ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಬಾನಾಡಿಗಳೇ ಕೇಳಿ ಸಂಜಯ್ ಮಹಾಜನ ಬಾನಾಡಿಗಳೇ ಕೇಳಿ ಈ ವಿಶಾಲ ನೀಲಿ ಆಗಸ ನಿಮ್ಮದು ಈ ತಂಗಾಳಿಯ ಸ್ಪರ್ಶ ನಿಮ್ಮದು ಈ ಶಾಂತ ಸಮುದ್ರ ನಿಮ್ಮದು ಈ ಹಸಿರು ಹೊದಿಕೆ ನಿಮ್ಮದು ಈ ಹೂವ ಕಂಪು ನಿಮ್ಮದು ಈ ಹಣ್ಣ ಸಿಹಿ ನಿಮ್ಮದು ಈ ಸಿರಿಧಾನ್ಯ ನಿಮ್ಮದು ಈ ಪ್ರಕೃತಿಯ ಸರ್ವ ಸ್ವಭಗು ನಿಮ್ಮದು ಆದೆರೆ..? ಇದನ್ನೆಲ್ಲ ನಿಮ್ಮಿಂದ ಕಸಿದುಕೊಳ್ಳುವ ಸ್ವಾರ್ತ, ಕ್ರೋಧ, ಕಷ್ಠಾಗ್ನಿಯ ಮನಸ್ಸುಳ್ಳ ಮಾನವ ನಿನ್ನವನಲ್ಲಾ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತೆನೆ ರಾಮಾಂಜಿನಯ್ಯ ವಿ. ತೆನೆ ಅಪ್ಪ ಸಣ್ಣರೈತ. ಗಿಳಿ,ಅಳಿಲು,ಕಾಗೆಗಳ ಹಾವಳಿ ಸದಾ ಇದ್ದೇ ಇರುತ್ತಿತ್ತು; ಇದ್ದ ಒಂದೂವರೆ ಎಕರೆಯಲ್ಲಿ ಬೆಳೆಯುತ್ತಿದ್ದ ಜೋಳಕ್ಕೆ! ‘ಬೇಳೆಕಾಳುಗಳ ರಾಣಿ’ ಇವಳು! ಉದ್ದ ಜಡೆಯ ನಾರಿ, ಹಾಲುಕ್ಕಿಸುವ ಶೋಡಷಿ, ‘ಟಸೆಲ್ ಕೂದಲುಳ್ಳ ಗಂಡು’ ಇವಳು! ಅರೆ, ಇವಳೇನು ಜೀನ್ಸ್ ಗಳ ವ್ಯತ್ಯಾಸದಂತ ಮಂಗಳಮುಖಿಯಲ್ಲ. ಗಿಳಿ ಪ್ರಿಯೆ! ನಮ್ಮೂರಿನ ಮಲ್ಲಮ್ಮಾ, ಮುನೆಮ್ಮಾ ಹುಲ್ಲಿಗಂತ ಬಂದು ತೆನೆ ಮುರಿದು ರವಿಕೆಯೊಳಗೆ ಅಡಗಿಸಿದಾಗ, ಎದೆ ಮುಂದೆ ಉಬ್ಬುತ್ತಿತ್ತು ಆಗ ಅಲ್ಲಿ ‘ಟಸೆಲ್’ ಉದುರುತ್ತಿತ್ತು! ಕೆಲವೊಮ್ಮೆ ತೆನೆ ಬೆತ್ತಲಾಗಿ ಅದರ ಬಟ್ಟೆ ಹುಲ್ಲಾಗುತ್ತಿತ್ತು. ಚಾಟರಿ ಬಿಲ್ಲಿನ ಕಲ್ಲು ಗಿಳಿಯ ಓಡಿಸುವಾಗ ಓಯ್ಃ ಶಬ್ದ ಮೊಳಗಿ ಹಕ್ಕಿಗಳು ಹಾರುತ್ತಿದ್ದವು ಉಳಿದ ತೆನೆಗಳು ನಗುತ್ತಿದ್ದವು. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ದಾಕ್ಷಾಯಣಿ ವೀ ಹುಡೇದ. ಗಜಲ್ ಕರಗಿ ನೀರಾದ ನೆನಪುಗಳಲಿ ಚಂದ್ರನ ಹುಡುಕುವುದನು ನಿಲ್ಲಿಸು ಸಖಿನಿರ್ಜೀವ ದಿಂಬಿನೊಡನೆ ಮಾತಾಡಿ ನೋವ ಕಳೆಯುವುದನು ನಿಲ್ಲಿಸು ಸಖಿ ಜಗಕೆ ತಿಳಿದೀತೆಂದು ಕದವಿಕ್ಕಿ ಸದ್ದಿಲ್ಲದೇ ಅತ್ತ ಘಳಿಗೆಗಳ ಲೆಕ್ಕವಿಟ್ಟಿಲ್ಲ ಯಾರೂಕುದಿವ ಮನಸಿಗೆ ಕದ್ದು ಅಳುವ ರೂಢಿಯನು ನಿಲ್ಲಿಸು ಸಖಿ ಅತ್ತು ಹಗುರಾಗು,ಬಚ್ಚಿಟ್ಟ ಸತ್ಯಗಳು ಬೆತ್ತಲಾಗಲಿಅವನ ವಂಚನೆಗಳಿಗೆ ಪರದೆ ಹಾಕುವುದನು ನಿಲ್ಲಿಸು ಸಖಿ ಸಖನ ಲೋಕದಲಿ ಜಾಗ ಹುಡುಕುವ ಪ್ರಯತ್ನ ಮೂರ್ಖತನದ್ದುರಮಿಸಲಿ ಎಂದು ಬೆನ್ನು ಬಿದ್ದು ಕಾಡುವುದನು ನಿಲ್ಲಿಸು ಸಖಿ. ಸಖನ ಕಣ್ಣುಗಳಲ್ಲಿ ಹದ್ದೊಂದು ಹಾರುವುದ ಕಂಡೆಯಾಅವನಿಲ್ಲದಾಗ ದಿಕ್ಕೆಟ್ಟು ಮನಸಿಗೆ ಪಾತಕ ಅಂಟಿಸಿಕೊಳ್ಳುವುದನು ನಿಲ್ಲಿಸು ಸಖಿ ಹೆರಲಾಗದ ಹೊರಲಾಗದ ಪುರುಷನ ಹೆಗಲ ಮೇಲೆ ಜವಾಬ್ದಾರಿಅವಸರದ ಸಡಗರಕೆ ಸಬೂಬಿನ ಮಾತಿಗೆ ಮರುಳಾಗುವುದನು ನಿಲ್ಲಿಸು ಸಖಿ ಮಧುವಂತಿ ದಾಚಿಯ ಸಂಘರ್ಷದ ಪಯಣಕೆ ಜೊತೆಯಾಗು ನೀನು ಸಖಿಇನ್ನಾದರೂ ಈ ಸಂಚಿಗೆ ಬಲಿಯಾಗುವುದನು ನಿಲ್ಲಿಸು ಸಖಿ ***********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಜುಲೈನ ಗಸಗಸೆಯ ಹೂಗಳು ಮೂಲ: ಸಿಲ್ವಯಾ ಪ್ಲಾತ್(ಅಮೇರಿಕಾ ಕವಿ) ಕನ್ನಡಕ್ಕೆ ಕಮಲಾಕರ ಕಡವೆ ಜುಲೈನ ಗಸಗಸೆಯ ಹೂಗಳು ಪುಟ್ಟ ಗಸಗಸೆಯ ಹೂವೇ, ಪುಟ್ಟ ನರಕದ ಜ್ವಾಲೆಯೇನೀನು ಏನೂ ಹಾನಿ ಮಾಡೆಯೇನು? ನೀ ಕಂಪಿಸುವಿ, ನಿನ್ನ ಮುಟ್ಟಲಾರೆ ನಾನುಜ್ವಾಲೆಗಳ ನಡುವೆ ಕೈ ಇಡುವೆ ನಾನು. ಏನೂ ಸುಡುತ್ತಿಲ್ಲ ನಿನ್ನ ನೋಡುವುದರಲ್ಲೇ ನಿತ್ರಾಣನಾದೆ ನಾನುಹಾಗೆ ಕಂಪಿಸುತ್ತ, ಸುಕ್ಕುಗಟ್ಟಿ, ಕಡು ಕೆಂಪಾಗಿ, ಬಾಯೊಳಗಿನ ಚರ್ಮದಂತೆ ಬಾಯಿಯೊ ಅಷ್ಟೇ ರಕ್ತರಂಜಿತರಕ್ತಮಯ ಲಂಗದಂತೆ! ಮುಟ್ಟಲಾರೆ ಆ ಹೊಗೆಯ ನಾನುಎಲ್ಲಿ ನಿನ್ನ ಮಾದಕತೆ, ನಿನ್ನ ವಾಕರಿಕೆ ತರಿಸುವ ಮಾತ್ರೆಗಳು? ನನಗೆ ರಕ್ತಸ್ರಾವವಾದರೂ ಆದರೆ, ಅಥವಾ ನಿದ್ರೆನನ್ನ ಬಾಯಿ ಅಂತಹ ಗಾಯದೊಂದಿಗೆ ಒಂದಾಗುವಂತಿದ್ದರೆ! ಆ ನಿನ್ನ ಮದ್ಯ ನನ್ನೊಳಗೆ ಒಸರುವಂತಿದ್ದರೆ, ಈ ಗಾಜಿನ ಗುಳಿಗೆಯಲ್ಲಿಮಂಕಾಗಿಸುತ್ತ, ಸ್ತಬ್ಧವಾಗಿಸುತ್ತ ಆದರೆ, ಬಣ್ಣವಿರದೇ, ಬಣ್ಣವಿರದೇ ***** Poppies In July Little poppies, little hell flames,Do you do no harm? You flicker. I cannot touch you.I put my hands among the flames. Nothing burns And it exhausts me to watch youFlickering like that, wrinkly and clear red, like the skin of a mouth. A mouth just bloodied.Little bloody skirts! There are fumes I cannot touch.Where are your opiates, your nauseous capsules? If I could bleed, or sleep! –If my mouth could marry a hurt like that! Or your liquors seep to me, in this glass capsule,Dulling and stilling. But colorless. Colorless. *********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಸುಡುಗಾಡು ರಾಜು ದರಗಾದವರ ಸುಡುಗಾಡು ನೀನೆಷ್ಟು ಸಹೃದಯಿ, ಭೇದಭಾವವಿಲ್ಲದ ನಿನ್ನಲ್ಲಿ ಅದೆಂತಹ ತಿಳಿಮೌನ. ಮೇಲುಕೀಳು ಕಾಣದ ನಿನ್ನಲ್ಲಿ ಹೋಲಿಕೆಗೆ ಸಿಗದ ಐಕ್ಯತೆ. ದೊಡ್ಡವ ಚಿಕ್ಕವ ಅನ್ನೋ ತಾರತಮ್ಯವಿಲ್ಲದ, ಎಲ್ಲರನ್ನು ಸಮಾನಭಾವದಿಂದ ಸ್ವಾಗತಿಸುವ ನಿನ್ನದು ಅದೆಂತಹ ಧರ್ಮ…! ವೀರರನ್ನು ,ಹೇಡಿಗಳನ್ನು ಪುಣ್ಯವಂತರನ್ನು,ಪಾಪಿಗಳನ್ನು ಬೇರ್ಪಡಿಸುವ ಬುದ್ಧಿಯೆಂತು ಇಲ್ಲ. ಹೆಣ್ಣು,ಗಂಡು ಒಂದೇ ಎಂದು ಸಮಾನಕಾಣೋ ಹೃದಯವಂತಿಕೆ ನಿನ್ನಲ್ಲಿ ಬಿಟ್ಟು ಮತ್ತ್ಯಾರಲ್ಲಿ ಬರಲು ಸಾಧ್ಯ ಹೇಳು…? ಓ ಸ್ಮಶಾನವೇ…ನಿನಗೆ ನೀನೇ ಆದರ್ಶ…! ********

ಕಾವ್ಯಯಾನ Read Post »

ಇತರೆ

ಹಾಸ್ಯಲೋಕ

ನಾಯಿ ಬೇಕಾ ನಾಯಿ! ತಾರಾ ಸತ್ಯನಾರಾಯಣ ನಾಯಿ ಬೇಕಾ ನಾಯಿ! ನನ್ನ ನಾಲ್ಕು ವರ್ಷದ ಮಗಳು ಸೋನುಗೆ ನಾಯಿ ಕಂಡರೆ ತುಂಬಾ ಇಷ್ಟ.ಎಲ್ಲೇ ಹೋಗ್ತಾ ಇದ್ದರೂ……… ಬೀದಿ ನಲ್ಲಿ ಯಾವ ನಾಯಿ ನೋಡಿದರೂ……. .ನೋಡುತ್ತಾ ನಿಂತುಬಿಡುತ್ತಿದ್ದಳು.ಆ ಸ್ಥಳದಲ್ಲೇ ನಂಗೂ ನಾಯಿಮರಿಬೇಕು ತಂದುಕೊಡು ಅಂತ ಹಠ ಮಾಡುತ್ತಿದ್ದಳು. ಇವಳ ಜೊತೆ ನನ್ನ ಹೆಂಡತಿ ಬೇರೆ, “ನೋಡಿ ಮಗು ನಾಯಿಮರಿ ಬೇಕು ಅಂತ ಎಷ್ಟು ಹಠ ಮಾಡುತ್ತಾಳೆ ಅವಳ ಜೊತೆಗೆ ಒಂದು ನಾಯಿಮರಿ ಇದ್ದರೆ ಅವಳ ಪಾಡಿಗೆ ಅವಳು ಆಟ ಆಡಿಕೊಂಡಿರುತ್ತಾಳೆ. ಇಲ್ಲ ಅಂದ್ರೆ ನನಗೆ ಒಂದು ಕೆಲಸ ಮಾಡೋಕೆ ಬಿಡಲ್ಲ” ಇದು ನನ್ನ ಹೆಂಡತಿಯ ಊವಾಚ ವಾಗಿತ್ತು.ಮಲಗಲು ಹೋದರೆ ಸಾಕು ಮಗಳು ಸೋನು, “ಪಪ್ಫಾ ನೀನು ಯಾವಾಗ ನಾಯಿ ತಂದುಕೊಡುವುದು? ನೀನು ನಾಯಿ ತಂದು ಕೊಡಲ್ವಾ?” ರಾತ್ರಿಯೆಲ್ಲ ಬರಿಇದೇ ಮಾತು. ಇವಳು ಮಗಳ ಮಾತೆಗೆ ಅನುಮೋದನೆ ಬೇರೆ. “ನೋಡಿ,ಈ ಅಪಾರ್ಟ್ಮೆಂಟ್ ನಲ್ಲಿ ಯಾವ ಮಕ್ಕಳು ಇಲ್ಲ. ಕೆಲವರಿದ್ದಾರೆ ಅವರ ಜೊತೆ ನಮ್ಮ ಸೋನುನಾ ಆಟಕ್ಕೆ ಕಳಸಕ್ಕೆ ಇಷ್ಟನೇ ಆಗಲ್ಲ. ಒಟ್ಟಿನಲ್ಲಿ ಅವಳಿಗೆಆಡೋಕೆ ಒಂದು ನಾಯಿಮರಿ ಬೇಕೇ ಬೇಕು”ಅಂದ್ಲು ಇವರ ಕಾಟ ತಡೆಯಲಾರದೆ ;ನಾಯಿ ತರುವುದಾಗಿ ಒಪ್ಪಿಕೊಂಡೆ.ಒಳ್ಳೆ ನಾಯಿ ನೋಡೋಣ ಎಂದು ನೋಡಿದರೆ ಒಂದು ನಾಯಿ ಮರಿಗೆ ಹತ್ತು ಹನ್ನೆರಡು ಸಾವಿರ ಯಾಕೋ ಜಾಸ್ತಿ ಆಯ್ತು ಅನ್ನಿಸ್ತು. ಇದರ ಬದಲು ಸರ್ಕಾರದವರು ನಾಯಿಯನ್ನು ದತ್ತು ಸ್ವೀಕಾರ ಪದ್ಧತಿ ಮಾಡಿದ್ದಾರಲ್ಲ ನೋಡೋಣ ಅಂತ ಅಂದುಕೊಂಡೆ. ‌ ಒಂದು ದಿನ ನಾಯಿಯನ್ನು ದತ್ತು ಸ್ವೀಕಾರ ಮಾಡಿಕೊಳ್ಳಲು ಮಗಳನ್ನು ಕರೆದುಕೊಂಡು ಹೋದೆ. ಇಪ್ಪತ್ತು ದಿನದ ಒಂದು ಹೆಣ್ಣು ನಾಯಿಮರಿಯನ್ನು ಸೋನು ತುಂಬಾ ಇಷ್ಟಪಟ್ಟಳು. ಅವಳ ಇಷ್ಟದಂತೆ ಆ ನಾಯಿಮರಿಯನ್ನು ದತ್ತು ತೆಗೆದುಕೊಂಡೆ. ನಂತರ ಅವರು ಆ ನಾಯಿಮರಿಗೆ ಏನೇನು ಉಪಚಾರ ಮಾಡಬೇಕೆಂದು ತಿಳಿಸಿದರು. ನಾಯಿಗೆ ಎರಡು ತಿಂಗಳು ಆಗುತ್ತಿದ್ದಂತೆಯೇ ತಿಂಗಳಿಗೊಮ್ಮೆ ಸಿರಪ್ಪು, ಎರಡು ತಿಂಗಳು ತುಂಬಿದ ಮೇಲೆ ಅದಕ್ಕೆ ಪಪ್ಪಿ ಡೇಪಿ ವ್ಯಾಕ್ಸಿನೇಷನ್ ಹದಿನೈದು ದಿನಕ್ಕೊಮ್ಮೆ ಶಾಂಪು ಅಥವಾ ಅದರದೇ ಆದ ಸೋಪಿನಿಂದ ಸ್ನಾನ ಮಾಡಿಸಬೇಕು ನಾಲ್ಕು ತಿಂಗಳಿಗೆ ರೇಬಿಸ್ ವ್ಯಾಕ್ಸಿನೇಷನ್ ಕೊಡಿಸಬೇಕು. ಆರು ತಿಂಗಳು ತುಂಬಿದ ಮೇಲೆ ಅದರ ತೂಕಕ್ಕೆ ಅನುಸಾರವಾಗಿ ಮಾತ್ರೆ ಹಾಕಬೇಕು. ವರ್ಷ ತುಂಬಿದ ಮೇಲೆ ವರ್ಷವರ್ಷಕ್ಕೂ ವ್ಯಾಕ್ಸಿನೇಷನ್ ಕೊಡಿಸಬೇಕು. ಇಷ್ಟು ಲಸಿಕೆಯ ವಿಚಾರವಾದರೆ, ಅದರ ಊಟದ ಬಗ್ಗೆ ಈ ರೀತಿ ಹೇಳಿದರು. ಎರಡು ತಿಂಗಳ ಮಜ್ಜಿಗೆ ಅನ್ನ ಕೊಡಬೇಕು ಮಜ್ಜಿಗೆ ಹುಳಿಇರಬಾರದು. ಪ್ಯಾಕೆಟ್ ಫುಡ್ ತಂದು ಕೊಟ್ಟರೆ ಒಳ್ಳೆಯದು.ಇಲ್ಲಾಮನೆಯಲ್ಲಿ ನೀವೇ ತಯಾರಿಸಿ ಕೊಡುವುದಾದರೆ, ಉಪ್ಪು ಹುಳಿ ಖಾರ ಇರಬಾರದು. ಬೀಜಗಳು ಇರೋ ತರಕಾರಿ ಹಾಕಬಾರದು. ಪ್ರೋಟಿನ್ ಇರೋ ಅಡುಗೆ ಮಾಡಿ ಬಿಸಿಬಿಸಿಯಾಗಿ ಹಾಕಬೇಕು. ಆಮೇಲೆ ಜಾಯಿಂಟ್ ಪೈನ್ ಮಸಲ್ಸ್ ಪೈನ್ ಬರದ ಹಾಗೆ ದಿನಕ್ಕೆರಡು ಬಾರಿ ಮೂರು ಕಿಲೋಮೀಟರ್ ನಾಯಿಯನ್ನ ಓಡಿಸಬೇಕು. ಮಲಗಲು ಹಾಸಿಗೆ ಅದಕ್ಕಾಗಿಯೇ ಇರಬೇಕು. ಅದನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಎಂದು ಹೇಳಿ, ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು, ನಾಯಿಮರಿಯನ್ನು ನನ್ನ ಜೊತೆ ಕಳುಹಿಸಿದರು. ಮನೆಗೆ ತಂದ ಕೂಡಲೇ ಹೆಂಡತಿ ಆರತಿಯೆತ್ತಿದ ನಂತರ ನಾಯಿಮರಿಯ ಪ್ರವೇಶವಾಯಿತು. ಮಗಳು ಅದಕ್ಕೆ ಟೀನು ಎಂದು ಹೆಸರಿಟ್ಟಳು. ಮುದ್ದು ಮುದ್ದಾದ ನಾಯಿ ಮರಿ, ಹೆಂಡತಿಗೆ ಮಗಳಿಗೆ ಅಂತೂ ತುಂಬಾ ಇಷ್ಟ ಆಯ್ತು. ಅದು ಗಲೀಜು ಮಾಡಿದಾಗ ಅದನ್ನು ತೆಗೆಯುವುದು ನನ್ನ ಕೆಲಸವಾಯಿತು. ನಾನಿಲ್ಲದಾಗ ಮಾತ್ರ ಕೆಲಸದವಳ ಕೆಲಸವಾಗಿತ್ತು. ‌ ನಮ್ಮ ಟೀನುಗೆ ಮನೆಯಲ್ಲಿ ಅದಕ್ಕೆತಕ್ಕಂತೆ ಅಡುಗೆ ಮಾಡಿ ಹಾಕುವುದು ಕಷ್ಟವಾಗಿ ಪ್ಯಾಕೆಟ್ ಡ್ರೈ ಫುಡ್ ನ್ನೇ ಅವಲಂಬಿಸಿದೆವು. ದಿನಕಳೆದಂತೆ ಬೆಳೆದು ಬೊಗಳುವುದು ಜಾಸ್ತಿ ಆಯ್ತು. ಅಕ್ಕ ಪಕ್ಕದ ಮನೆಯವರು” ಸ್ವಾಮಿ, ನಾಳೆ ಬೆಳಗ್ಗೆ ನಾವು ಆಫೀಸಿಗೆ ಹೋಗಬೇಕು ನಿಮ್ಮ ನಾಯಿಗೆ ಸ್ವಲ್ಪ ಸುಮ್ಮನಿರಕ್ಕೆ ಹೇಳ್ತೀರಾ!” ಅಂತ ದೂರುಗಳು ಬರೋಕೆ ಶುರುವಾಯ್ತು. ನಾವು ಮೇಲ್ಗಡೆ ರೂಮಿನಲ್ಲಿ ಒಂದು ಗೂಡು ಮಾಡಿಸಿ ಹಾಸಿಗೆ ರೆಡಿ ಮಾಡಿ ಬಿಟ್ಟಿದ್ದೂ ಆಯಿತು. ಆದರೂ ಒಮ್ಮೊಮ್ಮೆ ಏನಾದರೂ ಶಬ್ದ ವಾದರೆ ಸಾಕು ಎಲ್ಲರನ್ನೂ ಬೊಗಳಿ ಎಬ್ಬಿಸುತ್ತಿತ್ತು. ಮತ್ತೆ ಅಕ್ಕಪಕ್ಕದವರ ಗೊಣಗಾಟ ನಡೆಯುತ್ತಿತ್ತು. ಇದು ಹೋಗಲಿ ಅಂದರೆ ಬೆಳಗ್ಗೆ ವಾಕಿಂಗ್ ಕರ್ಕೊಂಡು ಹೊರಟರೆ ಅಲ್ಲಿಯೂ ನಮ್ಮ ಟೀನು ಸಲುವಾಗಿ ಬೈಸಿ ಕೊಳ್ಳ ಬೇಕಿತ್ತು ಏಕೆಂದರೆ ಕಾರು ಬೈಕು ಎತ್ತರವಾಗಿ ಏನು ಕಂಡರೂ ಸರಿ ನಮ್ಮ ಟೀನು ಅಲ್ಲಿ ಕಾಲೆತ್ತಿ ಗಲೀಜು ಮಾಡತ್ತಿತ್ತು. ಅವರು ನನ್ನ ಬಯ್ಯೋರು. ಒಟ್ಟಿನಲ್ಲಿ ಮುದ್ದಾಡುವುದು ಆಟ ಆಡೋದು ಎಲ್ಲ ಹೆಂಡತಿ-ಮಕ್ಕಳಿಗೆ ಮೀಸಲು. ನಾಯಿಗೋಸ್ಕರ ಕಷ್ಟಪಡುವುದು ಬೇರೆಯವರ ಹತ್ತಿರ ಅನ್ನಿಸಿಕೊಳ್ಳುವುದು ಅದು ನನಗೆ ಮೀಸಲಾಗಿತ್ತು. ಅವರೆಲ್ಲ ಸಾರಿಸಿ ರಂಗೋಲಿ ಹಾಕುತ್ತಿದ್ದರೆ ನಮ್ಮ ಟೀನು ಹೋಗಿ ಗಲೀಜು ಮಾಡುತ್ತೆ ಅನ್ನೋವಷ್ಟರಲ್ಲಿ ನಾನು ಬೇಗ ಅದನ್ನ ಕರ್ಕೊಂಡು ಹೋಗುತ್ತಿದದ್ದೆ ಅನ್ನಿ.ಒಟ್ಟಿನಲ್ಲಿ ನಮ್ಮ ಟೀನು ದೆಸೆಯಿಂದ ನಾನು ಸ್ಲಿಂಆದೆ. ನೋಡಿದೋರೆಲ್ಲ ನನ್ನ ವಯಸ್ಸಿಗಿಂತ ಚಿಕ್ಕೋನಾಗಿ ಕಾಣ್ತೀಯಾ ಅನ್ನುತಿದ್ರು. ಇದು ನನ್ನಾಕೆಗೆ ಇಷ್ಟ ಆಗ್ತಿರಲಿಲ್ಲ. ‌ ಯಾರದಾದರೂ ಮನೆಯಲ್ಲಿ ಮದುವೆ ಮುಂಜಿ ಏನೇ ಆಗಲಿ ಅಮ್ಮ-ಮಗಳು ಹೊರಟು ಬಿಡುತ್ತಿದ್ದರು.ನನಗೆ ನಾಯಿ ನೋಡಿಕೊಂಡು ಕಾಯುವ ಕೆಲಸ ನನ್ನದಾಗಿತ್ತು. ಅದನ್ನು ನೋಡಿಕೊಳ್ಳುತ್ತಾ ನೋಡಿಕೊಳ್ಳುತ್ತಾ ಕ್ರಮೇಣ ನನ್ನ ಮಗಳು ಸೋನು, ಹೆಂಡತಿ ಗಿಂತಲೂ ನಾಯಿನೇ ಹೆಚ್ಚಾಯಿತೇನೋ ಅನ್ನೋವಷ್ಟರ ಮಟ್ಟಿಗೆ ನನಗಾಗಿತ್ತು. ಹೆಂಡತಿ ನೀವು ನನಗಿಂತ ನನ್ನ ಮಗಳಿಗಿಂತ ನಿಮಗೆ ನಾಯಿಯೇ ಹೆಚ್ಚಾಯ್ತು ಅಂತ ಎರಡೆರಡು ದಿನ ನನ್ನ ಜೊತೆ ಮಾತೇ ಬಿಟ್ಟು ಬಿಡೋದಕ್ಕೆ ಶುರುಮಾಡಿದ್ಲು. ಈಗ ಮಗಳು ಸೋನು “ಪಪ್ಪಾ ನಾಯಿಮರಿ ದೊಡ್ಡದಾಯಿತು ಅದಕ್ಕೆ ನೀನು ಬೇಕು. ನಿಂಗೆ ನಾಯಿನೇ ಬೇಕು. ಎಲ್ಲಾದರೂ ಬಿಟ್ಟು ಬಾಪ್ಪ ನಾಯಿನ!” ಅಂತ ಮಗಳು ಕೂಡ ಹೇಳೋಕೆ ಶುರು ಮಾಡಿದ್ಲು. ಹೀಗೆ ದಿನಗಳು ಉರುಳುತ್ತಿತ್ತು ನಾನು ಟೀನು ತುಂಬಾ ಹತ್ತಿರವಾದೆವು. ‌ ಟೀನು ದೊಡ್ಡದಾಗಿ ನಾಲ್ಕುಮರಿಯನ್ನು ಹಾಕುವುದರಮೂಲಕ ತಾಯಿ ಆಯಿತು. ಆ ಮರಿಗಳನ್ನು ಏನು ಮಾಡೋದು? ಒಪ್ಪಂದದ ಪ್ರಕಾರ ನಾಯಿ ಮರಿಯನ್ನು ಅಲ್ಲಿ ಇಲ್ಲಿ ಎಲ್ಲೂ ಬಿಡುವ ಹಾಗಿಲ್ಲ. ನಾವು ಕೂಡ ಬೇರೆಯವರಿಗೆ ದತ್ತುನೇ ಕೊಡಬೇಕಿತ್ತು. ಒಂದು ನಾಯಿಗೆ ವಿಪರೀತ ಖರ್ಚು ಬರುತ್ತಿತ್ತು. ಇನ್ನು ನಾಲ್ಕು ಮರಿಗಳನ್ನ ಹೇಗೆ ಸಾಕೋದು? ಏನು ಮಾಡುವುದು! ಅಂದುಕೊಂಡು ಮಕ್ಕಳಿರುವ ಮನೆ ಗಳಿಗೆ ಹೋಗಿ ನಾಯಿಮರಿ ಬೇಕಾ ?ನಾಯಿ ಮರಿ ಬೇಕಾ?ಅಂತ ಕೇಳಿದ್ದೇ ಆಯ್ತು. ಆದರೆ ಯಾರೂ ನಾಯಿಬೇಕು ಅಂತ ಹೇಳಲಿಲ್ಲ. ಬಲವಂತ ಮಾಡಿದೆ. ಪರಿಪರಿಯಾಗಿ ಕೇಳಿದಾಗ, ನಮ್ಮ ಮಕ್ಕಳಿಗೆ ಮೊಬೈಲ್ ಇದೆ ಕಂಪ್ಯೂಟರ್ ಇದೆ. ನಾಯಿಮರಿ ಜತೆ ಆಟ ಆಡೋಕೆ ಟೈಮಿಲ್ಲ. ನಮಗೇ ಅಡುಗೆ ಮಾಡಿಕೊಳ್ಳುವುದೇ ಕಷ್ಟ; ಇನ್ನಾ ನಾಯಿಗಾಗಿ ಹೇಗೆ ಅಡುಗೆ ಮಾಡಿ ಹಾಕೋಣ ?ಎಂದು ಎಲ್ಲರೂ ಬೇಡ ಅಂತಾನೆ ಹೇಳಿ. ಈಗ ನನ್ನ ಪರಿಸ್ಥಿತಿ ಹೇಗಿದೆ ಎಂದರೆ ಮನೆಯಲ್ಲಿ ಮಗಳು ಹೆಂಡತಿ ನನ್ನ ಜೊತೆ ಮಾತಾಡಲ್ಲ ನಾಯಿಮರಿ ವಿಚಾರ ತಲೆಯಲ್ಲಾ ತುಂಬಿ ಬಿಟ್ಟಿದೆ. ನಾನು ಎಲ್ಲೇ ಹೋಗಲಿ ಯಾರಾದ್ರೂ ಸಿಗಲಿ ನಿಮಗೆ ನಾಯಿ ಬೇಕಾ? ಅನ್ನುವ ಸ್ಥಿತಿ ನನ್ನದಾಗಿದೆ ಈಗ ಇದಕ್ಕೆಏನು ಪರಿಹಾರ ಅಂತ ನೀವು ಹೇಳ್ತೀರಾ!! **********

ಹಾಸ್ಯಲೋಕ Read Post »

ಕಾವ್ಯಯಾನ

ಕಾವ್ಯಯಾನ

ಕೊನೆಯೂ ಅಲ್ಲ! ರೇಖಾ ವಿ.ಕಂಪ್ಲಿ ನಾವು ಇಲ್ಲಿ ಮೊದಲು ಅಲ್ಲ ಕೊನೆಯು ಅಲ್ಲ ಮೊದಲಾದೊಡೆ ಮೊದಲಿಗರು ಕೊನೆಯಾದಡೆ ಕೊನೆಗಿರುವ ಎಮ್ಮ ಜೀವದಾಟದಲ್ಲಿ ನಾವೇ ಮೊದಲಿಗರು, ಕೊನೆಯವರು ಎಮ್ಮ ದುಃಖ ಎಮಗೆ ಹಿರಿದು ತಮಗೆ ಕಿರಿದು ಕಾಲನುರುಳಲಿ ಕವಿಯು ಬರೆಯಲಿ ಮೊದಲು ಕೊನೆಯ ನಡುವಿನಲಿ ಜೀವದೂಟದ ಎಲೆಯಲಿ ಕಾವ್ಯ ಕಥನವು ಉಳಿಯಲಿ ಕವಿ ಕಾಣದೇ ಅಳಿಯಲಿ ನಾವು ಇಲ್ಲಿ ಮೊದಲು ಅಲ್ಲ ಕೊನೆಯು ಅಲ್ಲ… ***********************************

ಕಾವ್ಯಯಾನ Read Post »

ಕಥಾಗುಚ್ಛ

ಕಥಾಗುಚ್ಛ

ಒಂದು ಸಾವಿನ ಸುತ್ತಾ ವೇಣುಗೋಪಾಲ್ ಕೆಲಸ ಮುಗಿದು ಮನೆಗೆ ಬರುವ ಹೊತ್ತಿಗೆ ರಾತ್ರಿ ಎಂಟು ಗಂಟೆಯಾಗಿತ್ತು. ಬಟ್ಟೆ ಬದಲಿಸಿ ಮುಖ ತೊಳೆದು, ಫ್ರಿಡ್ಜ್ನಲ್ಲಿದ್ದ ಎರಡು ಮೊಟ್ಟೆಗಳನ್ನ ತೆಗೆದುಕೊಂಡು ಬೆಳಗ್ಗಿನ ತಂಗಳಿಗೆ ಎಗ್ರೈಸ್ ಮಾಡಲು ಈರುಳ್ಳಿ ಕತ್ತರಿಸುತ್ತಿದ್ದೆ ಫೋನ್ ರಿಂಗಣಿಸಿತು ಅಪ್ಪನ ಫೋನ್ ಹಲೋ ಹೇಳಣ್ಣ.? ಎಲ್ಲಿದ್ದಿಲಾ.? ಇವಾಗ ಬಂದೆ ಮನೆಗೆ ಏನು ಹೇಳು.? ಮಾಗಡಿ ನಿಮ್ಮತ್ತೆ ಮಗ ಕೆರೆಗೆ ಬಿದ್ದನಂತೆ.. ಪೊಲೀಸೆರೆಲ್ಲ ಬಂದು ಹುಡುಕಿದರೂ ಸಿಕ್ಕಿಲ್ಲವಂತೆ ಅಲ್ಲಿ ಯಾರು ಇರೋದು ಕಾಣೆ..!? ಹೋಗು ಅದೇನ್ ವಿಚಾರಿಸು ಒಂದೇ ಸಮನೆ ಅಳುತ್ತ ಕುತ್ತಿದ್ದಾಳೆ..! ಯಾರು..? ಕಿರಣನ ಅರುಣನ..? ಇನ್ಯಾರು ಆ ತರ್ಲೆ ನನ್ನ ಮಗ ಕಿರಣ ಇರ್ತಾನೆ..! ಹಾಸನದಿಂದ ಯಾರು ಬಂದಿಲ್ವಾ..? ನಿಮ್ಮ ಚಿಕ್ಕಪ್ಪ ಹೊರ್ಟಿರ್ಬೇಕು ನೀನು ಹೋಗವತ್ತಿಗೆ ಬಂದಿರ್ತಾನೆ ಹೋಗು ಮೊದ್ಲು.. ಅದೇನು ವಿಚಾರಿಸು.. ಆಯ್ತು ಅಂತ call cut ಮಾಡಿ ಇದ್ದ ತಂಗಳನ್ನೇ ಬಿಸಿ ಮಾಡಿ ತಿನ್ನುವಷ್ಟರಲ್ಲಿ ಒಂಬತ್ತು ಗಂಟೆಯಾಗಿತ್ತು.. ಅತ್ತೆಯ ವಿಚಾರಿಸಲು call ಮಾಡ್ದೇ ಮೊಬೈಲ್ ಸ್ವಿಚ್ ಆಫ್ ಆಗಿತ್ತು.! ಹಾಗೆ ಹೋಗುವುದು ಬೇಡವೋ ಎಂಬ ಯೋಚನೆಯಲ್ಲಿ ಇನ್ನು ಹದಿನೈದು ನಿಮಿಷ ಕಳೆದೆ.. ಯಾಕೋ ಮನಸ್ಸು ಇಲ್ಲೇ ಇರಲು ಬಿಡಲಿಲ್ಲ ಲೈಟ್ ಆಫ್ ಮಾಡಿ ಲಾಕ್ ಹಾಕಿ ಮೆಟ್ಟಿಲು ಇಳಿದು ಕಾರನ್ನ ಪಾರ್ಕಿಂಗ್ನಿಂದ ತೆಗೆದು ಹೊರಟೆ. ಸುಂಕದಕಟ್ಟೆ ಬಿಡುವ ಹೊತ್ತಿಗೆ ಹತ್ತುಗಂಟೆ ದಾಟಿತ್ತು.. ಮಾಗಡಿಯಿಂದ ಐದು ಕಿಲೋಮೀಟರ್ ಇರುವ ತೂಬಿನಕೆರೆ ಅದೇ ಊರಿನ ಕೆರೆಯಲ್ಲೇ ಬಿದ್ದಿರ್ಬೇಕು..! ಶವ ಸಿಕ್ಕಿದಿಯೋ ಇಲ್ವೋ ಗೊತ್ತಿಲ್ಲಾ.? ಅರುಣನಿಗೊಮ್ಮೆ ಫೋನ್ ಹಾಯಿಸಿದೆ ಅವನ ಫೋನ್ ಕೂಡ ಸ್ವಿಚ್ ಆಫ್..! ನಲವತ್ತು ಕಿಲೋಮೀಟರ್ ಪಯಣ.. ಆ ರಾತ್ರಿಯ ಚಿಕ್ಕ ರಸ್ತೆ.. ಎದುರಿಗೆ ಅತ್ತೆಯ ಜೀವನ ಕಣ್ಣು ಮುಂದೆ ಬಂದು ಹೋಗುತ್ತಿದೆ. ಗಂಗಾತ್ತೆ ನನ್ನ ಸೋದರತ್ತೆಯೇನು ಅಲ್ಲ..! ನನ್ನಜ್ಜಿಯ ತಂಗಿಯ ಮಗಳು.. ಮಕ್ಕಳು ಚಿಕ್ಕವರಿದ್ದಾಗಲೇ ಗಂಡನನ್ನು ಕಳೆದುಕೊಂಡವಳು ಆ ಕಷ್ಟದಲ್ಲೂ ಒಂದುದಿನವೂ ತವರುಮನೆಗೆ ಹೋಗಿ ಕುಳಿತವಳಲ್ಲ ಅಣ್ಣ ಎಷ್ಟೇ ಕರೆದರು ನೆಂಟರಂತೆ ಹಬ್ಬಕ್ಕೆ ಹೋಗಿಬರುತ್ತುದ್ದವಳು.! ಎರಡು ಅವಳಿ ಮಕ್ಕಳು ಸ್ವಲ್ಪ ವ್ಯತ್ಯಾಸವಿದ್ದರು ಹೊಸಬರಿಗೆ ಇಬ್ಬರು ಒಂದೇರೀತಿಯಾಗಿ ಕಾಣುತ್ತಿದ್ದರು.! ಕಿರಣ ಇತ್ತೀಚೆಗೆ ಮಾಗಡಿಯ ಗ್ಯಾಂಗ್ವಾರ್ನಲ್ಲಿ ಸಿಕ್ಕಿ ಇಪ್ಪತ್ತೆರಡನೆ ವಯಸ್ಸಿಗೆ ಪೊಲೀಸ್ ಸ್ಟೇಷನ್ನು ಜೈಲ್ ಮೆಟ್ಟಿಲು ಹತ್ತಿ ಬಂದಿದ್ದ.! ಅರುಣ ತುಂಬಾ ಸೈಲೆಂಟ್ ಹುಡುಗ ಫೋಟೋ ಗ್ರಾಫರ್ ಕೆಲಸ ಮಾಡುತ್ತಿದ್ದ. ಗಂಡ ಸತ್ತ ನಂತರ ಇವೆರಡು ಮಕ್ಕಳನ್ನ ಸಾಕುವುದಕ್ಕೆ ಅದೆಷ್ಟು ಕಷ್ಟ ಪಟ್ಟಿದ್ದಳೋ ಆ ದೇವರಿಗೆ ಗೊತ್ತು ಅಂಗನವಾಡಿಯ ಕೆಲಸದ ನಂತರ ಅವರಿವರ ಮನೆಯಲ್ಲಿ ಮುಸುರೆ ತಿಕ್ಕಿ ಬಟ್ಟೆ ಹೊಗೆದು ತಾನು ತಿನ್ನುವುದು ಒಂದೊತ್ತು ಕಡಿಮೆಯಾದರೂ ಅವರನ್ನ ಖಾಲಿಯೊಟ್ಟೆಯಲ್ಲಿಟ್ಟವಳಲ್ಲ.! ತೇವಳುತ್ತಿದ್ದ ಮಕ್ಕಳನ್ನ ತನ್ನೆತ್ತರಕ್ಕೆ ಬೆಳೆಸಿದ್ದಳು.. ಆಕೆ ಮೇಲೆ ನನಗೆ ತುಂಬಾ ಅನುಕಂಪ ಯಾಕೆ ಗೊತ್ತೇ..!? ಆಕೆ ಹುಟ್ಟುಕುಂಟಿ ಇಷ್ಟೆಲ್ಲ ತನ್ನ ದೇಹದ ವೈಪಲ್ಯ ಬದುಕಿನ ವೈಫಲ್ಯದಲ್ಲೂ ಆಕೆಯ ಆಗಾದ ಎತ್ತರದ ಮನಸ್ಥಿತಿ ಅದೆಷ್ಟು ಗಟ್ಟಿಯಾಗಿತ್ತು ಅವಳು ಬದುಕನ್ನು ಕಟ್ಟಿಕೊಂಡ ಅವಳ ವಾಸ್ತವ ದೃಢ ನಿರ್ಧಾರಗಳು ಅದೆಷ್ಟು ಗಟ್ಟಿಯಾಗಿರಬೇಡ.! ಇನ್ನೇನು ಸುಖವಾಗಿರ ಬೇಕು ಅನ್ನುವಷ್ಟುರಲ್ಲಿ ಇನ್ನೊಂದು ಆಘಾತ.! ಯಾಕೋ ಗೊತ್ತಿಲ್ಲ ಆ ದೇವರು ಆಕೆಯ ಹಣೆಯಲ್ಲಿ ಸುಖವನ್ನ ಬರೆದಿಲ್ಲವೋ.. ಇಲ್ಲಾ ಅವಳು ಬದುಕನ್ನ ಗೆದ್ದರೀತಿಗೆ ದೇವರು ಸೋತು ಜಿದ್ದಿಗಿಳಿದ್ದಿದ್ದಾನೋ..!? ಅನಿಸುತ್ತಿದೆ.. ಕಾರು ಮಾಗಡಿ ಕೋಟೆಯ ಎದುರಿನ ರಸ್ತೆಗೆ ತಿರುಗಿತು ಬಲಭಾಗಕ್ಕೆ ಸಣ್ಣ ಕೆರೆಬಿಟ್ಟೋಡನೆಯೇ ಮಗ್ಗುಲಿಗೆ ಒಂದು ಸಣ್ಣ ಹಳ್ಳಿ ಅದನ್ನ ದಾಟಿ ಮುಂದೆ ಹೋಗುತ್ತಿದೆ ವಿದ್ಯುತ್ ಬೇಳಕಿಲ್ಲದ ಗುಂಡಿ ತುಂಬಿರುವ ರಸ್ತೆಗಳು ಎಡಭಾಗಕ್ಕೆ ಹೊಲದ ಸಾಲು ಬಲಭಾಗಕ್ಕೆ ಬಂಡೆ ಗುಡ್ಡ ಹಾಗೆ ಅಲ್ಲಲ್ಲಿ ಬೆಳೆದಿದ್ದ ದೊಡ್ಡಮರಗಳು ಗುಚ್ಚಿಗಳ ಸಾಲು..! ಕುಲುಕುತ್ತ ಹೋಗುತ್ತಿದ್ದ ಕಾರಿನ ಎದುರಿಗೆ ಹುಡುಗನೊಬ್ಬ ನೆಡೆದು ಹೋಗುತ್ತಿದ್ದಾನೆ ಸಮಯ ಹನ್ನೊಂದು ಇಪ್ಪತ್ತು. ಇಷ್ಟುಹೊತ್ತಿನಲ್ಲಿ ಯಾರಿರಬಹುದೆಂದು ಅವನ ಪಕ್ಕಕ್ಕೆ ಹೋಗಿ ಗಾಡಿ ನಿಲ್ಲಿಸಿ ನೋಡಿದರೆ ಅರುಣ.! ಅವನನ್ನ ಕೂರಿಸಿಕೊಂಡು ಮಾತನಾಡಲು ಮನಸ್ಸಿಲ್ಲದೆ ಗಾಡಿ ಸ್ಟಾರ್ಟ್ ಮಾಡಿ ಮುಂದೆ ಗುಂಡಿಗಳ ನೋಡುತ್ತಾ ಎರಡನೇ ಗೇರಿನಲ್ಲೇ ಡ್ರೈವ್ ಮಾಡುತ್ತಿದ್ದೆ.. ಅವನೇ ಇಷ್ಟೋತ್ತಿನಲ್ಲಿ ನಮ್ಮೂರಕಡೆ ಹೊರಟಿದ್ದಿಯಲ್ಲ ಅಣ್ಣ ಏನು ಸಮಾಚಾರ ಅಂದ..! ತಿರುಗಿ ಅವನನ್ನೇ ನೋಡುತ್ತಾ ನಿನ್ನ ಮೊಬೈಲ್ ಏನು ಆಯ್ತು ಅಂದೆ.? ಬಸ್ನಲ್ಲಿ ಕದ್ದುಬಿಟ್ರು ಅಣ್ಣ.. ಇಸ್ಟು ಹೊತ್ತಿನವರೆಗೂ ಏನು ಮಾಡ್ತಿದ್ದೆ..? ಫೋನ್ ಇಲ್ಲದೆ ಪರದಾಡಿ. ಕೆಲಸ ಮುಗಿಸಿಕೊಂಡು ಬರುತ್ತಿದ್ದೀನಿ.! ಇವನಿಗೆ ಕಿರಣ ಸತ್ತಿರುವ ವಿಚಾರ ಗೊತ್ತಿಲ್ಲ.. ಹೇಳೋದು ಬೇಡ ಅನಿಸಿ ಸುಮ್ಮನಾದೆ ಅವನೇ ಮತ್ತೆ ಮಾತಿಗಿಳಿದ ಅಣ್ಣಾ ಈ ರೋಡ್ನಲ್ಲಿ ಈ ಟೈಂ ನಲ್ಲಿ ಬರೋಕೆ ಹೋಗ್ಬೇಡಿ ಅಣ್ಣ ಜಾಗ ಸರಿ ಇಲ್ಲಾ.. ಅಂದ..! ನಗುತ್ತ ನೀನು ಬರ್ತಿದ್ದಿಯಲ್ಲೋ ಅಂದೆ. ನಾನು ಹಳಬ ಓಡಾಡಿ ಅಭ್ಯಾಸವಿದೆ ಇವತ್ತು ನಾನು ಬಂದಿದ್ದಕ್ಕೆ ಸರಿಹೋಯ್ತು.. ಇಲ್ಲಾ ಅಂದ್ರೆ ಕಷ್ಟ ಆಗ್ತಿತ್ತು ಅಂದ..! ನಗುತ್ತಲೇ ಸುಮ್ಮನಾದೆ ಊರು ಹತ್ತಿರವಾಗುತ್ತಿದೆ ಆ ಊರಿನಲ್ಲೂ ವಿದ್ಯುತ್ ಬೆಳಕಿಲ್ಲ ಮನೆಯೊಳಗೆ ಉರಿಯುತ್ತಿದ್ದದ್ದು ಚರ್ಚ್ ಲೈಟ್ಗಳು ಮಾತ್ರ.. ಮತ್ತೆ ಅವನತ್ತ ತಿರುಗಿದೆ ಅವನ ಕೈನಲ್ಲಿ ಟ್ಯಾಟು #GK ಅಂತ ಡಿಸೈನ್ ಆಗಿ ಟ್ಯಾಟು ಹಾಕಿದ್ದ ಏನು ಇದು ಅಂದೆ ಗಂಗಮ್ಮ ಕಿರಣ ಅಂದ..! ಆ ಮಾತು ಕೇಳಿ ಗಂಟಲು ಬಿಗಿಯಾಯ್ತು.. ಕಣ್ಣುಗಳು ನೀರು ತುಂಬುತ್ತಿದೇ ಭಾವನೆಗಳ ತೊಳಲಾಟವಾಗುತ್ತಿದೆ.. ಅಣ್ಣಾ ಇಲ್ಲೇ ನಿಲ್ಲಸಿ ಕಾರು ಒಳಗೆ ಬರೋಕೆ ಆಗಲ್ಲ ಬಂದ್ರೆ ವಾಪಸ್ ತಿರುಗಿಸೋದು ಕಷ್ಟ ಅಂತ ಹೇಳಿ ಎದುರಿಗೆ ಖಾಲಿ ಜಾಗದಲ್ಲಿ ಹಾಕುವುದಕ್ಕೆ ಹೇಳಿ ಹೊರಟುಹೋದ.. ನಾನು ಗಾಡಿಯನ್ನ ಪಾರ್ಕ್ ಮಾಡಿ ಬೇಕಂತಲೇ ಸ್ವಲ್ಪ ಸಮಯ ಬಿಟ್ಟು ಹೋದೆ.. ಇನ್ನು ಶವ ಸಿಕ್ಕಿರಲಿಲ್ಲ ಅರುಣ ಮೂಲೆಯಲ್ಲಿ ಕುಳಿತಿದ್ದ ಅತ್ತೆ ಅತ್ತು ಅತ್ತು ಸುಸ್ತಾಗಿ ಕುಸಿದು ಕುಳಿತ್ತಿದ್ದಳು ಹಾಸನದ ಚಿಕ್ಕಪ್ಪ ಆಗಲೇ ಬಂದಿದ್ದರು ಸ್ವಲ್ಪ ಹೊತ್ತು ಹಾಗೆ ಮೌನ ಅತ್ತೆ ಕತ್ತೆತ್ತಿ ನೋಡಿದಳು ಸಣ್ಣ ಬೆಳಕಲ್ಲೇ ಮುಖ ಗುರುತು ಹಿಡಿದವಳೇ ಅಳಲು ಶುರುವಾದಳು ಸ್ವಲ್ಪ ಹೊತ್ತು ಸಮಾಧಾನದ ಮಾತುಗಳನ್ನಾಡಿ ಹೊರ ಬಂದೆ ಚಿಕ್ಕಪನು ಹೊರ ಬಂದರು.. ‘ಬಾಡಿ ಸಿಕ್ಕಿಲ್ಲ ಕಾಣೋ.. ಬೆಳಗ್ಗೆ ಬಂದು ಹುಡುಕ್ಕುತ್ತಾರಂತೆ.! ಬೆಳಗ್ಗೆ ಊರಿನಿಂದ ಸಂಬಂಧಿಕರು ಬರ್ತಾರೆ ನೋಡೋಣ ಏನು ಮಾಡಬೇಕು ಅಂತ ಮುಂದಿನದ್ದು ಯೋಚನೆ ಬೆಳಗ್ಗೆ ಮಾಡೋಣ’.. ಅಂದ್ರು ‘ಯಾಕೆ ಸತ್ತ ಅಂತ ಗೊತ್ತಿಲ್ವ.?’ ‘ಇಲ್ಲಾ ಪಾಪ’ ಮುಂದೆ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅನಿಸಿ ಮತ್ತೆ ಏನನ್ನು ಮಾತನಾಡದೆ ಸುಮ್ಮನೆ ಹೊರಗೆ ಕುಳಿತೆ.. ಒಳಗೆ ಬಾ ಅಂದ್ರು ಇಲ್ಲಾ ಕಾರಲ್ಲಿ ಇರ್ತೀನಿ ಅಂತ ಹೋಗಿ ಸ್ವಲ್ಪ ಹೊತ್ತು ಮಲಗಿದೆ. ಬೆಳಕ್ಕಾಗಿ ಉರಿನವರೆಲ್ಲ ಕೆರೆಯ ಬಳಿ ಹೋಗುತ್ತಿದ್ದರು ಹಾಗೆ ನಾನು ಹೊರಟೆ ಹಿಂದೆಯೇ ಪೊಲೀಸ್ ಗಾಡಿ ಬಂತು ನೇರ ಕೆರೆಯ ಬಳಿ ಹೋದೆ ವಿಶಾಲವಾದ ದೊಡ್ಡ ಕೆರೆ ಈ ವರ್ಷದ ಮಳೆಗೆ ತುಂಬಿದೇ ಒಂದು ಮಗ್ಗುಲಿಗೆ ಸಣ್ಣ ಸಣ್ಣ ಗುಡ್ಡಗಕಿದ್ದವು.. ಇಷ್ಟು ದೊಡ್ಡ ಕೆರೆಯಲ್ಲಿ ಹುಡುಕುವುದು ಕಷ್ಟ ಇದೆ ಕಣ್ರಿ ಅಂತ ಪೊಲೀಸ್ ನವರು ಮಾತನಾಡಿಕೊಳ್ಳುತ್ತಿದ್ದರು.! ತೆಪ್ಪದಲ್ಲಿ ಸ್ಥಳೀಯ ಈಜುಗಾರರು ಹುಡುಕಲು ಇಳಿದರು.. ಮಧ್ಯಾಹ್ನ ಮೂರರವೊತ್ತಿಗೆ ಶವ ಸಿಕ್ಕಿತು ಜುಟ್ಟು ಹಿಡಿದುಕೊಂಡು ಒಬ್ಬ ಎಳೆದುಕೊಂಡು ಬಂದ..! ದಡಕ್ಕೆ ತಂದು ಮಲಗಿಸುವ ಹೊತ್ತಿಗೆ ಅಲ್ಲೇ ಕುಳಿತ್ತಿದ್ದ ಅತ್ತೆ ಅವರ ಜೊತೆಯಲ್ಲಿದ್ದ ಅರುಣ ಕಿರುಚ್ಚುತ್ತ ಅಳುತ್ತಿದ್ದಾರೆ.. ಸಂಬಂಧಿಕರು ಕೂಡ ಅವನ ಗೆಳೆಯರು ಎಲ್ಲರೂ ಸುತ್ತ ನಿಂತು ಬಿಟ್ಟರೂ.. ಸ್ವಲ್ಪ ಹೊತ್ತಿನ ನಂತರ ಪೊಲೀಸ್ನೊಬ್ಬ ಎಲ್ಲರನ್ನು ದೂರ ಹೋಗುವಂತೆ ಹೇಳಿ ಪೋಸ್ಟ್ ಬರ್ಟಮ್ ಗೆ ಮಾಗಡಿದೆ ತೆಗೆದುಕೊಂಡು ಹೋಗಬೇಕೆಂದು ಹೇಳಿದ ಚಿಕ್ಕಪ್ಪ ಮತ್ತು ಅತ್ತೆಯ ಬಳಿ ಸಹಿ ತೆಗೆದುಕೊಳ್ಳುತ್ತಿದ್ದ. ಇದನ್ನೆಲ್ಲ ದೂರದಿಂದಲೇ ನೋಡುತ್ತಾ ನಿಂತಿದ್ದೆ ಚಿಕ್ಕಪ್ಪ ಸುತ್ತ ತಿರುಗಿ ನೋಡಿ ನನ್ನನ್ನು ಕರೆದರು ನಾನು ಹೊರಟೆ ಗಾಡಿತೆಗಿ ಮಾಗಡಿಗೆ ಹೋಗಿ ಬರೋಣ ಅಂತ ಹೇಳಿ ಗಾಡಿ ಬಳಿ ಹೊರಟರು.! ಆಂಬ್ಯುಲೆನ್ಸ್ ಶವವವನ್ನು ಹೊತ್ತು ವೇಗವಾಗಿ ಹೊರಟು ಹೋಯ್ತು ಹಿಂದೆ ನಮ್ಮ ಕಾರು ಜೊತೆಗೆ ಅಲ್ಲಿನ ಮುಖಂಡರು ಮಾಗಡಿ ಸರಕಾರಿ ಆಸ್ಪತ್ರೆಯ ಬಂದು ನಿಂತೆವು ಒಳ ಹೋದವರೆ ಡಾಕ್ಟರ್ ಗೆ ಸ್ವಲ್ಪ ದುಡ್ಡುಕೊಟ್ಟು ಬೇಗ ಪೋಸ್ಟ್ ಬರ್ಟಮ್ ಮಾಡಿಸವ ಆತುರದಲ್ಲಿದ್ದರು. ನಾನು ಶವದ ಬಳಿ ನಿಂತೆ ಕೈ ಕಾಲುಗಳು ಸೆಳೆತುಕೊಂಡಿದ್ದವೇನೋ ಮುರಿದು ನೇರ ಮಾಡಿದ್ದರು.. ಆ ಕೈಗಳನ್ನೊಮ್ಮೆ ನೋಡಿದೆ..! ರಾತ್ರಿ ಅರುಣನ ಕೈಯಲ್ಲಿದ್ದ #GK ಟ್ಯಾಟು ನನಗೆ ಕಾನ್ಫ್ಯೂಸ್ ಆಗೋಕೆ ಶುರುವಾಯ್ತು..! ಶವ ಸಿಕ್ಕ ಮೇಲೆ ಅತ್ತೆ ಕೂಡ #ಅರುಣ ಅಂತ ಕಿರುಚುತ್ತಿದ್ದಳು.. ಈಗ ಸತ್ತವನು ಅರುಣ ಎಂದ ಮೇಲೆ ರಾತ್ರಿ ಸಿಕ್ಕವನು ಅರುಣ..! ಮನಸ್ಸು ಗೊಂದಲದಲ್ಲಿ ಸಿಕ್ಕಿಬಿತ್ತು.! ಡಾಕ್ಟರ್ ಬಂದು ಶವಗಾರದೊಳಗೆ ಹೋದರು ಜೊತೆಗೆ ಇಬ್ಬರೂ ಹೆಣ ಕುಯ್ಯುವವರು ಖಾಕಿ ಬಟ್ಟೆ ಹಾಕಿದ್ದವರ ಬಾಯಲ್ಲಿ ಆಗಲೇ ಎಣ್ಣೆಯ ಕಮಟು ರಾಚುತ್ತಿತ್ತು.. ಸ್ವಲ್ಪ ಸಮಯದ ನಂತರ ಮುಖ ಕಾಣುವಂತೆ ಮಾತ್ರ ಬಿಟ್ಟು ಪೂರ್ತಿ ಪ್ಯಾಕ್ ಮಾಡಿದ ದೇಹ ಹೊರಗೆ ಬಂತು.. ಅವರಿಬ್ಬರು ಸಹಾಯಕರಿಗೂ ಚಿಕ್ಕಪ್ಪ ಕೊಟ್ಟಿದ್ದ ಎರಡು ಸಾವಿರದ ಒಂದು ನೋಟುಕೊಟ್ಟೆ..! “ಪ್ರೀತಿ ಪ್ರೇಮ ಯಾಕೆ ಬೇಕು ಈ ಹುಡುಗರಿಗೆ ಅವ್ವ ಅಪ್ಪನ್ನ ಚನ್ನಾಗಿ ನೋಡ್ಕೊಂಡು ಅವರ ಯಣಕ್ಕೆ ಬೆಂಕಿ ಇಕ್ರೋ ಅಂದ್ರೆ ಇವೇ ಸಾಯ್ಬರದ ವಯಸ್ಸಲ್ಲಿ ಸಾಯ್ತಾವೇ.. ಅಂತ ಕಣ್ಣೀರು ತುಂಬುಕೊಂಡು ಹೋರಾಟ ಹೋದ” ಮಾಜರ್ ಮಾಡ್ತಿದ್ದ ಪೊಲೀಸ್ ನವರು ಸಾಕ್ಷಿಗೆ ಸಹಿ ಹಾಕಲು ಕರೆದರು ಸತ್ತವನು ಅರುಣ ಅಂತ ಸ್ಪಷ್ಟವಾಗಿ ಬರೆದಿತ್ತು ಸಹಿ ಹಾಕಿದೆ ಸತ್ತವನ ಯಾರು ಎಂಬ ಗೊಂದಲ ಸ್ಪಷ್ಟವಾಗಿತ್ತು.. ಪ್ಯಾಕ್ ಆದ ಶವ ಮತ್ತೆ ತುಬಿನಕೆರೆಯತ್ತ ಆಂಬ್ಯುಲೆಸ್ನಲ್ಲಿ ಹೊರಟಿತು.. ನಾವು ಹೊರಟೆವು ಊರು ಮುಟ್ಟುವ ಹೊತ್ತಿಗೆ ಚಿತೆಯೊಂದು ಅಣಿಯಾಗಿತ್ತು.! ಅತ್ತು ಸುಸ್ತಾಗಿದ್ದವರೆಲ್ಲ ಹೂವು ಹಾಕಿ ಹೋಗುತ್ತಿದ್ದರು.. ಕೆಲವರು ಊರಿಗೆ ಹೋಗುವ ಗಡಿಬಿಡಿಯಲ್ಲಿದ್ದರು ಅನಿಸುತ್ತದೆ.. ಬೇಗನೆ ಚಿತೆಯ ಮೇಲೆ ಮಲಗಿಸಿ ಕಿರಣನ ಕೈಯಲ್ಲಿ ಕೊಳ್ಳಿಕೊಟ್ಟುರು ಅವನು ಕಿರುಚುತ್ತಲೇ ಇದ್ದ ಅವನು ಕೈಯಲ್ಲಿ ಕೊಳ್ಳಿ ಹಿಡಿದಾಗ ಅವನ ಕೈಯನ್ನೊಮ್ಮೆ ಗಮನಿಸಿದೆ ಬೋಡು ಕೈಗಳು ಯಾವುದೇ ಟ್ಯಾಟು ಇರಲಿಲ್ಲ..! ಎಲ್ಲರನ್ನು ಮಾಗಡಿಗೆ ಬಿಟ್ಟು ಬಂದೇ ಅತ್ತೆ ಸುದಾರಿಸಿಕೊಂಡಿದ್ದಳು ಬಲವಂತ ಮಾಡಿ ಊಟ ಮಾಡಿಸುತ್ತಿದ್ದರು.. ಕಿರಣ ಕೂಡ ಊಟ ಮಾಡುತ್ತಿದ್ದ. ನೆನ್ನೆ ನಿನ್ನ ಮೊಬೈಲ್ ಏನಾಗಿತ್ತು ಎಂದೇ..? ಬಸ್ನಲ್ಲಿ ಯಾರೋ ಕದ್ದು ಬಿಟ್ಟರು.. ಎಷ್ಟು ಗಂಟೆಗೆ ಬಂದೆ ..? ಏಳು ಗಂಟೆಯಾಗಿತ್ತು ಮಾಗಡಿಗೆ ಬಂದೆ ಫ್ರೆಂಡ್ ಸಿಕ್ಕಿ ಹೇಳಿ ಕರೆದುಕೊಂಡು ಬಂದ..! ಮತ್ತೆ ಮಾತನಾಡಲು ಏನು ಇರಲಿಲ್ಲ.. ನೀನಾದ್ರು ಅತ್ತೆನ ಚನ್ನಾಗಿ ನೋಡ್ಕೋ.. ಎಂದು ಹೇಳಿ ಹೊರ ಬಂದೆ ಚಿಕ್ಕಪ್ಪ ಮಾತಿಗೆ ಕುಳಿತರೂ ಹುಡ್ಗಿಗೋಸ್ಕರ ಸತ್ತವನೆ ದರಿದ್ರ ನನ್ನ ಮಗ ಕರೆದುಕೊಂಡು ಬಂದಿದ್ರೆ ಮದ್ವೆ ಮಾಡೋಲ್ಲ ಅಂದಿರೋಳ ಅವರಮ್ಮ.. ಪ್ರಾಣ ಕಳೆದುಕೊಳ್ಳೋದು ಏನಿತ್ತು.. ಇವಕ್ಕೆಲ್ಲ ಅವರಮ್ಮ ಕಷ್ಟಬಿದ್ದು ಸಾಕಿದ್ದು ನೆನಪಿಗೆ ಬರೋಲ್ವ… ನಾನು ಸುಮ್ಮನೆ ಕುಳಿತ್ತಿದ್ದೆ..! ರಾತ್ರಿ ಹತ್ತುಗಂಟೆಯ ಹೊತ್ತಿಗೆ ಹೊರಟೆ ಅದೇ ಗುಂಡಿಗಳಿರುವ ದಾರಿ ಬೆಂಗಳೂರು ನಲವತ್ತು ಕಿಲೋಮೀಟರ್.. ಮಾಗಡಿ ಐದು ಕಿಲೋಮೀಟರ್ ಅದೇ ಎರಡನೇ ಗೇರ್ನಲ್ಲಿ ಗಾಡಿ ನಿಧಾನವಾಗಿ ಚಲಿಸುತ್ತಿದೆ

ಕಥಾಗುಚ್ಛ Read Post »

You cannot copy content of this page

Scroll to Top