ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕೃತಿ: ಭಾವಗಳು ಬಸುರಾದಾಗ. ಕವಿ:ಅರುಣ್ ಕೊಪ್ಪ ವಿಮರ್ಶೆ: ಜಿ.ವಿ.ಕೊಪ್ಪಲತೋಟ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಶ್ರಿÃ ಜಯರಾಮ ಹೆಗಡೆ ಶಿರಸಿ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿಯಲ್ಲಿ ಸಾಹಿತಿ ಡಾ|| ಬೇರ್ಯರಾಮಕುಮಾರ ಅವರು ಅರುಣಕೊಪ್ಪ ಅವರನ್ನು ಪರಿಚಯಿಸಿದ್ದಾರೆ. ಸಾಲದೂ ಎಂಬಂತೆ ಡಾ|| ಅಜಿತ್ ಹೆಗಡೆ ಹರೀಶಿಯವರೂ ಕೂಡಾ ಇವರನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇವರ ಮೊದಲ ಕವನ ಸಂಗ್ರಹ ಹನಿಗಳ ಹಂದರ ಎರಡನೆ ಸಾಹಿತ್ಯ ಕೃತಿಯೇ ಭಾವಗಳು ‘ಬಸುರಾದಾಗ’ (ಕವನ ಸಂಕಲನ) ಈ ಸಂಕಲನದಲ್ಲಿ ಸಣ್ಣದು ದೊಡ್ಡದು ಸೇರಿ ಒಟ್ಟೂ ೭೬ ಕವನಗಳಿವೆ. ಭಾವಗಳು ಬಸುರಾದಾಗ ಏನಾಗುತ್ತದೆ? ಎಂಬುದಕ್ಕೆ ಕವಿ ಅರುಣ ನಾಯ್ಕ ಕೊಪ್ಪದವರ ಈ ಕವನ ಸಂಕಲನವನ್ನು ಓದಿದರೆ ಎಲ್ಲವೂ ಗೊತ್ತಾಗುತ್ತದೆ. ಎಂದು ಒಂದೇ ಮಾತಿನಲ್ಲಿ ಇದಕ್ಕೆ ವಿಮರ್ಶಿಸಬಹುದು. ಆದರೆ ಅದು ವಿಮರ್ಶಕನ ತರ್ಕಬದ್ಧ ಲಕ್ಷಣವಲ್ಲ ಮತ್ತು ಔಚಿತ್ಯವೂ ಅಲ್ಲ. ಮತ್ತು ಕವಿ ಇಟ್ಟುಕೊಂಡ ವಿಶಾಲ ಆಸೆ, ಆಕಾಂಕ್ಷೆ ಹರವನ್ನು ಮೊಟಕುಗೊಳಿಸಿದಂತಾಗಬಹುದೇನೂ?! ಅಲ್ಲದೇ ಬೆಳೆವ ಸಿರಿ ಮೊಳಕೆಯಲಿಯೇ ಚಿವುಟುವುದು ವಿಮರ್ಶೆ ಆಗಲಾರದು. ಕಾವ್ಯದ ಸಾರ, ಅದು ಸಾಗಿದ ಸತ್ಪಥ ಮತ್ತು ಕಾವ್ಯದ ಓದು ಅದು ಹೇಳುವ ಫಲಶ್ರುತಿ ಮತ್ತು ಅದರ ಒಳಧ್ವನಿ ಏನು ಎಂಬುದನ್ನು ತೆರೆದಿಡುವುದೇ ಒಂದು ವಿಮರ್ಶೆ ಎನಿಸಿಕೊಳ್ಳುತ್ತದೆ. ಕಾವ್ಯ ಅಥವಾ ಕವನ ಅದೇನು ಅಷ್ಟು ಸುಲಭವೇನಲ್ಲ. ಹೀಗೆ ಕಾವ್ಯ ರೂಪದಲ್ಲಿ ಹೇಳುವಾಗ ವಿಷಯದ ಪ್ರತಿಪಾದನೆ ಇಟ್ಟುಕೊಂಡಿರುವ ವಸ್ತುವಿನ ಅಸ್ತಿತ್ವ ಮತ್ತು ಭಾವ ಪ್ರತಿಮೆಗಳ ತುಲನಾತ್ಮಕ ಚಿಂತನೆ ಮಾಡುವದು, ಕಾವ್ಯ ರಚನೆಯ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ರಚಿಸುವುದೇ ಕವಿಯ ಮೇಧಾಶಕ್ತಿಗೆ ಒಡ್ಡುವ ಸವಾಲಾಗಿರುತ್ತದೆ. ಒಳ ಮನಸ್ಸಿನ ಆಳದಲ್ಲಿ ಹುದುಗಿದ ಯೋಚನೆಯನ್ನು ಭಾವನಾತ್ಮಕವಾಗಿ ಹೊರಹಾಕುವ ಮುನ್ನ ಅದು ಬಸುರಲ್ಲಿ ಬೆಳೆಯುತ್ತಿರುವ ಮಗುವಂತೆಯೇ ಎಂಬುದನ್ನು ಶ್ರಿÃ ಕೊಪ್ಪರÀವರು ತಮ್ಮದೇ ಆದ ಶೈಲಿಯಲ್ಲಿ ಸಾಕಷ್ಟು ಅರ್ಥಪೂರ್ಣವಾಗಿ ಹೇಳಿದ್ದಾರೆ. ಉದಾ :- ಕವನ ೧ ಅವ್ವನ ಕನಸು ಪ್ರಿÃತಿ ಪಾತ್ರ ನಾ ಇಷ್ಟಿತ್ತು ಮಮತೆಯ ಘನತೆ ಸಲ್ಲಿಸುವ ಗೌರವಕೆ ಕಿಂಚಿತ್ತು ಹೆಚ್ಚಲ್ಲ ಈ ಹೃದಯದಿಂದ ಹಸಿವಾದ ಈ ಮನಸ್ಸಿಗೆ ನೀಗಲು ಸಾಕು ನನ್ನ ಅವ್ವನ ಕನಸು ಹೇಗೆ ತಮ್ಮ ಮನಸನ್ನು ಕಾವ್ಯಾತ್ಮಕವಾಗಿ ಮಾರ್ಪಡಿಸಿಕೊಳ್ಳುವ ರೀತಿ ತುಂಬಾ ಹರಿತ ಮತ್ತು ಮೇಲ್‌ಸ್ತರದ ವಿಚಾರಗಳಾಗಿವೆ. ಕವನ ೬ ವೇದಿಕೆ : ಒಂದೇ ಬೇರು ಒಂದೇ ಕೊಂಬೆ ಹಸಿರು ಹಲವು ಸದಾ ಏಕತೆಯ ಉಸಿರು ರಂಗು ಈ ಸಂಜೆ ಹೀಗೆ ಹಲವು ಹತ್ತು ಕವನಗಳ ಸಾಲಿನಲ್ಲಿ ಶೃಜನಶೀಲತೆ ಇದೆ. ಉದಾ : ಕವನ ೮ :- ಮೂಡುವ ಕಾಡುವ ಮನಗಳ ಮಾತಿಗೆ ಹಾಡು ಪಾಡುವ ಒಲವಿನ ಗಡಿಬಿಡಿಗೆ ನಾ ಹೇಗೆ ಹೋಗಿ ಸಹಿಸಲಿ ನೀ ಹೇಳು ಹೇಗೆ ಮನಸ್ಸಿನ ಭಾವನೆಗಳನ್ನು ಭಾವನೆಯ ಬಸುರಲ್ಲಿಟ್ಟು ಹೇಳುವ ಅವರ ಮನಸ್ಸಿನ ಸ್ಥಾಯಿ ಸ್ಥಿತಿ ಅದರ ಮೇರು ವಿಚಾರಕ್ಕೆ ಮೆರಗು ತಂದಿದೆ. ಉದಾಃ ಕವನ ೬೦ : – ಶೀರ್ಶಿಕೆಯ ಕವನ “ಭಾವಗಳ ಬಸುರಾದಾಗ” ಇದರಲ್ಲಿ ಭಾವಗಳು ಬಸುರಾದಾಗ ಹರಿಸುವುದು ಸಂಗೀತ ಸಾಹಿತ್ಯದ ಕಾವ್ಯ ರಸದೌತಣ ಎಂದಿದ್ದಾರೆ. ಭಾವದ ಅಭಿವ್ಯಕ್ತಿಗೆ ಸಾಹಿತ್ಯ ಸಂಗೀತಕಲೆ ಎಲ್ಲವೂ ಲೀನವಾಗುತ್ತದೆ ಎಂಬುದನ್ನು ಸಾರವತ್ತಾಗಿ ಬಣ್ಣಿಸಿದ್ದಾರೆ. ಕವಿಯನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೆÃರಿಸುವುದು ವಿಮರ್ಶೆಯೆ ಸರಿ ಸಮರ್ಪಕ ಪರಿಕಲ್ಪನೆಯಾಗಲಾರದು. ಕೆಲವು ಕವಿತೆಗಳು ಪ್ರಾಸರಹಿತವಾಗಿ ಅತಿ ಉದ್ದುದ್ದ ಸಾಲುಗಳಾಗಿ ಗದ್ಯದ ರೂಪ ತಳೆದಿರುವುದು ಓದುಗನ ಸಹನೆಯನ್ನು ಪರೀಕ್ಷಿಸುವಂತಿದೆ. ಉದಾ ಹರಿಸಬೇಕೆಂದರೆ : ನಿನ್ನ ನೆನಪಲಿ, ಗುಬ್ಬಿಗೂಡು, ನಮ್ಮ ಭಾರತ ಸಂವಿಧಾನ, ಹೀಗೆ ಕೆಲವಷ್ಟು ಕವನಗಳು ಮಿತಿಮೀರಿ ಬೆಳೆದು ನಿಂತಿವೆ. ಇವುಗಳು ಕಾವ್ಯಕ್ಕೆ ಭೂಷಣವಲ್ಲ ಎಂದೆನಿಸುತ್ತದೆ. ಕಲ್ಪನೆಯನ್ನು ಕವನವನ್ನಾಗಿಸುವ ಶಕ್ತಿ ಈ ಕವಿಗೆ ಚೆನ್ನಾಗಿದೆ. ತುಂಬಾ ಭಾವಾಭಿವ್ಯಕ್ತಿಯಲ್ಲಿ ಅಭಿವ್ಯಕ್ತಿಸುವ ರೀತಿಯಲ್ಲಿ ಸುತ್ತು ಬಳಸದಿರುವುದು ಒಳ್ಳೆಯದು. ಉದಾ : ನಾನು ಕವಿಯಲ್ಲ ಕವನ ೯ : ಮೂಡಿದ ಮನದ ಮರದಿ ಭಾವವೆಂಬ ಕೊಂಬೆ ! ಎತ್ತರದಿ ಸಿಗದ ಹಾಗೆ ಹಸಿರು ಎಲೆಗಳ ಚಪ್ಪರ ಮುಗಿಯದ ಹಕ್ಕಿ ಸಾಲಿನ ಆಸನ ನೋಡಿದಾಕ್ಷಣ ಕವನ ನಾನು ಕವಿಯಲ್ಲ ಕವಿಯ ವಿಚಾರಧಾರೆ ಹರಿತವಾಗಿದೆ. ವೈಚಾರಿಕತೆಯ ಹರವು ವಿಷಾಲವಾಗಿದೆ. ಸಂವೇದನಾ ಶೀಲತೆ ಎಲ್ಲ ಕವನದಲ್ಲಿಯೂ ಇದೆ. ಮನಸ್ಸಿಗೆ ಮುದ ನೀಡುವ ಶಕ್ತಿ ಕವನಗಳಿಗಿದೆ. ಬಸಿರು ಎನ್ನುವ ಶಭಾರ್ಥವೇ ಹಡೆಯುವ ಮೊದಲು ಇರುವ ತಾಯಿಯ ಸ್ಥಿತಿ. ಹುಟ್ಟುವ ಮಗುವಿನ ಬಗ್ಗೆ ತಾಯಿ ಏನೆಲ್ಲ ಚಿಂತಿಸುತ್ತಾಳೆ. ಏನೆಲ್ಲ ಕನಸು ಕಾಣುತ್ತಾಳೆ. ಹೇಳತೀರದು. ಹುಟ್ಟುವ ಮಗುವಿನ ಬಗ್ಗೆ ತರತರದ ಕನಸು ಕಾಣುತ್ತಾಳೆ. ಸರ್ವಾಂಗ ಸುಂದರವಾಗಿ ಮಗು ಹುಟ್ಟಲಿ ಎಂದು ಹಾರೈಸುತ್ತಾಳೆ. ಈ ಕವಿಯ ಎಲ್ಲ ಕವಿತೆಯಲ್ಲಿಯೂ ಇಂತ ಹಾರೈಕೆ ಎದ್ದು ಕಾಣುತ್ತದೆ. ಶಬ್ದಗಳ ಕೊರತೆ ಈ ಕವಿಗೆ ಇಲ್ಲ. ವಸ್ತುವನ್ನು ಹುಡುಕುವ ದಿವ್ಯ ಶೋಧಕ ಶಕ್ತಿ ತುಂಬಾ ಇದೆ. ಗೂಡ ನಿಗೂಡವಾಗಿ ವಿಷಯವನ್ನು ಸಾದರಪಡಿಸುವ ರೀತಿ ಓದುಗನಿಗೆ ಸ್ವಲ್ಪ ಕಬ್ಬಿಣದ ಕಡಲೆಯಾದರೂ ಪ್ರಬುದ್ಧ ಓದುಗನಿಗೆ ಏನೂ ಕಷ್ಟವೆನಿಸಲಾರದು. ಇವರ ಬರಹ ಪ್ರಬುದ್ಧತೆಯ ಪ್ರಬಲ ಪ್ರತಿಬಿಂಬ ಇವರ ಮನಸ್ಸು ಎನ್ನಬಹುದು. ಕವಿಗೆ ತುಂಬಾ ಭವಿಷ್ಯವಿದೆ. ವಿಚಾರದ ಅರಿಕೆ ಸಾಕಷ್ಟು ಮನಸ್ಸಿನ ಆಳಕ್ಕಿಳಿದಾಗಲೇ ಚಿಗುರುವ ಸಾಹಿತ್ಯದ ಕೊಂಬೆ ಬಲಿಷ್ಠವಾಗುತ್ತದೆ. ಕಾವ್ಯಕ್ಕೆ ಗಟ್ಟಿತನ ಬರುತ್ತದೆ. ವಿಚಾರವ ಅದುಮಿ ಹಿಡಿದಾಗ ಭಾವನೆಗಳು ಸ್ಪೊÃಟಗೊಳ್ಳುತ್ತವೆ ಎಂಬುದನ್ನು ಕೆಲವು ಕವನಗಳು ಸಾಬೀತುಪಡಿಸಿವೆ. ಕಾವ್ಯವೆಂದರೆ ಕಲ್ಪನೆ ಮತ್ತು ಭಾವಗಳ ಸಂಗಮ (ಹ್ಯಾಜ್‌ಲೀಟ್) ಇಂಗ್ಲಿÃಷ್ ಕವಿ ಕಾವ್ಯವೆಂದರೆ ಸೌಂದರ್ಯದ ಲಯಬದ್ಧ ಸೃಷ್ಟಿ ಎಂದಿದ್ದಾರೆ. (ಕೆಬ್ಲ) ಕವಿ ಅಚಿಡಿಟಥಿಟe ಹೇಳಿದ್ದಾರೆ. Poeಣಡಿಥಿ ತಿe ತಿiಟಟ ಛಿಚಿಟಟ musiಛಿಚಿಟ ಣhough ಎohಟಿsoಟಿ ಸಂಗೀತಮಯ ಚಿಂತನೆಯೇ ಕಾವ್ಯ ಹೇಳುತ್ತಾರೆ. ಎohಟಿsoಟಿ ಹೇಳುತ್ತಾರೆ. Poeಣಡಿಥಿ is meಣಡಿiಛಿಚಿಟ ಛಿomಠಿosiಣioಟಿ (ಕಾವ್ಯವೆಂದರೆ ಚಂದೋಬಂದ ರಚನೆ) ಎರ್ಡಸ್ ವಿತ್ರ ಹೇಳುತ್ತಾನೆ (Poeಣಡಿಥಿ is ಣhe bಡಿeಚಿಣh ಚಿಟಿಜ ಜಿiಟಿeಡಿ sಠಿiಡಿiಣ oಜಿ ಚಿಟಟ ಞಟಿoತಿಟeಜge ) ಕಾವ್ಯವು ಎಲ್ಲ ಜ್ಞಾನಕ್ಕಿಂತ ಮಿಗಿಲಾದ ಚೈತನ್ಯ ಉಸಿರು. ಮೇಲೆ ಹೇಳಿದ ಈ ಎಲ್ಲ ಅಂಶಗಳನ್ನು ಈ ಕವಿ ತಿಳಿದುಕೊಂಡು ಮುನ್ನಡೆಯಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಕವಿ ದೃಷ್ಟಿ ಹಾಯಿಸಿದರೆ ಒಳಿತು. ಒಟ್ಟಾರೆ ಕವಿಯ ಈ ಎರಡನೆ ಹೆಜ್ಜೆ ಗಟ್ಟಿತನದ ದಿಟ್ಟ ಹೆಜ್ಜೆಯಾಗಿದೆ. ಕವಿಯ ಭವಿಷ್ಯ ಉಜ್ವಲವಾಗಲಿ, ಸಾಹಿತ್ಯಯಾನ ಚೆನ್ನಾಗಿ ಸಾಗಲಿ ಎಂದು ಹಾರೈಸುವೆ. ==============================================

ಪುಸ್ತಕ ವಿಮರ್ಶೆ Read Post »

ಇತರೆ

ಚಿಂತನೆ

ಇಷ್ಟಕ್ಕೆ ಹೀಗೆ ವರಿ ಮಾಡೋದಾ? ಪಿ.ಎಂ.ಇಕ್ಭಾಲ್ ಕೈರಂಗಳ ಮಾನಸಿಕವಾದ ಸಮಸ್ಯೆಗಳೇ ಹಾಗೆ‌. ಬಲು ಸಂಕೀರ್ಣ.  ಹೀಗೇ ಇರುತ್ತದೆ ಎಂಬ ನಿಯಮವಿರಲ್ಲ.  ಒಂದೊಂದು ಸಮಸ್ಯೆಯೂ ವೈವಿಧ್ಯ. ಅವುಗಳ ತೀವ್ರತೆ ಎಷ್ಟು ಎಂದು ಅವುಗಳನ್ನು ಅನುಭವಿಸುವ ನತದೃಷ್ಟರಿಗೇನೇ ಗೊತ್ತು. ಆದರೆ ಒಂದು ನೆನಪಿರಲಿ. ‘ನನ್ನ ಸಮಸ್ಯೆಗೆ ಪರಿಹಾರವಿಲ್ಲ’ ಎಂದು ತಿಳಿದು ಹತಾಶರಾದರೆ ಸಮಸ್ಯೆಯ ವ್ಯಾಪ್ತಿ ಮತ್ತಷ್ಟು ದೊಡ್ಡದಾಗುತ್ತದೆ. ಮಾನಸಿಕವಾಗಿ ಅನುಭವಿಸುವ ನೋವು, ಕೊರಗು ಅಥವಾ ಒತ್ತಡ ಸಣ್ಣ ಸಮಸ್ಯೆಯೇನಲ್ಲ. ಇತರರಿಗಾಗಿ ಅವರ ವಿಷಯದ ಆಳಕ್ಕಿಳಿದು ವಸ್ತುನಿಷ್ಠವಾಗಿ ಚಿಂತಿಸಿ ಅರ್ಥೈಸಲು ಮುಂದೆ ಬರುವವರು ಕಡಿಮೆ. ನನಗೆ ಯಾರಿಲ್ಲ ಎಂಬ ಭಾವ ಸೇಡಾಗಿ ಕನ್ವರ್ಟು ಆಗಿ  ಹಿಂಸೆಗೆ ಇಳಿಯುವವರೂ ಇದ್ದಾರೆ.  ಆತ್ಮಹತ್ಯೆಯ ದಾರಿ ಹಿಡಿದವರೂ ಇದ್ದಾರೆ. ಇವೆರಡೂ  ಪರಿಹಾರ ಅಂತೂ ಅಲ್ಲ. ಸಮಸ್ಯೆ ಎಂದರೇನೇ ಹಾಗೆ‌, ತಡೆಯಲಾಗದು. ತಡೆಯಲಾಗದಿದ್ದರೇನೇ ಅದು ಸಮಸ್ಯೆ ಎನಿಸಿಕೊಳ್ಳುವುದು. ಆದರೆ ‘ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ’ ಎಂದು ತಿಳಿದು ಪರಿಹಾರದತ್ತ ಯೋಚಿಸುವುದು ಮತ್ತು ಪ್ರಯತ್ನಿಸುವುದು ಪ್ರಬುದ್ಧತೆ. ಆಗ ಅಷ್ಟರವರೆಗೆ ನಾವಿರುವುದಕ್ಕಿಂತ ಹೆಚ್ಚಿನ ತಾಳ್ಮೆಯನ್ನು ಹೊರತರಬೇಕಾಗುತ್ತದೆ.  ಮನಸ್ಸನ್ನು ವಿಶಾಲಗೊಳಿಸಬೇಕಾಗುತ್ತದೆ. ವಿಷಯವನ್ನು ಬೇರೆ ಬೇರೆ ಕೋನಗಳಿಂದ ನೋಡುವ ಸಾಮರ್ಥ್ಯವನ್ನು ಹೊರಗೆ ತರಬೇಕಾಗುತ್ತದೆ. ಹಾಗೆ ಮಾಡಿಯೂ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲತೆ ಕಾಣಬಹುದು. ಆಗ  ಮರಳಿಯತ್ನ ಮಾಡಬೇಕು. ಪ್ರಧಾನ ವಿಷಯ ಏನು ಅಂದರೆ, ಇನ್ನಿಲ್ಲದಂತೆ ಕಾಟ ಕೊಡುತ್ತಿದ್ದ ಸಮಸ್ಯೆಯೊಂದು ಎದ್ದು ಹೋಗುವಾಗ ಅದು ಒಮ್ಮೆ ದೊಡ್ಡದಾದಂತೆ ಕಾಣಬಹುದು.  ಹಾಗಾಗುವುದು ಪರಿಹಾರದ ಒಂದು ಹಂತವಾಗಿರಬಹುದು. ಆ ಹಂತವನ್ನೇ ದೊಡ್ಡ ಸಮಸ್ಯೆಯಾಗಿ ಕಾಣಬಾರದು. ಹಾಗೆ ಹತಾಶೆ ಆದರೆ ಅದರ ಬೀಳ್ಕೊಡುವಿಕೆ ಪ್ರೊಗ್ರಾಮು ಕ್ಯಾನ್ಸಲ್ ಆಗಿಬಿಡಬಹುದು!ಎಷ್ಟೋ ಮಂದಿ ಈ ತಪ್ಪನ್ನು ಮಾಡುತ್ತಾರೆ. ಆ ಮೂಲಕ ಸಮಸ್ಯೆಗೆ ದೀರ್ಘಾಯಸ್ಸು ಕರುಣಿಸುತ್ತಾರೆ. ಇಬ್ಬರ ನಡುವಿನ ಮನಸ್ತಾಪ ಒಂದು ಸಮಸ್ಯೆಯಾದರೆ, ಒಂದೆಡೆ ಕೂತು ಸಾಧ್ಯತೆಯ ಪರಮಾವಧಿ ತಾಳ್ಮೆಯಿಂದ ಪರಸ್ಪರ ಮಾತಾಡೋದು  ಪರಿಹಾರದ ಹಂತ. ಆ ಹಂತವು ಒಂದಷ್ಟು ಕಷ್ಟಾನೇ. ಆದರೆ ಆ ಸಮಸ್ಯೆಗೆ‌ ಅದೇ ಪರಿಹಾರದದ  ಹಂತ. ಅದಲ್ಲದೆ ಬೇರೆ ಪರಿಹಾರವೇ ಇಲ್ಲ. ಅದರಿಂದ ಎಸ್ಕೇಪು ಆದಷ್ಟೂ ಆ ಸಮಸ್ಯೆ ಜೀವಂತ. ಕೆಲವೊಮ್ಮೆ ಅನಾಹುತಕ್ಕೇ ಅವಕಾಶ. ರೋಗಪೀಡಿತನಾಗುವುದು ಸಮಸ್ಯೆ. ಕೆಲವೊಮ್ಮೆ  ಅಡ್ಮಿಟು, ಇಂಜಕ್ಷನು, ಐಸಿಯು, ಅಪರೇಷನು, ಲಕ್ಷಾಂತರ ಖರ್ಚು ಇವೆಲ್ಲಾ ಅದರ ಪರಿಹಾರದ ಹಂತವಾಗುತ್ತದೆ. ಆ ಹಂತವನ್ನೇ ಸಮಸ್ಯೆಯಾಗಿ ಕಂಡು ಅದರಿಂದ ಎಸ್ಕೇಪು ಆದಷ್ಟೂ ಸಮಸ್ಯೆಯು ಜೋರಾಗುತ್ತದೆ. ರೋಗಿ ಸಾಯಬಹುದು. ಪರಿಹಾರದ ಹಂತದಲ್ಲಿ ಅಣುವಿನಷ್ಟೂ  ಹತಾಶೆರಾಗಬಾರದು. ಅಗತ್ಯವಿದ್ದರೆ ಸಹೃದಯರಾದ ಇನ್ನೊಬ್ಬರದ್ದೋ ಹೆಚ್ಚಿನವರದ್ದೋ ಸಹಾಯ ಪಡೆಯಬೇಕು. ಸಮಸ್ಯೆಯೆಯೇ ಹಾಗೆ. ಅದು ಮನುಷ್ಯನನ್ನು ಒಂಟಿ ಮಾಡುತ್ತದೆ. ಒಂದು ಉದಾಹರಣೆ ನೊಡಿ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದದ್ದಕ್ಕೆ ಆತ್ಮಹತ್ಯೆ ಮಾಡೋಕೆ ಆಲೊಚಿಸುವ ಎಸ್ಸೆಸೆಲ್ಸಿಯ ತಂಗಿಯನ್ನು ನೋಡಿ ಎಂಬಿಬಿಎಸ್ ಕಲಿಯುವ ಅಕ್ಕ ನಕ್ಕಳು. ತಾಯಿ, ತಂದೇನೂ ಆ ನಗುವಿಗೆ ಜೊತೆಗೂಡಿದರು. ಅವರಿಗೆಲ್ಲ ಅವಳು Silly ಹುಡುಗಿ ಎಂದೆನಿಸಿತು. ‘ಇಷ್ಟಕೇ ಹೀಗೆ ವರಿ ಆಗೋದಾ’ ಎಂದು  ಕೇಳಿದರು. ಇದೆಲ್ಲ ವರಿ ಮಾಡ್ಕೊಬೇಕಾದ ವಿಷಯವಾಗಿ ಅಕ್ಕನಿಗೆ, ಅಮ್ಮನಿಗೆ ಮತ್ತು ಅಪ್ಪನಿಗೆ ಕಾಣಲಿಲ್ಲ.  ಅದೇ ಅಕ್ಕ ಒಂದು ದಿನ ಹತಾಶಳಾಗಿ ಕೂರುತ್ತಾಳೆ.   ಸಹಪಾಟಿಯೊಬ್ಬನ ಇನ್ಸಲ್ಟು ಅವಳ ಮನ ಕೊರೆಯುತ್ತಿತ್ತು. ಕಣ್ಣು ಜಲಾಶಯವಾಗುತ್ತಿತ್ತು. ‘ಇಷ್ಟಕ್ಕೇ ಇಷ್ಟೆಲ್ಲ ವರಿನಾ’ ಎಂದು ತಂಗಿ, ತಾಯಿ, ಅಪ್ಪ ಅಂದುಕೊಂಡರು. ಮನಸ್ಸು ಗಟ್ಟಿಯಿರಬೇಕು ಎಂದು  ಉಪದೇಶ ಹೇಳಿದರು. ಮುಂದೊಂದು ದಿನ ತಾಯಿಯ ಸರದಿ. ಜಗಳವೊಂದರ ಮಧ್ಯೆ ಗಂಡ ‘ನಿನ್ನನು ಮದುವೆಯಾಗಿ ತಪ್ಪು ಮಾಡಿದೆ’ ಎಂದ  ಮಾತೊಂದು ಬಾಣವಾಗಿ ನಾಟಿ ಅವಳ ಎದೆಯನ್ನು ನೋಯಿಸುತ್ತಿತ್ತು. ‘ಹೀಗೆಲ್ಲ ಹೇಳಲೇಬಾರದಿತ್ತು ನಿಮ್ಮಪ್ಪ’ ಎಂದು ಮಕ್ಕಳಲ್ಲಿ ಅಳಲು ಶುರುವಿಟ್ಟುಕೊಂಡಳು.  ‘Silly mom’ ಎಂದು ಮಕ್ಕಳ ನಗು. ‘ತುಂಬಾ ವೀಕು’ ಎಂಬ ಗಂಡನ ಸರ್ಟಿಫಿಕೇಟು. ಒಂದು ದಿನ ಯಜಮಾನನೇ ಮಂಕು. ಸೋತುಬಿಟ್ಟೆ, ಇನ್ನು ಜಯವಿಲ್ಲ ಎಂಬ ಹತಾಶೆಯಲ್ಲಿ ಬಿದ್ದ. ಬಿಸಿನೆಸ್ಸಲ್ಲಿ ಆದ ಲಾಸು ಕಾಸು ಬರಿದು ಮಾಡಿಬಿಟ್ಟಾಗ ಆತ ಹಾಗಾದ. ಯಾಕೊ ಉಮ್ಮಳಿಸಿ ಬರುವ ದುಖವನ್ನು ತಡೆಹಿಡಿಯಲಾಗದೆ ಹೆಂಡ್ತಿ ಮಕ್ಕಳ ಮುಂದೆ ಮಗುವಾದ. ‘ಅಯ್ಯೋ ಅಪ್ಪ, ಇದೆಲ್ಲ ಮಾಮೂಲು. ಹತಾಶೆಯಾಗುವಂತದೇ ಅಲ್ಲ’  ಮಕ್ಕಳ ಪ್ರತಿಕ್ರಿಯೆ. ಹೆಂಡ್ತಿಗೂ ಗಂಡ ಅಷ್ಟು ದುಖ ಪಡುವಷ್ಟು Silly fellow ಆದುದಕ್ಕೆ ಸಹಮತ ಇಲ್ಲ. ಇಲ್ಲಿ ಎಲ್ಲರೂ ತೋರಿಸಿದ್ದು ಒಂದೇ ಸ್ವಭಾವ. ಇನ್ನೊಬ್ಬರ ಮಾನಸಿಕ ಸನಸ್ಯೆಗಳನ್ನು ತಮ್ಮ ಭಾಗದಿಂದ ಮಾತ್ರ ನೋಡಿದ್ದು.ಯಾರಿಗೆ ಯಾರೂ ಜೊತೆಯಾಗದೆನೇ ವರಿ ಮಾಡದಿರಲು ಉಪದೇಶಿಸಿದ್ದು. ‘ಹೌದು ಇದು ನೋವಾಗುವಂತಹದೇ ವಿಷಯ, ನನಗೆ ಅರ್ಥವಾಗುತ್ತೆ, ಸಮಾಧಾನ ಪಡು’ ಎಂದು ಯಾರೂ ಹೇಳಿಲ್ಲ. ಹೇಳಿದ್ದು, ‘ಇದು ನೋವಾಗೋ ಮ್ಯಾಟರೇ ಅಲ್ಲ’ ಎಂದು. ಸಮಸ್ಯೆಯಲ್ಲಿ ಬಿದ್ದಾಗ ಒಬ್ನೊಬ್ಬರೂ ಒಂಟಿಯಾಗಿದ್ದರು. ಒಬ್ಬರ ಸಮಸ್ಯೆ ಇನ್ನೊಬ್ನರಿಗೆ ಏನೂ ಅಲ್ಲ. ಹೆಚ್ಚಿನವರು ಇನ್ನೊಬ್ನರ ಸಮಸ್ಯೆಯನ್ನು ಮೇಲಿನ ಉದಾಹರಣೆಯಂತೆ ತಮ್ಮ ಕೋನದಿಂದ ಮಾತ್ರ ನೋಡುತ್ತಾರೆ. ಸಮಸ್ಯೆಯಲ್ಲಿ ಬಿದ್ದವರಿಗೆ ಅದು ಕೊಡುತ್ತಿರುವ ಯಾತನೆ, ಪರಿಣಾಮವು ಇನ್ನೊಬ್ಬರ ಪಾಲಿಗೆ ನಗಣ್ಯ. ಬಾಂಧವ್ಯವು ಕೂಡ ಹಳಸಿ ಹೋಗೋದು ಆಗಲೇ. ಸಮಸ್ಯೆಯನ್ನು ಅದನ್ನು ಅನುಭವಿಸುವವರ ಕೊನದಿಂದ ನೋಡಬೇಕು. ಹಾಗೆ ಮಾಡುವಷ್ಟು ನಾವು ಬೆಳೆಯಬೇಕು. ಅದವರಿಗೆ ಕೊಡುವ ನೋವನ್ನು ಅರ್ಥಮಾಡಿ  ‘ಅರ್ಥಮಾಡಿದ್ದೇನೆ’ ಎಂಬುದನ್ನು ಅವರಿಗೆ ತಿಳಿಸಬೇಕು. ಆಗ ಅದವರಿಗೆ ಮಹದುಪಕಾರ ಆಗುತ್ತದೆ. ಅವರು ಅನುಭವಿಸುವ ನೋವಿನ ಅಲೆಗಳ ಆರ್ಭಟ ಕಡಿಮೆ ಆಗುತ್ತದೆ. ಹಾಗೆ ಮಾಡಿದರೆ ಬಾಂಧವ್ಯಕ್ಕೆ ಟಾನಿಕ್ಕು. ಎಲ್ಲ ಸಮಸ್ಯೆಗಳೂ ಅನುಭವಿಸುವವರ ವೀಕುನೆಸ್ಸಿನಿಂದಾಗಿ  ದೊಡ್ಡದಾಗುವುದಲ್ಲ. ಹಾಗೆ ನೋಡೋದಾದರೆ ಕೆಲವು ವಿಷಯಗಳಲ್ಲಿ ಎಲ್ಲರೂ ವೀಕೇ. ತಿಳಿದಿರಲಿ, ಕೆಲವು ಸಮಸ್ಯೆ ಅಂತೂ ದೊಡ್ಡದೇ. ಇನ್ನೊಬ್ಬರ ಪಾಲಿಗೆ ಏನೂ ಅಲ್ಲದ ವಿಷಯದೊಳಗಡೆ ಒಂದು ಲೋಕವೇ ಅವಿತುಕೊಂಡಿರುತ್ತದೆ. ಅದನ್ನು ಅರಿಯಲು ಸಮಸ್ಯೆ ಅನುಭವಿಸುವವರ ಭಾಗದಿಂದ ವಿಷಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಹೃದಯ ವಿಶಾಲತೆ ಇದ್ದರೇನೇ ಅದು ಸಾಧ್ಯ. ಇನ್ನೊಬ್ಬರ ಸ್ಥಾನದಲ್ಲಿ ನಿಂತು ಅದನ್ನು ನೋಡಲು ತಯಾರಿರೋರು ಕಡಿಮೆ. ಕೆಲವು ಸಮಸ್ಯೆಗಳು ಇನ್ನೊಬ್ಬರ  ಭಾವನಾತ್ಮಕ ಸಾಮೀಪ್ಯಕ್ಕೆ ಮಂಜಿನಂತೆ ಕರಗಿಹೋಗುವಂತಹದ್ದು. ಅಂತಹವರು ಒಂದಷ್ಟು ಇದ್ದರೆ ಈ ಜಗದ ಆತ್ಮಹತ್ಯೆಗಳ ಪ್ರಮಾಣ ಕಡಿಮೆಯಾಗುತ್ತಿತ್ತು. ಸಮಸ್ಯೆಗೆ ಬಿದ್ದ ವ್ಯಕ್ತಿಗಳ ಭಾಗದಿಂದ ವಿಷಯವನ್ನು ನೋಡಲು ಅವರ ಆಪ್ತರೇ ತಯಾರಿರೋದಿಲ್ಲ. ಯಾವ ವ್ಯಕ್ತಿ ಸಕ್ಸಸು ಆಗಿದ್ದರೆ ಯಾರಿಗೆ ಲಾಜಿಕ್ ಬಿಟ್ಟು ಮನ-ಹಣದಿಂದ ಸಹಾಯ ಮಾಡಿ, ಕಣ್ಣರೆಪ್ಪೆಯಂತೆ ಅವರನ್ನು ಕಾಯುತ್ತಿದ್ದನೋ, ಆ ವ್ಯಕ್ತಿಯೇ ಯಾರದೋ ಸ್ವಾರ್ಥಕ್ಕೆ ಬಲಿಯಾಗಿಯೋ, ವಿಧಿಯಾಟಕ್ಕೆ ಸಿಳುಕಿಯೋ ಸೂಕ್ಷ್ಮವಾದೊಂದು ಮನಸಿನ ಸಮಸ್ಯೆಯಲ್ಲಿ ಬಿದ್ದರೆ  ಅವನಿಗೆ ಅವರೇ ಇರುವುದಿಲ್ಲ. ಸಮಸ್ಯೆಗೆ ಬಿದ್ದವರಿಗೆ ಒಂಟಿತನವು ಬೋನಸ್ಸು. ಎಷ್ಟೊ ಆತ್ಮಹತ್ಯೆಗಳು ನಡೆಯುವುದು ಅವರ ಸಮಸ್ಯೆಯಿಂದಲ್ಲ, ಆ ಸಮಸ್ಯೆ ಅವರಿಗೆ ಬೋನಸ್ಸಾಗಿ ಕೊಟ್ಟ ಲೋನ್ಲಿನೆಸ್ಸಿನ ಕಾರಣಕ್ಕಾಗಿ. ಈ ಪಾಯಿಂಟು  ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಸಮಸ್ಯೆಗಳಲ್ಲಿ ಬೀಳದ ವ್ಯಕ್ತಿಗಳಿಲ್ಲ. ಕೆಲವು ಮೇಲೆ ಉದಾಹರಿಸಿದಂತಹುಗಳು. ಗಾಳಿ ಮಳೆಯಂತಹವು, ತಾತ್ಕಾಲಿಕ. ಕೆಲವು ಸುಂಟರಗಾಳಿಗಳಂತಹದೇ ಇರುತ್ತದೆ. ತೀವ್ರತೆ ಹೆಚ್ಚು. ಕೆಲವು ಅಂತೂ ಪಕ್ಕಾ ಸುನಾಮಿ ಅಲೆಗಳೇ. ಕೆಲವು ಸಮಸ್ಯೆಗಳು ತನ್ನಿಂದ ತಾನೇ ಪ್ರಭಾವ ಕಡಿಮೆಗೊಳಿಸಿದೆ ಎನಿಸುವುದು ಇದೆ. ಒಬ್ಬ ಸಂತನ ಬಳಿ ಒಬ್ಬ ಸಮಸ್ಯೆಯೊಂದನ್ನು ಹೇಳಿ ಗೋಳೋ ಎಂದು ಅತ್ತುಬಿಟ್ನನಂತೆ. ಸಂತ ಹೇಳಿದನಂತೆ, “ಒಂದಾರು ತಿಂಗಳು ಕಳೀಲಿ. ನಿನ್ನ ಅಳು ಮಾಯವಾಗುತ್ತದೆ” ಎಂದು. ಅವನು ಕೇಳಿದನಂತೆ, “ಆರು ತಿಂಗಳಲ್ಲಿ ನನ್ನ ಸಮಸ್ಯೆ ಇಲ್ಲವಾಗುತ್ತಾ” ಎಂದು. ಸಂತನ ಉತ್ತರ, “ಇಲ್ಲ. ಆರು ತಿಂಗಳಲ್ಲಿ  ನಿನಗೆ ಇದು ಅಭ್ಯಾಸವಾಗುತ್ತದೆ!” ಕೆಲವು ಸಮಸ್ಯೆಗಳ ಆರಂಭದಲ್ಲಿ ಮನುಷ್ಯ ಪೇಚಾಡುತ್ತಾನೆ. ಜೀವಿಸೋಕೆ‌ ಆಗಲ್ಲ ಎಂಬಂತಾಗುತ್ತಾನೆ. ಕ್ರಮೇಣ ಆ ಸಮಸ್ಯೆ ಅಭ್ಯಾಸವಾಗಿ ಸಮಸ್ಯೆನೇ ಬಲಹೀನಗೊಂಡಂತಾಗುತ್ತದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರವಿದ್ದೇ ಇದೆ. ಅಥವಾ ಹಾಗಂತನೇ ನಾವು ತಿಳಿದುಕೊಳ್ಳಬೇಕು. ಆದರೆ ಕೆಲವೊಮ್ಮೆ ಪರಿಹಾರ  ಎಂಬ ಅಸಾಮಿಯು ಪ್ರಬಲ ಇಚ್ಛಾಶಕ್ತಿ, ಅಪಾರ ತಾಳ್ಮೆ, ಬುದ್ಧಿಮತ್ತೆ ಮತ್ತು ಕಾಲಾವಕಾಶವನ್ನು ನಮ್ಮಿಂದ  ಬಯಸುತ್ತಾನೆ. ಅದ್ಯಾತ್ಮಲೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳೋದೂ  ಸಮಸ್ಯೆಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ. ಆಗ ಮನ ರಿಲಾಕ್ಸು ಆಗಿ ಪರಿಹಾರದ ಬಾಗಿಲು ತೆರೆಯೋದೂ ಇದೆ. ಅದಕ್ಕೇ‌ ಪಕ್ಕಾ ನಾಸ್ತಿಕ ಸೈಕಾಲಜಿ ಡಾಕ್ಟರೂ ದೇವರನ್ನು ಬಳಿ ಕೂರಿಸಲು ಸಲಹೆ ನೀಡೋದು. ಇನ್ನೊಬ್ಬರ ಪಾಲಿಗೆ ವಿಪರೀತ, ಸಹಿಸಲಾಗದು ಎಂದೆನಿಸಿದ  ಮಾನಸಿಕ ಕೊರಗು, ನೋವನ್ನು ಪರಿಗಣನೆಗೆ ಅರ್ಹ ಎಂದೇ ತಿಳಿಯಬೇಕು. ಅದೆಷ್ಟು ಸಣ್ಣದೇ ಇರಲಿ, ‘ನಮ್ಮ ಭಾಗಕ್ಕೆ ಮಾತ್ರ ಅದು ಸಣ್ಣದು, ಅವರ ಭಾಗಕ್ಕೆ ಸಣ್ಣದಲ್ಲ’ ಎಂದು ತಿಳಿಯಬೇಕು.  ಅವರ ಭಾಗದಿಂದ ವಿಷಯವನ್ನು ನೋಡಿ, ಅರ್ಥೈಸಿ ‘ಅರ್ಥಮಾಡಿದ್ದೇನೆ’ ಎಂದು ಹೇಳಬೇಕು. ಸಮಾಧಾನ ಹೇಳಬೇಕು. ಪರಿಹಾರಕ್ಕೆ ಮುಂದಾಗಬೇಕು. ಇಷ್ಟು ಮಾತ್ರ ಮಾಡದೆ ಬೇರೇನೂ ಮಾಡಿದರೂ ಸಾಕಾಗದು. ಇಷ್ಟು ಮಾಡಲಾಗದ ಹತ್ತಿರದವರು, ಬಂಧುಗಳು ಹೃದಯಹೀನರೇ ಸರಿ‌. ನಾವು ಹಾಗಾಗದಿರೋಣ. ===============================================

ಚಿಂತನೆ Read Post »

ಕಾವ್ಯಯಾನ

ಕಾವ್ಯಯಾನ

ಪ್ರಕಾಶ್ ಕೋನಾಪುರ ಬಟ್ಟೆಗೆ ಮುಕ್ತಿ ಬೇಕಿದೆ! ಈಗೀಗ ಕತ್ತಲಲ್ಲಿಯೇ ಬೆತ್ತಲಾಗಬೇಕೆಂದೇನಿಲ್ಲಬೆಳಕಿನಲ್ಲೂ ಬೆತ್ತಲಾಗಬಹುದುಬಟ್ಟೆ ಕಳಚುವವರಿದ್ದರೆ ಬೆತ್ತಲಾಗಲು ಕತ್ತಲಿಗೆ ಕಾಯುವ ಮೂರ್ಖರೇಕತ್ತಲಲ್ಲಿ ಬೆತ್ತಲಾಗುವವರನ್ನೂ ನೋಡಬಹುದೀಗತ್ರಿನೇತ್ರಿಗರು ಗೋರಿಯೊಳಗೆ ಬೆತ್ತಲಾಗಿ ಮಲಗಿದವನಿಗೆ ಪದವಿಬಿರುದುಬಾವಲಿ ಅಷ್ಟೈರ್ಯಗಳು ಬಟ್ಟೆ ಹೊದಿಸಲಾಗಲಿಲ್ಲ ಹೆರಿಗೆನೋವಿನಿಂದ ನರಳುತ್ತಿರುವ ಹೆಣ್ಣೇನಾಚದಿರು ಬೆತ್ತಲಾಗಿಹೆನೆಂದು ಹೊಸಜೀವದ ಸೃಷ್ಟಿಗೆಬಟ್ಟೆ ತೊಟ್ಟ ನೀಚರೆದರು   ಬಟ್ಟೆಗೆ ಬಸಿರು ಮುಚ್ಚಿಡಲಾಗುವುದಿಲ್ಲಹಾಗೆಯೇ ಮನುಷ್ಯನ ಹೊಲಸನ್ನೂ ಓ ಮನುಷ್ಯನೇ ಬೆತ್ತಲಾಗದಿರುನಿನ್ನ ಕೊಳಕು ದೇಹವನ್ನು ನೋಡಲಾಗುವುದಿಲ್ಲಕೊಳಕನ್ನು ಮುಚ್ಚಿಟ್ಟು ಸುಸ್ತಾದಬಟ್ಟೆಗೆ ಮುಕ್ತಿ ಬೇಕಿದೆ  ============= ಪರಿಚಯ: ಬಿ.ಎಸ್ಸಿ(ಕೃಷಿ) ಪದವೀಧರ, ಶಿಕಾರಿಪುರದಲ್ಲಿ ವಾಸ, ಜಿಲ್ಲಾ ಉಪಾಧ್ಯಕ್ಷ,ಆಮ್ ಆದ್ಮಿ ಪಾರ್ಟಿ,ಶಿವಮೊಗ್ಗ ಜಿಲ್ಲೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಚಂ ವಯಸಲ್ಲದ ವಯಸ್ಸಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕತ್ತಲೆಯ ಬೆನ್ನತ್ತಿ ಬಂದ ಓ ಬೇಳಕೆಂಬ ಕನಸೇ ಹೇಳು ನಿನೆಲ್ಲಿಗೆ ಹೋದೆ ಮನದ ಇರುಳು ತೊಲಗಲೇ ಇಲ್ಲ ನಿನ್ನ ಹೆಜ್ಜೆ ಮೂಡಲೇ ಇಲ್ಲ ಕಣ್ಣಬಿಟ್ಟು ನೋಡಿದೊಡೆ ಕಾಲವೇ ಕೇಳೇದಿತ್ತು ಕತ್ತಲೇ ಮಾತ್ರ ಉಳಿದಿತ್ತು! ಕರುಣೇ ಇಲ್ಲದ ಕಾಲದ ಬೇಳಕೇ ನೀನಾಗದಿರು ಮರಭೂಮಿಯ ನಿರ್ಗುಳ ಹುಡುಕುತ್ತಿರುವೆ ಹುಡುಕುತ್ತಿರುವೆ ನಿನ್ನ ಬಾ ಬೇಳಗೊಮ್ಮೆ ಬದುಕ ಹಬ್ಬವೆಂಬ ನೆಪಹೂಡಿ…. ಬಂದು ನಿಲ್ಲು ಬೇಳಕೇ ಕಾಲದ ಬಿರುಗಾಳಿಗೆ ಆರದೆ ನಿನ್ನ ಹಸಿವು ನನಗೂ ಇದೆ ಅರಿತು ಬಾ ನಿನೊಮ್ಮೆ ದೀಪಾವಳಿಯ ನೆಪವೊಡ್ಡಿ!?==========================

ಕಾವ್ಯಯಾನ Read Post »

ಕಥಾಗುಚ್ಛ

ಕಥಾಗುಚ್ಛ

ಜಿ.ಹರೀಶ್ ಬೇದ್ರೆ ಯಾಣ ಬಿಸಿಲು ಬೆವರಿಗೆ ಹೊಂದಿಕೊಂಡು ಬೆಳೆದಿದ್ದ ಮೈಮನಗಳಿಗೆ ಮೊದಲ ಬಾರಿಗೆ ಥರಗುಟ್ಟುವ ಚಳಿಯಲ್ಲಿ ಹೊದೆಯಲು ಏನೂ ಇಲ್ಲದೆ ರಾತ್ರಿಯೆಲ್ಲಾ ಮುದುಡಿಕೊಂಡೇ ಮಲಗಿ, ಪುಣ್ಯಾತ್ಮರ ಮನೆಯೊಂದರಲ್ಲಿ ತಾಮ್ರದ ಹಂಡೆಯಲ್ಲಿ ಹದವಾಗಿ ಕಾಯಿಸಿದ ನೀರನ್ನು  ಸ್ನಾನ ಮಾಡುವ ಅವಕಾಶ ಸಿಕ್ಕಿತು.  ಒಮ್ಮೆ ಹಬೆಯಾಡುವ ಬಿಸಿನೀರು ಮೈಮೇಲೆ ಬಿದ್ದೊಡನೆ ಹಿಂದಿನ ದಿನ ನಡೆದೂ ನಡೆದು ಸುಸ್ತಾಗಿದ್ದ ನೋವೆಲ್ಲಾ ಅರ್ಧ ಮಾಯವಾದಂತಾಗಿತ್ತು. ಬಚ್ಚಲು ಮನೆಯೂ ಹಿಂಭಾಗದಲ್ಲಿ ಇದದ್ದರಿಂದ ಎಲ್ಲರೂ ಸ್ನಾನ ಆಗುವ ತನಕ ಅಲ್ಲೇ ಹಿಂದೆ ಗಿಡಮರಗಳನ್ನು ನೋಡುತ್ತಾ, ಮಾತನಾಡುತ್ತಾ ನಿಂತಿದ್ದೆವು. ನಮ್ಮೆಲ್ಲರ ಸ್ನಾನ ಆದದ್ದನ್ನು ಗಮನಿಸಿ ಒಳಗಿನಿಂದ ತಿಂಡಿ ತಿನ್ನಲು ಕರೆ ಬಂತು. ನಾವು ಮನೆಯ ಒಳ ಹೋಗಿ ಹಾಲಿನಲ್ಲಿ ಕೂರುವ ಮೊದಲೇ ಬಾಳೆ ಎಲೆಯಲ್ಲಿ ಬಿಸಿಬಿಸಿ ಉಪ್ಪಿಟ್ಟು, ಅದರ ಮೇಲೆ ಗಟ್ಟಿಯಾದ ತುಪ್ಪ, ಜೊತೆಗೆ ಮಜ್ಜಿಗೆ ಮೆಣಸು ಮತ್ತು ಒಂದೆರಡು ಬಗೆಯ ಸಂಡಿಗೆಗಳು  ಅಲಂಕರಿಸಿದ್ದರು.  ಅದನ್ನು ನೋಡಿದೊಡನೆ ಹೆಚ್ಚುಕಮ್ಮಿ ನಿನ್ನೆ ಮಧ್ಯಾಹ್ನದಿಂದಲೇ ಖಾಲಿ ಇದ್ದ ಹೊಟ್ಟೆಗಳು ಬೇಗ ಬೇಗ ಎಂದು ಅವಸರಿಸತೊಡಗಿದವು. ಆಶ್ಚರ್ಯ ಎಂದರೆ ಇಲ್ಲಿಯವರೆಗೆ ಉಪ್ಪಿಟ್ಟು ಬೇಡವೇ ಬೇಡ ಎನ್ನುತ್ತಿದ್ದ ಇಬ್ಬರೂ ಎಲ್ಲರಿಗಿಂತ ಮೊದಲು ಎಲೆಯ ಮುಂದೆ ಕುಳಿತಿದ್ದರು. ಹಸಿದವನಿಗೆ ಹಳಸಿದ ಅನ್ನವೇ ಮೃಷ್ಟಾನ್ನ ಆಗುವಾಗ ಬಿಸಿಬಿಸಿ ಉಪ್ಪಿಟ್ಟು ಗಂಟಲಲ್ಲಿ ಇಳಿಯದೆ ಇರಲು ಸಾಧ್ಯವೇ.  ಎಲ್ಲರೂ ಗಂಟಲು ಬಿರಿಯುವಂತೆ ತಿಂದೆವು. ತಿಂಡಿ ತಿಂದು ಸ್ವಲ್ಪ ಹೊತ್ತಿನ ನಂತರ ಹೊರಡುತ್ತೇವೆ ಎಂದು ಎದ್ದಾಗ ಮನೆಯವರು ಕಾಫಿ ಕುಡಿದು ಹೊರಡುವಂತೆ ಹೇಳಿದರು. ನಮಗೂ ಇದು ಬೇಕೆನಿಸಿದ್ದರಿಂದ ದೂಸ್ರಾ ಮಾತನಾಡದೆ ಮತ್ತೆ ಕುಳಿತೆವು. ಅಡುಗೆಮನೆಯಿಂದ ನಾವು ಕುಳಿತಿದ್ದ ಹಾಲಿಗೆ ಕಾಫಿ ಬರುವ ಮುನ್ನವೇ ಅದರ ಘಮ ನಮ್ಮನ್ನು ಸುತ್ತುವರೆದಿತ್ತು.   ನಾವು ದಿನಕ್ಕೆ ನಾಲ್ಕೈದು ಬಾರಿ ಕುಡಿಯಬಹುದಾದಷ್ಟು ಕಾಫಿಯನ್ನು ಒಂದೇ ಲೋಟದಲ್ಲಿ ಕೊಟ್ಟಿದ್ದರು. ಈಗಾಗಲೇ ಅದರ ಪರಿಮಳಕ್ಕೆ ಸೋತು ಶರಣಾಗಿದ್ದರಿಂದ ಯಾರೊಬ್ಬರೂ ಬೇಡವೆನ್ನದೆ ಖುಷಿಯಿಂದ ಗುಟುಕರಿಸುವಾಗ ರಾಘು ತೋರು ಬೆರಳಿಂದ ಎದುರಿಗೆ ತೋರಿಸುತ್ತಾ ಏಯ್… ಏಯ್… ಎಂದು ವಿಚಿತ್ರವಾಗಿ ಧ್ವನಿ  ಮಾಡುತ್ತಾ ಜೋರಾಗಿ ನಡುಗತೊಡಗಿದ. ನಾವು ಇವನಿಗೆ ಏನಾಯ್ತು ಎಂದು ನೋಡುವಾಗಲೇ ಕೈಯಲ್ಲಿದ್ದ ಕಾಫಿಯನ್ನು ಮೈಮೇಲೆ ಚೆಲ್ಲಿಕೊಂಡ. ನಾವೆಲ್ಲ ತಕ್ಷಣ ಎದ್ದು ಅವನ ಬಳಿಬಂದು ಏನೂ ಎಂದು ಕೇಳಿದರೆ, ಏನೊಂದೂ ಮಾತನಾಡದೆ ಎದುರಿನ ಗೋಡೆಯನ್ನೇ ನೋಡುತ್ತಿದ್ದ. ನಾವುಗಳು ಅವನು ನೋಡುತ್ತಿದ್ದ ಕಡೆ ನೋಡಿದಾಗ ನಮ್ಮೆಲ್ಲರ ಹೃದಯಗಳ ಬಡಿತವೂ ಬುಲೆಟ್ ಟ್ರೈನ್  ವೇಗಕ್ಕಿಂತ ಜೋರಾಗಿ ಬಡಿದುಕೊಳ್ಳಲಾರಂಭಿಸಿದವು.ಸುರೇಶ್ ಹೆಬ್ಳೀಕರ್, ದೇವರಾಜ್ ಮುಂತಾದವರು ನಟಿಸಿದ್ದ ಚಿತ್ರವೊಂದು ಬಿಡುಗಡೆಯಾಗಿತ್ತು. ಅದರಲ್ಲಿ ಯಾಣವನ್ನು ಬಹಳ ಚೆನ್ನಾಗಿ ತೋರಿಸಿದ್ದರು. ಆ ಸಿನಿಮಾ ನೋಡಿದ ಮೇಲೆ ನಾವು ಒಮ್ಮೆ ಅಲ್ಲಿಗೆ ಹೋಗಿ ಬರಬೇಕು ಎಂದುಕೊಂಡಿದ್ದೆವು. ಅದೇ ಸಂದರ್ಭದಲ್ಲಿ  ನಮ್ಮ ಪರಿಚಯದ ಪದ್ಮಕುಮಾರಿಯವರು ತಮ್ಮವರೊಂದಿಗೆ ಅದೇ ತಾಣಕ್ಕೆ ಹೋಗಿ ಬಂದು ವಾರಪತ್ರಿಕೆಯೊಂದರಲ್ಲಿ ಸಚಿತ್ರ ಚಾರಣ ಬರಹವನ್ನು ಬರೆದಿದ್ದರು. ಅದನ್ನು ಓದಿದ ಮೇಲಂತೂ ಹೋಗಿಬರಲೇ ಬೇಕೆಂದು ಸಮಾನ ಮನಸ್ಕರಾದ ಎಂಟು ಜನ ಗೆಳೆಯರು ಆಗಿನ ಮೆಟಡೋರನ್ನು ಎರಡು ದಿನದ ಬಾಡಿಗೆಗೆ ಗೊತ್ತುಮಾಡಿಕೊಂಡು ಹೊರಟೆವು. ಹೊರಡುವ ಮೊದಲು ಈಗಾಗಲೇ ಅಲ್ಲಿಗೆ ಹೋಗಿಬಂದಿದ್ದ ಪರಿಚಯದ ಲೇಖಕಿಯನ್ನು ಭೇಟಿಮಾಡಿ ನಾವೂ ಹೋಗಿಬರಲು ಬೇಕಾದ ಮಾಹಿತಿಯನ್ನು ಪಡೆದಿದ್ದೆವು.ಅವರ ಮಾರ್ಗದರ್ಶನದಂತೆ ಮೊದಲ ದಿನ ಹರಿಹರದಲ್ಲಿ ಹರಿ ಮತ್ತು ಹರನನ್ನು ಒಂದೇ ಶಿಲೆಯಲ್ಲಿ ಕೆತ್ತಿರುವ ಹರಿಹರೇಶ್ವರ ದೇವಾಲಯವನ್ನು ನೋಡಿ, ಬನವಾಸಿಯಲ್ಲಿ ಮಧುಕೇಶ್ವರ ಮತ್ತು  ಮಂಜುಗುಣಿಯಲ್ಲಿ ವೆಂಕಟರಮಣನ ದರ್ಶನ ಮಾಡಿಕೊಂಡು ಶಿರಸಿ ಬಂದಾಗ ಸಂಜೆಯಾಗಿತ್ತು. ಅಲ್ಲೇ  ದೇವಸ್ಥಾನದ ಛತ್ರದಲ್ಲಿ ಉಳಿದುಕೊಂಡು, ಆ ದಿನ ಸಂಜೆಯೇ ಶಿರಸಿ ಮಾರಿಕಾಂಬೆಯ ದರ್ಶನ ಮಾಡಿ, ಪೂಜೆಯನ್ನು ಮಾಡಿಸಿದೆವು.  ಮಾರನೇ ದಿನ ಬೆಳಿಗ್ಗೆ ಬೇಗನೇ ಹೊರಟು ಯಾಣ ನೋಡಬೇಕಾದ್ದರಿಂದ ಮತ್ತು ಮುಂಜಾನೆಯಿಂದ ಚೆನ್ನಾಗಿ ಸುತ್ತಿದ್ದರಿಂದ ರಾತ್ರಿ ಬೇಗನೆ ಮಲಗಿದೆವು.ಮುಂಜಾನೆ ಆರುವರೆಗೆಲ್ಲಾ ಎಲ್ಲರೂ ಸಿದ್ದರಾಗಿ  ಹೋಟೆಲಿಗೆ ಬಂದು ಕಾಫಿ ಕುಡಿದು ಎಲ್ಲರಿಗೂ ಸಾಕಾಗುವಷ್ಟು ಇಡ್ಲಿಯನ್ನು ಕಟ್ಟಿಸಿಕೊಂಡು ಕುಮಟಾ ಮಾರ್ಗವಾಗಿ ಯಾಣದತ್ತ ಪಯಣ ಬೆಳೆಸಿದೆವು. ಸುಮಾರು ನಲವತ್ತು ಕಿ.ಮೀ. ದೂರ ಬಂದ ಮೇಲೆ ಪದ್ಮಕುಮಾರಿಯವರು ಹೇಳಿದಂತೆ ಬಲಭಾಗದಲ್ಲಿ ಯಾಣಕ್ಕೆ ದಾರಿ ಎಂಬ ಫಲಕ ಕಾಣಿಸಿತು.  ಅದು ರಸ್ತೆಯಿಂದ ಅಷ್ಟು ದೂರಕ್ಕೆ ಮಾತ್ರ ವಿಶಾಲವಾದ ದಾರಿಯಿದ್ದು, ಅಲ್ಲೇ ಎಣಿಸಿದಂತೆ ನಾಲ್ಕು ಚಿಕ್ಕಚಿಕ್ಕ ಮನೆಗಳಿದ್ದವು.  ಅಲ್ಲಿಂದ ಮುಂದೆ ಕಾಲು ದಾರಿ ಮಾತ್ರವಿದ್ದು ನಡೆದುಕೊಂಡೇ ಮುಂದೆ ಸಾಗಬೇಕಿತ್ತು.  ಲೇಖಕಿ ಇದನ್ನು ಮೊದಲೇ ತಿಳಿಸಿದ್ದರೂ, ನಾವು ಮತ್ತೊಮ್ಮೆ ಅಲ್ಲೇ ಮನೆಯ ಬಳಿಯಿದ್ದ ವಯಸ್ಕರೊಬ್ಬರನ್ನು ಯಾಣಕ್ಕೆ ಹೋಗುವ ದಾರಿ ಇದೇನಾ ಎಂದು ಕೇಳಿ ಖಾತ್ರಿ ಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದ್ದೇವು.  ಅವರ ಅನುಮತಿಯೊಂದಿಗೆ ನಮ್ಮ ಮೆಟಡೋರನ್ನು ಅಲ್ಲೇ ನಿಲ್ಲಿಸಿ, ಕಟ್ಟಿಸಿಕೊಂಡಿದ್ದ ತಿಂಡಿ ಪೊಟ್ಟಣಗಳೊಂದಿಗೆ ಹೊರಟೆವು.ನಮ್ಮಲ್ಲಿ ಸುತ್ತಮುತ್ತ ಎತ್ತಾ ನೋಡಿದರೂ, ಬೆಟ್ಟ ಗುಡ್ಡಗಳ ಸಾಲು, ಅಲ್ಲಿ ಚಿತ್ರವಿಚಿತ್ರವಾದ  ಕಲ್ಲು, ಬಂಡೆಗಳನ್ನು ನೋಡಿದ್ದ ನಮಗೆ, ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚಹಸಿರಿನ ಗಿಡ ಮರಗಳು. ಜೊತೆಗೆ ಅದರಲ್ಲಿ ಕುಳಿತೋ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ವಚ್ಛಂದವಾಗಿ ಹಾರುತ್ತಾ ಉಲಿವ ಹಕ್ಕಿಗಳ ಇಂಚರ.  ಇದರೊಂದಿಗೆ ನಾನೇನೂ ಕಮ್ಮಿ ಎನ್ನುವಂತೆ ಎಲ್ಲೆಲ್ಲಿಂದಲೋ ಜುಳುಜುಳು ಹರಿಯುವ ನೀರಿನ ನಿನಾದ.  ಇದನ್ನೆಲ್ಲ ನೋಡುತ್ತ, ಕೇಳುತ್ತಾ ಸಾಗುತ್ತಿದ್ದರೆ, ಸ್ವರ್ಗವೇ ಭೂಮಿಗಿಳಿದು ಬಂದಂತೆ ಭಾಸವಾಗುತ್ತಿತ್ತು. ಹಾಗೇ ಖುಷಿಯಿಂದ ಕೂಗುತ್ತ, ಕುಣಿಯುತ್ತಾ ಐದಾರು  ಕಿ.ಮೀ. ನಡೆದು ಸಾಗಬೇಕಾದ  ದಾರಿಯಲ್ಲಿ  ಮೂರು ಕಿ.ಮಿ. ಬಂದಾಗ ಅಡ್ಡವಾಗಿ ನದಿಯೊಂದು ಸಿಕ್ಕಿತು. ಆಗಲೇ ಸಮಯ ಹತ್ತು ಗಂಟೆಯಾಗಿತ್ತು ಜೊತೆಗೆ ಹೊಟ್ಟೆ ಚುರುಗುಡಲಾರಂಭಿಸಿತ್ತು. ಹಾಗಾಗಿ ಅಲ್ಲೇ ಕುಳಿತು ಕಟ್ಟಿಸಿಕೊಂಡು ಬಂದಿದ್ದ ತಿಂಡಿಯನ್ನು ತಿಂದು ನದಿಯ ನೀರನ್ನೇ ಕುಡಿದೆವು. ನಡೆದು ಉರಿ ಎದಿದ್ದ ಕಾಲುಗಳನ್ನು ನದಿಯ ತಣ್ಣನೇ ನೀರಲ್ಲಿ ಬಿಟ್ಟುಕೊಂಡು ಕುಳಿತ್ತಿದ್ದರಿಂದ ಮನಸಿಗೆ ಹಿತ ನೀಡುತ್ತಿತ್ತು.  ನಾವು ನೋಡಲು ಬಂದಿದ್ದ ಜಾಗ ತಲುಪಲು ಇನ್ನೂ ಎರಡರಿಂದ ಮೂರು ಕಿ.ಮಿ. ನಡೆಯಬೇಕಿತ್ತು.  ಹಾಗಾಗಿ ಅಲ್ಲಿ ತಡಮಾಡದೆ ಹೊರಟೆವು. ನದಿ ದಾಟಿ ಸ್ವಲ್ಪ ಮುಂದೆ ಬಂದನಂತರ ಕಾಲುದಾರಿಯಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ದಾರಿ ಕಾಣದಂತಾಗಿತ್ತು. ನಾವು ಹೋಗುತ್ತಿರುವ ದಾರಿ ಸರಿಯಿದೆಯೇ ಎಂದು ಕೇಳಲು ಅಲ್ಲಿ ಯಾರೆಂದರೇ ಯಾರು ಇರಲಿಲ್ಲ. ಲೇಖಕಿಯವರು ಕಾಲುದಾರಿಯಲ್ಲಿ ಸೀದಾ ನಡೆಯುತ್ತಾ ಹೋದರೆ ಆಯಿತು ಎಲ್ಲಿಯೂ ತಿರುವುಗಳು ಬರುವುದಿಲ್ಲ ಎಂದು ಹೇಳಿದ್ದರಿಂದ ಅದೇ ದಾರಿಯಲ್ಲಿ ನಡೆಯತೊಡಗಿದೆವು. ನಡೆಯುತ್ತಾ ಮೂರು ಕಿ.ಮಿ.ಗಿಂತ ಮುಂದೆ ಬಂದರು ಅಘೋರೇಶ್ವರ ದೇವಾಲಯವಾಗಲಿ, ಅದರ ಬಳಿ ಇರುವ ಶಿಖರಗಳಾಗಲ್ಲಿ ಕಾಣಲೇ ಇಲ್ಲ. ಏನು ಮಾಡುವುದೆಂದು ಯೋಚಿಸುತ್ತಾ ಹೆಜ್ಜೆ ಹಾಕುವಾಗಲೇ ಇದ್ದಕ್ಕಿದ್ದಂತೆ ಬಿಂದು ಮತ್ತು ಲೋಕು ಜೋರಾಗಿ, ವೆಂಕಣ್ಣ ಹಿಂದೆ ನಿನ್ನ ಪ್ಯಾಂಟ್ ನೋಡಿಕೋ ಎಂದರು. ನೋಡಿದರೆ, ಮಂಡಿಯಿಂದ ಕೆಳಭಾಗದಲ್ಲಿ ರಕ್ತ ಮಾಯವಾಗಿತ್ತು. ನಾವು ಏನಪ್ಪಾ ಎಂದುಕೊಳ್ಳುವಾಗಲೇ ವಾಹಿದ್, ಹೆದರಬೇಡ ವೆಂಕಣ್ಣ ಪ್ಯಾಂಟನ್ನು ಸ್ವಲ್ಪ ಮಾಡಿಸು ಎಂದವನು, ತಾನೇ ಹತ್ತಿರ ಬಂದು ಆ ಕೆಲಸಮಾಡಿ ಯಾವಾಗಲೋ ಅವನ ಮಂಡಿಯವರೆಗೆ ಹತ್ತಿ ರಕ್ತ ಹೀರುತ್ತಿದ್ದ ಜಿಗಣೆಯನ್ನು ತೋರಿಸಿ, ಅದನ್ನು ಬೆರಳಿನಿಂದ ಕೀಳಲು ನೋಡಿದ. ಅದು ಸಾಧ್ಯವಾಗದಾಗ, ತನ್ನ ಜೇಬಿನಿಂದ ಲೈಟರ್ ತೆಗೆದು ಅದರ ಬುಡಕ್ಕೆ ಉರಿ ಹಿಡಿದ.  ಆಗ ತಕ್ಷಣವೇ ಜಿಗಣೆ ಕೆಳಗೆ ಬಿತ್ತು. ಆದರೆ ವೆಂಕಟೇಶ್ ಕಾಲಿನಿಂದ ರಕ್ತ ಜಿನುಗುತ್ತಿತ್ತು. ಅದಕ್ಕೆ ಅರವಿಂದ್ ಅಲ್ಲೇ ಬೆಳೆದ ಗಿಡಗಳಲ್ಲಿ ಹುಡುಕಾಡಿ ಯಾವುದೋ ಸೋಪನ್ನು ತಂದು ಜಜ್ಜಿ ಗಾಯವಾದ ಜಾಗಕ್ಕೆ ಸವರಿದ. ಏನಾಶ್ಚರ್ಯ, ಸುರಿಯುತ್ತಿದ್ದ ರಕ್ತ ಎರಡೇ ನಿಮಿಷದಲ್ಲಿ ನಿಂತಿತು. ಆಗ ಅವನು ಮುಖದಲ್ಲಿ ಕಾಣುತ್ತಿದ್ದ ಹೆಮ್ಮೆ ನಿಜಕ್ಕೂ ನೋಡುವಂತ್ತಿತ್ತು. ಇದೆಲ್ಲಾ ಆದ ನಂತರ ಮತ್ತೆ ಮುಂದಕ್ಕೆ ಹೆಜ್ಜೆ ಹಾಕಿದೆವು. ಹೀಗೇ ನಡೆಯುತ್ತಾ ಮತ್ತೆ ಎರಡು ಕಿ.ಮಿ. ಬಂದರು, ಅಂದುಕೊಂಡ ಸ್ಥಳದ ಸುಳಿವೇ ಕಾಣಲಿಲ್ಲ. ಆಗ ಸಮಯ ಮೂರು ಗಂಟೆ. ಹೊಟ್ಟೆ ಹಸಿಯಲಾರಂಭಿಸಿತ್ತು. ಜೊತೆಗೆ ನಾವು ದಾರಿ ತಪ್ಪಿದ್ದು ಖಚಿತವಾಗಿತ್ತು. ಏಕೆಂದರೆ ಲೇಖಕಿ ಹೇಳಿದಂತೆ ಮತ್ತು ಸ್ಥಳೀಯ ಮನೆಯಾತ ಹೇಳಿದಂತೆ ನಾವು ಸರಿಯಾದ ದಾರಿಯಲ್ಲಿ ಬಂದಿದ್ದಾರೆ ಹನ್ನೊಂದುವರೆಗೆಲ್ಲಾ ಯಾಣ ತಲುಪಿ ಸಾಕೆನಿಸುವಷ್ಟು ನೋಡಿ ಊಟದ ಸಮಯಕ್ಕೆ ಶಿರಸಿಯಲ್ಲಿ ಇರಬೇಕಾಗಿತ್ತು. ಆದರೆ ಈಗ ಗಂಟೆ  ಮೂರದರೂ ನಮಗೆ ತಿಳಿಯದ ಜಾಗದಲ್ಲಿ ನಿಂತಿದ್ದೆವು.  ಮುಂದೆ ಹೋಗಬೇಕೋ, ಹಿಂದೆ ಹೋಗಬೇಕೋ ತಿಳಿಯದಂತ ಪರಿಸ್ಥಿತಿ.  ಎಲ್ಲರಿಗೂ ಇದೇ ಚಿಂತೆಯಾಗಿ ಪರಸ್ಪರ ಮಾತುಕತೆ ನಿಂತುಹೋಗಿತ್ತು. ಯಾಂತ್ರಿಕವಾಗಿ ನಿಧಾನವಾಗಿ ನಡೆಯುತ್ತಿದ್ದೆವೆ  ಹೊರತು ಯಾಣ ತಲುಪುವ ಭರವಸೆ ಇರಲಿಲ್ಲ. ಯಾವುದೋ ಚಿಂತೆಯಲ್ಲಿ ನಡೆಯುತ್ತಿದ್ದ ಜ್ಯೋತಿ ಮರದ ಬುಡವನ್ನು ಗಮನಿಸದೆ ಎಡವಿಬಿದ್ದ. ಬಿದ್ದವರನ್ನು ಎತ್ತಲು ವೆಂಕಟೇಶ್ ಮತ್ತು ಮೂಸಮಿಲ್ ಮುಂದಾದರು. ಆದರೆ ಅವರ ಸಹಾಯ ಪಡೆಯದೆ ಮೇಲೆದ್ದ ಜ್ಯೋತಿ, ಬೋಳಿ ಮಕ್ಕಳ ಯಾರ ಪ್ರಾಣ ತೆಗಿಬೇಕಂತ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ. ದಾರಿ ಗೊತ್ತಿಲ್ಲ ಅಂದ್ರು ಮುಂದೆ ಹೋಗ್ತಾನೆ ಇದೀರಾ. ಇನ್ನೂ ನನಾಂತೂ ಬರೋಲ್ಲ. ಬೇಕಿದ್ದರೆ ನೀವೇ ಹೋಗಿ ಎಂದು ಬಾಯಿಗೆ ಬಂದಂತೆ ನಮಗೆಲ್ಲಾ ಬೈಯತೊಡಗಿದ. ಸಾಮಾನ್ಯವಾಗಿ ಜ್ಯೋತಿ ಎಂದಿಗೂ ಈ ರೀತಿ ಆಡಿದವನಲ್ಲ. ಆದರೆ ಮುಂದೇನು ಎಂಬ ಚಿಂತೆ, ಜೊತೆಗೆ ಹೊಟ್ಟೆ ಹಸಿವು ಅವನನ್ನು ಕೆರಳುವಂತೆ ಮಾಡಿತ್ತು. ಅವನು ಹಾಗೆ ಮಾತನಾಡಿದೊಡನೇ ಲೋಕು ಸಿಟ್ಟಿನಿಂದ, ನಾವೇನೂ ನಿನ್ನ ಮನೆಗೆ ಬಂದು, ನೀನು ಬರಲೇ ಬೇಕೆಂದು ಆಮಂತ್ರಣ ಕೊಟ್ಟು ಕರೆದಿಲ್ಲ. ನಿಜ ಹೇಳಬೇಕೆಂದರೆ ನೀನೇ ನಮ್ಮನ್ನು ಹೊರಡಿಸಿದ್ದು ಎಂದು ಜೋರು ಮಾಡಿದ. ಇದು ಜಗಳ ಆಡುವ ಸಮಯವಲ್ಲವೆಂದು, ನಾನು, ರಾಘು, ವಾಹಿದ್, ಬಿಂದು ಎಲ್ಲಾ ಸೇರಿ ಇಬ್ಬರಿಗೂ ಸಮಾಧಾನ ಮಾಡಿದೆವು. ಅವರಿಬ್ಬರೂ ಸಮಾಧಾನವಾಗಿ, ನಾವು ಮುಂದೆ ಹೋಗುವುದೋ ಅಥವಾ ಬಂದು ದಾರಿಯಲ್ಲಿ ಹಿಂದಿರುಗುವುದೋ ಎಂದು ತೀರ್ಮಾನಿಸುವ ವೇಳೆಗೆ ಗಂಟೆ ನಾಲ್ಕಾಗಿತ್ತು. ಆಗಲೇ ಸೂರ್ಯನೂ ತನ್ನ ಅಂದಿನ ಕೆಲಸ ಮುಗಿಸಿ ಮುಳುಗುವ ಆತುರದಲ್ಲಿದ್ದಂತೆ ಕಂಡಿತು. ಏಕೆಂದರೆ ಇದು ಡಿಸೆಂಬರ್ ತಿಂಗಳಾಗಿತ್ತು ಹಾಗಾಗಿ ಬೆಳಕು ಕಮ್ಮಿಯಾಗುತ್ತಾ ಬಂದಿತ್ತು.  ಇದರಿಂದ ಎಲ್ಲರೂ ಬಂದ ದಾರಿಯಲ್ಲಿ ಹಿಂದಿರುಗುವ ನಿರ್ಧಾರಕ್ಕೆ ಬಂದೆವು. ಹಿಂದಿರುಗುವ ನಿರ್ಧಾರವಾದೊಡನೇ, ಅರವಿಂದ್ ಮತ್ತು ವೆಂಕಟೇಶ್ ಬೇಗ ಹೆಜ್ಜೆ ಹಾಕಿ ಇಲ್ಲ ಕತ್ತಲಾಗಿ ಬಿಡುತ್ತದೆ ಎಂದು ವೇಗವಾಗಿ ನಡೆಯತೊಡಗಿದರು. ಉಳಿದವರು ಅವರ ವೇಗಕ್ಕೆ ಹೆಜ್ಜೆ ಹಾಕಲು ಕಷ್ಟವಾಗುತ್ತಿತ್ತು. ಅರ್ಧ ದಾರಿಯೂ ಬಂದಿರಲಿಲ್ಲ, ರಾಘು ಬುಡಕಡಿದ ಬಾಳೆಗಿಡದಂತೆ ದಬ್ಬನೇ ಬಿದ್ದ. ಮತ್ತೆ ಎಲ್ಲರೂ ಅಲ್ಲಿ ನಿಲ್ಲಬೇಕಾಯಿತು. ಏನೆಂದು ಕೇಳಿದರೆ ತಲೆ ಸುತ್ತುತ್ತಿದೆ ಎಂದು. ಬಹುಶಃ ಹಸಿವಿನಿಂದ ಇದಾಗಿತ್ತು. ಅವನು ಸುಧಾರಿಸಿಕೊಳ್ಳುವರೆಗೂ ಉಳಿದವರು ಏನು ಮಾಡುವಂತಿರಲಿಲ್ಲ. ಹಾಗಾಗಿ ಅವನ ಸುತ್ತಲೇ ಕುಳಿತೆವು. ಪಾಪ ಬಿಂದು, ಅವನ ಕರವಸ್ತ್ರದಿಂದ  ರಾಘು ಮುಖಕ್ಕೆ ಗಾಳಿ ಹಾಕುತ್ತಿದ್ದ.  ಅಲ್ಲೇ ಹತ್ತಿರದಲ್ಲಿ ನೀರು ಹರಿವ ಸದ್ದು ಕೇಳಿ ನಾನು, ಮುಜಾ ಬಾಟಲಿ ತೆಗೆದುಕೊಂಡು ಹೋಗಿ ನೀರು ತಂದು, ರಾಘುಗೆ ಕುಡಿಸಿ ಅವನ ಮುಖವನ್ನು ತೊಳೆದೆವು. ಒಂದರ್ಧ ಗಂಟೆಯಾದಮೇಲೆ ಸ್ವಲ್ಪ ಸುಧಾರಿಸಿಕೊಂಡು ಎದ್ದುನಿಂತು ಹೋಗುವ ಎಂದ.  ಆಗಲೇ ಸೂರ್ಯ ಮರೆಯಾಗಿ ಮಸುಕು ಬೆಳಕು ಮಾತ್ರ ಉಳಿದಿತ್ತು. ಆದರೆ ಈಗ ವೇಗವಾಗಿ ನಡೆಯುವಂತಿರಲಿಲ್ಲ.ಯಾರೊಬ್ಬರ ಮುಖದಲ್ಲೂ ನಗೆ ಇರಲಿಲ್ಲ, ಮಾತುಕತೆಯೂ ನಿಂತುಹೋಗಿ, ಸುಮ್ಮನೆ ಮುಂದೆ ನಡೆಯುತ್ತಿದ್ದ ವಾಹಿದನನ್ನೇ ಎಲ್ಲರೂ ಹಿಂಬಾಲಿಸುತ್ತಿದೆವು. ಬೆಳಕು ಮಾಯವಾಗಿ ದಟ್ಟ ಕತ್ತಲಾವರಿಸಿ  ಮುಂದೆ ಹೆಜ್ಜೆ ಇಡಲು ದಾರಿ ಕಾಣದಾಯಿತು. ನೂರಕ್ಕೆ ನೂರು ಕಾಡಿನ ಕತ್ತಲಲ್ಲಿ ಬಂಧಿಯಾದದ್ದು ಖಾತ್ರಿಯಾಯಿತು.  ಎಲ್ಲಿದ್ದೇವೆ, ಅಕ್ಕಪಕ್ಕ

ಕಥಾಗುಚ್ಛ Read Post »

ಪುಸ್ತಕ ಸಂಗಾತಿ

ಪುಸ್ತಕ ಬಿಡುಗಡೆಯ ಸಂಭ್ರಮ

ಲೋಕಾರ್ಪಣೆ ‘ಪಂಚವರ್ಣದ ಹಂಸ‘ ಸಾಹಿತ್ಯಾಸಕ್ತರಿಗೆ ಸ್ವಾಗತ ಕವಿ ಸತ್ಯಮಂಗಲ ಮಹಾದೇವ ಅವರ ಕವನ ಸಂಕಲನದ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ: 04/11/2019, ಸೋಮವಾರ ಸಮಯ: ಸಂಜೆ 6 ಗಂಟೆಗೆ ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಭಾಂಗಣ

ಪುಸ್ತಕ ಬಿಡುಗಡೆಯ ಸಂಭ್ರಮ Read Post »

ಕಥಾಗುಚ್ಛ

ನ್ಯಾನೊ ಕಥೆಗಳು

ಅಂಬ್ರೀಶ್ ಎಸ್ ಹೈಯ್ಯಾಳ್… ಒಂದು– ಬರಗಾಲದಿಂದ ತತ್ತರಿಸಿದ ಜನ ದೇವರ ಮೊರೆ ಹೋದರು. ಮಳೆ ಬರಲೆಂದು ಪ್ರಾರ್ಥಿಸಿದರು. ಆದರೆ ದೇವಸ್ಥಾನದಲ್ಲಿ ಪೂಜಾರಿಯಿಂದ ಪ್ರತಿದಿನವೂ ದೇವರನ್ನು ನೀರಿನಿಂದ ತೊಳೆದು ಹಾಲು ತುಪ್ಪದ ಅಬಿಷೇಕ ಜರಗುತಿತ್ತು. ಎರಡು– ಅದು ಬೇಸಿಗೆ ಸಮಯ.ಅಲ್ಲೊಂದು ಉದ್ಯಾನವನದಲ್ಲಿ. ನೀರಿನ ಕಾರಂಜಿಯಾಟದ ಕಾರ್ಯಕ್ರಮ ಏರ್ಪಾಡಾಗಿತ್ತು. ಹೊಮ್ಮಿಸುವ ಸಂಗೀತಕ್ಕೆ ಬಣ್ಣ ಬಣ್ಣದ ನೀರಿನ ಕಾರಂಜಿ ನೃತ್ಯವಾಡುತಿತ್ತು. ಆದರೆ ಅಲ್ಲಿ ನೋಡುತ್ತಾ ಕುಳಿತ ಪ್ರೇಕ್ಷಕರು ಬಾಯಾರಿಕೆಯಾಗಿ ನೀರಿಲ್ಲದೆ ಪರದಾಡುತಿದ್ದರು. ಮೂರು– ಅಲ್ಲೊಂದು ಕಾಡು. ಕಾಡಿನ ಮದ್ಯೆ ಹರಿಯುವ ನದಿಯೊಂದು ವರ್ಷಪೂರ್ತಿ ತುಂಬಿ ತುಳುಕುತಿತ್ತು. ನದಿಗೆ ಅಡ್ಡಲಾಗಿ ನೀರನ್ನು ಶೇಖರಿಸಲು ಅಲ್ಲೊಂದು ಆಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಕೈಗೊಂಡರು.ಅದಕ್ಕಾಗಿ ಸಾವಿರಾರು ಮರಗಳನ್ನು ಕಡಿದರು. ಈಗ ಅಲ್ಲಿ ನೀರಿನ ಸಂಗ್ರಹಣೆಯಿಲ್ಲದೆ ನದಿ ಬರಿದಾಗಿದೆ.. ನಾಲ್ಕು– ಜನ ಅವನನ್ನು ಹಿಯಾಳಿಸುತಿದ್ದರು. ನೀರೂಪದ್ರವಿ ಎಂದು ಟೀಕಿಸುತಿದ್ದರು. ಸತ್ತರೆ ವಾಸಿ ಎನ್ನುತಿದ್ದರು. ಆದರೆ ಆ ವ್ಯಕ್ತಿ ಸಾಯುವಾಗ ಕಣ್ಣು,ಕಿಡ್ನಿಗಳನ್ನು ದಾನ ಮಾಡಿ ಪ್ರಾಣ ಬಿಟ್ಟ ಐದು– ಅವರಿಬ್ಬರು ಶಿಕ್ಷಣದಲ್ಲಿ ಮ್ಯಾನೆಜ್ಮೆಂಟ್ ಪದವಿ ಪಡೆದಿದ್ದರು. ಹಾಗಾಗಿ ಅವರು ಸಂಸಾರದಲ್ಲಿ ಹೊಂದಿಕೊಳ್ಳುತ್ತಾರೆಂದು ಮದುವೆ ಮಾಡಲಾಗಿತ್ತು.ಆದರೆ ದಾಂಪಥ್ಯಜೀವನ ನಿರ್ವಹಣೆಯಲ್ಲಿ ಅವರು ಸೋತು ವಿಚ್ಛೇದನ ಪಡೆದು ದೂರವಾದರು.

ನ್ಯಾನೊ ಕಥೆಗಳು Read Post »

ಕಾವ್ಯಯಾನ

ಕಾವ್ಯಯಾನ

ಬಿದಲೋಟಿ ರಂಗನಾಥ್ ಮೌನದ ಗೆರೆಯ ನಡುವೆ.. ಒಡಲುರಿಯ ಕನಸೊಂದು ಚುಕ್ಕಿಗಳತ್ತ ಮುಖ ಮಾಡಿ ಭಾವದಗೂಡಿನಲಿ ಅರಳಿ ಮುತ್ತಾಗಿ ಸಮುದ್ರದ ಮೇಲೆ ಬರೆದ ಕವನದ ಕರುಳ ತಂತಿಯಲಿ ಸುತ್ತಿಕೊಂಡ ಸಂಬಂಧ ಕಿತ್ತಾಡಿ ತಿನ್ನಲಿಲ್ಲ ಒಟ್ಟಾಗಿ ಬೆಳೆಯಲಿಲ್ಲ ಅತ್ತು ಕರೆದು ಕಣ್ಣೀರ ಕಡೆಯಲಿಲ್ಲ ಅದೆಂಥದ್ದೋ ಭಾವದ ಸೆಳೆತ ಹತ್ತಿರ ನಿಂತೆ ಹಾಡುತ್ತಿದೆ ಕಣ್ಣ ಕನ್ನಡಿಯ ಬಿಂಬದಲಿ ಕಟ್ಟಿದ ಕನಸುಗಳ ಕಂತೆ ಬಿಚ್ಚಿ ನೋಡುವ ಬಯಲ ಕುದುರೆ ಈ ಜಗದ ಮಿಣುಕು ಬೆಳಕು ಎಲ್ಲೋ ನಿಂತು ನೋಡಿ ಬೆಸೆದ ಅನುಬಂಧ ಮೀಟುತ್ತಿದೆ ನನ್ನೊಳಗು ನಿನ್ನೊಳಗು ನಿಷ್ಕಲ್ಮಶದ ದೀಪ ಉರಿಯುವಂತೆ ತಿಳಿನೀರು ಬೊಗಸೆ ತುಂಬುವಂತೆ ನಿನ್ನ ಕಣ್ಣೊಳಗು ಕಸ ಕಡ್ಡಿಯಿಲ್ಲ ನನ್ನ ಕಣ್ಣೋ ಮೊದಲೇ ಕರುಳು ಕಲೆತ ಭಾವದ ನಾಡಿ ಭಯವಿಲ್ಲದ ಬೆಳದಿಂಗಳ ಬಯಲು ತೆರೆದ ಕಣ್ಣಿನಲಿ ಬೆಳೆದ ನಮ್ಮಗಳ ಮಾತು ಶಾಂತವಲ್ಲದ ನದಿಯ ಮೇಲೆ ಕೂತ ಹಕ್ಕಿಗೆ ಪಾಠವಾಗುತ್ತಿದೆ ಮೌನದ ಗೆರೆಯ ನಡುವೆ ಬರೆದ ಹಕ್ಕಿಯ ರೆಕ್ಕೆಗೆ ಜೀವ ಬಂದಿದೆ. ಯಾರೆನಂದರೇನಂತೆ ಕೂತ ತಾವು ಕತ್ತನು ಕೊಂಕಿಸಿಲ್ಲ ಬಾಹುಗಳ ಚಾಚಿಲ್ಲ ಒಡೆದ ಕನ್ನಡಿ ನನ್ನದೆನ್ನ ಅಕ್ಕರೆಯ ಹಣೆ ಮುತ್ತು ಅಕ್ಕನೊಡಲಿಗೆ ಬೆಂಗಾವಲು ============

ಕಾವ್ಯಯಾನ Read Post »

ಇತರೆ

ಮಹಿಳೆ

ನಾನು ಹೆಣ್ಣೆಂಬ ಹೆಮ್ಮೆ ನನಗಿದೆ! ಐಶ್ವರ್ಯ .ಎಲ್ ನಾನೊಂದು ಹೆಣ್ಣಾಗಿ ಈ ವಿಷಯದ ಬಗ್ಗೆ ಬರೆಯೋಕೆ ನನಗ್ಯಾವ ಮುಜುಗರವಾಗ್ಲಿ, ಅವಮಾನವಾಗ್ಲಿ‌ ಇಲ್ಲ. ಬದಲಾಗಿ ನಾನೊಬ್ಬ ಹೆಣ್ಣೆಂಬ ಹೆಮ್ಮೆ ನನಗಿದೆ. ನೀವೆಲ್ಲ ಅನ್ಕೊಬಹುದು ಇದೇನು ಜಗಜ್ಜಾಹೀರು ಮಾಡೊ ವಿಷಯಾನ ಅಂತ ಆದ್ರೆ ಜಗತ್ತಿನ ಅದೆಷ್ಟೊ ಜೀವಗಳಿಗೆ ಗೊತ್ತಿಲ್ಲ ಹೆಣ್ತನದ ನಿಗೂಢತೆ, ನೋವುಗಳ ಬಗ್ಗೆ. ಕಂಬಳಿ ಹುಳುವದು ರೆಕ್ಕೆ ಕಟ್ಟುವ ಕಾಲದಂತೆ ಮೊಣಕಾಲಿನವರೆಗೂ ಲಂಗವೆತ್ತಿ ಕುಂಟೆಬಿಲ್ಲೆ ಆಡುತ್ತಿದ್ದವಳಿಗೆ ಹಿಂದೆಂದೂ ಆಗದಂತ ಕಿಬ್ಬೊಟ್ಟೆಯ ಬಾಧ, ಅಲ್ಲಿಂದಲೇ ಶುರುವಾಯ್ತೆನೋ ಹೆಣ್ಣೊಬ್ಬಳ ದೈಹಿಕ ಹೋರಾಟ, ಮಾನಸಿಕ ಸ್ಥಿಮಿತಗಳ ತೊಳಲಾಟ, ಜಗತ್ತಿನೆದುರು ಎಲ್ಲವನ್ನೂ ಬಚ್ಚಿಟ್ಟು ಹೆಣ್ತನದ ನಿಗೂಢತೆಯನ್ನು ಕಾಪಾಡಿಕೊಳ್ಳೊ ಹಠ. ಸಣ್ಣದಾಗಿ ಕಿಬ್ಬೊಟ್ಟೆಯಿಂದ ಶುರುವಾದ ನೋವು ಬೆನ್ನು ಮೂಳೆಗೆಲ್ಲ ವ್ಯಾಪಿಸಿ ಒಟ್ಟಾಗೆ ಮುರಿದಂತಾಗಿ, ತೊಟ್ಟುಡುಗೆಗೆಲ್ಲ ತೇವವಾಗುಂತೆ ತೊಟ್ಟಿಕ್ಕುವ ಮುಟ್ಟು ಮಂದಿ ಮುಂದೆಲ್ಲ ಮುಜುಗರವ ತರಿಸುತ್ತೆ. ಮುಟ್ಟೆಂಬುದು ಮೂದಲಿಸೋ ವಿಷಯವಲ್ಲ. ಅದೊಂದು ಹೆಣ್ಣಿಗಿರುವ ದೈವೀ ಶಕ್ತಿ. ಪುರಾಣದ ಪುಟಗಳನ್ನ ತಿರುವಿ ಹಾಕಿದ್ರೆ ಇಂದ್ರನು ವೃತ್ರಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಾಗ ಇಂದ್ರನಿಗೆ ಬ್ರಹ್ಮಹತ್ಯಾ ದೋಷ ಬರುತ್ತೆ. ಆಗ ಇಂದ್ರ ತನ್ನ ದೋಷಾನ ಮೂರು ಜನರಿಗೆ ಹಂಚುತ್ತಾನೆ. ನದಿ, ವೃಕ್ಷ, ಮತ್ತೆ ಹೆಣ್ಣು. ಆ ಹೆಣ್ಣೆ ಅದಿತಿ. ನೀರು ಹರಿಯುವಾಗ ನೊರೆಯಾಗಿ, ಮರದಲ್ಲಿ ಹಾಲಾಗಿ, ಹೆಣ್ಣಿಗೆ ರಕ್ತಸ್ರಾವದ ಮುಟ್ಟಾಗಿ. ಬಟ್ ಹೆಣ್ಣು ಯಾವತ್ತೂ ಇದನ್ನ ಶಾಪ ಅನ್ಕೊಂಡಿಲ್ಲ ಯಾಕಂದ್ರೆ ಹುಟ್ಟಿನ ಗುಟ್ಟಡಗಿರುವುದೇ ಈ ಮುಟ್ಟಲ್ಲಿ. ತಾಯ್ತನದ ಸುಖಕ್ಕೊಂದು ನೈಸರ್ಗಿಕ ಕ್ರೀಯೆ…. ಪ್ರತಿ ತಿಂಗಳು ಹೆಣ್ತನವ ನೆನಪಿಸಿ, ದೇಹವನ್ನೊಂಚೂರು ಹಿಂಸಿಸಿ ಹೆಣ್ಣನ್ನು ಜಗತ್ತಿನೆದುರು ಮತ್ತಷ್ಟು ಶಕ್ತಳನ್ನಾಗಿ ಬಿಂಬಿಸ್ತಿದೆ. ಮುಂದಲೆಯಲ್ಲಿ ನಾಲ್ಕು ಕೂದಲು ಉದುರಿದ್ರೆ ಸಾಕು ಊರೇ ತಲೆ ಮೇಲೆ ಬಿದ್ದಂಗೆ ಆಡೋ ಗಂಡಸರ ಎದುರು ಪ್ರತಿ ತಿಂಗಳು ಐದು ದಿನಗಳ ಕಾಲ ರಕ್ತದ ಮಡುವಲ್ಲಿದ್ರು ಯಾವುದನ್ನೂ ತೋರಿಸ್ಕೊಳದೆ ಎಂದಿನಂತೆ ತನ್ನ ಕೆಲಸದಲ್ಲಿ ಒಳಗೊಳಗೆ ನೋವನ್ನ ತಡೆದು ಹಿಡಿಯೊ ಶಕ್ತಿ ಹೆಣ್ಣಿಗಷ್ಟೆ ಇದೆ ಅನ್ಸತ್ತೆ. … ಶಾಲೆಗೋ/ ಕೆಲಸಕ್ಕೊ ಹೋಗೊ ಹೆಣ್ಮಕ್ಕಳ ಮುಟ್ಟಿನ ದಿನಗಳು ಅವಳ ಬಟ್ಟೆಯ ಮೇಲಾದ ಒಂದೆರಡು ರಕ್ತದ ಹನಿಗಳ ಕಂಡು ನಕ್ಕಷ್ಟು ಸಲೀಸಲ್ಲ. ಮುಟ್ಟೆಂಬುದು ಮೊದಲೇ ನಿರ್ಧರಿಸಿ ಬರುವಂತದ್ದಲ್ಲ. ಅವಳ ದೈಹಿಕ, ಮಾನಸಿಕ, ಒತ್ತಡ, ಸ್ಥಿಮಿತಗಳ ಮೇಲೆ ಅವಲಂಬಿಸಿರತ್ತೆ. ಯಾವುದೋ function ಅಥವಾ office. ಮೀಟಿಂಗ್ ಮಧ್ಯದಲ್ಲಿ ಮುಟ್ಟಾದರೆ ಧೀಡಿರನೆ ಎದ್ದು ಹೊರ ಹೋಗೊಕಾಗಲ್ಲ, ಎಲ್ಲರ ನಡುವೆನೆ ಆ ವಿಷಯವನ್ನ ಪ್ರಸ್ತಾಪಿಸೋಕು ಆಗಲ್ಲ. ಅದೆಲ್ಲ ಮುಗಿಯೊ ವರೆಗೂ ಕಾದಿದ್ದು ಎಲ್ಲರೂ ಹೋದ್ಮೆಲೆ ಏಳ್ಬೇಕು ಯಾಕಂದ್ರೆ ಹಿಂಭಾಗದಲ್ಲಾಗಬಹುದಾದ ಒದ್ದೆ ಎಲ್ಲಿ ಯಾರಿಗೆ ಕಾಣ್ಸತ್ತೊ ಅನ್ನೊ ಭಯ.‌ಹಿಂದೆ ತಿರುಗಿ ತಿರುಗಿ ನೋಡ್ಕೊಂಡು ಹೆಜ್ಜೆ ಅಂತರಾನ ಸಣ್ಣಕ್ಕಿಟ್ಟು ಹೆಣ್ತನಾನ ಕಾಪಾಡ್ಕೊಬೇಕು. ಒಂದು ಹೆಣ್ಣು ಗಂಡಿನೆದುರು ದೈಹಿಕವಾಗಿ ಬೆತ್ತಲಾದಷ್ಟು ಮಾನಸಿಕವಾಗಿ ಬೆತ್ತಲಾಗಳಾರಳು. ಆದರೂ ತನ್ನ ಗಂಡನೆದುರು ಎಲ್ಲವನ್ನೂ ಹೇಳಿ ಕೊಳ್ತಾಳೆ ಅಂದ್ರೆ ಅವಳು ನಿಮ್ಮಿಂದ ಒಂದೆರಡು ‌ಸಮಾಧಾನದ ಮಾತುಗಳನ್ನೊ, ಸಾಂಗತ್ಯಾನೊ ಬಯಸ್ತಿದಾಳೆ ಅಂತ ಅರ್ಥ ಹೊರತು ನೀವು ಅವಳನ್ನ ಕೂರ್ಸಿ ಅಡುಗೆ ಮಾಡಿ ಹಾಕ್ಲಿ ಅಂತಲ್ಲ. ಜೀವನ ಪೂರ್ತಿ ನಿಮಗೋಸ್ಕರ ಅಂತಾನೆ ದುಡಿಯೊ ಅವಳಿಗೆ ಅದೆಷ್ಟು ಜನ ಗಂಡಂದಿರು ಅವಳ ಮುಟ್ಟಿನ ದಿನದಲ್ಲಿ ಅಡುಗೆ ಮಾಡಿ ಹಾಕ್ತಿರ?…. ಶಾಸ್ತ್ರ ಸಂಪ್ರದಾಯದ ಹೆಸರಲ್ಲಿ ಮೂರು ದಿನ ಹೊರಗಿಟ್ಟು ಮಾಡೋದು ಬೇಡ. ಮುಟ್ಟಿಂದಲೆ ಹುಟ್ಟು ಅನ್ನೊ ನಗ್ನ ಸತ್ಯ ಎಲ್ಲರಿಗೂ ಗೊತ್ತಿದ್ರು ಮುಟ್ಟದರೆ ಮೈಲಿಗೆ ಅನ್ನೊ ಅನಿಷ್ಟ ಪದ್ದತಿಗಳು ಇಂದಿಗೂ ಜೀವಂತವಾಗಿದೆ. ಮದುವೆ ಮುಂಜಿಗಳಿಗೆ , ಹಬ್ಬ ಸಂಭ್ರಮದಲ್ಲಿ ಪಾಲ್ಗೊಳ್ಳೊಹಾಗಿಲ್ಲ,ಹರಕು ಕಂಬಳಿ, ಹಳೆ ಬೆಡ್ ಶೀಟ್, ತಲೆದಿಂಬಿಗೊಂದೆರಡು ಗೋಣಿಚೀಲ, ಕೂತಲ್ಲಿಂದ ಏಳೊ ಹಾಗಿಲ್ಲ, ಅಬ್ಬಬ್ಬಾ ನಮ್ಮದೇ ದೇಹದ ಮೇಲೆ ನಮಗೆ ಜಿಗುಪ್ಸೆ ಬರೊತರ. ಜಗತ್ತಿನಲ್ಲಿ ಯಾರು ಯಾರ ನೋವನ್ನೂ ಅನುಭವಿಸೋಕಾಗಲ್ಲ ಆದರೆ ಅನುಕಂಪದಿ, ಅನುರಾಗದಿ ಸ್ಪಂದಿಸಬಹುದು. ಒಬ್ಬ ಗಂಡನ ನಿಜವಾದ ಪ್ರೀತಿ ತಿಳಿಯೋದು ಹೆಣ್ಣಿನ ಅಸಹಾಯಕತೆಯಲ್ಲಿ ಮತ್ತೆ ಅವಳ ಅನಾರೋಗ್ಯದಲ್ಲಿ. ನೀವು ನಿಜವಾಗಲೂ ನಿಮ್ಮ ಹೆಂಡ್ತಿನ ಪ್ರೀತ್ಸೋದೆ ನಿಜವಾದ್ರೆ ಅವಳ ಮುಟ್ಟಿನ ದಿನಗಳಲ್ಲಿ ಸ್ನಾನಕ್ಕೆ ಬಿಸಿ ನೀರು ಕಾಯಿಸ್ಕೊಡಿ ತಲೆಯಿಂದ ಪಾದದವರೆಗೆ ಇಳಿಯೊ ಬಿಸಿ ನೀರಿನ ಮಜ್ಜನ ಅದೆಷ್ಟೊ ಹಿತ ಅನ್ಸತ್ತೆ. ಆ ಹೊತ್ತಲ್ಲಿ ದೈಹಿಕವಾಗಿ ಕಿರಿ ಕಿರಿ ಆಗ್ತಿರೊದ್ರಿಂದ ಮಾನಸಿಕವಾಗಿ ಸ್ವಲ್ಪ ಸಿಟ್ಟು ಬರ್ತಿರತ್ತೆ ಎರಡು ದಿನ ಸಮಾಧಾನದಿಂದ ಸುಧಾರಿಸ್ಕೊಳ್ಳಿ, ಮೆಡಿಕಲ್ಗಳಿಗೆ ಹೋಗಿ ಅವಳಿಗೆ ಬೇಕಾಗಿರೊ ಸ್ಯಾನಿಟರಿ ಪ್ಯಾಡ್ಗಳನ್ನ ತಂದು ಕೊಡಿ, ಅಂಗಡಿಗಳಿಗೆ ಹೋಗಿ ಇದ್ನೆಲ್ಲ ಕೇಳೊದ್ರಿಂದ ನೀವ್ಯಾರು ನಗೆಪಾಟಲಿಗೆ ಗುರಿಯಾಗಲ್ಲ, ಯಾಕಂದ್ರೆ ಹುಟ್ಟಿನ ಹಿಂದಿದ್ದ ಮುಟ್ಟಿನ ಮಹತ್ವ ತಿಳಿದ ಯಾವ ಗಂಡಸು ಕೂಡ ನಗೋದಿಲ್ಲ.ಗಂಡನಾದವನು ಮಾತ್ರ ಹೀಗಿರಬೇಕಂತಲ್ಲ ಒಬ್ಬ ಲವರ್, ಒಬ್ಬ ಅಣ್ಣನಾದವನೂ ಕೂಡ ಇದೆಲ್ಲ ತಿಳ್ಕೊಬೇಕು. ಯಾವ ಹೆಣ್ಣು ಕೂಡ ಬಾಯ್ಬಿಟ್ಟು ಹೇಳಲ್ಲ ಯಾಕಂದ್ರೆ ಮುಟ್ಟನ್ನೊದು ಬರಿ ಮೂರು ದಿನದ ಸಂಕಟವಲ್ಲ, ನೋವಿನ ಮೂಟೆಯಲ್ಲ, ಕಿಬ್ಬೊಟ್ಟೆಯಲ್ಲಾಗುವ ಏರು ಪೇರಿನ ಇಳಿವ ರಕ್ರಸ್ತಾವದಂತೆ ಮಾನಸಿಕ ಭಾವನೆಗಳ ತೊಳಲಾಟ… ಹೆಣ್ತನಕ್ಕಿದು ಅನಿವಾರ್ಯ, ಅವಶ್ಯಕತೆ ಅನ್ನೋದು ಪ್ರತಿಯೊಂದು ಹೆಣ್ಣಿಗೂ ಅರ್ಥವಾಗಿದೆ ಇನ್ನೆನ್ನಿದ್ದರು ಅರ್ಥ ಮಾಡಿಕೊಳ್ಳುವ ಸರದಿ ಗಂಡಸರದ್ದೆ…. ======================================= ಪರಿಚಯ: ಊರು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಪುಟ್ಟ ಹಳ್ಳಿ ಓದಿದ್ದು ಬಿ.ಕಾಂ ಪ್ರಸ್ತುತ ಬೆಂಗಳೂರಿನ ಒಂದು ಕಂಪನಿಯಲ್ಲಿ ಕೆಲಸ

ಮಹಿಳೆ Read Post »

ಇತರೆ

ಮಕ್ಕಳ ಸಾಹಿತ್ಯ

ಆಯ್ಕೆ ಅವ್ಯಕ್ತ ನನ್ನಹೆಚ್ಚಿನ ಸಮಯವನ್ನು ನಾನು ಮಕ್ಕಳೊಂದಿಗೆ ಕಳೆಯುತ್ತಿರುವುದು.ಅವರೊಂದಿಗೆ ಆದ ಅನುಭವಗಳನ್ನು ಸಣ್ಣ ಸಣ್ಣ ಕಥೆಗಳ ಮೂಲಕ ಬರೆಯುತ್ತೇನೆ. ಅಂತ ಕಥೆಗಳಲ್ಲಿ ಇದೂ ಒಂದು) ಆಯ್ಕೆ ಒಳಗೆ ತಲೆಯಾಡಿಸುತ್ತಾ ನಡೆದು ಬಂದ್ಲು. ನಾನು ನೋಡಿ ಮುಗುಳ್ನಗೆ ಬೀರಿದೆ. ಜ್ವಾಲಾಮುಖಿ ಬಚ್ಚಿಟ್ಟಿದ್ದಂತೆ“ನಾನು ಅವರನ್ನೆಲ್ಲ ದ್ವೇಷಿಸುತ್ತೇನೆ”, “ಇನ್ಯಾವತ್ತೂ ಅವರೊಂದಿಗೆ ಮಾತಾಡೋದಿಲ್ಲ”. ನಾನು ತಾಳ್ಮೆಯಿಂದ “ಏನಾಯ್ತೆ ನನ್ ರಾಣಿ?”. ಅಂತ ಕೇಳ್ದೆ. ನನ್ನ ಪ್ರಶ್ನೆಗೆ ಕಾಯ್ತಿದ್ಲೆನೋಅನ್ನೋ ಹಾಗೆ“ನನಗೆ ನೋವಾಗಿದೆ, ನನ್ನ ಆಡ್ಕೋತಾರೆ,ನನ್ನ ನೋಡಿ ನಗ್ತಾರೆ,ನಾನು…. ನನ್ನ…. ನನಗೆ…”ನಿಲ್ಲೋಮಾತೇ ಇಲ್ಲ ! ನಾನುಸ್ವರ ಸ್ವಲ್ಪ ಏರಿಸಿ, ಮೃದುವಾಗಿ ಹೇಳಿದೆ “ಸ್ಟಾಪ್!”. ಅವಳ ಕಣ್ಣಂಚಲ್ಲಿ ನೋವು ಸಿಟ್ಟು ಎರಡೂ ಸೇರಿ ಕಣ್ಣೀರು ಬರದಷ್ಟು ನಿರಾಸೆ ನನಗೆ ಭಾಸವಾಗಿತ್ತು! ಮೆಲ್ಲನೆ ನಾನೇ ಹತ್ತಿರ ಹೋಗಿ ಮುದ್ದಾಗಿ ತಲೆಸವರಿ ಕೇಳಿದೆ. “ಸರೀ…ಅವರು ಎಷ್ಟು ಸಾರಿ ನಿನ್ನ ನೋಡಿ ನಕ್ಕರು? ಎಷ್ಟು ಸಾರಿಛೇಡ್ಸಿದ್ರು?”ಸಿಟ್ಟಿನಲ್ಲಿ “ಒಂದು ಸಾರಿ ಅಲ್ಲ ಎರಡು ಅಲ್ಲ ಮೂರು ಅಲ್ಲ…” ಲೆಕ್ಕ ಮಾಡಲು ಶುರುಮಾಡಿದಳು.“10 ಬಾರಿ”ಎನ್ನುವಷ್ಟರಲ್ಲಿ ಸ್ವಲ್ಪ ಶಾಂತಿ ತುಂಬಿತ್ತು ಅವಳ್ಮನ್ಸಲ್ಲಿ. ನಾನು ಸುಮ್ಮ್ನೆ“ಈಗ ನಿನ್ನ ಮನಸ್ಸಲ್ಲಿ ಅದೇ ವಿಷಯ ಎಷ್ಟು ಬಾರಿ ನೆನೆಸಿಕೊಂಡು ಸಿಟ್ ಮಾಡ್ಕೊಂಡೆ?” ಅಂತ ಕೇಳ್ದೆ. ಯೋಚಿಸಿ ಅಳೆದು ಸುರಿದು ಲೆಕ್ಕ ಮಾಡಿ ಅವರು ಇವರು ಕಥೆ ಹೇಳ್ತಾ ಕೊನೆಗೆ 25 ಎಂದ್ಲು. ನಾನು ೨೫+೧೦+೨ಬಾರಿನನ್ಹತ್ರ,ಒಟ್ಟು ೩೭ ಬಾರಿ…ಈಗ ಹೇಳು “ನಿನ್ನನ್ನು ಹೆಚ್ಚು ನೋವಿಸಿದ್ದು ಯಾರು ಬಂಗಾರಿ?” ಸ್ವಲ್ಪ ಹೊತ್ತು ಸುಮ್ಮನೇ ನಿಂತು ಮತ್ತೆ ನಾಚಿಕೆಯಿಂದ“ನಾಆಆಆನೇಏಏಏಏಎಂದು ಹೇಳಿ ನಕ್ಕುಬಿಟ್ಟಳು. ನಾನು ಎಲ್ಲರ ಕಡೆ ತಿರುಗಿ ಹೇಳಿದೆ.. “ಸಂತೋಷವಾಗಿರುವುದು ನಮ್ಮ ಆಯ್ಕೆ ಯಾಗಿರಲಿ…, ಕ್ಷಮಿಸಿಬಿಡಿ… ಆದರೆ,ನೋವುತಂದಅನುಭವ ಮರೆಯದಿರಿ!” ==================================== ಪರಿಚಯ: ವಿದ್ಯಾಭ್ಯಾಸ: ಎಂ.ಎಸ್ಸಿ.(ರಸಾಯನಶಾಸ್ತ್ರ) ಬಿ.ಎಡ್, ವೃತ್ತಿ: MAGMA COACHING ZONE ನನಡೆಸುತ್ತಿದ್ದೇನೆ. (ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಾಡಿರುವಂತಹ ತಾಣ)ಹವ್ಯಾಸಗಳು: ಬರೆಯೋದು, ಪ್ರಕೃತಿಗೆ ಹತ್ತಿರವಾಗುವಂಥ ತಾಣಗಳಿಗೆ ಹೋಗುವುದು, ಹಾಡು ಕೇಳುವುದು, ಕರಕುಶಲ ಕೆಲಸಗಳನ್ನು ಮಾಡುವುದು,ಇತ್ಯಾದಿ.

ಮಕ್ಕಳ ಸಾಹಿತ್ಯ Read Post »

You cannot copy content of this page

Scroll to Top