ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಆರನೇ ಅದ್ಯಾಯ ಈ ಸಂಭಾಷಣೆ ಹತ್ತಾರು ಗಜಲ್ ಸಂಕಲನ ಹೊರ ತಂದಿರುವ ಒಬ್ಬರು ಖ್ಯಾತ ಗಜಲಕಾರರು ಮತ್ತು ಇನ್ನೊಬ್ಬರು ಅಷ್ಟಿಷ್ಟು ಹೆಸರು ಮಾಡುತ್ತಿರುವ ಗಜಲ್ ನಿಪುಣರ ನಡುವೆ ಒಮ್ಮೆ ನಡೆದ ಸಂಭಾಷಣೆ… “ಏನು ಸರ್ ಇದು ಗಜಲ್ ಅಂತೀರಾ, ಆದರೆ ಕಾಫಿಯಾ ರಧೀಪ್ ಏನು ಇಲ್ಲ… ಅದು ಹೇಗೆ ಇದು ಗಜಲ್ ಆಗುತ್ತೆ” “ಅದು ಹಾಗೆ ಗಜಲ್ ಆಗುತ್ತದೆ, ನನ್ನದು ಒಂಥರಾ ಮುಕ್ತ ಗಜಲ್” “ಅದು ಯಾವುದು ಸರ್ ಮುಕ್ತ ಗಜಲ್, ಹಾಗೂ ಒಂದು ವಿಧ ಇದೀಯಾ??? ಆದರೆ ನನ್ನ ಇಷ್ಟು ವರ್ಷಗಳ ಅಧ್ಯಯನದಲ್ಲಿ ಅಂತಹ ಒಂದು ವಿಧ ನಾನು ಕೇಳೇ ಇಲ್ವಲ್ಲ” “ಇರಬಹುದು, ಇಲ್ಲದೆಯೂ ಇರಬಹುದು… ಇದೊಂದು ತರಹ ನನ್ನ ವಿಶೇಷ ಗಜಲ್” “ಏನು ಸರ್ ಅಡ್ಡ ಗೋಡೆ ಮೇಲೆ ದೀಪ ಇಡೋದು ಅಂದರೆ ಇದೇನಾ…!!! ಗಜಲ್ ನಿಯಮ ಗುಣಲಕ್ಷಣಗಳು ಪಾಲನೆಯಾಗದ ಬರಹಕ್ಕೆ ವಿಶೇಷ ಮುಕ್ತ ಗಜಲ್ ಅಂತೀರಿ” “ಇದನ್ನು ಯಾರಿಗಾದರೂ ಹೊಸಬರಿಗೆ ಹೇಳಿ, ನನ್ನ ಅಂತಹ ದೊಡ್ಡ ಗಜಲಕಾರರಿಗೆ ಕೇಳುವ ಮಾತು ಇದಲ್ಲ” “ಅಂದರೆ ಜನಪ್ರಿಯರಾದ ಕೂಡಲೇ ನಿಯಮವೆಲ್ಲಾ ಗಾಳಿಗೆ ತೂರಿ ಹೇಗೆ ಬರೆದರೂ ನಡಿದೀತು ಎನ್ನುವುದು ನಿಮ್ಮ ನೀತಿನಾ?” “ನಿಮಗೆ ಹಾಗೆ ಅನಿಸಿದರೆ ಹಾಗೆ ಅಂದುಕೊಳ್ಳಿ ಪರವಾಗಿಲ್ಲ… ನಾನು ಅಷ್ಟು ಎಲ್ಲಾ ಇಲ್ಲದೇನೇ ಈ ಮಟ್ಟಕ್ಕೆ ಬೆಳೆದಿಲ್ಲ, ಎಷ್ಟೆಲ್ಲಾ ನನ್ನ ಅಭಿಮಾನಿಗಳು ಎದ್ದು ಬಿದ್ದು ಓದಿ ವಾವ್ ಸೂಪರ್ ಅಂತ ಇರಲಿಲ್ಲ” “ಖ್ಯಾತರಾದ ಮೇಲೆ ನೀವು ಮಾಡಿದೆಲ್ಲಾ ಸರಿ, ಬರೆದಿದ್ದು ಎಲ್ಲಾ ಸೂಪರ್ ಎನ್ನುವವರು ಇದ್ದದ್ದೇ ಬಿಡಿ” “ಓದುಗರಿಗೆ ಮುಖ್ಯ ಅದರ ವಿಷಯ ವಸ್ತು ಮತ್ತು ಅದನ್ನು ನಾವು ಭಾವಗಳಲ್ಲಿ ಅದ್ದಿ ತೆಗೆದು ಪ್ರಸ್ತುತಪಡಿಸುವ ರೀತಿ ಮಾತ್ರ… ಇವೆಲ್ಲಾ ನಿಮಗೆ ಗೊತ್ತಾಗಲ್ಲ, ಸುಮ್ಮನೆ ಎದ್ದು ಹೋಗಿ ತಲೆ ತಿನ್ನೋದು ಬಿಟ್ಟು” “ಓದುಗರಿಗೆ ಏನು ಮುಖ್ಯ ಅನ್ನುವ ನಿಮ್ಮ ಮಾತು ಸರಿ, ಆದರೆ ಓದುಗರಿಗೆ ನಿಯಮಗಳ ಬಗ್ಗೆ ಗೊತ್ತಿರಲ್ಲ… ಆದ್ದರಿಂದ ನೀವು ಗಜಲ್ ಅಂತ ಹಾದಿ ತಪ್ಪಿಸುವ ಬದಲು ಕವನ ಅಥವಾ ಪದ್ಯದ ಪ್ರಕಾರ ಅಂತ ಹೇಳಿ” “ನೋಡಪಾ ನಾನು ನಿಯಮಗಳನ್ನು ಒಪ್ಪಿಕೊಳ್ಳಲ್ಲ, ಆದರೆ ಲಕ್ಷಣಗಳನ್ನು ಮಾತ್ರ ಅನುಸರಿಸುವೆ… ಆದ್ದರಿಂದ ಗಜಲ್ ಚೌಕಟ್ಟು ಮತ್ತು ದ್ವಿಪದಿ ಅಲ್ಲೇ ಇದೆ ಅಲ್ವಾ” “ಹಾಗಾದರೆ ಅದು ದ್ವಿಪದಿಗಳು ಅಂತ ಹೇಳಿಕೊಳ್ಳಿ… ಉರ್ದುನಿಂದ ಬಂದ ಪರ್ಧಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಸಾಹಿತ್ಯದ ಎಲ್ಲಾ ಪ್ರಕಾರಗಳು ಒಂದಕ್ಕಿಂತ ಒಂದು ಉತ್ತಮವಾದುದೇ… ಇನ್ನೂ ನೀವು ಹೇಳುವ ಚೌಕಟ್ಟಿನಲ್ಲಿಯೇ ಪರ್ಧ ಕೂಡ ಬರುತ್ತೆ. ಅಷ್ಟು ಇದ್ದ ಮಾತ್ರಕ್ಕೆ ಅದು ಗಜಲ್ ಆದೀತೆ “ “ನೋಡಿ ನನಗೆ ಇಂತಹ ಪ್ರಶ್ನೆಗಳು ಇಷ್ಟ ಆಗಲ್ಲ, ಪಿತ್ತ ನೆತ್ತಿಗೇರಿಸಬೇಡಿ. ನಿಮಗೆ ಕವನ ಎನಿಸಿದರೆ ಕವನ, ಪರ್ಧ ಎನಿಸಿದರೆ ಪರ್ಧ ಅಂತಾನೇ ಅಂದುಕೊಳ್ಳಿ. ಅದರಿಂದ ನನಗೇನು ತೊಂದರೆ ಇಲ್ಲ” “ಏನು ಸರ್ ಹೀಗೆ ಹೇಳತೀರಾ, ನಿಮ್ಮನ್ನೇ ಅನುಸರಿಸುವ ನೂರಾರು ಹೊಸ ಗಜಲಕಾರರ ಕಥೆ ಹೇಗೆ” “ಅವೆಲ್ಲವೂ ನನಗೆ ಬೇಕಿಲ್ಲ, ಇನ್ನೂ ಬರತೀನಿ” ಈ ಸಂಭಾಷಣೆ ಕೇಳಿದ ನಂತರ ನಿಮಗೆ ಗೊತ್ತಾಗಿರುತ್ತೆ ಕೆಲವು ವಿಷಯಗಳು ಆದ್ದರಿಂದ ಇದನ್ನು ವಿವರಿಸುವ ಗೋಜಿಗೆ ಹೋಗುವುದಿಲ್ಲ. ಯಾರನ್ನೇ ಒಬ್ಬರನ್ನು ಅನುಸರಿಸುವ ಬದಲು ಹತ್ತಾರು ಬೇರೆ ಬೇರೆ ಬರಹಗಾರರು ಬರೆದ ಕೃತಿಗಳ ಸತತ ಅಧ್ಯಯನ ಮಾತ್ರ ಯಾವುದೇ ಒಂದು ಸಾಹಿತ್ಯದ ಪ್ರಕಾರದ ಬಗ್ಗೆ ತಿಳಿದುಕೊಳ್ಳಲು ಅತಿ ಉಪಯುಕ್ತ. ಹೆಚ್ಚಿನ ಖ್ಯಾತನಾಮರು ಯಾರು ಆ ಬಗ್ಗೆ ಉಚಿತವಾಗಿ ತಿಳಿಸಿ ಕೊಡುವ ಕೆಲಸ ಮಾಡುವುದಿಲ್ಲ. ಪ್ರಸ್ತುತ ಹೆಚ್ಚಿನವರು ಯಾವುದಾದರೂ ಒಂದು ರೀತಿಯ ಪ್ರತಿಫಲ ಅಪೇಕ್ಷೆಯಲ್ಲಿ ಇರುವುದು ಬಹು ಬೇಸರಕರ ಸಂಗತಿ. ತನ್ನ ಹೊಸ ಪುಸ್ತಕಕ್ಕೆ ಮುನ್ನುಡಿ ಬರೆದು ಕೊಡಿ ಸರ್ ಎಂದು ಹೋದ ಒಬ್ಬ ಉದಯನ್ಮೋಖ ಬರಹಗಾರನಿಗೆ ಒಬ್ಬ ದೊಡ್ಡ ಸಾಹಿತಿ ಕೇಳಿದ್ದು ಕೇವಲ ಹತ್ತು ಸಾವಿರ ಗೌರವಧನ ಮಾತ್ರ. ಒಂದು ಉತ್ತಮ ಗಜಲ್ ರೂಪಗೊಳ್ಳಲು ವಿಷಯ ವಸ್ತು ಮತ್ತು ಪ್ರಸ್ತುತಪಡಿಸುವ ರೀತಿಯೊಂದಿಗೆ ಅದರ ನಿಯಮಗಳು ಅಷ್ಟೇ ಮುಖ್ಯವಾಗಿರುತ್ತವೆ. ಯಾವುದೇ ಬರಹವಾದರೂ ಅದು ಖಂಡಿತವಾಗಿಯೂ ಆಯಾ ಸಾಹಿತ್ಯ ಪ್ರಕಾರದ ಗುಣಲಕ್ಷಣಗಳಿಗೆ ನಿಷ್ಠೆಯಿಂದ ಕೂಡಿದ್ದು ಅದಕ್ಕೆ ಬದ್ಧವಾಗಿ ಇರಬೇಕು. ಆ ಕ್ಷಣಕ್ಕೆ ಮತ್ತು ಕೆಲವರಿಗೆ ಚೆನ್ನಾಗಿ ಇದೆ ಎನಿಸಿದರೂ ದೀರ್ಘಕಾಲದಲ್ಲಿ ನಿಷ್ಠವಾಗಿರದ ಬರಹ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತದೆ. ಸಾಹಿತ್ಯದ ಯಾವುದೇ ವಿಧ ತೆಗೆದುಕೊಂಡರೂ ಸಹ ಪ್ರತಿಯೊಂದು ತನ್ನದೇ ಆದ ಲಕ್ಷಣಗಳನ್ನು ಹೊಂದಿದ್ದೂ ಅದರಿಂದಲೇ ಅದು ಇತರೆ ವಿಧಗಳಿಗಿಂತ ಪ್ರತ್ಯೇಕವಾಗಿ ತನ್ನನ್ನು ತಾನು ಗುರುತಿಸಿಕೊಂಡು ಅಸ್ತಿತ್ವ ಪಡೆದು ವಿಶೇಷ ಎನಿಸಿಕೊಳ್ಳುತ್ತದೆ, ಅಂತೆಯೇ ಗಜಲ್ ಸಹ… ******** ಬಸವರಾಜ ಕಾಸೆ

ಗಝಲ್ ಲೋಕ Read Post »

ಕಾವ್ಯಯಾನ

ಕಾವ್ಯಯಾನ

ರಾಧೆ ಹೇಳಿದ್ದು ಡಾ.ಗೋವಿಂದ ಹೆಗಡೆ 1. ಅವ ನುಡಿಸಿದ್ದು ಕೊಳಲನ್ನು ಅಲ್ಲ ಕಣೇ. ಕವಿಬೆರಳುಗಳಲ್ಲಿ – ನನ್ನನ್ನು ! 2. ರಾಧೆ ಎಂದರೆ ಶ್ಯಾಮ ಶ್ಯಾಮನೆಂದರೆ ರಾಧೆ ಹಾಲು ಮತ್ತದರ ಬಿಳುಪು ಬೇರೆ ಬೇರೆ ಹೇಗೆ ? 3. ನಾನು ಹೆಣ್ಣೇ ಅವ ಗಂಡೇ? ನಾವು ಸಂಧಿಸಿದ್ದು ಬೇರೆಯದೇ ಬಿಂದುವಿನಲ್ಲಿ ಹೆಣ್ಣು ಗಂಡುಗಳಾಗಿ ನಮ್ಮ ನೋಡುವ ಹಾಡುವ ಲೋಕದ ಕುರುಡಿಗೆ ನನ್ನ ಕನಿಕರ ! **

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಗೀಗ ಅಟ್ಟಗಳೆಂದರೆ ಪ್ರೀತಿ ಶೀಲಾ ಭಂಡಾರ್ಕರ್ ಇವತ್ತು ಬೆಳಿಗ್ಗೆಯೇ ಘೋಷಿಸಿ ಬಿಟ್ಟೆ.. ಮನೆಯಲ್ಲಿ ಸ್ವಚ್ಛತಾ ಅಭಿಯಾನ. ತಿಂಡಿಗೆಂದು ಮಾಡಿದ್ದ ಚಿತ್ರಾನ್ನವೇ ಮದ್ಯಾಹ್ನದ ಊಟ.. ಬೇಡವಾದರೆ ಅಲ್ಲೇ ನಾಲ್ಕು ಬಾಳೆಹಣ್ಣು, ಒಂದು ಎಳನೀರಲ್ಲಿ ಹೊಟ್ಟೆ ತುಂಬಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಹೂಂಕರಿಸಿದರು.. ಓದುತ್ತಿದ್ದ ಪೇಪರ್ ನಿಂದ ತಲೆ ಎತ್ತದೆ. ಅವರು ಹೋದ ಮೇಲೆ… ನಿಂತು ಒಮ್ಮೆ ಯೋಚಿಸಿದೆ.. ಎಲ್ಲಿಂದ ಶುರು ಮಾಡಲಿ..! ನಮ್ಮ ಅನುಕೂಲಕ್ಕೆ ಎಂದು ಮನೆಯ ಮೇಲೆ ಮನೆ ಕಟ್ಟಿಸಿದಾಗ ಬೇಕು ಬೇಕು ಎಂದು ಕಟ್ಟಿಸಿದ್ದ ಮುಚ್ಚಿದ್ದ ಬಾಗಿಲಿನ ಹಿಂದಿನ ಎಲ್ಲ ಅಟ್ಟಗಳೂ ಗಹಗಹಿಸಿ ನಕ್ಕಂತಾಯಿತು.. ಏಳು ವರ್ಷದ ಹಿಂದೆ ಮನೆ ಸೇರಿದಾಗ ಮೇಲೆ ಏರಿಸಿದ ಯಾವ ವಸ್ತುವನ್ನೂ ತಿರುಗಿ ನೋಡಿರಲಿಲ್ಲ… ಒಂದೆರಡು ಸಲ ದಿಢೀರ್ ನೆಂಟರು ಬರುತ್ತಾರೆಂದಾದಾಗ ಕೈಗೆ ಸಿಕ್ಕಿದ್ದನ್ನು ಎತ್ತಿ ಅಲ್ಲಿಯೇ ತುರುಕಿದ್ದು ಬಿಟ್ಟರೆ.. ಮುಚ್ಚಿದ್ದು ತೆರೆದಿರಲೇ ಇಲ್ಲ. ನಿಮಗನ್ನಿಸಬಹುದು.. ಮತ್ಯಾಕೆ ಇವತ್ತು ಇಷ್ಟು ಆಸಕ್ತಿ..!? ಏನಿಲ್ಲ.. ನನ್ನದೊಂದು ಪುಸ್ತಕ ಕಾಣಿಸುತ್ತಿಲ್ಲ.. ಯಾರಿಗೆ ಕೊಟ್ಟು ಮರೆತು ಕುಳಿತಿದ್ದೇನೊ ನೆನಪಾಗುತ್ತಿಲ್ಲ… ಹುಡುಕಿ ಹುಡುಕಿ.. ಇನ್ನು ಉಳಿದಿರುವುದು ನಾಲ್ಕು ಕೋಣೆಗಳ ನಾಲ್ಕು ಅಟ್ಟಗಳು. ನನ್ನ ಪುಸ್ತಕವೆಂದರೆ.. ಅದು ನಮ್ಮ ರೂಮಿನ ಅಟ್ಟದ ಮೇಲೆಯೇ ಇರುವ ಸಂಭವ ಹೆಚ್ಚು.. ಹೋಗಿ ..ಮಡಚುವ ಏಣಿ ತಂದಿಟ್ಟೆ. ಒಂದು ಕಡೆಯ ಬಾಗಿಲು ತೆರೆದಾಕ್ಷಣ ದೊಪ್ಪೆಂದು ತಲೆಯ ಮೇಲೊಂದು ಮೂಟೆ ಬಿತ್ತು.. ಹಾಗೇ… ನೆಲದ ಮೇಲೆ ಬಿದ್ದಿರಲಿ. ಆಮೇಲೆ ನೋಡಿದರಾಯಿತು … ಉಳಿದ ಸಾಮಾನುಗಳ ಮೇಲೆ ದೃಷ್ಟಿ ಹಾಯಿಸಿದರೆ.. ಬರಿಯ ಹಾಸಿಗೆ ದಿಂಬುಗಳು.. ಅದರಲ್ಲೊಂದು ಮದುವೆಯಾದಾಗ ತವರಿನಿಂದ ಕೊಟ್ಟ ಹಾಸಿಗೆ.. ನೆನಪಿಗಿರಲಿ ಎಂದು ಇಟ್ಟು ಮರೆತು ಹೋಗಿ ವರುಷಗಳಾಗಿವೆ ಏಳು. ತವರು ಮನೆಯ ನೆನಪಿನ ಅಕ್ಕರೆಯಿಂದ ಕೈಯಾಡಿಸಿದೆ ಮೆತ್ತಗೆ. ಹಳೆಯ ಬಟ್ಟೆ ಮುಚ್ಚಿಟ್ಟು ಕುಂಬಾಗಿ ಬಂತೊಂದು ಚೂರು ಕೈಗೆ. ಮನಸ್ಸು ಹೋಯ್ತು ಇಪ್ಪತ್ನಾಲ್ಕು ವರ್ಷಗಳ ಹಿಂದೆ.. ಇನ್ನಿವತ್ತು ಇಲ್ಲ ಹುಡುಕುವ ಕೆಲಸ ಆಗುವ ಸೂಚನೆ ಎಂದು ಅಟ್ಟದ ಬಾಗಿಲು ಮುಚ್ಚಿ ಏಣಿಯಿಂದ ಇಳಿದೆ ಮೆಲ್ಲನೆ. ಕೆಳಗೆ ಬಿದ್ದ ಮೂಟೆಯನ್ನು ಬಿಚ್ಚಿ ನೋಡಿದರೆ.. ಯಪ್ಪಾ…….. ನಾಲ್ಕು ವರ್ಷದಿಂದ ಹುಡುಕಿ ಆಸೆ ಬಿಟ್ಟು ಬಿಟ್ಟಿದ್ದ ನನ್ನದೊಂದು ಇನ್ನೂ ಉಡದ ಸೀರೆ… ನಾಡಿದ್ದು ಸತ್ಯನಾರಾಯಣ ಪೂಜೆಗೆ ಹೋಗುವಾಗ ಉಡಲೊಂದು ಹೊಸ ಸೀರೆಯಾಯ್ತು.. ಒಂದು ಚಿಂತೆ ಕಳೆಯಿತು.. ಒಂದೊಂದಾಗಿ ಸಿಕ್ಕಿದವು.. ಒಂದರ ಹಿಂದೆ ಒಂದು ಕಳೆದು ಹೋಗಿತ್ತು ಎಂದುಕೊಂಡಿದ್ದ ಎಷ್ಟೊಂದು ಅಮೂಲ್ಯ ವಸ್ತುಗಳು ಜತೆಗೆ ಅದರ ಜತೆಗಿನ ನೆನಪುಗಳು… ಅಡಿಯಲ್ಲಿತ್ತು ನನ್ನ ಆ ಪುಸ್ತಕ.. ದಿನ ಭವಿಷ್ಯದ ಅನಿರೀಕ್ಷಿತ ಲಾಭ ಅಂದರೆ ಇದೇ ಏನೊ ಅಂದ ಹಾಗಾಯಿತು ನನಗೀಗ. ಮನೆಗಳಲ್ಲಿ ಸರಂಜಾಮುಗಳು ಜಾಸ್ತಿಯಾಗಲು ಕಾರಣ.. ಆಲಸ್ಯವಲ್ಲ… ಅದರ ಜತೆಗೆ ಜೋಡಿಸಲ್ಪಟ್ಟಿರುವ ಅನೇಕ ಸವಿ ನೆನಪುಗಳು, ನವಿರಾದ ಭಾವನೆಗಳು. ನಮ್ಮನ್ನು ಆ ವಸ್ತುವಿನ ಆ ಕಾಲಕ್ಕೆ ಕೊಂಡೊಯ್ಯುವ ಕಾಲ ಯಂತ್ರಗಳು. ಎಸೆಯಲು ಬಿಡದೆ ನಮ್ಮನ್ನು ಕಟ್ಟಿಹಾಕಿ ತುಂಬಿಕೊಳ್ಳುತ್ತವೆ ಮನೆ ತುಂಬ. ಇನ್ನೂ ಇವೆ ಬಾಕಿ.. ಮೂರು ಅಟ್ಟಗಳು .. ಮುಂದಿನ ಜೀವನಕ್ಕಾದೀತು.. ದಿನ ಕಳೆಯುವ ಸಾಧನ. ನೆನಪುಗಳ ದಾಸ್ತಾನು. ನನಗೀಗ ಅಟ್ಟಗಳೆಂದರೆ ಬಲು ಪ್ರೀತಿ. ********

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಕೊನೆಯ ಕಂತು ಸಮಸ್ಯೆ ಉಳಿದಿದೆ ಬಾಗಿಲು ತೆರೆದಿದೆ… ಕೊರೊನಾ ಆತಂಕವನ್ನು ಕಟ್ಟಿಟ್ಟು ಅದೆಷ್ಟೋ ಮನೆಗಳ, ಅಂಗಡಿಗಳ ಬಾಗಿಲು ಮತ್ತೆ ಮೊದಲಿನಂತೆಯೇ ತೆರೆದಿವೆ! ಒಂದೆಡೆ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದಾಯರಹಿತ ಜೀವನ ನಡೆಸಲಾಗುವುದಿಲ್ಲ, ಹಸಿವಿನಿಂದಲೇ ಹಲವರು ಸಾಯಬಹುದು ಎನ್ನುವ, ಎಲ್ಲವೂ ಪುನರಾರಂಭಗೊಳ್ಳಬೇಕು ಎನ್ನುವ ಒತ್ತಡ, ಒತ್ತಾಯದಿಂದ ತೆರೆದಿರುವ ಬಾಗಿಲುಗಳು ಬದುಕಿನ ಆತಂಕಗಳನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತಿದೆ. ಮತ್ತದೇ ಭೋಗ ಜೀವನವನ್ನು ಬಾಚಿ ತಬ್ಬಿಕೊಳ್ಳುವ ಹಲವರ ನಡೆ ‘ನಾಯಿಯ ಬಾಲ ನಳಿಗೆಯಲ್ಲಿ ಹಾಕಿದರೂ ಡೊಂಕು’ ಎನ್ನುವ ಮಾತನ್ನು ನೆನಪಿಸುತ್ತಿದೆ. ‘ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ’ ಎಂದು ಎಚ್ಚರಿಸುವ ಮಾಧ್ಯಮಗಳ ಮಾತು ಬರಹ ಗಮನಿಸುವ ವ್ಯವಧಾನ ಕೆಲವರಲ್ಲಷ್ಟೇ ಉಳಿದಿದೆ. ಇಷ್ಟು ದಿನವೂ ತಮ್ಮ ಬದುಕನ್ನು ಪಣವಾಗಿಟ್ಟು ದುಡಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ನರ್ಸ ಗಳು ಎಲ್ಲಕ್ಕಿಂತ ಮುಖ್ಯವಾಗಿ ಡಾಕ್ಟರುಗಳ ತ್ಯಾಗ, ಸಂಯಮ, ಸೇವೆಯ ಫಲವಾಗಿ ಅನೇಕರು ಕೊರೋನಾದಿಂದ ಗುಣಮುಖರಾಗಿದ್ದಾರೆ. ಆದರೆ ಜನರ ವಿವೇಚನಾರಹಿತ ವ್ಯವಹಾರದಿಂದ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುವ ಡಾಕ್ಟರುಗಳ ತಾಳ್ಮೆಯನ್ನು ನಿಕಷಕ್ಕೊಡ್ಡುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ. ಹೆಣ ಸುಡುವ ಬೆಂಕಿಯಲ್ಲಿ ಅಡುಗೆ ಬೇಯಿಸಲೆತ್ನಿಸುವ ರಾಜಕೀಯದವರ ನಡೆ ವಾಕರಿಕೆ ಹುಟ್ಟಿಸುತ್ತಿದೆ. ಸತ್ತವರು ಒಂದು ಸಮುದಾಯದವರಾದರೆ ಎಡಗಣ್ಣಿನಲ್ಲಿ ನೀರು, ಸತ್ತವರು ಇನ್ನೊಂದು ಸಮುದಾಯದವರಾದರೆ ಬಲಗಣ್ಣಿನಲ್ಲಿ ನೀರು..ತಥ್.. ಸಿದ್ಧಾಂತದಲ್ಲಿ ಸಿಲುಕಿದವರಿಗೆ ಅರ್ಥವಾಗುವುದು ಅರೆಬರೆ ಬೆಂದ, ಅರ್ಧಸತ್ಯಗಳು ಮಾತ್ರ. . ನಿಜವಾಗಿಯೂ ಮಾನವೀಯತೆ ಇದ್ದರೆ ಎಡ ಬಲಗಳ ಹಂಗು ಹರಿದು ಎಲ್ಲ ಅನ್ಯಾಯವನ್ನು ಪ್ರಶ್ನಿಸಿ, ಎಲ್ಲರ ಕಷ್ಟಕ್ಕೂ ಸ್ಪಂದಿಸುವಂತಾಗಲಿ. ತೆರೆದ ಬಾಗಿಲಿನಾಚೆ ವೈರಾಣುವಿನ ರೂಪದಲ್ಲಿ ಸಾವು ಹೊಂಚು ಹಾಕುತ್ತಲೇ ಇದೆ.. ಜಾತಿ ಮತ ಬೇಧಭಾವ ಮಾಡದೇ ಯಾರನ್ನು ಆವರಿಸಲಿ ಎಂದು ಕಾಯುತ್ತಿದೆ. ಸಾಮರಸ್ಯವೆನ್ನುವುದು ಕಟ್ಟಲಾರದ ಕವಿತೆಯಾಗದಿರಲಿ. ನಮ್ಮನ್ನು ನಾವು ಕಾಪಾಡಿಕೊಳ್ಳುವ, ದೇಶ ಉಳಿಸುವ ಸಂಯಮ ಬದುಕಿನ ಗೀತವಾಗಲಿ. ****** ಮುಗಿಯಿತು ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಥಾಗುಚ್ಛ

ಕಥಾಯಾನ

ಹದಿನೆಂಟು ವರುಷದ ಬಳಿಕ ಸಿಕ್ಕವಳು… ಮಲ್ಲಿಕಾರ್ಜುನ ಕಡಕೋಳ ಹದಿನೆಂಟು ವರುಷದ ಬಳಿಕ ಸಿಕ್ಕವಳು…  ಆದರೆ ಮೊನ್ನೆ ಸಂಜೆ ಸಿಕ್ಕಾಗ  ತುಂಬಾನೇ ಚೆಂದ ಕಾಣಿಸುತ್ತಿದ್ದಳು.  ಹದಿನೆಂಟು ವರುಷಗಳ ಹಿಂದೆ ಅವಳಿಗೆ  ಹದಿನೆಂಟರ ಹದಿಹರೆಯ. ತೆಳ್ಳಗೆ., ಸಜ್ಜೆ ಬಣ್ಣದ ಸಾದಗಪ್ಪಿನ ಸುಂದರಿ.  ಹದಿನೆಂಟು ವರುಷಗಳ ಹಿಂದೆ ದಾವಲ್ ಮಲೀಕನ ಯಂಕಂಚಿ ಜಾತ್ರೆಯಲಿ  ಸಿಕ್ಕವಳು., ಮೊನ್ನೆ ಸಂಜೆ ತಂಗಾಳಿ ತೇಲಿ ಬರುವ ಹೊತ್ತಲಿ ಸಡನ್ನಾಗಿ ಸಿಕ್ಕಳು. ಇಪ್ಪತ್ತು ವರುಷಗಳ ಹಿಂದೆ ಮೊದಲ ಭೆಟ್ಟಿಯಲಿ ಹುಟ್ಟಿಕೊಂಡ ಹಿರಿ ಹಿರಿ  ಹಿಗ್ಗುವ ಸಂತಸವೇ ಮೊನ್ನೆ ಮತ್ತೆ  ನಮ್ಮಲ್ಲಿ ಚೇತನಗೊಂಡಿತು. ಏಕಕಾಲಕ್ಕೆ ನಮ್ಮಿಬ್ಬರಿಗೂ ಕ್ಷಿಪ್ರ ಕ್ರಾಂತಿಯ ಪರಮ ಅಚ್ಟರಿ!! ಸಿನೆಮಾ  ಕತೆಗಳಲ್ಲಂತೆ  ಕ್ಷಣಕಾಲ ಸ್ಟಿಲ್ಲಾದೆವು. ಲಗಾಮು ತುಳಿದು ನನ್ನ ಕಪ್ಪು ಕುದುರೆ  ತರುಬಿದೆ. ಕುದುರೆಯೆಂದರೆ  ಕುದುರೆಯಲ್ಲ. ಕಪ್ಪು ಕಲರಿನ  ಹೀರೋ  ಹೊಂಡಾ….  ಜಾಂಬಳ ವರ್ಣದ ಕಾಟನ್ ಸೀರೆ, ತಿಳಿ ಅರಿಶಿಣ ಬಣ್ಣದಂಚಿನ ಕೆಂಪು ಕುಪ್ಪಸ  ಅವಳ ತುಂಬಿದ ಮೈ ತುಂಬಿಕೊಂಡಿದ್ದವು. ತಲೆತುಂಬಾ ಅರೆನೆರೆತ ಕೂದಲು. ಥೇಟ್  ಹಳ್ಳಿಯ ಮುಗುದೆ – ಗೌಡತಿಯಂತೆ  ಜವಾರಿತನ ಬದುಕಿದ್ದಳು. ಅದಕ್ಕೆ ನಾನು ಆರಂಭಕ್ಕೇ ಹೇಳಿದ್ದು ಚೆಂದ ಕಾಣಿಸುತ್ತಿದ್ದಳೆಂದು. ಖರೇ ಖರೇನ ಹೇಳ್ತಿದೀನಿ….ಮೊದಲಿಗಿಂತ ಈಗಲೇ ಹೆಚ್ಚು ಚೆಂದ ಕಂಡಳು. ಅದನ್ನವಳಿಗೂ  ಹೇಳಿದೆ.  ಯಾವಾಗ ಬಂದೆ..? ಕೇಳಿದಳು. ನನಗೇನೋ….ಕೇಳಿದಂತಾಗಿ  ಏನುತ್ತರಿಸಿದೆನೋ..! ನೆನಪು ಹಾರಿ ಹೋಯಿತು. ಆಕೆ ಸಂಜೆಯ ವಾಕಿಂಗ್  ಮುಗಿಸಿ  ತೋಟದ ಮನೆ ಕಡೆಗೆ ಹೊರಟಂತಿತ್ತು. ಮನಸಿನ ತೊಗಲು ಹರಿದು ಸ್ಪರ್ಶಿಸಲಾಗದ  ಸುಖವೇ  ಅನರ್ಘ್ಯವೆಂದು ಹೆಸರಿಲ್ಲದ ಹಸಿವುಗಳನ್ನು ಅನೇಕ ಬಾರಿ ಪರಸ್ಪರ ಉಸುರಿ ಕೊಂಡವರು. ಹೀಗೇ ಇಬ್ಬರೂ ಒಂದೇ ನೋವಿನ ದೋಣಿಯಲಿ  ಪಯಣಿಸಿಬಂದ ಲೋಕಚರಿತರಂತೆ ಅದೆಷ್ಟೋ ಕಾಲ ಚರ್ಚಿಸಿದವರು. ದಂಗೆಕೋರ ಪ್ರೇಮಿಗಳಂತೆ ಸರಸ ಪ್ರೇಮಕೆ ಸನ್ಯಾಸ ದೀಕ್ಷೆ ಪಡೆದು, ನಕ್ಷತ್ರದೊಳಗಣ ವಿಮಲ ಸರೋವರದ ಕನಸುಗಳ ಕಂಡವರು ನಾವು.  ನೆನಪಿದೆಯಾ  ನಿನಗೆ  ? ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ಮರುಳ ಮನೆಗಳ ಕಟ್ಟಿ ಆಟವಾಡಿದ ದಿವಸ ನೆನಪಿದೆಯಾ ನಿನಗೆ ?   ಯಾಕೋ ಗೊತ್ತಿಲ್ಲ…ಜಿಎಸೆಸ್ ಅವರ ಈ ಕವಿತೆ ಗಾಢವಾಗಿ ಕಾಡ ತೊಡಗಿತು. ಹೌದು, ನಾವಿಬ್ಬರು ಕೆಂಪುಹಳ್ಳದ  ಹುರುಮಂಜಿನಂತಹ ಉಸುಕಿನಲಿ  ‘ಗುಬ್ಬಿಮನೆ’ ಕಟ್ಟಿ ಗಂಡ – ಹೆಂಡತಿಯಾಗಿ ಆಡಿದ ಎಲ್ಲ ಆಟಗಳು ನೆನಪಾದವು.  ನನಗೆ ಈಜು ಬರ್ತಿರ್ಲಿಲ್ಲ. ಅದು ಮೂರು ಹಳ್ಳಗಳು ಕೂಡುವಲ್ಲಿರುವ  ಭಯಾನಕ  ಸೆಳೆತದ ಸುಳಿ ಮಡುವು. ಅಂತಹ ಕರಿನೀರಿನ ಮಡುವಲ್ಲಿ ಆಳಕ್ಕೆ ಉಸಿರು ಕಟ್ಟಿ ಮುಳು ಮುಳುಗೇಳಿ ಬರುತ್ತಿದ್ದಾಕೆ  ಒಮ್ಮೆ ನನ್ನನ್ನು ಎಳಕೊಂಡು  ಮುಳುಗೆದ್ದಿದ್ದಳು. ಅವಳಂತರಂಗದ ಜೀವಶಿಲ್ಪಕ್ಕೆ ಸಂಪೂರ್ಣ ಸಮರ್ಪಿಸಿಕೊಂಡೆ. ಹದಿನೆಂಟರ ಮೊದಲ ಹರೆಯಕ್ಕೆ ಧನ್ಯತೆಯ ಸಲಾಮು ಸಲ್ಲಿಸಿದೆ. ಗೊತ್ತಿಲ್ಲ ನನಗೆ ನನ್ನವ್ವ ಪುರಾಣ ಕತೆಗಳಂತೆ ಹೇಳುತ್ತಿದ್ದ “ಜಕಣಿ ಜಲ ದೇವತೆಯರು” ಆಗ ನೆನಪಾಗಿದ್ದರು.   ಏನಾಗಿದೆ ನಿನಗೆ..? ಆಗೆಲ್ಲಾ ಲಂಕೇಶ್,  ಮಾರ್ಕ್ಸ್, ಮಾರ್ಕ್ವೆಜ್..ಅಂತಿದ್ದಿ…  ” ನನ್ನವ್ವ  ಫಲವತ್ತಾದ ಕಪ್ಪು ನೆಲ… ಬನದ ಕರಡಿಯ ಹಾಗೆ ಚಿಕ್ಕಮಕ್ಕಳ  ಹೊತ್ತು ಸಾಕಿದಾಕೆ…” ಲಂಕೇಶರ ಸಾಲುಗಳೋದಿ ಏನೇನೋ ಹೇಳಾಂವ ಯಾಕೆ ಏನಾಗಿದೆ ನಿನಗೀಗ…? ನಾನಂದು ಕಂಡ ಕನಸಿನ ಗಂಧರ್ವ ಕಿಂಪುರುಷ ನೀನೇನಾ…? ಎಂದು  ಗೊಣಗಿ, ಗುದ್ದಾಡುವ ದನಿಯಲಿ  ಕೊಡವಿ ಬಿಟ್ಟಳು.  ಹಿಂದೊಮ್ಮೆ  ನಾವಿಬ್ಬರೂ…ಹುಯ್ದ ಚಿತ್ತೆ ಮಳೆಯಲಿ  ತೋಯ್ದುಡುಗೆಯಲೇ ಘತ್ತರಗಿ  ಅಮ್ಮನ ಸನ್ನಿಧಿಯಲಿ ನಿಂತಾಗ…  ” ಬದುಕು – ಬರಹಗಳನ್ನು ವ್ರತದಂತೆ  ಪಾಲಿಸುವ ನೀನೊಬ್ಬ ಹೇತ್ಲಾಂಡಿ ” ಅಂತ, ಅವಳೇ ಕಾರ್ಣಿಕ ನುಡಿದದ್ದು  ಬಡಬಡಿಸಿಕೊಂಡೆ. ಕುದುರೆಯಿಂದ  ಕೆಳಗಿಳಿದು ತುಡುಗು ಮಾಡಿದ ಪಾಪದ ಹುಡುಗನಂತೆ  ಹಂಗೇ ನಿಂತಿದ್ದೆ. ಒಂದುಬಗೆಯ ಜೀವ ಖಜೀಲಾದ ಸ್ಥಿತಿ ನನ್ನದಾಗಿತ್ತು. ಅವಳೆಲ್ಲ ಮಾತುಗಳಿಗೆ ಕಿವಿಯಾಗಿ ನಿಂತೇ ಇದ್ದೆ. “ನಾನೂನು ಇಲ್ಲ ನೀನೂನು ಇಲ್ಲ…ತನ್ನ  ತಾನರಿತವಗೆ ಬೇರೇನೂ ಇಲ್ಲ..” ಅಲ್ಲಮನ ವಚನ ಆಗಸದ ಅಶರೀರವಾಣಿಯಿಂದ ಶಾರೀರಗೊಂಡಿತು. “…ಆ ಕೆಂಪುಹಳ್ಳ ಮುತ್ತೈದೆಯಂತೆ  ಮೈತುಂಬಿ, ಮುಂಚಿನಂತೆ ಹರಿಯುತ್ತಿಲ್ಲ. ಹಳ್ಳದೆದೆಯ ನರ ನಾಡಿಗಳಲ್ಲಿ ಸರ್ಕಾರ ಜಾಲಿಯ ಮುಳ್ಳು ಕಂಟಿಗಳೇ ತುಂಬಿಕೊಂಡಿವೆ. ನಾವು ಆಟವಾಡಿದ  ಸ್ಮಾರಕದ ಆ ಜಾಗ ಎಲ್ಲಿ ಮಾಯವಾಗಿದೆಯೋ ತಿಳಿಯುತ್ತಿಲ್ಲ…” ಇದೆಲ್ಲ ನನ್ನೊಳಗೆ ನಾನೇ ಮಾತಾಡಿಕೊಂಡೆ. ಅವಳದು ಮುಂಚಿನಿಂದಲೂ ಲಿಪಿಗಿಂತ  ಲಿಪ್ಲಾಂಗ್ವೇಜ್ ಅಧಿಕ. ಹೀಗಾಗಿ ನನ್ನ ವಾಟ್ಸ್ಯಾಪ್, ಫೇಸ್ಬುಕ್ ಬರಹ  ನೋಡೋದಿಲ್ಲವೆಂದು  ಖಡಾಖಂಡಿತ ಧಾಟಿಯಲಿ ಉಲಿದಳು. ಪ್ಲಾಸ್ಟಿಕ್  ಬ್ಯಾಟೊಂದನ್ನು ಹಿಡಕೊಂಡು ಪುಟ್ಟ  ಬಾಲಕನೊಬ್ಬ ಅದೇ ರಸ್ತೆಯಲಿ  ಆಟವಾಡಿಕೊಂಡಂತೆ ಬರುತ್ತಿದ್ದ. ಹತ್ತಿರಕೆ ಬಂದು ಯಾರ್ಮಮ್ಮೀ ಇವ್ರು ? ಕೇಳಿತು ಮಗು. ನಾನು ಯಾರೀ ಮಗು ಎಂದು ಕೇಳುವ ಮುನ್ನವೇ…ತನ್ನ ಗಂಡನ  ಹೆಸರು ಹೇಳಿ,  ಹೌದು ಅವನ ಹಸಿತ್ಯಾಜ್ಯದ  ಫಲವೇ ಇವನು, ಎಂದು ಮಗನತ್ತ ತೋರಿಸಿದಳು. ಅವಳ  ಮಾತಲ್ಲಿ ವಿಷಾದಪೂರಿತ ವ್ಯಂಗ್ಯವಿತ್ತು. ಅಷ್ಟೊತ್ತಿಗೆ ಮಗು ಆಡುತ್ತಾಡುತ್ತಾ  ದೂರ ಚಲಿಸಿತ್ತು.   ಸೂರ್ಯ ತಾಯಿಹೊಟ್ಟೆ ಸೇರಿ ಕಣ್ನಸುಕು  ಮುಸುಕಿ, ಮೋಡ ಗುಡುಗುಗಳ ಕಗ್ಗತ್ತಲು ಘೋರಿಸಿತು. ಕಣ್ಣಳತೆಗೂ  ದೂರದ ತೋಟದ ಮನೆಯ ಕಡೆಯಿಂದ ಮಾಟದ ದೀವಟಿಗೆಯ ಕೋಲ್ಮಿಂಚಿನ ಸೆಳಕು ಬೀಸಿದಂತಾಯಿತು. ನನಗೇಕೋ ಸೂರ್ಯನಿಲ್ಲದ ಸುತ್ತಲಿನ ಕತ್ತಲೆಗಿಂತ  ಕೆಂಪಗೆ ಕಾದ ಛಡಿಗಳ ಭಯದ ಕತ್ತಲು ಎದೆಯ ತುಂಬ ತುಳುಕ ತೊಡಗಿತು. ನಾಳೆ “ಮತ್ತೆ ಭೆಟ್ಟಿಯಾಗೋಣವೆಂದು” ಕಪ್ಪು ಕುದುರೆಯ ಲಗಾಮಿಗೆ ಕಿಕ್ ಹೊಡೆದು  ಕತ್ತಲೆ ಸೀಳಿಕೊಳ್ಳುತ್ತ ಅರವತ್ತರ  ವೇಗದಲ್ಲಿ ಕುದುರೆ ಓಡಿಸತೊಡಗಿದೆ. ನನ್ನೊಳಗೆ ಅವಳು ಚೆಲುವ ಪರಿಮಳ ಅರಳಿಸುತ್ತ ದೇವಕನ್ನಿಕೆಯಾಗಿ…ಅನುಭವಿಸುತ್ತಲೇ ಹಿಂಬಾಲಿಸಿದಳು…ನಾನು ಕನ್ಯ ಸಿಸುಮಗನಂತೆ ಅರವತ್ತರ ವೇಗದಲ್ಲಿ ಸಾಗುತ್ತಲೇ ಇದ್ದೆ. *******  

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ಆ ಕವಿತೆ ಇದಲ್ಲ. ಪೂರ್ಣಿಮ ಸುರೇಶ್ ಆ ಕವಿತೆ ಇದಲ್ಲ ‌‌‌ ನೀನು ಹಕ್ಕಿಯ ಬಗ್ಗೆ, ನದಿಯ ಬಗ್ಗೆ , ಚಿಟ್ಟೆ ಮರ,ಎಲೆಯ ಬಗ್ಗೆ ಕವಿತೆ ಹೊಸೆಯುವಿಯಲ್ಲ.. ಪ್ರಣಯ ಕಾಡಲಾರದೇ? ನೇರ ಪ್ರಶ್ನೆ.,. ಬಿಡಿ ನನಗೂ ಪ್ರಶ್ನೆ ಆಗುವುದು ಇಷ್ಟ. ನಡು ವಯಸ್ಸಿಗೆ ಅದೆಂತಹ ಪ್ರಣಯ ಎಂದೆ ನಿನಗೆ ಗೊತ್ತಾ ನಿನ್ನ ನಡು ಚೆಂದ ಒಮ್ಮೆ ಪುಟ್ಟ ಉನ್ಮಾದ ಬೇಕಿದ್ದರೆ ನಾ ಕ್ಲಿಕ್ಕಿಸಲೇ ಆ ಚಿತ್ರ ನೋಡು, ನಾಚಿದೆಯಾ.. ಬಿಡು, ಕಾಡುವ ಭಾವ ನೀನು ಹೆಕ್ಕಲಾರೆ ಛೇಡಿಸಿದ: ಎಲ್ಲೋ ಗರ್ಭದೊಳಗಿನ ನಗೆ ಕಿವಿಯ ಸುತ್ತ ಕಚಕುಳಿ ಇಟ್ಟಿತು ಊರು ಉರುಳೀತು ನಿಲ್ಲಿಸೋ ನಗೆ ಗೋಗೆರೆದೆ ಮುತ್ತಿನ ಸರಪಳಿ ಎಲ್ಲಿಗೆ ತೊಡಿಸಲಿ? ಮತ್ತೆ ಮತ್ತೆ ನಗು.. ಕರುವಿನ ಕಿವಿಗೆ ಗಾಳಿ ಊದಿದರೆ.,. ಪೋಲಿ ನಗು ತಾವರೆಯ ಕೆಂಪಾಗಿಸಿ ಬೊಗಸೆಯಲ್ಲಿ ತುಂಬಿ ಕವಿತೆ ಎಂದರೇನೇ.. ಜುಂ ಎನಿಸುತ್ತಾನೆ ಕವಿತೆಯ ಎಸಳು ಎಸಳು ತೆರೆದು ಘಮ ನೇವರಿಸುತ್ತಾನೆ ತಾವರೆ ದಂಟು ಬೆನ್ನ ಹುರಿಗೆ ಕಸಿ ಮಾಡುತ್ತಾನೆ ಮುತ್ತು ಮತ್ತು,.. ತೆರೆದುಕೋ ಕವಿತೆ ಗುಂಗಿನ ಗುನುಗು ಬೇಡ, ನನ್ನ ಅವನ ಪ್ರಣಯವನ್ನು ಕವಿತೆಯಲ್ಲಿ ಜಾಲಾಡದಿರಿ ನಾನು ಆ ಕವಿತೆ ಹೆಣೆಯಲಾರೆ ****** .

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಾಲ ಅರುಣ್ ಕೊಪ್ಪ ಮಳೆ ,ಚಳಿ ,ಬಿಸಿಲೂ ಮೀರಿ ಏನು ಈ ಬಾಳ ರಹದಾರಿ ಹೋಯಿತು ಕೈ ಮೀರಿ ಗ್ರಹ ಬಂಧನ, ಮೈ ಕೈ ಪರಚಿ ಚೀರಿ ಎಲ್ಲಿಗೆ ನಿನ್ನ ಸವಾರಿ ಕೊರೊನಾ ಕವಿದೆ ನೀ ಅಂಧಕಾರಿ! ಅವಳು ನಾನಿಲ್ಲದ ಅವಳಲ್ಲ ಇಂದು ಇವಳು ಪಡುತಿಲ್ಲ ಗೋಳು ಇಲ್ಲ ಕಣ್ಣೀರ ಕೂಳು ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೀನೆತ್ತಿ ಮುಡಿದ ಹೂವಿನ ಎಸಳಾಗಿಸು ನನ್ನ ನಿನ್ನ ಬಿಡುಗಣ್ಣ ಕರೆಯಲ್ಲಿ ಹರಳಾಗಿಸು ನನ್ನ ಎದ್ದೆದ್ದು ಬೀಳುತ್ತ ಮೊರೆಯುತ್ತಿದೆ ಕಡಲು ಸತತ ನಿನ್ನ ಎದೆಯಲ್ಲೊಂದು ಮೃದು ಅಲೆಯಾಗಿಸು ನನ್ನ ನಿನ್ನ ಗುಲಾಬಿ ಪಾದಗಳು ರಸ್ತೆಯನಿಡೀ ತುಳಿದಿವೆ ದಣಿದ ಕಾಲುಗಳನ್ನು ಒತ್ತುವ ಬೆರಳಾಗಿಸು ನನ್ನ ಕತ್ತಲ ರಾತ್ರಿಯಲ್ಲಿ ಚುಕ್ಕಿಗಳ ಎಣಿಸುತ್ತಿರುವೆ ನಿನ್ನ ಕಣ್ಣು ಚುಚ್ಚದಂತೆ ಹಗೂರ ಮಿನುಗಿಸು ನನ್ನ ದುಗುಡ ಮೋಡಗಳು ಆವರಿಸಿ ಮನಸಾಗಿದೆ ಕ್ಷುಬ್ಧ ಚದುರಿಸಿ ಮುದ ತರುವ ತಂಗಾಳಿಯಾಗಿಸು ನನ್ನ ಎಷ್ಟೊಂದು ಮಾತುಗಳ ಎಡಬಿಡದೆ ಎರಚಿರುವೆ ‘ಜಂಗಮ’ ನಿನ್ನ ತುಟಿಗಳಲಿ ಅರೆ ಚಣದ ಮೌನವಾಗಿಸು ನನ್ನ *********

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-13 ಅವರ ಒಡಲು ತಣ್ಣಗಾಗಲಿ.. ಭೂಮಿಯನ್ನು ತಾಯಿ ಎನ್ನುತ್ತೇವೆ. ನಮ್ಮೊಡಲನ್ನು ಅನುದಿನವೂ ತುಂಬಿಸಿಕೊಳ್ಳುವುದು ಭೂಮಿಯಲ್ಲಿ ಬೆಳೆದ ಬೆಳೆಯಿಂದಲೇ.. ವಿವೇಚನಾರಹಿತವಾಗಿ ನಾವು ಸುರಿಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದ, ರಾಸಾಯನಿಕಗಳಿಂದ , ಕಟ್ಟಡಗಳ ತ್ಯಾಜ್ಯದಿಂದ ನಾನಿನ್ನು ಬೆಳೆಯನ್ನು ಬೆಳೆಸುವ ಸಾಮರ್ಥ್ಯ ಕಳೆದುಕೊಂಡಿದ್ದೇನೆ ಎಂದು ಭೂಮಿ ಘೋಷಿಸಿದರೆ ನಾವುಳಿಯಲಾದೀತೆ? ಪ್ರಕೃತಿ ಮನುಜರ ಆಸೆ ಪೂರೈಸುತ್ತದೆ ದಿಟ. ದುರಾಸೆ ಮಾಡುತ್ತಿರುವ ಕಾರಣದಿಂದಲ್ಲವೇ ಇಂತಹ ಲಾಕ್ಡೌನ್ ಎದುರಿಸಬೇಕಾಗಿ ಬಂದಿದ್ದು. ಇದು ಪ್ರಕೃತಿ ನೀಡುತ್ತಿರುವ ಬಲವಾದ ಎಚ್ಚರಿಕೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಜೀವನ ಶೈಲಿ ಬದಲಿಸಿಕೊಳ್ಳದಿದ್ದರೆ ಇನ್ನೂ ಕಠಿಣ ದಿನಗಳನ್ನು ಎದುರಿಸಬೇಕಾಗಿ ಬರಬಹುದು… ಬದುಕು ಬದಲಾಗಬೇಕು ಎಂದು ವಿಚಾರ ಮಾಡುತ್ತಲೇ ಹುಡುಕಲಾರಂಭಿಸಿದೆ.. ಎಲ್ಲವೂ ಖಾಲಿಯಾದ ಬಿಂದಿ ಪ್ಯಾಕೆಟ್ಟುಗಳೇ..ಹಳೆಯ ಪರ್ಸು, ಬ್ಯಾಗು.. ಎಲ್ಲವನ್ನೂ ತಡಕಾಡಿದರೂ ಬಿಂದಿ( ಟಿಕಲಿ) ಪ್ಯಾಕೆಟ್ಟು ಸಿಗಲಿಲ್ಲ.. ನಾನು ಬಳಸುವ ಏಕೈಕ ಅಲಂಕಾರಿಕ ವಸ್ತು.. ಅದೂ ಖಾಲಿಯಾಯ್ತೇ ಅಕಟಕಟಾ. .. ಚಿಕ್ಕಂದಿನಲ್ಲಿ ಹಚ್ಚಿಕೊಳ್ಳುತ್ತಿದ್ದಂತೆ ಬಾಟ್ಲಿ ಕುಂಕುಮದ ಬಾಟ್ಲಿಯೂ ಇಲ್ಲ. ನಮ್ಮ ಅತ್ತೆಯಂತೆ ತೆಳ್ಳಗೆ ಗುಂಡಗೆ ಬೆಣ್ಣೆ ಸವರಿಕೊಂಡು ಪುಡಿ ಕುಂಕುಮವನ್ನೇ ಇಟ್ಟುಕೊಳ್ಳುವ ಕಲೆಯೂ ನನಗೆ ಸಿದ್ಧಿಸಿಲ್ಲ..ಅಯ್ಯೋ ನಾನು ಈಗ ಟಿಕಲಿ ಬಡವಂತೆ. ನಿಮ್ಮದೇ ಅದೃಷ್ಟ ಇಂತಹ ತಲೆಬಿಸಿ ಇಲ್ಲ ಎಂದು ಗಂಡ, ಮಕ್ಕಳಿಬ್ಬರ ಹಣೆ ದಿಟ್ಟಿಸುತ್ತಾ ಹಲುಬುತ್ತ ಕರುಬಿದೆ. .ಹಳೆ ಟಿಕಲಿಗಳನ್ನೆಲ್ಲ ಬಚ್ಚಲು ಮನೆಯ ಗೋಡೆಯ ಮೇಲೆ ಚಿತ್ತಾರದಂತೆ ಅಂಟಿಸುವ ಅಮ್ಮನ ನೆನಪಾಯಿತು. ಅವಳ ಬಳಿ ಟಿಕಲಿ ಖಾಲಿ ಆದರೆ ಅದನ್ನೇ ಕಿತ್ತು ಮತ್ತೆ ಹಣೆಗಿಟ್ಟುಕೊಳ್ಳಬಹುದಾ? ನಗು ಬಂತು.. ಅಷ್ಟರಲ್ಲಿ ಮಡಚಿಟ್ಟ ಸೀರೆ ಮಡಿಕೆಯೊಳಗಿಂದ ಎಂದೋ ಇಟ್ಟ ಟಿಕಲಿ ಪ್ಯಾಕೆಟ್ಟೊಂದು ಪಟ್ಟನೆ ಉದುರಿ ಸಿಕ್ಕಿಯೇ ಬಿಟ್ಟಿತು.. ಅಬ್ಬಾ ಬೋಳು ಹಣೆಯಲ್ಲಿ ಇರುವುದು ತಪ್ಪಿತಲ್ಲ ಇದು ಖರ್ಚಾಗುವಷ್ಟರಲ್ಲಿ ಧಡೂತಿ ದೇಹದ, ನಗುಮೊಗದ ಬೀದಿ ತುದಿಯ ಹೆಂಗಸು ಅಂಗಡಿ ಬಾಗಿಲು ತೆರೆಯಬಹುದು..ಎಂದು ಸಮಾಧಾನಪಟ್ಟುಕೊಂಡೆ.. ಬಿಂದಿಯಿಂದ ಬಾಣಲೆಯವರೆಗೆ ಚಪ್ಪಲಿಯಿಂದ ಮೊಬೈಲಿನವರೆಗೆ ಪ್ರತಿ ವಸ್ತುವಿಗೂ ನಾವು ಬಲವಾಗಿಯೇ ಅಂಟಿಕೊಂಡಿದ್ದೇವೆ. ದಿನವೂ ಅಂಗಡಿ ಬಾಗಿಲು ತೆರೆದು ‘ಬನ್ನಿ ಬನ್ನಿ ಏನು ಬೇಕು’ ಎಂದು ಕೇಳಿ ಮಾರಾಟ ಮಾಡುತ್ತಿದ್ದವರ ಚಹರೆಗಳು, ಆ ಅಂಗಡಿಗಳು ಇರುವ ಸ್ಥಳ ಎಲ್ಲವೂ ಮೆರವಣಿಗೆ ಹೊರಟಂತೆ ನೆನಪಾಗತೊಡಗಿದವು. ಬೀದಿ ಬದಿಯಲ್ಲಿ ತರಕಾರಿ ಮಾರುವ ಅಜ್ಜಿಯರು, ಪಾನಿಪುರಿ, ಬೆಲ್ ಪುರಿ ಮಾರುವ ಅಂಗಡಿಯವರು.. ಈಗ ಆದಾಯವೇ ಇಲ್ಲದ ಅವರ ಮನೆಯಲ್ಲಿ ಒಲೆ ಉರಿಯುತ್ತಿರಬಹುದೇ. ಅಥವಾ ಜಠರಾಗ್ನಿಯೇ ಕಿಚ್ಚಾಗಿ ಸುಡುತ್ತಿರಬಹುದೇ? ‘ಕಾಡಿನಿಂದ ನಾಡಿಗೆ ಮನ ಒಲಿಸಿ ಕರೆ ತಂದ ಆದಿವಾಸಿಗಳನೇಕರು ಆಹಾರ ಅರಸುತ್ತ ಮತ್ತೆ ಕಾಡಿನೆಡೆಗೆ ನಡೆದಿದ್ದಾರೆ’ ಎಂಬ ಸುದ್ದಿ ಓದುವಾಗ ಒಂದಿಷ್ಟು ಜನರು ಮತ್ತೆ ಗ್ರಾಮವಾಸಕ್ಕೆ ಮನಸ್ಸು ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು ಎನ್ನಿಸುತ್ತದೆ. ಮನೆಯ ಮುಂದೆ ತರಕಾರಿ ಹಣ್ಣು ಮಾರುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಕಾರಣ ಅರಸುತ್ತ ಹೋದಾಗ ತಿಳಿದು ಬಂದ ವಿಷಯವೂ ಸ್ವಾರಸ್ಯಕರವಾಗಿದೆ. ಒಬ್ಬರು ಹೇಳುತ್ತಾರೆ.. ‘ನಾನು ಒಬ್ಬ ಟೈಲರ್.. ಪ್ರತಿವರ್ಷ ಈ ಸಮಯದಲ್ಲಿ ಮಕ್ಕಳಿಗೆ ಸಮವಸ್ತ್ರ ಹೊಲಿಯುತ್ತಿದ್ದೆ.. ಕೈತುಂಬಾ ಕೆಲಸ, ಸಂಪಾದನೆ ಇತ್ತು. ಈಗ ಹೊಲಿಯಲು ಬಟ್ಟೆಕೊಡುವವರಿಲ್ಲ. ಹಾಗೆಂದು ಮನೆಯಲ್ಲಿ ಖರ್ಚು ನಿಲ್ಲುವುದಿಲ್ಲ.. ಹಣ್ಣು ಮಾರುತ್ತಿದ್ದೇನೆ. ಇನ್ನೊಬ್ಬರು ಬಡಗಿ ಕೆಲಸ ಸಿಗುತ್ತಿಲ್ಲ ಎಂದು ಬೈಕ್ ಮೇಲೆ ಬುಟ್ಟಿ ಕಟ್ಟಿಕೊಂಡು ತರಕಾರಿ ಮಾರುತ್ತಿದ್ದಾರೆ. ಕೆಲಸ ಇಲ್ಲ ಎಂದು ಕಂಗೆಡುವ ಜನರಿಗಿಂತ ದುಡಿಮೆಗೆ ಹೊಸ ದಾರಿ ಹುಡುಕಿಕೊಳ್ಳುವ ಇಂತವರೇ ಶ್ರೇಷ್ಠರು ಎನಿಸುತ್ತದೆ.. ಲಾಕ್ ಡೌನ್ ಆರಂಭದಲ್ಲಿ ಕಡಿಮೆ ತರಕಾರಿ, ಹಣ್ಣು ಬಳಸುತ್ತಿದ್ದೆ‌. ಈಗ ಧಾರಾಳವಾಗಿ ಮಾರುವವರು ಹೇಳಿದಷ್ಟು ಬೆಲೆಗೆ ಖರೀದಿಸಿ ಉಪಯೋಗಿಸುತ್ತಿದ್ದೇನೆ. ನೀವೂ ಹಾಗೇ ಮಾಡುತ್ತಿದ್ದೀರಾ? ಮಾರುವವರ ಮನೆಯ ಒಲೆಯೂ ಉರಿದು ಅವರ ಒಡಲೂ ತಣ್ಣಗಾಗಲಿ.. ******* ಮುಂದುವರಿಯುವುದು… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಥಾಗುಚ್ಛ

ಕಥಾಯಾನ

ಕಥೆ ಪೊಟ್ಟಿ ಶೀಲಾ ಭಂಡಾರ್ಕರ್. ಪೊಟ್ಟಿ. ಪೊಟ್ಟಿ, ಬಂಟ್ವಾಳದ ಬಂಗ್ಲೆ ಗುಡ್ಡೆಯಲ್ಲೊಂದು ಗುಡಿಸಲು ಕಟ್ಟಿ ವಾಸವಾಗಿದ್ದಳು. ಬಂಗ್ಲೆ ಗುಡ್ಡೆಗೆ ಹೋಗುವ ರಸ್ತೆಗೆ ತಾಗಿಯೇ ನಮ್ಮಜ್ಜಿ ಮನೆ ಇದ್ದುದರಿಂದ ಅವಳು ಯಾವುದಕ್ಕಾದರೂ ಓಡಿ ಬರುವುದಿತ್ತು. ಅವಳಿಗೆ ಒಂದಿಷ್ಟು ಜನ ಮಕ್ಕಳು. ಎಷ್ಟು ಎಂದು ಅವಳಿಗೇ ಲೆಕ್ಕ ಇತ್ತೊ ಇಲ್ಲವೊ. ಕೃಶ ಶರೀರದ ಮಧ್ಯಮ ಎತ್ತರದ ಪೊಟ್ಟಿಗೆ ಒಬ್ಬ ಗಂಡ ಅಂತ ಇದ್ದನಂತೆ ಎಂದು ಬಾಪಮಾ ಹೇಳಿದ್ದ ನೆನಪು. ಅದೇನೋ ಆಗಿ ಅವನು ಸತ್ತ ಮೇಲೆ ಒಂದೆರಡು ಮಕ್ಕಳ ಜೊತೆ ಅವಳೊಬ್ಬಳೇ ಬಂಗ್ಲೆ ಗುಡ್ಡೆಯಲ್ಲಿ ವಾಸವಾಗಿದ್ದಳು. ವರ್ಷಕ್ಕೊಮ್ಮೆ ಬಸುರಿ, ವರ್ಷಕ್ಕೊಂದು ಬಾಣಂತನ ಅಂದ ಹಾಗೆ ಸದಾ ಅದೇ ಸ್ಥಿತಿಯಲ್ಲಿರುತಿದ್ದಳು. ಅದ್ಯಾರು ಬರುತಿದ್ದರೋ, ಹೋಗುತಿದ್ದರೋ, ಆ ಬತ್ತಿದ ದೇಹದಲ್ಲಿ ಅದೆಂತ ಅಕರ್ಷಣೆಯಿತ್ತೊ ಅವಳಲ್ಲಿಗೆ ಬರೋ ಗಂಡಸರಿಗೆ, ಹೋಗುವ ಮೊದಲು ಅವಳಿಗೆ, ಅವಳ ಮಕ್ಕಳಿಗೆಂದು ಏನಾದರೂ ಕೊಡಬೇಕೆಂದು ಅನಿಸುತಿತ್ತೋ ಇಲ್ಲವೋ ಒಂದೂ ಸರಿಯಾಗಿ ಯಾರಿಗೂ ತಿಳಿಯುತ್ತಿರಲಿಲ್ಲ. ಯಾಕೆಂದರೆ ಅವಳು ಪೊಟ್ಟಿ. ಪೊಟ್ಟಿ ಅಂದರೆ ಮಾತು ಬಾರದವಳು. ಮೂಕಿ. ಅವಳ ಮಕ್ಕಳಿಗೆ ಮಾತು ಬರುತಿತ್ತೇನೋ ಆದರೆ ಅವರಿಗೆ ಮಾತು ಕಲಿಸಲು ಯಾರಿದ್ದರು? ಅವರ ಬಳಿ ಮಾತನಾಡುವವರು ಬೇಕಲ್ಲ! ನಮ್ಮ ಮನೆಗೆ ಬರುವಾಗ,  ಹಿಂದಿನ ಬಾಗಿಲೆಂದಿಲ್ಲ, ಮುಂದಿನ ಬಾಗಿಲೆಂದಿಲ್ಲ ಎಲ್ಲಿಂದಾದರೂ ಯಾವಾಗಲಾದರೂ ಬರುತಿದ್ದಳು. ಅಂದರೆ ಒಳಗೆ ಬರುತ್ತಿರಲಿಲ್ಲ. ಹೊರಗೆ ನಿಂತು ಅದೇನೋ ವಿಚಿತ್ರ ಸದ್ದು ಮಾಡುತಿದ್ದಳು. ನಮ್ಮ ಬಾಪಮಾ ಅವಳಿಗೆ ಉಳಿದದ್ದು, ಬಳಿದದ್ದು ಅದು ಇದು ಅಂತ ಕೊಡುತಿದ್ದರು. ಆ ಮಕ್ಕಳನ್ನು ನೋಡುವಾಗ ಹೊಟ್ಟೆ ಚುರ್ ಅನ್ನುತ್ತೆ ಅನ್ನುತಿದ್ದರು. ಕಂಕುಳಲ್ಲೊಂದು, ಹೆಗಲ ಮೇಲೆ ನೇತಾಡುವ ಜೋಳಿಗೆಯಲ್ಲೊಂದು, ಹಿಂದೆ ಮುಂದೆ ಹೀಗೆ ಐದಾರು ಮಕ್ಕಳು ಜತೆಗೆ ನಡೆದುಕೊಂಡು ಬರುವಂಥವು. ಇಷ್ಟು ಮಕ್ಕಳನ್ನು ಕರೆದುಕೊಂಡು ಭಿಕ್ಷೆಗೆ ಹೋಗುತಿದ್ದಳು. ಕೆಲಸ ಮಾಡಿ ತಿನ್ನುವ ಸ್ವಾಭಿಮಾನ ಇತ್ತೋ ಇಲ್ಲವೋ, ಅವಳಿರುವ ಸ್ಥಿತಿ ಅವಳನ್ನು ಕೆಲಸ ಮಾಡಲು ಬಿಡಬೇಕಲ್ಲ. ನನ್ನ ಅಪ್ಪನಿಗೆ ಮದುವೆ ಆಗುವ ಮೊದಲಿನಿಂದಲೂ ಅವಳು ಅಲ್ಲಿ ವಾಸಿಸುತಿದ್ದಳು. ಅಪ್ಪನಿಗೆ ಮದುವೆ ಆದ ಹೊಸತರಲ್ಲಿ, ಅಮ್ಮ ಒಂದು ಸಂಜೆ ಒಬ್ಬರೇ ಅಡುಗೆ ಮನೆಯಲ್ಲಿ ಒಲೆ ಮೇಲೆ ಹಾಲಿಟ್ಟು ಅದು ಕಾಯುವುದನ್ನೇ ನೋಡುತ್ತಾ ಕೂತಿದ್ದಾಗ, ಎಂದಿನಂತೆ ಪೊಟ್ಟಿ ಬಂದು ತನ್ನ ವಿಚಿತ್ರ ಧ್ವನಿಯಲ್ಲಿ ಕೂಗಿದಳಂತೆ. ಅಮ್ಮ ಹೆದರಿ ಹೌಹಾರಿ ಒಲೆಯ ಕಟ್ಟಿಗೆ ಮೇಲೆ ಕಾಲಿಟ್ಟು, ಆ ಸೌದೆ ಎಗರಿ ಹಾಲಿನ ಪಾತ್ರೆ ಉರುಳಿ, ಹಾಲೆಲ್ಲ ಚೆಲ್ಲಿ ಹೋಯ್ತು. ಒಂದು ಕಡೆ ಇಷ್ಟೆಲ್ಲ ರಂಪವಾಗಿ ಹೋಯ್ತು. ಮತ್ತೊಂದೆಡೆ ಕಿಟಕಿಯಿಂದ ಹೆದರಿಸಿದ್ದು ಯಾರು ಎನ್ನುವ ಭಯ. ಒಳಗೆ ಇಷ್ಟೆಲ್ಲ ಆದ ಶಬ್ದಕ್ಕೆ ಎಲ್ಲರೂ ಓಡಿಬಂದು ನೋಡಿದರೆ ಪೊಟ್ಟಿ ಇನ್ನೂ ಅಲ್ಲೇ ತನ್ನ ಕೊಳಕಾದ ಹಲ್ಲು ತೋರಿಸಿ ನಗುತ್ತಾ ನಿಂತಿದ್ದಳು. ಅಮ್ಮ ಕಿಟಕಿ ಬಳಿ ಕೈ ತೋರಿಸಿ, ನಡುಗುತ್ತಾ ಅಳುವುದನ್ನು ನೋಡಿ ಬಾಪಮಾ ಪೊಟ್ಟಿಗೆ ಚೆನ್ನಾಗಿ ಬೈದರಂತೆ. ಹೀಗಾ ಹೆದರಿಸೋದು ಅಂತ. ಪೊಟ್ಟಿಗೆ ಹೆಸರೇನಾದರೂ ಇತ್ತೋ ಗೊತ್ತಿಲ್ಲ. ಇದ್ದರೂ ಅವಳ ಬಳಿ ಕೇಳಿದವರ್ಯಾರು? ಕೇಳಿದರೂ ಅವಳು ಹೇಳುವುದಾದರೂ ಹೇಗೆ? ಎಲ್ಲರೂ ಅವಳನ್ನು ಪೊಟ್ಟಿ ಎಂದೇ ಕರೆಯೋದಿತ್ತು. ಯಾರುಯಾರೋ ಕೊಟ್ಟ, ಎಲ್ಲಿ ಸಿಕ್ಕಿದರೂ ಹೆಕ್ಕಿದ ಬಳೆಗಳನ್ನು ಅವಳು ಕೈ ತುಂಬಾ ಸುರಿದುಕೊಳ್ಳುವುದಿತ್ತು. ಒಂದಕ್ಕೊಂದು ಬಣ್ಣ, ಸೈಜ್, ಡಿಸೈನ್ ಯಾವುದೂ ತಾಳೆ ಇರುತ್ತಿರಲಿಲ್ಲ. ಈಗಲೂ ಹಾಗೆ ಬಳೆ ಹಾಕಿಕೊಂಡ ಮಕ್ಕಳನ್ನು ” ಪೊಟ್ಟಿಯ ಹಾಗೆ” ಅನ್ನುವುದುಂಟು. ಅವಳ ಮಕ್ಕಳಲ್ಲಿ ಒಂದು ಮಗು ಎಲ್ಲೋ ಹೋಯ್ತೆಂದು ಬಂದು ಬಾಪಮಾ ಹತ್ತಿರ ಹೇಳುತಿದ್ದಳು ಒಮ್ಮೆ. ಆದರೆ ಅಂಥಾದ್ದೇನೂ ದುಃಖ ಆದ ಹಾಗಿಲ್ಲ. ಅವಳು ಯಥಾಪ್ರಕಾರ ಭಿಕ್ಷೆ ಬೇಡೋದು, ದಾರಿಯಲ್ಲಿ ಹೋಗುವವರನ್ನು ನೋಡಿ ತಲೆ ಕೆರೆದು, ಹಲ್ಲು ಕಿಸಿದು ನಗೋದು ಎಲ್ಲಾ ಮಾಡುತಿದ್ದಳು. ಅವಳಲ್ಲಿ ಏನೂ ಭಾವನೆಗಳಿಲ್ಲವೇನೋ ಎಂದು ನಮ್ಮ ಮನೆಯಲ್ಲಿ ಮಾತನಾಡಿಕೊಂಡದ್ದು ನನ್ನ ಕಿವಿಗೂ ಬಿದ್ದಿತ್ತು‌. ಅಮ್ಮನನ್ನು ಹೆದರಿಸಿದಾಗ ಬೈದದ್ದು ಬಿಟ್ಟರೆ ಬಾಪಮಾ ಮತ್ತು ಅವಳ ನಡುವೆ ಸಂಭಾಷಣೆ ಕೈ ಬಾಯಿ ಸನ್ನೆಯಲ್ಲೇ ನಡೆಯುತಿತ್ತು. ಅವಳಿಗೆಂದು ಏನಾದರೂ ತೆಗೆದಿಟ್ಟರೆ ಅಜ್ಜಿ ಮನೆಯ ಮುಂದಿನ ಸರಳುಗಳ ಜಗಲಿಯಲ್ಲಿ ಮರದ ಮಂಚದ ಮೇಲೆ ಕೂತು ಕಾಯುತಿದ್ದರು. ಅವಳನ್ನು ಕಂಡ ಕೂಡಲೇ ಏಯ್ ಅಂತ ಕರೆದರೆ ಅವಳೂ ಗೊಳ್ಳನೆ ನಕ್ಕು ನೀವು ಕರೆಯುವುದನ್ನೇ ಕಾದಿದ್ದೆ ಅನ್ನುವ ಹಾಗೆ ಕಾಂಪೌಂಡ್ ಒಳಗೆ ಬಂದು ತುಳಸಿ ಕಟ್ಟೆಯ ಬಳಿ ಕೂತು ಮಕ್ಕಳನ್ನೂ ಕೂರಿಸಿಕೊಂಡು ಬಾಪಮಾ ಕೊಟ್ಟ ತಿಂಡಿಯನ್ನು ತಾನೂ ತಿನ್ನುತ್ತಾ ಮಕ್ಕಳಿಗೆ ತಿನ್ನಿಸುತ್ತಾ ಸ್ವಲ್ಪ ಹೊತ್ತು ಇದ್ದು ನೀರು ಕುಡಿದು ಹೊರಡುತಿದ್ದಳು. ಮತ್ತೆ ಸಿಕ್ಕಿದ್ದು ಮದ್ಯಾಹ್ನಕ್ಕೆಂದು ಮನೆಗೆ ಕೊಂಡು ಹೋಗುತಿದ್ದಳು. ಮುಂದೆ ಒಂದು ದಿನ ಭಾರೀ ಸುಸ್ತಾಗಿ ಬಂದು ಅಂಗಳದಲ್ಲಿ ಕೂತಿದ್ದು ನೋಡಿ ಅಜ್ಜಿ ಹುಷಾರಿಲ್ವಾ ಎಂದು ಕೇಳಿದಾಗ ನಸು ನಾಚಿ ನಕ್ಕಳಂತೆ. ಅಜ್ಜಿಗೆ ಅರ್ಥ ಆಗಿ ಅವಳಿಗೆ ಸನ್ನೆಯಲ್ಲೇ ಸಹಸ್ರನಾಮಾರ್ಚನೆ ಮಾಡಿದರೂ ದಿನಾ ಕರೆದು ತಿನ್ನಲು ಕೊಡುತಿದ್ದರು. ಅವಳ ಬಾಣಂತನ ಅವಳೇ ಮಾಡಿಕೊಳ್ಳುತಿದ್ದಳಂತೆ. ಅದನ್ನೂ ಸನ್ನೆಯಲ್ಲೇ ವಿವರಿಸಿ ಹೇಳುತಿದ್ದಳು. ಯಾವ ಸಂಭ್ರಮವಿಲ್ಲದಿದ್ದರೂ, ಸರಿಯಾಗಿ ಹೊಟ್ಟೆಗಿಲ್ಲದಿದ್ದರೂ ಅವಳ ಮಕ್ಕಳು ಮಾತ್ರ ಮೈಕೈ ತುಂಬಿಕೊಂಡು ನೋಡಲು ಲಕ್ಷಣವಾಗಿದ್ದವು. ಹಾಲು, ಬೆಣ್ಣೆ, ತುಪ್ಪ ಸುರಿದು ತಿನ್ನಿಸಿದ್ರೂ ನಮ್ಮ ಮಕ್ಕಳು ಹೊಟ್ಟೆಗೆ ಇಲ್ಲದವರ ಹಾಗಿವೆ ಅಂತ ಬಾಪಮಾ ನಮ್ಮನ್ನು ತೋರಿಸಿ ಹೇಳುವಾಗ ಅಮ್ಮನಿಗೆ ಪಾಪ ಪಿಚ್ಚೆನಿಸುತಿತ್ತು. ಈ ಸಲವೂ ಹೆರಿಗೆಯಾಗಿ ಮೂರು ನಾಲ್ಕು ದಿನಕ್ಕೇ ರಸ್ತೆಗೆ ಇಳಿದಿದ್ದಳು ಪೊಟ್ಟಿ. ಅಷ್ಟೂ ಮಕ್ಕಳ, ತನ್ನ,  ಹೊಟ್ಟೆಗೆ ಏನಾದರೂ ಬೇಕಿತ್ತಲ್ಲ. ಈಗಲೂ ಎಂದಿನಂತೆ ಒಂದು ಜೋಳಿಗೆಯೊಳಗೆ, ಒಂದು ಕಂಕುಳಲ್ಲಿ. ಒಂದು ದಿನ ಮಾತ್ರ ಮದ್ಯಾಹ್ನ ಪೊಟ್ಟಿ ಓಡುತ್ತಾ ಬಂದು ಎದೆ ಬಡಿದುಕೊಳ್ಳುತ್ತಾ ಹೃದಯವಿದ್ರಾವಕವಾಗಿ ತನ್ನ ವಿಚಿತ್ರ ಧ್ವನಿಯಲ್ಲಿ ಅಳುತಿದ್ದಾಗ ಮನೆಯವರೆಲ್ಲ ಗಾಬರಿಯಾಗಿ ಓಡಿ ಬಂದರು. ಜೋಳಿಗೆಯಲ್ಲಿ ಮಗುವನ್ನು ನೇತಾಡಿಸಿದ್ದಾಳೆ. ಮಗು ಜೀವಂತವಾಗಿದೆ. ಇನ್ನೇತಕ್ಕೆ ಅಳುತಿದ್ದಾಳೆಂದು ಯಾರಿಗೂ ತಿಳಿಯದಾಯಿತು. ಆ ಹೊತ್ತು ಗಾಬರಿಯಾದ ನಮ್ಮ ಧೈರ್ಯಸ್ಥೆ ಬಾಪಮಾನ ಮುಖ ನನಗೆ ಇನ್ನೂ ಕಣ್ಣ ಮುಂದಿದೆ. ಬಾಪಮಾ ಅಂದರೆ ಅಜ್ಜಿ. ಅಜ್ಜಿ ಅಂದರೆ ಬಾಪಮಾ ಎರಡೂ ಒಬ್ಬರೇ. ಅಪ್ಪನ ಅಮ್ಮ ಬಾಪಮಾ. ಬಾಪಮಾ ಅಂಗಳಕ್ಕೆ ಇಳಿದು ಹತ್ತಿರ ಹೋಗಿ ಕೇಳಿದರು. ಹೂಂ ಹೂಂ ಅಂತ ಕೈಯಿಂದ ಸನ್ನೆಯಲ್ಲಿ “ಏನಾಯಿತು?” ಎಂದರು. ಅವಳು ಹೊಟ್ಟೆ ಕಿವುಚಿಕೊಳ್ಳುತ್ತಾ ಎದೆ ಬಡಿದು ಕೊಳ್ಳುತ್ತಾ, ಕೂದಲು ಕಿತ್ತು ಕೊಳ್ಳುತ್ತಾ ಅಳುವುದನ್ನು ನೋಡಿ ಅಲ್ಲಿದ್ದವರ ಕಣ್ಣುಗಳು ಒದ್ದೆಯಾದವು. ಅವಳ ಕೈ ಹಿಡಿದು ಅಳಬೇಡ ಎಂದು ಕುಡಿಯಲು ನೀರು ಕೊಟ್ಟು, ಸಮಾಧಾನ ಮಾಡಲು ನಮ್ಮಜ್ಜಿ ಮಡಿ ಮೈಲಿಗೆಯನ್ನೂ ಮರೆತು ಅವಳ ಬೆನ್ನು ಸವರಿದ್ದರು. ಸಮಾಧಾನ ತಂದುಕೊಂಡ ಅವಳು ಅಜ್ಜಿಯ ಕೈ ಹಿಡಿದು ಏನು ನಡೆಯಿತು ಎಂದು ಪಾಪ ಅವಳ ರೀತಿಯಲ್ಲಿ ವಿವರಿಸಿದಾಗ ಅರ್ಥವಾಗಿದ್ದನ್ನು ಬಾಪಮಾ ಉಳಿದವರಿಗೆ ಹೇಳಿದರು. ಬೆಳಿಗ್ಗೆ ಭಿಕ್ಷೆಗೆ ಹೋಗುವಾಗ, ಕಂಕುಳ ಮಗುವಿನ ಕಾಲಿಗೆ ಮತ್ತು ಮನೆಯ ಮಾಡಿನ ಆಧಾರದ ಕೋಲಿಗೆ ದಾರ ಕಟ್ಟಿ ಬಿಟ್ಟು ಹೋಗಿದ್ದಳು. ಮೊದಲೆಲ್ಲ ಇನ್ನೂ ನಡೆಯಲು ಬಾರದ ಮಕ್ಕಳನ್ನು ಹೀಗೆ ಕಾಲಿಗೆ ದಾರ ಕಟ್ಟಿ ಮಂಚಕ್ಕೋ, ಕಂಬಕ್ಕೋ ಕಟ್ಟಿ ಹಾಕಿ ಮನೆ ಕೆಲಸ ಮುಗಿಸುವುದಿತ್ತು. ಆ ದಾರದ ಪರಿಧಿಯಲ್ಲೇ ಓಡಾಡಿ, ಆಟವಾಡಿ, ಸಾಕಾಗಿ ಅಲ್ಲೇ ಕೂತು ಅಳುತಿದ್ದವು ಮಕ್ಕಳು. ಪೊಟ್ಟಿ ಹೀಗೆ ಬಿಟ್ಟು ಹೋಗಿದ್ದಾಗ, ಮನೆಗೆ ಹಿಂತಿರುಗಿ ಬಂದು ನೋಡಿದರೆ ಮಗು ಇಲ್ಲ. ಹುಡುಕಿ, ಹುಡುಕಿ, ಕರೆದು ಸಾಕಾಗಿ, ಕೊನೆಗೆ ನೋಡಿದರೆ ಅಲ್ಲೇ ಹತ್ತಿರದಲ್ಲೇ ಇದ್ದ ನೀರಿಲ್ಲದ ಪೊಟ್ಟು ಸರ್ಕಾರಿ ಬಾವಿಯೊಳಗೆ ಬಗ್ಗಿ ನೋಡಿದರೆ ಅದರೊಳಗೆ ಬಿದ್ದಿದೆ ಮಗು. ತುಂಬಾ ಹಳೆಯ ಬಾವಿ ಅದು ಅದರ ಕಟ್ಟೆಯೂ ಬಿದ್ದು ಹೋಗಿ ಬಾವಿ ಎಂಬ ಹೊಂಡವೊಂದು ಮುಚ್ಚದೇ ಹಾಗೇ ಇತ್ತು. ಬನ್ನಿ ಬನ್ನಿ ಎಂದು ಸನ್ನೆಯಲ್ಲೇ ಕರೆದಾಗ ಎಲ್ಲರೂ ಬಾವಿಯ ಬಳಿ ಹೋಗಿ ನೋಡಿದರೆ ಮಗು ರಕ್ತ ಸಿಕ್ತವಾಗಿ ವಿಕಾರವಾಗಿ ಬಿದ್ದಿತ್ತು. ಕೂಡಲೇ ಅಜ್ಜಿ ಅದರೊಳಗೆ ಯಾರನ್ನೋ ಇಳಿಸಿ ಮಗು ಬದುಕಿದೆಯೋ ಎಂದು ಪರೀಕ್ಷಿಸಲು ಹೇಳಿ ಅಲ್ಲಿಯೇ ಮಣ್ಣು ಹಾಕಿ ಮುಚ್ಚಿಸಿದರು. ಪೊಟ್ಟು ಬಾವಿ ಅರ್ಧ ಮುಚ್ಚಿತು. ಆದರೂ ಅಪಾಯವೆಂದು ಮುನಿಸಿಪಾಲಿಟಿಯವರಿಗೆ ಹೇಳಿ ಪೂರ್ತಿ ಮುಚ್ಚಿಸಲಾಯಿತು. ಮಾತು ಬಾರದಿದ್ದರೂ , ಭಾವನೆಗಳೇ ಇಲ್ಲ ಎಂದು ಕೊಂಡಿದ್ದರೂ ಪೊಟ್ಟಿಗೆ ತನ್ನ ಕೈಯಾರ ಮಗು ಸತ್ತಿತು ಅನ್ನುವ ಅಪರಾಧಿ ಪ್ರಜ್ಞೆ ಕಾಡುತಿತ್ತೇನೋ, ಹೊಟ್ಟೆಗಿಲ್ಲದಿದ್ದರೂ, ಬಟ್ಟೆಗಿಲ್ಲದಿದ್ದರೂ, ಆ ಮಕ್ಕಳನ್ನು ಹುಟ್ಟಿಸಿದವರು ಆಮೇಲೆ ತಿರುಗಿ ನೋಡದಿದ್ದರೂ ಕರುಳವೇದನೆ ಎಂಬುದು ಎಷ್ಟು ತೀವ್ರವಾದುದು.  ಮುಂದಿನ ದಿನಗಳಲ್ಲಿ ಅವಳು ಯಾವ ಗಂಡಸನ್ನೂ ತನ್ನ ಗುಡಿಸಲಿಗೆ ಬರಲು ಬಿಡುತ್ತಿರಲಿಲ್ಲವಂತೆ, ಕಿರುಚಾಡಿ, ಕೈಗೆ ಸಿಕ್ಕಿದುದರಿಂದ ಹೊಡೆದು ಓಡಿಸುತಿದ್ದಳಂತೆ. ಈಗಲಾದರೂ ಬುದ್ಧಿ ಬಂತಲ್ಲ ಎಂದು ಮನೆಯಲ್ಲಿ ಮಾತನಾಡಿಕೊಳ್ಳುತಿದ್ದರು.   *********

ಕಥಾಯಾನ Read Post »

You cannot copy content of this page

Scroll to Top