ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ತುಡಿತ ವಿಜಯ್ ಶೆಟ್ಟಿ ಎಲ್ಲ ಮರೆತ ಒಂದು ಹಳೆಯಊರಕೇರಿಯ ದಾರಿಗುಂಟಸತತಸೈಕಲ್ ತುಳಿಯುವ ತುಡಿತನನಗೆ. ಇನ್ನೇನು ದಿನ ಕಳೆದು,ಉದಯಕ್ಕೆ ಸಿದ್ದವಾದ ರಾತ್ರಿಗೆ,ಸಂಜೆಯ ಹುಂಜದ ಹಂಗಿಲ್ಲಅಪರಿಚಿತ ಊರಕೇರಿಯ ದಿಕ್ಕುಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು! ತುಸುವೇ ಹೊತ್ತಿನ ಬಳಿಕನಾನು ತಲುಪುವ ಕೇರಿಯಾದರೂ ಎಂಥದು? ಮುದಿ ಲಾಟೀನಿನ ಮಂದ ಬೆಳಕಲ್ಲಿಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋಆ ಊರಿನಲ್ಲಿ?ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋಆ ಊರಿನಲ್ಲಿ?ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋಆ ಊರಿನಲ್ಲಿ? ನನ್ನನು ಅಲ್ಲಿ ಊಹಿಸುವ ಉಮೇದಿಗೆ ದುಗುಡ ಕೂಡ ಬೆರೆತಿದೆಒಂದೋಅಪರಿಚಿತ ಗುಡಿಸಲೊಂದರಲ್ಲಿಮಂಕು ದೀಪದ ಸುತ್ತ ಕೆಲವರ ಮುಂದೆಪ್ರಕಟಗೊಳ್ಳುವೆ ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿಗಹ ಗಹಿಸಿ ನಗುವೆ, ಪವಡಿಸುವೆಇಲ್ಲವೋ ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದುಅತ್ತಿಂದಿತ್ತ ಅಲೆವೆ,ಸವೆಯುವೆ ಒಂದೇ ಸಮನೆಮಟ ಮಟ ರಾತ್ರಿಯು ನೆತ್ತಿಗೇರುವ ತನಕ ಹಳತು ಮರೆತ ಕೇರಿಯದಾರಿಗುಂಟ ಸತತ ಸೈಕಲ್ ತುಳಿವ ತುಡಿತ ಎದುರು ಸಪೂರ ಕಾಲುಗಳ ಮೇಲೆಬಂದ ಎಷ್ಟೋಂದು ಗಂಟುಗಳೂ, ಮೂಟೆಗಳು,ಎವೆಯೆಕ್ಕದೆಯೆ ನನ್ನ ನೋಡುತ ಸಾಗುವ ಪರಿಗೆಕಂಗಾಲಾಗಿ ಕಿವಿಗೆ ಗಾಳಿ ಹೊಕ್ಕಂತೆ ಸೈಕಲ್ ಓಡಿತು ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ?ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ. ಹಳತು, ಮರೆತ ಕೇರಿಯ ದಾರಿಗುಂಟಸತತ ಸೈಕಲ್ ತುಳಿವ ತುಡಿತ. ***********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ವಿರಹಿ ದಂಡೆ ವಿರಹಿ ದಂಡೆ ( ಕವನ ಸಂಕಲನ )ಲೇಖಕ: ನಾಗರಾಜ್ ಹರಪನಹಳ್ಳಿನೌಟಂಕಿ ಪ್ರಕಾಶನಬೆಲೆ – 80 ವಿರಹಿ ದಂಡೆಯ ವಿಹಾರವ ಹೊತ್ತು…. ಪ್ರಕೃತಿಯನ್ನು ತನ್ನೊಳಗೆ ಆವಾಹಿಸಿಕೊಂಡು ಆ ಆವಾಹನೆಯಲ್ಲಿ ವಿವಿಧ ತೆರನಾದ ತುಮುಲಗಳನ್ನು ಅನುಭವಿಸಿ ಕೊಳ್ಳುವುದು ಒಂದು ಅಪರೂಪದ ಪ್ರಕ್ರಿಯೆ. ಅದು ಜಗತ್ತಿನಲ್ಲಿ ವಿಜ್ಞಾನಿ ಗಳಿಗಿಂತ ಕವಿಗಳಿಗೆ ಸುಲಭವಾಗಿ ಸಾಧ್ಯವಾಗುವಂತದ್ದಾಗಿದೆ. ಪ್ರಕೃತಿ ತನ್ನೊಳಗೆ ಅಡಗಿಸಿಕೊಂಡಿರುವಂತಹ ಸರ್ವ ಪರಿಕರಗಳೂ ಕೂಡ ಕವಿಯ ಆಸ್ತಿಯಂತೆ. ತನ್ನ ಕಲ್ಪನೆಗೆ ಅನುಭವಕ್ಕೆ ಬೇಕಾದಾಗ ಪ್ರಕೃತಿಗೆ ಹಾಗೂ ಪ್ರಕೃತಿಯ ವಸ್ತುಗಳಿಗೆ ಬಣ್ಣ ಕೊಟ್ಟಿಕೊಳ್ಳುವ ಕವಿ ಅಸಮಾನ್ಯನೇ ಸರಿ. ಆದರೂ ಎಲ್ಲರಿಗೂ ಪ್ರಕೃತಿಯೊಡನೆ ಒಂದಾಗುವುದು, ವರ್ಷಾನುಗಟ್ಟಲೆ ಮಾತಿಗಿಳಿಯುವುದು ಕಷ್ಟಕರವೇ. ಅಂತಹ ಕಷ್ಟಪರರ ಆಚೆ ನಿಂತು ತನ್ನ ಐಚ್ಛಿಕದ ಪ್ರಪಂಚದಲ್ಲಿ ಆಪ್ತ ಭಾವಗಳ ಬಲೆಯೊಳಗೆ ತನ್ನನ್ನೂ, ತನ್ನದನ್ನೂ ಹಾಗೂ ತನ್ನವರನ್ನು ಬರಸೆಳೆದ ಕವಿ ನಾಗರಾಜ ಹರಪನಹಳ್ಳಿಯವರು. ಅವರ ಎರಡನೇ ಕವನ ಸಂಕಲನ ವಾದ “ವಿರಹಿ ದಂಡೆ” ಯೊಂದಿಗೆ ವಿಹಾರದ ವಿವರಗಳ ಹೊತ್ತು ನಲಿದ ಸಂತ್ರಪ್ತ ಕ್ಷಣವಿದು ಚಂದ. ಕವನ ಸಂಕಲನದ ” ವಿರಹಿ ದಂಡೆ” ಶೀರ್ಷಿಕೆಯೇ ಆಕರ್ಷಣೀಯ. ‘ವಿರಹ ನೂರು ತರಹ’ ಎಂಬ ಸಿನಿಮಾದ ಹಾಡಿನ ಸಾಲಿನಂತೆ ಜಗದ ಎಲ್ಲರನ್ನೂ ಬೆಂಬಿಡದೆ ಒಮ್ಮೆಯಾದರೂ ಕಾಡುವ ವಿರಹಿತನದ ಸುಂದರವಾದ ಗುಟುಕನ್ನು ಮೆದುವಾಗಿ ಗಂಟಲಿಗಿಳಿಸಿಕೊಂಡಿದ್ದಾನೆ ಕವಿ. ಪ್ರಕೃತಿಯನ್ನೇ ಹೆಣ್ಣಾಗಿಸಿ, ಹೆಣ್ಣನ್ನೇ ಪ್ರಪಂಚದ ಸುಂದರ ಜೀವರೂಪಿಯಾಗಿ ಆರಾಧಿಸುವ ಕವಿತ್ವಕ್ಕೊಂದು ಸಲಾಂ ಸಲ್ಲಿಸಲೇಬೇಕು. ಆ ಮಗ್ಗಲು ಬದಲಿಸಿ ಪ್ರಕೃತಿಯನ್ನು ಬೊಗಸೆಯಲ್ಲಿ ಹಿಡಿದು ಗಾಳಿ, ಮಳೆ, ಬೆಳಕು, ಸಮುದ್ರದ ದಂಡೆಗಳೆಲ್ಲವನ್ನೂ ಆಟಿಕೆಯಂತೆ ಅನುಭವಿಸುವ ಕವಿಯ ತುಂಟತನ, ಪ್ರೀತಿಯನ್ನು ಬರೀ ಕಣ್ಣುಗಳಿಗೆ ಮಾತ್ರ ಸೀಮಿತವಾಗಿಸದೆ, ಕನಸುಗಳಲ್ಲಿ ಮಾತಾಡುವ ಪ್ರೀತಿ, ಪ್ರಣಯವನ್ನು ಪಕ್ಕಕ್ಕಿಟ್ಟು, ನಿಸರ್ಗ ಸಿದ್ಧವಾದ ಮಿಲನ ಮೈಥುನವನ್ನು ಬರೀ ಹೆಣ್ಣು-ಗಂಡಿಗೆ ಮಾತ್ರ ಸೀಮಿತವಾಗಿಸದೇ ಗಿಡ- ಮರಗಳಿಗೂ, ದಂಡೆ -ಕಡಲಿಗೂ ಕಂಡಲ್ಲಿ ಕಂಡಷ್ಟು ಪ್ರಕೃತಿಗೆ ಮಿಲನದ ಕಾತುರವಾಗುವ ಪುಣ್ಯಕಾಲವನ್ನು ಕವಿ ಎದೆಯೊಳಗೆ ತುಂಬಿಕೊಂಡಿದ್ದಾನೆ. ತನ್ನ ಪ್ರೀತಿಯ ಪರಾಕಾಷ್ಠೆಯನ್ನು ತುಂಬಾ ವಿಸ್ತಾರವಾಗಿ, ಬಾಹ್ಯವಾಗಿ ಅವಲತ್ತು ಕೊಂಡಿದ್ದು ಪ್ರೀತಿಯನ್ನು ಸದಾ ರಸಿಕತೆಯಲ್ಲಿ ಕಂಡ ಕವಿಗೆ ವಿರಹವನ್ನ ಸರಳ ಸುಲಭವಾಗಿ ಅನುಭವಿಸಲಾಗದು. ಸಾನಿಧ್ಯಕ್ಕೆ ಮುದ್ದಾಡಿದ, ಹೊರಳಾಡಿದ ಸುಖದ ತುತ್ತ ತುದಿಯ ಕೂಗಾಟ, ಬಿಸಿಯುಸಿರ ಉನ್ಮಾದದ ಯಾವುದೋ ಸುಖದಲ್ಲಿ ಕಳೆದುಹೋಗುವ ಕವಿಗೆ ವಿರಹ ಎಂಬುದೊಂದು ಮರೀಚಿಕೆಯೇ ಆಗಿರುವಾಗ ಒಮ್ಮೊಮ್ಮೆ ಕ್ಷಣಿಕ ವಿರಹವನ್ನು ಎದುರಿಸುವುದು ಕೂಡಾ ಅಸಾಧ್ಯವಾದ ಮಾತೇ ಆಗಿದೆ. “ಭೂಮಿಯ ಬಿರುಕಿಗೆ ಬೆರಳಿಡುವೆ” ಕವಿತೆ ಸಾಕೆನಿಸುವಷ್ಟು ಶೃಂಗಾರವನ್ನು ತುಂಬಿಕೊಂಡಿದ್ದು, ರಸಿಕತೆಯ ಅನುಭವಿಸಿದ ಅವಕಾಶವಾದಿಗಳಿಗೆ ಏನೇನನ್ನೋ ಒಳಗೊಳಗೆ ಅನಿಸುವಷ್ಟು , ನಿರೀಕ್ಷಿಸುತ್ತಿರುವವರಿಗೆ ಆಸೆ ಹುಟ್ಟಿಸುವಂತಹ ಗಟ್ಟಿತನದ ಕವಿತೆ. ಸೃಷ್ಟಿಯ ಒಂದು ಮಿಲನದ ನೋಟವನ್ನು ಆಪ್ತ ಪದಗಳಿಂದ ಔಚಿತ್ಯ ಪೂರ್ಣವಾಗಿ ಓದುವವರಿಗೆ ಉಣಬಡಿಸುವ ಕಲೆಯೊಂದು ಕವಿಗೆ ಕರಗತವಾದಂತಿದೆ. ಕವಿತೆಯ ಕೊನೆಯಲ್ಲಿ “ಭೂಮಿಯ ಬಿರುಕಿಗೆ ಬೆರಳಿಡುವುದೆಂದರೆಗೆಲ್ಲುವುದು ಸೋಲುವುದು ಶರಣಾಗುವುದು ಒಂದಾಗುವುದುಉಳಿದದ್ದು?ಉಳಿದದ್ದು ಏನು ಇಲ್ಲ…!!ಭೂಮಿಯ ಎದುರು ಮತ್ತೆ ಮತ್ತೆ ಧ್ಯಾನಿಸುವುದು….” ಕವಿಯ ಈ ಕಲ್ಪನೆಯು ತೀರಾ ಆಪ್ತವಾಗಿ ಮನತಟ್ಟುತ್ತದೆ. ದೈನಿಕದಲ್ಲಿ ಬಹುತೇಕರು ರಾತ್ರಿ ಕನಸಿನಲ್ಲಿ ಕಾಣುವ ವಾಸ್ತವವಲ್ಲದಾದರೂ ಕ್ಷಣಿಕ ವಾಸ್ತವ ಎನಿಸುವ, ಆಪ್ತವೂ ದೂರವೂ ಆದಂತಹ ಕನಸು ಮತ್ತು ಮನಸ್ಸಿನ ತೊಯ್ದಾಟಗಳು, ಮಲಗಿದ್ದಾಗ ಕನಸು ಅನಾವರಣವಾಗುವ ಬಗೆ, ಅದರಲ್ಲಿ ದನಿಯೊಂದು, ಮುಖವೊಂದು, ಸ್ಥಳ ಇನ್ನೊಂದು ಆದರೆ ಆ ಕನಸಿನಲ್ಲಿ ನಾವು ಮಾತ್ರ ಪಕ್ಕಾ. ಕನಸೇ ಹೀಗೆ ಎಂಬುದು ನನ್ನ ವಾಸ್ತವಕ್ಕೂ ಬರುವಹಾಗೆ ಕಟ್ಟಿಕೊಟ್ಟ ಕವಿತೆಯು ಸಹ ಆಪ್ತವಾಗಿ ಕೈ ಹಿಡಿದುಬಿಡುತ್ತದೆ. “ಕಣಿವೆ ತೋಳುಗಳಲಿರಭಸದಿ ಹರಿವ ನದಿಗೆಎದೆ ಕೊಟ್ಟ ಪರ್ವತ ಶೃಂಗಾರೋನ್ಮತ್ತಕಾಮೋನ್ಮಾದದಿ ಮಿಂದ ನಗ್ನ ಭೂಮಿನಗುನಗುತ್ತಾ ನಿದ್ದೆ ಹೋಗಿರಲು” ರಾತ್ರಿ ಸುರಿದ ಮಳೆ ಕವಿಯ ಕಾವ್ಯ ಪ್ರಪಂಚಕ್ಕೆ ವಿಶಿಷ್ಟವಾಗಿದೆ. ಮಳೆ ಮತ್ತು ಪ್ರಥ್ವಿಯ ಬರಪೂರಿ ಮಿಲನವನ್ನು ಕವಿ ಕಂಡು ಉಂಡು ತೇಗಿದ್ದಾನೆ ತೇಗುತ್ತಿದ್ದಾನೆ. ಭೂಮಿ ಮತ್ತು ಮಳೆಯ ನಡುವಿನ ನಂಟು ಭೂಮಂಡಲದ ಚರಾಚರ ಜೀವರಾಶಿಗಳಿಗೆ ಅವಶ್ಯಕ. ಅದಕ್ಕೆ ಗಂಡು ಹೆಣ್ಣಿನ ಮಿಲನದಂತೆ ಹೋಲಿಕೆ ನೀಡಿ ಕವಿತೆಯ ಕೊನೆಯಲ್ಲಿ “ಬೆವರುಂಡ ಗದ್ದೆಗಳು ಹಸಿರಾದವು” ಎಂದು ಸತ್ಯವನ್ನೇ ಅರುಹಿದರೂ ಆ ತುಂಟತನದ ಸಾಲುಗೊಂದು ಸೋಜಿಗದ ಚಪ್ಪಾಳೆ ಸೇರಲೇ ಬೇಕು. “ಸುಳಿವ ಗಾಳಿ ಯಲಿಎರಡು ನಿಟ್ಟಿಸಿರುಗಳಿವೆಅವು ಪ್ರೇಮದ ಪಲ್ಲವಿಗಳಾಗಿ ಬದಲಾಗಿ ಬಿಡಲಿ “ ಈ ಸಾಲುಗಳು “ಮೌನ” ಕವಿತೆಯಲ್ಲಿ ಮಿಂದೆಳುವಾಗ ವಿರಹದ ಆಳ ಅನುಭವಕ್ಕೆ ಬರುತ್ತದೆ.” ನಿನ್ನ ದನಿ ಕೇಳದ ಭೂಮಿಗೆ ಆಕಳಿಕೆಯ ಸಮಯ” ಹೀಗೆ ವಿರಹದ ವಾರ್ತೆ ಎದೆಯೊಳಗೆ ಆರಿದ ಕೆಂಡದಲಿ ಹಸಿ ಜೋಳದ ತೆನೆಗಳನಿಟ್ಟು ಬಿಸಿ ಜೋಳದ ತೆನೆಯ ತಿನ್ನಲಾಗದ ನಿರಾಶೆಯಂತೆ ವಿರಹ ಹಾದುಹೋಗುತ್ತದೆ. ಕವನ ಸಂಕಲನದ ಪುಟಗಳಿಗೆ ಮೈಗಂಟಿಕೊಂಡ ರಾಶಿರಾಶಿ ಹನಿಗಳು ಓದುಗನ ಎದೆಯಮೇಲೆ ಇಬ್ಬನಿಯಂತೆ ಭಾಸವಾಗುತ್ತವೆ. ಅವು ಪದಕ್ಕೆ ಪದ ಸೇರಿ ಎದೆ ತಾಕಿಸಿ ಮೆಲ್ಲಗೆ ಮಾಯವಾದರೂ ಮತ್ತೆ ಬೇಕೆನಿಸುವಷ್ಟು ಸಂಜೆಯ ಕಾಂದಾ ಬಜಿಗಳಂತೆ ಅನಿಸುವವು. “ಬಯಲ ಗಾಳಿಮನೆ-ಮನಗಳ ಸುಖ-ದುಃಖ ಮಾತಾಡಿಸಿ ಹೋಯಿತು” ಯಾರದೋ ಮನೆವಾರ್ತೆಗೆ ಸಾಕ್ಷಿಯಾಗುವ ಗಾಳಿ ಕವಿಯೊಳಗೆ ಸಜೀವ ಸಹೃದಯ ವ್ಯಕ್ತಿಯಂತೆ ಭಾಸವಾಗುವ ಪರಿ ಅದ್ಭುತವಾದದ್ದು. ಒಂದು ತುಂಟತನ, ಅವ್ಯಕ್ತ ಭಾವ, ಸೂಕ್ಷ್ಮತೆಯ ಅನಾವರಣಗಳ ಅಭಿವ್ಯಕ್ತತೆಯನ್ನು ಕ್ಷಣದಲ್ಲೇ ಮೈಮನಕ್ಕೆ ಹಾಯಿಸಿ ನಿರಾಳವಾಗುವ ನಾಗರಾಜರವರ ಹನಿಗಳು ಮೋಡಿ ಮಾಡುವಂಥವುಗಳಾಗಿವೆ. “ಚಂದ್ರ ಮೈತುಂಬಿ ಬಳುಕಿದ ನಿನ್ನ ನೆನಪಾಯಿತು” ” ಬಣ್ಣದ ಸೀರೆ ತೊಟ್ಟು ಮಧುಮಗಳಂತೆ ಕಾದದ್ದೇ ಆತು ವಿರಹ ವಿರಹಕ್ಕೆ ಪ್ರೇಮ ಬರೆಯುವುದುಂಟೇ? “ ಪ್ರೇಮದ ಫಲಿತಾಂಶಗಳಲ್ಲಿ ವಿರಹವು ಒಂದು ಭಾಗ. ಕೆಲವೊಮ್ಮೆ ಅದು ಸಂಪೂರ್ಣವಾಗುವುದೂ ಕೂಡ ಇದೆ. ಆದರೆ ಇಂತಹದೇ ವಿರಹಗಳ ಒಳಗೆ ಮತ್ತೆ ಪ್ರೇಮ ವಾಗಬೇಕೆಂದು ಕಾಯುವುದು ಹೊಸತನ. ಹೀಗೆ ‘ವಿರಹಿ ದಂಡೆ’ ಕವನ ಸಂಕಲನದುದ್ದಕ್ಕೂ ಪ್ರಕೃತಿ, ಪ್ರೇಮ, ವಿರಹ, ಕನಸು, ನಿರೀಕ್ಷೆ , ಆಸೆ-ಆಕಾಂಕ್ಷೆ , ಅಮಲು, ತುಮುಲ, ಬಲ,ಸಕಲಗಳನ್ನು ತನ್ನದಾಗಿಸಿಕೊಂಡು ವಿಶೇಷ ಪದಪುಂಜದಲಿ ಅವುಗಳನ್ನು ಅಚ್ಚಾಗಿಸಿ ತನ್ನೆದೆಯ ಒಳಗೆ ವಿಶೇಷ ಇತಿಹಾಸವನ್ನೇ ಸೃಷ್ಟಿ ಮಾಡಿಕೊಂಡು ಜಾಗೃತವಾದ ಸಾಹಿತ್ಯ ಆಸಕ್ತಿಯನ್ನು ಬೆಳೆಕಾಗಿಸಬೇಕೆಂಬ ಕವಿಯ ಪ್ರಯತ್ನ ಸಫಲವಾಗಿದೆ. ತೀರಾ ಗಂಭೀರ ಶೈಲಿಯಲ್ಲಿ ಓದಿದಾಗ ಕವಿತೆಗಳು ಮುಖ ಊದಿಸಿಕೊಂಡು ಸಿಟ್ಟುಗೊಳ್ಳುತ್ತವೆ. ತೀರಾ ಒಳಗಣ್ಣಿನಿಂದ ಬಾಲ್ಯ, ಹರೆಯಗಳ ತುಂಟಾಟಗಳಿಗೆ ಅವಕಾಶವಿತ್ತು ಕವಿತೆಗಳನ್ನು ಆಸ್ವಾದಿಸುವಾಗ ಹೊಸ ತರದ ಪ್ರೇಮ, ವಿರಹ, ಪ್ರಣಯ ಇತ್ಯಾದಿಗಳ ಹಿತವಾದ ಪರಿಧಿಯೊಂದು ಮನಸ್ಸಿನ ಪರದೆ ಸರಿಸಿ ನಸುನಗುತ್ತದೆ. ಒಟ್ಟಾರೆಯಾಗಿ ಕಾವ್ಯ ಪ್ರಪಂಚಕ್ಕೆ ವಿರಹವನ್ನೂ ಸಲಿಗೆಯಾಗಿ ಒಲವಾಗಿ ಉಣಬಡಿಸುವ ಕವಿಯ ಪ್ರಯತ್ನ ಅದ್ಬುತವಾದಂತದ್ದು. ******* ಮೋಹನ್ ಗೌಡ ಹೆಗ್ರೆ

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ವಿಮರ್ಶೆ

ದೇವರದೇನು ದೊಡ್ಡಸ್ತಿಕೆ ಬಿಡು ನನ್ನ ಗಂಡನ‌ ಮುಂದ (ಆನಂದ ಕಂದರ ಪದ್ಯವೊಂದರ ಅನ್ವಯಿಕ ವಿಮರ್ಶೆ) ನಲ್ವಾಡುಗಳು ಆನಂದ ಕಂದರ(ಬೆಟಗೇರಿ ಕೃಷ್ಣಶರ್ಮರ) ಕವಿತಾ ಸಂಕಲನ. ಹೊಸಗನ್ನಡದ ಶ್ರೇಷ್ಠ ಸಂಕಲನಗಳಲ್ಲೊಂದು.ಇ ದರಲ್ಲಿ‌ ಇಪ್ಪತ್ತೊಂದು ಗೀತಗಳಿವೆ.ಇವುಗಳನ್ನು ಜನಪದ ಪ್ರೀತಿಗೀತಗಳು ಎಂದು ಅವರೇ ಕರೆದಿದ್ದಾರೆ.ಹೆಸರೇ ಹೇಳುವಂತೆ ಸಂಕಲನದ ತುಂಬ ಇರುವದು ಹಳ್ಳಿಗರ ಪ್ರೀತಿ‌ಲೋಕವೇ.ಜಾನಪದ ಮುಗ್ಧ ಗಂಡು ಹೆಣ್ಣುಗಳ ಸಹಜ ಪ್ರೀತಿ,ಅವರ ದಾಂಪತ್ಯ ಅಲ್ಲಿನ ಸಹಜ ಸುಂದರ ಲೋಕ ಈ ಕವಿತೆಗಳ ವಸ್ತು.ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೊಳಗಾಗುವ ಚಿತ್ರದಿಂದ ಹಿಡಿದು ಅವರ ಮದುವೆ, ಸುಂದರ ದಾಂಪತ್ಯ, ಗಂಡನನ್ನು ಬಿಟ್ಟು ತವರಿಗೆ ಬಂದ ಹೆಣ್ಣುಮಗಳ ವಿರಹ,ಗಂಡನ‌ ಪ್ರೀತಿ‌, ಇನ್ನಿತರ ಹೆಂಗಳೆಯರ ಗಂಡ ಬೆನ್ನು ಹತ್ತಿದಾಗ ಹೆಣ್ಣುಮಗಳು ಪಡುವ ನೋವು,ಹಳ್ಳಿಯ ಹಬ್ಬ ಜಾತ್ರೆಗಳ ಚಿತ್ರ,ತಮ್ಮ ಊರನ್ನು ಜನಪದ ಹೆಣ್ಣುಮಗಳು ಚಿತ್ರಿಸುವ ವೈಭವ ಹೀಗೆ ಅಪ್ಪಟ ಜಾನಪದಿಯ ಲೋಕವೊಂದನ್ನು ಕಟ್ಟಿಕೊಡುವ ಈ ಸಂಕಲನ ಕನ್ನಡದ ಒಂದು ಅಪರೂಪದ ಸಂಕಲನವಾಗಿದೆ.ಈ ಸಂಕಲನದೊಳಗಿನ ಒಂದು‌ಪದ್ಯ ‘ದೇವರ ದೇವರು ‘ ಎಂಬುದು. ದೇವರ ದೇವರು ಎಂದರೆ ದೇವರಿಗೇ ದೇವರು ಎಂದರ್ಥ. ಯಾವುದೇ ಗರತಿ ತನ್ನ ಗಂಡ ತನ್ನ‌ ಪ್ರೀತಿಯನ್ನು ಇನ್ನೊಂದು ಹೆಣ್ಣಿಗೆ ಹಂಚುವದನ್ನು ಸಹಿಸಲಾರಳು.ಗಂಡನ‌ ಅಖಂಡ ಪ್ರೀತಿಯ ಮುಂದೆ ಲೋಕದ ಯಾವ ಸಿರಿವಂತಿಕೆಯೂ ದೊಡ್ಡದಲ್ಲ.ಬಹುಶಃ ‘ನಿನ್ನ ಗಂಡ ಅಲ್ಲೊಬ್ಬಳ ಕೂಡ ನಗತಿದ್ದ ‘ ಎಂಬ ಹಿರಿಯಳೊಬ್ಬಳ ಮಾತಿಗೆ ನಕ್ಕರೆ ನಗಲೆವ್ವ ನಗಿ‌ಮುಖದ ಕ್ಯಾದಿಗಿ‌ನಾ ಮುಡಿದ ಹೂವು ಅವಳೊಂದುಗಳಿಗಿ ಮುಡಿಯಲಿ ಎಂದಿರುವ ಮಾತು ಗರತಿಯೊಬ್ಬಳ‌ ಮಾತಾಗಿರದೆ ಯಾರೋ ಪುರುಷರೇ ಬರೆದು ಸೇರಿಸಿದ ಪದ್ಯ ವಾಗಿರಬೇಕು. ಏಕೆಂದರೆ ಮದುವೆಯಾದ ಯಾವ ಹೆಣ್ಣು ತನ್ನ ಗಂಡನ ಪ್ರೇಮ ಇನ್ನೊಂದು‌ ಹಂಚಿಕೆಯಾಗುವದನ್ನು ಸಹಿಸಲಾರಳು. ದೇವರ ದೇವರು ಕವಿತೆ ಹೀಗೆ ಆರಂಭವಾಗುತ್ತದೆ. ದೇವರದೆಂತಾ ದೊಡ್ಡಸ್ತಿಕೆ ಬಿಡು‌ನನ್ನ ಗಂಡನ ಮ್ಯಾಲನನ್ನ ಹೊರತು ಇನ್ನೊಂದು ಹೆಣ್ಣ ಮ್ಯಾಲಿಲ್ಲ ಅವಗ ಖ್ಯಾಲ ಹೀಗೆ ತನ್ನಗಂಡನೇ ಶ್ರೇಷ್ಠ ಎನ್ನುವ ಹೆಣ್ಷುಮಗಳು ಆತ ಏಕೆ ಶ್ರೇಷ್ಠ ಎನ್ನುವದನ್ನು ಮುಂದಿನ ಪದ್ಯ ಭಾಗದಲ್ಕಿ ವಿವರಿಸುವದು ಬಹು ಸುಂದರವಾಗಿದೆ. ಬ್ರಹ್ಮ‌ ನಮ್ಮ ಪರಂಪರೆಯ ಕಥೆಗಳ ಪ್ರಕಾರ ಲೋಕದ ಸೃಷ್ಟಿಕರ್ತ.ಆದರೆ ಆತನಿಗೆ ಸರಸ್ವತಿಯೊಬ್ಬಳೇ ಹೆಂಡತಿಯಲ್ಲ,ಮೂವರೊಂದಿಗೆ ತನ್ನ ಪ್ರೀತಿಯನ್ನು ಆತ ಹಂಚಿಕೊಂಡವನೆಂದು ಜನಪದ ಗರತಿಗೆ ಕೋಪ.ಅಂತೆಯೇ ಆಕೆ ಬ್ರಹ್ಮದೇವನು ಬಹಳ ಹಿರಿಯನಂತಬುದ್ದಿ ಐತೆ ಅವಗ?ಮೂರುಜನಾ ಹೆಂಡರು ಬೇಕಾತ್ಯಾಕಪ್ರೀತಿಯ ಬಗಿ ಹ್ಯಾಂಗ? ಮೂರು‌ ಜನರೊಂದಿಗೆ ಹಂಚಿಕೊಂಡ ಪ್ರೀತಿ ಪ್ರೀತಿಯೇ? ಇದು ಅವಳ ಪ್ರಶ್ನೆ.ಹೃದಯದಲ್ಲಿ ಜಾಗ ಇರುವದೇ ಒಬ್ಬಳಿಗೆ. ಹೆಚ್ಚು ಜನ ಹೇಗೆ ನಿಂತಾರು? ಒಬ್ನಳು ಹೃದಯದಲ್ಲಿ ನೆಲೆಸಿದ ಮೇಲೆ ಇನ್ನಿಬ್ಬರು ನಿಟ್ಟುಸಿರು ಹಾಕುತ್ತಾ ಇರಲೇಬೇಕಲ್ಲವೆ? ತುಂಬ ವಾಸ್ತವಿಕ ಪ್ರಶ್ನೆ ಎತ್ತುವ ಗರತಿಯ ಪ್ರಶ್ನೆ ವೈಜ್ಞಾನಿಕವಾಗಿದೆ.ಒಂದೇ ಸಮಯಕ್ಕೆ ಇಬ್ಬಿಬ್ಬರಿಗೆ ಹೃದಯದಲ್ಲಿ ಜಾಗ ಕೊಡುವ ಗಂಡು ಇರಬಹುದೇ? ರಾಮ ರಾಮನಂತ ಹೊಗಳೆ ಹೊಗಳತಾರರಾಮನೇನು ಸುದ್ದಯಾರಮಾತ ಕೇಳಿ ಪ್ರೀತಿಯ ಸತಿಯನಅಡವಿಗೆ ಅಟ್ಟಿದ್ದ ವಾವ್ ! ಗರತಿಯ ಪ್ರಶ್ನೆಗೆ ವಾಲ್ಮಿಕಿಯೂ ನಿರುತ್ತರ! ಹೌದು, ತುಂಬು ಬಸಿರಿ ಸೀತಯನ್ನು ಕಾಡಿಗೆ ಕಳಿಸಿದ್ದು ಎಂಥ ಮಾನವೀಯ ನಡೆ? .ಅದಕ್ಜೆ ಲಕ್ಷ್ಮೀಶ ಕವಿ ” ಕರುಣಾಳು ರಾಘವ ನಲಿ ತಪ್ಪಿಲ್ಲ” ಎಂದು ವ್ಯಂಗ್ಯವಾಡಿದ್ದು! ಆದರೆ ಸೀತೆ ಬಿಸಿಲು ಬಿಸಿಲು ಎಂದು ಕಾಡಲಿ ಬಳಲುವಾಗ ವಾಲ್ಮೀಕಿ ತಂದೆಯಾಗಿ ಕಾಯ್ದಿದ್ದನ್ನು ಸ್ಮರಿಸುತ್ತಾಳೆ. ಕೃಷ್ಣನಂತೂ ಹದಿನಾರು ಸಾವಿರ ಹೆಂಡಿರ ! ಅವನ ಬಗೆಗಂತೂ ಗರತಿಗೆ ಗೌರವ ವಿರಲು ಸಾಧ್ಯವಿಲ್ಲ. ಅಂತೆಯೇ ಕೃಷ್ಣನನ್ನು ಖೊಟ್ಟಿ ಎಂತಲೇ ಆರಂಬಿಸುತ್ತಾಳೆ. ಕೃಷ್ಣನದಂತೂ ಖೊಟ್ಟಿತನವು ನೋಡೆಷ್ಟು ಹೆಂಡರವಗ?ಹೊಟ್ಟಿ ಉರಿದ ನಾರಿಯರು ಸುಮ್ಮನ$ಬಿಟ್ಟಾರೆನು ಹಾಂಗ? ಅವರ ಹೊಟ್ಟೆಯುರಿಯೇ ಅವನ ಸುಖವನ್ನು ಸುಟ್ಟಿರಬೇಕು ಎಂದವಳ ಊಹೆ. ಶಿವನದಂತೂ ಲೋಕವೇ ಬಲ್ಲ ಕಥೆ.ತಲಿ ಮ್ಯಾಲೊ ಬ್ಬಳು,ತೊಡಿ‌ಮ್ಯಾಲೊಬ್ಬಳು! ಗೌರಿ ಎಂಥ ಚಲುವಿ! ಆದರೂ ಗಂಗೆಯನ್ನು ಶಿವ ತಂದಿಟ್ಟುಕೊಂಡದ್ದು ಗರತಿಗೆ ಅಕ್ಷಮ್ಯ ಅಪರಾಧ .ಅದಕ್ಜೇ ಆಕೆ- ಹೇಳಬ್ಯಾಡ ಶಿವನೇಳಿಗಿ ಗೌರಿಯಗೋಳು ಗೋಳಿಸಿ ಬಿಟ್ಟಾಹೇಳದೆ ಕೇಳದೇ ತನ್ಬ ಜಡಿಯೊಳಗಗಂಗಿಯ ತಂದಿಟ್ಟಾ ಗೌರಿಯ ದುರ್ದೈವಕ್ಕೆ ಮರುಗುವ ಜನಪದ ಗರತಿ ಅಂತಹ ಹೆಣ್ಣಿಗೂ ಸವತಿಯನ್ನು ತಂದ ಶಿವನನ್ನು ಜಾಲಾಡಿಸುತ್ತಾಳೆ..ಇನ್ನು ಇಂದ್ರ ನಂತೂ ದೇವಲೋಕದ ಸುಂದರಿಯರನೆಕರನ್ನು ಉಪಪತ್ನಿಯಾಗಿಸಿಕೊಂಡಿದ್ದ.ಆತನದು ಗರತಿಯ ಮಾತಿನಲ್ಲಿ “ಸೂಳೆಯರ ಮ್ಯಾಳ” ! ದೇವೆಂದ್ರನ‌ ಲೋಕಕ್ಕೆ ಗರತಿ ಕೊಟ್ಟ ಹೆಸರು! ಚಂದ್ರನ ಹಾದರದಾಟಕ್ಜೆ ಅವನ ಹೆಂಡತಿ ನಿತ್ಯ ಕಣ್ಣಿರಿಡತಿರಬೇಕು !ಎನ್ನುತ್ತಾಳೆ. ಇವರೆಲ್ಲ ದೇವರುಗಳು! ಪಾಪ ಅವರ ಹೆಂಡತಿಉರ ಬವಣೆ ಎಂತಹದು ! ಅವರಿಗಿಂತ ತಾನೇ ಪರಮ ಸುಖಿ! ಏಕೆಂದರೆ ತನ್ನ‌ಗಂಡ ಅವರ ಮುಂದೆ ಅಪ್ಪಟ ಚಿನ್ನ. ಗರತಿಯ ಮಾತು ಕೇಳಿ. ದೇವರಂತ ದೇವರ ಹೆಂಡರಿಗೂಯಾವ ಬವಣೆ ಗೆಳತೀಅವರಿಗೆಲ್ಲ ದೊರೆತಿಲ್ಲ ನನ್ಹಾಂಗಪತಿಯ ಪೂರ್ಣ ಪ್ರೀತಿ! ಆದ್ದರಿಂದಲೇ ಆಕೆಯ ಗಂಡ ದೇವರಿಗೂ‌ ಮಿಗಿಲು! ನನ್ನ ರಾಯ ಸರಿ ದೇವರ ದೇವರುನಾನು ಅವನ ಗರತಿ –ನಮ್ಮ ಬಾಳಿನಲಿ ಸ್ವರ್ಗವನ್ನು ಇಳಿಸೇತಿಅವನ ಪ್ರೀತಿ! ದೇವರಂತಹ ರಾಯನಿಗೇ ತಾನು‌ಗರತಿಯಂಬುದು ಅವಳ ಹೆಮ್ಮೆ! ಆಕೆ ಹೆಮ್ನೆ ಪಡುವದರಲ್ಲೂ ತಪ್ಪಿಲ್ಲ. ಅಂತೆಯೇ ಆಕೆ ಪ್ರಶ್ನಿಸುವದು’ ದೇವರದೆಂತಹ ದೊಡಗಡಸ್ತಿಕೆ ಬಿಡು ನನ್ನ ಗಂಡನ ಮುಂದ’ ಎಂದು! ಇಂತಹ ಅಖಂಡ ಪ್ರೀತಿಯನ್ನು ತಾವಿಬ್ಬರೇ ಹಂಚುಣ್ಣುವ ದಂಪತಿ ಜೋಡಿಗಳ ಸಂತತಿ ಸಾವಿರವಾಗಲೆಂಬುದು ಅವಳ. ಆಶಯ! ಹೆಣ್ಣಿನ ನಲಿವಿನ‌ ಜೊತೆಜೊತೆಗೆ ಗಂಡಂದಿರ ಪ್ರೀತಿಯನ್ನು ಮತ್ತೊಂದು ಹೆಣ್ಣಿನೊಂದಿಗೆ ಹಂಚಿಕೊಳ್ಳಬೇಕಾಗಿ ಬಂದ ದುರ್ದೈವಿ ಹೆಣ್ಣುಮಕ್ಕಳ ನೋವನ್ನು ಪದ್ಯ ಸೂಕ್ಷ್ಮವಾಗಿ ವಿವರಿಸಿದೆ. ಮುಂಜಾನೆ ಪ್ರೀತಿಸಿ,ಸಂಜೆ ಮದುವೆಯಾಗಿ,ಮರುದಿನ ಡೈವೊರ್ಸಗೆ ನಿಲ್ಲುವ ,ಇಂದಿನ ಅತ್ಯಾಧುನಿಕ ಮನಸುಗಳು ಇಂಥಹ ಕವಿತೆಯನ್ನು ಓದಬೇಕು.ನಲ್ವಾಡುಗಳಲ್ಲೇ ಇರುವ ಗೌಡರ ಸೊಸೆ ಎಂಬ‌ ಪದ್ಯದಲ್ಲಿ ಹೆಣ್ಣಿಗೆ ಗಂಡನ‌ ಪ್ರೀತಿಯೇ ಹಂಚಿಕೆಯಾದ ಮೇಲೆ ಯಾವ ಸಿರಿವಂತಿಕೆ ಇದ್ದರೇನು ? ಎಂದು ಪ್ರಶ್ನಿಸುವ ಸಾಲುಗಳಿವೆ.ಹೆಣ್ಣಿಗೆಗಂಡಿನ ,ಗಂಡಿಗೆ ಹೆಣ್ಣಿನ ಸಂಪೂರ್ಣ ಪ್ರೀತಿಯೊಂದೇ ಆಸರೆ ಎಂದು ಸಾರುವ ಇಂತಹ ಅಪರೂಪದ ಪದ್ಯ ಮತ್ತೆ ಮತ್ತೆ ಓದಬೇಕಲ್ಲವೇ? ********** ಡಾ ವೈ.ಎಂ.ಯಾಕೊಳ್ಳಿ

ವಿಮರ್ಶೆ Read Post »

ಕಾವ್ಯಯಾನ

ಕಾವ್ಯಯಾನ

ಕಣ್ಣೀರು ಜಗದೀಶ್ ಬನವಾಸಿ ಕಣ್ಣೀರು ಬರುವಷ್ಟು ಬರಲಿಎದೆಯ ನೋವು ತೊಳೆದುನೆನಪುಗಳ ಪುಟ ಓದ್ದೆಯಾಗುವಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳು ಬರುವಷ್ಟು ಅತ್ತು ಬಿಡುನೆನಪುಗಳು ನೇಪಥ್ಯಕ್ಕೆ ಮರಳಿಮರೆಯಾದ ಕನಸೊಂದು ರೆಕ್ಕೆಬಿಚ್ಚದಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳುವ ಹರಿವಿಗೆ ತಡೆಯಾಗುವಗೊಡ್ಡು ನೆಪಗಳ ಒಡ್ಡದಿರುಒಡೆದ ಕಟ್ಟೆ ಬರಿದಾಗಲಿ ಬಿಡುಮತ್ತೆಂದು ಅವು ತಿರುಗಿ ಬಾರದಂತೆ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಂಕೋಲೆ ಸಾಯಬಣ್ಣ ಮಾದರ ಬಿಟ್ಟು ಬಿಡಿಬಿಟ್ಟು ಬಿಡಿಕೈ ಕಟ್ಟಿ ನೆಲಕ್ಕೆ ಹಾಕಿಮಂಡಿಯೂರಿ ಕುಳಿತಿರುವರೆಉಸಿರಾಡಲುಗುತ್ತಿಲ್ಲ ಬಿಟ್ಟು ಬಿಡಿ ನಿಲುತ್ತಿದೆ ವರ್ಣಕ್ಕಾಗಿ ಉಸಿರು ಅಲ್ಲಿಜಾತಿ ಧರ್ಮಕ್ಕಾಗಿ ನಿಲ್ಲುತ್ತಿದೆ ಇಲ್ಲಿ ಮನುಷ್ಯರು ನಾವುನೀವು ಕ್ರೂರಿ ಮೃಗಗಳೆ? ಚರ್ಮದೊಳಗೆ ರಕ್ತ ಉಂಟುಅದರಲ್ಲಿ ವರ್ಣ ಜಾತಿ ಉಂಟೆ?ಬೇರೆ ಬೀಜಕ್ಕೆ ಹುಟ್ಟಿದ ಮರ ನೀವುತಯಾರಾಗಿದೆ ಕಾಲವೇ ಕಡಿಯಲು ಮಸಣದಲ್ಲಿ ಮಾನವೀಯತೆ ಹೂತ್ತುಮನುಷ್ಯತ್ವವೆ ಮೂಲೆಗೊತ್ತಿಜಾತಿ ಎಂಬ ಶಿಖರ ಏರಿವರ್ಣದ ಗಿರಿ ಮುಟ್ಟಿಅರ್ಚುವ ಮೂರ್ಖರೇಯಾವ ಜೀವಿ ನೀವು ನೀರಿಗಾಗಿ ಕೆರೆ ಮುಟ್ಟಿದ ಹೆಣ್ಣನ್ನುಕಟ್ಟಿ ಬಡಿದು ಕೇಕೆ ಹಾಕಿದವರು ನೀವುನೀರು ಬೆಳಕು ಗಾಳಿ ಕೇಳಿದೀಯಾ ಜಾತಿಬಣಕ್ಕೆ ಬೇದ ಮೊದಲೇ ಇಲ್ಲ ಧರ್ಮದ ಹೆಂಡ ಕುಡಿದುಜಾತಿ ಮತ್ತೆರಿಸಿಕೊಂಡುಎಷ್ಟು ದಿನ ಕುಣಿಯುವಿರಿದೇವರೇ ಹೆಣವಾಗಿ ಹೆಗಲೇರಿರುವಾಗಎಷ್ಟು ದಿನ ಅಡಗಿವಿರಿ ಬಂಕರಿನಲ್ಲಿ ಎಷ್ಟಂತ ಆಡುವಿರಿ ನಲಿ-ಕಲಿ ಆಟಸನಿಹದಲ್ಲಿದೆ ಅಂತ್ಯಮನುಷ್ಯರಾಗಲು ಮರೆಯದಿರಿಇಲ್ಲವೆ ಭೂಮಿಯಿಂದ ನಿರ್ಗಮೀಸಲು ಸಿದ್ದರಾಗಿ !!

ಕಾವ್ಯಯಾನ Read Post »

ಇತರೆ

ಹಾಸ್ಯ

ಮನೆಯೇ ಮಂತ್ರಾಲಯ? ಜ್ಯೋತಿ ಡಿ .ಬೊಮ್ಮಾ ಮತ್ತದೆ ಸಂಜೆ ಅದೇ ಬೇಸರದಲ್ಲಿ ಎಕಾಂಗಿಯಾಗಿ ಕುಳಿತಿದ್ದಾಗ ಬಾಜು ಮನಿ ಅಕ್ಕೋರು ಬಂದರು ,ಬರ್ರಿ ಬರ್ರಿ ಎಂದು ಸ್ವಾಗತಿಸಿ ಪಕ್ದಲ್ಲೆ ಇದ್ದ ಖುರ್ಚಿ ಕಡೆಗೆ ಕೈ ತೊರಿಸಿದೆ ಕುಳಿತುಕೊಳ್ಳಲು.ಕುರ್ಚಿ ಸರಕ್ಕನೆ ನನ್ನಿಂದ ನಾಲ್ಕು ಮಾರು ದೂರ ಎಳೆದುಕೊಂಡು ಕುಳಿತರು .ಮುಖಕ್ಕೆ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.ನಿಮಗ ಗೊತ್ತದ ಇಲ್ಲ ,ಇಲ್ಲೆ ಬಾಜು ಕಾಲೊನಿದಾಗ ಯಾರಿಗೋ ಕರೊನಾ ಬಂದದಂತರ್ರಿ ,ಅವರ ಮನ್ಯಾಗಿನವರಿಗೆಲ್ಲ ಎಳಕೊಂಡು ಹೊಗ್ಯಾರಂತ ,ಮುಖಕ್ಕೆ ಹಾಕಿದ ಮಾಸ್ಕ ತೆಗೆದು ಅಲ್ಲೆ ಪಕ್ಕದಲ್ಲಿ ಉಗುಳಿ ಮತ್ತೆ ಮಾಸ್ಕ ಹಾಕಿಕೊಂಡರು.ಅಲ್ರಿ ಅಕ್ಕೊರು ಮೊದಲ ನಾವು ಮತ್ತ ನಮ್ಮನಿ ಅಕ್ಕಪಕ್ಕ ಸ್ವಚ್ಚ ಇಟಗೊಬೇಕು ,ಹಾಗೆಲ್ಲ ಅಲ್ಲಿ ಇಲ್ಲಿ ಉಗಳಬಾರದ್ರಿ ಎಂದು ತಿಳಿಸಲು ಪ್ರಯತ್ನಿಸಿದೆ.ಅದಕ್ಕವರು ಛಲೊ ಹೆಳತ್ರಿ..ಉಗಳ ಬಂದ್ರ ಬಾಯಾಗ ಇಟಗೊಂಡ ಕೂಡಬೇಕಾ.ಉಗಳೆನು ಹೇಳಿ ಕೇಳಿ ಬರತದೇನು ಎಂದು ಮತ್ತೊಮ್ಮೆ ತಪ್ಪಕ್ಕನೆ ಉಗುಳಿ ಮತ್ತ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.ಅಲ್ರಿ ಈ ಸರ್ಕಾರದೊರು ಎಟೊಂದು ಕಂಪಿಸ್ ಮಾಡಲತಾರಿ ಒಮ್ಮಿ ಎಲ್ಲಾ ಚಾಲೂ ಮಾಡತಿವಿ ಅಂತಾರ ,ಒಮ್ಮಿಇನ್ನೂ ಸ್ವಲ್ಪ ದಿನ ಮುಂದೂಡತೀವಿ ಅಂತಾರ,ಸಾಲಿ ಸುರು ಮಾಡತೀವಿ ಅಂತಾರ ,ಒಮ್ಮೆ ಇನ್ನೂ ಎರಡು ತಿಂಗಳ ತೆರೆಲ್ಲ ಅಂತಾರ ,ಹೊರಗ ಬರಬ್ಯಾಡರ್ರಿ ಅಂತಾರ ಮತ್ತ ಕರೋನಾ ಜತಿಗೆ ಬದುಕೊದು ಕಲಿರಿ ಅಂತಾರ ನನಗರ ಟೊಟಲ್ ಕಂಪೂಸ್ ಆಗಲತದ ನೋಡ್ರಿ..ಯಾವದು ಕೇಳಬೇಕು ಯಾರದು ಕೇಳಬೇಕು ಒಂದು ತಿಳಿವಲ್ದು ಎಂದರು.ಯಾಕ ಅಷ್ಟು ಟೆನ್ಷನ್ ಮಾಡಕೋತಿರಿ ಈಗ ಯಾರದ ಎನ ನಿಂತದ ,ಮಾಡಲತಿವಿ ಉಣ್ಣಲತಿವಿ ,ಆವಾಗೀಟು ಹೊರಗ ಓಡಾಡತಿದ್ವಿ ಈಗ ಅದೆಲ್ಲ ಕಟ್ ಆಗ್ಯಾದ, ಎನಿದ್ರೂ ನಮಗೇನು ಅಡುಗಿ ಮಾಡಾದೂ ತೊಳೆದು ತಪ್ಪತದೆನು ಅಂದೆ.ಐ,,,ಮೂರು ತಿಂಗಳಾತು ಒಂದು ಸೀರಿ ತಗೊಂಡಿಲ್ಲ ,ಒಂದು ಬೌಲ್ವ್ಸಹೊಲಿಸಿಲ್ಲ ,ಬ್ಯೂಟಿ ಪಾರ್ಲರ ಮಾರಿ ನೊಡಲಾರದಕ್ಕ ನನ್ನ ಮಾರಿ ನೊಡಕೊಳ್ಳಲಾರದಂಗ ಆಗೇದ. ಈ ಕರೋನಾ ಎನಾರ ನನ್ನ ಕೈಯಾಗ ಸಿಕ್ಕರ ನಾ ಸುಮ್ಮನ ಬಿಡಾಕಿ ಅಲ್ಲ ನೋಡ್ರಿ , ಎಂದು ರಾಂಗಾದರು .ಅಯ್ಯೊ ಅಕ್ಕೊರೆ ,ಸಿಟ್ಟಿಲೆ ಅದಕ್ಕ ಹಿಡಿಲಾಕ ಹೊಗಿರಿ ಮತ್ತ ,, ನಿಮಗ ಹಿಡದು ಕ್ವಾರಂಟೈನ್ ಮಾಡತಾರ ಮತ್ತ ಎಂದೆ.ಮಾಡ್ಲಿ ಬಿಡ್ರಿ..ಅಲ್ಲೆನ್ ತಕಲಿಫ ಇಲ್ಲ.ಪೇಪರನಾಗ ನೋಡಿರಿಲ್ಲ..ಊಟ ಬಿಸಿಲೇರಿ ನೀರು ಮೊಟ್ಟೆ ಡ್ರೈಪ್ರೂಟ್ಸ ಎಲ್ಲ ಕೊಡತಾರಂತ ಟೈಮ ಟೈಮಿಗೆ , ಹೇಗೋ ಈ ಬ್ಯಾಸಗಿ ಮನ್ಯಾಗೆ ಕಳದೀವಿ ,ಒಂದು ಟೂರ್ ಇಲ್ಲ , ಪಿಕ್ ನಿಕ್ ಇಲ್ಲ ,ಸುಮ್ಮ ಅಲ್ಲೆರ ಹೋಗಿ ಇದ್ದರ ಒಂದಷ್ಟೂ ದಿನ ಔಟಿಂಗ ಆದಂಗ ಆಗತದ ,,ಈ ಅಡಗಿ ಮನಿ ಕಾಟ ತಪ್ಪತದ ,ಹೌದಿಲ್ಲ ಎಂದರು . ಮಾತಾಡಿ ಗಂಟಲು ಕರ ಕರ ಎಂದಿಬೇಕು ,ಮಾಸ್ಕ ತೆಗೆದು ಮತ್ತೊಮ್ಮೆ ಉಗುಳಿ ಬಂದರು.ಹಾಗಲ್ಲರಿ ಅಕ್ಕೊರೆ , ಕ್ವಾರಂಟೈನ್ ದಾಗ ನಮ್ಮ ಮನಿ ಮಂದಿಗೆಲ್ಲ ಒಂದೆ ಕಡೆ ಇಡತಾರೊ ಬೇರೆ ಬೇರೆ ಕಡಿ ಇಡತಾರಿ ಎಂದು ಕೇಳಿದೆ.ಬ್ಯಾರೆನೆ ಇಡಲಿ ಬಿಡ್ರಿ ,ಯಾಕ ಇಷ್ಟು ದಿನ ಒಳಗೆ ಒಂದೆ ಕಡಿ ಉಳದು ಸಾಕಾಗಿಲ್ಲೆನು , ನನಗಂತೂ ಸಾಕಾಗೇದ ದೀನಾ ಅವೆ ಮಾರಿ ನೋಡಿ ಎಂದು ಬೇಜಾರಾದರು.ಮತ್ತೆ ಅಕ್ಕೊರೆ ,,ಪೇಪರನಾಗ ನೋಡ್ದೆ , ಅಲ್ಲಿ ಕ್ವಾರಂಟೈನದಾಗ ಇರೋರು ದಂಗೆ ಏಳಕಹತ್ಯಾರಂತ ,ಓಡಿಹೊಗತಿದಾರಂತ ಎಂದೆ. ಅಯ್‌..ಅವರೆಲ್ಲ ಗಂಡಮಕ್ಕಳೆರಿ,, ಅವರಿಗೆ ಗುಟಕ ಶರಿ ಸಿಗಲಾರದಕ್ಕ ಹಾಗ ಮಾಡಲತಿರಬೇಕು..ಹೆಣ್ಣು ಮಕ್ಕಳ ಯಾರಾರ ಮನಿಗ ಕಳಸ್ರಿ ಎಂದು ದಂಗೆ ಎದ್ದಿದು ಪೇಪರನಾಗ ಬಂದಂದ ಎನು ಎಂದರು. ಕ್ವಾರಂಟೈನ್ ಎಂದರೆ ಭಯಂಕರ ಭಯ ಪಟ್ಟುಕೊಂಡಿದ್ದ ನನಗೆ ಬಾಜು ಮನಿ ಅಕ್ಕೊರ ಮಾತು ಕೇಳಿ ಸ್ವಲ್ಪ ನಿರಾಳವಾಯಿತು.ಬರತಿನ್ರಿ ,ಜ್ವಾಳದ ಹಿಟ್ಟು ಮುಗದಾದ ,ಬೀಸಕೊಂಡು ಬರಬೇಕು , ಬಾಜು ಓಣ್ಯಾಗ ಕರೋನಾ ಬಂದೋರು ಯಾರ್ಯಾರು ಈ ರಸ್ತೆದಾಗ ಓಡ್ಯಾಡೋರೊ ಎನೊ ಎಂದು ರಸ್ತೆ ಮೇಲೆ ಮತ್ತೊಮ್ಮೆ ಉಗಿದು ಹೊದರು.ಅವರು ಹೋದ ಮೇಲೂ ಕ್ವಾರಂಟೈನ್ ಗಂಗುನಲ್ಲೆ ಇದ್ದ ನಾನು ಪತಿ ಮನೆಗೆ ಬಂದ ಮೇಲೆ ಕೇಳಿದೆ. ಅಲ್ಲಿ ಕ್ವಾರಂಟೈನದಾಗ ಇರೋರು ಭಾಳ ಆರಾಮ ಇರತಾರಂತರಿ..ಕೆಲಸ ಇಲ್ಲ ಬೊಗಸಿ ಇಲ್ಲ..ಎಂದೆ. ಹೌದಾ ,ಬೆಕಾರೆ ನಿಂಗೂ ಬಿಟ್ಟು ಬರತೆನಿ ನಡಿ.ಹೇಂಗೂ ಸರ್ಕಾರದ ಜೀಪು ರೆಡಿನೆ ಅದಾವ , ಎಂದಾಗ ದಿಗಿಲು ಬಿದ್ದು ತೆಪ್ಪಗಾದೆ , ಮನೆಯೆ ಮಂತ್ರಾಲಯ ಎಂದುಕೊಳ್ಳುತ್ತ. ********

ಹಾಸ್ಯ Read Post »

ಕಾವ್ಯಯಾನ

ಕಾವ್ಯಯಾನ

ಗೆ ರಾಮಸ್ವಾಮಿ ಡಿ.ಎಸ್. ನೀನು ನಡೆಸಿಕೊಡಬಹುದಾದ ಒಂದು ಮಾತುನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ.ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋವಿಶ್ವಾಸವೋ ಅಥವ ಹೇಳಲಾಗದ ಪ್ರೀತಿಯೋಆ ಉಳಿದು ಹೋದ ಮಾತನ್ನ ನೀನುಕಣ್ಣಲ್ಲಿ ಕಣ್ಣಿಟ್ಟು ಬೆರಳಿಗೆ ಬೆರಳ ಹೊಸೆದುಹಣೆಯ ಚುಂಬಿಸಿ ಹೇಳಿದ್ದೆಎಂದರೆ ಇಲ್ಲ, ಋಜುವಾತಿಗೆ ಸಾಕ್ಷಿ. ಆದರೆ ಇದ್ದಕ್ಕಿದ್ದಂತೆ ಹೀಗೆ ನನ್ನೊಂದಿಗೆ ಮಾತು ನಿಲ್ಲಿಸಿ,ಅವರಿವರ ಜೊತೆಗೆ ಮಾತಿನ ನಟನೆಯಾಡಿದರೆಮತ್ಯಾರದೋ ಪಟಕ್ಕೆ ಚಂದ ಎಂದು ಲೈಕಿಸಿದರೆನನ್ನ ಹೊಟ್ಟೆಯಲ್ಲೇನೂ ಕಿಚ್ಚು ಹೊತ್ತುವುದಿಲ್ಲಬದಲಿಗೆ ನಿನ್ನ ಸಂಕಟವ ಅಳೆಯಬಲ್ಲೆ.ಎಲ್ಲವನೂ ಮರೆತವರಂತೆ ಕೂಡಿದ್ದು, ಕಳೆದದ್ದುಕನಸ ಗುಣಿಸುತ್ತಲೇ ಕಡೆಗೆ ಬದುಕ ಭಾಗಿಸಿದ್ದುಭವದ ಸಂಬಂಧಗಳ ಬಿಡುಗಡೆಗೆ ಪ್ರಾರ್ಥಿಸಿದ್ದು. ಈ ಸಂಜೆ, ಹೊರಗೆ ಮಳೆಯ ಸೂಚನೆಒಳಗೆ ತಡೆಯಲಾರದಷ್ಟು ವಿಪರೀತ ಸೆಖೆ.ಜೋರಾಗಿ ಬಾಗಿಲು ಬಡಿದ ಸದ್ದು.ತೆರೆದರೆ ಹೊರಗೆ, ಯಾರೂ ಗೊತ್ತಾಗದ ಗಾಳಿಯಲೆ ಚಿಲಕ ಅಲ್ಲಾಡುತ್ತಿದೆ, ಮೆಟ್ಟಿಲಿಳಿದ ಅಸ್ಪಷ್ಟ ಸದ್ದುನೀನು ಈವರೆಗೂ ನಡೆಸಿ ಕೊಡದ ಮಾತೇ ಬಂದುಮತ್ತೆ ಬಂದ ದಾರಿಯಲೇ ಮರಳಿರಬೇಕು,ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತೆ. ಈ ಸರಿ ರಾತ್ರಿಯಲ್ಲಿ ಶುಭ್ರ ಆಕಾಶ ನೋಡುತ್ತತಾರಸಿಯಲ್ಲಿ ಅಂಗಾತ ಮಲಗಿ ನಕ್ಷತ್ರವೆಣಿಸುತ್ತಜೊತೆಗೇ ನಿನ್ನಲ್ಲೇ ಉಳಿದ ಮಾತ ನೆನೆಯುತ್ತಾಅವಕಾಶದಲ್ಲಿ ಎಷ್ಟೊಂದು ತಾರೆ ನೀಹಾರಿಕೆಗಳುಕ್ಷೀರ ಪಥದ ನಡುವೆ ಎಣಿಕೆಗೂ ಸಿಗದ ಲೋಕಗಳುಭ್ರಮೆ ವಿಭ್ರಮೆ ಸಂಕಟಗಳಿಗೆಲ್ಲ ಸಮಾಧಾನದ ಮಾತುಹೇಳುತ್ತಿವೆಯೇನೋ ಎಂಬಂತೆ ಸ್ಪೋಟಿಸುತ್ತಲೇಒಂದರ ಹಿಂದೊಂದು ಉರಿಯುತ್ತ ಬೀಳುತ್ತಲಿಹವು. ಈ ಎಲ್ಲ ಸಂಕೀರ್ಣ ಪ್ರತಿಮೆ ರೂಪಕಗಳ ನಡುವೆಬಿಟ್ಟೂ ಬಿಡದೆ ಕಾಡುತ್ತಿದೆ ನಿನ್ನ ಮಾತಿನ ನೆನಪುಧೋ ಎಂದು ಸುರಿಯದಿದ್ದರೂ ಹಿತ ಹನಿಯ ಸೇಕಒಡಲೊಳಗೇ ಉಳಿದು ಹೂತು ಹೋಗಬಾರದ ಮಾತುಮತ್ತೆ ಮತ್ತೆ ನಮ್ಮಿಬ್ಬರೊಳಗೇ ಗಿರಕಿ ಹೊಡೆಯುತ್ತಲೇಕಾಡುತ್ತಿದೆ ಅನವರತ ಸಂಭ್ರಮವ ಎಳೆದು ತಂದು.ಹೌದು, ಸಾವಿನ ನಂತರವಾದರೂ ಮತ್ತೆ ಕೂಡಬೇಕು! ********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಶಾಲೆಗಳ ಪುನರಾರಂಭ ಶಾಲೆಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಪಾಲಕರ, ಶಿಕ್ಷಕರ , ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ.ಜುಲೈ 1 ರಿಂದ 4 ರಿಂದ 7 ನೇ ತರಗತಿ, ಜುಲೈ 15 ರಿಂದ 1 ರಿಂದ 3 ಮತ್ತು 8 ರಿಂದ 10 ನೇ ತರಗತಿ, ಜುಲೈ 20 ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲನೇ ಮಾದರಿ ಮತ್ತು ತಾರೀಖುಗಳೆರಡೂ ಸಮಂಜಸವಾಗಿವೆಯೆಂಬುದು ನನ್ನ ಅಭಿಪ್ರಾಯ.ತರಗತಿಗಳನ್ನು ನಡೆಸಲು ಮೂರು ಮಾದರಿಗಳ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ. ಅಗತ್ಯವಾದ ಸುರಕ್ಷಿತ ಕ್ರಮಗಳೊಂದಿಗೆ ಎಂದಿನಂತೆ ತರಗÀತಿ ನಡೆಸುವುದು ಮೊದಲನೇ ಮಾದರಿ.ಇದು ವ್ಯವಹಾರಿಕ ಹಾಗೂ ಸೂಕ್ತ.ಪ್ರತಿದಿನ ಎರಡು ಪಾಳಿಗಳಲ್ಲಿ ಶಾಲೆಯನ್ನು ನಡೆಸುವುದು ಎರಡನೇ ಮಾದರಿ. ಅಂದರೆ ಕೆಲವು ತರಗತಿಗಳನ್ನು ಬೆಳಿಗ್ಗೆ 8 ರಿಂದ 12 ಮತ್ತು ಉಳಿದ ತರಗತಿಗಳನ್ನು ಮದ್ಯಾಹ್ನ 1 ರಿಂದ 5 ರವರೆಗೆ ನಡೆಸುವ ವಿಧಾನ. ಬಾಡಿಗೆ ವಾಹನಗಳು ವಿದ್ಯಾರ್ಥಿಗಳನ್ನು ತರಗತಿವಾರು ಕರೆದುಕೊಂಡು ಬರುವ ಪದ್ಧತಿ ಇಲ್ಲದಿರುವುದರಿಂದ ಹಾಗೂ ಒಂದೇ ವಾಹನದಲ್ಲಿ ಎಲ್ಲಾ ತರಗತಿಯ ಮಕ್ಕಳೂ ಪ್ರಯಾಣ ಸುವುದರಿಂದ ಮಕ್ಕಳ ಪ್ರಯಾಣ ವೆಚ್ಚ ಕಡಿಮೆ ಇರುತ್ತದೆ. ತರಗತಿವಾರು ವಿದ್ಯಾರ್ಥಿಗಳು ಪ್ರಯಾಣ ಸಬೇಕೆಂದರೆ , ನಿಗದಿತ ಸಂಖ್ಯೆಯ ಕೊರತೆಯಿಂದಾಗಿ ಪ್ರಯಾಣ ವೆಚ್ಚದಲ್ಲಿ ಏರಿಕೆ ಸಹಜ.ಬಾಡಿಗೆ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಿಗೆ ಹೆಚ್ಚಿನ ವೆಚ್ಚ ತಗಲಲಿದೆ. ಶಾಲಾ ವಾಹನಗಳೇ ಇದ್ದರೆ, ತಗಲುವ ಹೆಚ್ಚುವರಿ ವೆಚ್ಚವನ್ನು ಪಾಲಕರಿಗೆ ವರ್ಗಾಯಿಸಲಾಗುತ್ತದೆ.ಈ ವಿಧಾನದ ಅಳವಡಿಕೆಯಿಂದ ಶಾಲೆಯ ಶಿಕ್ಷಕೇತರ ಸಿಬ್ಬಂದಿ ಹಾಗೂ ಕೆಲವು ಶಿಕ್ಷಕರು ಹೆಚ್ಚುವರಿ ಸಮಯ ದುಡಿಯುವುದು ಅನಿವಾರ್ಯವಾಗಲಿದೆ; ಅದು ಅಪೇಕ್ಷಣೀಯವಲ್ಲ.ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ರಜೆ ಇದ್ದರೂ, ಮನೆಯಲ್ಲೇ ಕುಳಿತರೂ ಸಂಬಳ ಬರುತ್ತದೆ.ಆದರೆ, ಖಾಸಗಿ ಶಾಲಾ ಶಿಕ್ಷಕರಿಗೆ ಹೆಚ್ಚಿನ ದುಡಿಮೆಗೆ, ಕೆಲವರಿಗೆ ರಜಾ ಅವಧಿಗೆ ಸಂಬಳ ಇರುವದಿಲ್ಲ.ಮೂರನೇ ಮಾದರಿಯಂತೆ ತರಗತಿಗಳನ್ನೇ ದಿನಬಿಟ್ಟು ದಿನ ಪಾಳಿಯಲ್ಲಿ ನಡೆಸುವುದು. ಮಕ್ಕಳ ಕಲಿಯುವಿಕೆ,ದಿನಚರಿಯಲ್ಲಿ ನಿಯಮಿತತೆ ಕಾಪಾಡುವಿಕೆ ಹಾಗೂ ವ್ಯವಹಾರಿಕ ಸಾಧ್ಯತೆಯ ದೃಷ್ಟಿಯಿಂದ ಸಮಂಜಸವಲ್ಲ.ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತಿ ಅವಶ್ಯವಾದ ಆಟ, ಓಟ, ಸ್ನೇಹಿತರ ಒಡನಾಟದಿಂದ ಕಳೆದ 3 ತಿಂಗಳಿನಿಂದಲೂ ಲಾಕ್ ಡೌನ್ ನಿಂದಾಗಿ ಬೆಳೆಯುವ ಮಕ್ಕಳು ವಂಚಿತರಾಗಿದ್ದಾರೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುವ ಮಕ್ಕಳಿಗೆ ಶುದ್ಧ ಗಾಳಿಯನ್ನು ಸೇವಿಸುವ, ಆಟ, ಪಾಠಗಳಲ್ಲಿ ತೊಡಗಿಕೊಳ್ಳುವ ಅವಕಾಶವನ್ನೂ ಇನ್ನೂ ತಡೆಗಟ್ಟುವುದು ಸಮಂಜಸವಲ್ಲ.ರಾಜಕೀಯ ಸಭೆ ಸಮಾರಂಭಗಳಿಗೆ ಹೋದರೆ, ಮಾಲ್ ಗೆ ಹೋದ್ರೆ, ಹೋಟೆಲುಗಳಿಗೆ ಹೋದ್ರೆ. ಕಛೇರಿಗಳಿಗೆ …ಮದುವೆ-ಎಂಗೇಜ್ಮೆಂಟ್ ಗಳಿಗೆ ಹೋದ್ರೆ.., ಧಾರ್ಮಿಕ ಸ್ಥಳಗಳಿಗೆ ಹೋದರೆ ಕೊರೊನಾ ಸೋಂಕು ತಗಲುವದಿಲ್ಲವೆ?ಮಕ್ಕಳು ಮನೆಲಿದ್ರೂ ಹೊರಗೆಹೋದ ಪಾಲಕರು ಮತ್ತೆ ಮನೆಗೆ ಹೋಗಲ್ವಾ? ಆ ಮೂಲಕ ಮನೆಯವರಿಗೆಲ್ಲಾ ಕರೋನ ಬರಲ್ವಾ? ಮದ್ಯವನ್ನು ಹೊರಗಿನಿಂದ ತಂದು ಮನೆಲಿ ಪಾರ್ಟಿ ಮಾಡೋದ್ರಿಂದ ಕೋರೊನ ಬರಲ್ವಾ?ಅಪ್ಪ ಅಮ್ಮ ಇಬ್ಬರೂ ಕೆಲಸಗಳಿಗೆ ಹೋಗುವ ಪರಿಸ್ಥಿತಿಯಲ್ಲಿ ಮನೆಯಲ್ಲೇ ಮಕ್ಕಳ ಶಿಕ್ಷಣ ಹೇಗೆ?ಆನ್ ಲೈನ್ ಸೌಲಭ್ಯ ಇಲ್ಲದ ಮಕ್ಕಳು ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೆಷ್ಟು ಮಕ್ಕಳು ಫೇಸ್ ಬುಕ್, ವಾಟ್ಸ ಏಪ್, ಬೇಡದ ಹಾಗೂ ಸುರಕ್ಷಿತವಲ್ಲದ ಜಾಲತಾಣಗಳಿಗಳಿಗೆ ಭೇಟಿ ನೀಡಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಗಮನಿಸಿಲಾಗಿದೆಯೇ? ಇನ್ನೀಗ ಶಾಲೆಯೆ ಇಲ್ಲ ಅಂದ್ರೆ ಮಕ್ಕಳು ಮೊಬೈಲ್ ..ಟಿವಿ ಗಳ ನಡುವೆ ಸಿಲುಕಿ ಇನ್ನೇನೆಲ್ಲಾ ಆಗಬಹುದು?ಶಿಕ್ಷಣದಿಂದ ಮಾನವರು ರೂಪುಗೊಳ್ಳಬೇಕೇ ಹೊರತು ರೊಬೋಟ್ ಗಳಲ್ಲ. ಅಂತರ್ಜಾಲದಲ್ಲಿ ಭರಪೂರ ಮಾಹಿತಿ ಲಭ್ಯ. ಆದರೆ ಆನ್ ಲೈನ್ ಶಿಕ್ಷಣ ಶಾಲಾ ಶಿಕ್ಷಣಕ್ಕೆ ಪರ್ಯಾಯವಲ್ಲ.ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರು(ಸರ್ಕಾರಿ ಮತ್ತು ಖಾಸಗಿ ರಂಗ) ಕೂಡಾ ಪಾಲಕರು,ಅವರಿಗೆ ವೈಯಕ್ತಿಕ ಮತ್ತು ಸಾಮಾಜಿಕ ಹೊಣೆಗಾರಿಕೆ ಇದೆಯೆಂಬುದನ್ನು ಮರೆಯಲಾಗದು.ಕೊರೊನಾವನ್ನು ಹೊಡೆದೋಡಿಸುತ್ತೇವೆ, ಮೂಲೋತ್ಪಾಟನೆ ಮಾಡುತ್ತೇವೆ, ನಾಶ ಮಾಡಿಬಿಡುತ್ತೇವೆ, ಮುಂತಾದ ಘೋಷಣೆಗಳು ರಾಜಕಾರಣಿಗಳ ವೇದಿಕೆಗೆ ಮಾತ್ರ ಸೀಮಿತ. ಕೊರೊನಾ ಭೂಮಿಯ ಮೇಲೆ ವಾಸಿಸಲು ಬಂದಿರುವ ಇನ್ನೊಂದು ವೈರಾಣು. ನೆಗಡಿ, ಫ್ಲೂ ಮುಂತಾದ ವೈರಸ್ ಗುಂಪಿಗೆ ಸೇರಿರುವ ಕೊರೊನಾ, ಮಾಧ್ಯಮಗಳು ಮತ್ತು ರಾಜಕಾರಣಿಗಳು ಬಿಂಬಿಸುತ್ತಿರುವಷ್ಟು ಅಪಾಯಕಾರಿಯಲ್ಲ. ಅದರೊಂದಿಗೆ ಬದುಕಲೇಬೇಕಾದ ಅನಿವಾರ್ಯತೆ ಉದ್ಭವಿಸಿರುವುದು ವಾಸ್ತವ.ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವ , ಹುಲಿಯ ಹೆಸರನ್ನು ಕೇಳಿಯೇ ಭಯದಿಂದ ಬೆವರುವವರ ಅರಚಾಟವನ್ನೇ ನಿಜವೆಂದು ನಂಬುವ ಅಗತ್ಯವಿಲ್ಲ. ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ಕುಡಿದರೆ ಶೀತವಾಗುವ ಸೂಕ್ಷ್ಮ ಪ್ರಕೃತಿಯ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಯ್ಕೆಯನ್ನು ಅವರ ಪಾಲಕರೇ ನಿರ್ಧರಿಸಲಿ.ಕಂಫರ್ಟ ವಲಯದಲ್ಲಿ ಕುಳಿತಿರುವವರ ಅತಾರ್ಕಿಕ ಭಯವನ್ನು ಪುರಸ್ಕರಿಸಿ,ಶಾಲೆಗಳ ಪುನರಾರಂಭವನ್ನು ಮುಂದೂಡಿ ಲಕ್ಷಾಂತರ ಮಕ್ಕಳ ಬೆಳವಣಿಗೆ ಕುಂಠಿತಗೊಳಿಸುವದು ಸರಿಯಲ್ಲ;ಅದು ಅವರಿಗೆ ಮಾಡುವ ದ್ರೋಹ.ಈ ಹಂತದಲ್ಲಿ, ಜುಲೈ ಒಂದನೇ ತಾರೀಖಿನಿಂದ ಶಾಲೆಗಳನ್ನು ಪ್ರಾರಂಭಿಸುವದೇ ಸೂಕ್ತ. ******* ಗಣೇಶ ಭಟ್ ಶಿರಸಿ

ಪ್ರಸ್ತುತ Read Post »

ಇತರೆ

ಲಹರಿ

ಮಾವಿನ ಪುರಾಣ ಮಾವಿನ ಪುರಾಣ ಹಣ್ಣುಗಳಲ್ಲಿ ಮಾವು ಕೊಡುವ ಖುಷಿ, ಯಾವ ಹಣ್ಣು ಕೂಡ ಕೊಡದು ಎಂದರೆ ತಪ್ಪಾಗಲಾರದು.ಹಣ್ಣುಗಳಲ್ಲಿ ಮಾವಿಗೆ ವಿಶೇಷ ಸ್ಥಾನಮಾನ,ರಾಜಮರ್ಯಾದೆ.ಮಾವಿನ ಹಣ್ಣು, ಹಣ್ಣುಗಳ ರಾಜ. ಬೇಸಿಗೆ ಶುರುವಾದೊಡನೆ ಮಾವು ಶುರುವಾಗುತ್ತದೆ.ನಮ್ಮಲ್ಲಿ ಮೊದಲು ಗಿಣಿಮೂತಿ ಮಾವಿನಕಾಯಿ ಜೊತೆ ಈ ಸೀಸನ್ ಶುರುವಾಗುತ್ತದೆ.ಎರೆಡು ಮಳೆ ಆಗುವ ತನಕ ಮಾವು ತಿನ್ನುವುದಿಲ್ಲ.ಒಂದು ದೃಷ್ಟಿ , ಬಂದ ಈ ಗಿಣಿಮೂತಿ ಕಾಯಿಯ ಮೇಲೆ ಇಟ್ಟುಕೊಂಡು ನೋಡದ ಹಾಗೆ ಮಾರುಕಟ್ಟೆಯಲ್ಲಿ ಓಡಾಡುತ್ತೇವೆ.ಮಳೆ ಸ್ವಲ್ಪ ಲೇಟಾದರೆ ಚಡಪಡಿಕೆ ಶುರು.ನಾಲ್ಕೋ,ಐದೋ ಗಿಣಿ ಮಾವಿನಕಾಯಿ ಖರೀದಿಸಿ ಉಪ್ಪು,ಖಾರ ಹಚ್ಚಿಕೊಂಡು ಸವಿಯುವುದೇ ಚೆಂದ.ಮನೆಯಲ್ಲಿ ಹಿರಿಯರ ಕೂಗಾಟ….ಮಳೆ ಬರಲಿ ಎಂದು. ಅಷ್ಟರಲ್ಲೇ ಉಪ್ಪಿನಕಾಯಿ ಹಾಕುವ ಮಾವಿನ ಕಾಯಿ,ಅದರಲ್ಲೂ ಆಮ್ಲೇಟ್ ಕಾಯಿ ಬಂದಿರುತ್ತೆ.ಸ್ವಲ್ಪ ದಿನ ಮನೆಗಳಲ್ಲಿ ಅದರದ್ದೇ ಸಂಭ್ರಮ. ಮಕ್ಕಳು ಕದ್ದುಮುಚ್ಚಿ ಅದನ್ನೇ ತಿಂದು ಬೈಗುಳ ತಿನ್ನುತ್ತಾರೆ.ಉಪ್ಪಿನಕಾಯಿ ಜಾಡಿ ಸೇರಿ ಅಟ್ಟಕ್ಕೆ ಸೇರುತ್ತದೆ.ನಂತರದ್ದೇ ದಿಢೀರ್ ಗಿಣಿಮಾವಿನಕಾಯಿಯ ಉಪ್ಪಿನಕಾಯಿ.ಮಕ್ಕಳಿಗೆ ಈಗ ಸ್ವಾತಂತ್ರ ತಿನ್ನಲು.ಚಿತ್ರಾನ್ನದ ಜೊತೆ ಪರಮಾನ್ನ ಇದು. ಎರೆಡು ಮಳೆ ಆದ ತಕ್ಷಣ ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ. ಎಲ್ಲಕ್ಕಿಂತ ಮೊದಲು ಬಾದಾಮಿ ಹಣ್ಢಿನ ದರ್ಬಾರು.ಮೊದಲಿಗೆ ಕೆ.ಜಿ.ಗೆ 120 ರೂಪಾಯಿಗಿಂತ ಕಮ್ಮಿ ಸಿಗದು.ಕೊಳ್ಳುವ ಜನ ಹಿಂದಕ್ಕೆ ಹೋಗಬಾರದೆಂದು ಇದರ ಜೊತೆಯ ಬುಟ್ಟಿಯಲ್ಲಿ ಸ್ಥಳೀಯ ನಾರಿನ ಹಣ್ಣು ಕೆ.ಜಿ.ಗೆ 50 ರೂಪಾಯಿ. ತಿಂದವರು ಸ್ವಲ್ಪ ಶಾಪ ಹಾಕಿ ಚಪ್ಪರಿಸುತ್ತಾರೆ. ನಂತರದ್ದೇ ಮಾವುಗಳ ರಾಜ ರಸ್ಪುರಿ ಮಾವು ಲಗ್ಗೆ ಇಡುತ್ತದೆ. ತೆಂಡುಲ್ಕರ್ ಬ್ಯಾಟಿಂಗ್ ಗೆ ಬಂದ ಹಾಗೆ ರಸ್ಪುರಿ ಮಾವು ಬರುತ್ತದೆ.ಇದಕ್ಕೆ ನಮ್ಮಲ್ಲಿ ಕಸಿಹಣ್ಣು ಎಂದೇ ಬಿರುದಾಂಕಿತ.ಮೊದಲು ಕೆ.ಜಿ.ಗೆ 70 ರಿಂದ ಶುರು.ನಂತರ ನಂತರ 60.50 ,40. ರಸ್ಫುರಿ ಬಂದ ತಕ್ಷಣ ಬಾದಾಮಿ ಮಾವಿನಹಣ್ಣು ನೆಲ ಕಚ್ಚುತ್ತದೆ.ಬಾದಾಮಿ ಕೂಡ 60 ರೂಪಾಯಿಗೆ ಸಿಗುತ್ತದೆ.ರಾಜ ಬಂದ ಮೇಲೆ ಉಳಿದವರಿಗೆ ಬೆಲೆ ಇಲ್ಲ.ನಾರಿನ ಮಾವಿನಹಣ್ಣು ಓಟ ಕಿತ್ತಿರುತ್ತದೆ. ಈ ಕಸಿ ಮಾವು ರಸ್ಪುರಿ ಬಂದ ಮೇಲೆ ಮನೆಮನೆಗಳಲ್ಲಿ ಹೋಳಿಗೆ ಶುರು.ಹೋಳಿಗೆ ಶೀಕರಣೆ ತಿನ್ನದವನು ರಸಿಕನೇ ಅಲ್ಲ!. ಶೀಕರಣೆಗೆ ರಸ್ಪುರಿ ಮಾವು ಬಿಟ್ಟು ಬೇರಾವುದೇ ಹಣ್ಣಿನಲ್ಲಿ ಮಾಡಿದರೆ ರುಚಿ ಕಮ್ಮಿ. ಬೇರೆ ಬೇರೆ ಭಾಗದಲ್ಲಿ ಈ ತಳಿಗೆ ಬೇರೆ ಬೇರೆ ಹೆಸರುಗಳಿವೆ. ನಂತರ ಬೇರೆ ಬೇರೆ ಮಾವುಗಳ ರುಚಿ ನೋಡುವ ಭಾಗ್ಯ. ಅಡಕೆ ಪುಟ್ಟ ಮಾವಂತೂ ಬಲು ರುಚಿ.ಇದರ ರುಚಿ ಸಕ್ಕರೆ. ಮಕ್ಕಳಿಗೆ ಬಲು ಪ್ರಿಯವಾದ ತಳಿ.ಇದರ ಜೊತೆಗೆ ನಾಟಿ ಮಲಗೋಬ ಹಣ್ಣು, ನಾಟಿ ಹಣ್ಣುಗಳು ಶುರು.ಈ ನಾಟಿ ಹಣ್ಣುಗಳು ಸಿಹಿಹುಳಿ ಮಿಶ್ರಿತ. ನಂತರ ಮಲಗೋಬ ಹಣ್ಣು. ಕತ್ತರಿಸಿಕೊಂಡೇ ತಿನ್ನಬೇಕು ಇದನ್ನು. ಸರಿಯಾದ ಒಂದು ಹಣ್ಣನ್ನು ತಿಂದರೆ ಹೊಟ್ಟೆ ಭರ್ತಿಯಾಗುತ್ತದೆ..ಬಹಳ ಮಜವಾದ ಸಿಹಿ.ಗೊತ್ತಿಲ್ಲದವರಿಗೆ ಕೆಲ ವ್ಯಾಪಾರಿಗಳು ಮಲಗೋಬ ಬದಲು ನಾಟಿ ಮಲಗೋಬವನ್ನೇ ಮಲಗೋಬ ಎಂದು ಮಾರುತ್ತಾರೆ.ಕೊಳ್ಳುವವರು ಹುಷಾರಾಗಿರಬೇಕು. ನಂತರದ್ದು ಜೀರಿಗೆ ಮಾವಿನಹಣ್ಣು.ಸ್ವಲ್ಪ ಮಟ್ಟಿಗೆ ಆಕಾರದಲ್ಲಿ ರಸ್ಪುರಿಯನ್ನು ಹೋಲುತ್ತದೆ.ವಿಶೇಷ ಸುವಾಸನೆಯ ತಳಿ ಇದು.ಕೆಲವರಿಗೆ ಇದು ರುಚಿಸದು.ಇತ್ತೀಚೆಗೆ ಇದರ ತಳಿ ಕಡಿಮೆಯಾಗುತ್ತಿದೆ.ಕೆಲವರು ಇದನ್ನು ಮಾರುವ ಗೋಜಿಗೆ ಹೋಗದೆ ಗಿಡದಲ್ಲೇ ಬಿಡುತ್ತಾರೆ.ಮಾರುಕಟ್ಟೆಯಲ್ಲಿ ಬೆಲೆ ಕಮ್ಮಿ ಇದಕ್ಕೆ. ಇನ್ನೂ ಹಲವು ಹೆಸರಿನ ಸ್ಥಳೀಯ ಹಣ್ಣುಗಳು ಕಡಿಮೆ ಪ್ರಮಾಣದಲ್ಲಿ ಬರುತ್ತವೆ. ಕಸಿ ಮಾವಿನ ಹಣ್ಣಿಗೆ ಸ್ವಲ್ಪ ಮಟ್ಟಿಗೆ ಸ್ಪರ್ದೆ ಒಡ್ಡುವ ತಳಿ ಎಂದರೆ ಸೇಂಧೂರ ಹಣ್ಣು. ಹಸಿರಿದ್ದರೆ ಈ ತಳಿ ಹುಳಿ.ಸಂಪೂರ್ಣ ಹಣ್ಣಾದರೆ ಸ್ವರ್ಗದ ಸಿಹಿ ರುಚಿ.ಇದನ್ನು ಸಿಂಧೂರ ಎಂತಲೂ,ಬೇರೆ ಬೇರೆ ಹೆಸರುಗಳಿವೆ.40 ರೂಪಾಯಿಯಿಂದ 25 ರೂಪಾಯಿಯ ತನಕ ಕೆ.ಜಿ.ಗೆ ಮಾರಲ್ಪಡುತ್ತದೆ. ಕೊನೆಯದಾಗಿ,ಬೇಸಿಗೆ ಮುಗಿಯುವ ಹೊತ್ತಿಗೆ ನೀಲಂ ಶುರುವಾಗುತ್ತದೆ.ಅಷ್ಟರಲ್ಲಾಗಲೇ ಮಳೆ ಶುರುವಾಗಿರುತ್ತದೆ.ಈ ನೀಲಂ ಕೂಡ ಸಿಹಿಯಾದ ತಳಿ.ಮಳೆ ಶುರುವಾದರೆ ಈ ಹಣ್ಣಿನಲ್ಲಿ ಹುಳುಗಳು ಶುರುವಾಗುತ್ತದೆ.ನೋಡಿಕೊಂಡು ತಿನ್ನಬೇಕು.ಸೀಸನ್ ಮುಗಿದರೂ ಮಾರುಕಟ್ಟೆಯಲ್ಲಿ ಸಿಗುವ ಏಕೈಕ ಹಣ್ಣು ಇದು.ಮಹಾರಾಷ್ಟ್ರದಿಂದ ಈ ಹಣ್ಣು ಬರುತ್ತದೆ.ಮಹಾರಾಷ್ಟ್ರದಲ್ಲಿ ಮಳೆ ಶುರುವಾದ ಮೇಲೆ ಮಾವಿನಹಣ್ಣನ್ನು ತಿನ್ನುವುದಿಲ್ಲವಂತೆ.ವ್ಯಾಪಾರಿಗಳು ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ನಮ್ಮ ರಾಜ್ಯಕ್ಕೆ ರಫ್ತು ಮಾಡುತ್ತಾರೆ. ಸೀಸನ್ ಇರುವಾಗ ಆಯಾ ಹಣ್ಣುಗಳನ್ನು ಚೆನ್ನಾಗಿ ತಿನ್ನಬೇಕು.ಆರೋಗ್ಯಕ್ಕೆ ಒಳ್ಳೆಯದು. ************ ಕೊಟ್ರೇಶ್ ಅರಸಿಕೆರೆ

ಲಹರಿ Read Post »

ಪುಸ್ತಕ ಸಂಗಾತಿ

ಪರಮೂ ಪ್ರಪಂಚ

ಪರಮೂ ಪ್ರಪಂಚಕಥಾಸಂಕಲನಲೇಖಕರು- ಇಂದ್ರಕುಮಾರ್ ಎಚ್.ಬಿಇಂಪನಾ ಪುಸ್ತಕ ವೃತ್ತಿಯಿಂದ ಶಿಕ್ಷಕರಾಗಿರುವ ಇಂದ್ರಕುಮಾರ್ ಅವರು ನಾಡಿನ ಪ್ರಮುಖ ಕಥೆಗಾರರಲ್ಲಿ ಒಬ್ಬರು. ಮೊನ್ನೆಯಷ್ಟೇ ಅವರ ಕಥೆಯೊಂದು ‘ ಸೂಜಿದಾರ ‘ ಎಂಬ ಹೆಸರಿನಲ್ಲಿ ಸಿನೆಮಾ ಆಗಿದೆ. ‘ಆ ಮುಖ’, ‘ನನ್ನ ನಿನ್ನ ನೆಂಟತನ’, ‘ಪರಮೂ ಪ್ರಪಂಚ’ ಮತ್ತು ‘ಕಾಣದ ಕಡಲು’ ಅವರ ಕಥಾಸಂಕಲನಗಳು.‘ಮೃದುಲಾ’,’ ಹುಲಿಕಾನು ‘ ಅವರ ಪ್ರಕಟಿತ ಕಾದಂಬರಿಗಳು. ಈ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಗಿಫ್ಟ್ – ಇಪ್ಪತ್ತು ವರ್ಷಗಳ ನಂತರ ಸಂತೆಯಲ್ಲಿ ಸಿಕ್ಕ ಇಬ್ಬರು ಪ್ರೇಮಿಗಳ ಕಥಾನಕ. ಇಲ್ಲಿ ಅವರು ನಮ್ಮನ್ನೂ ಸಂತೆಯಲ್ಲಿ , ತುದಿಗಾಲಲ್ಲಿ ನಿಲ್ಲಿಸಿ ಅವರು ತೀವ್ರ ಭಾವದಿಂದ ಕಥೆ ಹೇಳುತ್ತಾರೆ. ಅವಳ ಸಂಗ- ಇದು ಕಾಟಲಿಂಗೇಶಪ್ಪ ಎಂಬ ವ್ಯಕ್ತಿ, ಅವಳು ಮತ್ತು ಅಲ್ಲಾಭಕ್ಷಿ ಎಂಬ ಟೇಲರರ ಕಥೆ. ಬಹಳ ವಿಭಿನ್ನವಾದ ಕಥಾನಕವಿದು. ಇದರ ಅಂತ್ಯವನ್ನು ಊಹಿಸುವುದು ಕಷ್ಟ. ಇಷ್ಟ ಗಂಧ- ತಡೆಯಲಾರದಷ್ಟು ದುರ್ಗಂಧ ಹೊತ್ತ ಹಾಲೇಶಪ್ಪನ ಕಥೆಯಿದು. ಸದಾ ನೆಗಡಿಯಿಂದ ಮೂಗು ಕಟ್ಟಿಕೊಂಡಿರುವ ಅಮೀರ್ ಜಾನ್ ನ ಸೈಕಲ್ ಶಾಪ್ ಮುಂದೆ ಇವನಿಗೆ ಆಶ್ರಯ ತಾಣವಾಗುತ್ತದೆ. ಇಂತಹ ಹೊತ್ತಿನಲ್ಲಿಯೇ ಅವನ ಬದುಕಿಗೆ ಆಗಮಿಸುವ ಹೆಣ್ಣಿನಿಂದ ಕಥೆ ಅನೂಹ್ಯ ತಿರುವು ಪಡೆಯುತ್ತದೆ. ಹೊರೆ – ರಘುವೀರ ಮತ್ತು ಲಲಿತಾಕ್ಷಿಯ ಪುಟ್ಟ ಕುಟುಂಬಕ್ಕೆ ಆಗಮಿಸುವ ದಿನಕರಜ್ಜ ; ಅವರ ಪುಟ್ಟ ಮಗು ಚಿಂಟೂ ಹಾಗೂ ಕೊನೆಗೆ ಇಡೀ ಮನೆಯನ್ನು ಆವರಿಸಿಕೊಳ್ಳುವ ಪರಿ ಅನನ್ಯ. ಪರಮೂ ಪ್ರಪಂಚ- ಪರಮು ಮತ್ತು ಮೃಣಾಲ ಗೆಳೆಯರು. ಆ ವಿಶ್ವಾಸದಿಂದಲೇ ಮೃಣಾಲನ ಮನೆಯನ್ನು ತನ್ನ ಮನೆ ಎಂದೇ ಭಾವಿಸಿ ಜೀವಿಸುವ ಮನುಷ್ಯ ಪರಮು.ಆದರೆ ಒಂದು ಪ್ರಸಂಗದಲ್ಲಿ ಮೃಣಾಲನ ತಾಯಿ ಇವನನ್ನು‘ ಪಾಪ ಅನಾಥ ಹುಡುಗ, ಮೃಣಾಲನ ಫ್ರೆಂಡ್ ‘ ಎಂದು ಪರಿಚಯಿಸಿ ಮತ್ತೆ ಅವನ ಅನಾಥ ಪ್ರಜ್ಞೆ ಕೆಣಕಿ ನಮ್ಮನ್ನೂ ಕಾಡುವ ಕಥೆಯಿದು. ವಿಸರ್ಜನೆ – ಹೆಣ್ಣೊಬ್ಬಳು ಗಂಡನನ್ನು ಶೋಷಿಸುವ ವಿಭಿನ್ನ ಕಥೆ. ಹೊಟ್ಟೆಯ ಮತ್ತು ಕಾಮದ ಹಸಿವನ್ನು ನಿಯಂತ್ರಿಸಲಾಗದ ಶಿವರಾಜನ ಕಥೆ. ಗ್ರಹಣ ಒಂದು ಥ್ರಿಲ್ಲರ್ ಕಥೆ. ಉತ್ತರದ ಹುಡುಕಾಟದಲ್ಲಿ – ಒಂದು ಸಣ್ಣ ಅವಘಡ ಮಾಡುವ ದೊಡ್ಡ ಹಾನಿಯ ಕಥೆ.ಅಣ್ಣನ ನೆನಪಲ್ಲಿ ಒಂದು ಒಳ್ಳೆಯ, ಸರಳ ಕಥೆ.ಬೇಬಿ ಸಿಟ್ಟಿಂಗ್ – ಒಂದು ಸಮಕಾಲೀನ ಆದರೆ ವಿಶಿಷ್ಟ ನಿರೂಪಣೆಯ ಚೆಂದದ ಕಥೆ.ಒಮ್ಮೆ ಓದಲೇಬೇಕಾದ ವಿಭಿನ್ನ ಕೃತಿ ‘ ಪರಮೂ ಪ್ರಪಂಚ ******** ಡಾ.ಅಜಿತ ಹರೀಶಿ

ಪರಮೂ ಪ್ರಪಂಚ Read Post »

You cannot copy content of this page

Scroll to Top