ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೀಗೊಂದು ಕವಿತೆ

ಎಸ್ ನಾಗಶ್ರೀ

ಹೀಗೆ ಬಿರುಸುಮಳೆಯಲ್ಲೇ
ಒಮ್ಮೊಮ್ಮೆ ಗೆಳೆತನಗಳು
ಗಾಢವಾಗುವುದು
ಬೇಡಬೇಡವೆಂದರೂ
ಹುಣಸೆಮರದಡಿಯಲಿ ನಿಂತು
ಗುಡುಗು ಸಿಡಿಲಿಗೆ ಬೆಚ್ಚುತ್ತಾ
ಬಿದ್ದ ಕಾಯಿಗಳ ಕಣ್ಣಲ್ಲೇ ಭಾಗಮಾಡುತ್ತಾ
ನಿನ್ನೆಯೊಂದು ಇತ್ತು
ನಾಳೆ ಬರುವುದು
ಇಂದು ಅರ್ಧ ಮುಗಿದಿದೆಯೆಂಬ
ಯಾವ ಕುರುಹೂ ಕಾಣದಂತೆ
ಮುಗಿಲಿನ ಮಾತಿಗೆ
ಭುವಿ ಕಿವಿಯಾನಿಸಿ
ಮತ್ತೆ ಮತ್ತೆ ಅರೆಶಬ್ದಗಳಲಿ
ಉತ್ತರಿಸುವುದ ನೋಡುವುದೂ
ಜೀವಮಾನದ ಅನುಭವ

ಹಾಗೆ ಒಂದೊಮ್ಮೆ ಬಿರುಮಳೆಯಲ್ಲಿ ಸಿಕ್ಕ
ಗೆಳತಿ
ಇನ್ನು ಹತ್ತು ವರ್ಷಕ್ಕೆ
ನೇಣು ಬಿಗಿದುಕೊಂಡಳು
ಒಡಲಲ್ಲಿ ಐದು ತಿಂಗಳ
ಹಸುಗೂಸು
ಎಷ್ಟು ಪ್ರೇಮ ಕವನ
ಮಳೆಯ ಸೌಂದರ್ಯದ ಕವಿತೆ
ಬರೆಯಲು ಕೂತರೂ
ಆಗಾಗ ವಹಿಗೆ ಸಿಕ್ಕು
ಕವಿತೆಯೇ ಕೊಲೆಯಾಗುತ್ತದೆ
ಮಳೆಯೇ ಪ್ರಥಮವರದಿಗಾರನು
ನಾನು ಏನೆಂದು
ಶುಭ್ರ ಆಗಸ ಮೂಡುವವರೆಗೂ
ಕಾದು ಕಾದು
ಕಾಫಿ ಹೀರುತ್ತೇನೆ.

*********

About The Author

6 thoughts on “ಕಾವ್ಯಯಾನ”

  1. ಮುಗಿಲಿನ ಮಾತಿಗೆ ಭುವಿ ಕಿವಿಯಾನಿಸಿ…. ವಾಹ್ ಎಂಥ ಸಾಲು… Just loved the whole poem.

Leave a Reply

You cannot copy content of this page

Scroll to Top