ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಂದೂ ಮರೆಯದಾ ಗುರುತು

Unrecognizable female tourist strolling on rocky shore near sea and snowy mountains during sunset

ರಜಿಯಾ ಕೆ.ಬಾವಿಕಟ್ಟೆ

ಕಡಲ ಮೌನದಲಿ ನೆಮ್ಮದಿಯ
ಕಾಣುವ ಭರವಸೆಯ ನಿರಾಳದಿ
ದಿಟ ದಾವಂತದಲಿ ಎಷ್ಟೋ ಕನಸುಗಳು ಆಸೆಗಳು ಮಡಿಲಿಗಂಟ್ಟಿದ್ದವು.

ಸಂತಸದ ಮನವು ಬಾನು ಭೂವಿಗಳ ಅಂತರವೇ ಲೆಕ್ಕಿಸದಷ್ಟು ಸಂತೋಷದ ದಿನಗಳು ಅಪಾರತರದಲ್ಲಿದ್ದವು. .

ದಿನದಿನವು ಕಳೆದಂತೆ ಕರಾಳತೆಯ ಕಹಳೇಗಳು ಬೆನ್ನ
ಹಿಂದೆಯೇ ಬೆನ್ನಟ್ಟಿ ಹೊರಟುನಿಂತಿದ್ದವು.

ಆಗಾಧತೆಯ ಖುಷಿಗಳೆಲ್ಲ ಕಳೆದು ಬರೀ ಸಾಲು ಸಾಲು ಸಮಾಧಿಯ ನಿಟ್ಟುಸಿರಿಗೆ
ನನ್ನ ಜೊತೆ ಜೊತೆಗಿದ್ದ ಅಣ್ಣತಮ್ಮಂದಿರನೇ ಆ ವಿಧಿ ಬಲಿ ಪಡೆದು ನನ್ನ ನನ್ನಮ್ಮನ ಒಂಟಿಯಾಗಿಸಿದ್ದವು.

ಐವರ ಒಕ್ಕೂಟದಲಿ ನಾನೋಬ್ಬಳೇ ಪ್ರೀತಿಯ ಕುಸುಮ ನನ್ನನಗಲಿ ದೂರ ದೂರ ಹೋದರೆಲ್ಲ ಒಂದೇ ಕ್ಷಣ ಕ್ಷಣದಲಿ ನಿಮಗಿದು ಸರಿನಾ?

ನನ್ನ ಹೆತ್ತ ಒಡಲಿಗೆ ಯಾರು
ಸಾಂತ್ವನ ನೀಡುವರು ಹೇ ದೈವವೇ ? ತಾಯಿಯ ನೋವಿಗೆ ನಾ ಅದೆಷ್ಟೋ ಸಹಕರಿಸಲಿ.
ಮಸಣ ಮಾಳಿಗೆಯನ್ನೇ ಸೃಷ್ಟಿಸಿದೆಯಲ್ಲಾ‌ ಈ ಬದುಕಲಿ.

ಅಳಿದುಳಿದ ಈ ಬದುಕಿಗೆ ಇನ್ನೂ ಯಾಕೇ ಬದುಕುವ ಹಂಗು ನೀನೇ ಕೊಟ್ಟ ಖುಷಿಗೆ ನೀನೇ ಕೊಳ್ಳಿ ಇಟ್ಟ ಮೇಲೆ
ಇನ್ನೂ ಯಾಕೇ ಈ ಉಸಿರು
ಹರಸಿ ಕರೆದೊಯ್ದದರು ಸರಿಯೇ ಇನ್ನೂ ಒಲ್ಲದ ಈ ಜೀವನ.

ಆ ಕಡಲ ಮೌನದಲಿ ನಾ
ನಿತ್ಯವೂ ರೋಧಿಸುವೇ ಕಂಬನಿಯನು ಧಾರೇ ನೀಡುವೆ
ಅದು ಎಂದೂ ನನ್ನ ಕತೆಗೆ
ಉತ್ತರಿಸಲೇ ಇಲ್ಲ .

ನನ್ನಾಧಿ ಒಡಲಿಗೆ ಕಡಲು
ಭೊರ್ಗರಿಸಿ ಒಡೆಯುದಷ್ಟೇ | ವಿನಹ ನನ್ನ ಪ್ರಶ್ನೇಗೆ ಎಂದೂ
ಮೌನ ಮುರಿಯಲೇ ಇಲ್ಲ .

ಇನ್ನೂ ನಾ ಜೀವಂತ ಶಿಲೆ ಅಷ್ಟೇ
ಹೊರತು ಭಾವಗಳನು ಸಂಭ್ರಮಿಸೊ ಸಡಗರಿಸೂ ಮನವಾಗಲಾರೆನೂ ಎಂದಿಗೂ
ಎಂದೆಂದಿಗೂ ……

ಪದ್ಮರಾಗ…..

******

About The Author

2 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top