ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕಾರ್ಮಿಕ

ಆನಂದ ಆರ್ ಗೌಡ ತಾಳೇಬೈಲ್

Low conviction rate, lack of awareness hinder bonded labour elimination -  The Hindu

ಹೊತ್ತಿನ ಹಸಿವು ನೀಗಿಸಲು
ಸವೆದ ಶ್ರಮ ಬೆಮರಾಗಿ ಮುತ್ತಿಡುತ್ತಿದೆ
ವಾಸವಿಯ ಹಣೆಗೆ

ನಿನ್ನ ಅಳುಕು ನಿನ್ನ ಫೋಟೋ
ಜಗವೇ ತೆಗೆದು ತುರುಕಿದೆ ಗ್ಯಾಲರಿಗೆ
ನೀನು ನೀನೆಂದು ಸಾರಲು

ನೀ ಮಾತ್ರ ಕೋಲೆಬಸವ
ಕೊಟ್ಟ ಬಟ್ಟೆಗೆ ಇಟ್ಟ ಕೂಲಿಗೆ ಬಸವಳಿದರೂ
ಅವರ ಇನಾಮಿಗೆ ಸಲಾಮು ನಿನ್ನದು

ಶ್ರಮದ ಫಲ ತಟ್ಟೆ ತುಂಬಲಿಲ್ಲ
ಕೊಟ್ಟ ಪಂಚೆ ಮಾನ ಮುಚ್ಚುತ್ತಿಲ್ಲ
ಕಾಯಕಕಂಟಿದ ಚಟ ಚಟ್ಟವೇರಲು ಕಾದಿದೆ

ಈ ಜೀತ ಜೀವ ಹಿಂಡಿದರು
ಮುಕ್ತಿ ಪಡೆಯಲು ಪ್ರೇರಕವಾಗಿಲ್ಲ
ಮೋಕ್ಷವೇ ಹಸಿವಾಗಿ ಪ್ರೇತವಾಗಿ ಕಾಡಿದೆ

ಬೆವರ ಕೈಗಳು ತೊಳೆವ ಕೊಳೆಯು
ಸಿರಿಯ ನುಂಗಿ ಪುಂಗಿ ಊದುವ
ಪುಢಾರಿ ಬಾಯಿ ಕಾಯಕವೇ ಕೈಲಾಸವೆಂದಿದೆ

ಗಂಧದ ಪರಿಮಳ ಅರಿಯದ ಕಲ್ಲು
ತಾನು ತೇಯ್ಸಿಕೊಂಡು ಸವೆದರು
ಮೈಯೊಡ್ಡಿದ ಕೀರ್ತಿ ಬದುಕಿಸಿದೆ

ವಲ್ಲಿಗೆ ಶುಭ್ರ ಅರಿವೆ ತೊಡಿಸುವ
ಅವರ ರೆಟ್ಟೆಗಟ್ಟಿಗೊಳಲಿ
ಬಯಕೆ ಜೇನಾಗಲಿ

*****************

About The Author

2 thoughts on “ಕಾರ್ಮಿಕ”

Leave a Reply

You cannot copy content of this page

Scroll to Top