ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಮ್ಮ ಕವಿ

ನಮ್ಮ ಕವಿ

ಬಿದಲೋಟಿ ರಂಗನಾಥ್ ಕವಿ -ವಿಮರ್ಶಕ ಬಿದಲೋಟಿ ರಂಗನಾಥ್ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೋಕಿನ ಒಂದು ಪುಟ್ಟ ಹಳ್ಳಿಯವರು.ತಂದೆ ಮರಿರಂಗಯ್ಯ ತಾಯಿ ಸಿದ್ದಗಂಗಮ್ಮ ಅವರ ಮೊದಲನೇ ಮಗನಾಗಿ ೧೫-೭-೧೯೮೦ ರಂದು ಸ್ವಗ್ರಾಮದಲ್ಲಿ ಜನಿಸಿದ ಅವರಿಗೆ ಬೆಳೆಯುತ್ತಾ ಬೆಳೆಯುತ್ತಾ ಬದುಕು ಕಡಿದಾಗುತ್ತಲೇ ಹೋಯಿತು.ಅವರ ಕಿತ್ತು ತಿನ್ನುವ ಬಡತನ, ಸೋರುವ ಸೂರು ,ಜಾತಿಗೆ ನಲುಗಿದ ಮನಸು,ಅಮ್ಮಳನ್ನು ಆವರಿಸಿದ ಅಸ್ತಮ ಬಿ ರಂ ಅವರನ್ನು ಇನ್ನಿಲ್ಲದಂತೆ ನಲುಗುವಂತೆ ಮಾಡಿ ,ಕೆಂಡ ಹಾಸಿದ ಹಾದಿಯ ಮೇಲೆ ನಡೆಯುವಂತೆ ಮಾಡಿತ್ತು. ಬೆಳಗಿ ಜಾವಕ್ಕೆ ಎದ್ದು ಕಸಮುಸರೆ ಮಾಡಿ ದನದ ಕೊಠಕಿಗೆ ಸೊಪ್ಪು ತಂದಾಕಿ ಇರುವ ಸೊಪ್ಪೊ ಸೆದೆಯೋ ಕಾಳು ಕಡ್ಡಿಯೋ ತಿಂದು ,ಸುಮಾರು ಎರಡು ಮೈಲಿ ಇರುವ ಹೊಳವನಹಳ್ಳಿಗೆ ನಡೆದು ಹೋಗಿ ಶಿಕ್ಷಣ ಪಡೆವ ಅನಿವಾರ್ಯತೆ ಇತ್ತು.ಅಂತಹ ದಿನಗಳನ್ನು ಶಿಕ್ಷಣ ಪಡೆದರು. ಯಾವುದಕ್ಕೂ ಎದೆಗುಂದದೆ ನಡೆದರೂ ಕೂಡ.ಇಂತಹ ಕಷ್ಟ ಕಾರ್ಪಣ್ಯದ ನಡುವೆಯೂ ಅಪ್ಪನಿಗೆ ಮಗನನ್ನು ಓದಿಸಿ ಸಮಾಜಕ್ಕೆ ಒಬ್ಬ ಚಿಕಿತ್ಸಕನನ್ನಾಗಿ ಮಾಡಬೇಕೆಂಬ ಹಂಬಲೂ ಹೆಚ್ಚಿತ್ತು. ಜೊತೆಗೆ ಕವಿಯ ಛಲವೂ ಸೇರಿ ಒಂದು ಸ್ಥಾನಕ್ಕೆ ಬಂದು ನಿಂತರು. .ಬಹುಶಃ ಇವರು ನಲುಗಿದ ಬದುಕು ಕತ್ತಲೆಯ ಕಡಿದಾದ ದಾರಿಯೇ ಇವರು ಕವಿತೆ ಬರೆಯಲು ಪ್ರೇರೆಪಿಸಿರಬೇಕು.ಅವರೊಗೆ ಅಧಮ್ಯ ಕವಿಯೊಬ್ಬ ಜನ್ಮತಾಳಿ, ಯುವ ತಲೆಮಾರಿನ ಸೃಜನಶೀಲ ಕವಿಯೆಂದೇ ಗುರುತಿಸಿಕೊಳ್ಳಲು ಅವರ ಕಾವ್ಯ ಶೈಲಿ ಕಾರಣವಾಗಿರಬಹುದು.ಅವರು ಕಟ್ಟುವ ಕವಿತೆಗಳಲ್ಲಿ ಪ್ರತಿಮೆ, ರೂಪಕ ಶಶಕ್ತವಾಗಿ ಕವಿತೆಯನ್ನು ಆವರಿಸಿರುತ್ತವೆ .ಅವರ ಕವಿತೆಗಳ ಪ್ರವೇಶ ಕಠಿಣವಾದರು ಓದುಗನನ್ನು ಆವರಿಸುವಲ್ಲಿ ಸೋತಿಲ್ಲ ಎಂಬುದು ವಿಶೇಷ. ಅವರು ಇದುವರಿಗೆ “ಮಣ್ಣಿಗೆ ಬಿದ್ದ ಹೂಗಳು ” ಬದುಕು ಸೂಜಿ ಮತ್ತು ನೂಲು ” ಎಂಬ ಎರಡು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.ತಾಲ್ಲೋಕು ಕನ್ನಡ ರಾಜ್ಯೋತ್ಸವ,ಸಂಕ್ರಮಣ ಪುರಸ್ಕಾರ,೨೦೧೫ ರಲ್ಲಿ ತುಮಕೂರು ಜಿಲ್ಲಾ ಕವಿಗೋಷ್ಠಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ನಾಡಿ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ,ಕನ್ನಡ ಪ್ರಭ,ಸಂವಾದ ,ಹೊಸತು,ಓ ಮನಸ್ಸೆ ,ಹಾಯ್ ಬೆಂಗಳೂರು ,ಕರ್ಮವೀರ,ಸಂಯುಕ್ತ ಕರ್ನಾಟ ಅಂತರ್ಜಾಲ ಪತ್ರಿಕೆಗಳಾದ,ಅವಧಿ ,ಸಂಗಾತಿ,ಪಂಜು ,ಪಂಜು ಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ. ಶ್ರೀಯುತರು ಮಧುಗಿರಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತ,ಇಬ್ಬರು ಮಕ್ಕಳು ಮಡದಿಯೊಂದಿಗೆ ಮಧುಗಿರಿಯಲ್ಲಿ ವಾಸವಾಗಿದ್ದಾರೆ. ಇವರ ಕೆಲ ಕವಿತೆಗಳು ನಿಮ್ಮ ಓದಿಗಾಗಿ ನನ್ನೊಳಗಿನ ಬೆಳಕು ದೀಪದ ಬೆಳಕಲ್ಲಿ ನೆಂದ ಸೌದೆಗಳನ್ನು ಒಲೆಗೆ ತುರುಕಿ ಹೊಗೆಯಲ್ಲಿ ಕೆಂಪಾದ ಕಣ್ಣುಗಳ ಉಜ್ಜಿಕೊಳ್ಳುತ ಅವ್ವ ಸುಡುತ್ತಿದ್ದ ರಾಗಿ ರೊಟ್ಟಿ ನನ್ನೊಳಗಿನ ಬೆಳಕು ಗರಿ ತೂತುಗಳಲ್ಲಿ ತೊಟ ತೊಟ ತೊಟ್ಟಿಕ್ಕುವ ಮಳೆ ಹನಿಗಳಿಗೆ ತಪ್ಪಿಸಿಕೊಳ್ಳುತ್ತ ಗೂಡರಿಸಿ ಕೂತು ಒಲೆಯ ಬಾಯಿ ಕೈಯೊಡ್ಡಿ ಬಿಸಿಯಾಗುತ್ತಿದ್ದ ನೆನಪು. ಹೊಲದಲಿ ಕುಪ್ಪೆಮಾಡಿದ ರಾಗಿಕಡ್ಡಿಗಳಲಿ ಅಪ್ಪನಿಟ್ಟ ಜೀವ ಮಂಕರಿಯಲಿ ಹೊತ್ತ ಗೊಬ್ಬರಕೆ ಮೊಳೆತ ಬದುಕಿನ ಪೈರು ಕಣದಲಿ ಅರಳಿದ ಜೀವಂತ ಬದುಕು ಜೇಡಕಟ್ಟಿದ ಬಲೆಯ ಸ್ಪೂರ್ತಿಯಲಿ ಅವ್ವಳ ಎಚ್ಚರದ ನಡಿಗೆ.. ಅಪ್ಪನುಡಿದ ಹಗ್ಗ ಮಿಣಿಗಳೇ ಕಲಿತ ಎರಡಕ್ಷರಕೆ ದಾರಿ ಅಮ್ಮನ ಗೂರಲಲ್ಲೇ ಕರಗಿದ ರಾತ್ರಿಗಳು ಇಂಕಿಲ್ಲದ ಲೇಖನಿಯ ಹಿಡಿದು ಹಾಳೆ ಮೇಲೆ ಬೀಳದ ಅಕ್ಷರಗಳು ಬಡತನದ ಬಡಬಾಗ್ನಿಯು ಬಾಯಾರಿ ಮರಗಟ್ಟಿದ ಜೋಡಿ ಮುರುಕು ಬಟ್ಟೆಗಳು ಬಣ್ಣವಿಲ್ಲದ ಬದುಕಲ್ಲಿ ಒಂಟಿನಿಂತ ಕವೆಗೆ ಜೋಳಿಗೆ ನೇತಾಕುವ ಕೈಗಳು ಎರಗಿದ ತೂಕವ ಹೆಗಲ ಮೇಲೆ ಹೊತ್ತೇ ನಡೆದಳು ನನ್ನೊಳಗಿನ ತೂಕದ ನೋವಿಗೆ ಮರುಗಿದಳು ಬೆವರಲ್ಲೇ ಬೆಂದು ಜೋಪಡಿಗೆ ನೇತಾಕಿದ ಲಾಟೀನು ಬೆಳಕಲ್ಲಿ ನನ್ನವ್ವಳ ನಾಡಿ ಮಿಡಿತ ಅಪ್ಪನ ಕನಸುಗಳಿಗೆ ಬಣ್ಣದ ಲೇಪನ ಗವಾಕ್ಷಿಯ ಬೆಳಕಲ್ಲೇ ಕೋಣೆಯ ಕಣ್ಣುಗಳು ಬೆತ್ತಲಾಗಿ ಹಸಿವಿನ ಮೊಗದ ಕನ್ನಡಿ ಬಯಲಾಗಿದ್ದು ನೋವಿನ ನೆತ್ತರು ಬಿಸಿಯಾಗಿದ್ದು ಸೀಳುಕ್ಕೆಯಲಿ ನೆಂದು ಗಿಡಗೆಂಟೆಗಳ ನಡುವೆ ಉಸಿರಾಡಿ ಜೋಪಡಿ ಕಿಂಡಿಗಳ ಬೆಳಕಿನ ಜೊತೆ ಆಡಿ ಬಯಲ ಬದುಕಲಿ ಬರಿದಾಗಿ ನೆಲದ ನಿಟ್ಟುಸಿರಿಗೆ ದನಿಯಾದವಳು ಕಗ್ಗತ್ತಲ ರಾತ್ರಿಯ ನಡಿಗೆಗೆ ಲೆಕ್ಕವಿಲ್ಲ ಗದ್ದೆಬಯಲಗುಂಟ ಹರಿವ ನೋಟ ಪೆಡೆಗೆ ಹರಿವ ನೀರಿನ ಶಬ್ಧ ಸಂಗೀತ ಅಪ್ಪನ ನಿತ್ಯದ ಕರ್ಣಫಲಾಮೃತ. ಸಾಲು ಸಾಲಿನಲು ನಡೆದು ಹೊತಾರೆ ಬೈಗು ನಡು ಮಧ್ಯಾಹ್ನ ಕನಸುಗಳನು ಹೂ ಕಟ್ಟುವಂತೆ ಕಟ್ಟುತ್ತಲೇ ಅಂಗೈಯೊಳಗೆ ನಕ್ಷತ್ರ ಪುಂಜ ಕಂಡ ಅಪ್ಪನು ನಡೆವ ದಾರಿಯುದ್ದಕ್ಕೂ ಅವ್ವಳ ಹೆಗಲು ಮಾಗಿಯು ಬಾಗಿ ಹುಲುಸು ಸಾಗಿ ಅವ್ವ ನಿಂತ ನಿಲುವಿನಲೇ ನಿಂತು ರೋಣು ಹೊಡೆವಾಗಿನ ಚೈತನ್ಯ ಚಿಲುಮೆಯಲಿ ವರ್ಷದ ಸಂತಸವ ಕಣದಲಿ ಗುಡ್ಡೆ ಮಾಡಿ ಚೀಲ ತುಂಬಿ ಉಗಾದಿಗೆ ಅವ್ವಳ ಹೊಸ ಸೀರೆಯ ನೆರಿಗೆಗಳಲ್ಲಿ ಕನಸುಗಳು ಆಡಿ ಅಪ್ಪನ ಮನದಂಗಳದಲ್ಲಿ ಶುಕ್ರ ಗ್ರಹ ಮಣ್ಣ ಒಸಲಿಗೆ ಅರಿಶಿನ ಕುಂಕುಮ ಅಂಕು ಡೊಂಕಿನ ಸಗಣಿ ಕದರಿನ ಹಟ್ಟಿಯ ಮೇಲೆ ಅವ್ವ ಕಟ್ಟಿ ಹಾಕಿದ ನಗುವ ಪುಡಿ ರಂಗೋಲಿಯ ಗೆರೆಗಳು ಉರಿವ ಒಲೆಯಲಿ ಹಸಿವಿನ ಸಂಕಟವ ಸುಟ್ಟು ಉರಿಯುತ್ತಿದ್ದಳು ಅವ್ವ ಒಳಗೂ ಹೊಲಮಾಳದೊಳಗು ಅವ್ವಳಿಗೆ ಬದುಕೆಂದರೆ ಬೆವರಿ ಬಾಯಾರಿದ ಕಡಲ ಕಿನಾರಿಯ ನೆಲ ತುಂತುರು ಹನಿಯೊಡನೆ ಮಿಲನಗೊಂಡು ತ್ಯಾವಿಸಿ ಮೊಳಕೆ ಇಣುಕಲು ಬಿರಿವ ತಾವು ಬಿರಿದ ನೆಲದ ಬಿಕ್ಕಳಿಕೆ. ಇಟ್ಟ ದಾರಿಯ ಮೇಲಿನ ಹೆಜ್ಜೆಯ ಗುರುತು ತೆವಳುತ ಶಿಖರ ಸೇರುವ ಬಯಕೆ ಗುಡಿಸಲಲಿ ತೂಗುಹಾಕಿದ ತಂತಿಕೊಂಕಿಗೆ ಸಿಕ್ಕಿಸಿದ ವಿದ್ಯುತ್ ಬಿಲ್ಲಿನ ಹಸಿದ ಹೊಟ್ಟೆಯಲಿ ಬಿಚ್ಚಿಕೊಂಡ ಬದುಕಿನ ಸೀಳು ಹಾದಿ ಬೆಣಚಿ ಕಲ್ಲನ್ನು ಒಂದಕ್ಕೊಂದು ತಾಕಿಸಿ ಪೆಕರನಂತೆ ಕಣ್ಣಗಲಿಸುವ ಕದರು ನೆಲಕ್ಕೆ ಕೈ ಊರಿದ ಕಣ್ಣ ಕನಸು ಗಂಟಿನ ಬಟ್ಟೆ ಬಿಚ್ಚಿ ಒಂದೊಂದಾಗಿ ನುಸುಳುವ ಕನಸುಗಳನು ಕೊಡವಿ ಕುಶಲೋಪರಿ ವಿಚಾರಿಸಿ ಮತ್ತೆ ಬಂಧಿಸಿ ಮೌನದ ದಾರಿಯಲಿ ನಿಂತ ಕವಿತೆಯೆಂದರೆ ಅದು ನನ್ನವ್ವ.! ಎದೆಯೊಳಗಿನ ಚಿತ್ರ ನೀನು ನನ್ನ ಎದೆಯನು ಆವರಿಸಿದ ದಿನದಿಂದಲು ನೆಲದಲಿ ಹುದುಗಿದ ಚೂಪು ಕಲ್ಲು- ಮುಳ್ಳುಗಳನು ತುಳಿಯದೆ ಹೆಜ್ಜೆವೂರಿದೆ ದಿನದ ಬೆಳಗು ಕಣ್ಣು ತೆರೆದು ಎದೆಯಿಂದ ಹೊರ ತೆಗೆದು ಮುದ್ದಾಡಿ ಮುತ್ತಿಟ್ಟು ಮೂಗು ಮುಖ ಕಣ್ಣು ಸುಳಿ ಸುದ್ದಗಳು ತೀಡಿ ಮತ್ತೆ ಎದೆಯೊಳಗೇ ಅವಿತಿಟ್ಟು ಧ್ಯಾನಿಸುವ ಖುಷಿಯಲಿ ನನ್ನಾತ್ಮದ ಬೆಳಕಿನ ಚಲನೆ ಕಣ್ಣಬೆಳಕಿನ ಹಾದಿಯುದ್ದಕ್ಕೂ ಶಿಲ್ಪವಾಗೆ ಉಳಿದ ನೀನು ಮಾಸದ ನೆರಳ ಚಿತ್ರ ಅದೊಂದು ಧೂಳು ಧೂಳು ಸಂಜೆ ಸುತ್ತುತಲಿದ್ದೆ ಆ ನೆರಳನು ಬಳಸಿ ಒಳಗೆ ಸಣ್ಣ ನೋವು ನೀರು ಗುಟುಕಿಸಿದೆ ಹೋಗಲಿಲ್ಲ ನೋವು ಎದೆಯೊಳಗಿನ ನಿನ್ನ ಚಿತ್ರ ಹೊರ ತೆಗೆದು ಮುಟ್ಟಿ ನೋಡಿದೆ ಯಾರೋ ಅದರ ಎದೆಗೂಡಿಗೆ ಗುಂಡು ತಾಕಿಸಿದ್ದರು ಅಲ್ಲಿದ್ದಷ್ಟೂ ನನಗೂ ನೋವೆ ಧ್ಯಾನಿಸಿದೆ.. ಎದೆಗೂಡಿನ ಕಣಿವೆ ಮುಚ್ಚಿತು ನೀನು ಚಿಟ್ಟೆಯಾಗಿ ಹೊಡೆದವನ ಗುಂಡಿಗೆಯ ಮೇಲೆ ಕೂತು ಜೀಕಿದೆ ನಾನು ನಡೆದೆ… ಹೃದಯ ಭಾರವೆನಿಸಲಿಲ್ಲ ನನ್ನ ನೆರಳ ಮೇಲೆ ನಡೆದಷ್ಟೂ ಹಾದಿ ತೆರೆದುಕೊಳ್ಳುತ್ತಲೇ ಇತ್ತು.

ನಮ್ಮ ಕವಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಮುಚ್ಚು ಮರೆಯಿಲ್ಲದೆ ಎದೆಕದವ ತೆರೆಯೋಣ ಅಚ್ಚು ಮೆಚ್ಚಿನಲಿ ಒಲವ ಬಂಡಿಯ ತಳ್ಳೋಣ ಅರ್ಥವಾಗದ ಮಾತು ಅದೆಷ್ಟು ಆಡಿದರೇನು ಅಕ್ಕಪಕ್ಕದಲಿ ಕೂತು ಒಳಧ್ವನಿಯ ಕೇಳೋಣ ಬಾಳ ದಾರಿಯಲೆಲ್ಲ ಹೂವಿರಲಿ, ಮುಳ್ಳೇಯಿರಲಿ ನೋವು ನಲಿವಿನ ಮಧ್ಯೆ ಮನ ಬಿಚ್ಚಿ ನಗೋಣ ತೆರೆಮರೆಯಲಿ ಕುಣಿವ ಮುಖವಾಡ ಕಂಡೆಯಾ ಒಳ ಹೊರಗುಗಳನೂ ವಂಚಿಸದೇ ಬಾಳೋಣ ನಮ್ಮ ಭರಪೂರ ಕನಸುಗಳಿಗೆ ಕಡಿವಾಣವಿರಲಿ ಸೋಲು ಗೆಲುವುಗಳಲಿ ಕೈ ಹಿಡಿದು ಸಾಗೋಣ ಎನ್ನ ಕಣ್ಣಾಳದಲಿ ನೀ ಒಮ್ಮೆ ಧುಮುಕಬಾರದೇ ಪರಿಪರಿಯ ಸುಖಕೆ ಮೈ ಮರೆತು ಸೋಲೋಣ ಸಾಗಿ ತೇಲುವ ಮುಗಿಲು ಮಡುಗಟ್ಟಿ ನಿಂತೀತೆ ಮೋಡಾಮೋಡಿಯಲಿ ದಿನ ನೂಕಿ ಬಿಡೋಣ ಎಳೆದ ರಂಗೋಲಿ ಕೆಳಗೆ ಪವಾಡವೇ ನಡೆಯಲಿ ಏರಿಳಿತದ ಬದುಕಲ್ಲಿ ಕೂಡಿ ನಾವು ಹಾಡೋಣ ಅಂತರಾಳದ ಅಳಲಿಗೆಲ್ಲ ದನಿಯಾಗೋಣ ಬಾರೆ “ಸುಜೂ” ನಾವು ಮುದ್ದಾಡಿ ಮೋಹದುಯ್ಯಾಲೆ ಜೀಕೋಣ ಕಿರುಪರಿಚಯ: ಸುಜಾತಾ ಲಕ್ಮನೆ, ಸ್ವಂತ ಊರು ಸಾಗರ. ವಾಸ ಬೆಂಗಳೂರು. ನನ್ನ ಹಲ-ಕೆಲವು ಕವನಗಳು ತುಷಾರ, ಕಸ್ತೂರಿ, ಮಯೂರ, ಕರ್ಮವೀರ , ಮಾಣಿಕ್ಯ, ಸಂಪದ ಸಾಲು, ಪಂಜು ಮುಂತಾದ ಮಾಸ/ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಶೇಷಾಂಕಗಳಲ್ಲೂ ಪ್ರಕಟವಾಗಿವೆ. ಹಲವು ಪತ್ರಿಕೆಗಳಲ್ಲಿ ಗಜಲ್ ಗಳೂ ಪ್ರಕಟವಾಗಿವೆ. ಹವ್ಯಾಸಿ ಕವಯಿತ್ರಿ. ಹಲವು ಕವನಗಳು ತೊಂಬತ್ತರ ದಶಕದಲ್ಲಿ ತುಷಾರದಲ್ಲಿ ಹಿರಿಯರ ಆಯ್ಕೆ ಕವನಗಳಾಗಿ ಸಹ ಪ್ರಕಟವಾಗಿವೆ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಓ, ಅವನೇ.. ಪೂರ್ಣಿಮಾ ಸುರೇಶ್ ಅವನನ್ನು ಇಷ್ಟ ಪಟ್ಟಿದ್ದು ಹೇಗೆ,ಯಾವಾಗ? ಪ್ರಶ್ನೆಯಾಗದಿರು ಒಳಗಿನವಳೇ.. ಅದೆಷ್ಟು ಬಾರಿ ಸಮಜಾಯಿಷಿ ನೀಡಿದ್ದೇನೆ ಕಿರಿಕಿರಿ ಮಾಡದಿರು ಹೀಗೆಲ್ಲ ಏನು-ಯಾಕೆಗಳನ್ನು ಎದುರಿಟ್ಟು ! ನಾನು ಬದುಕುತ್ತಿದ್ದೇನೆ ಎಂಬುದಷ್ಟೇ ಸತ್ಯ. ಆದರೆ ಅವಳಿಗದು ರುಚಿಸದು. ಮನಸ್ಸಿಗೆ ಪಾತಿ ಮಾಡಿದ್ದು, ನೆಟ್ಟ ಗಿಡ ಕುಡಿಯೊಡೆದದ್ದು.. ಮೊಗ್ಗು ಕಟ್ಟಿದ್ದು ನೆನಪಿಸುತ್ತಾಳೆ. ನನ್ನ ಅವಳ ಹಾದಿಗೆಳೆಯುತ್ತಾಳೆ ಬಲವಂತವಾಗಿ. “ಗೊತ್ತಿಲ್ಲ”- ಹಾರಿಕೆ ಉತ್ತರನೀಡಲಾರೆ. ನಾನು ನನ್ನ ದಾರಿಯಲ್ಲಿ ಅವನು ತನ್ನ ಗುರಿಯತ್ತ ನಡೆವಾಗ ಒಂದೊಂದು ತಿರುವಿನಲ್ಲೂ ಕಾಡಕುಸುಮ… -ಕೆಂಪಿನ ಕೇಪಳ, ಕಂಪಿನ ರೆಂಜೆ, ಬೇಲಿಯ ನೀಲಿಯ ಪುಟ್ಟಪುಟ್ಟ ಹೂಗಳನಿಟ್ಟವನ ತುಟಿಗಳಲಿ ದುಂಡುಮಲ್ಲಿಗೆ ! ಹೀಗೆ ಅಚಾನಕ ಎದುರಾದ ಹೂಗಳು ನನ್ನೊಳಗೆ ತಂತಾನೇ ಮಾಲೆಯಾದ ಸೋಜಿಗ ಇಂದಿಗೂ ಬಿಡಿಸಲಾಗಿಲ್ಲ! ಬೇಡ. ದೂರದಿರಿ.. ಅವನನ್ನು ಅವನಿಗೇನುಗೊತ್ತು.. ಪ್ರೀತಿ ಬೆಳೆಯುವ ಕಲೆ? ಗೊತ್ತಿದ್ದರೆ… ಬಿಡಿಸುತ್ತಿರಲಿಲ್ಲವೇ ಮಲ್ಲಿಗೆಯಚೆಂಡನ್ನೇ!? ನನ್ನುದ್ದಕ್ಕೂ ನಾ ಬಾಲ್ಯದಿಂದಲೂ ಆಸೆ ಪಟ್ಟ ಮಲ್ಲಿಗೆ. ನಿನ್ನ ಮಲ್ಲಿಗೆಯವನು ಘಮ ತರಲಿ ಎಂದು ಅವನು ನಿನ್ನ ರೆಂಜೆ, ಕೇಪಳಕೆ ದೇವಿ ಪ್ರಸನ್ನಳಾಗಲಿ ಎಂದು ನಾನು ಹಾರೈಸಿಕೊಂಡಿದ್ದೆವು ಪರಸ್ಪರ! ಅದೆಷ್ಟು ಕಾಲ ಬರಿನೆಲದಲ್ಲಿ ಯೋಗಿಯಂತೆ ಸಾಹಿತ್ಯ, ಸಮಾಜ, ಗಂಡು ಹೆಣ್ಣು ಎಂದು ಕಣ್ಣು ಕೂಡಿಸದೇ ನಿರ್ವಿಕಾರನಾಗಿ ಮಾತಿನೆಳೆಗಳನ್ನು ಆತ ಬಿಡಿಸುತ್ತಿದ್ದರೆ… ಅಲ್ಲಲ್ಲಿ ಅಲ್ಪವಿರಾಮ, ಪ್ರಶ್ನಾರ್ಥಕ, ಆಶ್ಚರ್ಯ ಚಿಹ್ನೆ ನಾನು. ಅವನ ಸಂಭ್ರಮಕ್ಕೆ ನನ್ನ ಭಾವ, ನನ್ನ ಪುಳಕಕ್ಕೆ ಅವನ ನಡೆ ತಗಲಿಕೊಂಡಿದ್ದು ಗಮನಕ್ಕೆ ಬಂದಾಗ ವಟವೃಕ್ಷ ಒಳಗೊಳಗೆ ಬೇರಿಳಿಸಿ ಅದರ ಬಿಳಲು ಹಿಡಿದು ನಾನು ಜೋಕಾಲಿ ಆಡುತ್ತಿದ್ಧೆ. ಬೆನ್ನ ಹಿಂದಿನ ಹಸ್ತ ಅವನದೇ ಇರಬೇಕು. ಜೀಕುವ, ತೂಗುವ ಸಂಭ್ರಮ.. ಅವನ ಕಣ್ಣಿನೊಳಗೆ ನನ್ನ ಆತ್ಮದ ಪ್ರತಿಫಲನ. ಓ ಇವನೇ.. ಜೋರಾಗಿ ಜೀಕಿ ಬಿಡು ಹೊರಗೆ ಆಕಾಶಕ್ಕೆ. ಸ್ವರ್ಗದ ಬಾಗಿಲಿಗೆ. ನಿನ್ನ ಸೆಳೆದು ನಾನು ಒಳಸೇರಿಬಿಡುವೆ. ಕಿರು ಪರಿಚಯ: ಪೂರ್ಣಿಮಾ ಸುರೇಶ್. ಉಡುಪಿ. ಕವಯತ್ರಿ ಹಾಗೂ ರಂಗನಟಿ. 3 ಕವನಸಂಕಲನಗಳು ಪ್ರಕಟಗೊಂಡಿವೆ. gss ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು ದೊರಕಿವೆ. ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ- ಕೊಂಕಣಿ ಪದಕೋಶ ಸಂಗ್ರಹವು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡಿವೆ . ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ,ಆಕಾಶವಾಣಿ ಕಲಾವಿದೆ. ವೃತ್ತಿ ಬಸ್ ಉದ್ಯಮ. ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ವಾತಿ ಮುತ್ತು ಮಧು ವಸ್ತ್ರದ್ ಬಾಲ್ಯದಾ ದಿನಗಳಲ್ಲಿ ತಾಯ್ತಂದೆ,ಅಣ್ಣಂದಿರ ಬೆಚ್ಚಗಿನಾ ಗೂಡಿನಲ್ಲಿ ನಲಿದಿದ್ದ ಮುಗ್ಧತೆಗೆ ಸಿಕ್ಕಿದ್ದು ವಾತ್ಸಲ್ಯದಮುತ್ತು ಶಾಲೆಯಾ ದಿನಗಳಲ್ಲಿ ವಿದ್ಯೆಯಾ ಕಲಿಯುವಲ್ಲಿ ಗುರುಗಳಿಂದ ಸಿಕ್ಕಿದ್ದು ಮಾರ್ಗದರ್ಶನದ ನುಡಿ ಮುತ್ತು.. ಹರಯದಾ ಬನದಲ್ಲಿ ಮುಂಜಾನೆಯ ಮಂಜಿನಲಿ ಚಿಗುರೆಲೆಯ ಅಂಚಿನಲಿ ನನ್ನ ನೋಡಿ ನಕ್ಕಿದ್ದು ಇಬ್ಬನಿಯಮುತ್ತು ಸಪ್ತಪದಿಯ ತುಳಿದಲ್ಲಿ ನವಜೀವನದ ಹೊಸಿಲಲ್ಲಿ ಮೊದಲರಾತ್ರಿಯ ಗುಂಗಿನಲ್ಲಿ ನಲ್ಲ ನನಗಿತ್ತಿದ್ದು ಒಲವಿನ ಮುತ್ತು ನವಮಾಸ ಮುಗಿಯುತಲಿ ತಾಯ್ತನದ ಮೋಡಿಯಲಿ ನನ್ನ ಮುದ್ದಿನ ಕರುಳಕುಡಿಗೆ ಕಣ್ಮುಚ್ಚಿ ನಾನಿತ್ತಿದ್ದು ಮಮತೆಯ ಮುತ್ತು ತುಂಬುಪ್ರೀತಿಯ ಬಾಳಿನಲ್ಲಿ ದಿವ್ಯಸಾರ್ಥಕತೆಯಲ್ಲಿ ಕಷ್ಟಸುಖಗಳ ಮೂಸೆಯಲ್ಲಿ ನಾನು ಗಳಿಸಿದ್ದು ಅನುಭವದ ಮುತ್ತು ಜೀವನದ ಹಾದಿಯಲ್ಲಿ ಕರ್ತವ್ಯಗಳ ಭರದಲ್ಲಿ ಅಡೆತಡೆಗಳು ಬಂದಾಗ ನಲ್ಲನಿಂದ ಸಿಕ್ಕಿದ್ದು ಭರವಸೆಯ ಮುತ್ತು ಈ ಬಾಳಿನ ಹಾದಿಯಲ್ಲಿ ನಲ್ಲನ ಒಲುಮೆಯಿದ್ದಲ್ಲಿ ಸ್ವಾತಿಮಳೆ ಇಲ್ಲದೆಯೂ ನಾನಾಗಬಲ್ಲೆನು ಸ್ವಾತಿ ಮುತ್ತು

ಕಾವ್ಯಯಾನ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಏಕತೆ ಸಾರುವ ಹುಸೇನ್-ಷಾವಲಿ ತಾತಯ್ಯ…! ಕೆ.ಶಿವು.ಲಕ್ಕಣ್ಣವರ `ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ’ ಎಂಬುದು ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯಲ್ಲಿನ ಒಂದು ಸಾಲು. ಇಂತಹ ಸೌಹಾರ್ದ ಪರಂಪರೆಗೆ ಸಾಕ್ಷಿ ಎಂಬಂತೆ ಬಾಗೇಪಲ್ಲಿಯಲ್ಲಿ ದರ್ಗಾ-ಕರಗ, ಮಂದಿರ, ಮಸೀದಿ, ಗುಡಿ, ಚರ್ಚ್ ಎಲ್ಲವೂ ಇಲ್ಲೇ ಇವೆ. ಈ ನೆಲದಲ್ಲಿ ಸೌಹಾರ್ದ ಪರಂಪರೆಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರ ಕೊಡುಗೆ ಸಾಕಷ್ಟಿದೆ… ಹಿಂದು-ಮುಸ್ಲಿಂರು ತಮ್ಮ ಗುರು ಮತ್ತು ಮಾರ್ಗದರ್ಶಕರೆಂದೇ ಅವರನ್ನು ಕಾಣುತ್ತಾರೆ. ಅದೇ ಕಾರಣಕ್ಕೆ ಮುಸ್ಲಿಂರ ಪಾಲಿಗೆ ಅವರು ಹುಸೇನ್ ಶಾವಲಿಯಾದರೆ, ಹಿಂದುಗಳಿಗೆ ಅವರು ಪ್ರೀತಿಯ ತಾತಯ್ಯ. ದಾಸರಿಂದ ಹುಸೇನ್ ದಾಸ ಎಂದೂ ಅವರು ಕರೆಸಿಕೊಂಡಿದ್ದಾರೆ. ಸೌಹಾರ್ದ ಮತ್ತು ಸಹಬಾಳ್ವೆಗೆ ಸಾಕ್ಷಿಯಾಗಿದ್ದಾರೆ ಅವರು… 1963ರ ದಿನಗಳಲ್ಲಿ ಜವಳಿ ಉದ್ಯಮಿಯಾಗಿದ್ದ ಹಜರತ್ ಸೈಯ್ಯದನಾ ಶೇಕ್ ಹುಸೇನ್ ಷಾ ಖಾದ್ರಿ ಅವರು ಸಂತರಾದದ್ದು ಆಕಸ್ಮಿಕ ಪವಾಡವೇನಲ್ಲ. ಅವರು ಜನರಿಗೆ ಏನನ್ನೂ ಬೋಧನೆ ಮಾಡಲಿಲ್ಲ. ತತ್ವ ಪದಗಳನ್ನು ಹೇಳಲಿಲ್ಲ. ಆದರೆ ಅವರ ಇಡೀ ಬದುಕೇ ಲೌಕಿಕ ಸತ್ಯಗಳನ್ನು ಹೇಳುವ ವಿಶ್ವವಿದ್ಯಾಲಯವಾಯಿತು… ಶ್ರೀಮಂತರಾಗಿದ್ದ ಅವರು ಪ್ರತಿ ದಿನ ಹೊಸ ಬಟ್ಟೆ ಧರಿಸುತ್ತಿದ್ದರು. ಯಾವುದೇ ಕೊರತೆ ಅವರಿಗೆ ಇರಲಿಲ್ಲ. ಆದರೆ ಧರ್ಮಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿ, ಕೊನೆಯುಸಿರೆಳೆದಾಗ ಅವರಲ್ಲಿ ವೈರಾಗ್ಯ ಮೂಡಿತು. ಅತ್ತ ಹಾಲು ಕುಡಿಯುವ ಮಗು ಮತ್ತು ಇತ್ತ ವ್ಯಾಪಾರ- ವಹಿವಾಟು ತ್ಯಜಿಸಿ ದೈವ ಸಾಕ್ಷಾತ್ಕಾರದ ಮಾರ್ಗದಲ್ಲಿ ಬೆಳೆದು ನಿಂತವರು ಸಂತ ಹುಸೇನ್ ಷಾವಲಿ ತಾತಯ್ಯ..! ಹೆಗಲ ಮೇಲೆ ಕಂಬಳಿ ಹಾಕಿಕೊಂಡು, ಸೊಂಟಕ್ಕೆ ತುಂಡು ಬಟ್ಟೆ ಧರಿಸಿಕೊಂಡು, ಕಾಡು-ಮೇಡು ಅಲೆಯಲು ಆರಂಭಿಸಿದರು. ಪ್ರತಿ ನಿತ್ಯ ಸ್ವಾದಿಷ್ಟ ತಿನಿಸುಗಳನ್ನು ತಿನ್ನುತ್ತಿದ್ದವರು ಭಿಕ್ಷಾಪಾತ್ರೆಯನ್ನು ಹಿಡಿದು ಮನೆಗಳ ಮುಂದೆ ಭಿಕ್ಷೆ ಕೇಳತೊಡಗಿದರು. ಅಲ್ಲಿಗೆ ಅವರು ಸಂಪೂರ್ಣವಾಗಿ ಬದಲಾದರು. ಮೊದ ಮೊದಲು ಅವರನ್ನು ಹುಚ್ಚ, ಧರ್ಮ ವಿರೋಧಿ ಎಂದು ಮಸೀದಿಯಿಂದ ಜನರೇ ಹೊರ ನೂಕಿದರು. ಆದರೆ ನಂತರದ ದಿನಗಳಲ್ಲಿ ಅವರ ತತ್ವ, ಆದರ್ಶಗಳ ಪ್ರಭಾವಕ್ಕೆ ಒಳಗಾಗಿ ಅದೇ ಜನರು ಸಾವಿರಾರು ಸಂಖ್ಯೆಯಲ್ಲಿ ಅನುಯಾಯಿಗಳಾದರು… `ಗುಡಿ-ಮಸೀದಿಗಳಲ್ಲಿ ಭಗವಂತನನ್ನು ನೋಡದೇ ಪ್ರಾಣಿ-ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಲ್ಲಿಯೂ ಧರ್ಮಾತ್ಮನನ್ನು ಕಾಣಿರಿ. ಹಿಂದು-ಮುಸ್ಲಿಂ ಎನ್ನುವಂತಹದ್ದು ಮನುಷ್ಯ ಸ್ಥಾಪಿಸಿಕೊಂಡಿರುವುದು. ದೈವನಿರ್ಣಯವಲ್ಲ. ಜಾತಿ, ಧರ್ಮಗಳು ಬೇರೆ ಬೇರೆಯಾದರೂ ನಡೆದು-ಕುಣಿದಾಡುವ ಆತ್ಮ ಒಂದೇ. ನಾನು ನನ್ನ ಹೊಟ್ಟೆ ತುಂಬಿಸಿಕೊಳ್ಳಲು ನಿಮ್ಮಿಂದ ಭಿಕ್ಷೆ ಬೇಡುತ್ತಿಲ್ಲ. ನಿಮ್ಮ ಪಾಪ-ಕರ್ಮಗಳನ್ನು ಬೇಡುತ್ತಿದ್ದೇನೆ. ನಂತರ ಕರುಳನ್ನು ಹರಿಯುವ ನದಿಯಲ್ಲಿ ತೊಳೆಯುತ್ತಿದ್ದೇನೆ’ ಎಂದು ಅವರು ತಮ್ಮ ಶಿಷ್ಯಂದಿರಿಗೆ ಹೇಳುತ್ತಿದ್ದರು…! ಅವರು ಗತಿಸಿ ಇಂದಿಗೆ 50 ವರ್ಷಗಳ ಮೇಲಾಗಿವೆ. ರಂಜಾನ್ ಹಬ್ಬದ ಮಾರನೆಯ ದಿನದಿಂದ 11ನೇ ದಿನಕ್ಕೆ ಅವರು ಇಹಲೋಕವನ್ನು ತ್ಯಜಿಸಿದರು. ಇಸ್ಲಾಂ ಧರ್ಮದ ಪ್ರಕಾರ, ಈ ದಿನವನ್ನು ಸೌಹಾಲ್ 11ನೇ ತಾರೀಖು ಎನ್ನುತ್ತಾರೆ. ಪ್ರಾಣ ತ್ಯಾಗ ಮಾಡಿದ ದಿನದಂದು ಜಾತಿ- ಧರ್ಮಗಳು ಮೀರಿ ತಮ್ಮ ಗುರುವಿನ ಆಜ್ಞೆಯಂತೆ ಎಲ್ಲರೂ ಒಂದಾಗಿ ಅವರನ್ನು ಸಮಾಧಿ ಮಾಡಿದ ಅಂದಿನಿಂದ ಇಂದಿನವರಿಗೂ ಜಾತ್ಯತೀತವಾಗಿ ಪ್ರತಿದಿನ ದರ್ಗಾಗೆ ಪ್ರವೇಶಿಸಿ ತಮ್ಮ ಸಂಕಷ್ಟಗಳನ್ನು ಬಗೆಹರಿಸುವಂತೆ ಪ್ರಾರ್ಥಿಸುವುದು ರೂಢಿಯಾಗಿದೆ…! `ಈ ಸಂತನಿಗೆ ನಡೆದುಕೊಳ್ಳುವ ಜನರು ಹೃದಯವಂತಾಗಿರಬೇಕು. ಮನುಷ್ಯತ್ವ ಇರುವಂತಾಗಿರಬೇಕು. ಸಕಲ ಜೀವಿಗಳಲ್ಲಿ ಪರಮಾತ್ಮನನ್ನು ಕಾಣುವ ಹೃದಯವಂತರಾಗಿರಬೇಕು. ಅಷ್ಟೇ ಹೊರತು ಜಾತಿವಂತರಲ್ಲ…! ಎಲ್ಲಾ ಜಾತಿ, ವರ್ಗದವರು, ಜಾತ್ಯತೀತತೆ, ಏಕತೆ, ಸಹೋದರ ಭಾವ ಹೊಂದಿದವರೆಲ್ಲ ದರ್ಗಾಗೆ ಬರುತ್ತಾರೆ. ತಾತಯ್ಯ ಕಣ್ಮರೆಯಾದರೂ ಅವರ ಶಿಷ್ಯಂದಿರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ’ ಎನ್ನುತ್ತಾರೆ ದರ್ಗಾದವರು… ಈದ್-ಉಲ್-ಫಿತರ್ ಹಬ್ಬದ ಮಾರನೆ ದಿನದಿಂದ 11ನೇ ದಿನಕ್ಕೆ ಸಂತ ಹಜರತ್ ಶೇಖ್ ಹುಸೇನ್-ಷಾವಲಿ ತಾತಯ್ಯ ಇಹಲೋಕ ತ್ಯಜಿಸಿದರು. ಆ ದಿನವನ್ನು ಸೌಹಾಲ್ ಎಂದು ಕರೆಯಲಾಗುತ್ತದೆ…! ಹಿಂದು ಮತ್ತು ಮುಸ್ಲಿಂ ಸಮುದಾಯದವರು ಸೋಮವಾರ ರಾತ್ರಿ 8ರ ಸುಮಾರಿಗೆ `ಸಂದಲ್-ಎ-ಶರೀಫ್’ (ಗಂಧದ ಅಭಿಷೇಕ), ಅನ್ನದಾನ ಮತ್ತು ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ಯಾರೆ…! ಹೀಗಿದೆ ಸಂತ ಹಜತತ್ ಶೇಖ್ ಹುಸೇನ್-ಷಾವಲಿ ತಾತಯ್ಯನ ಪುರಾಣ..!! ———– ‌‌‌‌

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ. ಗೋವಿಂದ ಹೆಗಡೆ ಸುಳಿಬಾಳೆಯಂಥ ಹೆಣ್ಣು ನೀನು ತಿಳಿಯದ್ದು ನನ್ನ ತಪ್ಪು ಆಲಿಕಲ್ಲ ಮಳೆಯಂತೆ ಸುರಿದೆ, ಸುರಿದಿದ್ದು ನನ್ನ ತಪ್ಪು ಕನಸಿನ ಪುಟದಲ್ಲಿ ಬರೆದೊಂದು ಹಾಡಂತೆ ಕಂಡೆನೇ ನಿನ್ನ ಎತ್ತಿ ಅಪ್ಪಿದೆ ನೀ ಗರುಕೆಯೆಸಳ, ಹೆಚ್ಚು ಬಯಸಿದ್ದು ನನ್ನ ತಪ್ಪು ಎದೆ ಕೊರೆದ ದುಗುಡಕ್ಕೆ ಹೊರದಾರಿ ಬಯಸಿದವಳು ನೀನು ಕಿವಿಯಾದ ಮಾತ್ರಕ್ಕೆ ಆಸರೆ ನಾನೆಂದು ಉಬ್ಬಿದ್ದು ನನ್ನ ತಪ್ಪು ಫೋಲ್ ವಾಲ್ಟ್ ನಲ್ಲಿ ಜಿಗಿದು ದಾಟಿ ಕೋಲನ್ನು ಕೈ ಬಿಡುವರು ಮಣ್ಣಿಗೆಸೆದೆ ನೀನೆಂದು ಮರುಗುತ್ತ ಉಳಿದಿದ್ದು ನನ್ನ ತಪ್ಪು ದಾಟಿ ಹೋಗಿದ್ದೀ ನೀನು ಗೊತ್ತು,ಮರಳಿ ಹರಿಯದು ನದಿ ಬಿದ್ದ ಪಕಳೆಯನೆತ್ತಿ ಸಖೀ,ತುಟಿಗೊತ್ತಿ ಕಳಲಿದ್ದು ನನ್ನ ತಪ್ಪು

ಕಾವ್ಯಯಾನ Read Post »

ಇತರೆ

ಸಂಗೀತ ಸಂಗಾತಿ

ಸಂಗೀತದ ಹಿರಿಮೆ ರತ್ನಾ ಬಡವನಹಳ್ಳಿ ಪ್ರತಿ ಮಾನವನಲೂ ಒಂದೊಂದು ಕಲೆ ತನಗರಿಯದೆ ಅಡಗಿ ಕುಳಿತೇ ಇರುತ್ತದೆ.ಅದನ್ನು ಗುರುತಿಸಿ ಬೆಳಕಿಗೆ ತರುವ ಸಾಮರ್ಥ್ಯ ಕೆಲವರಲ್ಲಿ‌ ತಕ್ಷಣ ಮೂಡುವುದಿಲ್ಲ. ಅದನ್ನು ಗ್ರಹಿಸಿ ಹೊರತರುವ ಗುರು,ಹಾಗೂ ಕಲಾಪೋಷಕರೂ ಸಿಗಬೇಕು. ಎಂತಹ ಕಠಿಣ ಮನಸಿನ ಮನುಜನಾದರೂ ಸಂಗೀತದ ರಾಗಕ್ಕೆ ಒಮ್ಮೆಯಾದರೂ ತಲೆದೂಗದೆ ಇರಲಾರ. ಎಂದಾದರೂ ಒಂದಲ್ಲ ಒಂದು ಹಾಡಿಗೆ ಕಾಲು ,ಕೈ ಬೆರಳು ತಾಳ ಹಾಕಿ ತಲೆದೂಗಿಯೇ ಇರುತ್ತಾನೆ ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ.ಒಬ್ಬೊಬ್ಬರಿಗೆ ಒಂದೊಂದು ರಾಗ ಇಷ್ಟವಾಗಬಹುದು. ರಚ್ಚೆ ಇಳಿದು ಅಳುವ ಮಗುವೂ ಸಹ ಅಮ್ಮನ ಜೋಗುಳ ಕೇಳಿ ಅಳು ನಿಲ್ಲಿಸುವುದ ಕಂಡಿಲ್ಲವೇ .ಎಲ್ಲ ತಾಯಂದಿರೂ ಸಂಗೀತ ,ಹಾಡು ಕಲಿತವರೇ ಇರುವುದಿಲ್ಲ ಆದರೂ ಮಗು ಅಳುತಿರಲು ಮಲಗಿಸುವಾಗ “ನನ್ನ ಬಂಗಾರೀ ಮುದ್ದೂ ಚಿನ್ನುಮರೀ,ಜಾಣ ಪಾಚೋ ಪುಟ್ಟೂ ” ಎಂದು ರಾಗವಾಗಿ ಹೇಳುತ್ತಾ ಮಲಗಿಸುವುದಿಲ್ಲವೇ ಹಾಗೆ ಸಂಗೀತ ಎಲ್ಲ ವಿಧದ ಧ್ವನಿಗಳಲಿ ಅಡಗಿದೆ. ಕೊಂಚ ಭಾವಜೀವಿಯಾಗಿ ಕಲೆಯ ಬಲೆ ಮನದಿ ಹರಡಿದ್ದರಂತೂ ಶಬ್ದಗಳಲೂ ಮಧುರ ಲಯಬದ್ದ ರಾಗ ಅನುಭವಿಸುವುದು ನಿಜ. ಮಳೆ ಸುರಿಯುವ ಮತ್ತೆ ಮಳೆ ನಿಂತು ಹೆಂಚಿನ ಅಥವಾ ಮನೆಯ ಚಪ್ಪರದ ತುದಿಯಿಂದ ಬೀಳುವ,ಮಳೆಬಂದಾಗ ಹಳ್ಳಿಯ ಮಣ್ಣಿನ ಮನೆ ಸೋರುವಾಗ ಪಾತ್ರೆ ಇಟ್ಟು ಅದರಲ್ಲಿ ಬೀಳುವ ಹನಿ ಹನಿ ನೀರಿನ ದನಿಯಲೂ ಲಯಬದ್ದ ರಾಗ ಆಲಿಸಬಲ್ಲದು. ಹಾಲು ಕರೆಯುವಾಗ ಖಾಲಿ ತಂಬಿಗೆಯಲಿ ಬೀಳುವ ಹಾಲಿನ ಸೊರ್ ಸೊರ್ ಶಬ್ದ ತುಂಬುತ್ತಾ ಬಂದಾಗ ನೊರೆಯ ಮೇಲೆ ಬೀಳುವ ಶಬ್ದವೇ ಬೇರೆ ಹಳ್ಳಿ ಮನೆಗಳಲ್ಲಿ ಹಸು,ದನಕರುಗಳು ಕಟ್ಟುವ ಜಾಗ ಮನೆಯಪಕ್ಕ ಇದ್ದರೆ ರಾತ್ರಿ ಮಲಗಿದಾಗ ಅವುಗಳು ಮೆಲುಕು ಹಾಕುತ್ತಾ ಜೋರು ಉಸಿರು ಬಿಡುತ್ತಾ ಅತ್ತ ಇತ್ತ ತಿರುಗುವಾಗ ಗೊರಸಿನ ಶಬ್ದ , ಎತ್ತಿನ ಬಂಡಿ ಹೊರಟಾಗ ಕೊರಳ ಗೆಜ್ಜೆಯ ಹಾಗೂ ಬಂಡಿಯ ಚಕ್ರದ ಸಪ್ಪಳ ಮಧ್ಯೆ ಮಧ್ಯೆ ಎತ್ತಗಳನ್ನು ಓಡಿಸಲು ಹೇ ಹೇ ಎನುವ ಸವಾರನ ಧ್ವನಿ ಹೀಗೆ ಎಲ್ಲವೂ ನಾದ ಮಯ ಅನುಭವಿಸಿ ಆಸ್ವಾದಿಸುವ ಮನಸಿದ್ದರೆ ಮಾತ್ರ ಹೀಗೆ ರೈಲಿನಲಿ ಕುಳಿತಾಗ ಅದರ ಒಂದೇ ಸಮನಾಗಿ ಉಂಟಾಗುವ ಶಬ್ದ ಜೋಗುಳ ಹಾಡಿದಂತೇ ಆಗುವುದು. ಹಾಗೆ ಕೆಲವರ ಕೈ ಬೆರಳು ಬಸ್ಸಿನ ಕಂಬಿ ಹಿಡಿದು ನಿಂತಾಗಲೂ ತಾಳ ಹಾಕುವುದ ಕಂಡಿದ್ದೇವೆ. ಮಾನವ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವ ಮಾಧ್ಯಮವೇ ಕಲೆ.ಕಲೆಯು ಮಾನವನ ಮನಸನ್ನು ಸಂಸ್ಕರಿಸುತ್ತದೆ.ಕಲೆಯ ಮೂಲವೇ ಪ್ರಕೃತಿ. ಇದರ ಸೌಂದರ್ಯೋಪಾಸನೆಯ ಮೂಲಕ ಮಾನವನ ಪ್ರತಿಭೆ ಅನಾವರಣಗೊಳ್ಳುತ್ತದೆ. ಅರವತ್ನಾಲ್ಕು ಕಲೆಗಳನ್ನು ಭಾರತೀಯ ಗ್ರಂಥಗಳು ತಿಳಿಸುತ್ತವೆ.ಅವುಗಳಲ್ಲಿ ಲಲಿತಕಲೆ,ವಿಜ್ಞಾನ,ವಾಣಿಜ್ಯ ಹೀಗೆ ವಿಂಗಡಿಸಿದ್ದಾರೆ ಅದರಲ್ಲಿ ಲಲಿತ ಕಲೆ ಸಂಸ್ಕಾರ,ಪ್ರತಿಭೆಯ ಮೂಲಕ ತೆರೆದುಕೊಳ್ಳುತ್ತದೆ ಸಂಗೀತ,ನೃತ್ಯ,ಸಾಹಿತ್ಯ,ನಾಟಕ,ಶಿಲ್ಪ,ಚಿತ್ರ ಇವೆಲ್ಲ ಲಲಿತಕಲೆಗಳೆನಿಸುತ್ತವೆ. ಈ ಲಲಿತ ಕಲೆಗಳಲ್ಲಿ ಸಂಗೀತ ಪ್ರಮುಖ ಸ್ಥಾನ ಪಡೆದಿದೆ ನಾದದ ಮೂಲಕ ಅಂತರೀಕ ಸೌಂದರ್ಯವ ಕಿವಿಯ ಮೂಲಕಹರಿಸಿ ಲೌಕಿಕ ಜಗದ ಜಂಜಾಟವ ಮರೆಸಿ ಕಲಾವಿದ ಹಾಗೂ ಶ್ರೋತೃವಿನ ಮನವ ತಣಿಸುವುದೇ ಸಂಗೀತ ಗೀತ ಎಂದರೆ ಹಾಡು. ಸಂಗೀತವೆಂದರೆ ಒಳ್ಳೆಯ ಹಾಡು .ಕಿವಿಗೆ ಹಿತವ ತಂದು ಮನದ ಮುಟ್ಟಿ ಮಾನಸಿಕ ಉದ್ವೇಗಶಮನ ಮಾಡಿ ಶಾಂತರಸದಲಿ ನೆಲೆಗೊಳಿಸುವುದು ಶಾಸ್ತ್ರೀಯ ಸಂಗೀತ ಮತ್ತಷ್ಟು ಮುಂದಿನವಾರ ತಿಳಿಯೋಣ

ಸಂಗೀತ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

Solitary! ತೆಲುಗು ಮೂಲ : ರವಿ ವೀರೆಲ್ಲಿ ಅನುವಾದ : ರೋಹಿಣಿಸತ್ಯ ಒಂಟಿ ಮೇಘದಂತೆ ಅಲ್ಲಿ ಇಲ್ಲಿ ಎಷ್ಟುಹೊತ್ತು ಅಡ್ಡಾಡಲು ಸಾಧ್ಯ?! ಸ್ವಲ್ಪಹೊತ್ತಿಗೆ ಸಾವಿರವಾಗಿ ಸೀಳಿಹೋಗುತ್ತೇನೆ ಕಡೆಗೆ ಹನಿಗಳೆಲ್ಲವನ್ನು ಒಟ್ಟುಗೂಡಿಸಿಕೊಂಡು ದೊಡ್ಡ ಸಮೂಹವಾಗಿ ದಾಳಿಯಿಡುತ್ತೇನೆ ಯುದ್ಧ ಮುಗಿದಮೇಲೆ ಯಾವ ತೊರೆಯಲ್ಲೋ ಏಕಾಂಗಿಯಾಗಿ ಹರಿಯುತ್ತೇನೆ ಒಂಟಿಯಾಗಿ ಬಾಳಲಾಗದಿರುವುದಕ್ಕೆ ಸಮೂಹದಲ್ಲಿ ನಡೆಯಲಾಗದಿರುವುದಕ್ಕೆ ನಡುವೆ ಎಷ್ಟೋ ಕಾಲಗಳು ಹಾಗೆ ಓರೆಗಣ್ಣಿನಿಂದ ನೋಡುತ್ತಾ ಸಾಗುತ್ತಿರುತ್ತವೆ ಮತ್ತೆಷ್ಟೋ ಕ್ಷಣಗಳು ಕಾಯದೆ ಅನುಕಂಪದಿಂದ ಕದಲುತ್ತಿರುತ್ತವೆ ಯಾವ ಕೈಯಾಸರೆ ನನ್ನನ್ನು ಲಾಲಿಸುವುದಿಲ್ಲವೆಂದು ಯಾವ ಮೊಗ್ಗು ನನಗಾಗಿ ಮೂಡುವುದಿಲ್ಲವೆಂದು ತಿಳಿದಾಗ ನನ್ನ ಕಾಲುಗಳ ಕೊರಡಿನ ಮೇಲೆ ನಾನೇ ಬೆಳೆದು ನನ್ನ ಬೇರುಗಳ ತುದಿಗಳನ್ನು ನಾನೇ ಚಿಗುರಿಸಿಕೊಂಡು ನನ್ನೊಳಗೆ ನಾನೇ ಹೊರಲಾರದಂತಹ ಹುವ್ವಾಗಿ ಅರಳುತ್ತೇನೆ ಎಂದೋ ಒಂದು ದಿನ ನನ್ನನ್ನು ನಾನೇ ತುಂಡರಿಸಿಕೊಂಡು ಬೀಜಗಳನ್ನ ಅಪ್ಪಿಕೊಂಡು ತೇಲುವ ಹತ್ತಿಹೂವಿನಂತೆ ಯಾವುದೊ ಗಾಳಿಯ ದೋಣಿಯಲ್ಲಿ ತೇಲುತ್ತಾ ಕದಲುವ ಕಾಲಗಳ ಬಾಗಿಲುಗಳನ್ನು ಒಂದೊಂದಾಗಿ ತಟ್ಟುತ್ತಾ ಸಾಗುತ್ತಿರುತ್ತೇನೆ ಕೂಡಿಬರುವ ಕಾಲವೊಂದು ಹಿತ್ತಲ ಬಾಗಿಲು ತೆರೆದು ನನ್ನನ್ನು ಬಯಸಿ ಬಿತ್ತಿಕೊಳ್ಳುವವರೆಗು!

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಬೆನ್ನ ಮೇಲೆ ಬರೆದ ಮುಳ್ಳಿನ ಚಿತ್ರ ಬಿದಲೋಟಿ ರಂಗನಾಥ್ ಮನುಷ್ಯತ್ವವನ್ನೇ ಗಾಳಿಗೆ ತೂರಿದ ನೀಚ ಮನಸೇ ಹೆಣದ ಮೇಲಿನ ಕಾಸಿಗೆ ನಾಲಿಗೆಯನ್ನೇಕೆ ಚಾಚಿದೆ ? ಜೀವ ಇರುವಾಗ ಇಲ್ಲದ ಹೆಸರಿನ ಮುಂದೆ ನಿನ್ನ ಹೆಸರನ್ನೇಕೆ ಜೋಡಿಸುತ್ತಿ? ನಿಷ್ಠೆ ಇಲ್ಲದ ಮನಸನು ಹೊತ್ತು ಹೊಲಸು ಆಗಿ ಕೆಸರು ರಸ್ತೆ ಚರಂಡಿಗಳಲ್ಲಿ ಉರುಳಿ ಕೈ ತೊಳೆಯದೇ ಹರಿವಿ ನೀರಿಗೆ ಕೈ ಅದ್ದುವ ನಿನ್ನ ನಡೆ ಎಂದಿಗೂ ಗಾಳಿಗೋಪುರ ಇದ್ದ ಸೀರೆಯನು ಉಡದೇ ಅಲ್ಲೆಲ್ಲೋ ಬೇಲಿ ಮೇಲಿರುವ ಸೀರೆಗೆ ಆಸೆ ಪಟ್ಟು ಮುಟ್ಟಲು ಹೋಗಿ ಜಾರಿ ಹಾರಿದ ಸೀರೆಯ ಬದುಕು ಮುರಾಬಟ್ಟೆ ! ನಂಬಿಕೆಯ ಎದೆಯ ಮೇಲೆ ಬೈರಿಗೆ ತಿರುವಿ ಹೋದ ಹೆಜ್ಜೆಯೇ ನಿನಗೂ ಕಾದಿದೆ ಬೆಂಕಿ ಬವಣೆ ಸುಖದ ಅಮಲಲಿ ತೇಲುವ ನೀನು ಕಮರಿ ಹೋಗುವ ಕಾಲ ದೂರವಿಲ್ಲ. ರೋಧಿಸುತ್ತಿರುವ ಮಣ್ಣಾದ ಮನಸಿನ ನೋವು ನಿನಗೆ ತಟ್ಟದಿರುವುದೆ? ಸುಳ್ಳಿನ ಪಾಯದ ಮೇಲೆ ಸತ್ಯದ ಗೋಪುರ ನಿಲ್ಲುವುದು ಕಷ್ಟ.! ಎಂದಿಗೂ. ನೀನಿಗ ಹಾರಾಡುವ ಹಕ್ಕಿಯಾಗಿರಬಹುದು ಆದರೆ ನೀನು ಎಷ್ಟೇ ಉಜ್ಜಿ ತೊಳೆದರು ನಿನ್ನ ಕೈಗೆ ಅಂಟಿದ ಪಾಪದ ಬಣ್ಣ ಎಂದೂ ಅಳಿಸದು ! ನೋವಿನಿಂದ ಹೋದ ಆ ಉಸಿರು ನಿನ್ನ ಬೆನ್ನ ಮೇಲೆ ಬರೆದ ಅಳಿಸಲಾಗದ ಮುಳ್ಳಿನ ಚಿತ್ರ ಕರುಳು ಕುಡಿಗಳಿಗೆ ಕೊಟ್ಟ ಅಪ್ಪನ ಉಸಿರಿಲ್ಲದ ಚಿತ್ರಪಟವನ್ನು ನೋಡಿದ ಪ್ರತಿಸಾರಿಯು ಅವು ಬಿಡುವ ನಿಟ್ಟುಸಿರು ನಿನ್ನ ಸುಡುತ್ತಲೇ ಇರುತ್ತದೆ ನೀನು ನರಳಿ ನರಳಿ ಸಾವಿನ ಮನೆಯ ತಟ್ಟುವಾಗ ನೀನು ಮಾಡಿದ ಮೋಸವನ್ನು ಉಂಡು ನೊಂದು ಬೆಂದು ತೊರೆದಿದ್ದ ಆ ಉಸಿರಿಗೆ ಬಹುಶಃ ರೆಕ್ಕೆ ಬಂದು ಮುಕ್ತಿಮಾರ್ಗದ ಕಡೆಗೆ ಹಾರಬಹುದು !

ಕಾವ್ಯಯಾನ Read Post »

You cannot copy content of this page

Scroll to Top