ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನೀ.ಶ್ರೀಶೈಲ ಹುಲ್ಲೂರು

ಉದಯಿಸುವ ರವಿಯ ದಿನದೋಟಕೆ
ಅಡ್ಡಿಯಾಗಿದೆ ಕುರಿಮೋಡ ಕರಿಸಾಲು
ಕುರಿಗಾರ ಪವನನೆದ್ದು ಬರುವನಕ
ಹಿಂಡು ಕುರಿಗಳ ನಡುವೆ ರವಿ ಕಂಗಾಲು

ಮಳೆಗಾಲದೀಗಿನೀ ಹಗಲ ಹೊತ್ತು
ಮೋಡಗಳದು ನಿಲದ ನಿತ್ಯ ರಂಪಾಟ
ಕೆಂಪಾದವನಿಗದೇನೋ ಮಮಕಾರ
ಮೋಡಗಳೊಂದಿಗವನದೂ ತುಂಟಾಟ

ಶುಕಪಿಕಗಳ ಇನಿದನಿಯ ಗಾಢಮೌನ
ಮಂಕಾದ ಮನಗಳಲಿ ಗೌಣ ಸೊಗಸು
ಅವನೆದ್ದರೆ ಬೆಳಗು ಏಳುವರು ಎಲ್ಲ
ಹೊದಿಕೆಯಡಿಯಲೆ ಕಾಣುವರು ಕನಸು

ಸುರಿವ ವರುಣನ ನಡುವೆ ನೆಲದ ಗಾನ
ಝರಿ ತೊರೆ ನದಿಗಳಲಿ ರಭಸದೋಟ
ತಡೆವರಾರಿಲ್ಲ ತಿಮಿರದಾಲಿಂಗನವ
ಮೋಡಗಳಡಿಯೆ ರವಿಯ ಮಿಲನ ಕೂಟ

ಕಡಲಿನೊಡಲಿಗದೇನೋ ಸಡಗರ
ರವಿಯ ಚುಂಬನವು ಮರೆತ ಗೀತ
ಅಮ್ಮನೊಡಲಲಿ ನದಿಗೆ ಧನ್ಯ ಭಾವ
ಕಡಲ ಕುಡಿಗಳಲದೋ ನವ ಸಂಗೀತ

**********

About The Author

1 thought on “ಬಂದಿಯಾಗಿಹ ರವಿ”

Leave a Reply

You cannot copy content of this page

Scroll to Top