂದೆ ಮತ್ತೊಂದು ಹೊಸದಕ್ಕೆ ದಾರಿ ಮಾಡಿಕೊಡುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೂ- ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ…. ಮುಂತಾದ ಅನೇಕ ರೀತಿಗಳ ಮೂಲಕ ಸಾಹಿತ್ಯ ಬೆಳೆದು ಬಂದಿದೆ. “ಒಂದು ನಿರ್ದಿಷ್ಟ ಸಾಹಿತ್ಯ ಪರಂಪರೆಯು ತನ್ನ ಸಾಧ್ಯತೆಗಳನ್ನು ತೀರಿಸಿಕೊಂಡು ಜಡವಾಗುವ ಹೊತ್ತಿಗೆ ಇನ್ನೊಂದು ಸಾಹಿತ್ಯ ಪರಂಪರೆಯ ಉಗಮಕ್ಕೆ ಕಾರಣವಾದ ಅಂಶಗಳನ್ನು ತನ್ನ ಒಡಲಲ್ಲಿ ಧರಿಸಿಕೊಂಡಿರುತ್ತದೆ” (ಶ್ರೀಧರ್ ಹೆಗಡೆ ಭದ್ರನ್ (ಸಂ) ; ಸಾಹಿತ್ಯ ಚಳುವಳಿಗಳು; ಪು- ೪೩) ಎಂಬ ಪುರುಷೋತ್ತಮ ಬಿಳಿಮಲೆಯವರ ಮಾತು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ, ಎಲ್ಲ ಘಟ್ಘಗಳಿಗೂ ಅನ್ವಯಿಸುತ್ತದೆ. ಈ ಸಾಹಿತ್ಯಕ್ಕೆ ಭಾಷೆಯ, ಗಡಿಯ ಹಂಗು ಇಲ್ಲ. ಇದೊಂದು ‘ಸರ್ವಾಂತರ್ಯಾಮಿ’. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ‘ಗಜಲ್’. ಈ ಗಜಲ್ ನಷ್ಟು ವಿಶ್ವವ್ಯಾಪಿಯಾದ ಸಾಹಿತ್ಯದ ಮತ್ತೊಂದು ಪ್ರಕಾರವನ್ನು ಜಗತ್ತಿನ ಮತ್ಯಾವುದೇ ಸಾಹಿತ್ಯದಲ್ಲಿಯೂ‌ ಕಾಣಲಾಗದು..! ಇದು ಅರೆಬಿಕ್, ಫಾರಸಿ ಮತ್ತು ಭಾರತೀಯ ಸಂಸ್ಕೃತಿಗಳ ಹದವಾದ ಮಿಶ್ರಣವಾಗಿದೆ.      ‘ಗಜಲ್’ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ಹಾಗೂ ಗಂಭೀರ ಸಾಹಿತ್ಯ ರೂಪ. ಇದನ್ನು ಉರ್ದು ಕಾವ್ಯದ ರಾಣಿ ಎಂದು ಕರೆಯುತ್ತಾರೆ. “ಗಜಲ್ ಉರ್ದು ಕಾವ್ಯದ ಕೆನೆ; ಘನತೆ, ಗೌರವ, ಪ್ರತಿಷ್ಠೆಗಳ ಪ್ರತೀಕ. ಗಜಲ್ ಪ್ರೇಮ ಸಾಮ್ರಾಜ್ಞಿ, ರಸಜಲಧಿ, ಬದುಕಿನ ರುಚಿ ಮತ್ತು ಬಟ್ಟೆ; ಆತ್ಮಾನಂದದ ತಂಬೆಳಕು” ಎಂದಿದ್ದಾರೆ ಶಾಂತರಸರು. (ಗಜಲ್ ಮತ್ತು ಬಿಡಿ ದ್ವಿಪದಿ : ಪು- ೪೩) ಗಜಲ್ ಅತ್ಯುತ್ತಮವೂ ಸುಖತಮವೂ ಆದ ಮನಸ್ಸಿನ ಸೌಂದರ್ಯಯೋಗಿ. ಜೀವಮಾನದ ಸುಖತಮವಾದ ಅತ್ಯುತ್ತಮ ಮುಹೂರ್ತಗಳಲ್ಲಿ ಹಾಡುವ ಆತ್ಮ ಗೀತಾಂಜಲಿಯಾಗಿದೆ. ನಮ್ಮ ಹೃದಯವನ್ನು ವಿಕಸಿತವಾಗುವಂತೆ ಮಾಡಿ ಜಗತ್ತನ್ನು ನಮಗೆ ಒಲಿಸುತ್ತದೆ. ಅದರ ದಿವ್ಯ ಸ್ಪರ್ಶದಿಂದ ಸರ್ವವೂ ಮನೋಹರವಾಗಿ ಪರಿಣಮಿಸುತ್ತದೆ. ಮಿಂಚಿ ಮಾಯವಾಗುವ ಪರಮಾನಂದವನ್ನು ಅವಿಚ್ಛಿನ್ನವಾಗುವಂತೆ ಮಾಡುತ್ತದೆ.      ಫಾರಸಿ ಮೂಲದಿಂದ ಹರಿದು ಬಂದ ಈ ಗಜಲ್ ಗಂಗೋತ್ರಿ ಭಾರತೀಯ ಭಾಷೆಗಳಲ್ಲಿ ಉರ್ದು, ಸಿಂಧಿ, ಗುಜರಾತಿ, ಪಂಜಾಬಿ, ಹಿಂದಿ, ಮರಾಠಿ, ಕನ್ನಡ ಹಾಗೂ ಇನ್ನಿತರ ಭಾಷೆಗಳಲ್ಲಿಯೂ ಸಮೃದ್ಧ ಕಾವ್ಯ ಕೃಷಿಗೆ ಕಾರಣವಾಗಿದೆ. ಇದು ತನ್ನದೇ ಆದ ಲಯ, ನಿಯಮ ಹಾಗೂ ಲಕ್ಷಣಗಳನ್ನು ಹೊಂದಿದೆ. ಇದರ ಕುರಿತು ಶಾಂತರಸ, ಜಂಬಣ್ಣ ಅಮರಚಿಂತ, ಸಿದ್ದರಾಮ ಹಿರೇಮಠ, ಚಿದಾನಂದ ಸಾಲಿ, ಗಿರೀಶ್ ಜಕಾಪುರೆ, ಶ್ರೀದೇವಿ ಕೆರೆಮನೆ, ಅಲ್ಲಗಿರಿರಾಜ…. ಮುಂತಾದ ಗಜಲ್ ಗಾರುಡಿಗರು ಅನುಷಂಗಿಕವಾಗಿ ಚರ್ಚಿಸಿದ್ದರಾದರೂ ‘ಸಮಗ್ರ ಆಕರ ಗ್ರಂಥ’ ದ ಕೊರತೆ ನವ ಉತ್ಸಾಹಿ ‘ಗಜಲ್ ಗೋ’ ರವರನ್ನು ಕಾಡುತ್ತಿದೆ. ಅಂತೆಯೇ ಇಂದು ‘ಗಜಲ್ ಗೋಯಿ’ ತುಂಬಾ ಸವಾಲಿನಿಂದ ಕೂಡಿದೆ. “ಗಜಲ್ ಸಹಜವಾಗಿ ಒಲಿಯುವುದಿಲ್ಲ. ಮನಬಂದಂತೆ ಬರೆಯಲು ಇದು ಮುಕ್ತ ಛಂದವೂ ಅಲ್ಲ. ಇಲ್ಲಿ ನಿಯೋಜಿತವಾದ ಛಂದಸ್ಸು ಇದೆ. ಹಲವಾರು ಪ್ರಕಾರದ ವೃತ್ತಗಳು ಇವೆ. ಅವು ಯಾವುದನ್ನು ನಾವು ಕನ್ನಡದವರು ಗಮನಿಸುತ್ತಿಲ್ಲ” ( ಶ್ರೀಮತಿ ಪ್ರಭಾವತಿ ಎಸ್. ದೆಸಾಯಿ : ಭಾವಗಂಧಿ: ಪು- ೧೨) ಎಂದು ಗಿರೀಶ್ ಜಕಾಪುರೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಇಂದು ಗಜಲ್ ಪರಂಪರೆ ಹುಲುಸಾಗಿ ಬೆಳೆಯುತ್ತಿದೆಯಾದರೂ ಛಂದೋ ನಿಯಮವನ್ನು ಪಾಲಿಸದೆ ಇರುವುದು ಆತಂಕದ ಜೊತೆಗೆ ವಿಷಾದವನ್ನು ಮೂಡಿಸುತ್ತಿದೆ. ಈ ಬಗ್ಗೆ ಕವಿ ಮಜಹರ್ ಇಮಾಮ್ ಅವರ ಒಂದು ಷೇರ್ ಅನ್ನು ಇಲ್ಲಿ ಗಮನಿಸಬಹುದು.  “ಕಹನೆ ಕೊ ಯೆ ಗಜಲ್ ಹೈ, ಕ್ಯಾ ಗಜಲ್ ಹೈ ಜಿಸೆ ನಜ್ಮ್ ಕಹಾ ನ ಜಾಯೆ, ನ ತರಾನಾ ಕಹಾ ಜಾಯೆ” ಇದರಲ್ಲಿ ಅವರು ಗಜಲ್ ಹೆಸರಿನಲ್ಲಿ ಬರುತ್ತಿರುವ ಗಜಲ್ ಅಲ್ಲದ ಕಾವ್ಯದ ಬಗ್ಗೆ ಬರೆಯುತ್ತ ಇಂತಹ ರಚನಾ ವಿಧಾನವನ್ನು ಖಂಡಿಸಿದ್ದಾರೆ.         ‘ಗಜಲ್’ ಎಂದರೆ ಒಂದು ಅರ್ಥ ನಲ್ಲೆಯೊಂದಿಗೆ ಸಂವಾದ, ಮತ್ತೊಂದು ಅರ್ಥ ಸಿಕ್ಕಿಬಿದ್ದ ಜಿಂಕೆಯ ಆಕ್ರಂದನ. ಈ ಎರಡೂ ಅರ್ಥಗಳ ಭಾವನಾ ವಿಶೇಷಗಳೂ ಗಜಲ್ ಪ್ರಕಾರದೊಳಗೆ ಆಳವಾಗಿ ಬೇರೂರಿವೆ. ಈ ಕಾರಣಕ್ಕಾಗಿಯೇ “ಗಜಲ್ ಎಂದರೆ ಪ್ರೇಮಗೀತೆ ಮಾತ್ರ ಎಂಬ ತಪ್ಪು ಕಲ್ಪನೆ ವ್ಯಾಪಕವಾಗಿ ಹರಡಿರುವುದು” (ಡಿ. ಆರ್. ನಾಗರಾಜ್ (ಸಂ) ; ಉರ್ದು ಸಾಹಿತ್ಯ ; ಪು- XXVI) ಎಂಬ ಡಿ. ಆರ್. ನಾಗರಾಜ್ ರವರ ಮಾತು ಉಲ್ಲೇಖನೀಯ. ಪ್ರೇಮ ಎನ್ನುವುದು ಒಂದು ಭಾಷೆ, ಒಂದು ನಿರ್ದಿಷ್ಟ ಮನಸ್ಥಿತಿ. ಅಲ್ಲಿ ಎಲ್ಲ ವಸ್ತುಗಳು, ತಾತ್ವಿಕ ಸಂಗತಿಗಳು, ಅನುಭವಗಳು ಶೋಧನೆಗೆ ಒಳಗಾಗುತ್ತವೆ. ಈ ಹಿನ್ನೆಲೆಯಲ್ಲಿ “ಜಗದಲ್ಲಿರುವುದು ವಿರಹದ ನೋವೊಂದೆ ಅಲ್ಲ, ಇನ್ನೆಷ್ಟೋ ನೋವುಗಳಿವೆ” ಎಂಬ ಫೈಜ್ ಅಹ್ಮದ್ ಫೈಜ್ ರವರ ಹೇಳಿಕೆ ಮಹತ್ವವನ್ನು ಪಡೆದುಕೊಳ್ಳುತ್ತದೆ.      ಮಿರ್ಜಾ ಗಾಲಿಬ್ ಉರ್ದು ಗಜಲ್ ಪರಂಪರೆಯ ಹೆಮ್ಮೆಯ ವಾರಸುದಾರರು. ಗಾಲಿಬ್ ನ ಉರ್ದು ‘ದಿವಾನ್’ ದಲ್ಲಿ ಹತ್ತು ಹಲವು ವೈವಿಧ್ಯಮಯ ವಿಷಯಗಳ ಸಂಗಮವಿದೆ. ಅವುಗಳಲ್ಲಿ ಕೆಲವೊಂದು ಉದಾಹರಣೆಗಾಗಿ… “ಸಮಸ್ತ ವಿಶ್ವದ ವಸ್ತುಕೋಟಿಯಲಿ ನೀನಿಲ್ಲದೆ ಇಲ್ಲಾ ಅದರೂ ಒಂದು ವಸ್ತುವು ನಿನಗೆ ಸಮ-ಸಾಟಿಯೆ ಅಲ್ಲಾ” “ನನ್ನ ದೃಷ್ಟಿಯಲ್ಲಿ ಜಗವೆಂಬುದು ಮಕ್ಕಳ ಚೆಲ್ಲಾಟ ನನ್ನ ಎದುರಿನಲಿ ಹಗಲೂ ಇರುಳೂ ನಡೆಯುವ ನಗೆಯಾಟ” “ಕಾಯಿಲೆ ಬಿದ್ದರೆ ನೋಡಿಕೊಳ್ಳಲಿಕ್ಕೆ ಯಾರೂ ಬೇಡ ನನ್ನ ಬಳಿ ಕೊನೆಯುಸಿರೆಳೆದರೆ ಅತ್ತು ಕರೆಯಲಿಕೆ ಯಾರೂ ಇರದಿರಲಿ”  “ಬದುಕಿನ ತಳಹದಿಯಲ್ಲಿಯೆ ಅವಿತಿವೆ ನಾಶದ ಬೀಜಗಳು ರೈತನ ಬೆವರೇ ಸಿಡಿಲಾಗುತ ಬೆಳೆ ಸುಡುವುದು ಸುಗ್ಗಿಯೊಳು”      ಗಜಲ್ ಮಾನವ ಪ್ರೇರಿತ, ನಿಸರ್ಗದ ಆಧಾರಿತ ಎಲ್ಲ ವಿಷಯಗಳನ್ನು ತನ್ನ ಮಡಿಲಲ್ಲಿಕೊಟ್ಟುಕೊಂಡು ಕಾವು ಕೊಡುತಿದೆ. ಯಾವ ವಿಷಯವೇಯಾದರೂ ಹೇಳುವ ರೀತಿ ಮಾತ್ರ ಕೋಮಲ ಹಾಗೂ ಹೃದಯ ತಟ್ಟುವಂತೆ ಇರಬೇಕು.‌ಆದರೆ ಹಿರಿಯ ತಲೆಗಳು ಮಾತ್ರ ಗಜಲ್ ಎಂದರೆ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಭಕ್ತಿ, ಅಧ್ಯಾತ್ಮ… ಕುರಿತು ಬರೆಯಬೇಕು ಎನ್ನುತ್ತಾರೆ.      ‘ರದೀಫ್’ ಗಜಲ್ ಗೆ ಗೇಯತೆಯನ್ನು ನೀಡುತ್ತದೆ. ಲಾಲಿತ್ಯ ಹೆಚ್ಚಿದಷ್ಟು ಭಾವ ತೀವ್ರತೆ ಉದಯಿಸಿ ಸಂಗೀತದ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆದರೆ ಅದರ ಬಳಕೆ ಮಾತ್ರ ಔಚಿತ್ಯದಿಂದ ಕೂಡಿರಬೇಕು. ಅದು ಅನಗತ್ಯವಾಗಿರದೆ ಇಡೀ ಗಜಲ್ ಗೆ ಮೆರುಗು ನೀಡುವಂತಿರಬೇಕು. ಆದರೆ ಗಜಲ್ ಗಳಲ್ಲಿ ರದೀಫ್ ಗಳ ಆಯ್ಕೆಯ ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ. ರದೀಫ್ ಗಳು ಸಹೃದಯ ಓದುಗರನ್ನು ಯೋಚನೆಗೆ ಹಚ್ಚುವಂತಿರಬೇಕು. ಸಖಿ, ಸಖಾ, ಗೆಳೆಯ, ಗೆಳತಿ, ಮಿತ್ರ, ಸಾಕಿ, ಗಾಲಿಬ್, ನಾವು, ನೀವು… ಇಂತಹ ರದೀಫ್ ಗಳನ್ನು ಹೇರಳವಾಗಿ ಬಳಸಲಾಗುತ್ತಿದೆ. ಇದರಿಂದ ಕೆಲವೊಮ್ಮೆ ಗಜಲ್ ನ ಧ್ವನಿಯ ರಸಭಂಗವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ..! ರದೀಫ್ ನ ಬಳಕೆ ಪ್ರತಿ ಗಜಲ್ ನಲ್ಲಿಯೂ ಭಿನ್ನವಾಗಿರಬೇಕು. ಇಲ್ಲದಿದ್ದರೆ ಅದು ಕೇವಲ ‘ಏಕತಾನತೆ’ಯನ್ನು ಉಂಟು ಮಾಡುತ್ತದೆಯಷ್ಟೇ..! ರದೀಫ್… ಇಡೀ ಗಜಲ್ ಗೆ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಯಾವ ರದೀಫ್ ಕೂಡ ಒತ್ತಾಯಪೂರ್ವಕವಾಗಿ ಬರಬಾರದು, ಉಸಿರಿನಂತೆ ಸರಳವಾಗಿ, ಸುಲಲಿತವಾಗಿ ಬರಬೇಕು ; ಬರದೇ ಇದ್ದರೂ ನಡೆದೀತು! ಏಕೆಂದರೆ ಗಜಲ್ ಗೆ ರದೀಫ್ ಅನಿವಾರ್ಯವಲ್ಲ, ಅವಶ್ಯಕತೆಯಷ್ಟೆ. ಇದನ್ನು ಗಜಲ್ ಛಂದಶಾಸ್ತ್ರಜ್ಞರಾದ ಅಲ್ಲಾಮ ಅಖ್ಲಾಕ್ ದೆಹಲವಿಯವರು ತಮ್ಮ ‘ಘನ ಶಾಯರಿ’ ಕೃತಿಯಲ್ಲಿ ರದೀಫ್ ಕುರಿತು ಹೀಗೆ ಹೇಳಿದ್ದಾರೆ. “ರದೀಫ್ ಇಲ್ಲದಿದ್ದರೂ ನಡೆದೀತು, ಕಾಫಿಯಾ ಇಲ್ಲದಿದ್ದರೆ ಅದು ಗಜಲ್ ಆಗುವುದಿಲ್ಲ”. ಇದೇ ಅರ್ಥದ ಮಾತುಗಳನ್ನು ಮಮ್ತಾಜ್ ಉರ್ರಷಿದ್ ರವರು ತಮ್ಮ ‘ಇಲ್ಮ್ ಕಾಫಿಯಾ’ ಪುಸ್ತಕದಲ್ಲಿ ಹೇಳಿದ್ದಾರೆ. ಇದು ‘ಕವಾಫಿ’ ಯ ಮಹತ್ವ, ಅನಿವಾರ್ಯತೆಯನ್ನು ಸಾರುತ್ತದೆ. ಗಜಲ್ ಗೋ ರದೀಫ್ ಬಳಸುವುದಕ್ಕಿಂತ ಮುಂಚೆ ಅದರ ಪ್ರಕಾರ, ಅದರ ಅರ್ಥ, ಸಾಧ್ಯತೆಗಳನ್ನು ಅರಿಯುವ ಪ್ರಯತ್ನ ಮಾಡಬೇಕು. ರದೀಫ್ ನಲ್ಲಿ ಚೋಟಿ ರದೀಫ್, ಮಜಲಿ ರದೀಫ್ ಹಾಗೂ ಲಂಬಿ ರದೀಫ್ ಎಂಬ ಮೂರು ಪ್ರಕಾರಗಳಿವೆ. ರದೀಫ್ ಇಲ್ಲದೆ ಗಜಲ್ ಗಳ ಸೃಷ್ಟಿಕಾರ್ಯ ನಡೆದಿದೆ. ಫಿರಾಖ್ ಮತ್ತು ಅಲ್ಲಮಾ ಇಕ್ಬಾಲ್ ರಂತಹ ಮಹಾಕವಿಗಳು ರದೀಫ್ ರಹಿತ ಗಜಲ್ ಗಳನ್ನು ರಚಿಸಿದ್ದಾರೆ. ಇದಕ್ಕೆ ಗೈರ್ ಮುರದ್ದಫ್ ಗಜಲ್/ಕಾಫಿಯಾನ ಗಜಲ್ ಎಂದು ಕರೆಯುತ್ತಾರೆ.       ಕಾಫಿಯಾ.. ಗಜಲ್ ನ ಜೀವಾಳ. ಇದು ಕನ್ನಡ ಕಾವ್ಯಗಳಲ್ಲಿ ಬರುವಂತಹ ‘ಪ್ರಾಸ’ ಅಲ್ಲ. ಇದೊಂದು ಸಾಮಾನ್ಯ ಅಂತ್ಯ ಪದವಾಗಿರದೆ ಬದಲಾವಣೆ ಬಯಸುವ ಒಳಪ್ರಾಸವಾಗಿದೆ. “ರದೀಫ್ ಇಲ್ಲದೆಯೂ ಗಜಲ್ ರಚನೆ ಸಾಧ್ಯವಿದೆ. ಆದರೆ ಕಾಫಿಯಾ ಇಲ್ಲದೆ ಗಜಲ್ ರಚನೆ ಸಾಧ್ಯವಿಲ್ಲ” (ಗಿರೀಶ್ ಜಕಾಪುರೆ ; ಸಾವಿರ ಕಣ್ಣಿನ ನವಿಲು; ಪು- ೧೮) ಎಂದು ಗಿರೀಶ್ ಜಕಾಪುರೆಯವರು ಹೇಳಿರುವುದು ಗಜಲ್ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಹಾಗಂತ ‘ಕಾಫಿಯಾ’ ಅನಾವಶ್ಯಕವಾಗಿ, ಪ್ರಾಸದ ನೆಪದಲ್ಲಿ ಬಳಕೆಯಾಗಬಾರದು. ಅದೊಂದು ಸುಂದರ ಸ್ವತಂತ್ರ ಪದ, ಶಬ್ಬವಾಗಿರಬೇಕು. ಕಾಫಿಯಾದ ಕೊನೆಯ ಅಕ್ಷರ ‘ರವಿ’ ಮಾತ್ರ ಇಲ್ಲಿ ಮುಖ್ಯವಾಗುವುದಿಲ್ಲ, ಅದರೊಂದಿಗೆ ಕಾಫಿಯಾದ  ಹಲವು ಪ್ರಕಾರಗಳೂ ಮುಖ್ಯವಾಗುತ್ತವೆ. ಏಕ ಅಲಾಮತ್, ಬಹು ಅಲಾಮತ್, ರೌಫ್, ಕೈದ್, ತಶೀಶ್…. ಮುಂತಾದವುಗಳ ಪರಿಚಯ ಅಗತ್ಯವೆನಿಸುತ್ತದೆ. ಇದುವೆ, ಅದುವೆ… ಇವುಗಳು ಕಾಫಿಯಾ ಆಗುವುದಿಲ್ಲ. ಸೂರ್ಯನೆ, ಅವನೆ, ನೀನೆ, ಏನೆ… ಇವುಗಳೂ ಕವಾಫಿ ಅಲ್ಲ. ಕೇವಲ ‘ರವಿ/ರವೀಶ್’ ನ ಅನುಕರಣೆಯಿಂದ ಕಾಫಿಯಾ ಪರಿಫೂರ್ಣವಾಗುವುದಿಲ್ಲ. ಪ್ರತಿ ‘ಕವಾಫಿ’ ಯಲ್ಲಿ ಅರ್ಥ ಹೊಂದಾಣಿಕೆಯ ಜೊತೆಗೆ ವಚನ, ಕಾಲ, ಲಿಂಗ, ಪ್ರತ್ಯಯಗಳಲ್ಲಿಯೂ ಹೊಂದಾಣಿಕೆ ಇರಬೇಕು, ಇರಲೆಬೇಕು. ಆದರೆ ಹೆಚ್ಚಿನ ಗಜಲ್ ಗಳು ‘ಕವಾಫಿ’ಗೆ ಅವಮಾನ ಮಾಡುತ್ತಿರುವಂತೆ ಭಾಸವಾಗುತ್ತದೆ. ಇದರಿಂದಾಗಿಯೇ ಗಜಲ್ ಗಳು ಹೃದ್ಯವೆನಿಸದೆ ಕೇವಲ ಸಂಖ್ಯೆಯ ಸೌಧಗಳಾಗುತ್ತಿವೆ…!!        ಗಜಲ್ ನ ಪ್ರತಿಯೊಂದು ‘ಷೇರ್’ ಗಜಲ್ ನ ಪ್ರತ್ಯೇಕ ಒಂದು ಅಂಗವಿದ್ದಂತೆ. ಅದು

ಗಜಲ್ ಸಾಹಿತ್ಯ ಮತ್ತು ಸವಾಲುಗಳು Read Post »

ಕಾವ್ಯಯಾನ

ಹರಿದ ಬಟ್ಟೆ….

ಹರಿದ ಬಟ್ಟೆ…. ಸುಜಾತ ಕಂದ್ರವಳ್ಳಿ ನನ್ನದು ಅರ್ಧಂಬರ್ಧ ಹರಿದ ಬಟ್ಟೆಆಧುನಿಕತೆಯನ್ನು ವೈಭವೀಕರಿಸಲೆಂದೇಹರಿದುಕೊಂಡ ಬಟ್ಟೆ….!ಹರಕಲು ಬಟ್ಟೆ ಎನ್ನಲಾರೆ….!ಆದರೂ ಹರಿದ ಬಟ್ಟೆ….! ಆಧುನಿಕತೆಯನ್ನು ತೋರಿಸುವ ಭರದಲ್ಲಿ, ಸಾಂಪ್ರಾದಾಯಿಕತೆಯನ್ನು ಮುಚ್ಚಿಡಲೆಂದೇ ಹರಿದುಕೊಂಡ ಬಟ್ಟೆ……!ಅರ್ಧ ಹೊಟ್ಟೆಗೆ ತಾಗುವಂತ ಹಸಿದ ಬಟ್ಟೆ…ಅಂಬಲಿ ಊಟ ನನ್ನದಲ್ಲವೇ ಅಲ್ಲ…!ಮಾಲ್ಟ್ ಎಂದು ಹೆಸರು ಬದಲಿಸಿಕೊಂಡು ಮೆರೆವ ಹರಿದ ಬಟ್ಟೆ.ನನ್ನದು ಅರ್ಧಂಬರ್ಧ ಹರಿದ ಬಟ್ಟೆ. ಅಮ್ಮನ ಹಳೆ ಸೀರೆಗೆ ಹೊಸ ಮೆರುಗು ಕೊಟ್ಟ ಬಟ್ಟೆ,ಅಪ್ಪನ ಲುಂಗಿಗೆ ಅಲಂಕಾರ ಕೊಟ್ಟ ಬಟ್ಟೆ…,ಲುಂಗಿಯನ್ನೆ ಅಂಗಿಯಾಗಿಸಿದ ಬಟ್ಟೆ…ಸೀರೆಯನ್ನೆ ಹೊದಿಕೆಯಾಗಿ ಸಿಂಗರಿಸಿಕೊಂಡ ಬಟ್ಟೆ,ಆದರೇನಂತೆ ನಾ ಹರಕಲು ಬಟ್ಟೆ ಎಂದು ಅರಚಲಾರೆ,ಕಿರುಚಲಾರೆ ಆದರು ಹರಿದ ಬಟ್ಟೆ.ನನ್ನದು ಅರ್ಧಂಬರ್ಧ ಹರಿದ ಬಟ್ಟೆ. ಒಬ್ಬರು ಇನ್ನೊಬ್ಬರನ್ನು ನಂಬಲಾರದಂತ ಬಟ್ಟೆ.ತಳುಕು ಬಳುಕಿನ ವೈಯ್ಯಾರದ ಬಟ್ಟೆ.ಬಣ್ಣದ ಜಗದಲಿ ಮೆರೆಯಲೆಂದೆ ಹುಟ್ಟಿಕೊಂಡುಸಾಯಲಾಗದೆ ನರಳಾಡುತಿರುವ ಬಟ್ಟೆ.ಬಂಗಾರವಿಲ್ಲದ, ಸಿಂಗಾರ ಕಾಣದ ,ಮಲ್ಲಿಗೆ ಕಂಪು ತಾಗದ ಬಟ್ಟೆಬೊಟ್ಟನ್ನೆ ದಿಕ್ಕರಿಸಿ ಬೆಟ್ಟು ಮಾಡಿ ತೋರಿಸಿಕೊಳ್ಳುತಿರುವ ಬಟ್ಟೆ,ಆದರೂ ಹರಿದ ಬಟ್ಟೆ ಎನ್ನಲಾರೆ….!ಅರ್ಧಂಬರ್ಧ ಹರಿದ ಬಟ್ಟೆ….. ಎಂದು ಹೊಲಿಸಿಕೊಳ್ಳಲಾರದಷ್ಟು ದುಬಾರಿ ಈ ಬಟ್ಟೆ.ಅಲಂಕರಿಸಿಕೊಳ್ಳುವ ಸೊಬಗನ್ನು ಮರೆತ ಬಟ್ಟೆಇದರೊಳಗೆ ನಾನು ಪಟ್ಟದ ಗೊಂಬೆಯಂತೆ ಮೌನಳಾಗಿಬಿಟ್ಟೆ.********************************************

ಹರಿದ ಬಟ್ಟೆ…. Read Post »

ಕಾವ್ಯಯಾನ

ಕಾವ್ಯಯಾನ

ಬತ್ತಿದೆದೆ ರೇಷ್ಮಾ ಕಂದಕೂರ ಬತ್ತಿದೆದೆಯಲಿ ಬಿತ್ತದಿರು ಕನಸುಸುತ್ತಲೆಲ್ಲ ಕವಿದ ಕತ್ತಲೆಮುತ್ತಿದೆ ಭರವಸೆಯ ಬೆಳಕನುಕುತ್ತಾಗಿದೆ ಕಿತ್ತು ತಿನ್ನುವ ಹುಳುವಿನಂತೆ ಸತ್ಯದ ಹೊನಲಿಗೂ ಸಂಚಕಾರಮಿತ್ಯದ ಝೇಂಕಾರದ ಸಲಿಗೆಅಪತ್ಯದ ನಡೆ ನುಡಿಯುವವರೆ ಹೆಚ್ಚುನಿತ್ಯ ನೇಮವು ದೂರ ತೀರದಲಿ ತೇಲಿ ಕೋಪ ತಾಪದ ಆರ್ಭಟಕೂಪದಲಿ ಸೇರಿದೆ ಮಾನವೀಯತೆಊಹಾಪೋಹದ ಸುಳಿಗೆವಾಸ್ತವವ ಮರೆ ಮಾಚಿದೆ.

ಕಾವ್ಯಯಾನ Read Post »

ಕಾವ್ಯಯಾನ

ನಿರುತ್ತರ

ಕವಿತೆ ನಿರುತ್ತರ ಮಧುಸೂದನ ಮದ್ದೂರು ನಿನ್ನ ತುದಿ ಬೆರಳುಎದೆ ತಾಕಲುನೂರು ನವಿರು ಪುಳಕ ನಿನ್ನ ಮುಂಗುರುಳುಗಾಳಿ ಗಂಧ ತೀಡಲುಸಾವಿರದ ಸಂಭ್ರಮದ ಘಮಲು ನಿನ್ನ ಕೆಂದುಟಿಅರಳಿ ನಾಚಲುಲಕ್ಷದ ಲಕ್ಷ್ಯವುಅಲಕ್ಷ್ಯವು ನಿನ್ನ ಕಟಿಕುಲುಕಿ ಬಳಕಲುಕೋಟ್ಯನುಕೋಟಿಅಪ್ಸರೆಯರಿಗೂ ಮತ್ಸರ ನಾ…..ನಿರುತ್ತರನಿರಂತರ****************************************

ನಿರುತ್ತರ Read Post »

ಕಾವ್ಯಯಾನ

ದಂಡೆಯಲ್ಲಿ ಒಮ್ಮೆ ನಡೆದು..

ಕವಿತೆ ದಂಡೆಯಲ್ಲಿ ಒಮ್ಮೆ ನಡೆದು.. ಫಾಲ್ಗುಣ ಗೌಡ ಅಚವೆ ಕಾರವಾರದ ದಂಡೆಯೆಂದರೆ ನನಗೆಅದೆಂಥದೋ ಪ್ರೀತಿಸಂಜೆ ಮುಂಜಾವೆನ್ನದೇಸದಾ ಗಿಜುಗುಡುವ ಜನರುಈ ದಂಡೆಯಲ್ಲಿ ನಡೆದುಅದರ ಜೊತೆ ಒಬ್ಬೊಬ್ಬರೇಸಂಭಾಷಿಸಿಸುತ್ತಾರೆ ಮತ್ತುಹಗುರಾಗುತ್ತಾರೆ. ದಿಗಂತದಿಂದೋಡಿ ಬರುವ ಅಲೆಗಳುನಡೆವ ಪಾದಗಳ ತಂಪುಗೊಳಿಸಿಎಂತೆಂಥದೋ ಒತ್ತಡಗಳಿಂದ ವ್ಯಗ್ರವಾದವರಿಗೆಸಾಂತ್ವನ ನೀಡುತ್ತವೆ. ದಂಡೆಯಲ್ಲಿ ಸಿಗುವ ಪರಿಚಿತ ಕೊಂಕಣಿಗರು‘ ನಂಗೆ ಅಷ್ಟಾಗಿ ಕನ್ನಡ್ ಬರುದಿಲ್ಲ ಹಾಂ’ಎಂದು ಕನ್ನಡದಲ್ಲಿಯೇ ಮಾತಿಗಿಳಿಯುತ್ತಾರೆಕನ್ನಡ ದ್ವೇಶಿಸದ ಆ ಕೊಂಕಣಿಗರ ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ.ಯಾಕೆಂದರೆ, ಯಾರ ಸುದ್ದಿಗೂ ಹೋಗದ ಅವರು‘ತಾವಾಯಿತು ತಮ್ಮ ಕೆಲಸಾಯಿತು’ ಅಷ್ಟೇ! ನೀವು ಎಲ್ಲಿಂದಲೇ ಬಂದು ಕೆಲಸ ಮಾಡಿದರೆ ನೀವು ಅಲ್ಲೇ ನೆಲೆಗೊಳ್ಳುತ್ತೀರಿಅಲ್ಲಿಯವರೇ ಆಗಿಬಿಡುತ್ತೀರಿಅದಕ್ಕೆ ಕಾರಣ ಅವರ ಪ್ರೀತಿಪ್ರತಿ ಸಂಜೆ ಎದುರಾಗುವ ಈದಂಡೆಯ ಮಮತೆ! ದಂಡೆಯ ಉಸುಕು ಸದಾ ಗಾಳಿಯೊಂದಿಗೆಗಾಳಿ ಮರದ ಮೇಲೆ ಕೂತು ಪಿಸುಗುಡುವ ಬೆಳ್ಳಕ್ಕಿಗಳುಮೀನು ಕಂಡಲ್ಲಿ ತೇಲುವ ಕಡಲ ಹಕ್ಕಿಗಳುಆಗಾಗ ದಂಡೆಯ ಸಮೀಪ ಬಂದು ಪಾನಿಪುರಿಗೆ ಆಸೆಪಟ್ಟುಮುಳುಗೇಳುವ ಡಾಲ್ಫಿನ್ ಬಗ್ಗೆಯೇ ಗಂಟೆಗಟ್ಟಲೆಮಾತಾಡುತ್ತಿರುತ್ತವೆ. ಬೆಳದಿಂಗಳು ಬಂತೆಂದರೆ ಉಕ್ಕೇರುವ ಅಲೆಗಳುಬೇರೆ ಸಮಯದಲ್ಲಿ ಮಂದ್ರಸ್ಥಾಯಿಯಲ್ಲಿ ಮಿಂದಂತಿರುತ್ತದೆ. ಈ ದಂಡೆಯ ಉಸುಕಿನಲ್ಲಿ ಹಬ್ಬಿದ ಗಿಡಗಳು ಹೂ ಬಿಟ್ಟರೆಸಿಕ್ಕಾಪಟ್ಟೆ ಬಂಗಡೆ ಬೀಳುವುದಂತೆ! ಸಮುದ್ರದ ಮಧ್ಯೆ ನಿಂತ ಒಂಟಿ ದೀಪ ಸ್ಥಂಭಇಡೀ ಕಾರವಾರಿಗರ ಮನಸ್ಸನ್ನುಪ್ರತಿನಿಧಿಸುತ್ತದೆ!ಸಂಜೆ ಆರಾದರೆ ಕಿಲೋಮೀಟರುಗಳ ದೂರದ ಮೀನು ಹಡಗುಗಳ ಕಾಯುತ್ತಸುರಕ್ಷಿತ ದಡ ಸೇರಿಸುತ್ತದೆ.! ಸಂಜೆಯಾದರೆ ಮೀನ ಖಂಡಗಳ ಹೊಳೆಸುವಹುಡುಗಿಯರನ್ನು ಸಾಲು ಹೊರಟ ಬೆಳ್ಳಕ್ಕಿಗಳು ಒಮ್ಮೆ ಇಣುಕಿ ನಡುವ ಬಳಸಿದಂತೆಸುಳಿದು ಹೋಗುತ್ತವೆ. ಎಂದೋ ಈ ದಂಡೆಯಲ್ಲಿ ನಡೆದು ಹೋದ ಕವಿ ರವೀಂದ್ರರು ಈಗಲೂ ಇಲ್ಲೆಲ್ಲೋ ಸುತ್ತುತ್ತಿರುವಂತೆ ಭಾಸವಾಗುತ್ತದೆ.ಅವರು ಕಂಡ ಸಂಜೆ ಇನ್ನೂ ಎನೂ ಬದಲಾಗಿಲ್ಲ! ಲಂಗರು ಹಾಕಿದ ಹಡಗುಗಳು ಸಂಜೆಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ಚಿತ್ರಗೀತೆಗಳ ಆಲಿಸಿ ತಲೆಯಾಡಿಸುತ್ತಿವೆ! ಇಲ್ಲಿನ ಆಹ್ಲಾದಕರ ಸಂಜೆಅಲೆವ ಅಲೆಗಳ ಹೃದಯದ ಮಿಡಿತದಂಡೆಯ ಮರಳ ಮಧುರ ಸಂಗೀತಬೆಳ್ಳಕ್ಕಿ ಹೂ ಮುಡಿದ ಬೈತ್ಖೋಲಿನ ಮರ ನೋಡುತ್ತಲೆನನಗೂ ದಂಡೆಗೆ ಮತ್ತೆ ವಾಪಾಸಾಗಬೇಕೆಂಬ ಅಸೆ ಹುಟ್ಟುತ್ತದೆದಂಡೆಯ ವಿರಹ ನನ್ನೆದೆ ದಿಗಂತದಲ್ಲಿ ಮಡುಗಟ್ಟುತ್ತದೆ! *************************************

ದಂಡೆಯಲ್ಲಿ ಒಮ್ಮೆ ನಡೆದು.. Read Post »

You cannot copy content of this page

Scroll to Top