ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Stone crusher in a quarry mine of porphyry rock. mining industry.

ಬಾಗೇಪಲ್ಲಿ ಕೃಷ್ಣಮೂರ್ತಿ

ಬ್ರಹ್ಮಾಂಡದಿ ನೀನು ತೃಣ
ಅದಕೆ ನೀ ಇರುವೆ ಋಣ

ಹೇಗೆ ತೀರಿಸುವೆ ಅದನು
ಯೋಚಿಸು ಒಂದು ಕ್ಷಣ

ಸದಾ ಸಲಹಲು ನಿನ್ನ
ಬದಲಾಗಿಸು ನಿನ್ನ ಗುಣ

ಅತಿಯಾಸೆಯಿಂದ ನೀನು
ಮಾಡಿರುವೆ ಎಲ್ಲಾ ರಣ

ಸಿಕ್ಕ ಸಿಕ್ಕಲ್ಲೆಲ್ಲಾ ಅಗೆದು
ಮಾಡಿರುವೆ ಅದಕೆ ವ್ರಣ

ಪರಿಸರ ರಕ್ಷಣೆ ಆಗಬೇಕು
ಸೇರು ನೀನು ಅದರ ಬಣ

ಕ್ಷಮೆ ಎನೆ ಭೂಮಿ’ಮಂಕೇ’
ಸಕಲರೂ ತೊಡಬೇಕು ರಕ್ಷಣೆಗೆ ಪಣ

(ಚೋಟಿ ಬೆಹರ್ ರಚಿಸುವ ಯತ್ನ)

**********

About The Author

2 thoughts on “ಕಾವ್ಯಸಂಗಾತಿ”

  1. ವಿ.ಚಂದ್ರಶೇಖರ ನಂಗಲಿ

    ಸೇರು ನೀನು ಹಸಿರು ಬಣ ……..
    ಕ್ಷಮೆಯೇ ಭೂಮಿತಾಯಿ ಕಣಾ…..

Leave a Reply

You cannot copy content of this page

Scroll to Top