ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸಾಕು ಬಳುಬಳಿ

ಕೃಷ್ಣಮೂರ್ತಿ ಕುಲಕರ್ಣಿ

Diwali 2019: When is the festival of lights and how is it celebrated around  the world? | The Independent | The Independent

ಸಾಲು ದೀಪ ಉರಿಯುವಾಗ
ಒಂದಕಂಟಿದೆ ಸೊಡರು
ಮಕ್ಕು ಕವಿದು ಬಿಕ್ಕುವಾಗ
ಅದ್ಯಾರು ನೋಡ್ವರು ಹೇಳು
ದೀಪಗಳು ಪ್ರಜ್ವಲತೆಯಲಿ
ಸುತ್ತ ಬೆಳಗುವಾಗ
ಹಬ್ಬದ ಸಡಗರ ಹಬ್ಬಿರುವಾಗ
ಆರ್ಥ ಧ್ವನಿಯತ್ತ
ಹರಡದು ಯಾರ ಚಿತ್ತ
ಈ ತನಕ ಬೆಳಗಿದೆ
ಬೇಕಿದೆ ಈಗ ವಿರಾಮ
ಎಂದಾರುತಿದೆ ಬಸವಳಿದ ದೀಪ
ಅದಕು ಮುನ್ನ ಬೆಳಗಿಸಿದೆ
ಇನ್ನೊಂದು ರೂಪ
ದೀಪದಿಂದ ದೀಪ
ಹಚ್ಚಬೇಕು ಮಾನವ
ಅದೆ ದೀಪ ಉಳಿಯಲೆಂಬ
ಸೊಲ್ಲು ಬೇಡಾ ಕೇಳುವ
ಬೆಳಕು ಮುಖ್ಯ ಬದುಕಿನಲ್ಲಿ
ಅಂಧತೆಯ ತೊಡೆಯಲು
ನಾನು ನನದು ಎಂಬುದೆಲ್ಲ
ಬತ್ತಿಯಾಗಿ ಉರಿಯಲು
ಶಕ್ತಿ ಕೊಡು ದೀಪಾವಳಿ
ಸಾಕು ಇದೇ ಬಳುವಳಿ…

**********************

About The Author

Leave a Reply

You cannot copy content of this page

Scroll to Top