ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯುದ್ದವೆಂದರೆ

ಕು.ಸ.ಮಧುಸೂದನ

ಯುದ್ದವೆಂದರೆ
ಕೋವಿ
ಫಿರಂಗಿಗಳು
ಮದ್ದು ಗುಂಡುಗಳು
ಸೋಲು ಗೆಲುವುಗಳು
ಮಾತ್ರವಲ್ಲ

ಯುದ್ದವೆಂದರೆ
ಅಂಗೈನ ಮದರಂಗಿ ಆರುವ ಮೊದಲೇ
ಹಣೆಕುಂಕುಮ ಅಳಿಸಿಕೊಳ್ಳುವ ಹೆಣ್ಣಗಳು

ಅಪ್ಪನ ತಬ್ಬುವ ಮೊದಲೇ ತಬ್ಬಲಿಯಾಗುವ ಹಸುಗೂಸುಗಳು
ಮಗನ ಮನಿಯಾರ್ಡರಿಗಾಗಿ ಕಾತು ಕೂತ ಮುದಿಜೀವಗಳು.

ಮತ್ತೂ
ಯುದ್ದವೆಂದರೆ
ಇರುವುದೆಲ್ಲವ ನಾಶ ಮಾಡಹೊರಟು
ತಾವೂ ನಾಶವಾಗುವ
ಹಳೆಯ ಆಟ
ಮನುಕುಲದ ಖಳರ ಚಟ!

*********

About The Author

1 thought on “ಕವಿತೆ ಕಾರ್ನರ್”

  1. ನಿಜ ಸರ್ ಯುದ್ಧ ಎಂದರೇ ಬರಿ ಗಡಿಯಲ್ಲಿ ನಡೆಯುವ ಆಟವಲ್ಲ. ಅದು ನಂಬಿದ ಜೀವಗಳ ಉಸಿರಾಟ. ನಿಮ್ಮ ಕವಿತೆ ಅರ್ಥಗರ್ಭಿತ ವಾಗಿದೆ. ತಮಗೆ ಅಭಿನಂದನೆಗಳು.

Leave a Reply

You cannot copy content of this page

Scroll to Top