ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಬ್ಬಲಿ ಕವಿತೆ

ಮಾತುಗಳ ಅಟ್ಟಹಾಸದೊಳಗೆ

ಅಪಹಾಸ್ಯಕ್ಕೀಡಾದ ಮೌನ

ಶಬ್ದಗಳ ಜಾತ್ರೆಯೊಳಗೆ

ತೇರಿನ ಗಾಲಿಯಡಿ ಅಪ್ಪಚ್ಚಿಯಾಯಿತು.

ಮುಳ್ಳುಗಳ ಕಾವಲಿನಲಿದ್ದ ಹೂಗಳು

ನಗುವುದನ್ನೆ ಮರೆತುಬಿಟ್ಟವು

ವಿರಹದಲಿ ಬಣ್ಣಗೆಟ್ಟ ಚಿಟ್ಟೆಗಳು

ಹಸಿವಿನಲಿ ಕಂಗೆಟ್ಟವು.

ನಿನ್ನೆ ಸಂಜೆಯ  ಮುದಿಬಿಸಿಲಲಿ

ಅಕಾಲ ಮಳೆಸುರಿಯುತು

ವಿದಾಯದ ಹೊತ್ತಿನಲಿ ಬಿಕ್ಕಿದವಳ

ನೋಡಿ ಒಂಟಿಹಕ್ಕಿ ಮಮ್ಮುಲ ಮರುಗಿತು.

ಕವಿತೆಯೊಂದ ಕಟ್ಟುವ ನೆಪದಲಿ

ಶಬ್ದಗಳ ಮಾರಣಹೋಮ

ಕವಿಯ ಸಮಾದಿಯ ಮೇಲೆ

ಅಪರಿಚಿತ ಓದುಗನ ಹೂಗುಚ್ಚ.

ಎರಡು ಸಾಲಾದರು ಬರೆದು ಹೋಗು

ಗೋಗರೆದ ಕವಿತೆಯೀಗ ತಬ್ಬಲಿ.

********

ಕು.ಸ.ಮಧುಸೂದನ

About The Author

2 thoughts on “ಕವಿತೆ ಕಾರ್ನರ್”

  1. ವಾವ್ ಓದುಗರ ಹೃದಯದೊಳಕ್ಕೆ ನೇರ ಇಳಿಯುವ ನಿಮ್ಮ ಕವಿತೆಗಳಿಗೆ ನಮೋ ನಮೋ

  2. ಮನೋಜ್ಞ ಕವಿತೆ….ಚಿಂತನೆಗೆ ಒರೆ ಹಚ್ಚುವುದು ಸುಂದರವಾಗಿದೆ ಸರ್…….

Leave a Reply

You cannot copy content of this page

Scroll to Top